ಕೊಡವೂರು ಕರ್ನಾಟಕದ ಉಡುಪಿ ಜಿಲ್ಲೆಗೆ ಸೇರಿದ ಒಂದು ಪಟ್ಟಣವಾಗಿದೆ. ಭಗವಾನ್ ಶಂಕರನರಾಯಣ ದೇವಸ್ಥಾನಮತ್ತು ಇತರ ಅನೇಕ ದೇವಾಲಯಗಳಿಗೆ ನೆಲೆಯಾಗಿದೆ. ಇದು ತನ್ನದೇ ಆದ ಸುದೀರ್ಘ ಇತಿಹಾಸವನ್ನು ಹೊಂದಿದೆ. = ಇತಿಹಾಸ = ದಂತಕಥೆಯ ಪ್ರಕಾರ, ಹಿಂದೂ ಸಂತ ಕ್ರೋಡ ಮುನಿಯು ಇಲ್ಲಿ ತನ್ನ ಆಶ್ರಮವನ್ನು ಹೊಂದಿದ್ದನು ಮತ್ತು ಪ್ರಪಂಚದ ಒಳಿತಿಗಾಗಿ ಇಲ್ಲಿ ತಪಸ್ಸು ಮಾಡುತ್ತಿದ್ದನು, ಹೀಗಾಗಿ ಕೋಡಶ್ರಮ ಏಂಬ ಹೆಸರು ಕೊಡವೂರು ಆಗಿ ಪರಿವರ್ತನೆಯಾಯಿತು. = ಪ್ರವಾಸೋದ್ಯಮ = ಕೊಡವೂರು ಮಲ್ಪೆಯಿಂದ ಒಂದು ಕಿಲೋಮೀಟರ್ ದೂರದಲ್ಲಿದೆ, ಇದು ಕಡಲತೀರ ಮತ್ತು ಸೈಂಟ್ ಮೇರಿಸ್ ದ್ವೀಪವನ್ನು ಹೊಂದಿದೆ. ಬೆಲ್ಕಲೆ, ಕೆರೆಮಠ, ಕಂಬಳಕಟ್ಟೆ, ಮಂಡೆಚಾವಡಿ ಮತ್ತು ಕಾನಂಗಿ ದೇವಾಲಯಗಳಿಗೆ ಭೇಟಿ ನೀಡಬಹುದು. ಮೇಲಿನ ಆಕರ್ಷಣೆಗಳ ಹೊರತಾಗಿ, ನೃತ್ಯ ನಿಕೇತನ ಎಂದು ಕರೆಯಲ್ಪಡುವ ತನ್ನದೇ ಆದ ಸಾಂಪ್ರದಾಯಿಕ ಭರತನಾಟ್ಯ ಶಾಲೆಯನ್ನು ಹೊಂದಿದೆ. = ಸಂಸ್ಕೃತಿ = ಯಕ್ಷಗಾನವು ಸಂಗೀತ ನಾಟಕ ಕಲೆಯ ರೂಪಕವಾಗಿದ್ದು ಇಲ್ಲಿ ಆರಾಧಿಸಲಾಗುತ್ತದೆ. ಇಲ್ಲಿ ಹುಲಿವೇಷವನ್ನು ಹಾಕಿ ಕುಣಿಯಲಾಗುತ್ತದೆ, ವಿಶೇಷವಾಗಿ ಕೃಷ್ಣ ಜನ್ಮಾಷ್ಟಮಿಯ ದಿನದಲ್ಲಿ ಹಾಕಲಾಗುತ್ತದೆ. = ಪ್ರಮುಖ ಘಟನೆಗಳು = ಶಂಕರನರಾಯಣ ದೇವಾಲಯದ ವಾರ್ಷಿಕ ರಥೋತ್ಸವ. ಇದು 9 ದಿನಗಳ ಕಾಲ ನಡೆಸಲ್ಪಡುತ್ತದೆ ಮತ್ತು ರಥೋತ್ಸವವನ್ನು ಒಳಗೊಂಡಿರುತ್ತದೆ, ಅಂದರೆ ರಥೋತ್ಸವ, ಕಟ್ಟೆಪೂಜೆ ಗ್ರಾಮದ ವಿವಿಧ ಸ್ಥಳಗಳಲ್ಲಿ ವಿವಿಧ ಅಶ್ವಥ ವೃಕ್ಷಗಳ ಅಡಿಯಲ್ಲಿ ಪೂಜೆ ಮಾಡಲಾಗುತ್ತದೆ. ಇದು ಶಂಕರನಾರಾಯಣ ದೇವರನ್ನು ದೇವಾಲಯದಿಂದ ಭಕ್ತರ ಮನೆಗೆ ತರುವುದು ಒಂದೇ ಬಾರಿಯಾಗಿದೆ. ದೇವರನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೊಂಡೊಯ್ಯಲಾಗುತ್ತದೆ ಮತ್ತು ಭಕ್ತನ ಮನೆಗೆ ಕರೆದೊಯ್ಯಲಾಗುತ್ತದೆ. ಲಕ್ಷದೀಪೋತ್ಸವ (ದೇವಸ್ಥಾನ ಹಾಗೂ ದೇವಸ್ಥಾನದ ಬೀದಿಯನ್ನು ದೀಪದಿಂದ ತುಂಬಿಸುವ ಪೂಜೆ ಇದು.) = ಸಾರಿಗೆ = ಕೊಡವೂರು ಗರಡಿ ಮಜಲು,ಸಂತೆಕಟ್ಟೆ ಮುಂತಾದ ಸ್ಥಳಗಳಿಂದ ಉಡುಪಿ ಮತ್ತು ಮಲ್ಪೆಗೆ ಸಾರಿಗೆ ವ್ಯವಸ್ಥೆ ಇದೆ. = ಉಲ್ಲೇಖಗಳು =