ಗೌರಿಬಿದನೂರು ಒಂದು ತಾಲ್ಲೂಕು ಕೇಂದ್ರವಾಗಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿದೆ. ಇದು ಬೆಂಗಳೂರಿನಿಂದ ಸುಮಾರು ೭೫ ದೂರದಲ್ಲಿ ಹಾಗು ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮ ಸ್ಥಳವಾದ ಮುದ್ದೇನಹಳ್ಳಿಯಿಂದ ೨೫ ದೂರದಲ್ಲಿದೆ. ಆಂದ್ರಪ್ರದೇಶದ ಗಡಿಯಲ್ಲಿರುವುದರಿಂದ ಕನ್ನಡದ ಜೊತೆಯಲ್ಲಿ ತೆಲುಗೂ ಕೂಡ ಹೆಚ್ಚಿನ ಬಳಕೆಯಲ್ಲಿದೆ. ಟಿಪ್ಪುವಿನ ಕಾಲದಲ್ಲಿ ಅವನ ಕೆಲವು ಯೋಧರ ಘೋರಿಗಳನ್ನು ಇಲ್ಲಿ ಕಟ್ಟಲಾಗಿದುದರಿಂದ, ಇದಕ್ಕೆ ಗೌರಿಬಿದನೂರು ಎಂಬ ಹೆಸರು ಬರಲು ಕಾರಣವಾಯಿತೆಂದು ಹೇಳುತ್ತಾರೆ. ಜೊತೆಗೆ ಇಲ್ಲಿ ಹಿಂದೂ ದೇವತೆಯಾದಿ ಗೌರಿಯ ದೇವಾಲಯವಿದ್ದುದರಿಂದಲೂ ಈ ಹೆಸರು ಬಂತೆಂದು ಹೇಳುತ್ತಾರೆ. ಡಾ. ಹೆಚ್ ನರಸಿಂಹಯ್ಯರವರ ಹುಟ್ಟೂರಾದ ಹೊಸೂರು ಇದೇ ತಾಲ್ಲೂಕಿನಲ್ಲಿದೆ. ಸ್ವತಿಗ್ರಾಮ ಯೋಜನೆಯಡಿ ಪ್ರಥಮಬಾರಿಗೆ ಕರ್ನಾಟಕ ರಾಜ್ಯ ಸರ್ಕಾರವು ಮೂಲ ಸೌಲಭ್ಯಗಳನ್ನೂ ಹೊಸೂರಿಗೆ ಒದಗಿಸಿತು. ಮುಂಚೆ ಕಬ್ಬು ಮತ್ತು ಭತ್ತ ಇಲ್ಲಿನ ಮುಖ್ಯ ಬೆಳೆಗಳಾಗಿದ್ದವು. ಇತ್ತೀಚಿನ ದಿನಗಳಲ್ಲಿ, ಮಳೆ ಹಾಗು ಅಂತರ್ಜಲ ಕಡಿಮೆಯಾಗುತ್ತಿರುವುದರಿಂದ ರೇಷ್ಮೆ, ನೆಲಗಡಲೆ, ಜೋಳ ಮತ್ತು ಸೂರ್ಯಕಾಂತಿಯನ್ನು ಪ್ರಮುಕವಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ಮುಖ್ಯ ನದಿಯಾದ ಉತ್ತರ ಪಿನಾಕಿನಿ ಮಳೆಗಾಳದಲ್ಲಷ್ಟೇ ಹರಿಯುತ್ತದೆ. ""ಕರ್ನಾಟಕದ ಜಲಿಯನ್‌ವಾಲಾ‍ಭಾಗ್"" ಎಂದು ಪ್ರಸಿದ್ಧವಾಗಿರುವ ವಿದುರಾಶ್ವಥ, ನಗರದಿಂದ ಸುಮಾರು ೬ ಕಿಮೀ ದೂರದಲ್ಲಿದೆ. ಇದು ಬೆಂಗಳೂರು-ಹೈದರಾಬಾದ್ ರೈಲು ಮಾರ್ಗದಲ್ಲಿ ಸಿಗುವ ಕರ್ನಾಟಕದ ಕೊನೆಯ ನಿಲ್ದಾಣ. ಇಲ್ಲಿನ ಭೂಗೋಳ ಹಾಗು ನೆಲ ಸಂಪನ್ಮೂಲದ ಅನುಕೂಲತೆಯಿಂದ ಹಾಗು ತಮ್ಮ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿವೆ. == ಗ್ರಾಮಗಳು == ಗೌರಿಬಿದನೂರು ತಾಲ್ಲೂಕಿನಲ್ಲಿರುವ ಗ್ರಾಮಗಳ ಪಟ್ಟಿ: