ಅರಣ್ಯಕಗಳು (ಸಂಸ್ಕೃತ āraṇyaka आरण्यक) ಹಿಂದೂ ಶೃತಿ, ನಾಲ್ಕು ವೇದಗಳ ಒಂದು ಭಾಗವಾಗಿವೆ; ಮೊದಲ ಉಪನಿಷತ್ತುಗಳ ಅಥವಾ ಬ್ರಾಹ್ಮಣಗಳ ವಿಶೇಷ ವೇದಗಳ ಸಂಸ್ಕೃತದಲ್ಲಿ ಸೇರಿದೆ. "ಅರಣ್ಯಕ" (āraṇyaka) ಎಂದರೆ "ಕಾಡಿಗೆ ಸಂಬಂಧಿಸಿದ" (araṇya), ಅಂದರೆ, ತೈತ್ತೀರಿಯಾ ಅರ್. 2 ಹೇಳುವಂತೆ, "ಎಲ್ಲಿಂದ ನಾವಿರುವ ನೆಲೆಯ ಮೇಲ್ಛಾವಣಿಯನ್ನು ನೋಡಲಾಗುವುದಿಲ್ಲವೋ ಅಲ್ಲಿಂದ". ಈ ಪದವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿರುವುದು ಹೀಗೆ "ಫಾರೆಸ್ಟ್ ಬುಕ್ಸ್" ಅಥವಾ "ವೈಲ್ಡರ್ನೆಸ್ ಬುಕ್ಸ್". ಇವು ವಿಶೇಷವಾಗಿ ಅಪಾಯಕಾರಿಯಾದಂತಹ ಮಹಾವ್ರತ ಹಾಗೂ ಪ್ರವಾರ್ಗ್ಯಗಳಂತಹ ಸಂಪ್ರದಾಯಗಳ ಬಗ್ಗೆ ಬ್ರಾಹ್ಮಣ-ಶೈಲಿಯ ಚರ್ಚೆಗಳನ್ನು ಒಳಗೊಂಡಿವೆ, ಹಾಗೂ ಅರಣ್ಯಕಗಳಲ್ಲಿ ಇದನ್ನು ಕಲಿಯಬೇಕಾಗುತ್ತದೆ. ನಂತರದಲ್ಲಿ ವೇದಗಳಿಗೆ ಹೆಚ್ಚಿನದನ್ನು ಸೇರಿಸುವುದರ ಮೂಲಕ ಅವುಗಳ ಬುಟ್ಟಿಗಳೆನಿಸಿದವು. ಆದಾಗ್ಯೂ, ನಂತರದ ಸಂಪ್ರದಾಯಗಳು ಸನ್ಯಾಸತ್ವಗಳು ಅಥವಾ ವಾನಪ್ರಸ್ಥಗಳೊಂದಿಗೆ ಇವುಗಳನ್ನು ಹೊಂದಿದ್ದವು, ಹಾಗೂ ಅವು ಸ್ವಭಾವತಃ "ಅತೀಂದ್ರಿಯ"ವಾದವು ಅಲ್ಲ, ಉಪನಿಷತ್ತುಗಳಿಗಿಂತ ಬ್ರಾಹ್ಮಣಗಳ ರೀತಿಗಳಿಗೆ ಹತ್ತಿರವಾಗಿವೆ == ಅರಣ್ಯಕ ಪುಸ್ತಕಗಳು == ಅರಣ್ಯಕಗಳು ಬ್ರಾಹ್ಮಣಗಳ ರೀತಿಯಲ್ಲಿಯೇ ತ್ಯಾಗಗಳ ಬಗ್ಗೆ, ಹಾಗೂ ಪ್ರಾಥಮಿಕವಾಗಿ ಸರಿಯಾದ ರೀತಿಯಲ್ಲಿ ಸಂಪ್ರದಾಯಗಳನ್ನು ಅನುಸರಿಸುವ ರೀತಿಯ ಬಗ್ಗೆ ಚರ್ಚಿಸುತ್ತವೆ, (ಆರ್ತೊಪ್ರ್ಯಾಕ್ಸಿ). ಅರಣ್ಯಕಗಳು ಒಂದು ವಿಶೇಷ ವರ್ಗದ ಸಂಪ್ರದಾಯಗಳಿಗೆ ಬದ್ಧವಾಗಿವೆ ಆದಾಗ್ಯೂ ಇದರಲ್ಲಿ ಸಾಮಾನ್ಯವಾಗಿ ವೇದಗಳ ಕಲಿಕೆಯ ಕ್ರಮವನ್ನು ಸೇರಿಸಲಾಗುತ್ತದೆ. ಅರಣ್ಯಕಗಳು ಅವುಗಳ ಹೆಸರುಗಳಿಗೆ ಹಾಗೂ, ಪ್ರತ್ಯೇಕವಾದ ವೇದಗಳ ಶಖೆಗಳಿಗೆ ಸಂಬಂಧಿಸಿವೆ. ಋಗ್ವೇದ ಐತರೇಯ ಅರಣ್ಯಕವು ಋಗ್ವೇದದ ಐತರೇಯ ಶಖಕ್ಕೆ ಸೇರಿದೆ. ಕೌಶಿತಕಿ ಅರಣ್ಯಕವು ಋಗ್ವೇದದ ಕೌಶಿತಕಿ ಹಾಗೂ ಶಂಖಾಯಣ ಶಖಗಳಿಗೆ ಸೇರಿದೆ ಯಜುರ್ವೇದ ತೈತ್ತಿರೀಯ ಅರಣ್ಯಕವು ಕೃಷ್ಣಯಜುರ್ವೇದದ ತೈತ್ತಿರೀಯ ಶಾಖೆಗೆ ಸೇರಿದೆ ಮೈತ್ರಾಯಣೀಯ ಅರಣ್ಯಕವು ಕೃಷ್ಣಯಜುರ್ವೇದದ ಮೈತ್ರಾಯಣೀಯ ಶಾಖೆಗೆ ಸೇರಿದೆ ಕಥಾ ಅರಣ್ಯಕವು ಕೃಷ್ಣಯಜುರ್ವೇದದ (ಕಾರಕ)ಕಥಾ ಶಾಖೆಗೆ ಸೇರಿದೆ ಬೃಹದ್ ಅರಣ್ಯಕ ಶುಕ್ಲಯಜುರ್ವೇದದ ಮಧ್ಯಂದಿನ ಹಾಗೂ ಕಣ್ವ ಆವೃತ್ತಿಗಳಲ್ಲಿದೆ. ಮಧ್ಯಂದಿನ ಆವೃತ್ತಿಯು 9 ವಿಭಾಗಗಳನ್ನೊಳಗೊಂಡಿದೆ, ಇದರಲ್ಲಿ ಕೊನೆಯ 6 ಬೃಹದಾರಣ್ಯಕ ಉಪನಿಷತ್. ಸಾಮವೇದ ತಲಾವಕರ ಅರಣ್ಯಕ ಅಥವಾ ಜೈಮಿನೀಯ ಉಪನಿಷತ್ ಬ್ರಾಹ್ಮಣ ಸಾಮವೇದದ ತಲಾವಕರ ಅಥವಾ ಜೈಮಿನೀಯ ಶಖಕ್ಕೆ ಸೇರಿದೆ ಅರಣ್ಯಕ ಸಂಹಿತದ ಸಾಮವೇದ ಸಂಹಿತಗಳ ಪೂರ್ವಾರ್ಚಿಕವು 'ಅರಣ್ಯಕ ಸಂಹಿತ' ಎಂಬ ಭಾಗವನ್ನು ಹೊಂದಿದೆ ಇದರ ಮೇಲೆ ಅರಣ್ಯಗಾನ ಸಾಮನರು ಹಾಡಿದ್ದಾರೆ. ಅಥರ್ವವೇದವು ಯಾವ ಅರಣ್ಯಕವನ್ನೂ ಹೊಂದಿಲ್ಲ, ಗೋಪಾಥ ಬ್ರಾಹ್ಮಣವು ಇದರ ಅರಣ್ಯಕಕ್ಕೆ ಸಂಬಂಧಿಸಿದರೂ, ದೊಡ್ಡ ಹಾಗೂ ಕಾಣೆಯಾದ ಅಥರ್ವ (ಪೈಪ್ಪಲಾಡ) ಬ್ರಾಹ್ಮಣದ ಉಳಿದ ಅವಶೇಷವಾಗಿದೆ. === ಐತರೇಯ ಅರಣ್ಯಕ === ಇದರಲ್ಲಿ ಐದು ಅಧ್ಯಾಯಗಳಲ್ಲಿ ಪ್ರತಿಯೊಂದನ್ನೂ ಸಂಪೂರ್ಣ ಅರಣ್ಯಕಗಳೆಂದು ಪರಿಗಣಿಸಲಾಗುತ್ತದೆ. ಮೊದಲನೆಯದು ‘ಮಹಾ-ವ್ರತ’ವೆಂದು ಕರೆಯಲಾಗುವ ಕಟ್ಟುಪಾಡುಗಳನ್ನು ಒಳಗೊಂಡಿದೆ. ಈ ವಿವರಣೆಗಳು ಸಂಪ್ರದಾಯಬದ್ಧವಾಗಿಯೂ ಕೆಲವು ಊಹೆಗಳಿಂದ ಕೂಡಿದವಾಗಿಯು ಇವೆ. ಎರಡನೆಯದುಐದು ಅಧ್ಯಾಯಗಳನ್ನು ಒಳಗೊಂಡಿದೆ ಅದರಲ್ಲಿ ಮೊದಲ ಮೂರು ‘ಪ್ರಾಣ-ವಿದ್ಯಾ’ದ ಬಗ್ಗೆ ವಿವರಿಸುತ್ತವೆ – ಇದರರ್ಥ, ಪ್ರಾಣ, ಜೀವವಿರುವ ದೇಹಕ್ಕೆ ಬೇಕಾಗುವ ಜೀವದ-ಉಸಿರಾದ ಅಲ್ಲದೆ ಎಲ್ಲಾ ಮಂತ್ರಗಳ ಎಲ್ಲಾ ವೇದಗಳ ಹಾಗೂ ವೇದಗಳ ಹೇಳಿಕೆಗಳನ್ನು ಒಳಗೊಂಡ ಜೀವನಕ್ಕೆ ಅತ್ಯಗತ್ಯವಾದ ಗಾಳಿಯ ವಿಷಯವಾಗಿ ವಿವರಣೆ ನೀಡುತ್ತದೆ (ಸಿಎಫ್. 2.2.2 ಐತರೇಯ ಅರಣ್ಯಕ). ಒಬ್ಬ ವ್ಯಕ್ತಿಯು ಹೇಗೆ ವೇದಗಳ ಆಜ್ಞೆಗಳನ್ನು ಅನುಸರಿಸುತ್ತಾನೆ ಹಾಗೂ ತ್ಯಾಗಗಳನ್ನು ನಿರ್ವಹಿಸಿ, ಅಗ್ನಿ ದೇವ ಅಥವಾಸೂರ್ಯ ಅಥವಾವಾಯುವಾಗುತ್ತಾನೆ ಮತ್ತು ಒಬ್ಬ ವ್ಯಕ್ತಿಯು ವೇದಗಳ ಆಜ್ಞೆಗಳನ್ನು ತಿರಸ್ಕರಿಸಿ ಹೇಗೆ ನೀಚಕುಲದಲ್ಲಿ ಅಂದರೆ ಪಕ್ಷಿ ಅಥವಾ ಸರೀಸೃಪಗಳ ರೂಪದಲ್ಲಿ ಜನಿಸುತ್ತಾನೆ ಎಂಬುದನ್ನು ಈ ವಿಭಾಗದ ಅರಣ್ಯಕದಲ್ಲಿ ಉದಾಹರಣೆಗಳ ಮೂಲಕ ವಿವರಿಸಲಾಗಿದೆ. ಈ ಎರಡನೆಯ ಅರಣ್ಯಕದ 4ನೆಯ, 5ನೆಯ ಹಾಗೂ 6ನೆಯ ಅಧ್ಯಾಯಗಳು ಐತರೇಯೋಪನಿಷತ್ ಅನ್ನು ಒಳಗೊಂಡಿವೆ. ಈ ಸರಣಿಯ ಮೂರನೆಯ ಅರಣ್ಯಕ ಶ್ರೇಣಿಯನ್ನು ‘ಸಂಹಿತೋಪನಿಷತ್’ ಎಂದೂ ಕರೆಯಲಾಗುತ್ತದೆ. ಇದು ಪದ-ಪಾಠ, ಕ್ರಮ-ಪಾಠ, ಇತ್ಯಾದಿಗಳಂತಹವನ್ನು ವಿಸ್ತಾರವಾಗಿ ಹೇಳುತ್ತದೆ -- ‘ಸ್ವರಗಳ’ ಸೂಕ್ಷ್ಮ-ವ್ಯತ್ಯಾಸಗಳು ಹಾಗೂ ವೇದಗಳ ಪಠನವನ್ನು ಒಳಗೊಂಡಿದೆ. ನಾಲ್ಕನೆಯ ಹಾಗೂ ಐದನೆಯ ಅರಣ್ಯಕಗಳು ‘ಮಹಾನಾಮ್ನೀ’ ಎಂದು ಕರೆಯಲಾಗುವ ಮಂತ್ರಗಳು ಹಾಗೂ ‘ಮಧ್ಯಂದಿನ’ ಎಂದು ಕರೆಯಲಾಗುವ ಯಜ್ಞಗಳ ಪಾರಿಭಾಷಿಕ ಹಾಗೂ ಸವಿಸ್ತಾರವಾದ ವಿವರಗಳನ್ನು ಒಳಗೊಂಡಿವೆ. === ತೈತ್ತಿರೇಯ ಅರಣ್ಯಕ === ಇದರಲ್ಲಿ ಹತ್ತು ಅಧ್ಯಾಯಗಳಿವೆ ಇದರಲ್ಲಿ ಒಂದರಿಂದ ಆರನೆಯ ಅಧ್ಯಾಯಗಳು ಅರಣ್ಯಕವನ್ನು ಸರಿಯಾಗಿ ಹೇಳುತ್ತವೆ. ಮೊದಲ ಎರಡು ಅಧ್ಯಾಯಗಳು ಅಸ್ತೌ ಕಥಾಕಣಿಯ ಭಾಗಗಳಾಗಿವೆ ("8 ಕಥಕ ವಿಭಾಗಗಳು"), ಇವು ತೈತ್ತಿರೀಯ ಶಖದ ಸಮಯದವು ಅಲ್ಲ. ಇವು ಕಥಕ ಶಖದಿಂದ ಅಳವಡಿಸಿಕೊಂಡತಹವು, ಹಾಗೂ ಅಗ್ನಿಕಾಯನ ಸಂಪ್ರದಾಯದ ವೈವಿಧ್ಯತೆಗಳಿಗೆ ಹೆಚ್ಚಾಗಿ ಸಂಬಂಧಿಸಿವೆ. ಅಧ್ಯಾಯ 1, ಇದು ಅತಿ ನಂತರದ ವೇದಗಳ ಅಧ್ಯಾಯ, ಇದು ಕೆಲವು ಪುರಾಣಗಳ ಹೆಸರುಗಳನ್ನು ಹೊಂದಿದೆ; ಪಠ್ಯದ ಒಳಗೆ ಕಾವಿಟ್ಟಿಗೆಗಳಿಂದ ತುಂಬಿದ ಇದರ ಶೈಲಿಯಿಂದ ಇದನ್ನು ಸಾಮಾನ್ಯವಾಗಿ ಅರುಣ ಪ್ರಸ್ನಾ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತೀಯ ಬ್ರಾಹ್ಮಣರು 132 ಅಣುವಕಗಳಲ್ಲಿ ಪ್ರತಿಯೊಂದನ್ನು ಪಠಿಸಿ ನಂತರ ಮಾಡುವ ಸೂರ್ಯ ನಮಸ್ಕಾರ ಅಭ್ಯಾಸಗಳ ಬಗ್ಗೆ ವಿವರಿಸುವ "ಸೂರ್ಯ ನಮಸ್ಕಾರ ಅಧ್ಯಾಯ"ವನ್ನು ಇದು ಹೊಂದಿದೆ. ಕಥಾ ಭಾಗಗಳ ವಿಭಾಗವನ್ನು 1898ರಲ್ಲಿ ಎಲ್.ವಿ.ಶೋರೊದರ್ ಅವರು ಪ್ರಕಟಿಸಿದ್ದಾರೆ. ಅಧ್ಯಾಯ 2, ಪ್ರತಿಯೊಬ್ಬ ಬ್ರಾಹ್ಮಣನೂ ದಿನ ನಿತ್ಯ ಮಾಡಬೇಕಾದ ಐದು ಮಹಾ-ಯಜ್ಞಗಳ ವಿಷಯವಾಗಿ ಇದರಲ್ಲಿ ಬಹಳ ಮುಖ್ಯವಾಗಿ ವೇದ (ಸ್ವಧ್ಯಾಯ)ಗಳ ಬಗ್ಗೆ ಚರ್ಚಿಸುತ್ತದೆ. ನಂತರದಲ್ಲಿ, ಪವಿತ್ರ ಎಳೆ, ಯಜ್ಞೋಪವೀತ, ಸಂಧ್ಯಾ ಪೂಜೆ, ಪೂರ್ವಜರ ಆಚಾರಗಳು (ಪಿತೃ), ಬ್ರಹ್ಮ ಯಜ್ಞ, ಹಾಗೂ ಹೋಮದ-ಪಾವಿತ್ರ್ಯತೆ ('ಕುಸ್ಮಾಂಡ ಹೋಮ') ಈ ಎಲ್ಲವುಗಳ ಬಗ್ಗೆ ವಿವರ. -- ಈ ಅಧ್ಯಾಯದಲ್ಲಿ 'ಶರ್ಮಾನ' ಶಬ್ಧವನ್ನು (2-7-1) ಸನ್ಯಾಸಿ ಎಂಬ ಅರ್ಥವಾಗಿ ಬಳಸಲಾಗಿದೆ (ತಪಸ್ವಿನ್); ಈ ಶಬ್ಧವನ್ನು ನಂತರದಲ್ಲಿ ಬೌದ್ಧೀಯರ ಹಾಗೂ ಜೈನ ಸನ್ಯಾಸಿಗಳಿಗಾಗಿ ಉಪಯೋಗಿಸಲಾಯಿತು. -- ಚ. ಮಲಮೌದ್ ಅವರಿಂದ ಚರ್ಚಿಸಲಾಯಿತು ಹಾಗೂ ಭಾಷಾಂತರಿಸಲಾಯಿತು (ಫ್ರೆಂಚ್‌ನಲ್ಲಿ, 1977); ಎಲ್.ವಿ.ಶ್ರೋಡರ್ ಅವರು 1898ರಲ್ಲಿ ಕಥಾ ಆವೃತ್ತಿಯನ್ನು ಪ್ರಕಟಿಸಿದರು. ಅಧ್ಯಾಯ 3, ಹಲವಾರು ಇತರ ಹೋಮ ಹಾಗೂ ಯಜ್ಞಗಳ ತಂತ್ರಗಳನ್ನು ನಿರೂಪಿಸುತ್ತದೆ. ಅಧ್ಯಾಯ 4, ಪ್ರವಾರ್ಗ್ಯ ಶ್ರೌತ ಸಂಪ್ರದಾಯದಲ್ಲಿ ಬರುವ ಮಂತ್ರಗಳ ಬಗ್ಗೆ ತಿಳಿಸುತ್ತದೆ, ಇದನ್ನು ಮಣ್ಣಿನ ಪಾತ್ರೆಯಲ್ಲಿ ಹಾಲನ್ನು ಹಾಕಿ ಕೆಂಪಗಾಗುವವರೆಗೂ ಕುದಿಸುವ ಹಾಗೆ ಇದು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅಧ್ಯಾಯ 5, ಪ್ರವಾರ್ಗ್ಯ-ಯಜ್ಞದ ಬಗ್ಗೆ ಚಚೆಯನ್ನು ನಿರೂಪಿಸುತ್ತದೆ (ಬ್ರಾಹ್ಮಣ ಶೈಲಿ). ಅಧ್ಯಾಯ 6, ‘ಪಿತೃಮೇಧ’ ಮಂತ್ರಗಳನ್ನು ಇದು ದಾಖಲಿಸಿದೆ, ಇವು ಸತ್ತ ದೇಹದ ಅಂತ್ಯ ಸಂಸ್ಕಾರದ ಸಮಯದಲ್ಲಿ ಹೇಳುವಂತಹವಾಗಿವೆ. 7, 8 ಹಾಗೂ 9ನೇ ಅಧ್ಯಾಯಗಳನ್ನು ಚಿರ-ಪರಿಚಿತ ತೈತ್ತಿರೀಯೋಪನಿಷತ್ನ ಮೂರು ಕಣಿವೆಗಳೆನ್ನಲಾಗುತ್ತದೆ. ಅಧ್ಯಾಯ 10ನ್ನು "ಮಹಾನಾರಾಯಣ ಉಪನಿಷತ್" ಎಂದು ಕೂಡಾ ಕರೆಯಲಾಗುತ್ತದೆ. ಮೂರು ಸಂಹಿತೆಗಳಿಂದ ಆಯ್ದ ಹಲವಾರು ಪ್ರಮುಖ ಮಂತ್ರಗಳನ್ನು ಇದು ಹೊಂದಿದೆ. ಟಿಎ 10.41-44ಯನ್ನು "ಮೇ–ಧ ಸೂಕ್ತ" ಎಂದು ಕರೆಯಲಾಗುತ್ತದೆ. === ಶಂಖಾಯಣ ಅರಣ್ಯಕ === ಇದರಲ್ಲಿ ಹದಿನೈದು ಅಧ್ಯಾಯಗಳಿವೆ: ಅಧ್ಯಾಯ 1-2 ಮಹಾವ್ರತದ ಬಗ್ಗೆ ಹೇಳುತ್ತವೆ. ಅಧ್ಯಾಯ 3-6 ಕೌಶಿತಕಿ ಉಪನಿಶದ್ ಅನ್ನು ಒಳಗೊಂಡಿವೆ. ಅಧ್ಯಾಯ 7-8 ಸಂಹಿತೋಪನಿಶದ್‌ ಅನ್ನು ತಿಳಿಸುತ್ತವೆ. ಅಧ್ಯಾಯ 9 ಪ್ರಾಣದ ಪ್ರಾಮುಖ್ಯತೆಯನ್ನು ನಿರೂಪಿಸುತ್ತದೆ. ಅಧ್ಯಾಯ 10 ಅಗ್ನಿಹೋತ್ರ ಸಂಪ್ರದಾಯದ ಅಧಿಕೃತವಾಗಿ ಅಳವಡಿಕೆಯ ಬಗ್ಗೆ ಹೇಳುತ್ತದೆ. ಎಲ್ಲಾ ಪೂಜನೀಯ ವ್ಯಕ್ತಿತ್ವಗಳು ಪುರುಷನಲ್ಲಿ ಅಂತರ್ಗತವಾಗಿವೆ, ಮಾತಿನಲ್ಲಿ ಅಗ್ನಿ, ಪ್ರಾಣದಲ್ಲಿ ವಾಯು, ಕಣ್ಣಿನಲ್ಲಿ ಸೂರ್ಯ, ಮನಸ್ಸಿನಲ್ಲಿ ಚಂದ್ರ, ಕಿವಿಯಲ್ಲಿ ದಿಕ್ಕುಗಳು ಹಾಗೂ ಶಕ್ತಿ ಸಾಮರ್ಥ್ಯಗಳಲ್ಲಿ ನೀರು. ಯಾರು ಇದನ್ನು ಬಲ್ಲರೋ ಅವರು ಅರಣ್ಯಕವನ್ನು ಹೇಳುತ್ತಾರೆ, ಆ ನಂಬಿಕೆಯ ಬಲವು ನಂತರ ತಿನ್ನುವುದು, ನಡೆಯುವುದು , ಮಾತಾಡುವುದು ಹಾಗೂ ಕೊಡುವುದು ಎಲ್ಲಾ ದೇವರನ್ನು ತೃಪ್ತಿಪಡಿಸುತ್ತದೆ ಅಲ್ಲದೆ ಆತನು ಅಗ್ನಿಗೆ ಏನೇನು ನೀಡುತ್ತಾನೊ ಅದೆಲ್ಲವೂ ಸ್ವರ್ಗದಲ್ಲಿರುವ ದೇವತೆಗಳಿಗೆ ಸಲ್ಲುತ್ತದೆ. (.10-1). ಅಧ್ಯಾಯ 11 ಸಾವು ಹಾಗೂ ರೋಗಗಳನ್ನು ದೂರವಿಡಲು ಸಂಪ್ರದಾಯಬದ್ಧ ಪರಿಹಾರಗಳ ಬಗ್ಗೆ ವಿವರಿಸುತ್ತದೆ. ಇದು ಕನಸುಗಳ ಪರಿಣಾಮದ ವಿವರಗಳನ್ನೂ ಸಹ ನೀಡುತ್ತದೆ. ಅಧ್ಯಾಯ 12 ಪ್ರಾರ್ಥನೆಗಳ ಫಲಗಳ ವಿಷಯವನ್ನು ವಿಸ್ತಾರವಾಗಿ ಹೇಳುತ್ತದೆ. ಅಧ್ಯಾಯ 13 ತತ್ವಶಾಸ್ತ್ರದ ವಿಷಯಗಳ ಬಗ್ಗೆ ಹೆಚ್ಚಾಗಿ ಹೇಳುತ್ತದೆ ಹಾಗೂ ಒಬ್ಬ ವ್ಯಕ್ತಿಯು ದೈಹಿಕ ಹೊಂದಾಣಿಕೆಗಳನ್ನು ಮೊದಲು ತ್ಯಜಿಸಬೇಕು ನಂತರ ‘ಶ್ರವಣ’, ಮನನ ಹಾಗೂ ನಿಧಿಧ್ಯಾನಸಾನ ಹಾಗೂ ಪ್ರಾಯಶ್ಚಿತ್ತ, ನಂಬಿಕೆ ಹಾಗೂ ಸ್ವಯಂ ನಿಯಂತ್ರಣ ಇತ್ಯಾದಿಗಳ ನಿಯಮಗಳನ್ನು ಪಾಲನೆ ಮಾಡಬೇಕು. ಅಧ್ಯಾಯ 14 ಎರಡು ಮಂತ್ರಗಳ ಬಗ್ಗೆ ತಿಳಿಸುತ್ತದೆ. ಅದರಲ್ಲಿ ಒಂದು “ನಾನೊಬ್ಬ ಬ್ರಾಹ್ಮಣ” ಎಂಬ ಮಂತ್ರವನ್ನು ಸ್ತುತಿಸಿ ಇದು ಎಲ್ಲ ವೇದ ಮಂತ್ರಗಳ ಪರಾಕಾಷ್ಠೆ ಎಂದು ಹೇಳುತ್ತದೆ. ಎರಡನೆಯ ಮಂತ್ರವು ಯಾರು ಮಂತ್ರಗಳ ಅರ್ಥವನ್ನು ತಿಳಿಯದೆ ಹಾಗೇ ಪಠಿಸುವರೋ ಅವರು ಮೌಲ್ಯಗಳನ್ನು