ಅಂತರಾಗ್ನಿ (ಇಂಗ್ಲಿಷ್: " ") ಎಂಬುದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ್‌ ನಲ್ಲಿ ಆಚರಿಸುವ ವಾರ್ಷಿಕ ಸಾಂಸ್ಕೃತಿಕ ಉತ್ಸವ. ಇದನ್ನು ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ನಡೆಸಲಾಗುತ್ತದೆ. ೧೯೬೫ ರಲ್ಲಿ ಶುರುವಾದ, ನಾಲ್ಕು ದಿನಗಳ ಅವಧಿಯ ಉತ್ಸವವು ಭಾರತದ ೩೫೦ ಕಾಲೇಜುಗಳಿಂದ ಭಾಗವಹಿಸುವವರನ್ನು ಆಕರ್ಷಿಸುತ್ತದೆ. ಇದು ವರ್ಷಗಳಲ್ಲಿ ಗಣನೀಯವಾಗಿ ಮಾಧ್ಯಮ ಗಮನವನ್ನು ಗಳಿಸಿದೆ. ಇದು ವೃತ್ತಿಪರ ಪ್ರದರ್ಶನಗಳು, ಸ್ಪರ್ಧೆಗಳು, ಸಂಗೀತ ಪ್ರದರ್ಶನಗಳು, ಡಿಜೆಗಳು, ಫ್ಯಾಷನ್ ಶೋಗಳು, ಭಾರತೀಯ ಜಾನಪದ ನೃತ್ಯಗಳು ಮತ್ತು ಹೆಚ್ಚಿನದನ್ನು ಒಳಗೊಂಡಿದೆ. == ಇತಿಹಾಸ == ಅಂತರಾಗ್ನಿ ೧೯೬೫ ರಲ್ಲಿ ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಾರಂಭವಾಯಿತು. ಉತ್ಸವದ ಹೆಸರನ್ನು, ಪ್ರಾರಂಭವಾದ ೨೭ ವರ್ಷಗಳ ನಂತರ ಅಂದರೆ, ೧೯೯೩ ರಲ್ಲಿ ಕಲ್ಫೆಸ್ಟ್‌ನಿಂದ ಅಂತರಾಗ್ನಿ ಎಂದು ಬದಲಾಯಿಸಲಾಯಿತು. ಇದನ್ನು ಉತ್ಸವವನ್ನು ಸಂಪೂರ್ಣವಾಗಿ ಐಐಟಿ ಕಾನ್ಪುರದ ವಿದ್ಯಾರ್ಥಿಗಳು ಆಯೋಜಿಸಿದ್ದಾರೆ. ಅಂತರಾಗ್ನಿಯ ಅಧ್ಯಕ್ಷರು ತಂಡದ ಏಕೈಕ ಅಧ್ಯಾಪಕ ಸದಸ್ಯರಾಗಿದ್ದಾರೆ. ಸುಮಾರು ೩೫೦ ಭಾರತೀಯ ಕಾಲೇಜುಗಳು ಇದರಲ್ಲಿ ಭಾಗವಹಿಸಿವೆ. === ಪ್ರದರ್ಶನಗಳು === ೨೦೦೬ - ವಿಶ್ವ ಮೋಹನ್ ಭಟ್, ಅಸ್ತಾದ್ ದೆಬೂ . ೨೦೧೬ - ಮೈಕ್ ಕ್ಯಾಂಡಿಸ್, ಸಾರ್ಟೆಕ್, ಡೆಮೊನಿಕ್ ರಿಸರ್ಕ್ಷನ್, ಮ್ಯಾಡ್ಬಾಯ್ ಮಿಂಕ್, ಅದ್ನಾನ್ ಸಾಮಿ . ೨೦೧೭ – , ವಿಶಾಲ್-ಶೇಖರ್, ಯುಫೋರಿಯಾ, ಸ್ಕೈಹಾರ್ಬರ್ . ೨೦೧೮ - ಅಮಿತ್ ತ್ರಿವೇದಿ, ಡಿಜೆ ಕ್ವಿಂಟಿನೋ, ದಿ ಲೋಕಲ್ ಟ್ರೈನ್, ಗುತ್ರೀ ಗೋವನ್ . ೨೦೧೯ - ಶಂಕರ್ ಮಹಾದೇವನ್, ಎಹ್ಸಾನ್ ನೂರಾನಿ, ಲಾಯ್ ಮೆಂಡೋನ್ಸಾ . ೨೦೨೦ - ಹಾಸ್ಯನಟರಾದ ಅಭಿಷೇಕ್ ಉಪ್ಮನ್ಯು, ಆಕಾಶ್ ಗುಪ್ತಾ ಮತ್ತು ಹರ್ಷ್ ಗುಜ್ರಾಲ್ ; ಸಂಗೀತಗಾರರು ದಿ ಯೆಲ್ಲೋ ಡೈರಿ ಮತ್ತು ಸೋನು ೨೦೨೧ - ರಿಟ್ವಿಜ್, ಸುನಿಧಿ ಚೌಹಾಣ್ . == ಗಮನಾರ್ಹ ಘಟನೆಗಳು == ಡಿಯಾ ಇನ್‌ಸ್ಪೈರ್ಡ್ - ರಾಜಕಾರಣಿಗಳು, ನಾಯಕರು ಮತ್ತು ಮಾಧ್ಯಮದ ವ್ಯಕ್ತಿಗಳನ್ನು ಒಳಗೊಂಡಿರುವ ರಾಜಕೀಯ ವೇದಿಕೆ ಮತ್ತು ಅಲ್ಲಿ ಸಾಮಾಜಿಕವಾಗಿ ಸಂಬಂಧಿತ ವಿಷಯಗಳನ್ನು ಚರ್ಚಿಸಲಾಗಿದೆ, ಯುವ ಸಂಸ್ಕೃತಿಗೆ ಒತ್ತು ನೀಡಲಾಗುತ್ತದೆ. ಕಳೆದ ವರ್ಷಗಳಲ್ಲಿ, ಇದು ವಿದ್ಯಾರ್ಥಿ ಸಮುದಾಯದ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಈ ಸಮಾರಂಭದಲ್ಲಿ ಭಾಷಣಕಾರರಲ್ಲಿ ತೆಲುಗು ಚಲನಚಿತ್ರ ನಿರ್ದೇಶಕ ಶೇಖರ್ ಕಮ್ಮುಲಾ, ಸಿಬಿಎಸ್‌ಸಿ ಅಧ್ಯಕ್ಷ ವಿನೀತ್ ಜೋಶಿ ಮತ್ತು ನಟಿ, ಗಾಯಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ವಸುಂಧರಾ ದಾಸ್ ಸೇರಿದ್ದಾರೆ. ಕವಿ ಸಮ್ಮೇಳನ - ಕವನ ಸ್ಪರ್ಧೆ. ಇದು ವರ್ಣಚಿತ್ರಕಾರ, ಪ್ರಾಧ್ಯಾಪಕ, ಕವಿ ಮತ್ತು ಚಲನಚಿತ್ರ ಗೀತರಚನೆಕಾರ ರಹತ್ ಇಂದೋರಿ ಮತ್ತು ಕವಿ ಕೀರ್ತಿ ಕಾಳೆ ಅವರ ಪ್ರದರ್ಶನಗಳನ್ನು ಒಳಗೊಂಡಿದೆ. ಚಲನಚಿತ್ರ ನಿರ್ಮಾಣ ಸ್ಪರ್ಧೆಗಳು - ತೀರ್ಪುಗಾರರು ಅಬ್ಬಾಸ್ ಟೈರೆವಾಲಾ ಮತ್ತು ಲವ್ ರಂಜನ್ ಅವರನ್ನು ಒಳಗೊಂಡಿರುತ್ತಾರೆ. ಹಿಂದಿ ಸಾಹಿತ್ಯಿಕ ಕಾರ್ಯಕ್ರಮಗಳು - ತೀರ್ಪುಗಾರರಲ್ಲಿ ಹಿಂದಿ ಲೇಖಕರಾದ ನಾಸಿರಾ ಶರ್ಮಾ, ಲೀಲಾಧರ್ ಜಗುಡಿ ಮತ್ತು ರವೀಂದ್ರ ಪ್ರಭಾತ್ ಸೇರಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==