ಪಶ್ಸಿಮ ಘಟ್ಟದ ತಪ್ಪಲಲ್ಲಿರುವ ಏನೆಕಲ್ಲು ಗ್ರಾಮವು ಸುಳ್ಯ ತಾಲೂಕಿನ ಒಂದು ಹಳ್ಳಿ.ನಿತ್ಯ ಕಾನನದ ನಡುವೆ ಜುಳುಜುಳುನೆ ಹರಿವ ಕುಮಾರಧಾರಾ ಉಪನದಿಗಳಲ್ಲಿ ಆಗಿಂದಾಗ್ಲೆ ಏನೆಕಲ್ಲು ನದಿಯ ಇಕ್ಕೆಲಗಳಲ್ಲಿ ಪಸರಿಸುವ ಪುಟ್ಟಹಳ್ಳಿ ಏನೆಕಲ್ಲು ಕರ್ನಾಟಕ ಸುಪ್ರಸಿದ್ದ ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಗಳಪಟ್ಟಿದೆ.ಪ್ರಕ್ರತಿ ರಮಣೀಯವಅದ ಸೊಗಸನ್ನು ತನ್ನದಾಗಿಸಿಕೊಂಡು,ಕಾರಣೀಕದ ದೈವ ಬಚ್ಚನಾಯಕ, ದೇವರನ್ನೊಳಗೊಂಡ ಸುಸಂಸ್ಕ್ರತ ಸಮಾಜವನ್ನು ಮಾಡುವ ಶಿಕ್ಷಕರಿಂದ ಒಳಗೊಂಡಿದೆ.ಅರಬ್ಬಿ ಸಮುದ್ರದಿಂದ ಬಿರುಸಗಿ ಬಿಸಿ ಬರುವ ಗಾಳಿ ಕುಮಾರ ಪರ್ವತ ತಡೆಯಾಗಿ ಅದರ ಬುಡದಲ್ಲಿರುವ ಗ್ರಾಮ ಏನೆಕಲ್ಲು.ಈ ಗ್ರಾಮದಲ್ಲಿ ಅತಿಯಾದ ಮಳೆ ಬರುವ ಕಾರಣ ಇಲ್ಲಿನ ಜನರು ಕೃಷಿ ಪ್ರಧಾನವಾದ ಗ್ರಾಮವಾಗಿದೆ.ಸಾಮಾಜಿಕವಾಗಿ,ರಾಜಕೀಯವಾಗಿ,ಹಾಗೂ ಕ್ರೀಡಾಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮುಡಿಸಿದೆ == ವಿಶೇಷತೆ == ಈ ತುಳುನಾಡಿನಲ್ಲಿ ನಾಗಾರಾಧನೆಯು ವಿಶೇಷವಾಗಿ ನಡೆಯುತ್ತಾದೆ. ಇಲ್ಲಿ ಶ್ರೀ ಬಚ್ಚನಾಯಕ ದೇವರ ದೇವಸ್ಥಾನವು ಪ್ರಚಲಿತದಲಿದೆ. ವಿಶೇಷವಾದ ಮತ್ಯಧಾಮವಿದೆ. == ಮಾರ್ಗ == ಸುಬ್ರಹ್ಮಣ್ಯದಿಂದ ಸುಮಾರು ೧ ಕಿಮೀ ದೂರದಲ್ಲಿದೆ. == ಶಿಕ್ಷಣ == ಈ ಊರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಕಾಣಬಹುದು.ಅಲ್ಲದೆ ಇಲ್ಲಿನ ವಿದ್ಯಾವಂತರು ನಾನ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೆ. == ಆರ್ಥಿಕ == ಆರ್ಥಿಕವಾಗಿ ಸರಕಾರಿ ವ್ಯವಸಾಯ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಈ ಗ್ರಾಮದಲ್ಲಿ ಅನೇಕ ಬೆಳೆಗಳನ್ನು ಬೆಳೆಯುತ್ತಾರೆ ಬಾಳೆ ತೆಂಗು ರಬ್ಬರ್ ಕಂಗು ಕ್ಕೋಕ್ಕೋ ಕಾಳುಮೆಣಸು ಇತ್ಯಾದಿ ಬೆಳೆಗಳು. == ಭಾಷೆ == ಈ ಪ್ರದೇಶದಲ್ಲಿ ಜನರು ಕನ್ನಡ,ತುಳು,ಅರೆಕನ್ನಡ.ಮಾತಾನಡುತ್ತಾರೆ == ಉಲ್ಲೇಖ ==