ಗೂರ್ಖಾಲ್ಯಾಂಡ್ (ಹಿಂದಿಯಲ್ಲಿ गोर्खाल्याण्ड) ಎನ್ನುವುದು ಭಾರತದಲ್ಲಿನ ಡಾರ್ಜಿಲಿಂಗ್ ಮತ್ತು ಉತ್ತರ ಪಶ್ಚಿಮ ಬಂಗಾಳದ ಡುವಾರ್ಸ್ ಸುತ್ತಲಿನ ಪ್ರದೇಶಕ್ಕೆ ಮತ್ತು ನೇಪಾಳಿ/ಗೂರ್ಖಲಿ-ಮಾತನಾಡುವ ಡಾರ್ಜಿಲಿಂಗ್ ಮತ್ತು ಅದರ ಸುತ್ತಲಿನ ಗೂರ್ಖಾ ಜನಾಂಗೀಯ ಸಮೂಹದ ಪ್ರದೇಶಗಳಿಗೆ ನೀಡಿದ ಹೆಸರಾಗಿದೆ. ೧೯೦೭ ರಲ್ಲಿ ಹಿಲ್ ಮೆನ್ ಅಸೋಸಿಯೇಶನ್ ಆಫ್ ಡಾರ್ಜಿಲಿಂಗ್ ಅವರು ಮಿಂಟೋ-ಮಾರ್ಲೆ ಸುಧಾರಣೆಗಳಿಗೆ ಪ್ರತ್ಯೇಕ ಆಡಳಿತಾತ್ಮಕ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿದಾಗಿನಿಂದ ಗೂರ್ಖಾಲ್ಯಾಂಡ್‌ಗೆ ಬೇಡಿಕೆಯು ಮುಂದುವರಿಯುತ್ತಲೇ ಬಂದಿದೆ. ಸ್ವತಂತ್ರ್ಯ ಭಾರತದಲ್ಲಿ ಅಖಿಲ ಭಾರತೀಯ ಗೂರ್ಖಾ ಲೀಗ್ (ಎಬಿಜಿಎಲ್) ನಂತಹ ರಾಜಕೀಯ ಪಕ್ಷಗಳು ಗೂರ್ಖಾ- ಜನಾಂಗೀಯ ಸಮೂಹಕ್ಕೆ ಪ್ರತ್ಯೇಕ ಸ್ಥಾನಮಾನಕ್ಕೆ ಹಾಗೂ ಸಮುದಾಯಕ್ಕೆ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದ ಪ್ರಾಂತ್ಯದ ಮೊದಲ ರಾಜಕೀಯ ಪಕ್ಷವಾಗಿತ್ತು. ಪ್ರತ್ಯೇಕ ರಾಜ್ಯಕ್ಕಾಗಿನ ಚಳುವಳಿಯು ೧೯೮೦ ರಲ್ಲಿ ಸುಭಾಷ್ ಘೀಸಿಂಗ್ ನೇತೃತ್ವದ ಗೂರ್ಖಾ ನ್ಯಾಷನಲ್ ಲಿಬರೇಶನ್ ಘ್ರಂಟ್ (ಜಿಎನ್‌ಎಲ್‌ಎಫ್) ಕೈಗೊಂಡ ಹಿಂಸಾತ್ಮಕ ಚಳುವಳಿಯ ಸಂದರ್ಭದಲ್ಲಿ ಗಂಭೀರವಾದ ಮಹತ್ವವನ್ನು ಪಡೆಯಿತು.ಅಂತಿಮವಾಗಿ ಚಳುವಳಿಯು ೧೯೮೮ ರಲ್ಲಿ ಚುನಾಯಿತ ಮಂಡಳಿಯಾದ ಡಾರ್ಜಿಲಿಂಗ್ ಗೂರ್ಖಾ ಹಿಲ್ ಕೌನ್ಸಿಲ್ (ಡಿಜಿಹೆಚ್‌ಸಿ) ಸ್ಥಾಪನೆಗೆ ಕಾರಣವಾಯಿತು, ಮತ್ತು ಅದು ಡಾರ್ಜಿಲಿಂಗ್ ಜಿಲ್ಲೆಯ ಅಧಿಕಾರ ನಡೆಸಲು ಸ್ವಾಯತ್ತತೆಯನ್ನು ಪಡೆಯಿತು. ಆದರೆ ೨೦೦೮ ರಲ್ಲಿ, ಹೊಸ ಪಕ್ಷವಾದ ಗೂರ್ಖಾ ಜನಮುಕ್ತಿ ಮೋರ್ಚಾವು ಮತ್ತೊಮ್ಮೆ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯವನ್ನು ಮಾಡಿತು ಮತ್ತು ಅಂದಿನಿಂದ ಇಲ್ಲಿಯವರೆಗೆ ಹೋರಾಟವನ್ನು ಮಾಡುತ್ತಾ ಬಂದಿದೆ. == ಇತಿಹಾಸ == ಐತಿಹಾಸಿಕವಾಗಿ, ಡಾರ್ಜಿಲಿಂಗ್ ಮತ್ತು ಅದರ ಸುತ್ತಲಿನ ಡೋರ್ಸ್ ಮತ್ತು ಸಿಲಿಗುರಿ ಚೌಗು (ಬೆಟ್ಟದ ತಪ್ಪಲು) ಪ್ರದೇಶಗಳು ಹಾಗೂ ಡಾರ್ಜಿಲಿಂಗ್‌ಗೆ ಮಗ್ಗುಲಿನ ಚೌಗು ಪ್ರದೇಶವನ್ನು ಸಿಕ್ಕಿಂನ ಭಾಗವಾಗಿ ರೂಪಿಸಲಾಗಿತ್ತು. === ಬ್ರಿಟಿಷ್ ಯುಗ === ೧೮೩೫ ರಲ್ಲಿ, ಕರ್ನಲ್ ಲಾಯ್ಡ್ ಅವರು ಬ್ರಿಟಿಷ್ ಇಂಡಿಯಾದ ಪಶ್ಚಿಮ ಭಾಗಕ್ಕಾಗಿ ಈಸ್ಟ್ ಇಂಡಿಯಾ ಕಂಪನಿ ಯ ಪ್ರತಿನಿಧಿಯಾದರು. ಅವರ ಕಾಲಾವಧಿಯಲ್ಲಿ ರೂ ೩೦೦೦ ವಾರ್ಷಿಕ ಮೊತ್ತಕ್ಕೆ ಸಿಕ್ಕಿಂನ ಮಹಾರಾಜನಿಂದ ಡಾರ್ಜಿಲಿಂಗ್ ಅನ್ನು ಬ್ರಿಟಿಷ್ ಇಂಡಿಯಾ ಸಾಮ್ರಾಜ್ಯವು ಗುತ್ತಿಗೆಗೆ ತೆಗೆದುಕೊಂಡಿತು. ಬ್ರಿಟಿಷರು ಸಿಕ್ಕಿಂ ಮಹಾರಾಜನಿಗೆ ಗುತ್ತಿಗೆಯ ಮೊತ್ತವನ್ನು ಪಾವತಿಸಲಿಲ್ಲ. ಬ್ರಿಟಿಷರು ಸಿಕ್ಕಿಂ ಮಹಾರಾಜನಿಂದ ಡಾರ್ಜಿಲಿಂಗ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಪ್ರತಿಯಾಗಿ ರಾಜನಿಗೆ ಶಾಲೊಂದನ್ನು ನೀಡಿದರು. ೧೯೪೦ ರ ಸಮಯದಲ್ಲಿ, ಗೂರ್ಖಾ ಚಹಾ ಕೆಲಸಗಾರರನ್ನು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಸಂಘಟಿಸಿತು. ನೇಪಾಳಿ ರಾಜ್ಯ ಭಾಷೆಯಾಗಿ ರಾಜ್ಯಗಳ ಪುನರ್ವಿಂಗಡಣೆ ಆಯೋಗಕ್ಕೆ ಮನವಿಯನ್ನು ಸಲ್ಲಿಸಲಾಯಿತು. ನೇಪಾಳೀ ಸರ್ಕಾರದ ಅಡಿಯಲ್ಲಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ೧೯೪೩ ರಲ್ಲಿ ಸ್ಥಾಪಿತವಾದ ಅಖಿಲ ಭಾರತೀಯ ಗೂರ್ಖಾ ಲೀಗ್ (ಎಬಿಜಿಎಲ್) (ಅಖಿಲ ಭಾರತ ಗೂರ್ಖಾ ಲೀಗ್) ಆದ್ಯತೆ ನೀಡಿತು. ೧೯೪೬ ರ ಡಿಸೆಂಬರ್ ೧೯ ರಂದು, ಗೂರ್ಖಾ ಲೀಗ್‌ನ ಜೀವಶಕ್ತಿಯಾಗಿದ್ದ ಡಿ.ಎಸ್. ಗುರುಂಗ್ ಅವರು ಗೂರ್ಖಾಗಳನ್ನು ಅಲ್ಪಸಂಖ್ಯಾತ ಸಮುದಾಯವನ್ನಾಗಿ ಮಾನ್ಯ ಮಾಡುವಂತೆ ಸಂವಿಧಾನ ಮಂಡಳಿಯ ಎದುರು ಸಂವಿಧಾನ ಸಭೆಯಲ್ಲಿ ಬೇಡಿಕೆಯನ್ನು ಸಹ ಸಲ್ಲಿಸುತ್ತಾ " ಭಾರತದಲ್ಲಿ ನೇಪಾಳಿಗಳಿಗೆ ಪ್ರತ್ಯೇಕ ರಾಜ್ಯಕ್ಕಾಗಿ ನಾವು ಹಿಂಸಾತ್ಮಕ ವಿಧಾನಗಳನ್ನು ರೂಪಿಸಿಕೊಳ್ಳುತ್ತೇವೆ ಮತ್ತು ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸುತ್ತೇವೆ" ಎಂದು ಘೋಷಿಸಿದ್ದರು. ರಣಧೀರ್ ಸುಬ್ಬಾರಂತದ ಲೀಗ್‌ನಲ್ಲಿನ ಇತರ ಮುಖಂಡರು ಈ ಅತ್ಯಲ್ಪ ಕೋರಿಕೆಗಳಿಂದ ಸಂತೃಪ್ತರಾಗಿರಲಿಲ್ಲ. ಕೆಲವೇ ದಿನಗಳಲ್ಲಿ ಡಿ.ಎಸ್. ಗುರುಂಗ್ ನಿಧನರಾದರು. ರಣಧೀರ್ ಸುಬ್ಬಾ ಅವರು ಆಕ್ರಮಣಕಾರಿ ಚಳುವಳಿಯ ಪರವಾಗಿದ್ದರು ಮತ್ತು ಅದರ ನಾಯಕರನ್ನು ಕೇಂದ್ರ ಸರ್ಕಾರದ ಯೋಗ್ಯ ರಾಜಕಾರಣಿಗಳು ಮತ್ತು ಚೀನಾ, ನೇಪಾಳೀ ಮತ್ತು ಪಾಕಿಸ್ತಾನಿ ಸರ್ಕಾರದ ನಾಯಕರು ಈ ಉದ್ದೇಶಕ್ಕೆ ಪ್ರೋತ್ಸಾಹ ನೀಡಿದ್ದರಿಂದ ಚಳುವಳಿಯು ತೀವ್ರ ಸ್ವರೂಪ ಪಡೆಯಿತು. ಅವಿಭಜಿತ ಸಿಪಿಎನ್ (ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ್) ನ ಎರಡು ನೇಪಾಳಿ ಸದಸ್ಯರಾದ ಗಣೇಶಲಾಲ್ ಸುಬ್ಬಾ ಮತ್ತು ರತನಲಾಲ್ ಬ್ರಾಹ್ಮಿಣ್ ಅವರುಗಳು ಪ್ರಸ್ತುತ ನೇಪಾಳ, ಡಾರ್ಜಿಲಿಂಗ್ ಜಿಲ್ಲೆ ಮತ್ತು ಪಾಕಿಸ್ತಾನಕ್ಕೆ ಹೊಂದಿಕೊಂಡ ಸಿಕ್ಕಿಂ (ಅದರ ಪ್ರಸ್ತುತ ಉತ್ತರ ಜಿಲ್ಲೆಯನ್ನು ಹೊರತುಪಡಿಸಿ) ಒಳಗೊಂಡ ಸ್ವತಂತ್ರ್ಯ ರಾಷ್ಟ್ರವನ್ನು ರಚಿಸಲು ಅಂದಿನ ತಾತ್ಕಾಲಿಕ ಸರ್ಕಾರದ ಉಪ ರಾಷ್ಟ್ರಪತಿಗಳಾಗಿದ್ದ ಜವಹರಲಾಲ್ ನೆಹರು ಅವರಿಗೆ ಧ್ಯೇಯೋತ್ಸಾಹದ ಮನವಿ ಪತ್ರವನ್ನು ಸಲ್ಲಿಸಿದ್ದರು. === ಸ್ವಾತಂತ್ರ್ಯಾನಂತರದ ಭಾರತ === ಹಲವು ವರ್ಷಗಳ ವಿರಾಮದ ಬಳಿಕ, ೧೯೮೦ ರ ದಶಕದಲ್ಲಿ ಸುಭಾಷ್ ಘೀಸಿಂಗ್ ಅವರು ಡಾರ್ಜಿಲಿಂಗ್‌ನ ಪರ್ವತಗಳು ಮತ್ತು ಡೂವಾರ್ಸ್ ಮತ್ತು ಸಿಲಿಗುರಿ ಬೆಟ್ಟದ ತಪ್ಪಲು ಪ್ರದೇಶಗಳನ್ನು ವಿಭಾಗಿಸಿ ಗೂರ್ಖಾಲ್ಯಾಂಡ್ ಎಂಬ ರಾಷ್ಟ್ರದ ರಚನೆಗೆ ಒತ್ತಾಯವನ್ನು ಮಾಡಿದರು. ೧೯೮೦ ರ ದಶಕದಲ್ಲಿ ಸುಭಾಷ್ ಘೀಸಿಂಗ್ ನೇತೃತ್ವದ ಗೂರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್ (ಜಿಎನ್‌ಎಲ್‌ಎಫ್) ರಾಜ್ಯ ಸ್ಥಾಪನೆಗೆ ಹಿಂಸಾತ್ಮಕ ಒತ್ತಾಯವನ್ನು ಮಾಡಿದಾಗ ಅದು ಹಿಂಸೆಗೆ ತಿರುಗಿ ಸುಮಾರು ೧೨೦೦ ಜನರ ಸಾವಿಗೆ ಕಾರಣವಾಯಿತು. ೧೯೮೮ ರಲ್ಲಿ ಡಾರ್ಜಿಲಿಂಗ್ ಗೂರ್ಖಾ ಹಿಲ್ ಕೌನ್ಸಿಲ್ (ಡಿಜಿಹೆಚ್‌ಸಿ) ರಚನೆಯೊಂದಿಗೆ ಚಳುವಳಿಯು ಕೊನೆಗೊಂಡಿತು. ಹಲವು ವರ್ಷಗಳಿಂದ ರಾಜ್ಯ ಸರ್ಕಾರವು ಸುಭಾಷ್ ಘೀಸಿಂಗ್ ಮತ್ತು ಜಿಎನ್ಎಲ್ಎಫ್‌ಗೆ ಮುಕ್ತ ನಿಯಂತ್ರಣವನ್ನು ಅನುಮತಿಸಿತು. ಡಿಜಿಹೆಚ್‌ಸಿ ಅಧ್ಯಕ್ಷರಾಗಿ ಸುಭಾಷ್ ಘೀಸಿಂಗ್ ಅವರು ಬಹು ಕಾಲದವರೆಗೆ ಪರ್ವತದಲ್ಲಿ ರಾಜಕೀಯದ ಕೇಂದ್ರ-ಸ್ಥಾನವಾಗಿದ್ದರು; ಆದರೆ ೨೦೦೮ ರ ಪ್ರಾರಂಭದಿಂದ, ಪ್ರಶಾಂತ್ ತಮಂಗ್ ಮತ್ತು ಪ್ರಕೃತಿ ಗಿರಿಯವರ 'ಇಂಡಿಯನ್ ಐಡಲ್' ಅವರ ನೇಪಾಳೀ ಸಂಸ್ಕೃತಿಯ ಸಾಧನೆಯ ಪ್ರೇರೇಪಣೆಯಿಂದ ಬಿಮಲ್ ಗುರುಂಗ್ ಮತ್ತು ರೋಷನ್ ಗಿರಿಯರ ನಾಯಕತ್ವದಲ್ಲಿ ಹೊಸ ರಾಜಕೀಯ ರಚನೆಯಾದ ಗೂರ್ಖಾ ಜನ ಮುಕ್ತಿ ಮೋರ್ಚಾ (ಜಿಜೆಎಮ್‌ಎಮ್) ಹೆಚ್ಚಿನ ಹತೋಟಿ ಸಾಧಿಸಿತು ಮತ್ತು ಜನಪ್ರಿಯವಾಯಿತು; ಮತ್ತು ಶೀಘ್ರದಲ್ಲಿಯೇ ಅವರು ಗೂರ್ಖಾಲ್ಯಾಂಡ್ ಧ್ಯೇಯಮಂತ್ರವು ಘೀಸಿಂಗ್ ಅವರ ಆರನೇ ಪರಿಚ್ಛೇದದ ಒತ್ತಾಯವನ್ನು ಅಡಗಿಸಿತು.(ಉಲ್ಲೇಖ.ಸೇಲನ್ ದೇಖನಾಥ್,'ಬ್ಯಾಟಲ್ ಕ್ರೈ ಫ್ರೋಮ್ ದಿ ಹಿಲ್ಸ್' ಇನ್ ವೆಸ್ಟ್ ಬೆಂಗಾಲ್ ಇನ್ ಡೋಲ್‌ಡ್ರಮ್ಸ್ ಐಎಸ್‌ಬಿಎನ್ 9788186860342) === ೨೦೦೯ ರಲ್ಲಿ ಗೂರ್ಖಾಲ್ಯಾಂಡ್‌ಗೆ ಬಿಜೆಪಿ ಬೆಂಬಲ === ಭಾರತದಲ್ಲಿನ ೨೦೦೯ ರ ಸಾರ್ವತ್ರಿಕ ಚುನಾವಣೆಗೆ ಮೊದಲು, ತಾವು ಅಧಿಕಾರಕ್ಕೆ ಬಂದರೆ ಸಣ್ಣ ರಾಜ್ಯಗಳನ್ನು ಹೊಂದುವ ಮತ್ತು ತೆಲಂಗಾಣ ಮತ್ತು ಗೂರ್ಖಾಲ್ಯಾಂಡ್ ರಾಜ್ಯಗಳನ್ನು ರಚಿಸುವ ನೀತಿಯನ್ನು ಬಿಜೆಪಿ ಮತ್ತೊಮ್ಮೆ ಘೋಷಿಸಿತು. ಸಂಸತ್ತಿನ ಜುಲೈ ೨೦೦೯ ರ ಬಜೆಟ್ ಅಧಿವೇಶನದ ಸಂದರ್ಭದಲ್ಲಿ, ಮೂರು ನುರಿತ ಸಂಸದರಾದ- ರಾಜೀವ್ ಪ್ರತಾಪ್ ರೂಡಿ, ಸುಷ್ಮಾ ಸ್ವರಾಜ್ ಮತ್ತು ಜಸ್ವಂತ್ ಸಿಂಗ್ ಅವರುಗಳು ಗೂರ್ಖಾಲ್ಯಾಂಡ್ ರಚನೆಗೆ ಬಲವಾಗಿ ಒತ್ತಾಯಿಸಿದರು. == ಇತ್ತೀಚಿನ ಬೆಳವಣಿಗೆಗಳು == ಮಂದಗಾಮಿ ಸಮೂಹವಾದ ಅಖಿಲ ಭಾರತೀಯ ಗೂರ್ಖಾ ಲೀಗ್ (ಎಬಿಜಿಎಲ್) ನಾಯಕರಾದ ಮದನ್ ತಮಾಂಗ್ ಅವರ ಇತ್ತೀಚಿನ ಹತ್ಯೆಯ ಬಳಿಕ ಗೂರ್ಖಾಲ್ಯಾಂಡ್ ಬೇಡಿಕೆಯು ಹೊಸ ಸ್ವರೂಪವನ್ನು ಪಡೆಯಿತು. ಅವರನ್ನು 2010 ರ ಮೇ 21 ರಂದು ಡಾರ್ಜಿಲಿಂಗ್ನಲ್ಲಿ ಶಂಕಿತ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಮ್) ಬೆಂಬಲಿಗರು ಇರಿದು ಹತ್ಯೆ ಮಾಡಿದರು, ಈ ಘಟನೆಯು