ಪ್ರಾಚೀನ ಕಾಲದಲ್ಲಿ ಕರ್ನಾಟಕ ಕರಾವಳಿಯ ಒಂದು ಭಾಗವನ್ನು ತುಳುನಾಡು ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಬಹುತೇಕ ಜನರ ಭಾಷೆ ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳನ್ನಾಡುವ ಸಾಕಷ್ಟು ಜನರು ಕೂಡ ತುಳುನಾಡಿನಲ್ಲಿದ್ದಾರೆ. ಮತಧರ್ಮ: ತುಳುನಾಡಿನ ಅರಸರಲ್ಲಿ ಬಹುತೇಕ ಮಂದಿ ಜೈನರು. ಇಲ್ಲಿ ಬೌದ್ದ, ಜೈನ,ವೀರಶೈವ,ಇಸ್ಲಾಂ,ಕ್ರೈಸ್ತ ಹೀಗೆ ಅನೇಕ ಮತೀಯರು ನೆಲೆಸಿದ್ದಾರೆ.ನಾಗಾರಾಧನೆ ಮತ್ತು ದೈವಾರಾಧನೆ ತುಳುನಾಡಿನ ಎರಡು ಆರಾಧನಾ ಪಂಥಗಳು. ವಾಸ್ತುಶಿಲ್ಪ : ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಸುಂದರವಾದ ಅವಲೋಕಿತೇಶ್ವರನ ಬ್ರಹತ್ ಆಕಾರದ ಕಂಚುಶಿಲ್ಪವಿದೆ. ಇದು ಒಂದು ಸಹಸ್ರ ವರ್ಷಗಳಷ್ಟು ಹಳೆಯದು. ಕಾರ್ಕಳ,ವೇಣೂರು ಹಾಗೂ ಧರ್ಮಸ್ಥಳಗಳಲ್ಲಿರುವ ಗೊಮ್ಮಟ ಜೈನ ಸಂಸ್ಕತಿಯ ಸಂಕೇತಗಳು. ಜನಪದ: ಕಂಬಳ, ಕೋಳಿ ಅಂಕ, ಚೆನ್ನೆ ಮುಂತಾದವು ತುಳುನಾಡಿನ ಕೆಲವು ಜಾನಪದ ಆಟಗಳು. ಯಕ್ಯಗಾನ ಮತ್ತು ತಾಳಮದ್ದಳೆ ಇಲ್ಲಿನ ಪ್ರಸಿದ್ಧ ಜನಪದ ಕಲೆಗಳು. ಬ್ಯಾಂಕಿಂಗ್ ಕ್ಶೇತ್ರದಲ್ಲಿ ತುಳುನಾಡು ದಾಖಲೆ ಸ್ಥಾಪಿಸಿದೆ. ಕೆನರಾ, ಸಿಂಡಿಕೇಟ್, ಕರ್ನಾಟಕ,ಕಾರ್ಪೊರೇಶನ್ ಮತ್ತು ವಿಜಯಾ ಬ್ಯಾಂಕುಗಳು ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿ ಸ್ಥಾಪನೆಗೊಂಡವು. ದೇಶದ ಉದ್ದಗಲದಲ್ಲಿ ಹಬ್ಬಿಕೊಂಡಿರುವ ಈ ಪ್ರಸಿದ್ಧ ಬ್ಯಾಂಕುಗಳ ಸಾವಿರಾರು ಶಾಖೆಗಳು ಭಾರತದ ಅರ್ಥವ್ಯವಸ್ತೆಗೆ ವಿಶೇಷ ಕೊಡುಗೆ ನೀಡಿದೆ. ಲಕ್ಶಾಂತರ ಮಂದಿಗೆ ಅವು ಉದ್ಯೊಗ ಅವಕಾಶ ಕಲ್ಪಿಸಿದೆ. ೧೯೫೬ ರಲ್ಲಿ ಉತ್ತರ ಮತ್ತು ದಕ್ಶಿಣ ಕನ್ನಡ ಜಿಲ್ಲೆಗಳು ಕರ್ನಾಟಕದೊಂದಿಗೆ ಸೆರ್ಪಡೆಗೊಂಡವು. {ಇದಕ್ಕೆ ಮುನ್ನ ದಕ್ಶಿಣ ಕನ್ನಡ ಜಿಲ್ಲೆ ಮದ್ರಾಸು ಅಧಿಪತ್ಯಕ್ಕೆ ಸೇರಿತ್ತು} ದಕ್ಶಿಣ ಕನ್ನಡ ಜಿಲ್ಲೆಯನ್ನು ವಿಂಗಡಿಸಿ ಉಡುಪಿ ಜಿಲ್ಲೆಯಾಯಿತು. == ಉಲ್ಲೇಖಗಳು ==