ಉಡುಪಿ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B.S Yediyurappa) ಅವರು ಕೊಲ್ಲೂರು ಮೂಕಾಂಬಿಕೆ (Kolluru Mookambike) ಗೆ ವಿಶೇಷ ಪೂಜೆ ಅರ್ಪಿಸಿದ್ದಾರೆ.ಕೊಲ್ಲೂರಿಗೆ ಇಂದು ಭೇಟಿ ನೀಡಿರುವ ಅವರು ಪ್ರಾಂಗಣದಲ್ಲಿ ನಡೆದ ಮೂಕಾಂಬಿಕಾ ದೇವಿಯ ಉತ್ಸವದಲ್ಲಿ ಭಾಗಿಯಾದರು. ನಂತರ ದೇವರಿಗೆ ವಿಶೇಷ ಪೂಜೆಯೊಂದನ್ನು ನೆರವೇರಿಸಿದರು.ಇದೇ ವೇಳೆ ಮಾಜಿ ಸಿಎಂಗೆ ಸಂಸದ ಬಿ ವೈ ರಾಘವೇಂದ್ರ, ಸಚಿವ ಗೋವಿಂದ ಕಾರಜೋಳ, ಶಾಸಕ ಸುಕುಮಾರಶೆಟ್ಟಿ ಹಾಗೂ ಕೆ ರಘುಪತಿ ಭಟ್ ಯಡಿಯೂರಪ್ಪ ಸಾಥ್ ನೀಡಿದರು. ಇದನ್ನೂ ಓದಿ: ಮಂಗಳೂರು, ಉಡುಪಿಯವರು ಶಿಸ್ತಿನ ಜನಗಳು: ಹಾಡಿಹೊಗಳಿದ ಬಿಎಸ್‍ವೈನಿನ್ನೆ ಕಾಪು ಜನಸಂಕಲ್ಪದಲ್ಲಿ ಮಾತನಾಡಿದ ಬಿಎಸ್‍ವೈ, ನರೇಂದ್ರ ಮೋದಿ (Narendra Modi) ಪ್ರಧಾನಿಯಾದ ನಂತರ ಅವಿಶ್ರಾಂತ ಆಡಳಿತ ನೀಡಿದ್ದಾರೆ. ಜಗತ್ತೇ ಮೆಚ್ವುವ ವ್ಯಕ್ತಿ ಪ್ರಧಾನಿ ಮೋದಿ. ಕಾರ್ಯಕರ್ತರು ಎಲ್ಲಾ ಚುನಣವಣೆ ಗೆಲ್ಲಿಸಿ ಬಹುಮತ ಸಾಬೀತು ಮಾಡಬೇಕು ಎಂದಿದ್ದರು.ಸಿಎಂ ಆಗುವ ಭ್ರಮೆಯಲ್ಲಿರುವ ಕಾಂಗ್ರೆಸ್ (Congress) ನಾಯಕರು ಆಸೆ ಬಿಡೋದು ಒಳ್ಳೆಯದು. ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತೆ. ನಾನು ಚಾಮರಾಜ ನಗರದಿಂದ, ಬೊಮ್ಮಾಯಿ ಉತ್ತರ ಕನ್ನಡದಿಂದ ಪ್ರವಾಸ ಮಾಡುತ್ತಾರೆ. 140ಕ್ಕೂ ಹೆಚ್ವು ಸೀಟು ಗೆದ್ದು ಪ್ರಧಾನಿಗೆ ಗೌರವ ತಂದು ಕೊಡುತ್ತೇವೆ ಎಂದು ಹೇಳಿದ್ದರು.
Sign in to your account
Username or Email Address


Password

 Remember Me


