ಡಾ.ಎಸ್.ನರೇಂದ್ರಕುಮಾರ್ ಕವಿ, ವಿಚಾರ ಸಾಹಿತಿ. ಸಾಹಿತ್ಯ ವಿಮರ್ಶೆ, ದಲಿತ ಚಳುವಳಿ ಹಾಗೂ ಸಾಂಸ್ಕೃತಿಕ ಅಧ್ಯಯನ, ಅಂಬೇಡ್ಕರ್ ಅಧ್ಯಯನ ಮತ್ತು ಬರಹದಲ್ಲಿ ತೊಡಗಿಸಿಕೊಳ್ಳುವುದು ಅವರ ಆಸಕ್ತಿಯ ವಿಷಯಗಳು. == ಜನನ, ಜೀವನ == ಎಸ್.ನರೇಂದ್ರಕುಮಾರ್ ಹುಟ್ಟಿದ್ದು ಮಲ್ಲಿಗಹಳ್ಳಿ, ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆಯಲ್ಲಿ ೨೨-೧೨-೧೯೭೩ ರಂದು. ತಂದೆ ಶ್ರೀನಿವಾಸಮೂರ್ತಿ, ತಾಯಿ ಮಾಲತಿ. ಪ್ರಸ್ತುತ ಇವರು ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜನಾಧಿಕಾರಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. == ಪ್ರಕಟಿತ ಕೃತಿಗಳು == === ಸಂಶೋಧನಾ ವಿಷಯ === "ದೇವನೂರು, ನಾಗವಾರ, ಕುಂವೀ ಅವರ ಕಥೆಗಳು ಒಂದು ಅಧ್ಯಯನ" -ಮಾರ್ಗದರ್ಶಕರು :ಪ್ರೊ.ಎಂ.ಎಸ್.ಶೇಖರ್. === ಅಂಬೇಡ್ಕರ್ ಕೃತಿಗಳು === ಹೊಸ ಸಮಾಜ ಮತ್ತು ಅಂಬೇಡ್ಕರ್ - ೨೦೦೨ (ಅಂಬೇಡ್ಕರ್ ಚಿಂತನೆಗಳನ್ನು ಕುರಿತ ವಿಮರ್ಶಾ ಲೇಖನಗಳು) ನಿಜದ ನೆಲೆ - ೨೦೦೫ (ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಲೇಖನಗಳು) ಬೋಧಿನೆಲದ ಮಾತು ೨೦೦೯ (ಸಾಹಿತ್ಯ, ವೈಚಾರಿಕ, ಸಾಂಸ್ಕೃತಿಕ, ಸಮಕಾಳೀನ ವಿಚಾರಗಳನ್ನು ಕುರಿತ ಲೇಖನಗಳು) ದಸಂಸ ಹೋರಾಟದ ಪಯಣ _ ೨೦೧೧ ( ಮೈಸೂರು ಜಿಲ್ಲೆಯ ದಸಂಸಯು ೨೦೦೫ರಿಂದ ೨೦೧೦ರವರೆಗೆ ನಡೆಸಿದ ಹೋರಾಟದ ಹೆಜ್ಜೆ ಗುರುತುಗಳು) ಮೂರುಬೊಗಸೆ ನೀರು ೨೦೧೨ (ಅಂಬೇಡ್ಕರ್ ಪ್ರಜ್ಞೆಯಲ್ಲಿ ದೇವನೂರು ಮಹಾದೇವ, ಕಾಳೇಗೌಡ ನಾಗವಾರ ಹಾಗೂ ಕುಂ.ವೀರಭದ್ರಪ್ಪ ನವರ ಕಥೆಗಳ ಅಧ್ಯಯನ) === ಸಂಪಾದಿತ ಕೃತಿಗಳು === ಅಂಬೇಡ್ಕರ್ ಅಂತರಂಗ ೨೦೦೨ (ಅಂಬೇಡ್ಕರ್ ಅವರ ಹಾಗೂ ಅಂಬೇಡ್ಕರ್ ಬಗೆಗೆ ಬಂದಿರುವ ಲೇಖನಗಳ ಸಂಗ್ರಹ) ಅಂಬೇಡ್ಕರ್ ಸೂಕ್ತಿಗಳು ೨೦೦೨ ( ಅಂಬೇಡ್ಕರ್ ಚಿಂತನೆಗಳ ಸಂಕ್ಷಿಪ್ರ ಸಂಗ್ರಹ) ಬತ್ತಲಾರದ ಬದುಕು ೨೦೦೭ ( ಕೊರಚ ಸಮುದಾಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಛಾಯಚಿತ್ರಗಳ ಸಂಗ್ರಹ) ಮರಳಿ ಮನೆಗೆ ೨೦೦೬ (ಬುದ್ಧನ ಬಗೆಗೆ ಬಂದಿರುವ ಲೇಖನಗಳು ಕವನಗಳು ಹಾಗೂ ಬೌದ್ಧ ಭಿಕ್ಕುಗಳು ಮತ್ತು ಉಪಾಸಕರನ್ನು ಸಂದರ್ಶಿಸಿದ ಬರಹಗಳ ಸಂಗ್ರಹ) === ಸಹ ಸಂಪಾದಿತ ಕೃತಿಗಳು === ನೋವು ಹೆತ್ತ ಪ್ರೀತಿ ೨೦೦೩ ( ಅರವಿಂದ ಮಾಲಗತ್ತಿ ಅವರ ಆತ್ಮಕಥೆ 'ಗೌರ್ಮೆಂಟ್ ಬ್ರಾಹ್ಮಣ' ಕುರಿತ ಬರಹಗಳ ಸಂಗ್ರಹ) ಅಭಿಮೂಖಿ ೨೦೦೫ (ಅಂಬೇಡ್ಕರ್ ಅವರ ತತ್ವ್ತ ಹಾಗೂ ಚಿಂತನೆಗಳನ್ನು ಅಂತರ್ಗತವಾಗಿಸಿಕೊಂಡ ಲೇಖನಗಳ ಸಂಗ್ರಹ) ಅರಿವಿನ ಕುರುಹು ೨೦೦೬ (೨೦೦೧-೦೨ನೇ ಸಾಲಿನಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮಂಡಿಸಿದ ಪ್ರಬಂಧಗಳ ಸಂಕಲನ) ಬಹುಶ್ರುತತೆ ೨೦೧೧ (ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮಂಡಿಸಲಾದ ಪ್ರಬಂಧಗಳು ಹಾಗೂ ವಿಶೇಷ ಉಪನ್ಯಾಸಗಳ ಸಂಗ್ರಹ) ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ ೨೦೧೨ ( ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರಜಾವಾಣಿ ಪ್ರಕಟಿಸಿದ ದಲಿತಪ್ರಜ್ಞೆಯ ವಿಶೇಷ ಲೇಖನಗಳ ಸಂಗ್ರಹ) === ಕಿರು ರೋಪಕ === ಬುದ್ಧನ ಪ್ರೇಮಯಾತ್ರೆ === ಜೀವನ ಚರಿತ್ರೆ === ಮಹಾಚೇತನ (ಡಾ.ಬಿ.ಆರ್.ಅಂಬೇಡ್ಕರ್ ಕುರಿತದ್ದು) ೨೦೦೫ === ನವಸಾಕ್ಷರರಿಗಾಗಿ ಬರೆದ ಬರಹಗಳು === ಯಾರಿಗೂ ಯಾರಿಲ್ಲ (ಕಿರುಕಥೆ) ೨೦೦೫ ವಿಚಾರವಾದಿ ಡಾ.ಕೋವೂರ್ (ವ್ಯಕ್ತಿಚಿತ್ರ) ೨೦೦೬) ಗೌತಮಬುದ್ಧ ಹೇಳಿದ ಕಥೆಗಳು ೨೦೦೮-೦೯ == ನಿರ್ವಹಿಸಿರುವ/ನಿರ್ವಹಿಸುತ್ತಿರುವ ಜವಾಬ್ದಾರಿಗಳು == ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ವೇದಿಕೆಯ ಪ್ರಧಾನ ಸಂಚಾಲಕ -೨೦೦೧-೨೦೦೩ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಕೇಂದ್ರದಲ್ಲಿ ಅಂಬೇಡ್ಕರ್ ಅಧ್ಯಯನ ಮಂಡಳಿ ಅಧ್ಯಕ್ಷ - ೨೦೧೦-೨೦೧೨ ಅಂಬೇಡ್ಕರ್ ಅಧ್ಯಯನ ಪರೀಕ್ಷಾ ಮಂಡಳಿ ಅಧ್ಯಕ್ಷ - ೨೦೧೪ ಸಕಾಲ ಮಾಸ ಪತ್ರಿಕೆಯ ಸಲಹಾ ಮಂಡಳಿ ಸದಸ್ಯ - ೨೦೦೭ ಅಂಬೇಡ್ಕರ್ ಕಾರವಾನ್ ದ್ವಿಭಾಷಾ ಮಾಸ ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯ - ೨೦೧೪ ಪ್ರಸ್ತುತ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜನಾಧಿಕಾರಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. == ಪ್ರಶಸ್ತಿ, ಗೌರವ ಮತ್ತು ಪುರಸ್ಕಾರ == 'ಬೋಧಿ ನೆಲದ ಮಾತು' ಕೃತಿಗೆ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ (ರಿ) ಗದಗ ಇವರಿಂದ ೨೦೦೯ನೇ ಸಾಲಿನ ದಲಿತ ಸಾಹಿತ್ಯ ಸಂಕೀರ್ಣ ಪ್ರಕಾರದಲ್ಲಿ ಪುಸ್ತಕ ಪ್ರಶಸ್ತಿ. ಚಾಮರಾಜ ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ಸಮಗ್ರ ಸಾಹಿತ್ಯ ಸೇವೆಯನ್ನು ಗುರ್ತಿಸಿ ೨೦೧೩ ಮಾರ್ಚ್ ೧೬-೧೭ರಂದು ಅಭಿನಂದಿಸಲಾಗಿದೆ. == ವಿಶೇಷತೆಗಳು == ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಕೇಂದ್ರದ ಆವರಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಕಾರದೊಂದಿಗೆ "ಶಿಲೆಗಳಲ್ಲಿ ಮಾನವೀಯತೆ ಮತ್ತು ಸಮಾನತೆ ಪರಿಕಲ್ಪನೆ"ಯ ಬೋಧಿಶಿಲ್ಪವನ ಸ್ಥಾಪನೆ -೨೦೧೪ == ಉಲ್ಲೇಖಗಳು == == ಬಾಹ್ಯಕೊಂಡಿಗಳು ==