ಅರಿಯದೇ ಇರುವ ಪ್ರಾಣಿಗಳಂತೆ ಎಂದು ಹೇಳುತ್ತದೆ. ಅಧ್ಯಾಯ 15ರಲ್ಲಿ ಬ್ರಹ್ಮನಿಂದ ಹಿಡಿದು ಗುಣ-ಸಂಖ್ಯಾಯನನವರೆಗಿನ ಅಧ್ಯಾತ್ಮಕ ಗುರುಗಳ ತಲೆಮಾರಿನ ಕಥೆಯನ್ನು ತಿಳಿಸುತ್ತದೆ. === ಬೃಹದ್-ಅರಣ್ಯಕ === ಬ್ರಾಹ್ಮಣದ ಒಂದು ಭಾಗ ಬಿಳಿ ಯಜುರ್ವೇದದ ಅರಣ್ಯಕ: ಮಧ್ಯಂದಿನ ಆವೃತ್ತಿಯಲ್ಲಿ ಸಾತಪಥ ಬಿಆರ್. 14,1-3. ಇದು ಪರ್ವಾರ್ಗ್ಯ ಸಂಪ್ರದಾಯದ ಬಗ್ಗೆ ವಿಶೇಷವಾಗಿ ತಿಳಿಸುತ್ತದೆ, ಹಾಗೂ ಇದು ಬೃಹದ್-ಅರಣ್ಯಕ ಉಪನಿಷತ್ (ಸಾತಪತ ಬಿಆರ್. 14.4-9). == ರಹಸ್ಯ ಬ್ರಾಹ್ಮಣಗಳು == ಬ್ರಾಹ್ಮಣಗಳಿಂದ ಅರಣ್ಯಕಗಳವರೆಗೆ ಏನೋ ಮುಂದುವರಿಕೆ ಇದೆ, ಬ್ರಾಹ್ಮಣದಲ್ಲಿ ಅಷ್ಟೊಂದು ವಿವರವಾಗಿಲ್ಲದ ಕೆಲವು 'ಗುಪ್ತ' ಸಂಪ್ರದಾಯದ ಅರ್ಥಗಳನ್ನೂ ಅರಣ್ಯಕಗಳು ಹೊಂದಿವೆ. ನಂತರದ ಸಂಪ್ರದಾಯಗಳು ಇದನ್ನು ಸೂಕ್ಷತೆಯನ್ನು ನೋಡಿದವು, ದುರ್ಗಾಚಾರ್ಯರು ಅವರ ನಿರುಕ್ತದ ಬಗೆಗಿನ ವಿವರದಲ್ಲಿ ಅರಣ್ಯಕಗಳನ್ನು ‘ರಹಸ್ಯ ಬ್ರಾಹ್ಮಣ’ ಎಂದಿದ್ದಾರೆ , ಎಂದರೆ ಬ್ರಾಹ್ಮಣದ ಗುಟ್ಟುಗಳು. == ಇವನ್ನೂ ಗಮನಿಸಿ == ಬೃಹದ್-ಅರಣ್ಯಕ ಉಪನಿಶದ್ == ಆನ್‌ಲೈನ್ ಕೆಲಸ == , . (1872). . . . , . (1907). . . == ಟಿಪ್ಪಣಿಗಳು == == ಉಲ್ಲೇಖಗಳು == ಓಂ ಪ್ರಕಾಶ್ ಪಾಂಡೆಯವರಿಗೆ ವೈದಿಕ್ ಸಾಹಿತ್ಯ ಔರ್ ಸಂಸ್ಕೃತಿ ಕಾ ಸ್ವರೂಪ್ (ಹಿಂದಿಯಲ್ಲಿ). ವಿಶ್ವ ಪ್ರಕಾಶನ (ಎ ಯುನಿಟ್ ಆಫ್ ವಿಲೀ ಈಸ್ಟ್ರನ್) 1994, ನವದೆಹಲಿ .