‍ ಊರ್ಮಿಳೆ(ಸಂಸ್ಕೃತ : ऊर्मिला) ಹಿಂದೂ ಮಹಾಕಾವ್ಯ ರಾಮಾಯಣದಲ್ಲಿನ ಒಂದು ಪಾತ್ರ. ರಾಮಾಯಣದ ಪ್ರಕಾರ ಮಿಥಿಲೆಯ ರಾಜ ಜನಕ ಹಾಗೂ ರಾಣಿ ಸುನೈನಾಳ ಪುತ್ರಿ ಮತ್ತು ಸೀತೆಯ ತಂಗಿ. ಅವಳು ರಾಮನ ಕಿರಿಯ ಸಹೋದರ ಲಕ್ಷ್ಮಣನ ಹೆಂಡತಿ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು - ಅಂಗದಾ ಮತ್ತು ಚಂದ್ರಕೇತು. ಲಕ್ಷ್ಮಣನು ರಾಮ ಮತ್ತು ಸೀತಾಳೊಂದಿಗೆ ಗಡಿಪಾರು ಮಾಡಲು ಹೋದಾಗ, ಉರ್ಮಿಳಾ ಅವರೊಂದಿಗೆ ಬರಲು ಸಿದ್ಧಳಾಗಿದ್ದಳು . ಆದರೆ ಲಕ್ಷ್ಮಣನು ತನ್ನ ವಯಸ್ಸಾದ ಹೆತ್ತವರನ್ನು ನೋಡಿಕೊಳ್ಳಲು ಅಯೋಧ್ಯೆಗೆ ಹಿಂತಿರುಗುವಂತೆ ಕೇಳಿಕೊಂಡನು. ಉರ್ಮಿಳಾ , ಉರ್ಮಿಳಾ ನಿದ್ರಾದಿಂದ ತನ್ನ ಸಾಟಿಯಿಲ್ಲದ ತ್ಯಾಗದಿಂದ ಗಮನಾರ್ಹವಾಗಿದ್ದಾಳೆ. ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಲಕ್ಷ್ಮಣ ಮತ್ತು ಉರ್ಮಿಳಾಗೆ ಮೀಸಲಾಗಿರುವ ದೇವಾಲಯವಿದೆ. ಈ ದೇವಾಲಯವನ್ನು ಕ್ರಿ.ಶ ೧೮೭೦ ರಲ್ಲಿ ಅಂದಿನ ಭರತ್‌ಪುರದ ಆಡಳಿತಗಾರ ಬಲ್ವಂತ್ ಸಿಂಗ್ ನಿರ್ಮಿಸಿದರು ಮತ್ತು ಇದನ್ನು ಭರತ್‌ಪುರ ರಾಜ್ಯದ ರಾಜಮನೆತದ ರಾಜ ದೇವಾಲಯವೆಂದು ಪರಿಗಣಿಸಿದೆ. == ಇತಿವೃತ್ತ == ತಂದೆಯ ವಚನದಂತೆ ಶ್ರೀರಾಮಚಂದ್ರನು ವನವಾಸಕ್ಕೆಂದು ತನ್ನ ಮಡದಿಯ ಜೊತೆ ಕಾಡಿಗೆ ತೆರಳುವ ಸಂದರ್ಭದಲ್ಲಿ ಊರ್ಮಿಳೆಯ ಪತಿ ಲಕ್ಷ್ಮಣನು ಸಹ ಕಾಡಿಗೆ ಹೋಗಲು ಇಚ್ಛಿಸಿದಾಗ ಶ್ರೀರಾಮಚಂದ್ರನು ತನ್ನ ನಾದಿನಿಯಾದ ಊರ್ಮಿಳೆಯ ಅಂತರಾಳದಲ್ಲಿನ ವ್ಯಾಕುಲತೆಯನ್ನು ಅರಿಯುವಲ್ಲಿ ವಿಫಲನಾಗಿ, ತನ್ನ ಜೊತೆ ಲಕ್ಷ್ಮಣನನ್ನು ಸಹಾ ಕಾಡಿಗೆ ಕರೆದೊಯ್ಯುತ್ತಾನೆ. ಲಕ್ಷ್ಮಣನು ತನ್ನ ತಂದೆ ತಾಯಿಯರನ್ನು ನೋಡಿಕೊಳ್ಳುವುದಾಗಿ ಅವಳನ್ನು ಅಯೋಧ್ಯೆಯಲ್ಲೇ ಬಿಟ್ಟು ಹೋಗುತ್ತಾನೆ. ರಾವಣನಿಂದ ಅಪಹೃತಳಾಗುವ ಮುನ್ನ ಸೀತಾಮಾತೆ ತನ್ನ ಪತಿಯೊಂದಿಗೆ ಕಾನನದಲ್ಲಿ ವನ-ಚರ-ಪ್ರಾಣಿ-ಪಕ್ಷಿಗಳೊಂದಿಗೆ ಆನಂದದಿಂದ ಕಾಲಕಳೆಯುತ್ತಿದ್ದರೆ, ಇತ್ತ ತನ್ನ ಪತಿಯ ಬರುವಿಕೆಗಾಗಿಯೇ ಊರ್ಮಿಳೆ ಹದಿನಾಲ್ಕು ವರ್ಷಗಳ ಕಾಲ ಅರಮನೆಯಲ್ಲಿ ಕಾಯುತ್ತಿರುತ್ತಾಳೆ. ಲಕ್ಷ್ಮಣ ಮತ್ತು ಊರ್ಮಿಳೆಗೆ ಅಂಗದ ಹಾಗೂ ಚಂದ್ರಕೇತು ಎಂಬ ಇಬ್ಬರು ಮಕ್ಕಳಿದ್ದರು. ಊರ್ಮಿಳೆಯು ಊರ್ಮಿಳಾ ನಿದ್ರಾ ಎಂಬ ತನ್ನ ಸಾಟಿಯಿಲ್ಲದ ತ್ಯಾಗಕ್ಕೆ ಹೆಸರಾಗಿದ್ದಾಳೆ. ರಾಜಸ್ಥಾನದ ಭರತಪುರ ಜಿಲ್ಲೆಯಲ್ಲಿ, ಲಕ್ಷ್ಮಣ ಮತ್ತು ಊರ್ಮಿಳೆಗೆ ಮೀಸಲಾಗಿರುವ ಒಂದು ದೇವಸ್ಥಾನ ಇದೆ. ಭರತಪುರದ ರಾಜ ಬಲವಂತ್ ಸಿಂಗ್ ಈ ದೇವಾಲಯವನ್ನು ೧೮೭೦ ನೇ ಶತಮಾನದಲ್ಲಿ ಕಟ್ಟಿಸಿದರು. ನಂತರ ಆ ದೇವಾಲಯವು ಭರತಪುರದ ರಾಜ ಕುಟುಂಬದಿಂದ ರಾಯಲ್ ದೇವಸ್ಥಾನವೆಂದು ಪರಿಗಣಿಸಲಾಗಿದೆ. == ಟಿವಿ ಸರಣಿ ಚಿತ್ರಣಗಳು == == ಉಲ್ಲೇಖಗಳು ==