ಬಿಗ್ ಬಾಸ್ ಮನೆಯ(Bigg Boss Kannada) ಸ್ಪರ್ಧಿಗಳಲ್ಲಿ ಅಜಾತಶತ್ರು ಅಂದ್ರೆ ರಾಕೇಶ್ ಅಡಿಗ. ಯಾರ ಕೆಂಗಣ್ಣಿಗೂ ಗುರಿಯಾಗದೇ ಕೂಲ್ ಆಗಿ ತಮ್ಮದೇ ಶೈಲಿಯಲ್ಲಿ ಆಡುತ್ತಿದ್ದಾರೆ. ದೊಡ್ಮನೆ ಆಟ 50 ದಿನ ಪೂರೈಸಿರುವ ಬೆನ್ನಲ್ಲೇ ರಾಕೇಶ್ ಅಡಿಗ ಅವರ ಆಟ ಈಗ ಮನೆಯವರ ಕಣ್ಣಿಗೆ ಹೈಲೈಟ್ ಆಗುತ್ತಿದೆ. ಇವರೂ ಹೀಗೆ ಆಡಿದರೆ ರಾಕೇಶ್(Rakesh Adiga) ಅವರೇ ಬಿಗ್ ಬಾಸ್ ವಿನ್ನರ್ ಪಟ್ಟ ತೆಗೆದುಕೊಳ್ಳುತ್ತಾರೆ ಎಂಬ ಟೆನ್ಷನ್ ಮನೆಮಂದಿಗೆ ಶುರುವಾಗಿದೆ.ದೊಡ್ಮನೆಯ ಆಟ 50 ದಿನ ಸಾಗಿದೆ. ಅರ್ಧ ದಾರಿ ಸಾಗಿರುವ ಬಿಗ್ ಬಾಸ್‌ನಲ್ಲಿ(Bigg Boss) ಒಂದು ಸರ್‌ಪ್ರೈಸ್ ಇತ್ತು. ಆರ್ಯವರ್ಧನ್(Aryavardhan) ಅವರನ್ನು ಮೊದಲು ಎಲಿಮಿನೇಟ್ ಮಾಡಲಾಗಿತ್ತು. ಆದರೆ, ಈ ವಾರ ಎಲಿಮಿನೇಷನ್ ಮಾಡಲ್ಲ ಎಂದು ಬಿಗ್ ಬಾಸ್ ನಂತರ ಘೋಷಿಸಿದರು. ಈ ವೇಳೆ ಎಲ್ಲಾ ಸ್ಪರ್ಧಿಗಳು ಖುಷಿಪಟ್ಟರು. ಮತ್ತೊಂದೆಡೆ ಈ ಫೇಕ್ ಎಲಿಮಿನೇಷನ್‌ನಿಂದ ಎಲ್ಲಾ ಸ್ಪರ್ಧಿಗಳಿಗೆ ಶಾಕ್ ಕೂಡ ಆಗಿತ್ತು.ಪ್ರತಿ ವೀಕೆಂಡ್‌ನಲ್ಲಿ ಕಿಚ್ಚ ಒಂದು ಸ್ಪರ್ಧಿಗೆ ಚಪ್ಪಾಳೆ ನೀಡುತ್ತಾರೆ. ಈ ಚಪ್ಪಾಳೆ ತೆಗೆದುಕೊಳ್ಳೋಕೆ ಸ್ಪರ್ಧಿಗಳು ಸಾಕಷ್ಟು ಶ್ರಮಪಡಬೇಕಾಗುತ್ತದೆ. ಕಳೆದ ವಾರವೂ ಸುದೀಪ್ ಚಪ್ಪಾಳೆ ನೀಡಿದ್ದಾರೆ. ಒಂದು ವಾರದ ಪರ್ಫಾರ್ಮೆನ್ಸ್ ನೋಡಿ ಅಲ್ಲ. ಬದಲಿಗೆ ಕಳೆದ 50 ದಿನಗಳನ್ನು ಗಮನಿಸಿ ಸುದೀಪ್ (Kiccha Sudeep) ಚಪ್ಪಾಳೆ ನೀಡಿದ್ದಾರೆ. ಈ ಚಪ್ಪಾಳೆ ಸಿಕ್ಕಿದ್ದು ರಾಕೇಶ್ ಪಾಲಿಗೆ. ಇದನ್ನೂ ಓದಿ: ಧ್ರುವ ಸರ್ಜಾ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿ A post shared by Rakesh Adiga (@rakesh_freespirit)ಬಿಗ್ ಬಾಸ್ ಒಟಿಟಿಯಿಂದ ರಾಕೇಶ್ ಅಡಿಗ ಗಮನ ಸೆಳೆದರು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ರಾಕಿ ಹೈಲೈಟ್ ಆಗುತ್ತಿದ್ದಾರೆ. ಅಲ್ಲಿಂದ ಇಲ್ಲಿವರೆಗೆ ಅವರು ಒಂದೇ ರೀತಿಯ ಪರ್ಫಾರ್ಮೆನ್ಸ್ ನೀಡುತ್ತಾ ಬಂದಿದ್ದಾರೆ. ಅವರು ಜಗಳ ಮಾಡಿಕೊಳ್ಳೋದೇ, ಮನೆ ಮಂದಿಯ ನಂಬಿಕೆಗೆ ರಾಕೇಶ್ ಪಾತ್ರರಾಗಿದ್ದಾರೆ. ಟಾಸ್ಕ್‌ಗಳ ವಿಚಾರದಲ್ಲೂ ಅವರು ಹಿಂದೆ ಬಿದ್ದಿಲ್ಲ. ಸದ್ಯ ರಾಕೇಶ್ ಆಟ ನೋಡಿ ಮನೆಯವರಿಗೆ ಹೆಚ್ಚು ಟೆನ್ಷನ್ ಆಗಿದೆ. ರೂಪೇಶ್ ಶೆಟ್ಟಿ ಸೇರಿದಂತೆ ಮೊದಲಾದವರು ಈ ಬಗ್ಗೆ ಟೆನ್ಷನ್ ಮಾಡಿಕೊಂಡಿದ್ದಾರೆ. ರಾಕೇಶ್ ಅವರನ್ನು ಸೆಡ್ಡು ಹೊಡೆಯದೇ ಇದ್ದರೆ ಸಂಕಷ್ಟ ಪಕ್ಕಾ ಎಂಬುದು ಅವರಿಗೆ ಗೊತ್ತಾಗಿದೆ. ಹೀಗೆಯೇ ಮುಂದುವರಿದರೆ ಅವರು ಬಿಗ್ ಬಾಸ್ ವಿನ್ನರ್ ಆಗಬಹುದು ಎಂದು ಲೆಕ್ಕಚಾರ ಹಾಕುತ್ತಿದ್ದಾರೆ.
Sign in to your account
Username or Email Address


Password

 Remember Me


