ಉದಯ ಕುಮಾರ್ ಧರ್ಮಲಿಂಗಂ ಇವರು ಒಬ್ಬ ಭಾರತೀಯ ಶಿಕ್ಷಣ ತಜ್ಞ ಮತ್ತು ವಿನ್ಯಾಸಕರಾಗಿದ್ದಾರೆ. ಇವರು ಭಾರತೀಯ ರೂಪಾಯಿ ಚಿಹ್ನೆಯ ವಿನ್ಯಾಸಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ವಿನ್ಯಾಸವನ್ನು ಚಿಕ್ಕದಾಗಿ ಪಟ್ಟಿಮಾಡಲಾದ ಐದು ಚಿಹ್ನೆಗಳಿಂದ ಆಯ್ಕೆ ಮಾಡಲಾಯಿತು. ಉದಯ ಕುಮಾರ್ ಅವರ ಪ್ರಕಾರ, ವಿನ್ಯಾಸವು ಭಾರತೀಯ ತ್ರಿವರ್ಣ ಧ್ವಜವನ್ನು ಆಧರಿಸಿದೆ. ಡಿಸೆಂಬರ್ ೨೦೧೯ ರ ಹೊತ್ತಿಗೆ, ಅವರು ಅಸ್ಸಾಂನ ಐಐಟಿ ಗುವಾಹಟಿಯಲ್ಲಿ ವಿನ್ಯಾಸ ವಿಭಾಗದ ಮುಖ್ಯಸ್ಥರಾಗಿದ್ದರು. == ವೈಯಕ್ತಿಕ ಜೀವನ == ಉದಯ ಕುಮಾರ್ ಅವರು ತಮಿಳುನಾಡು ರಾಜ್ಯದ ವಿಧಾನ ಸಭೆಯ ಮಾಜಿ ಡಿಎಂಕೆ ಶಾಸಕಾಂಗ ಸಭೆಯ ಸದಸ್ಯರಾದ ಎನ್. ಧರ್ಮಲಿಂಗಂ ಅವರ ಪುತ್ರ. == ಶಿಕ್ಷಣ ತಜ್ಞರು == ಉದಯ ಕುಮಾರ್‌ರವರು ಚೆನ್ನೈನ ಲಾ ಚಾಟೆಲೈನ್ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಅವರು ೨೦೦೧ ರಲ್ಲಿ, ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್‌ನಿಂದ (ಎಸ್ಎಪಿ) ವಾಸ್ತುಶಿಲ್ಪದಲ್ಲಿ ಪದವಿ (ಬಿಎಆರ್‌ಸಿಎಚ್) ಪಡೆದರು. ನಂತರ ಅವರು ೨೦೦೩ ರಲ್ಲಿ, ಐಐಟಿ ಬಾಂಬೆಯ ಕೈಗಾರಿಕಾ ವಿನ್ಯಾಸ ಕೇಂದ್ರದಿಂದ (ಐಡಿಸಿ) ದೃಶ್ಯ ಸಂವಹನದಲ್ಲಿ ಎಂಡಿಇಎಸ್ ಪದವಿ ಪಡೆದರು. ಹಾಗೂ ಐಡಿಸಿಯಲ್ಲಿ ತಮ್ಮ ಡಾಕ್ಟರೇಟ್ ಅಧ್ಯಯನವನ್ನು ಮಾಡಿದರು. ನಂತರ, ೨೦೧೦ ರಲ್ಲಿ ಪಿಎಚ್‌ಡಿ ಪಡೆದರು. == ಸಂಶೋಧನೆ == ಉದಯ ಕುಮಾರ್‌ರವರ ಆಸಕ್ತಿಯ ಕ್ಷೇತ್ರಗಳಾದ: ಗ್ರಾಫಿಕ್ ವಿನ್ಯಾಸ, ಟೈಪೋಗ್ರಫಿ, ಟೈಪ್ ಡಿಸೈನ್ ಮತ್ತು ವಿನ್ಯಾಸ ಸಂಶೋಧನೆಗಳು (ಅವರ ಡಾಕ್ಟರೇಟ್ ಸಂಶೋಧನೆಯ ವಿಷಯ) ತಮಿಳು ಮುದ್ರಣಕಲೆಯಲ್ಲಿ ವಿಶೇಷ ಗಮನಹರಿಸುತ್ತವೆ. ಅವರು ದೇಶದ ಫಾಂಟ್ ತಜ್ಞರಲ್ಲಿ ಒಬ್ಬರಾದ ಪ್ರೊ.ಜಿ.ವಿ.ಶ್ರೀಕುಮಾರ್ ಅವರ ಮಾರ್ಗದರ್ಶನದಲ್ಲಿ ಐಡಿಸಿಯಲ್ಲಿ ಚಿಕ್ಕ ಯೋಜನೆಯಾಗಿ "ಪರಾಶಕ್ತಿ" ಎಂಬ ತಮಿಳು ಫಾಂಟ್ ಅನ್ನು ವಿನ್ಯಾಸಗೊಳಿಸಿದ್ದಾರೆ ಹಾಗೂ ತಮ್ಮ ಎಂ.ಡಿ.ಇ ಯೋಜನೆಯ ಸಮಯದಲ್ಲಿ ಅವರು ತಮಿಳು ಟೈಪೋಗ್ರಫಿ ಬಗ್ಗೆ ಪುಸ್ತಕವನ್ನು ಬರೆದು ವಿನ್ಯಾಸಗೊಳಿಸಿದ್ದಾರೆ. ಇದು ಪ್ರಸ್ತುತ ವಿಷಯವನ್ನು ತಮಿಳು ಪ್ರೇಕ್ಷಕರಿಗೆ ತರುವ ಮೊದಲ ಪ್ರಯತ್ನವಾಗಿದೆ. ಈ ಪುಸ್ತಕದಲ್ಲಿ, ಉದಯ ಕುಮಾರ್‌ರವರು ಇಂಗ್ಲಿಷ್ ಪದಗಳನ್ನು ಬಳಸಿದ ಅನೇಕ ಮುದ್ರಣ ಪದಗಳಿಗೆ ಹೊಸ ತಮಿಳು ಪರಿಭಾಷೆಯನ್ನು ರಚಿಸಿದ್ದಾರೆ. ೪೯ ನೇ ಇಂಟರ್ ಐಐಟಿ ಸ್ಪೋರ್ಟ್ಸ್ ಮೀಟ್‌ಗಾಗಿ ಅಧಿಕೃತ ಲಾಂಛನವನ್ನು ವಿನ್ಯಾಸಗೊಳಿಸಲು ಉದಯ ಕುಮಾರ್‌ರವರು ಮಾರ್ಗದರ್ಶನ ನೀಡಿದ್ದಾರೆ. ಉದಯ ಕುಮಾರ್‌ರವರು ಭಾರತೀಯ ಕರೆನ್ಸಿಗೆ ರೂಪಾಯಿ ಚಿಹ್ನೆಯ ವಿನ್ಯಾಸವನ್ನು ಪರಿಕಲ್ಪನೆ ಮಾಡಿದರು. ಈ ಚಿಹ್ನೆಯನ್ನು ದೇವನಾಗರಿ ಅಕ್ಷರ "ರಾ" ಮತ್ತು ರೋಮನ್‌ನ ದೊಡ್ಡ ಅಕ್ಷರ "ಆರ್" ಬಳಸಿ ರಚಿಸಲಾಗಿದೆ. ಅಕ್ಷರಗಳು ಹಿಂದಿಯಲ್ಲಿ ರೂಪಿಯಾ ಮತ್ತು ಇಂಗ್ಲಿಷ್‌ನಲ್ಲಿ ರೂಪೀಸ್ ಎಂಬ ಪದದಿಂದ ಬಂದಿವೆ. ಆದ್ದರಿಂದ, ಈ ಚಿಹ್ನೆಯು ಭಾರತೀಯರು ಮತ್ತು ಅಂತರರಾಷ್ಟ್ರೀಯ ಬಳಕೆದಾರರಿಗೆ ಅರ್ಥಪೂರ್ಣವಾಗಿದೆ. ಭಾರತೀಯ ದೇವನಾಗರಿ ಲಿಪಿಯಲ್ಲಿ ಕಂಡುಬರುವ ಅಡ್ಡ ಗೆರೆಯನ್ನು ರೂಪಾಯಿಯ ಚಿಹ್ನೆಯಲ್ಲಿ ಬಳಸಲಾಗಿದೆ. ಎರಡು ಸಮತಲ ರೇಖೆಗಳು "ಸಮಾನ" ಚಿಹ್ನೆಯನ್ನು ರೂಪಿಸುತ್ತವೆ ಹಾಗೂ ಇದು ತ್ರಿವರ್ಣ ಭಾರತೀಯ ಧ್ವಜವನ್ನು ಸಹ ಪ್ರಚೋದಿಸುತ್ತದೆ. ಅಂಬಿಕಾ ಸೋನಿಯವರು ೧೫ ಜುಲೈ ೨೦೧೦ ರಂದು ಹೊಸ ರೂಪಾಯಿ ಚಿಹ್ನೆಯನ್ನು ಅನುಮೋದಿಸಿದರು ಹಾಗೂ ಉದಯ ಕುಮಾರ್ ಅವರ ಪ್ರಯತ್ನಗಳಿಗೆ ₹ ೨೫೦,೦೦೦ ಬಹುಮಾನದ ಮೊತ್ತವನ್ನು ನೀಡಲಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ' , ₹ 2020-11-05 ವೇಬ್ಯಾಕ್ ಮೆಷಿನ್ ನಲ್ಲಿ.