ಡಾರ್ಜಿಲಿಂಗ್‌ನ ಮೂರು ಉಪ ವಿಭಾಗಗಳು, ಕಾಲಿಪೋಂಗ್ ಮತ್ತು ಕರ್ಸಿಯೋಂಗ್ನಲ್ಲಿ ಸಂಪೂರ್ಣ ಬಂದ್‌ಗೆ ಕಾರಣವಾಯಿತು. ತಮಾನ್ ಅವರ ಹತ್ಯೆಯಲ್ಲಿ ಪಾಲ್ಗೊಂಡ ವ್ಯಕ್ತಿಗಳಿಗಾಗಿ ಆಡಳಿತವು ಹುಡುಕಾಟ ನಡೆಸುತ್ತಿದೆ. ಕೊಲೆಯ ನಂತರ ಗೂರ್ಖಾ ಜನಮುಕ್ತಿ ಮೋರ್ಚಾದ ಮೂರು ಹಿರಿಯ ನಾಯಕರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿತ್ತು ಮತ್ತು ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬೆದರಿಕೆಯನ್ನು ಪಶ್ಚಿಮ ಬಂಗಾಳ ಸರ್ಕಾರ ವು ಹಾಕಿತಲ್ಲದೇ, ಈ ಮಧ್ಯೆ ಗೂರ್ಖಾ ಪಾರ್ಟಿಯು "ಹತ್ಯೆಯ ನಂತರ ಜನಪ್ರಿಯ ಬೆಂಬಲವನ್ನು ಕಳೆದುಕೊಂಡಿದೆ" ಎಂದು ಹೇಳಿ ಮಧ್ಯಂತರ ವ್ಯವಸ್ಥೆಯ ಕುರಿತಂತೆ ಅದರೊಂದಿಗೆ ನಡೆಯುತ್ತಿರುವ ಮಾತುಕತೆಯನ್ನು ನಿಲ್ಲಿಸುವ ಮುನ್ಸೂಚನೆಯನ್ನು ನೀಡಿತು. == ಉಲ್ಲೇಖಗಳು == , . (2000). : . . 8176481661. : . . , . 1996. , (1998). "10. ". . . 8170226910. , (2004). - : . .. & . 8170742668. , (2005). "7. : ". : . . 0761934529. , (2005). "16. ". (.). : . . 0761933255. , (2007). . . 8182680298. ಸೇಲೆನ್ ದೇಬನಾಥ್, ವೆಸ್ಟ್ ಬೆಂಗಾಲ್ ಇನ್ ಡೋಲ್‌ಡ್ರಮ್ಸ್, ಐಎಸ್‌ಬಿಎನ್ 9788186860342 ಸೇಲನ್ ದೇಬನಾಥ್, ಎಸ್ಸೇಸ್ ಆನ್ ಕಲ್ಚರಲ್ ಹಿಸ್ಟರೀಸ್ ಆಫ್ ನಾರ್ಥ್ ಬೆಂಗಾಲ್, ಐಎಸ್‌ಬಿಎನ್ 9788186860427 ಸೇಲನ್ ದೇಬನಾಥ್, ದಿ ಡೋರ್ಸ್ ಇನ್ ಹಿಸ್ಟಾರಿಕಲ್ ಟ್ರಾನ್ಸಿಷನ್, ಐಎಸ್‌ಬಿಎನ್ 9788186860441 == ಬಾಹ್ಯ ಕೊಂಡಿಗಳು ==