ಬಿಗ್ ಬಾಸ್ ಮನೆಯ(Bigg Boss House) ಆಟ ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಈಗಾಗಲೇ 2 ತಿಂಗಳು ಪೂರೈಸಿರುವ ದೊಡ್ಮನೆಯ ಆಟದಲ್ಲಿ ಅಳಿವು ಉಳಿವಿನ ಪ್ರಶ್ನೆ ಶುರುವಾಗಿದೆ. ಯಾರು ಯಾರನ್ನು ಉಳಿಸಿದ್ದು ಎಂದು ವಾದ ಪ್ರತಿವಾದ ನಡೆದಿದೆ. ಈ ವೇಳೆ ಗುರೂಜಿ ಮೇಲೆ ರೂಪೇಶ್ ರಾಜಣ್ಣ (Roopesh Rajanna) ರಾಂಗ್ ಆಗಿದ್ದಾರೆ.ವಿನೋದ್ ಗೊಬ್ಬರಗಾಲ (Vinod Gobbaragala) ಎಲಿಮಿನೇಷನ್ ನಂತರ ಈ ವಾರ ಮತ್ತೊಬ್ಬ ಸ್ಪರ್ಧಿಗೆ ದೊಡ್ಮನೆಯಿಂದ ಗೇಟ್ ಪಾಸ್ ಸಿಗಲಿದೆ. ಈ ಬೆನ್ನಲ್ಲೇ ಯಾರಿಂದ ಯಾರು ಉಳಿದರು ಎಂಬ ಈ ಚರ್ಚೆಯೇ ಮನೆಯ ಜಗಳಕ್ಕೆ ಕಾರಣವಾಗಿದೆ. ರೂಪೇಶ್ ರಾಜಣ್ಣಗೆ ಉಳುವಿಗೆ ಯಾರು ಕಾರಣ ಎಂದು ಗುರೂಜಿ ಚರ್ಚೆ ಮಾಡಿದ್ದಾರೆ. ಈ ವೇಳೆ ನಿಮಗೆ ತಲೆಯಲ್ಲಿ ಕೂದಲು ಇಲ್ಲಾ ಅಂತಾ ಗೊತ್ತಿತ್ತು ಬುದ್ಧಿನು ಇಲ್ಲಾ ಎಂದು ಗುರೂಜಿ(Aryavardhan Guruji) ವಿರುದ್ಧ ರಾಜಣ್ಣ ಕಿಡಿಕಾರಿದ್ದಾರೆ. ಇದನ್ನೂ ಓದಿ: ಸ್ಟಾರ್ ನಟಿಯರಿಗೆ ಸೆಡ್ಡು ಹೊಡೆದು ತೆಲುಗಿನ 7 ಚಿತ್ರಗಳಿಗೆ ಸಹಿ ಹಾಕಿದ ಶ್ರೀಲೀಲಾರೂಪೇಶ್ ರಾಜಣ್ಣ ಉಳಿಯಲು ತಾನೇ ಕಾರಣ ಎಂಬ ಅರ್ಥದಲ್ಲಿ ಗುರೂಜಿ ರಾಜಣ್ಣಗೆ ಟಾಂಗ್ ಕೊಟ್ಟಿದ್ದಾರೆ. ಒಬ್ಬರಿಂದ ಒಬ್ಬರು ಉಳಿದರು ಎಂಬ ಮಾತನ್ನ ನೀವು ಮೊದಲು ವಾಪಸ್ ತೆಗೆದುಕೊಳ್ಳಿ ಎಂದು ರಾಜಣ್ಣ, ಗುರೂಜಿಗೆ ಹೇಳಿದ್ದಾರೆ. ನೀವು ಹೇಳಿದನ್ನ ನಾನ್ಯಾಕೆ ಒಪ್ಪಿಕೊಳ್ಳಬೇಕು. ತಲೆಯಲ್ಲಿ ಗೊಬ್ಬರ ಇದ್ದರೆ ಯೋಚನೆ ಮಾಡಿ ಎಂದು ಗುರೂಜಿ ಟಾಂಗ್ ಕೊಟ್ಟಿದ್ದಾರೆ. ಇಲ್ಲಿ 12 ಜನ ಸಮಾನರು ಯಾರಿಂದ ಯಾರು ಉಳಿದಿಲ್ಲ ಎಂದು ರಾಜಣ್ಣ ವಾದ ಮಾಡಿದ್ದಾರೆ. ನಿಮ್ಮ ತಲೆಯಲ್ಲಿ ಕೂದಲು ಇಲ್ಲಾ ಅಂದುಕೊಂಡಿದ್ವಿ, ಈಗ ಬುದ್ಧಿನೂ ಇಲ್ಲಾ ಅಂತಾ ಗೊತ್ತಾಯ್ತು ಎಂದು ಗುರೂಜಿಗೆ ರಾಜಣ್ಣ ಟಾಂಗ್ ಕೊಟ್ಟಿದ್ದಾರೆ.ಸ್ಪರ್ಧಿಗಳಿಗೆ ತನ್ನ ಮನೆಯವರು ಬಂದು ಸರ್ಪ್ರೈಸ್ ಕೊಟ್ಟಿರುವ ಬೆನ್ನಲ್ಲೇ ರಾಜಣ್ಣ, ಗುರೂಜಿ ಅವರ ಅಳಿವು ಉಳಿವಿನ ವಾದ ವಿವಾದ ಮನೆಮಂದಿಗೆ ತಲೆನೋವು ತಂದಿದೆ.
Sign in to your account
Username or Email Address


Password

 Remember Me


