ಟಿ.ಪಿ.ಅಶೋಕ ಇವರು ೧೯೫೫ ಆಗಸ್ಟ್ ೨೬ರಂದು ನಂಜನಗೂಡಿನಲ್ಲಿ ಜನಿಸಿದರು. ಸಾಗರದ ಲಾಲ ಬಹಾದ್ದೂರ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಪ್ರಜಾವಾಣಿ ಹಾಗು ಮಯೂರ ಪತ್ರಿಕೆಗಳಲ್ಲಿ ಅನೇಕ ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ. ಸಂಸ್ಕೃತಿ, ಪರಂಪರೆ ಹೊಂದಿದ ಸ್ಥಳೀಯ ಸಾಹಿತ್ಯ, ವಿಭಿನ್ನ ಭೌಗೋಳಿಕ ಪ್ರದೇಶಗಳ ಸಾಹಿತ್ಯವನ್ನು ಪರಿಪೂರ್ಣವಾಗಿ ಅಧ್ಯಯನ ಮಾಡಿದಾಗ ಸಮಗ್ರತೆಯ ದೃಷ್ಟಿಕೋನ ನಮ್ಮಲ್ಲಿ ಮೂಡುತ್ತದೆ ಎಂದು ಖ್ಯಾತ ವಿಮರ್ಶಕರಾದ ಟಿ.ಪಿ.ಅಶೋಕ್‍ರವರು ಹೇಳಿದ್ದಾರೆ. == ಸಾಹಿತ್ಯ ವಿಮರ್ಶೆ == ಹೊಸ ಹೆಜ್ಜೆ ಹೊಸ ಹಾದಿ ಪುಸ್ತಕ ಪ್ರೀತಿ ಸಾಹಿತ್ಯ ಸಂಪರ್ಕ ಪುಸ್ತಕ ಸಮಯ ಸಾಹಿತ್ಯ ಸಂಚಾರ ಕಥನ ವೈವಿಧ್ಯ ಸಾಹಿತ್ಯ ಸಂಬಂಧ ಸಾಹಿತ್ಯ ಸಮೃದ್ಧಿ ಕಥನ ಕಾರಣ ಕಾವ್ಯ ಪ್ರೀತಿ ವಾಸ್ತವತಾವಾದ ಸ್ಮೃತಿ ಮತ್ತು ಕೃತಿ ಕೃತಿ ಜಗತ್ತು ಕಥನ ಭಾರತಿ ಕನ್ನಡ ಕಾದಂಬರಿ‌ ಅತಿ ಸಣ್ಣ ಕತೆ == ಅನುವಾದಗಳು == ರಿಕ್ತ ರಂಗಭೂಮಿ (ಮೂಲ ರಶಿಯನ್:ಗ್ರೊಟೊವ್‍ಸ್ಕಿ) ಫಾದರ್ ಸೆರ್ಗಿಯಸ್ (ಮೂಲ ರಶಿಯನ್:ಟಾಲ್‍ಸ್ಟಾಯರ ಕಿರುಕಾದಂಬರಿ) ಓವರ್ ಕೋಟ್(ಮೂಲ ರಶಿಯನ್: ನಿಕೊಲಾಯ್ ಗೊಗೊಲ್ ಇವರ ನೀಳ್ಗತೆ) == ಸಂಪಾದನೆ == ಸಾಹಿತ್ಯ ವಿಮರ್ಶೆ ಕಾರಂತರ ಮಂಥನ ವೈದೇಹಿ ವಾಚಿಕೆ ಅರೆ ಶತಮಾನದ ಅಲೆ ಬರಹಗಳು ‌‌ ಶ್ರೀರಂಗ ಸಂಪುಟ-೧ ಕೆ.ವಿ.ಸುಬ್ಬಣ್ಣನವರ ಆಯ್ದ ಬರಹಗಳು ಎ.ಕೆ.ರಾಮನುಜನ್‌ ನೆನಪಿನ ಸಂಪುಟ ಆರ್ಕೆಸ್ಟ್ರಾ ಮತ್ತು ತಂಬೂರಿ == ಪ್ರಶಸ್ತಿಗಳು == ಸಾಹಿತ್ಯ ಸಂಪರ್ಕ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಹಾಗು ವಿ.ಎಂ.ಇನಾಮದಾರ ಸ್ಮಾರಕ ಬಹುಮಾನ ಕಥನ ಭಾರತಿ ವಿಮರ್ಶಾಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.