ಅಚ್ಯುತರಾಯ (೧೫೩೦-೧೫೪೨) ಅಥವಾ ಅಚ್ಚುತ ದೇವ ರಾಯ ಸುಪ್ರಸಿದ್ಧ ಕೃಷ್ಣದೇವರಾಯನ ಮರಣಾನಂತರ ವಿಜಯನಗರ ಸಾಮ್ರಾಜ್ಯವನ್ನಾಳಿದ ದೊರೆ. ಕೃಷ್ಣದೇವರಾಯನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಮಧುರೆಯ ಮಂಡಲಾಧಿಪತಿ ದಂಗೆಯೆದ್ದು ಸ್ವತಂತ್ರನಾಗಲು ಯತ್ನಿಸಿದ್ದ. ಅಚ್ಯುತರಾಯನು ಸಿಂಹಾಸನಕ್ಕೆ ಬಂದಕೂಡಲೆ ಅವನನ್ನು ಅಡಗಿಸಿ, ಅವನಿಗೆ ಸಹಾಯ ನೀಡಿದ್ದ ತಿರುವಾಂಕೂರು ದೊರೆಯನ್ನು ದಂಡಿಸಿದ. ಅನಂತರ ವಿಷಯಲೋಲುಪನಾಗಿ ಆಡಳಿತಕ್ಕೆ ಗಮನ ಕೊಡಲಿಲ್ಲ. == ಆಡಳಿತ == ಅಚ್ಯುತರಾಯರು ಕನ್ನಡ ಕವಿ ಚಾಟು ವಿಟ್ಟಲನಾಥ, ಶ್ರೇಷ್ಠ ಸಂಯೋಜಕ ಮತ್ತು ಗಾಯಕ ಪುರಂದರದಾಸ, ಕರ್ನಾಟಕ ಸಂಗೀತದ ಪ್ರಮುಖ ಪ್ರತಿಪಾದಕರಲ್ಲಿ ಒಬ್ಬರು ಮತ್ತು ಸಂಸ್ಕೃತ ವಿದ್ವಾಂಸ ರಾಜನಾಥ ಡಿಂಡಿಮ ಅವರನ್ನು ಪೋಷಿಸಿದರು. ರಾಜ್ಯಭಾರ ಸಂಬಂಧಿಗಳಾಗಿದ್ದ ತಿರುಮಲ ಸಹೋದರರ ಕೈಸೇರಿತು. ಅವರ ಉತ್ಕರ್ಷ, ದರ್ಪಗಳನ್ನು ಸೈರಿಸದೆ ಅರವೀಡು ಮನೆತನಕ್ಕೆ ಸೇರಿದ ಮಂಡಾಲಾಧಿಪತಿಗಳು ವಿರೋಧಪಕ್ಷವನ್ನು ಕಟ್ಟಿದರು. ಅತ್ತ ಬಿಜಾಪುರದ ಸುಲ್ತಾನ ದಂಡೆತ್ತಿಬಂದು ನಾಗಲಾಪುರವನ್ನು (ಈಗಿನ ಹೊಸಪೇಟೆ) ವಶಪಡಿಸಿಕೊಂಡು ವಿಜಯನಗರಕ್ಕೆ ಮುತ್ತಿಗೆ ಹಾಕಿದ ಅವನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಕೃಷ್ಣದೇವರಾಯ ಅಷ್ಟೊಂದು ಸಾಹಸ ದಕ್ಷತೆಗಳಿಂದ ಕಟ್ಟಿದ್ದ ಸಾಮ್ರಾಜ್ಯದ ಬಿಗಿ ಸಡಿಲವಾಯಿತು. ಮುಂದೆ ಬಂದ ರಕ್ಕಸತಂಗಡಿ ಅನಾಹುತಕ್ಕೆ ಮಂಡಲಾಧಿಪತಿಗಳ ಈ ವೈಮನಸ್ಯ ನಾಂದಿಯಾಯಿತು. ತಿರುವೆಂಗಲನಾಥ ಮಂದಿರವನ್ನು ಅಚ್ಚುತರಾಯರ ಕಾಲದಲ್ಲಿ ಕಟ್ಟಲಾಯಿತು.ಇದು ಅಚ್ಚುತರಾಯ ದೇವಾಲಯವೆಂದು ಪ್ರಸಿದ್ಧವಾಗಿದೆ. ಅವರ ಮರಣದ ನಂತರ, ಉತ್ತರಾಧಿಕಾರ ವಿವಾದವಾಯಿತು. ಅವನ ಮಗ ವೆಂಕಟ ಅವನ ಉತ್ತರಾಧಿಕಾರಿಯಾದನು ಆದರೆ ಬಹಳ ಕಡಿಮೆ ಅವಧಿಗೆ ಆಳಿದನು ಮತ್ತು ಅಸ್ತವ್ಯಸ್ತವಾಗಿರುವ ಉತ್ತರಾಧಿಕಾರ ವಿವಾದದಲ್ಲಿ ಕೊಲ್ಲಲ್ಪಟ್ಟನು, ಇದರಲ್ಲಿ ಸಿಂಹಾಸನದ ಅನೇಕ ಹಕ್ಕುದಾರರು ಕೊಲ್ಲಲ್ಪಟ್ಟರು. ಅವನ ಸೋದರಳಿಯ, (ಕಿರಿಯ ಸಹೋದರನ ಮಗ) ಸದಾಶಿವರಾಯನು ಅಂತಿಮವಾಗಿ ಇನ್ನೂ ಮಗುವಾಗಿದ್ದಾಗ, ಕೃಷ್ಣದೇವರಾಯನ ಅಳಿಯ ರಾಮರಾಯನ ಆಳ್ವಿಕೆಯಲ್ಲಿ ಚಕ್ರವರ್ತಿಯಾದಾಗ ವಿವಾದವು ಕೊನೆಗೊಂಡಿತು. ಅವನ ಹೆಂಡತಿಯ ಹೆಸರು ಬಹುಶಃ ವಸುಧಾದೇವಿ. ಸದಾಶಿವರಾಯರು ಪ್ರಾಯಶಃ ವಸುಧಾದೇವಿಯ ಸಹೋದರಿ ಹೇಮಾವತಿ ಮತ್ತು ಆಕೆಯ ಪತಿ ರಂಗರಾಯರ ಮಗ. == ಉಲ್ಲೇಖಗಳು ==