ಅಟ್ಟುಕಲ್ ಒಂದು ಹಿಂದು ಯಾತ್ರಾ ಕೇಂದ್ರ,ಇದು ಭಾರತದ ಕೇರಳದ ತಿರುವನಂತಪುರಂನಲ್ಲಿದೆ. ಇದು ತಿರುವನಂತಪುರಂ ನಗರದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಿಂದ ಆಗ್ನೇಯ ದಿಕ್ಕಿಗೆ ಎರಡು ಕಿಲೋಮೀಟರ್ ದೂರದಲ್ಲಿದೆ. ದಕ್ಷಿಣ ಭಾರತದ ಪುರಾತನ ದೇವಾಲಯಗಳಲ್ಲಿ ಒಂದಾದ ಅಟ್ಟುಕಲ್ ಭಗವತಿ ದೇವಾಲಯವು ಮಹಿಳೆಯರ ಶಬರಿಮಲೆ ಎಂದು ಜನಪ್ರಿಯವಾಗಿದೆ, ಏಕೆಂದರೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಟ್ಟುಕಲ್ಲುದೇವಿಯು, ಎಲ್ಲಾ ಜೀವಿಗಳ ಸೃಷ್ಟಿಕರ್ತೆ ಹಾಗೂ ಎಲ್ಲವನ್ನು ಪ್ರಬಲವಾಗಿ ಸಂರಕ್ಷಿಸುವವಳು ಮತ್ತು ಎಲ್ಲವನ್ನೂ ನಾಶಮಾಡುವವಳು ಸರ್ವೋತ್ತಮಳು ಅವಳೇ ಆಗಿದ್ದಾಳೆ ಎಂದು ಪೂಜಿಸಲಾಗುತ್ತದೆ. ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಮತ್ತು ಭಗವಂತನನ್ನು ಪೂಜಿಸುವ ದೇಶಾದ್ಯಾಂತ ಯಾತ್ರಾರ್ಥಿಗಳು, ಪರಮ ಮಾತೆ ಅಟ್ಟುಕಾಲಮ್ಮನ ದೇಗುಲಕ್ಕೆ ಭೇಟಿ ನೀಡದೆ ತಮ್ಮ ಭೇಟಿಯನ್ನು ಪೂರ್ಣಗೊಳಿಸುವುದಿಲ್ಲ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಅಟ್ಟುಕಲ್ ಭಗವತಿಯು ತಮಿಳು ಕವಿ ಇಳಂಕೋ ಅಡಿಕಲ್ ಬರೆದ ಚಿಲಪ್ಪತಿಕಾರಂನ ಪ್ರಸಿದ್ಧ ನಾಯಕಿ ಕಣ್ಣಗಿಯ ದೈವಿಕರಿಸಿದ ರೂಪವಾಗಿದ್ದಾಳೆ ಎಂದು ಹೇಳಲಾಗಿದೆ. ಪುರಾತನ ನಗರವಾದ ಮಧುರೈನ ನಾಶದ ನಂತರ ಕಣ್ಣಗಿಯು ನಗರವನ್ನು ತೊರೆದು ಕನ್ಯಾಕುಮಾರಿ ಮೂಲಕ ಕೇರಳವನ್ನು ತಲುಪಿದಳು ಮತ್ತು ಕೊಡುಂಗಲ್ಲೂರಿಗೆ ಹೋಗುವ ದಾರಿಯಲ್ಲಿ ಅಟ್ಟುಕಲ್‌ನಲ್ಲಿ ತಂಗಿದಳು ಎಂದು ಕಥೆ ಹೇಳುತ್ತದೆ. ಕಣ್ಣಗಿಯು ಪರಮಶಿವನ ಪತ್ನಿಯಾದ ಪಾರ್ವತಿಯ ಅವತಾರವೆನ್ನುತ್ತಾರೆ. ಎಲ್ಲಾ ಶಕ್ತಿಶಾಲಿ ಮತ್ತು ಸೌಮ್ಯವಾದ ಅಟ್ಟುಕಲ್ ಭಗವತಿಯು ಅಟ್ಟುಕಲ್‌ನಲ್ಲಿ ಶಾಶ್ವತವಾಗಿ ಸರ್ವೋಚ್ಚ ಆಳ್ವಿಕೆ ನಡೆಸುತ್ತಾಳೆ ಮತ್ತು ತಾಯಿಯು ತನ್ನ ಮಕ್ಕಳನ್ನು ರಕ್ಷಣೆ ಮಾಡುವಂತೆ ಭಕ್ತರನ್ನು ಶುಶ್ರೂಷೆ ಮಾಡುತ್ತಾಳೆ. ದೂರದ ಮತ್ತು ಹತ್ತಿರದ ಸಾವಿರಾರು ಭಕ್ತರು ದೇವಿಯ ಮುಂದೆ ವಿಸ್ಮಯ ಮತ್ತು ಗೌರವದಿಂದ ನಮಸ್ಕರಿಸಿ,ತಲೆ ಭಾಗಿ ಮತ್ತು ತಮ್ಮ ಸಂಕಟ ಮತ್ತು ದುಃಖಗಳಿಗೆ ಪರಿಹಾರ ಪಡೆಯುತ್ತಾರೆ. ಪೊಂಗಲ ಮಹೋತ್ಸವವು ಅಟ್ಟುಕಲ್ ಭಗವತಿ ದೇವಸ್ಥಾನದ ಪ್ರಮುಖ ಹಬ್ಬವಾಗಿದೆ. ಅಟ್ಟುಕಲ್‌ನಲ್ಲಿ ನಡೆಯುವ ಈ ಹಬ್ಬವು ಪ್ರಪಂಚದಲ್ಲೇ ಅತಿ ದೊಡ್ಡ ಮಹಿಳೆಯರ ಸಭೆಯಾಗಿ ಗುರುತಿಸಿಕೊಂಡು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದೆ. ಪೊಂಗಲನ್ನು ಅರ್ಪಿಸುವುದು ಕೇರಳದ ದಕ್ಷಿಣ ಭಾಗದಲ್ಲಿ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಪ್ರಚಲಿತದಲ್ಲಿರುವ ವಿಶೇಷ ದೇವಾಲಯದ ಆಚರಣೆಯಾಗಿದೆ. ಇದು ಹತ್ತು ದಿನಗಳ ಕಾರ್ಯಕ್ರಮವಾಗಿದ್ದು ಮಲಯಾಳಂ ತಿಂಗಳಿನ ಮಕರಂ-ಕುಂಭಂ (ಫೆಬ್ರವರಿ-ಮಾರ್ಚ್) ಕಾರ್ತಿಕ ನಕ್ಷತ್ರದಂದು ಪ್ರಾರಂಭವಾಗುತ್ತದೆ ಮತ್ತು ರಾತ್ರಿಯಲ್ಲಿ ಕುರುತಿತಾರ್ಪಣಂ ಎಂದು ಕರೆಯಲ್ಪಡುವ ತ್ಯಾಗದೊಂದಿಗೆ ಮುಕ್ತಾಯಗೊಳ್ಳುತ್ತದೆ. ಉತ್ಸವದ ಒಂಬತ್ತನೇ ದಿನದಂದು ವಿಶ್ವವಿಖ್ಯಾತ ಅಟ್ಟುಕಲ್ ಪೊಂಗಲ ಮಹೋತ್ಸವವು ನಡೆಯುತ್ತದೆ. ದೇವಾಲಯದ ಸುತ್ತಲಿನ ಸುಮಾರು 5 ಕಿಲೋಮೀಟರ್ ವ್ಯಾಪ್ತಿಯ ಎಲ್ಲಾ ಜಾತಿ, ಧರ್ಮ ಮತ್ತು ಧರ್ಮದ ಜನರ ಮನೆಗಳ ಆವರಣ, ಬಯಲು, ರಸ್ತೆಗಳು, ವಾಣಿಜ್ಯ ಸಂಸ್ಥೆಗಳು, ಸರ್ಕಾರಿ ಕಚೇರಿಗಳ ಆವರಣಗಳು ಇತರ ಪ್ರದೇಶಗಳು, ಪೊಂಗಲ್ ಆಚರಣೆಗಳನ್ನು ಆಚರಿಸಲು ಪವಿತ್ರ ಮೈದಾನವಾಗಿ ಹೊರಹೊಮ್ಮುತ್ತದೆ. ಕೇರಳದ ವಿವಿಧ ಭಾಗಗಳಿಂದ ಮತ್ತು ಹೊರಗಿನಿಂದ ೨.೫ ಮಿಲಿಯನ್ ಮಹಿಳಾ ಭಕ್ತರು ಸೇರುತ್ತಾರೆ. ಸಮಾರಂಭವು ಹೆಚ್ಚಾಗಿ ಮಹಿಳೆಯರಿಗೆ ಸೀಮಿತವಾಗಿದೆ, ಆದರೂ ಪುರುಷರು ಸಹ ಆಚರಣೆಗಳನ್ನು ವೀಕ್ಷಿಸಬಹುದು. ಈ ಮಂಗಳಕರ ದಿನದಂದು ತಿರುವನಂತಪುರದಲ್ಲಿ ಸೇರುವ ಅಗಾಧ ಜನಸಮೂಹವು ಉತ್ತರ ಭಾರತದ ಕುಂಭಮೇಳ ಉತ್ಸವದ ಕ್ಷಣಗಳನ್ನು ನೆನಪಿಸುತ್ತದೆ. == ಕಾರ್ಯಕ್ರಮಗಳು == ಅಟ್ಟುಕಲ್‌ನಲ್ಲಿರುವ ಅಟ್ಟುಕಲ್ ಭಗವತಿ ದೇವಸ್ಥಾನವು ಫೆಬ್ರವರಿ 2021 ರಂದು 10 ದಿನಗಳ ವಾರ್ಷಿಕ ಉತ್ಸವವನ್ನು ನಡೆಸಿತು. == ಉಲ್ಲೇಖಗಳು ==