ಮಂಡ್ಯ: ಇಂದಿನಿಂದ 5 ದಿನಗಳ ಕಾಲ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ (Kaveri Aarathi) ನಡೆಯಲಿದ್ದು, ಸಕಲ ಸಿದ್ಧತೆಗಳು ಆರಂಭವಾಗಿವೆ.ವಿಶ್ವವಿಖ್ಯಾತ ಮೈಸೂರು ದಸರಾಗೂ (Mysuru Dasara) ಮುನ್ನವೇ ಕಾವೇರಿ ಆರತಿಯಾಗಲಿದ್ದು, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇಗುಲದ (Srirangapatna Shri Ranganathaswami Temple) ಬಳಿಯ ಸ್ನಾನಘಟ್ಟದಲ್ಲಿ ಕಾವೇರಿ ನದಿ ಆರತಿ ಪೂಜೆ ನಡೆಯಲಿದೆ.ಇದನ್ನೂ ಓದಿ: Japan| ಏರ್‌ಪೋರ್ಟ್‌ ಬಳಿ 2ನೇ ಮಹಾಯುದ್ಧದ ಕಾಲದ ಬಾಂಬ್ ಸ್ಫೋಟ – ವಿಮಾನ ಹಾರಾಟ ರದ್ದುಶ್ರೀರಂಗಪಟ್ಟಣದ ಪ್ರಸಿದ್ದ ಅರ್ಚಕ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಕಾವೇರಿ ಆರತಿ ಪೂಜಾ ಕೈಂಕರ್ಯ ನಡೆಯಲಿದ್ದು, ಇಂದಿನಿಂದ ಅ.7 ರವರೆಗೆ ಪ್ರಾಯೋಗಿಕವಾಗಿ 5 ದಿನ ಕಾವೇರಿ ಆರತಿ ಪೂಜೆ ನಡೆಯಲಿದೆ. ಆರತಿ ಇಂದು ಸಂಜೆ 6:15 ರಿಂದ ರಾತ್ರಿ 7 ಗಂಟೆವರೆಗೂ ನಡೆಯಲಿದೆ.ಕಾವೇರಿ ಆರತಿಗಾಗಿ ಪಟ್ಟಣದ ಸ್ನಾನಘಟ್ಟದ ಬಳಿ ಭರದ ಸಿದ್ದತೆ ಕಾರ್ಯ ಪ್ರಾರಂಭವಾಗಿದೆ. ರಾತ್ರಿ ವೇಳೆ ಆರತಿ ಪೂಜಾ ಸಂದರ್ಭದಲ್ಲಿ ಬೆಳಕಿಗಾಗಿ ವಿದ್ಯುತ್ ದೀಪದ ವ್ಯವಸ್ಥೆಯನ್ನು ಮಾಡಲಾಗಿದೆ.ಇದನ್ನೂ ಓದಿ: ಪುರುಷತ್ವ ಹೆಚ್ಚಿಸುವ ಔಷಧಕ್ಕಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್Sign in to your account
Username or Email Address


Password

 Remember Me


