ಗಿರಿನಗರ ಬೆಂಗಳೂರಿನ ನೈಋತ್ಯದಲ್ಲಿರುವ ಒಂದು ಬಡಾವಣೆ. ಗಿರಿನಗರವು ಬನಶಂಕರಿ ೩ನೇ ಹಂತದ ಒಂದು ಭಾಗ. ಶ್ರೀನಗರ, ಬ್ಯಾಟರಾಯನಪುರ, ಶ್ರೀನಿವಾಸನಗರ ಮತ್ತು ವಿದ್ಯಾನಗರ ಗಿರಿನಗರದ ಸುತ್ತಲಿನಲ್ಲಿರುವ ಇತರ ಬಡಾವಣೆಗಳು. ಈ ಬಡಾವಣೆಗೆ ಗಿರಿನಗರ ಎಂದು ಹೆಸರು ಬರಲು ಅಲ್ಲಿ ಇರುವ ಒಂದು ಗುಡ್ದವೇ(ಗಿರಿ) ಕಾರಣ ಎಂದು ಕೆಲವರು ಹೇಳಿದರೆ, ಈ ಬಡಾವಣೆಯ ಕೆಲವು ಹಳೆಯ ನಿವಾಸಿಗಳ ಪ್ರಕಾರ ಅಂದಿನ ಭಾರತೀಯ ರಾಷ್ಟ್ರಪತಿಗಳಾದ ವಿ ವಿ ಗಿರಿಯವರು ಈ ಬಡಾವಣೆಯನ್ನು ಉದ್ಘಾಟಿಸಿದ ಕಾರಣ ಈ ಬಡಾವಣೆಗೆ ಗಿರಿನಗರ ಎಂಬ ಹೆಸರು ಬಂದಿದೆ ಎಂದು ಹೇಳುತ್ತಾರೆ.