ದೆಹಲಿ ಸ್ಥಳೀಯವಾಗಿ ದಿಲ್ಲಿ ಎಂದೇ ಹೆಸರಾಗಿರುವ (ಹಿಂದಿ:दिल्ली ಪಂಜಾಬಿ:ਦਿੱਲੀ ಉರ್ದು: دلّی) ಮತ್ತು ಅಧಿಕೃತವಾಗಿ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ (ಎನ್‌.ಸಿ.ಟಿ) ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ನಗರವು ಪ್ರಾದೇಶಿಕವಾಗಿ ಭಾರತದಲ್ಲೇ ಅತಿ ದೊಡ್ಡ ಮಹಾನಗರ ಮತ್ತು ಜನಸಂಖ್ಯೆಯಲ್ಲಿ ಎರಡನೇ ಅತಿ ದೊಡ್ಡ ಮಹಾನಗರವಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ೧೨.೨೫ ದಶಲಕ್ಷಕ್ಕೂ ಮಿಕ್ಕಿ ನಿವಾಸಿಗಳು ಮತ್ತು ೧೫.೯ ದಶಲಕ್ಷ ನಗರವಾಸಿಗಳನ್ನು ಹೊಂದಿರುವ ದೆಹಲಿ ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ಎಂಟನೇ ದೊಡ್ಡ ನಗರವಾಗಿದೆ. (ಇದರಲ್ಲಿ ನೋಯ್ಡಾ, ಗುರ್‌ಗಾಂವ್‌, ಫರಿದಾಬಾದ್ ಮತ್ತು ಘಜೀಯಾಬಾದ್‌ ಸೇರಿವೆ). NCTಗೆ ಸಮೀಪವಿರುವ ಕೆಲವು ನಗರಗಳು ಮತ್ತು ವ್ಯಾಪ್ತಿಯಲ್ಲಿ ಬರುವ ಭಾರತದ ರಾಜಧಾನಿ ನವ ದೆಹಲಿಯನ್ನೂ ಆಗಿಂದಾಗ್ಗೆ ದೆಹಲಿಯೆಂದೇ ಕರೆಯುವುದುಂಟು. ಎನ್ನುವುದು ಒಕ್ಕೂಟ ವ್ಯವಸ್ಥೆಯ ಕೇಂದ್ರಾಡಳಿತ ಪ್ರದೇಶ. ದೆಹಲಿಯು ಯಮುನಾ ನದಿಯ ದಂಡೆಯಲ್ಲಿದ್ದು, ಕನಿಷ್ಟ ಪಕ್ಷ ಕ್ರಿ.ಪೂ 6ನೇ ಶತಮಾನದಿಂದಲೇ ನಿರಂತರವಾಗಿ ವಾಸಕ್ಕೆ ಬಳಕೆಯಾಗಿದೆ. ದೆಹಲಿ ಸುಲ್ತಾನರು ತಲೆ ಎತ್ತಿದ ನಂತರ, ದೆಹಲಿಯು ರಾಜಕೀಯ, ಸಾಂಸ್ಕೃತಿಕ ಮತ್ತು ವಾಣಿಜ್ಯ ನಗರವಾಗಿ ಪ್ರಾಮುಖ್ಯತೆಗೆ ಬಂದಿತು, ಜೊತೆಗೆ ವಾಯವ್ಯ ಭಾರತ ಮತ್ತು ಇಂಡೋ-ಗಂಗಾ ಬಯಲು ಪ್ರದೇಶಗಳ ಮಧ್ಯೆ ವ್ಯಾಪಾರ ಮಾರ್ಗಗಳೂ ಬೆಳೆದವು. ಪ್ರಾಚೀನ ಮತ್ತು ಮದ್ಯಕಾಲೀನದ ಹಲವು ಸ್ಮಾರಕಗಳು, ಪುರಾತತ್ವ ಸ್ಥಳಗಳು ಹಾಗೂ ಹೀಗೆ ಇನ್ನೂ ಹಲವು ದೆಹಲಿಯಲ್ಲಿವೆ. ೧೬೩೯ರಲ್ಲಿ ದೆಹಲಿಯನ್ನು ಆಳಿದ ಮೊಘಲ್ ಚಕ್ರವರ್ತಿ ಷಹಜಹಾನ್ ಹೊಸ ಸುಭದ್ರ ನಗರವನ್ನು ನಿರ್ಮಿಸಿದನು, ಅದು ೧೬೪೯ ರಿಂದ ೧೮೫೭ರವರೆಗೆ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯು 18ನೇ ಮತ್ತು 19ನೇ ಶತಮಾನಗಳಲ್ಲಿ ಭಾರತದ ಹೆಚ್ಚಿನ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಸಾಧಿಸಿದ ನಂತರ, ೧೯೧೧ರಲ್ಲಿ ಜಾರ್ಜ್ ವಿ ದೆಹಲಿಯನ್ನೇ ರಾಜಧಾನಿಯೆಂದು ಮತ್ತೆ ಘೋಷಿಸುವವರೆಗೆ ಕಂಪೆನಿ ಆಡಳಿತ ಮತ್ತು ಬ್ರಿಟೀಷ್ ರಾಜ್ಯ ಹೀಗೆ ಎರಡಕ್ಕೂ ಕಲ್ಕತ್ತಾವೇ ರಾಜಧಾನಿಯಾಗಿತ್ತು. 1920ರ ದಶಕದಲ್ಲಿ ಹಳೇ ನಗರದ ದಕ್ಷಿಣಕ್ಕೆ ಹೊಸ ರಾಜಧಾನಿ ನಗರ ನವ ದೆಹಲಿಯನ್ನು ನಿರ್ಮಿಸಲಾಯಿತು. ೧೯೪೭ರಲ್ಲಿ ಭಾರತಕ್ಕೆ ಬ್ರಿಟೀಷ್ ಆಡಳಿತದಿಂದ ಸ್ವಾತಂತ್ರ್ಯ್ಯ ಸಿಕ್ಕಾಗ, ನವದೆಹಲಿಯನ್ನು ದೇಶದ ರಾಜಧಾನಿ ಮತ್ತು ಸರ್ಕಾರ ಪೀಠವೆಂದು ಘೋಷಿಸಲಾಯಿತು. ಭಾರತದ ಸಂಸತ್ತು ಸೇರಿದಂತೆ ಸಂಯುಕ್ತ ಸರ್ಕಾರದ ಹಲವು ಪ್ರಮುಖ ಕಛೇರಿಗಳಿಗೆ ನವ ದೆಹಲಿ ಮನೆಯಾಗಿದೆ. ದೇಶದೆಲ್ಲೆಡೆಯಿಂದ ಬರುವ ವಲಸಿಗರಿಂದಾಗಿ ದೆಹಲಿ ಕಾಸ್ಮೊಪಾಲಿಟನ್‌ ಮಹಾನಗರವಾಗಿ ಬೆಳೆದಿದೆ. ತುಲನಾತ್ಮಕವಾಗಿ ಹೆಚ್ಚು ಆದಾಯವುಳ್ಳ ಸರಾಸರಿ ಜನಸಂಖ್ಯೆ, ತ್ವರಿತ ಅಭಿವೃದ್ಧಿ ಮತ್ತು ನಗರೀಕರಣದಿಂದಾಗಿ ಇಂದು ದೆಹಲಿ ಬದಲಾಗಿದೆ. ದೆಹಲಿಯಿಂದು ಭಾರತದ ಪ್ರಮುಖ ಸಾಂಸ್ಕೃತಿಕ, ರಾಜಕೀಯ ಮತ್ತು ವಾಣಿಜ್ಯ ಕೇಂದ್ರ. ಜಗತ್ತಿನಲ್ಲಿ ಅತೀ ಹೆಚ್ಚು ಜನರು ಇರುವ ನಗರ­ಗ­ಳಲ್ಲಿ ದೆಹಲಿ ಎರಡನೇ ಸ್ಥಾನ ಪಡೆದು­ಕೊಂಡಿದೆ. 1990ರಿಂದ 2014ರ ಅವಧಿ­ಯಲ್ಲಿ ಜನಸಂಖ್ಯೆ ದ್ವಿಗುಣಗೊಂ­ಡಿದ್ದು ಈಗಿನ ದೆಹಲಿಯ ಜನಸಂಖ್ಯೆ 2.5 ಕೋಟಿ ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ. ಮೊದಲ ಸ್ಥಾನದಲ್ಲಿ ಜಪಾನ್‌ ರಾಜಧಾನಿ ಟೋಕಿಯೊ (೩.೭೮ ಕೋಟಿ) ಇದೆ.