ಕೆ.ಟಿ.ರಾಠೋಡ(ಕುಬಾಸಿಂಗ ತಾರಾಸಿಂಗ ರಾಠೋಡ)ರು ವಿಧಾನ ಸಭೆಯ ಮಾಜಿ ಸದಸ್ಯರು, ಸಚಿವರು ಹಾಗೂ ರಾಜಕೀಯ ಧುರೀಣರು. ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡರು ಇವರ ಪುತ್ರರು. == ಜನನ == ಕೆ.ಟಿ.ರಾಠೋಡರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ಗ್ರಾಮದಲ್ಲಿ ಜನಿಸಿದರು. == ಶಿಕ್ಷಣ == ರಾಠೋಡರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದು ಸ್ನಾತಕೊತ್ತರ ಕಲಾ ಪದವಿ(ಎಂ.ಎ)ಯೊಂದೊಗೆ ಎಲ್.ಎಲ್.ಬಿ. ಪೂರೈಸಿದ್ದಾರೆ. == ಬಂಜಾರಾ ಸಮಾಜ == ದೇವರಾಜ ಅರಸುರವರ ಬೆಂಬಲದೊಂದಿಗೆ ಕೆ.ಟಿ. ರಾಠೋಡರು ಬಂಜಾರಾ ಸಮಾಜಕ್ಕೆ ೧೯೭೦ರಲ್ಲಿ ಎಸ್‌ಸಿ ಮೀಸಲಾತಿ ಕಲ್ಪಿಸಲು ಕಾರಣೀಭೂತರಾದರು. == ನಿರ್ವಹಿಸಿದ ಹುದ್ದೆ == ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು. ಕೆ.ಟಿ.ರಾಠೋಡರು 1981ರಲ್ಲಿ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೇಸ್ ಕಮೀಟಿಯ ಅಧ್ಯಕ್ಷರಾಗಿದ್ದವರು. ರಾಠೋಡರು 1972ರಲ್ಲಿ ಕಾಂಗ್ರೇಸ್ ಪಕ್ಷದಿಂದ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಿ ಪ್ರಥಮ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾದರು. ಕೆ.ಟಿ.ರಾಠೋಡರವರು 1972ರಲ್ಲಿ ದೇವರಾಜ ಅರಸುರವರ ಮಂತ್ರಿಮಂಡಳದಲ್ಲಿ ಮೀನುಗಾರಿಕೆ ಸಚಿವರಾಗಿ, ನಂತರ ತೋಟಗಾರಿಕೆ ಮತ್ತು ಸಂಪುಟ ದರ್ಜೆಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗ ಸಚಿವರಾಗಿ ಕಾರ್ಯನಿರ್ವಹಿಸಿದರು. ಕೆ.ಟಿ.ರಾಠೋಡರವರು ಲಂಬಾಣಿ ಸಮುದಯದ ಪ್ರಪ್ರಥಮ ಸಚಿವರಾಗಿದ್ದರು. ರಾಠೋಡರು 1978ರಲ್ಲಿ ಕಾಂಗ್ರೇಸ್ ಪಕ್ಷದಿಂದ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಿ ಪರಾಭವಗೊಂಡರು. == ನಿಧನ == ಕೆ.ಟಿ.ರಾಠೋಡರು 1993ರಲ್ಲಿ ಪರ್ಶಾವಾಯಿನಿಂದ ನಿಧನರಾದರು. == ಉಲ್ಲೇಖಗಳು ==