ಐಎಸ್‌ಬಿಎನ್ 0-313-30015-1 ಐತರೇಯ ಅರಣ್ಯಕ – ಎ. ಬಿ. ಕೀತ್ ಅವರ ಇಂಗ್ಲೀಷ್ ಭಾಷಾಂತರ, ಲಂಡನ್ 1909 ಆರ್ಥರ್ ಬೆರ್ರಿಡೇಲ್ ಕೀತ್, ದಿ ಐತರೇಯ ಅರಣ್ಯಕ: ಭಾರತೀಯ ಕಛೇರಿ ಹಾಗೂ ರಾಯಲ್ ಏಷಿಯಾಟಿಕ್ ಸೊಸೈಟಿಯ ಕೈಬರಹಗಳಿಂದ ಸಂಪಾದಿಸಲಾಗಿದೆ, ಪೀಠಿಕೆ, ಭಾಷಾಂತರ, ಟಿಪ್ಪಣಿಗಳು, ... ಸಂಖ್ಯಾಯಣ ಅರಣ್ಯಕ ಇನ್ನೂ ಪ್ರಕಟಿಸಲಾಗಿಲ್ಲ , ಈಸ್ಟ್ರನ್ ಬುಕ್ ಲಿಂಕರ್ಸ್ (1995) ಐಎಸ್‌ಬಿಎನ್ 81-86339-14-0 ಐತರೇಯ ಅರಣ್ಯಕ – ಒಂದು ಅಧ್ಯಯನ. ಡಾ. ಸುಮನ್ ಶರ್ಮಾ. ಈಸ್ಟರ್ನ್ ಬುಕ್ ಲಿಂಕರ್ಸ್. ನವ ದೆಹಲಿ 1999 ತೈತ್ತಿರೀಯ ಅರಣ್ಯಕ, ಸಾಯಣ ಭಾಷ್ಯದೊಂದಿಗೆ. ಆನಂದಾಶ್ರಮ್, ಪುಣೆ 1926. ಭಿ.ಡಿ. ಧಾವನ್. ಮಿಸ್ಟಿಸಿಸಂ ಅಂಡ್ ಸಿಂಬಾಲಿಸಂ ಇನ್ ಐತರೇಯ ಅಂಡ್ ತೈತ್ತಿರೀಯ ಅರಣ್ಯಕಾಸ್ , ಸೌತ್ ಏಷಿಯಾ ಬುಕ್ಸ್ (1989), ಐಎಸ್‌ಬಿಎನ್ 81-212-0094-6 ಚಾರ್ಲ್ಸ್ ಮಲಮೌದ್, ಸ್ವಧ್ಯಾಯ : récitation Taittirīya-Āranyaka : ; commenté . ಪ್ಯಾರಿಸ್ : , 1977 ಹೌಬೆನ್, ಜಾನ್. ದಿ ಪ್ರವಾರ್ಗ್ಯ ಬ್ರಾಹ್ಮಣ ಆಫ್ ದಿ ತೈತ್ತಿರೀಯ ಅರಣ್ಯಕ : ಪ್ರವಾರ್ಗ್ಯ ಸಂಪ್ರದಾಯದ ಒಂದು ಪುರಾತನ ವಿವರಣೆ; ಪೀಠಿಕೆ, ಭಾಷಾಂತರ, ಹಾಗೂ ಜಾನ್ ಇ.ಎಮ್.ಹೌಬೆನ್ ಅವರ ಟಿಪ್ಪಣಿಗಳು. ದೆಹಲಿ : ಮೋತಿಲಾಲ್ ಬನಾರ್ಸಿದಾಸ್ ಪಬ್ಲಿಶರ್ಸ್, 1991. ಮೈಕೆಲ್ ವಿಟ್ಜೆಲ್, ಕಥಾ ಅರಣ್ಯಕ : ಜರ್ಮನ್ ಭಾಷಾಂತರದ ಆವೃತ್ತಿ ಹಾಗೂ ಪೀಠಿಕೆ , ಹಾರ್ವರ್ಡ್ ಓರಿಯೆಂಟಲ್ ಸೀರೀಸ್, ಹಾರ್ವರ್ಡ್ ಡಿಪಾರ್ಟ್ಮೆಂಟ್ ಅಫ್ ಸಾಂಸ್ಕ್ರಿತ್ ಅಂಡ್ ಇಂಡಿಯನ್ ಸ್ಟಡೀಸ್ (2005) ಐಎಸ್‌ಬಿಎನ್ 0-674-01806-0 ಭಾಗ್ಯಲತಾ ಎ. ಪಾಟಸ್ಕರ್, ಕಥಾ ಕಾರಣ್ಯಕಂ (ದೇವನಾಗರಿಯ ಪಠ್ಯ, ಪೀಠಿಕೆ ಹಾಗೂ ಭಾಷಾಂತರಗಳನ್ನು ಹೊಂದಿದೆ. ನವ ದೆಹಲಿ: ಆದರ್ಶ ಸಂಸ್ಕೃತ ಶೋಧ ಸಂಸ್ಥೆ / ವೈದಿಕ ಸಂಶೋಧನಾ ಮಂಡಲ 2009. ಟೆಂಪ್ಲೇಟು: