ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿರುವ ಒಂದು ಗ್ರಾಮ ಕಣಿಯೂರು(ಕಾಣಿಯೂರು). ಇದು ದ್ವೈತ ತತ್ವಜ್ಞಾನಿ ಮಧ್ವಾಚಾರ್ಯರು ಸ್ಥಾಪಿಸಿದ ಅಷ್ಟ ಮಠಗಳಲ್ಲಿ ಒಂದನ್ನು ಹೊಂದಿದೆ. ಕಾಣಿಯೂರಿನಲ್ಲಿ ರೈಲು ನಿಲ್ದಾಣವಿದ್ದು ಮಂಗಳೂರು ಮತ್ತು ಸುಬ್ರಹ್ಮಣ್ಯ ರಸ್ತೆ ನಿಲ್ದಾಣಗಳ ನಡುವೆ ಚಲಿಸುವ ಪ್ಯಾಸೆಂಜರ್ ರೈಲುಗಳ ಮೂಲಕ ಕಾಣಿಯೂರು ರೈಲು ನಿಲ್ದಾಣವನ್ನು ಪ್ರವೇಶಿಸಬಹುದು.ಪುತ್ತೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ೧೦೦ (ಎಸ್.ಎಚ್ ೧೦೦) ಈ ಗ್ರಾಮದ ಮೂಲಕ ಹಾದು ಹೋಗುತ್ತದೆ. ಪುತ್ತೂರಿನಿಂದ ಕಾಣಿಯೂರಿನಿಂದ ಕುಕ್ಕೆ ಸುಭ್ರಮಣ್ಯಕ್ಕೆ ಆಗಾಗ ಬಸ್ಸುಗಳಿವೆ. = ಕಾಣಿಯೂರು ಮಠ = ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಎಂಟು ಮಠಗಳಲ್ಲಿ (ಅಷ್ಟ ಮಠ ಎಂದು ಜನಪ್ರಿಯವಾಗಿದೆ) ಶ್ರೀ ಕಾಣಿಯೂರು ಮಠವು ಒಂದಾಗಿದೆ. ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ರಾಮತೀರ್ಥರು ಕಾಣಿಯೂರು ಮಠದ ಮೊದಲ ಮಠಾಧೀಶರು. ಅಂದಿನಿಂದ ಇಲ್ಲಿಯವರೆಗೆ ೨೯ ಮಠಾಧೀಶರು ಕಾಣಿಯೂರು ಮಠವನ್ನು ಸಮರ್ಥವಾಗಿ ಮುನ್ನಡೆಸಿ ಮಠದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕಾಣಿಯೂರು ಮಠದ ಮೊದಲ ಮಠಾಧೀಶರಾದ ಶ್ರೀ ರಾಮತೀರ್ಥರಿಗೆ ಶ್ರೀ ಯೋಗಾನರಸಿಂಹನ ವಿಗ್ರಹವನ್ನು ನೀಡಲಾಯಿತು, ಇದನ್ನು ಕಾಣಿಯೂರು ಮಠದ ಮುಖ್ಯ ದೇವರಾಗಿ ಅತ್ಯಂತ ಗೌರವ ಮತ್ತು ಭಕ್ತಿಯಿಂದ ಪೂಜಿಸಲಾಗುತ್ತಿದೆ. ಪ್ರಸ್ತುತ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕಣಿಯೂರು ಮಠದ ನೇತೃತ್ವ ವಹಿಸಿದ್ದಾರೆ. = ಕಾಣಿಯೂರು ಮಠದ ಗುರುಪರಂಪರೆ = ಶ್ರೀ ಮಧ್ವಾಚಾರ್ಯರು ಶ್ರೀ ರಾಮತೀರ್ಥ ಶ್ರೀ ರಘುನಾಥ ತೀರ್ಥರು ಶ್ರೀ ರಘುಪತಿ ತೀರ್ಥ ಶ್ರೀ ರಘುನಂದನ ತೀರ್ಥರು ಶ್ರೀ ಯದುನಂದನ ತೀರ್ಥರು ಶ್ರೀ ವಿಶ್ವನಾಥ ತೀರ್ಥರು ಶ್ರೀ ವೇದಗರ್ಭ ತೀರ್ಥರು ಶ್ರೀ ವಾಗೀಶ ತೀರ್ಥರು ಶ್ರೀ ವರದಪತಿ ತೀರ್ಥ ಶ್ರೀ ವಿಶ್ವಪತಿ ತೀರ್ಥರು ಶ್ರೀ ವಿಶ್ವಮೂರ್ತಿ ತೀರ್ಥರು ಶ್ರೀ ವೇದಪತಿ ತೀರ್ಥರು ಶ್ರೀ ವೇದರಾಜ ತೀರ್ಥರು ಶ್ರೀ ವಿದ್ಯಾಧೀಶ ತೀರ್ಥರು ಶ್ರೀ ವಿಭುದೇಶ ತೀರ್ಥರು ಶ್ರೀ ವಾರಿಜಾಕ್ಷ ತೀರ್ಥ ಶ್ರೀ ವಿಶ್ವೇಂದ್ರ ತೀರ್ಥರು ಶ್ರೀ ವಿಭುದವಂದ್ಯ ತೀರ್ಥರು ಶ್ರೀ ವಿಭುದಾಧಿರಾಜ ತೀರ್ಥರು ಶ್ರೀ ವಿದ್ಯಾರಾಜ ತೀರ್ಥರು ಶ್ರೀ ವಿಭುದಪ್ರಿಯ ತೀರ್ಥ ಶ್ರೀ ವಿದ್ಯಾಸಾಗರ ತೀರ್ಥ ಶ್ರೀ ವಾಸುದೇವ ತೀರ್ಥ ಶ್ರೀ ವಿದ್ಯಾಪತಿ ತೀರ್ಥ ಶ್ರೀ ವಾಮನ ತೀರ್ಥ ಶ್ರೀ ವಿದ್ಯಾನಿಧಿ ತೀರ್ಥರು ಶ್ರೀ ವಿದ್ಯಾಸಮುದ್ರ ತೀರ್ಥ ಶ್ರೀ ವಿದ್ಯಾವಾರಿನಿಧಿ ತೀರ್ಥ ಶ್ರೀ ವಿದ್ಯಾವಲ್ಲಭ ತೀರ್ಥರು (ಈಗಿನ ಮಠಾಧೀಶರು) = ಬಾಹ್ಯ ಕೊಂಡಿಗಳು = , ..