ಜಿ.ಎಸ್.ಜಯದೇವರವರು ರಾಷ್ಟಕವಿ ಶ್ರೀ ಜಿ.ಎಸ್.ಶಿವರುದ್ರಪ್ಪನವರ ಪುತ್ರ. ಇವರು ಬಿ.ಎಸ್.ಸಿ. ಆನರ್ಸ್ ಎಮ್.ಎಸ್.ಸಿ. ಪದವೀಧರರು ,ಮಾನವೀಯ ಅಂತ:ಕರಣ ಸಾಮಾಜಿಕ ಕಳಕಳಿ ಸೇವಾಮನೋಭಾವ ಇವನ್ನೆಲ್ಲ ಮೈಗೂಡಿಸಿಕೊಂಡ ಅಪರೂಪದ ವ್ಯಕ್ತಿ , ಸ್ವತ: ಶಿಕ್ಷಕರಾಗಿ ಅನುಭವ ಉಳ್ಳವರು ಮೈಸೂರಿನ ಸುತ್ತುಮುತ್ತಲ ಅರಣ್ಯದಂಚಿನಲ್ಲಿರುವ ಗಿರಿಜನರೊಂದಿಗೆ ಹೆಚ್ಚಿನ ಒಡನಾಟ-ಸಂಪರ್ಕ . ಹಾಗಾಗಿ ಹಳ್ಳಿಗಳ ಕಡೆಗೆ ಹೆಚ್ಚಿನ ಗಮನ, ಒವವು ಯಾವುದೇ ಸದ್ದುಗದ್ದಲದ ಪ್ರಚಾರವಿಲ್ಲದೆ ಸಮಾಜಸೇವೆ ಮಾಡುವ ಹಂಬಲ. ದಿಕ್ಕು ದೆಸೆಯಿಲ್ಲದ ಅನಾಧ ನಿರ್ಗತಿಕ ಗಂಡುಮಕ್ಕಳ ಏಳಿಗೆಗಾಗಿ ದೀನಬಂದು ಮಕ್ಕಳ ಮನೆ ಎಂಬ ಆಶ್ರಮ ಶಾಲೆಯನ್ನು ನಡೆಸುತ್ತಿದ್ದಾರೆ. ಚಾಮರಾಜನಗರದ ಸರ್ಕಾರಿ ಪ್ರಾಧಮಿಕ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ದಿಗಾಗಿ ಶಿಕ್ಷಕರಿಗೆ ತರಬೇತಿ ನೀಡುವ ಮುಖಾಂತರ ಶ್ರಮಿಸುತ್ತಿದ್ದಾರೆ. ಮೈಸೂರಿನ ಶಕ್ತಿಧಾಮ ಎಂಬ ಮಹಿಳೆಯರ ಪುನರ್ವಸತಿ ಕೇಂದ್ರದ ಕಾರ್ಯ ನಿರ್ವಾಹಕ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್' ನ ಪೋ ಮಾಧವ ಗಾಡ್ಗಿಲ್ ರವರ ನೆರವಿನಿಂದ ಬಿಳಿಗಿರಿರಂಗನ ಬೆಟ್ಟದ ಜೀವ ವೈವಿಧ್ಯತೆ ದಾಖಲಾತಿ ಕಾರ್ಯದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿರುತ್ತಾರೆ. ಇದೀಗ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ವಿವೇಕಾನಂದ ಪೀಠದ ಸಂದರ್ಶಕ ಅಧ್ಯಾಪಕರಾಗಿದ್ದಾರೆ. == ಪ್ರಶಸ್ತಿ == 2019 ರ, ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ' == ಗ್ರಂಥರಚನೆ == ಶಕ್ತಿಧಾಮದ ಸತ್ಯ ಕಥೆಗಳು == ಹೆಚ್ಚಿನ ಓದಿಗೆ == ಜೀವನ ವಿವರ:ನಿಸ್ವಾರ್ಥ ಸೇವೆಗೆ ಸಂದ ಗಾಂಧಿ ಪ್ರಶಸ್ತಿ. ಸರಳ ಜೀವನ- ಗಾಂಧೀಸಿದ್ಧಾಂತ;ಸಾಸಿವೆಯಷ್ಟು ಸುಖಕ್ಕಾಗಿ.. ಅಂತರ್‍ಜಾಲ ಪುಟ: 1992 6 . .. . 2019-12-31 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖ ==