ಸ್ಯಾಂಡಲ್‌ವುಡ್(Sandalwood) ಕ್ವೀನ್ ರಮ್ಯಾ ಮತ್ತೆ ಚಂದನವನಕ್ಕೆ ಕಮ್‌ಬ್ಯಾಕ್ ಆಗಿದ್ದಾರೆ. ಪದ್ಮಾವತಿಯ ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ. ಈ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕಿಚ್ಚ ಸುದೀಪ್‌ಗೆ(Kiccha Sudeep) ಮತ್ತೆ ನಾಯಕಿಯಾಗಿ ರಮ್ಯಾ(Ramya) ಸಾಥ್ ನೀಡಲಿದ್ದಾರೆ.ಅಂತೂ ಇಂತೂ ಅಭಿಮಾನಿಗಳ ಮನದಾಸೆಗೆ ಮಣಿದು ಹತ್ತು ವರ್ಷಗಳ ನಂತರ ನಟಿ ರಮ್ಯಾ ಕಂಬ್ಯಾಕ್ ಆಗುತ್ತಿದ್ದಾರೆ. ನಿರ್ಮಾಪಕಿಯಾಗಿ ಜೊತೆಗೆ ನಾಯಕಿಯಾಗಿಯೂ ಕೂಡ ಫ್ಯಾನ್ಸ್ ರಮ್ಯಾ ಸಿಹಿ ಸುದ್ದಿ ಈಗಾಗಲೇ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಬ್ರೇಕಿಂಗ್ ನ್ಯೂಸ್‌ವೊಂದು ಗಾಂಧಿನಗರದ ಗಲ್ಲಿಯಲ್ಲಿ ಹರಿದಾಡುತ್ತಿದೆ.`ಸ್ವಾತಿ ಮುತ್ತಿನ ಮಳೆ ಹನಿಯೇ’ ನಿರ್ಮಾಣ ಹೊಣೆ ಹೊತ್ತಿರುವ ರಮ್ಯಾ, `ಉತ್ತರಕಾಂಡ’ ಚಿತ್ರದಲ್ಲಿ ಧನಂಜಯ್‌ಗೆ(Dhananjay) ನಾಯಕಿಯಾಗಿ ರಮ್ಯಾ ಎಂಟ್ರಿ ಕೊಡ್ತಿದ್ದಾರೆ. ಮುಂದಿನ ವರ್ಷ ಜನವರಿಯಿಂದ ಶೂಟಿಂಗ್ ಶುರುವಾಗಲಿದೆ. ಇದರ ಮಧ್ಯೆ ಕಿಚ್ಚನ ಮುಂದಿನ ಚಿತ್ರಕ್ಕೆ ರಮ್ಯಾ ನಾಯಕಿ ಎಂಬ ಸುದ್ದಿ ಚಿತ್ರನಗರಿಯಲ್ಲಿ ಚಾಲ್ತಿಯಲ್ಲಿದೆ. ಇದನ್ನೂ ಓದಿ: ಮಗನ ಮುದ್ದಾದ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ`ರಂಗ ಎಸ್‌ಎಸ್‌ಎಲ್‌ಸಿ’, ಕಿಚ್ಚ ಹುಚ್ಚ, ಜಸ್ಟ್ ಮಾತ್ ಮಾತಲ್ಲಿ, ಮುಸ್ಸಂಜೆಮಾತು ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಸುದೀಪ್, ರಮ್ಯಾ ಜೋಡಿಯಾಗಿ ನಟಿಸಿದ್ದರು. `ವಿಕ್ರಾಂತ್ ರೋಣ’ ಚಿತ್ರದ ಸಕ್ಸಸ್ ನಂತರ ಸುದೀಪ್(Kiccha Sudeep) ಕೂಡ ತಮ್ಮ ಮುಂದಿನ ಚಿತ್ರದ ಬಗ್ಗೆ ಸೆಲೆಕ್ಟೀವ್ ಆಗಿದ್ದಾರೆ. ಅವರ ಮುಂದಿನ ಪ್ರಾಜೆಕ್ಟ್‌ಗೆ ರಮ್ಯಾನೇ ನಾಯಕಿ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ವಿಷ್ಯ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.
Sign in to your account
Username or Email Address


Password

 Remember Me


