ದರ್ಬೆ ಕೃಷ್ಣಾನಂದ ಚೌಟ ಇವರು ತುಳು, ಕನ್ನಡ ಸಾಹಿತಿ. ತುಳುವಿನ ಬರಹಗಾರರಲ್ಲಿ ಇವರು ಪ್ರಮುಖರು. ಕರಾವಳಿಯ ಬದುಕಿಗೆ ಹತ್ತಿರವಾದ ಬರಹಗಳ ಮೂಲಕ ಪರಿಚಿತರು, ಕೃಷಿಕರು ಮತ್ತು ನಾಟಕಕಾರರು. ಇವರು ಕಾಸರಗೋಡುಜಿಲ್ಲೆಯ ಮೀಯಪದವಿನ ದರ್ಬೆಯವರು. ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಬೆಂಗಳೂರಿನ ಚಿತ್ರಕಲಾ ಪರಿಷತ್'ನ ಇದರ ಅಧ್ಯಕ್ಷರಾಗಿ ಇದ್ದರು. == ಜನನ == ಜೂನ್ 1, 1938ರಲ್ಲಿ ದರ್ಬೆಯಲ್ಲಿ ಜನಿಸಿದರು. == ಕಾವ್ಯನಾಮ == 'ಆನಂದ ಕೃಷ್ಣ’ ಎಂಬ ಕಾವ್ಯನಾಮದಿಂದ ಖ್ಯಾತಿ ಪಡೆದಿದ್ದ ಚೌಟ. ಡಾ. ದರ್ಬೆ ಕೃಷ್ಣಾನಂದ ಚೌಟ ಅವರು ಡಿ.ಕೆ. ಚೌಟ ಎಂಬ ಹೆಸರಿನಲ್ಲಿಯೇ ಗುರುತಿಸಿಕೊಂಡಿದ್ದರು == ಪುಸ್ತಕಗಳು == === ತುಳು ಕಾದಂಬರಿ === ಮಿತ್ತಬಯಿಲ್ ಯಮುನಕ್ಕೆ ಕರಿಯ ವಜ್ಜೆರೆನ ಕಥೆಕುಲು === ತುಳು ನಾಟಕ === ಪಿಲಿಪತ್ತಿ ಗಡಸ್ ಮೂಜಿ ಮುಟ್ಟು ಮೂಜಿ ಲೋಕ ಪಾಟ್ ಪಜ್ಜೆಲು ಪಟ್ಟು ಪಜ್ಜೆಲು ದರ್ಮೆತ್ತಿ ಮಾಯೆ ಉರಿ ಉಷ್ಣದ ಮಾಯೆ ಅರ್ಧ ಸತ್ಯ ಬಾಕಿ ಸುಳ್ಳಲ್ಲ == ಪ್ರಶಸ್ತಿಗಳು == ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟೊರೇಟ್ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ೨೦೧೧ == ನಿದನ == ೧೯-೦೬-೨೦೧೯ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಮರಣ ಹೊಂದಿದರು == ಉಲ್ಲೇಖಗಳು ==