(೧೨-೭-೨೦೧೪ ಪ್ರಜಾವಾಣಿ ೧೨-೭-೨೦೧೪) == ಜನಸಂಖ್ಯೆಯ ದಟ್ಟನೆಯ ನಗರಗಳು == ದೆಹಲಿಗೆ ಜಗತ್ತಿನ ಜನದಟ್ಟನೆಯ ನಗರಗಳಲ್ಲಿ ಎರಡನೆಯ ಸ್ಥಾನ. ವಿಶ್ವ ಸಂಸ್ಥೆಯ ವರದಿ (ಪ್ರಜಾವಾಣಿ ೧೨-೭-೨೦೧೪) : {</>. ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿಯ ಅನೇಕ ರೇಡಿಯೊ ಸ್ಟೇಷನ್‌ಗಳು ದೆಹಲಿಯಿಂದ ಪ್ರಸಾರವಾಗುತ್ತವೆ. ಪ್ರಪಂಚದಲ್ಲೇ ಅತೀದೊಡ್ಡ ರೇಡಿಯೊ ಸೇವೆ ಒದಗಿಸುವ ಆಲ್ ಇಂಡಿಯಾ ರೇಡಿಯೊ () ಇವುಗಳಲ್ಲಿ ಪ್ರಮುಖವಾದುದು. ಇದು ಹತ್ತು ಭಾಷೆಗಳಲ್ಲಿ ಆರು ರೇಡಿಯೊ ಚಾನೆಲ್‌ಗಳನ್ನು ಒದಗಿಸುತ್ತದೆ. "ಆಜ್ ತಕ್", "ರೇಡಿಯೊ ಸಿಟಿ(೯೧.೧ )", "ಬಿಗ್ (೯೨.೭ )", "ರೆಡ್ (೯೩.೫MHz)", "ರೇಡಿಯೊ ಒನ್(೯೪.೩ )", "ಹಿಟ್ (೯೫ )", "ಅಪ್ನ ರೇಡಿಯೊ", "ರೇಡಿಯೊ ಮಿರ್ಚಿ(೯೮.೩ )", " ರೈನ್‍‌ಬೊ(೧೦೨.೪ )", "ಫೀವರ್ (೧೦೪ )", "ಮ್ಯೊ (೧೦೪.೮ )", " ಗೋಲ್ಡ್(೧೦೬.೪ )" ಮೊದಲಾದವುಗಳು ಇತರ ಪ್ರಾದೇಶಿಕ ರೇಡಿಯೊ ಸ್ಟೇಷನ್‌ಗಳು. ವಿವಿಧ ಸುದ್ದಿಗಳ ಮತ್ತು ಸಾಮಾನ್ಯ ಆಸಕ್ತಿಯ ಪತ್ರಿಕೆಗಳೂ ದೆಹಲಿಯಿಂದ ಪ್ರಕಟಿತವಾಗುತ್ತವೆ. ಅವುಗಳೆಂದರೆ ಇಂಡಿಯಾ ಟುಡೆ, ಔಟ್‌ಲುಕ್, ಮತ್ತು ಇತ್ಯಾದಿ. == ಕ್ರೀಡೆ == ಕ್ರಿಕೆಟ್ ದೆಹಲಿಯ ಹೆಚ್ಚು ಜನಪ್ರಿಯ ಕ್ರೀಡೆ. ನಗರದಾದ್ಯಂತ ಅನೇಕ ಕ್ರಿಕೆಟ್ ಮೈದಾನಗಳಿವೆ (ಅಥವಾ ಮೈದಾನಗಳು ). ಪಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣವು ಭಾರತದಲ್ಲಿ ಹಳೆಯ ಕ್ರಿಕೆಟ್ ಮೈದಾನಗಳಲ್ಲಿ ಒಂದಾಗಿದ್ದು, ಇಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುತ್ತವೆ. ದೆಹಲಿ ಕ್ರಿಕೆಟ್‌ ತಂಡವು ರಣಜಿ ಟ್ರೋಫಿಯಲ್ಲಿ ನಗರವನ್ನು ಪ್ರತಿನಿಧಿಸುತ್ತದೆ. ಇದು ಒಂದು ಸ್ಥಳೀಯ ಪ್ರಥಮ-ದರ್ಜೆ ಕ್ರಿಕೆಟ್ ಚಾಂಪಿಯನ್‌ಶಿಪ್. ತಂಡ ದೆಹಲಿ ಡೇರ್‌ಡೆವಿಲ್ಸ್‌, ಮತ್ತು ತಂಡ ದೆಹಲಿ ಜೈಂಟ್ಸ್‌ (ಆರಂಭದ ಹೆಸರು ದೆಹಲಿ ಜೆಟ್ಸ್‌) ಮೊದಲಾದವುಗಳಿಗೂ ನಗರವು ನೆಲೆಯಾಗಿದೆ. ಇತರ ಕ್ರೀಡೆಗಳಾದ ಮೈದಾನದ ಹಾಕಿ, ಫುಟ್‌ಬಾಲ್ (ಕಾಲ್ಚೆಂಡಾಟ), ಬಾಸ್ಕೆಟ್‌ಬಾಲ್, ಟೆನ್ನಿಸ್, ಗಾಲ್ಫ್, ಬ್ಯಾಡ್ಮಿಂಟನ್, ಈಜುಗಾರಿಕೆ, ಕಾರ್ಟ್ ರೇಸಿಂಗ್, ಭಾರ ಎತ್ತುವಿಕೆ ಮತ್ತು ಟೇಬಲ್ ಟೆನ್ನಿಸ್ ಕೂಡ ನಗರದಲ್ಲಿ ಪ್ರಸಿದ್ಧವಾದವುಗಳು. ಜವಹರ್‌ಲಾಲ್‌ ನೆಹರು ಕ್ರೀಡಾಂಗಣ ಮತ್ತು ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣಗಳು ದೆಹಲಿಯಲ್ಲಿರುವ ಇತರ ಕ್ರೀಡಾಂಗಣಗಳು. ಹಿಂದೆ ದೆಹಲಿಯು ಅನೇಕ ಸ್ಥಳೀಯ ಮತ್ತು ಮೊದಲನೇ ಮತ್ತು ಒಂಭತ್ತನೇ ಏಷಿಯನ್ ಗೇಮ್ಸ್‌ ಮೊದಲಾದ ಅಂತರರಾಷ್ಟ್ರೀಯ ಕ್ರೀಡಾಕೂಟ ಆತಿಥ್ಯವಹಿಸಿದೆ. ಈಗ ದೆಹಲಿಯು 2010ರ ಕಾಮನ್‌ವೆಲ್ತ್‌ ಗೇಮ್ಸ್‌‌‌ ಆತಿಥ್ಯವಹಿಸಲು ಸಿದ್ಧಗೊಳ್ಳುತ್ತಿದೆ. ಇದುವರೆಗೆ ನಗರದಲ್ಲಿ ನಡೆದುದುರಲ್ಲೇ ಇದು ಅತಿ ದೊಡ್ಡ ಬಹು-ಕ್ರೀಡಾಕೂಟವಾಗಿದೆ. ದೆಹಲಿಯು 2014ರ ಏಷಿಯನ್ ಗೇಮ್ಸ್‌ ಆಹ್ವಾನವನ್ನು ಹರಾಜಿನಲ್ಲಿ ಕಳೆದುಕೊಂಡಿತ್ತು, ಆದರೆ 2020ರ ಒಲಿಂಪಿಕ್ ಗೇಮ್ಸ್‌ಗೆ ಆಹ್ವಾನವನ್ನು ಪಡೆದಿದೆ. ಅಲ್ಲದೆ ೨೦೧೦ರ ಮೊದಲ ಭಾರತೀಯ ಗ್ರ್ಯಾಂಡ್‌ ಪ್ರಿಕ್ಸ್‌‌‌ನ ಆತಿಥ್ಯವಹಿಸಲು ದೆಹಲಿ ಆಯ್ಕೆಯಾಗಿದೆ. == ೨೦೧೩ ರ ವಿಧಾನ ಸಭೆ ಚುನಾವಣೆ == ೮-೧೨-೨೦೧೩ -ಎಣಿಕೆ ನಂತರ ಮುಖ್ಯ ಮಂತ್ರಿ (ಮೂರು ಚುನಾವಣೆ ಗೆದ್ದಿದ್ದ ) ಶೈಲಾ ದೀಕ್ಷಿತ್ ರಾಜೀನಾಮೆ ಸಲ್ಲಿಸಿದರು. ಶ್ರೀ ಅರವಿಂದ ಕೇಜರೀವಾಲ ಎಎಪಿ ಪಕ್ಷದ ಮುಖ್ಯಸ್ಥ ದಿ. ೨೮-೧೨-೨೦೧೩ ಶನಿವಾರ ದೆಹಲಿ ರಾಮಲೀಲಾ ಮೈದಾನದಲ್ಲಿ ದೆಹಲಿ ಸರ್ಕಾರದ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಆರು ಜನ ವಿಧಾನ ಸಭಾ ಸದ್ಯರನ್ನು ತಮ್ಮ ಮಂತ್ರಿ ಮಂಡಲಕ್ಕೇ ಸೇರಿಸಿ ಕೊಂಡು ಖಾತೆಗಳನ್ನ ಹಂಚಿದರು. (ಒಟ್ಟು ೭ ಜನರ ಮಂತ್ರಿ ಮಂಡಲ) ೨೦೧೪ರ ಫೆಬ್ರವರಿ ೧೪ ( 14, 2014 ) ರಂದು ಅವರ ಜನ ಲೋಕಪಾಲ ಮಸೂದೆಯ ಕರಡನ್ನು ವಿಧನಸಭೆಯಲ್ಲಿ ಮಂಡಿಸಲು ಆಗದೇ ಇದ್ದರಿಂದ ತಾವು ರಾಜೀನೇಮೇ ನೀಡುವುದಾಗಿ ಹೇಳಿ ದೆಹಲಿಯ ಲೆ. ಗೌರ್ನರಿಗೆ ರಾಜೀನಾಮೆ ಸಲ್ಲಿಸಿದರು. ಒಂದುವಾರ ಕಾಲ ರಾಜ್ಯಪಾಲರು ಎರಡನೇ ಅಧಿಕ ಸ್ಥಾನ ಪಡೆದ (ಮೊದಲ ಆಧಿಕ ಸ್ಥಾನ) ಬಿ.ಜೆ.ಪಿ. ಸರ್ಕಾರ ರಚಿಸಲು ಬಾರದೇಇದ್ದುದರಿಂದ ರಾಷ್ತ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದರು.(ಟೈ.ಆ.ಇಂ.) ಪ - == ದೆಹಲಿ ೨೦೧೩/2013ರ ಚುನಾವಣಾ ಫಲಿತಾಂಶ == ೬-೯-೨೦೧೪() 67 :ಬಿಜಪಿ = 31-3=28 ;; ಆಮ್ ಆದ್ಮಿ =27 ;;ಕಾಂಗ್ರೆಸ್ -8 ;;ಶಿ.ಅಕಾಲಿದಳ -1;; -1;ಪಕ್ಷೇತರ -2 ( == ದೆಹಲಿ ಸರ್ಕಾರದ ಮಂತ್ರಿಗಳು == ದೆಹಲಿ ಸರ್ಕಾರದ ಮಂತ್ರಿಗಳ ಪಟ್ಟಿ . ೨೮-೧೨-೨೦೧೩(ಪ್ರಮಾಣ ವಚನ ಸ್ವೀಕಾರ) ಅರವಿಂದ ಕೇಜ್ರಿವಾಲ ಮುಖ್ಯ ಮಂತ್ರಿ .ದಿ. ೧೪-೨-೨೦೧೪ (ಫೆಬ್ರವರಿ 14, 2014ರಂದು ದೆಹಲಿ ರಾಜ್ಯಪಾಲ ಅವರಿಗೆ ದೆಹಲಿ ಮುಖ್ಯಮಂತ್ರಿ ಆದ ಕೇಜರಿವಾಲರು ತಮ್ಮ ರಾಜೀನಾಮೇ ಸಲ್ಲಿಸಿದ್ದಾರೆ. ದೆಹಲಿ ರಾಜ್ಯಪಾಲ ಲೆ. ನಜೀಬ್ ಜಂಗ ಅವರ ಶಿಫಾರಸಿನಂತೆ ದೆಹಲಿ- ರಾಜ್ಯಕ್ಕೆ ೧೭-೨-೨೦೧೪ ರಿಂದ ರಾಷ್ತ್ರಪತಿ ಆಡಳಿತ ಘೋಷಣೆ ಆಗಿದೆ. ಅರವಿಂದ ಕೇಜರಿವಾಲರು ಅಸೆಂಬ್ಲಿ ವಿಸರ್ಜಿಜಸದೆ ರಾಷ್ತ್ರಪತಿ ಆಡಳಿತ ಘೋಷಣೆ ಮಾಡಿದ ಬಗ್ಗೆ ಸುಪ್ರೀಂ ಕೋರ್ಟಿಗೆ ತಕರಾರು ಅರ್ಜಿ ಹಾಕಿದ್ದಾರೆ. ( ' . , 17 (): ..) ( ) | == ಪುನಹ ದೆಹಲಿ ಚುನಾವಣೆ == ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್‌ ಅವರು ಮುಖ್ಯಮಂತ್ರಿಯಾಗಿ 49 ದಿನಗಳ ಅಧಿಕಾರ ನಡೆಸಿ ರಾಜೀನಾಮೆ ನೀಡಿದ ಬಳಿಕ ದಿಲ್ಲಿಯಲ್ಲಿ 2014ರ ಫೆಬ್ರವರಿಯಿಂದ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ದಿಲ್ಲಿ ವಿಧಾನಸಭೆ ಚುನಾವಣೆ 2015ರ ಫೆಬ್ರವರಿ 7ರಂದು (ಶನಿವಾರ) ನಡೆಯಲಿದ್ದು, ಮತ ಎಣಿಕೆ ಅದೇ ಫೆ.10ರಂದು (ಮಂಗಳವಾರ) ನಡೆಯಲಿದೆ ಎಂದು ಚುನಾವಣೆ ಆಯೋಗ ಪ್ರಕಟಿಸಿದೆ. ಮುಖ್ಯ ಚುನಾವಣೆ ಆಯುಕ್ತ ವಿ.ಎಸ್‌. ಸಂಪತ್‌, 1.30 ಕೋಟಿ ಮತದಾರರು ರಾಷ್ಟ್ರೀಯ ರಾಜಧಾನಿಯ 70 ಕ್ಷೇತ್ರಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ. 11.763 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು. 2015 ಜನವರಿ 14ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು 2015 ಜನವರಿ 21 ಕಡೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಜ.22ರಂದು ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು 2015 ಜ.24 ಕೊನೆಯ ದಿನವಾಗಿದೆ ಎಂದು ಸಂಪತ್‌ ಪ್ರಕಟಿಸಿದರು.(ವಿಜಯ ಕರ್ನಾಟಕ 12, 2015,) == ಫಲಿತಾಂಶ == ಮತದಾನ 7-2-2015;ಎಣಿಕೆ 10-2-2015 ಮಂಗಳವಾರ: ಚಲಾವಣೆ ಮತದಾನ 67.21% ಒಟ್ಟು ೭೦ ಸ್ಥಾನಗಳು 70/70 ಫಲಿತಾಂಶ/ ಬಿ.ಜೆ.ಪಿ - :೦3 (-29) ಚರ್ಚೆ ಮುಖ್ಯ ಮಂತ್ರಿ ಕೇಜ್ರಿವಾಲ್‌ ದಿ.14-2-2015 ,ಶನಿವಾರ ಬೆಳಗ್ಗೆ 12.15ರ ಸುಮಾರಿಗೆ ಉಪರಾಜ್ಯಪಾಲ ನಜೀಬ್‌ ಜಂಗ್‌, ನೂತನ ಮುಖ್ಯ ಮಂತ್ರಿ ಕೇಜ್ರಿವಾಲ್‌ಗೆ ಗೋಪ್ಯತಾ ವಿಧಿ ಬೋಧಿಸಿದರು. ಜನಲೋಕಪಾಲ ವಿಧೇಯಕ ಅಂಗೀಕಾರವಾಗದ ಕಾರಣಕ್ಕೆ 2014ರ ಫೆ.14ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೇಜ್ರಿವಾಲ್‌, ಸರಿಯಾಗಿ ಒಂದು ವರ್ಷದ ನಂತರ, ಅದೇ ದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.. ಸಿಸೋಡಿಯಾ ಡಿಸಿಎಂ: ಬಳಿಕ ದಿಲ್ಲಿಯ ಉಪಮುಖ್ಯಮಂತ್ರಿಯಾಗಿ ಕೇಜ್ರಿವಾಲ್‌ ಬಲಗೈ ಬಂಟ ಎನಿಸಿಕೊಂಡಿರುವ ಮನೀಶ್‌ ಸಿಸೋಡಿಯಾ ಪ್ರಮಾಣವಚನ ಸ್ವೀಕರಿಸಿದರು. ಅವರ ಬಳಿಕ ಆಸೀಮ್‌ ಅಹಮದ್‌ಖಾನ್‌, ಸಂದೀಪ್‌ ಕುಮಾರ್‌, ಸತ್ಯೇಂದ್ರ ಜೈನ್‌, ಗೋಪಾಲ್‌ ರಾಯ್, ಜಿತೇಂದ್ರ ಸಿಂಗ್‌ ತೋಮರ್‌ ಅವರಿಗೂ ಉಪರಾಜ್ಯಪಾಲ ನಜೀಬ್‌ ಜಂಗ್ ಗೋಪ್ಯತಾ ವಿಧಿ ಬೋಧಿಸಿದರು. . ನೋಡಿ->ದೆಹಲಿ ಅಸೆಂಬ್ಲಿ ಚುನಾವಣೆ == ದೆಹಲಿ ಗೌರ್ನರ್ == ೨೯-೧೨=೨೦೧೬ ಬೆಂಗಳೂರು ಮೆಟ್ರೊ ರೈಲು ನಿಗಮದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅನಿಲ್‌ ಬೈಜಲ್‌ ಅವರು ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್‌ ಆಗಿ ನೇಮಕಗೊಂಡಿದ್ದಾರೆ. ಕೇಂದ್ರದ ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿಗಳೂ ಆಗಿದ್ದ 70 ವರ್ಷದ ಬೈಜಲ್‌ ನೇಮಕವನ್ನು ರಾಷ್ಟ್ರಪತಿ ಪ್ರಣವ್‌ ಅಂಗೀಕರಿಸಿದ್ದಾರೆ. ಡಿಸೆಂಬರ್‌ 30ರಂದು ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. == ಮಹಾನಗರಪಾಲಿಕೆಗಳ ಚುನಾವಣೆ ೨೦೧೭ == 26 , 2017 ದೇಶದ ರಾಜಧಾನಿ ದೆಹಲಿಯ ಮೂರು ಮಹಾನಗರಪಾಲಿಕೆಗಳ ೨೦೧೭ ರ ಚುನಾವಣೆ ಫಲಿತಾಂಶ: ಉತ್ತರ ದೆಹಲಿಯ 103 ವಾರ್ಡ್ ಗಳಲ್ಲಿ ಬಿಜೆಪಿ 66, ಎಎಪಿ 20, ಕಾಂಗ್ರಸ್‌ 15 ಮತ್ತು ಇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪೂರ್ವ ದೆಹಲಿಯ 63 ವಾರ್ಡ್ ಗಳಲ್ಲಿ ಬಿಜೆಪಿ 48, ಎಎಪಿ 10, ಕಾಂಗ್ರಸ್‌ 3 ಮತ್ತು ಇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ದಕ್ಷಿಣ ದೆಹಲಿಯ 104 ವಾರ್ಡ್ ಗಳಲ್ಲಿ ಬಿಜೆಪಿ 70, ಎಎಪಿ 16, ಕಾಂಗ್ರಸ್‌ 12 ಮತ್ತು ಇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. == ಇದನ್ನೂ ನೋಡಿರಿ == ಭಾರತ ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ ಭಾರತದ ಸಾರ್ವತ್ರಿಕ ಚುನಾವಣೆ ೨೦೧೪ ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯- (ನೋಡಿ) ದೆಹಲಿಯಲ್ಲಿರುವ ಆಕರ್ಷಣೀಯ ಸ್ಥಳಗಳು ೨೦೧೩ ರ ಭಾರತದ ಸಾರ್ವತ್ರಿಕ ಚುನಾವಣಾ ಫಲಿತಾಂಶ == ಆಕರಗಳು == == ಹೆಚ್ಚಿನ ಓದಿಗಾಗಿ == ದೆಹಲಿಯ ಆರ್ಥಿಕ ಸಮೀಕ್ಷೆ 2005–2006 2016-02-15 ವೇಬ್ಯಾಕ್ ಮೆಷಿನ್ ನಲ್ಲಿ.. ಯೋಜನಾ ಇಲಾಖೆ. ರಾಷ್ಟ್ರೀಯ ರಾಜಧಾನಿ ಪ್ರದೇಶದ ದೆಹಲಿ ಸರಕಾರ. ೧೨ ಫೆಬ್ರುವರಿ ೨೦೦೭ಯಲ್ಲಿ ಪುನರ್ ಸಂಪಾದಿಸಲಾಯಿತು. , (2002), [[]] ( )}} (3 .), , 1864502975 , & (2004), [[]] ( ( ))}}, , 0836851978 ಸ್ಯಾಮ್ ಮಿಲ್ಲರ್‌ರವರು (ಬರಹಗಾರರು ಮತ್ತು ಪತ್ರಕರ್ತರು) ಬರೆದದೆಹಲಿ: ಎಡ್ವೆಂಚರ್ಸ್‌ ಇನ್‌ ಎ ಮೆಗಾಸಿಟಿ ದೆಹಲಿಯಲ್ಲಿ ಕನ್ನಡ ಭಾಷೆಯೂ ಪ್ರಾಮುಖ್ಯತೆ ಪಡೆದಿದೆ.ದೆಹಲಿಯಲ್ಲಿ ಕರ್ನಾಟಕ ಭವನವೂ ಇದೆ.ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ ಬಹಳ ಉಪಯುಕ್ತವಾಗಿದೆ.ಈ ಮೂಲಕ ಕನ್ನಡವನ್ನು ಇಂಡಿಯಾದ ಮೂಲೆ ಮೂಲೆಗೂ ತಲುಪಿಸಬಹುದಾಗಿದೆ. ದಿಲ್ಲಿ ಮೊದಲ ಕೊರೊನಾ ರೋಗಿ 14 ದಿನಗಳ ಚಿಕಿತ್ಸೆ ನಂತರ ಗುಣಮುಖ…ಕುತೂಹಲದ ಪ್ರಶ್ನೆಗೆ ಉತ್ತರ!-ಉದಯವಾಣಿ ; 16 ಮಾರ್ಚ್ 2020 == ಹೊರಗಿನ ಕೊಂಡಿಗಳು == ಸರ್ಕಾರ ಭಾರತೀಯ ಸರಕಾರಿ ಜಾಲ ವಿಳಾಸಗಳ ನಿರ್ದೇಶಿಕೆ, ದೆಹಲಿ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರಕಾರ ದೆಹಲಿಯ ಪುರಸಭೆ ಮಂಡಳಿ 2009-03-31 ವೇಬ್ಯಾಕ್ ಮೆಷಿನ್ ನಲ್ಲಿ. ನವ ದೆಹಲಿ ಪುರಸಭೆ ಮಂಡಳಿ ಇತರೆ ಲೋನ್ಲಿ ಪ್ಲಾನೆಟ್ ಗೈಡ್ ದೆಹಲಿ ಮೆಟ್ರೋ ರೈಲು ನಿಗಮ ವಿಕಿಟ್ರಾವೆಲ್ ನಲ್ಲಿ ದೆಹಲಿ ಪ್ರವಾಸ ಕೈಪಿಡಿ (ಆಂಗ್ಲ)