ನರಭಕ್ಷಕತನ (ಸ್ಥಳೀಯ ಜನಗಳಿಗೆ ಸ್ಪಾನಿಶ್ ಹೆಸರು ಕ್ಯಾನಿಬೇಲಿಸ್, ವೆಸ್ಟ್ ಇಂಡೀಸ್‌ನ ಬುಡಕಟ್ಟು ಜನಾಂಗದವರು ನರಭಕ್ಷಕತನದ ಆಚರೆಣೆಗೆ ಹೆಸರುವಾಸಿ), ಆಚರಣೆಯ ಕಾರ್ಯವೇನೆಂದರೆ ಮನುಷ್ಯರು ಬೇರೆ ಮನುಷ್ಯರ ಮಾಂಸವನ್ನು ತಿನ್ನುವುದು. ಇದನ್ನು ಆಂತ್ರೊಪೊಫೆಜಿ ಎಂದೂ ಕರೆಯುತ್ತಾರೆ. "ನರಭಕ್ಷಕತನ" ಎಂಬ ಆವಿರ್ಭಾವದ ಮೂಲ ಮನುಷ್ಯರು ಮನುಷ್ಯರನ್ನು ತಿನ್ನುವ ಆಚರಣೆಯಲ್ಲಿದೆಯಾದರೂ, ಯಾವುದೇ ಪ್ರಾಣಿ ತನ್ನದೇ ವರ್ಗದ ಅಥವಾ ರೀತಿಯ ಸದಸ್ಯನನ್ನು ಕಬಳಿಸುವ ಆಚರಣೆಯಿಂದ ಇದು ಪ್ರಾಣಿಶಾಸ್ತ್ರಕ್ಕೂ ವಿಸ್ತರಿಸಿದೆ, ಇದರಲ್ಲಿ ತನ್ನ ಸಂಗಾತಿಯನ್ನು ಕಬಳಿಸುವುದೂ ಕೂಡ ಸೇರಿಕೊಂಡಿದೆ. ಇದರ ಸಂಬಂಧಪಟ್ಟ ಪದವೆಂದರೆ "ನರಭಕ್ಷಣೆ" ("ನರಭಕ್ಷಣಾಕ್ರಮ"ದಿಂದ ಉದ್ಭವಿಸಿದ್ದು), ಇದಕ್ಕೆ ಅನೇಕ ಅರ್ಥಗಳಿವೆ ಮತ್ತು ನರಭಕ್ಷತನದಿಂದ ರೂಪಾಂತರಗೊಂಡಿದೆ, ಮತ್ತು ಆದಿಯಿಂದಲೂ ಇದನ್ನು ಸೈನ್ಯದ ತುಂಡುಗಳಿಗಾಗಿ ಉಲ್ಲೇಖಿಸುತ್ತಿದ್ದರು. ವಸ್ತುಗಳ ತಯಾರಿಕೆಯಲ್ಲಿ, ಇದು ಸಂರಕ್ಷಿಸಲ್ಪಡುವ ತುಂಡುಗಳನ್ನು ಮರುಬಳಕೆಗೆ ಅನ್ವಯಿಸುತ್ತದೆ. ವ್ಯಾಪಾರೋದ್ಯಮದಲ್ಲಿ, ಒಂದು ಉತ್ಪನ್ನದ ಮಾರುಕಟ್ಟೆಯ ಬಂಡವಾಳದ ಪಾಲು ಅದೇ ಸಂಸ್ಥೆಯ ಇನ್ನೊಂದು ಉತ್ಪನ್ನದಿಂದ ನಷ್ಟವಾದಾಗ, ಇದು ಅನ್ವಯಿಸುತ್ತದೆ. ಪ್ರಕಾಶನ ಉದ್ಯಮದಲ್ಲಿ, ಇತರ ಮೂಲಗಳಿಂದ ವಸ್ತುಗಳನ್ನು ಸೆಳೆಯುವುದೆಂದೂ ಅರ್ಥ ಕೊಡುತ್ತದೆ. ನರಭಕ್ಷಕತನವನ್ನು ಇತ್ತೀಚೆಗೆ ರೂಢಿಯಲ್ಲಿದೆ ಹಾಗೂ ಅನೇಕ ಹೋರಾಟಗಳಲ್ಲಿ ಉಗ್ರವಾಗಿ ಖಂಡಿಸಲಾಗಿದೆ, ವಿಶೇಷವಾಗಿ ಲೈಬೀರಿಯ ಮತ್ತು ಕಾಂಗೊ ದೇಶಗಳಲ್ಲಿ. ಈಗ, ಕೊರೊವೈ ಎಂಬ ಬುಡಕಟ್ಟು ಜನಾಂಗದವರು ಮನುಷ್ಯರನ್ನು ಸಾಂಸ್ಕೃತಿಕ ಆಚರಣೆಯಾಗಿ ಇಂದಿಗೂ ತಿನ್ನುತ್ತಾರೆಂದು ನಂಬಿಕೆಯಿದೆ. ಅನೇಕ ಮೆಲನೇಶಿಯನ್ ಬುಡಕಟ್ಟು ಜನಗಳಲ್ಲಿ ಇಂದಿಗೂ ಧಾರ್ಮಿಕ ಸಂಸ್ಕಾರವಾಗಿ ಮತ್ತು ಯುಧ್ಧಗಳಲ್ಲಿ ಆಚರಿಸುತ್ತಾರೆ ಎಂದು ಕಂಡುಬಂದಿದೆ. ಐತಿಹಾಸಿಕವಾಗಿ, ನರಭಕ್ಷಕತನದ ಆರೋಪಣೆಯನ್ನು ವಲಸೆಗಾರ ಶಕ್ತಿಗಳು ಪ್ರಾಚೀನ ಯುಗದ ಜನಗಳ ಗುಲಾಮಗಿರಿಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಬಳಸಿಕೊಂಡವು; ನರಭಕ್ಷಕತನವು ಆಂತ್ರೊಪೊಲೊಜಿಸ್ಟ್‌ಗಳಿಗೆ "ಮನುಷ್ಯರ ನಡವಳಿಕೆಯ ಒಪ್ಪಬಹುದಾದ ಮಸುಕಿನ ಆಚೆ ಏನಿದೆ ಅಥವಾ ಏನಿಲ್ಲ ಎಂದು ನಿರೂಪಿಸು" ಎಂಬ ಸವಾಲೊಡ್ಡಿರುವುದರಿಂದ ಸಾಂಸ್ಕೃತಿಕ ಸಾಪೇಕ್ಷತಾ ಸಿದ್ಧಾಂತದ ಸೀಮೆಯನ್ನು ಪರೀಕ್ಷಿಸುತ್ತದೆ. ಇತ್ತೀಚೆಗೆ, ನರಭಕ್ಷಕತನದ ಮೇಲೆ ತೀರ್ಮಾನವನ್ನು ಕಾದಿರಿಸುವುದು ಎಲ್ಲರ ಒಲವಾಗಿದೆ. ನರಭಕ್ಷಕತನವು ಹಿಂದೆ ಮನುಷ್ಯರಲ್ಲಿ ಪ್ರಪಂಚದೆಲ್ಲೆಡೆ ವ್ಯಾಪಕವಾಗಿತ್ತು, ಇದು 19ನೇ ಶತಮಾನದಲ್ಲೂ ಕೆಲವು ಸೌತ್ ಪೆಸಿಫಿಕ್ ಸಂಸ್ಕೃತಿಗಳಲ್ಲಿ ಮುಂದುವೆರಿಯಿತು; ಕೆಲವು ಪ್ರಸಂಗಗಳಲ್ಲಿ ಮೆಲನೇಶಿಯ ದ್ವೀಪಗಳಲ್ಲಿ, ಸ್ವದೇಶೀ ಮಾಂಸದ ಮಾರುಕಟ್ಟೆಗಳು ಕೂಡ ಅಸ್ತಿತ್ವದಲ್ಲಿದವು. ಫಿಜಿ ಒಮ್ಮೆ ’ನರಭಕ್ಷಕ ದ್ಚೀಪ’ ಎಂದು ಪರಿಚಿತವಾಗಿತ್ತು. ನಿಯಾಂಡರ್ತಲ್ ಮಾನವರು ನರಭಕ್ಷಕತನವನ್ನು ಆಚರಿಸುತ್ತಿದ್ದರೆಂಬ ನಂಬಿಕೆಯಿದೆ, ಮತ್ತು ಅವರುಗಳು ಆಧುನಿಕ ಮನುಷ್ಯರಿಂದ ತಿನ್ನಲ್ಪಟ್ಟಿದ್ದರು. ನರಭಕ್ಷಕತನವು ಕೆಲವೊಮ್ಮೆ ಬರಗಾಲಪೀಡಿತರಾದ ಜನಗಳಿಗೆ ಕೊನೆಯ ಉಪಾಯವಾಗಿ ಆಚರಿಸುತ್ತಿದ್ದರು, ಹಿಂದಿನ ರೊನೊಕ್ ದ್ವೀಪದ ಮೇಲೆ ಹೀಗೇ ಆಗಿರಬಹುದೆಂದು ಚಿಂತಿಸಲಾಗಿದೆ. ಸಾಂದರ್ಭಿಕವಾಗಿ, ಇದು ಆಧುನಿಕ ಯುಗದಲ್ಲೂ ನಡೆದಿದೆ. ಒಂದು ಹೆಸರಾಂತ ನಿದರ್ಶವೆಂದರೆ, ಉರುಗ್ವೈಯನ್ ಏರ್ ಫೋರ್ಸ್ ವಿಮಾನ 571 ಅಪಘಾತಕ್ಕೀಡಾದಾಗ, ಕೆಲವು ಬದುಕುಳಿದವರು ಮೃತ ಪ್ರಯಾಣಿಕರನ್ನು ತಿಂದರು. ಅಲ್ಲದೆ, ಕೆಲವು ಮಾನಸಿಕ ರೋಗಿಗಳು ಬೇರೆಯವರನ್ನು ತಿನ್ನಬೇಕೆಂಬ ಗೀಳಿರುತ್ತದೆ ಮತ್ತು ಹಾಗೆಯೇ ಮಾಡುತ್ತಾರೆ, ಜೆಫ್ರಿ ಡಾಮರ್ ಮತ್ತು ಆಲ್ಬರ್ಟ್ ಫಿಶ್ ತರಹ. ನರಭಕ್ಷಕತನವನ್ನು ಮಾನಸಿಕ ಖಾಯಿಲೆ ಎಂದು ವರ್ಗೀಕರಿಸುವುದಕ್ಕೆ ಔಪಚಾರಿಕ ವಿರೋಧವಿದೆ. ನರಭಕ್ಷಕತನದ ನಿರೂಪಣೆಯು ಧರ್ಮ, ಪೌರಾಣಿಕ ಕಥೆಗಳಲ್ಲಿ, ಕಿನ್ನರ ಕಥೆಗಳಲ್ಲಿ ಮತ್ತು ಕಲೆಯ ಕಾರ್ಯಗಳಲ್ಲಿ ಲೇಖನಗೊಂಡಿದೆ; ಉದಾಹರಣೆಗೆ, 1819ರಲ್ಲಿ ಫ್ರೆಂಚ್ ಶಿಲಾಮುದ್ರಣಕಾರ ಥಿಯೊಡೋರ್ ಗೆರಿಕಾಲ್ಟ್ ಅವರು ನರಭಕ್ಷಕತನವನ್ನು ದಿ ರಾಫ್ಟ್ ಆಫ್ ದಿ ಮೆಡ್ಯುಸ ಎಂಬುದರಲ್ಲಿ ಚಿತ್ರಿಸಿದ್ದಾರೆ. ಜನಪ್ರಿಯ ಸಾಂಸ್ಕೃತಿಕ ಎಂದು ಹೆಸರಾಗಿರುವ ಮಾಂಟಿ ಪೈಥಾನ್ಸ್ ಲೈಫ್‌ಬೋಟ್ ಎಂಬ ರೇಖಾಚಿತ್ರದಲ್ಲಿ ಇದನ್ನು ಅಪಹಾಸ್ಯ ಮಾಡಲಾಗಿದೆ. == ನರಭಕ್ಷಕತೆಗೆ ಕಾರಣಗಳು == ನರಭಕ್ಷಕತೆ ಕಾರಣಗಳು ಹೀಗಿವೆ: ಸಂಪ್ರದಾಯಿಕ ರೂಢಿಯ ಅನುಮತಿ ಇರುವಂತೆ ಬರಗಾಲದಂಥ ವಿಪರೀತವಾದ ಸನ್ನಿವೇಶಗಳ ಅನಿವಾರ್ಯತೆಗಳಿಂದ ಬುಧ್ಧಿಭ್ರಮಣೆ ಅಥವಾ ಸಾಮಾಜಿಕ ಉಲ್ಲಂಘನೆಯಿಂದಲೂ ಉಂಟಾಗಬಹುದು, (ನರಭಕ್ಷಕತೆಯು ಬುದ್ಧಿಭ್ರಮಣೆಯ ಸೂಚಕವಾಗಿ ಡಯಾಗ್ನೋಸ್ಟಿಕ್ ಮತ್ತು ಸ್ಟ್ಯಾಟಿಸ್ಟಿಕಲ್ ಆಫ್ ಮಾನ್ಯುಯಲ್ ಡಿಸಾರ್ಡರ್ಸ್‌ನಲ್ಲಿ ಎಲ್ಲೂ ಪ್ರಸ್ತಾಪವಾಗಿಲ್ಲ ಎಂಬುದನ್ನು ಗಮನಿಸಿ. ಅಂತೆಯೇ ಈ ವಿಷಯದ ಮೇಲೆ ವೈದ್ಯಕೀಯ ಸಾಹಿತ್ಯವು ವಿರಳವಾಗಿದೆ). ಮೂಲಭೂತವಾಗಿ ಎರಡು ರೀತಿಯ ನರಭಕ್ಷಕ ಸಾಮಾಜಿಕ ವರ್ತನೆಗಳಿವೆ; ಒಳ ನರಭಕ್ಷಕತೆ (ಒಂದೇ ಸಮುದಾಯದ ಮನುಷ್ಯರನ್ನು ತಿನ್ನುವುದು) ಮತ್ತು ಹೊರ ನರಭಕ್ಷಕತೆ (ಬೇರೆ ಸಮುದಾಯದ ಮನುಷ್ಯರನ್ನು ತಿನ್ನುವುದು). ಮನುಷ್ಯರನ್ನು ಆಹಾರಕ್ಕಾಗಿ ತಿನ್ನುವ (ಮಾನವ ಹತ್ಯೆ ನರಭಕ್ಷಕತೆ) ಮತ್ತು ಆಗಲೇ ಮರಣ ಹೊಂದಿದ ಮನುಷ್ಯನ ಮಾಂಸವನ್ನು ತಿನ್ನುವ (ಮೃತ್ಯು-ನರಭಕ್ಷಕತೆ) ಆಚರಣೆಯನ್ನು ಹೀಗೆ ನೈತಿಕ ಭೇಧದಿಂದ ವಿಭಜಿಸಬಹುದು. === ಹಸಿ ಮಾಂಸ ತಿನ್ನುವ ಗೀಳು === 21 , 2017; ಲುಧಿಯಾನದಲ್ಲಿ 16ರ ಹರೆಯದ ಬಾಲಕನೊಬ್ಬ 9 ಹರೆಯದ ಬಾಲಕನನ್ನು ಕೊಂದು ಆತನ ಮೃತದೇಹವನ್ನು 6 ತುಂಡುಗಳನ್ನು ಮಾಡಿ, ಮಾಂಸ ತಿಂದು ರಕ್ತ ಕುಡಿದ ಘಟನೆ ನಡೆದಿದೆ. ದೀಪು ಕುಮಾರ್ ಎಂಬ ಬಾಲಕ ಸೋಮವಾರ ನಾಪತ್ತೆಯಾಗಿದ್ದನು. ಆತನಿಗಾಗಿ ಹುಡುಕಾಟ ನಡೆಸಿದಾಗ ದುರ್ಗೀ ಎಂಬ ನಿರ್ಜನ ಪ್ರದೇಶದಲ್ಲಿ ಛಿದ್ರವಾದ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಅದೇ ಪ್ರದೇಶದಲ್ಲಿ ವಾಸಿಸುವ 16ರ ಹರೆಯದ ಬಾಲಕ ಈ ಕೃತ್ಯವೆಸಗಿದ್ದಾನೆ ಎಂಬುದು ಬೆಳಕಿಗೆ ಬಂದಿತ್ತು. ಹತ್ಯೆಗೀಡಾದ ಬಾಲಕ ಮತ್ತು ಹತ್ಯೆ ಮಾಡಿದ ಆರೋಪಿ ಬಾಲಕ ಇಬ್ಬರೂ ವಲಸೆ ಕಾರ್ಮಿಕರ ಮಕ್ಕಳಾಗಿದ್ದಾರೆ. ಹತ್ಯೆ ಮಾಡಿದ ಬಾಲಕ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದು, ಬಾಲಕನನ್ನು ಹತ್ಯೆ ಮಾಡಿದ ದಿನ ಮನೆಗೆ ಬಂದು ಸಹಜವಾಗಿಯೇ ವರ್ತಿಸಿದ್ದನು. ದೀಪು ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ, ಅದರಲ್ಲಿ ದೀಪು ಜತೆ ಇನ್ನೋರ್ವ ಬಾಲಕ ಇರುವುದು ಪತ್ತೆಯಾಗಿತ್ತು. ಆನಂತರ ಸಿಸಿಟಿವಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಬಾಲಕನ ಜಾಡು ಹಿಡಿದು, ಆತನನ್ನು ತನಿಖೆಗೆ ಒಳಪಡಿಸಿದಾಗ ಸತ್ಯ ಹೊರಬಂದಿತ್ತು.ಪೊಲೀಸರಲ್ಲಿ ತಪ್ಪೊಪ್ಪಿಕೊಂಡ ಆರೋಪಿ, ತಾನು ದೀಪುವನ್ನು ಕೊಂದು ಆತನ ಮಾಂಸವನ್ನು ತಿಂದು ರಕ್ತ ಕುಡಿದಿದ್ದೇನೆ ಎಂದಿದ್ದಾನೆ. ಆರೋಪಿ ಬಾಲಕ ಸಾಮಾನ್ಯವಾಗಿ ಕೋಳಿಯ ಹಸಿ ಮಾಂಸವನ್ನೇ ತಿನ್ನುತ್ತಿದ್ದನಂತೆ. ಕೆಲವೊಮ್ಮ ಆತ ಅವನ ಕೈಯ ಮಾಂಸವನ್ನೇ ಕಚ್ಚುತ್ತಿದ್ದ ಎಂದು ಪೊಲೀಸ್ ಡೆಪ್ಯೂಟಿ ಕಮಿಷನರ್ ಭುಪಿಂದರ್ ಸಿಂಗ್ ಹೇಳಿದ್ದಾರೆ. ಆರೋಪಿಯನ್ನೀಗ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಉಲ್ಲೇಖ:ಬಾಲಕನನ್ನು ಹತ್ಯೆ ಮಾಡಿ, ಶವವನ್ನು ತುಂಡರಿಸಿ ಮಾಂಸ ತಿಂದು, ರಕ್ತ ಕುಡಿದ 16ರ ಹರೆಯದ ಬಾಲಕ;21 , 2017 == ಸ್ಥೂಲ ಸಮೀಕ್ಷೆ == ನರಭಕ್ಷಕತೆಯ ವಿರುಧ್ಧ ಇರುವ ಸಮಾಜಿಕ ಕಳಂಕವನ್ನು ಪ್ರಚಾರದ ವಿಷಯವಾಗಿಸಿ ಶತ್ರುಗಳ ಮೇಲೆ ನರಭಕ್ಷಕತೆಯ ಆರೋಪ ಹೊರೆಸಿ ಅವರ ವಿರುಧ್ಧ ಬಳಸಿ ಮಾನವ ಕುಲದಿಂದ ವಿಭಜಿಸಿದ್ದಾರೆ. ಲೆಸ್ಸರ್ ಅಂಟಿಲ್ಲಿಸ್‌ನಲ್ಲಿರುವ ಕ್ಯಾರಿಬ್ ಬುಡಗಟ್ಟು ಜನಾಂಗದವರು, ಇವರಿಂದ ನರಭಕ್ಷಣಾಕ್ರಮ ಪದದ ಉದ್ಭವವಾಗಿದ್ದು, ಉದಾಹರಣೆಗೆ, 17ನೇ ಶತಮಾನದಲ್ಲಿ ಅವರ ಕಟ್ಟು ಕಥೆ ದಾಖಲೆಯ ಪ್ರಕಾರ ನರಭಕ್ಷಕರೆಂದು ದೀರ್ಘ ಕಾಲದವರೆಗೆ ಪ್ರಖ್ಯಾತಿ ಪಡೆದಿದ್ದರು. ಈ ಕಟ್ಟು ಕಥೆಗಳ ಮತ್ತು ವ್ಯಾಪಕವಾದ ನಿಜವಾದ ನರಭಕ್ಷಕತೆಯ ಸಂಸ್ಕೃತಿಯ ನಿಖರತೆಯ ಮೇಲೆ ವಾದವಿವಾದಗಳು ಅಸ್ತಿತ್ವದಲ್ಲಿದೆ. 15ರಿಂದ 17ನೇ ಶತಮಾನಗಳ ವಿಸ್ತಾರಗೊಳ್ಳುವ ಸಮಯದಲ್ಲಿ ಯುರೋಪಿಯನ್ನರು ನರಭಕ್ಷಕತೆಯನ್ನು ದುಷ್ಟ ಮತ್ತು ಕ್ರೌರ್ಯತನಕ್ಕೆ ಸಮೀಕರಿಸಿದರು. 16ನೇ ಶತಮಾನದಲ್ಲಿ, ಪೋಪ್ ಇನ್ನೊಸೆಂಟ್ ಅವರು ಕ್ರಿಶ್ಚಿಯನ್ನರಿಂದ ರಟ್ಟೆಯ ಬಲದಿಂದ ಪಾಪದ ನರಭಕ್ಷಕತೆಯು ಶಿಕ್ಷಿಸಲು ಅರ್ಹವಾದದ್ದು ಎಂದು ಪ್ರಕಟಿಸಿದರು, ಮತ್ತು ಸ್ಪಾನಿಶ್ ವಲಸೆನಗರವು ಶಾಸನಬಧ್ಧವಾಗಿ ಮಾತ್ರವೇ ನರಭಕ್ಷಕ ಸ್ಥಳೀಯರನ್ನು ಗುಲಾಮರನ್ನಾಗಿ ಮಾಡಿಕೊಳ್ಲಬಹುದು ಎಂದು ರಾಣಿ ಇಸಬೆಲ್ಲ ಆಜ್ಞೆ ಹೊರಡಿಸಿದಳು, ಇದರಿಂದ ಆಪಾದನೆ ಮಾಡುವಲ್ಲಿ ವಲಸೆಗಾರರಿಗೆ ಆರ್ಥಿಕ ಆಸಕ್ತಿಯನ್ನು ಕೊಟ್ಟರು. ಇದನ್ನು ಬಲಾತ್ಕಾರದ ಉಪಾಯಗಳಿಂದ ಸ್ಥಳೀಯ ಜನಗಳನ್ನು ಸ್ವಾಧೀನ ಪಡಿಸಿಕೊಂಡು ನೇಮಿಸಿಕೊಳ್ಳಲು ಸಮರ್ಥನೆಯಾಗಿ ಬಳಸಿಕೊಂಡರು. ಈ ವಿಷಯ ಹಿಂದಿನ ಕೊಲಂಬಸ್‌ನ ಹೇಳಿಕೆಯ ಎಣಿಕೆಯಂತೆ ಉಗ್ರವಾದ ಒಂದು ನರಭಕ್ಷಕ ಗುಂಪು ಕ್ಯಾರಿಬ್ಬಿಯನ್ ದ್ವೀಪಗಳಲ್ಲಿ ವಾಸಿಸುತ್ತಿದ್ದರು ಮತ್ತು ದಕ್ಷಿಣ ಅಮೇರಿಕದ ಭಾಗಗಳಾದ ಕಾನಿಬ‌ದಲ್ಲಿ, ಈ ಪದವೇ ಕಾನ್ನಿಬಾಲ್ ಎಂಬ ನರಭಕ್ಷಕ ಹೆಸರಿಗೆ ಕಾರಣವಾಯಿತು. ದಕ್ಷಿಣ-ಪೂರ್ವದ ಪೊಪುವದಲ್ಲಿನ ಕೊರೊವೈ ಬುಡಕಟ್ಟು ಜನರು ನರಭಕ್ಷಕತೆಯಲ್ಲಿ ತೊಡಗಿದ್ದ ಇವರು ಪ್ರಪಂಚದಲ್ಲೇ ಕೊನೆಯ ಬದುಕುಳಿದ ಬುಡಕಟ್ಟಿನವರು, ಆದರೂ, ಸಮೂಹ ಮಾಧ್ಯಮದ ವರದಿಗಳ ಪ್ರಕಾರ ಕಾಂಗೊ ಮತ್ತು ಲೈಬೀರಿಯದ ಡೆಮೊಕ್ರೆಟಿಕ್ ರೆಪಬ್ಲಿಕ್‌‌ನಲ್ಲಿ ಸೈನಿಕರು/ದಂಗೆಕೋರರು ಸೈನಿಕ ಮಕ್ಕಳನ್ನು ಅಥವಾ ಸೆರೆಯಾಳುಗಳನ್ನು ಹೆದರಿಸಲು ಶರೀರದ ಭಾಗಗಳನ್ನು ತಿನ್ನುತ್ತಿದ್ದರು. ಮಾರ್ವಿನ್ ಹ್ಯಾರಿರವರು ನರಭಕ್ಷಕತನವನ್ನು ಮತ್ತು ಆಹಾರದ ನಿಷೇಧಗಳ ಬಗ್ಗೆ ಪರಿಶೀಲಿಸಿದ್ದಾರೆ. ಮನುಷ್ಯರು ಸಣ್ಣ ಪಂಗಡಗಳಲ್ಲಿ ವಾಸಿಸುವಾಗ ಇದು ಸರ್ವೇಸಾಮಾನ್ಯ ಎಂದು ಇವರು ವಾದಿಸಿದರು, ಆದರೆ ರಾಜ್ಯಗಳ ಪರಿವರ್ತನೆಯಾದ ಮೇಲೆ ಕಣ್ಮರೆಯಾಯಿತು, ಆಜ್‌ಟೆಕ್‌ಗಳು ಇದಕ್ಕೆ ಹೊರತಾದವರು. ಬಹಳ ಹೆಸರುವಾಸಿಯಾದ ಶವಾಗಾರ ನರಭಕ್ಷಕತೆಯ ಪ್ರಸಂಗವೆಂದರೆ, ನ್ಯೂ ಗಿನೀ ಪ್ರದೇಶದ ಫೋರ್ ಬುಡಕಟ್ಟು ಜನಾಂಗದ ಫಲಿತಾಂಶ ಸಾಂಕ್ರಾಮಿಕ ಸಸಾರಜನಕದ ಕಿರುತುಣುಕಿನ ರೋಗವಾದ ಕೂರು ಎಂಬುದು ಹರಡಿತು. ಇದು ಆಗಿಂದ್ದಾಗ್ಗೆ ಸಮರ್ಪಕವಾಗಿ ದಾಖಲಿಸಲಾಗಿದೆ, ಆದರೂ ಪ್ರತ್ಯಕ್ಷಸಾಕ್ಷಿ ವಿವರಣೆ ನಮೂದಿಸಿಲ್ಲ. ಶವಸಂಸ್ಕಾರದ ಧಾರ್ಮಿಕ ವಿಧಿಯ ಸಮಯದಲ್ಲಿ ಶವಪರೀಕ್ಷೆಯಿಂದ ಅಂಗವಿಭಜನೆಯು ಆಚರಣೆಯಲ್ಲಿತ್ತೇ ವಿನಹ ನರಭಕ್ಷಕತೆಯ ಆಚರಣೆ ಇರಲಿಲ್ಲವೆಂದು ಕೆಲವು ಪಂಡಿತರು ವಾದಿಸುತ್ತಾರೆ. ಇದು ಬರಗಾಲದ ಕಾಲದ ಸಮಯದಲ್ಲಿ ಆಗಿತ್ತು, ಅದೇ ಸಮಯದಲ್ಲಿ ಯುರೋಪಿಯನ್ನರ ಆಗಮವಾಯಿತು ಮತ್ತು ಧಾರ್ಮಿಕ ವಿಧಿಯೆಂದು ತರ್ಕಸಮ್ಮತವಾಯಿತು ಎಂದು ಮಾರ್ವಿನ್ ಹ್ಯಾರಿಸ್ ಅವರು ಸಿಧ್ಧಾಂತಿಸಿದ್ದಾರೆ. ಆಧುನಿಕ ವೈದ್ಯಶಾಸ್ತ್ರಕ್ಕೆ ಮೊದಲು, ನರಭಕ್ಷಕತೆಯ ಸೃಷ್ಠೀಕರಣವನ್ನು ಹೀಗೆ ನೀಡಲಾಯಿತು, ಕಪ್ಪು ನಿಷ್ಠುರ ವಿನೋದವೊಂದು ದೇಹದೊಳಗಿನ ಕುಳಿಯ ಒಳ ಪರಿಧಿಯಲ್ಲಿದ್ದು ಮನುಷ್ಯನ ಮಾಂಸಕ್ಕಾಗಿ ಹೊಟ್ಟೆಬಾಕವಾಗಿದೆ. ಯಾವಾಗ ವಿಜ್ಞಾನಿಗಳು ಬಹಳ ಹಿಂದಿನ ಮನುಷ್ಯರು ನರಭಕ್ಷಕತೆಯನ್ನು ಆಚರಿಸಿದ್ದಿರಬಹುದೆಂದು ಸಲಹೆ ಮಾಡಿದರೋ, ಆಗ ಕೆಲವು ಈಗ-ಸವಾಲೆಸೆಯುವ ಸಂಶೋಧನೆಗಳು ಬಹುಮಟ್ಟಿಗೆ ಮಾಧ್ಯಮಗಳ ಗಮನ ಸೆಳೆದವು. ಆಮೇಲೆ ಸಿಕ್ಕ ದತ್ತಾಂಶಗಳನ್ನು ಮರುವಿಷ್ಲೇಷಣೆ ಮಾಡಿದಾಗ ಕಲ್ಪಿತ ಸಿದ್ಧಾಂತದ ಜೊತೆ ಗಂಭೀರವಾದ ಸಮಸ್ಯೆಗಳು ಕಂಡುಬಂದವು. ಮೂಲ ಸಂಶೋಧನೆಯ ಪ್ರಕಾರ, ಮನುಷ್ಯರ ಮೆದುಳನ್ನು ತಿಂದು ಅದರಿಂದ ಹರಡುವ ಮೆದುಳು ರೋಗದ ವಿರುಧ್ಧವಾಗಿ ರಕ್ಷಿಸಲು ರೋಗನಾಷಕ ತಳಿಯು ಉತ್ಪತ್ತಿಯಾಗಿದೆ ಹಾಗೂ ಈ ತಳಿಯು ಈಗೀಗ ಅನೇಕ ಮಂದಿಯಲ್ಲಿ ಕಾಣಬರುತ್ತದೆ ಎಂದು ಪ್ರಪಂಚದೆಲ್ಲೆಡೆ ಆಧುನಿಕ ಮನುಷ್ಯರಲ್ಲಿ ಕಾಣ ಬರುವ ತಳಿ ಗುರುತುಗಳು ಸಲಹೆ ನೀಡುತ್ತವೆ. ಆಮೇಲಿನ ದತ್ತಾಂಶಗಳ ಮರುವಿಷ್ಲೇಷಣೆಯು ದತ್ತಾಂಶಗಳ ಸಂಗ್ರಹದಿಂದ ಪಕ್ಷಪಾತವು ಕಂಡುಬಂದಿದೆಯೆಂದು ಇದರಿಂದ ತಪ್ಪಾದ ತೀರ್ಮಾನ ತೆಗೆದುಕೊಳ್ಳಲಾಗಿದೆಯೆಂದು ಹೇಳುತ್ತಾರೆ: ಕೆಲವು ಪ್ರಸಂಗಗಳಲ್ಲಿ ಸಾಕ್ಷಿಗಳನ್ನು ’ಪ್ರಾಚೀನ’ ಸ್ಥಳೀಯ ಸಂಪ್ರದಾಯಗಳಿಗೆ ಕೊಟ್ಟಿವೆಯೆಂದು ಆರೋಪ ಹೊರಿಸಿದರು, ಆದರೆ ನಿಜ ಸಂಗತಿಯೇನೆಂದರೆ ಪರಿಶೋಧಕರು, ಸಿಕ್ಕಿಬಿದ್ದ ನೌಕಾ ಯಾತ್ರಿಕರು ಅಥವಾ ತಪ್ಪಿಸಿಕೊಂಡ ಅಪರಾಧಿಗಳು ನರಭಕ್ಷಕತೆಯನ್ನು ಆಚರಿಸುತ್ತಿದ್ದರು. == ಹಸಿದಿರುವ ಸಮಯದಲ್ಲಿ == ನರಭಕ್ಷಕತೆಯು ಕೆಲವೊಮ್ಮೆ ಬರಗಾಲಪೀಡಿತರಾದ ಜನಗಳಿಗೆ ಕೊನೆಯ ಉಪಾಯವಾಗಿ ಆಚರಿಸುತ್ತಿದ್ದರು. 1609-1610ರ ಹೊಟ್ಟೆಗಿಲ್ಲದೆ ಸಾಯುವ ಸಮಯದಲ್ಲಿ ವಲಸೆ ನಾಡಾದ ಜೇಮ್ಸ್‌ಟೌನ್‍ನಲ್ಲಿ, ವಲಸೆಗಾರರು ನರಭಕ್ಷ್ಕತೆಯನ್ನು ಆಶ್ರಯಿಸಿದರು. ಆಹಾರ ಧಾನ್ಯಗಳು ಮುಗಿದ ಮೇಲೆ, ಕೆಲವು ವಲಸೆದಾರರು ಆಹಾರಕ್ಕಾಗಿ ಮೃತ ದೇಹಗಳನ್ನು ಅಗೆಯಲು ಪ್ರಾರಂಭಿಸಿದರು. ಈ ಸಮಯದಲ್ಲಿ, ಶಿಕ್ಷೆಗೊಳಗಾದ ಒಬ್ಬ ಮನುಷ್ಯನು ತನ್ನ ಸಜೀವ ದಹನವಾಗುವಾಗ ಅವನ ಗರ್ಭಿಣಿ ಹೆಂಡತಿಯನ್ನು ಕೊಂದು, ಉಪ್ಪು ಹಾಕಿ, ತಿಂದು ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಯು.ಎಸ್.ನಲ್ಲಿ ವಸತಿದಾರರ ಗುಂಪಾದ ಡಾನರ್ ತಂಡವು ಚಳಿಗಾಲದಲ್ಲಿ ಪರ್ವತಗಳ ಮೇಲೆ ಭಾರಿ ಮಂಜಿನ ಬೀಳುವಿಕೆಯಲ್ಲಿ ಸಿಲುಕಿಕೊಂಡಾಗ ನರಭಕ್ಷಕತೆಗೆ ಮರೆಹೋದರು. ಸರ್ ಜಾನ್ ಫ್ರಾಂಕ್ಲಿನ್‌ನ ದಂಡಯಾತ್ರೆಯ ಕೊನೆಯಲ್ಲಿ ಬದುಕುಳಿದ ಜನಗಳು ಕಿಂಗ್ ವಿಲ್ಲಿಯಮ್ ದ್ವೀಪದಿಂದ ಬ್ಲಾಕ್ ನದಿಗೆ ಹೋಗುವ ಸಮಯದಲ್ಲಿ ನರಭಕ್ಷಕತೆಗೆ ಮರೆಹೋದರು. 1930ರ ಯುಕ್ರೇನ್‌ನ ಬರಗಾಲ ಸಮಯದಲ್ಲಿ, ವಿಶ್ವ ಯುಧ್ಧ IIರ ಸೀಜ್ ಆಫ್ ಲೆನಿನ್‌ಗಾರ್ಡ್ ಸಮಯದಲ್ಲಿ ಮತ್ತು ಚೈನಾದ ಪೌರರ ಯುಧ್ಧದ ಸಮಯದಲ್ಲಿ, ಮತ್ತು ಚೈನಾದ ಪೀಪಲ್ಸ್ ರಿಪಬ್ಲಿಕ್‌ನಲ್ಲಿನ ಗ್ರೇಟ್ ಲೀಪ್ ಫಾರ್ವರ್ಡ್, ಇವೆಲ್ಲದರ ಕಾಲದಲ್ಲಿ ನರಭಕ್ಷಕತೆಯು ವ್ಯಾಪಕವಾಗಿತ್ತೆಂದು ಅನೇಕ ಹೇಳಿಕೆಗಳು ಹೇಳುತ್ತವೆ. ವಿಶ್ವ ಯುಧ್ಧ IIರ ಸಮಯದಲ್ಲಿ ನಾಜಿಗಳ ಸಮೂಹ ಬೀಡಿನಲ್ಲಿ ಸೆರೆಯಾಳುಗಳು ಅಪೌಷ್ಠಿಕತೆಯಿಂದ ಅನೇಕ ನರಭಕ್ಷಕತೆಯ ಘಟನೆಗಳು ನಡೆದಿದ್ದವು ಎನ್ನುವ ವದಂತಿಗಳಿದ್ದವು. ಪೆಸಿಫಿಕ್ ರಂಗ ಕೋಣೆಯಲ್ಲಿನ ಇತ್ತೀಚಿನ ವಿಶ್ವ ಸಮರ IIದ ಸಮಯದಲ್ಲೂ ನರಭಕ್ಷಕತೆಯು ಜಾಪಾನೀ ಸೈನ್ಯದಲ್ಲಿ ಆಚರಣೆಯಲ್ಲಿತ್ತು. ತೀರ ಈಚಿನ ಉದಾಹರಣೆಯೆಂದರೆ, 1995 ಮತ್ತು 1997ರ ಮಧ್ಯೆ ಸಂಭವಿಸಿದ ಬರಗಾಲದ ಸಮಯದಲ್ಲಿ ಮತ್ತು ಅದಾದ ನಂತರ ಉತ್ತರ ಕೊರಿಯಾದ ನಿರಾಶ್ರಿತರು ನರಭಕ್ಷಕತೆಯನ್ನು ಬಳಸಿದ ಕಥೆಯು ಬಯಲಾಗಿದೆ.' ಕೆಲವು ಬದುಕುಳಿದ ಡುಮರು ಹಡಗು ಮೊದಲನೇ ವಿಶ್ವ ಸಮರದ ಸಮಯದಲ್ಲಿ ಸ್ಫೋಕಗೊಂಡು, ಮುಳುಗಿದ ನಂತರ ಸಿಬ್ಬಂದಿ ಸದಸ್ಯರ ನರಭಕ್ಷಕತೆಯನ್ನು ಲೊವೆಲ್ ಥೊಮಸ್‌ರವರು ತಮ್ಮ ಪುಸ್ತಕವಾದ ದಿ ರೆಕ್ ಆಫ್ ದಿ ಡುಮರು ಎಂಬುದರಲ್ಲಿ ದಾಖಲಿಸಿದ್ದಾರೆ. ಇನ್ನೊಂದು ನೌಕಾಘಾತದ ಘಟನೆಯ ಬದುಕುಳಿದವರು ಬಲಾತ್ಕಾರವಾಗಿ ನರಭಕ್ಷಕತೆಯಲ್ಲಿ ತೊಡಗಿದ್ದು ಮೆಡುಸ ದಾಗಿತ್ತು, 1816ರಲ್ಲಿ ಫ್ರೆಂಚ್ ನೌಕೆಯು ಬ್ಯಾಂಕ್ ಡಿ’ಆರ್ಗಿನ್ (ಇಂಗ್ಲಿಷ್: ದಿ ಬ್ಯಾಂಕ್ ಆಫ್ ಆರ್ಗಿನ್ )ನ ಮೇಲೆ ನೆಲಕಚ್ಚಿತು, ಸುಮಾರು ಅರವತ್ತು ಮೈಲಿ ಆಫ್ರಿಕಾದ ಕಡಲ ತೀರದಿಂದ ದೂರಕ್ಕೆ. 1972ರಲ್ಲಿ, ಉರುಗ್ವೈ ಏರ್ ಫೋರ್ಸ್ ವಿಮಾನ 571ನಲ್ಲಿ ಮಾಂಟೆವಿಡಿಯೊದ ಸ್ಟೆಲ್ಲ ಮೇರೀಸ್ ಕಾಲೇಜ್‌ನ ಫುಟ್ ಬಾಲ್ ತಂಡವಿತ್ತು ಮತ್ತು ಕೆಲವು ಅವರ ಕುಟುಂಬದ ಸದಸ್ಯರುಗಳಿದ್ದರು, ಅಪಘಾತದ ಸ್ಥಳದಲ್ಲಿ ಇವರಲ್ಲಿ ಬದುಕುಳಿದವರು ನರಭಕ್ಷಕತೆ ಆಚರಿಸಿದರು. ಇವರೆಲ್ಲರೂ ಅಕ್ಟೋಬರ್ 13, 1972ರಿಂದ ಅಲ್ಲಿ ಸಿಕ್ಕಿಹಾಕಿಕೊಂಡಿದ್ದರು ಮತ್ತು ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯ ಡಿಸೆಂಬರ್ 22, 1972 ವರೆಗೂ ಆರಂಭಗೊಂಡಿರಲಿಲ್ಲ. ಬದುಕುಳಿದವರ ಕಥೆಯು ಪಿಯರ್ಸ್ ಪಾಲ್ ರೀಡ್ ಅವರ 1974ರ ಪುಸ್ತಕದಲ್ಲಿ ದಾಖಲಾಯಿತು,: 1993ರ ಚಿತ್ರದಲ್ಲಿ ಈ ಪುಸ್ತಕವನ್ನು ಅಳವಡಿಸಿಕೊಳ್ಳಲಾಯಿತು, ಸರಳವಾಗಿ ಅಲೈವ್ ಎಂದು ಕರೆದರು, ಮತ್ತು 2008ರ ಒಂದು ಸಾಕ್ಷ್ಯಚಿತ್ರದಲ್ಲೂ ಬಳಸಲಾಯಿತು: ಸ್ಟ್ರಾಂಡೆಡ್: ಐ’ಹಾವ್ ಕಮ್ ಫ್ರಂ ಎ ಪ್ಲೇನ್ ದಟ್ ಕ್ರಾಷ್ಡ್ ಆನ್ ದಿ ಮೌಂಟೇನ್ಸ್. ಮೊಐ ಕಟ್ಟಿಸಿದ ನಂತರ ಅರಣ್ಯ ನಾಶದಿಂದ ಆರಂಭವಾಗಿ ಪರಿಸರ ವ್ಯವಸ್ಥೆ ಕುಸಿಯಿತು, ಹಾಗೂ ಇದರಿಂದ ಮೀನು ಹಿಡಿಯುವ ದೋಣಿ ಕಟ್ಟಲು ಮರಗಳೇ ಇಲ್ಲದಂತಾಯಿತು, ಮತ್ತು ಆಗ ನರಭಕ್ಷಕತೆಯು ಈಸ್ಟರ್ ದ್ವೀಪದಲ್ಲಿ ಜರುಗಿತೆಂದು ಜೇರೆಡ್ ಡೈಮಂಡ್ ಅನ್ನುವವರು ತಮ್ಮ ಪುಸ್ತಕ "ಗನ್ಸ್, ಜರ್ಮ್ಸ್ ಅಂಡ್ ಸ್ಟೀಲ್"ನಲ್ಲಿ ಸೂಚಿಸಿದ್ದಾರೆ. == ಪೌರಾಣಿಕ ಕಥೆಗಳಲ್ಲಿ ಮತ್ತು ಧರ್ಮದಲ್ಲಿ ವಿಚಾರ == ನರಭಕ್ಷಕತೆ ಅನೇಕ ಪೌರಾಣಿಕ ಕಥೆಗಳಲ್ಲಿ ಲೇಖಿತವಾಗಿದೆ, ಮತ್ತು ಪದೇ ಪದೇ ಕೆಡುಕಿಗೆ ಹೋಲಿಸಲಾಗಿದೆ ಪಾತ್ರಗಳು ಅಥವಾ ಯಾವುದೋ ತಪ್ಪಿಗಾಗಿ ವಿಪರೀತವಾದ ಶಿಕ್ಷೆ. ಇದರ ಉದಾಹರಣೆಗಳಲ್ಲಿ ಈ ಕೆಳಗಿನವು ಸೇರಿವೆ: ಹ್ಯಾನ್ಸೆಲ್ ಅಂಡ್ ಗ್ರೆಟೆಲ್‌ ನಲ್ಲಿ ಮಾಟಗಾತಿ ಮತ್ತು ಬಾಬ ಯೋಗದ ಸ್ಲೇವಿಕ್ ದಂತಕಥೆ. ಅನೇಕ ಗ್ರೀಕ್ ಪೌರಾಣಿಕ ಕಥೆಗಳಲ್ಲಿ ನರಭಕ್ಷಕತೆ ಒಳಗೊಂದಿದೆ, ಹತ್ತಿರದ ಕುಟುಂಬದ ಸದಸ್ಯರ ಒಂದು ನಿರ್ದಿಷ್ಠವಾದ ನರಭಕ್ಷಕತೆಯಲ್ಲಿ, ಉದಾಹರಣೆಗೆ, ತೈಯಸ್ಟೀಸ್, ಟೆರಿಯಸ್ ಮತ್ತು ವಿಶೇಷವಾಗಿ ರೋಮನ್ನರ ಸರ್ವದೇವ ಮಂದಿರದಲ್ಲಿರುವ ಶನಿಗ್ರಹವಾದ ಕ್ರೊನಸ್‌ನ ಕಥೆಗಳು. ಟಾಂಟಲಸ್‌ನ ಕಥೆಯೂ ಇದಕ್ಕೆ ಸಮಾಂನಾಂತರವಾಗಿದೆ. ಈ ಪೌರಾಣಿಕ ಕಥೆಗಳು ಷೇಕ್ಸ್‌ಪಿಯರ್‌ನ ಟೈಟಸ್ ಆಂಡ್ರೋನಿಕಸ್ ‌ನಲ್ಲಿಯ ನರಭಕ್ಷಕತೆಯ ದೃಶ್ಯಕ್ಕೆ ಸ್ಫೂರ್ತಿ ಒದಗಿಸಿದವು. ಕ್ರಿಶ್ಚಿಯನ್ನರ ಸಂಪ್ರದಾಯದಲ್ಲಿ, ನರಭಕ್ಷಕತೆಯನ್ನು ಧಾರ್ಮಿಕ ಆಚರಣೆಗಳಲ್ಲಿ ಮತ್ತು ಯೂಖರಿಸ್ಟ್‌ನಲ್ಲಿ ಆರಂಭಿಸಿದರೆಂಬ (ಕೆಲವು ಸಾಂಕೇರಿಕ ಘಟನೆಗಳಲ್ಲಿ) ನಂಬಿಕೆಯಿದೆ. ಅನೇಕ ಪ್ರಾಟಿಸ್‌ಟೆಂಟ್‌ಗಳು, ಸಾಮಾನ್ಯವಾಗಿ, ಯೂಖೆರಿಸ್ಟ್‌ ಅನ್ನು ಸಾಂಕೇತಿಕವಾಗಿ ಭಾವಿಸುತ್ತಾರೆ, ಕ್ಯಾಥೋಲಿಕ್‌ಗಳು ಮತ್ತು ಕೆಲವು ಸಾಂಪ್ರದಾಯಿಕರು ಹೀಗೆ ಬೋಧಸುತ್ತಾರೆ, ಯೂಖೇರಿಸ್ಟ್‌ರು ವಾಸ್ತವಿಕರು, ನಂಬಿಕೆಯಿಂದ ಸತ್ವ ಪರಿವರ್ತನೆಯಿಂದ ಅಥವಾ ಧರ್ಮಕ್ರಿಯೆಯ ಸಂಘಟನೆಗಳಿಂದ. ಹಿಂದು ಪೌರಾಣಿಕತೆ ದುಷ್ಟ ಶಕ್ತಿಗಳನ್ನು "ಅಸುರ" ಅಥವಾ "ರಾಕ್ಷಸ" ಎಂದು ವರ್ಣಿಸುತ್ತಾರೆ, ಅವು ಅರಣ್ಯದಲ್ಲಿ ವಾಸಿಸುತ್ತವೆ ಮತ್ತು ವಿಪರೀತವಾದ ಹಿಂಸೆ ಮಾಡುತ್ತಾರೆ, ತಮ್ಮದೇ ಆದ ಜಾತಿಯವರನ್ನು ಕಬಳಿಸುತ್ತಾರೆ ಮತ್ತು ಅನೇಕ ದುಷ್ಟ ಅಲೌಕಿಕ ಶಕ್ತಿಯನ್ನು ಪಡೆದಿರುತ್ತಾರೆ. ಇವರೆಲ್ಲರೂ ಹಿಂದು "ದುಷ್ಟ ಶಕ್ತಿ"ಗೆ ಸಮಾನವಾದುದು ಮತ್ತು ನಿಜವಾದ ಅರಣ್ಯ-ವಾಸದ ಬುಡಕಟ್ಟುಗಳಿಗೆ ಸಂಬಂಧಿಸಿದವರಲ್ಲ. ವೆಂಡಿಗೊ (ವಿಂಡಿಗೊ , ವೀಂಡಿಗೊ , ವಿಂಡಾಗೊ , ವಿಂಡಿಗ , ವಿಟಿಕೊ , ವಿಹ್‌ಟಿಕೌ ಮತ್ತು ಬಹುಸಂಖ್ಯಾತ ಭಿನ್ನಗಳೂ ಕೂಡ ಇವೆ) ಎಂಬ ಜಂತುವು ಆಲ್ಗಾಂಕಿಯನ್ ಜನರ ಪೌರಾಣಿಕದಲ್ಲಿ ಕಂಡುಬರುತ್ತದೆ. ಬೇರೆಯವರಿಗೆ ಹಾನಿಯನ್ನುಂಟು ಮಾಡುವ ನರಭಕ್ಷಣೆಯ ಮನೋಭಾವದಲ್ಲಿ ಮನುಷ್ಯರು ಪರಿವರ್ತನೆಗೊಳ್ಳಬಹುದು ಅಥವಾ ಮನುಷ್ಯರನ್ನು ಹೊಂದಿದವನಾಗಿರಬಹುದು. ನರಭಕ್ಷಣೆಯಲ್ಲಿ ನಿರತನಾದವರು ನಿರ್ದಿಷ್ಟವಾದ ಅಪಾಯದಲ್ಲಿದ್ದರು, ಮತ್ತು ದಂತಕಥೆಗಳು ಈ ಆಚರಣೆಗಳನ್ನು ನಿಷೇಧವನ್ನು ಬಲಗೊಳಿಸಿವೆ. ಒಜಿಬ್ವೆ ಭಾಷೆಯಲ್ಲಿ (ಇಂಗ್ಲಿಷ್ ಪದದ ಮೂಲ) ವಿಂಡಿಗೂ , ಆಲ್ಗಾಂಕಿನ್ ಭಾಷೆಯಲ್ಲಿ ವಿಡಿಗೊ , ಮತ್ತು ಕ್ರೀ ಭಾಷೆಯಲ್ಲಿ ವಿಹಿಟಿಕೌ ; ಪ್ರೋಟೊ-ಆಲ್ಗಾಂಕಿನ್ ಭಾಷೆಯಲ್ಲಿ *ವಿ.ಎನ್‌ಟೆಕೊ.ವಾ , ಎಂದೂ, ಇವೆಲ್ಲವೂ ಬಹುಶಃ "ಗೂಬೆ" (ಔಲ್) ಎಂಬ ಮೂಲವಾದ ಅರ್ಥವಿರಬಹುದು. == ಸಾಂಸ್ಕೃತಿಕ ಅಪನಿಂದೆಯಂತೆ == ದೃಢಪಡಿಸದ ನರಭಕ್ಷಕತೆಯ ವರದಿಗಳು ಅಸಮಪ್ರಮಾಣದಲ್ಲಿ ನಿಕೃಷ್ಟವಾದ, ಭಯಗೊಂಡ ಅಥವಾ ಅಲ್ಪ ತಿಳಿದ ಸಂಸ್ಕೃತಿಗಳ ನಡುವೆ ನರಭಕ್ಷಕತೆ ಪ್ರಸಂಗಗಳನ್ನು ಸಂಬಂಧಿಸಿದೆ. ಪ್ರಾಚೀನ ಕಾಲದಲ್ಲಿ, ಗ್ರೀಕ್ ನರಭಕ್ಷಕತೆಯ ವರದಿಗಳು, (ಅನೇಕವೇಳೆ ಆಂಥ್ರೊಪೊಫೇಜಿ ಎಂದು ಇಂಥ ಸಂಧರ್ಭದಲ್ಲಿ) ದೂರದ ಹೆಲ್ಲೆನಿಕ್‌ರಲ್ಲದ ಅನಾಗರಿಕರಿಗೆ ಸಂಬಂಧಿಸಿದ್ದು, ಅಥವಾ ಗ್ರೀಕ್ ಪೌರಾಣಿಕತೆಯಿಂದ "ಆದಿಯುಗ"ದ ಚ್‌ಥೊನಿಕ್ ಪ್ರಪಂಚದ ಒಲಂಪಿಯನ್ನರ ದೇವರ ಬರುವ ಮೊದಲು ಹೊರಗಟ್ಟಿದರು: ಮಾನವ ಬಲಿದಾನವನ್ನು ಸ್ಪಷ್ಟವಾಗಿ ತಿರಸ್ಕೃತವಾದ ನರಭಕ್ಷಕ ಹಬ್ಬದೂಟವನ್ನು ಒಲಂಪಿಯನ್ನರಿಗಾಗಿ ಟಾಂಟಲಸ್ ಮಗ ಪೆಲಾಪ್ಸ್ ತಯಾರಿಸಿದನು. ಎಲ್ಲಾ ದಕ್ಷಿಣ ಸಮುದ್ರ ದ್ವೀಪಗಳವರು ಶತ್ರುಗಳ ವಿಷಯಕ್ಕೆ ಬಂದರೆ ನರಭಕ್ಷಕರು. 1820ರಲ್ಲಿ ವೇಲ್‌ಶಿಪ್ ಎಸ್ಸೆಕ್ಸ್ ಯಾವಾಗ ಒಂದು ತಿಮಿಂಗಿಲಕ್ಕೆ ಹೊಡೆದು, ಮುಳುಗಿತೋ, ಅದರ ನೌಕಾಧಿಪತಿಯು 1400 ಮೈಲಿ ಗಾಳಿ ಬೀಸುವ ದಿಕ್ಕಿನಲ್ಲಿ ಮಾರ್ಕೀಸಸ್‌ಗೆ ಹೋಗುವ ಬದಲು 3000 ಮೈಲಿಗಳಷ್ಟು ದೂರದ ಗಾಳಿಗೆ ಎದುರಾಗಿ ಚಿಲೆಗೆ ಹಾಯಿಸಲು ನಿಶ್ಚಯಿಸಿದನು, ಏಕೆಂದರೆ ಮಾರ್ಕೀಸನ್ನರು ನರಭಕ್ಷಕರೆಂದು ಕೇಳಲ್ಪಟ್ಟಿದ್ದನು. ವಿಡಂಬನೆಯೆಂದರೆ, ನೌಕಾಪಘಾತದಲ್ಲಿ ಬದುಕುಳಿದ ಅನೇಕರಲ್ಲಿ ನರಭಕ್ಷಕತೆಯನ್ನು ಬದುಕಲು ಆಶ್ರಯಿಸಿದರು. ಆದಾಗ್ಯೂ, ಹರ್ಮನ್ ಮೆಲ್‌ವಿಲ್‌ರವರು ಮಾರ್ಕೀಸನ್‌‌ನ ಟೈಪೀಗಳ (ಟೈಪಿ) ಜೊತೆ ಸುಖವಾಗಿ ಬದುಕಿದ್ದರು, ಈ ಬುಡಕಟ್ಟಿನವರು ದ್ವೀಪದಲ್ಲಿದ್ದ ಅತ್ಯಂತ ಅನೈತಿಕ ನರಭಕ್ಷಕ ಪಂಗಡಗಳಲ್ಲಿ ಒಬ್ಬರಾಗಿದ್ದರೆಂದು ವದಂತಿಯಾಗಿತ್ತು, ಆದರೆ ಇವರು ನರಭಕ್ಷಕತೆಯ ಪುರಾವೆಗಳಿಗೆ ಸಾಕ್ಷಿಯಾಗಿದ್ದರು. ತಮ್ಮ ಆತ್ಮಚರಿತ್ರೆಯ ಕಾದಂಬರಿಯಾದ ಟೈಪೀ ಯಲ್ಲಿ, ಕುಗ್ಗಿದ ತಲೆಗಳನ್ನು ನೋಡಿದುದನ್ನು ಮತ್ತು ವಿವಾದ ನಂತರ ಬುಡಕಟ್ಟಿನ ನಾಯಕರು ಔಪಚಾರಿಕವಾಗಿ ನೆರೆಹೊರೆಯ ಬುಡಕಟ್ಟಿನ ಯೋಧರ ಶವಗಳನ್ನು ತಿಂದುಹಾಪಿದರೆಂಬ ಬಲಿಷ್ಠವಾದ ಪುರಾವೆಗಳನ್ನು ಹೊಂದಿರುತ್ತಾರೆಂದು ವರದಿ ಮಾಡಿದ್ದಾರೆ. ವಿಲ್ಲಿಯಮ್ ಎರೆನ್ಸ್, ದಿ ಮ್ಯಾನ್-ಈಟಿಂಗ್ ಮಿತ್: ಆಂಥ್ರೊಪೊಲಜಿ ಅಂಡ್ ಆಂಥ್ರೊಪೊಫಜಿ ಯ ಲೇಖಕರು, ನರಭಕ್ಷಕತೆಯ ವರದಿಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಾರೆ ಮತ್ತು ಒಂದು ಗುಂಪಿನವರು ಇನ್ನೊಂದು ಗುಂಪಿನವರು ನರಭಕ್ಷಕರೆಂದು ವಿವರಣೆ ಕೊಡುವುದನ್ನು ಸಮಂಜಸ ಮತ್ತು ಪ್ರದರ್ಶನ ಸಾಧ್ಯ ಸಿಧ್ಧಾಂತವು ಮತ್ತು ಆಲಂಕಾರಿಕ ಸಾಧನವಾಗಿ ಸಾಂಸ್ಕೃತಿಕ ಮೇಲ್ಮೆ ಸಾಧಿಸಿಲು ಗ್ರಸಿಸುತ್ತಾರೆ ಎಂದು ವಿವಾದಿಸಿದ್ದಾರೆ. ಅನ್ವೇಷಕರು, ಮತಪ್ರಚಾರಕರು, ಮತ್ತು ಮಾನವಶಾಸ್ತ್ರಜ್ಞರು ಹೇಳಿದ ಅನೇಕ "ಅತಿಶ್ರೇಷ್ಠ"ವಾದ ಸಾಂಪ್ರದಾಯಕ ನರಭಕ್ಷಕತೆ ಘಟನೆಗಳ ವಿಸ್ತಾರವಾದ ವಿಶ್ಲೇಷಣೆಯ ಮೇಲೆ ಎರೆನ್ಸ್‌ರವರು ತಮ್ಮ ಮಹಾಪ್ರಬಂಧವನ್ನು ಆಧರಿಸಿದ್ದಾರೆ. ಅವರು ಕಂಡುಹಿಡಿದುದರಲ್ಲಿ, ಅನೇಕವುಗಳು ಅತಿಯಾದ ಜನಾಂಗಭೇದವಾಗಿದ್ದವು, ರುಜುವಾತು ಮಾಡದಂಥವುಗಳು, ಅಥವ ಎರಡನೆಯ ಅಥವ ಮೂರನೆಯ ಪುರಾವೆಗಳ ಆಧಾರದ ಮೇಲೆ ಇರುತ್ತಿದ್ದವು. ಬರಹಗಳನ್ನು ಜಾಲಾಡುವಾಗ, ಅವರಿಗೆ ಒಂದೂ ನಂಬಲಾರ್ಹ ಪ್ರತ್ಯಕ್ಷ ಸಾಖಿಗಳು ಸಿಗಲಿಲ್ಲ. ಮತ್ತು, ಹೀಗೆ ಸೂಚಿಸುತ್ತಾರೆ, ಬುಡಕಟ್ಟರಿಮೆಯ ಚೊಕ್ಕಮುದ್ರೆಯೇ ವಿವರಣೆಯ ಮೊದಲಿನ ವೀಕ್ಷಣಾಭ್ಯಾಸ. ಕೊನೆಯಲ್ಲಿ ಅವರು ಹೀಗೆ ಮುಗಿಸಿದರು, ನರಭಕ್ಷಕತೆಯು ವ್ಯಾಪಕವಾದ ಇತಿಹಾಸಪೂರ್ವದ ಅಭ್ಯಾಸವಾಗಿರಲಿಲ್ಲ; ಮಾನವಶಾಸ್ತ್ರಜ್ಞರು ಜವಾಬ್ದಾರಿಯುತ ಸಂಶೋಧನೆಯ ಮೇಲೆ ಆಧರಿಸದೆ ಸಂಸ್ಕೃತಿ-ನಿರ್ಧಾರಿತ ಪೂರ್ವಭಾವಿಯಾಗಿ ಕಲ್ಪಿಸಿದ, ಅನೇಕವೇಳೆ ಮರಳು ಮಾಡುವ ಅವಶ್ಯಕತೆಯಿಂದ ಪ್ರೇರೇಪಣೆ ಪಡೆದು ಬಹಳ ಬೇಗ ಪಂಗಡಗಳ ಮೇಲೆ ನರಭಕ್ಷಕತೆಯ ಪಟ್ಟಿ ಕಟ್ಟಲು ಮುಂದಾದರು. ಈ ಕುರಿತು ಅವನು ಹೀಗೆ ಬರೆದ: . ... , . ... - . ಎರೆನ್ಸ್ ಅವರ ಅನ್ವೇಷಣೆಗಳು ವಿವಾದಾಸ್ಪದವಾಗಿವೆ, ಮತ್ತು ವಸಾಹತುಗಾರರ ನಂತರದ ವಿಷ್ಲೇಷಣೆಯ ಉದಾಹರಣೆಯೆಂದು ಹೇಳುತ್ತಾರೆ. ಅವರ ವಿವಾದಗಳು ಹಲವುವೇಳೆ ಹೀಗೆ ತಪ್ಪಾಗಿ ವ್ಯಕ್ತಿಯ ಲಕ್ಷಣಗಳನ್ನು ಗುರುತಿಸುತ್ತಿದ್ದವು "ನರಭಕ್ಷಕರು ಇಲ್ಲ ಮತ್ತು ಯಾವತ್ತೂ ಅಸ್ತಿತ್ವದಲ್ಲಿರುವುದಿಲ್ಲ", ಪುಸ್ತಕದ ಕೊನೆಯಲ್ಲಿ ಹೆಚ್ಚು ಜವಾಬ್ದಾರಿಯುತ ಮತ್ತು ಮನುಷ್ಯಶಾಸ್ತ್ರದ ಸಂಶೋಧನೆಗೆ ಪ್ರತಿಫಲಿತ ಹಾದಿಯಲ್ಲಿ ನಡೆಸುತ್ತದೆ. ಯಾವುದೇ ಪ್ರಮಾಣದಲ್ಲಿ, ಪುಸ್ತಕವು ಯುಗದ ನರಭಕ್ಷಕತೆಯ ಬರಹಗಳನ್ನು ಕಠಿಣವಾದ ರೀತಿಯಲ್ಲಿ ಶೋಧಿಸಿ ದಾರೆ ತೋರಿಸಿದೆ. ಎರೆನ್ಸ್‌ರವರ ಆನಂತರದ ಪ್ರವೇಶದಿಂದ, ಕೆಲವು ನರಭಕ್ಷಕತೆಯ ಹೇಳಿಕೆಗಳು ಕಡಿಮೆಯಾದವು, ಉಳಿದವು ಹೆಚ್ಚು ಶಕ್ತಿಯುತವಾದವು. ವ್ಯತಿರಿಕ್ತವಾಗಿ, ಮೈಕೆಲ್ ಡಿ ಮಾಂಟೇನ್‌ರವರ ಪ್ರಬಂಧ "ನರಭಕ್ಷಕರ"ವು ಯೂರೋಪಿಯನ್ನರ ನಾಗರೀಕತೆಯಲ್ಲಿ ಹೊಸ ಬಹು ಸಂಸ್ಕೃತಿಗಳ ಮುಖ್ಯಾಂಶಗಳನ್ನು ಪರಿಚಯಿಸಿದರು. ಮಾಂಟೇನ್‌ ಅವರು ಹೀಗೆ ಬರೆದರು, "ಯಾರೇ ಆಗಲಿ ಯಾವುದು ರೂಢಿಯಾಗಿರುವುದಿಲ್ಲವೋ ಅದಕ್ಕೆ ’ಅಸಂಸ್ಕೃತ ವರ್ತನೆ’ ಎಂದು ಕರೆಯುತ್ತಾರೆ." ಆ ರೀತಿಯ ಶೀರ್ಷಿಕೆಯನ್ನು ಬಳಸಿ ಮತ್ತು ನ್ಯಾಯಸಮ್ಮತವಾದ ಸ್ವದೇಶೀ ಸಮಾಜವನ್ನು ವರ್ಣಿಸಿ, ಮಾಂಟೇನ್‌ ಅವರು ತಮ್ಮ ಪ್ರಬಂಧಗಳನ್ನು ಓದುವ ಓದುಗರಲ್ಲಿ ಅಚ್ಚರಿ ಮೂಡಿಸಲು ಆಶಿಸಿದ್ದರೆಂದು ಕಾಣುತ್ತದೆ. == ಹೇಳಿಕೆಗಳು == ಆಧುನಿಕ ಮನುಷ್ಯರಲ್ಲಿ ಅನೇಕ ವಿವಿಧ ಪಂಗಡಗಳಲ್ಲಿ ಇದರ ಆಚರಣೆಯಾಗಿದೆ. ಹಿಂದಿನ ಕಾಲದಲ್ಲಿ, ಯೂರೋಪ್ ಅಲ್ಲಿರುವ ಮನುಷ್ಯರು ಇದನ್ನು ಆಚರಿಸಿದ್ದಾರೆ, ದಕ್ಷಿಣ ಅಮೇರಿಕ, ಉತ್ತರ ಅಮೇರಿಕದಲ್ಲಿರುವ ಇರೋಕ್ವಿಯೆನ್ ಜನಗಳ ನಡುವೆ, ಇಂಡಿಯ, ಕ್ಯಾಲಿಫೊರ್ನಿಯ, ನ್ಯೂಝಿಲ್ಯಾಂಡ್, ಸೊಲೊಮನ್ ದ್ವೀಪಗಳು, ಪಶ್ಚಿಮ ಆಫ್ರಿಕ ಭಾಗಗಳು, ಮತ್ತು ಮಧ್ಯ ಆಫ್ರಿಕ, ಪೊಲಿನೇಶಿಯದ ಕೆಲವು ದ್ವೀಪಗಳು, ನ್ಯೂ ಗಿನ್ನೀ, ಸುಮಾತ್ರ, ಮತ್ತು ಫಿಜಿ, ನರಭಕ್ಷಕತೆಯ ಸಾಕ್ಷಿಗಳು ಉತ್ತರ ಅಮೇರಿಕದ ಅನಸಾಜ಼ಿ ಸಂಸ್ಕೃತಿಯ ಚಾಕೊ ಕಾನ್ಯನ್ ಅವಶೇಷದಲ್ಲಿ ಕಂಡು ಬಂದಿವೆ. === ಇತಿಹಾಸ-ಪೂರ್ವ === ಕೆಲವು ಮಾನವ ಶಾಸ್ತ್ರಜ್ಞರು, ಟಿಮ್ ವೈಟ್ ಅಂಥವರು, ಅಪ್ಪರ್ ಪೇಲಿಯೋಲಿಥಿಕ್ ಸಮಯದ ಮುಂಚೆಯೇ ನರಭಕ್ಷಕತೆಯು ಮಾನವ ಸಮುದಾಯಗಳಲ್ಲಿ ಸಾಮಾನ್ಯವಾಗಿತ್ತು ಎಂದು ಸೂಚಿಸುತ್ತಾರೆ. ನಿಯಾಂಡರ್ಥಲ್ ಮತ್ತು ಬೇರೆ ಲೋಯರ್/ಮಿಡಲ್ ಪೇಲಿಯೋಲಿಥಿಕ್ ಸ್ಥಳಗಳಲ್ಲಿ ಸಿಕ್ಕ ಬಹು ಪ್ರಮಾಣದ "ಕಸಾಯಿಯಾದ ಮನುಷ್ಯರ" ಮೂಳೆಗಳು ದೊರೆತಿರುವುದರ ಮೇಲೆ ಈ ಸಿಧ್ಧಾಂತವು ಆಧಾರವಾಗಿದೆ. ಆಹಾರದ ಕೊರತೆಯಿಂದ ಲೋಯರ್ ಮತ್ತು ಮಿಡಲ್ ಪೇಲಿಯೋಲಿಥಿಕ್ ಸ್ಥಳಗಳಲ್ಲಿ ನರಭಕ್ಷಕತೆಯು ಕಂಡುಬಂದಿರಬಹುದು. ಒಂದು ಐತಿಹಾಸಿಕ ಹೇಳಿಕೆಯ ಪ್ರಕಾರ, ಆಸ್ಟ್ರೇಲಿಯಾದ ಮೂಲನಿವಾಸಿ ಬುಡಕಟ್ಟಿನವರು ಖಂಡಿತವಾಗಿಯೂ ನರಭಕ್ಷಕರಾಗಿದ್ದರು, ಹೋರಾಟದಲ್ಲಿ ಮಡಿದ ಜನಗಳನ್ನು ತಿನ್ನುವುದರಲ್ಲಿ ವಿಫಲರಾಗಿತ್ತಿರಲಿಲ್ಲ ಮತ್ತು ಯಾವಾಗಲೂ ತಿನ್ನುವ ಗಂಡಸರು ಹೋರಾಡುವ ಸಾಮರ್ಥ್ಯವುಳ್ಳವರು ಸ್ವಾಭಾವಿಕ ಸಾವನ್ನು ಕಂಡರು. "...ಅನುಕಂಪದಿಂದ ಮತ್ತು ಶರೀರವನ್ನು ಪರಿಗಣಿಸಿ - ಅವರು ತಿಳಿದಿದ್ದರು ಅವನು - ’ಅವನು ದುರ್ಗಂಧ ಹೊಡೆಯುದಿಲ್ಲವೆಂದು!’ " === ಮುಂಚಿನ ಇತಿಹಾಸ === ಮುಂಚಿನ ಇತಿಹಾಸ ಮತ್ತು ಸಾಹಿತ್ಯದಲ್ಲಿ ನರಭಕ್ಷಕತೆಯನ್ನು ಅನೇಕ ವೇಳೆಯಲ್ಲಿ ಉಲ್ಲೇಖಿಸಲಾಗಿದೆ. ಸಮರಿಯ (2 ರಾಜರು 6:25–30) ಮುತ್ತಿಗೆಯ ಸಮಯದಲ್ಲಿ ಇದರ ಬಗ್ಗೆ ಬೈಬಲ್‌ನಲ್ಲಿ ವರದಿಯಾಗಿದೆ. ಇಬ್ಬರು ಹೆಂಗಸರು ತಮ್ಮ ಮಕ್ಕಳನ್ನು ತಿನ್ನಲು ಒಪ್ಪಂದ ಮಾಡಿಕೊಂಡರು; ಮೊದಲನೇ ತಾಯಿಯು ತನ್ನ ಮಗುವನ್ನು ಬೇಯಿಸಿದಳು, ಎರಡನೇ ತಾಯಿಯು ಅದನ್ನು ತಿಂದಳು ಆದರೆ ಅದನ್ನೇ ಪ್ರತಿಯಾಗಿ ತನ್ನ ಮಗುವನ್ನು ಬೇಯಿಸುವುದಕ್ಕೆ ತಿರಸ್ಕರಿಸಿದಳು. 70 ಎ.ಡಿ. ಯಲ್ಲಿ ರೋಮ್‌ನವರಿಂದ ಜೆರುಸಲೇಮ್ ಆಕ್ರಮಣಗೊಂಡಾಗ ಇದನ್ನೇ ಹೋಲುವ ಕಥೆಯನ್ನು ಫ್ಲೇವಿಯಸ್ ಜೋಸೆಫಸ್ ವರದಿಮಾಡಿದ್ದಾರೆ, ಮತ್ತು ಎರಡನೇ ದಶಕ ಬಿ.ಸಿ.ಯಲ್ಲಿ ರೋಮನ್ನರಿಂದ ನುಮಾಂಟಿಯದ ಆಕ್ರಮಣವಾದಾಗ ಇದರ ಜನಸಂಖ್ಯೆಯು ನರಭಕ್ಷಕತೆ ಮತ್ತು ಆತ್ಮಹತ್ಯೆಗಳಿಂದ ಕಡಿಮೆಯಾಯಿತು. ನೈಲ್ ನದಿಯು ಎಂಟು ವರ್ಷಗಳ (1073-1064 ಬಿ.ಸಿ) ಕಾಲ ಪ್ರವಾಹವಾಗಲು ವೈಫಲ್ಯಗೊಂಡಿದ್ದರಿಂದ ಈಜಿಪ್ಟ್ ಬರಗಾಲಕ್ಕೆ ತುತ್ತಾಯಿತು, ಆಗ ನಡೆದ ನರಭಕ್ಷಕತೆಯ ಬಗ್ಗೆ ಸಮರ್ಪಕವಾಗಿ ದಾಖವಾಗಿದೆ. ಆಧುನಿಕ ಕಾಲದಲ್ಲಿ, ನರಭಕ್ಷಕತೆ ವರದಿಗಳನ್ನು ಹಲವುಬಾರಿ ಎರಡನೇ ಮತ್ತು ಮೂರನೇ ವ್ಯಕ್ತಿಗಳಿಂದ ಕೇಳಿದ ಕಲ್ಪಿತ ಕಥೆಗಳಾಗಿ ಹೇಳಲ್ಪಟ್ಟಿದೆ, ವ್ಯಾಪಕವಾಗಿ ವಿವಿಧ ಮಟ್ಟಗಳ ನಿಖರತೆಗಳಲ್ಲಿ. ಸೆಂಟ್. ಜೆರೋಮ್ ಅವರು ತಮ್ಮ ಪತ್ರ ಎಗೇನ್ಸ್ಟ್ ಜೋವಿನಿಯಾನಸ್ ಎಂಬುದರಲ್ಲಿ ಮನುಷ್ಯರು ಅವರ ಪರಂಪರೆಯ ಪರಿಣಾಮದಿಂದ ಹೇಗೆ ಪ್ರಸ್ತುತ ಸ್ಥಿತಿಗೆ ಬರುತ್ತಾರೆ ಎಂಬುದನ್ನು ಚರ್ಚಿಸಿದ್ದಾರೆ, ಮತ್ತು ಆಮೇಲೆ ಅನೇಕ ಮಂದಿಯ ಮತ್ತು ಅವರ ಸಂಪ್ರದಾಯಗಳ ಉದಾಹರಣೆಗಳಿಂದ ಒಂದು ಪಟ್ಟಿಯನ್ನೇ ಕೊಟ್ಟಿರುತ್ತಾನೆ. ಪಟ್ಟಿಯಲ್ಲಿ, ಅವರು ಏನು ಕೇಳಿದ್ದಾರೋ ಅದನ್ನು ಬರೆದಿದ್ದಾರೆ, ಅವೆಂದರೆ, ಅಟ್ಟಿಕೋಟಿ ಮನುಷ್ಯರ ಮಾಂಸವನ್ನು ತಿಂದ ಮತ್ತು ಮಸ್ಸಗೆಟೆ ಮತ್ತು ಡರ್ಬಿಸಸ್ (ಇಂಡಿಯಾದ ಗಡಿಯಲ್ಲಿದ್ದ ಜನಗಳು) ವಯಸ್ಸಾದ ಜನರನ್ನು ಕೊಂದು, ತಿನ್ನುತ್ತಾರೆ. (---ಟಿಬರೆನಿಗಳು ತಾವು ಪ್ರೀತಿಸಿರುವವರು ವೃಧ್ಧರಾದಾಗ ಅವರನ್ನು ಶಿಲುಬೆಗೇರಿಸುತ್ತಿದ್ದರು---).; ಇದು ಸೆಂಟ್. ಜೆರೋಮ್‌ರವರು ವದಂತಿಗಳ ಆಧಾರದ ಮೇಲೆ ಬರೆದಿರುತ್ತಾರೆಂಬ ಸಾಧ್ಯತೆಯನ್ನು ತೋರಿಸುತ್ತದೆ ಮತ್ತು ಸನ್ನಿವೇಶಗಳನ್ನು ನಿಖರವಾಗಿ ನಿರೂಪಿಸುವುದಿಲ್ಲ. ಪುರಾತನ ಕಾಲದಲ್ಲಿ ನರಭಕ್ಷಕತೆ ಪುರಾವೆಗಳನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. 2001ರಲ್ಲಿ, ಬ್ರಿಸ್ಟಲ್ ಯೂನಿವರ್ಸಿಟಿಯಲ್ಲಿ ಪ್ರಾಕ್ತನ ವಿಮರ್ಶಕರು ಗ್ಲೋಸೆಸ್ಟರ್‌ಶೈರ್‌ನಲ್ಲಿ ನಡೆದ ಕಬ್ಬಿಣ ಯುಗದ ನರಭಕ್ಷಕತೆಯ ಪುರಾವೆಗಳನ್ನು ಪತ್ತೆ ಮಾಡಿದ್ದಾರೆ. ಗ್ರೇಟ್ ಬ್ರಿಟನ್‌ನಲ್ಲಿ ನರಭಕ್ಷಕತೆಯು ಇತ್ತೀಚಿನ ೨೦೦೦ ವರ್ಷಗಳ ಹಿಂದೆಯೂ ಆಚರಣೆಯಲ್ಲಿತ್ತು. ಜರ್ಮನಿಯಲ್ಲಿ, ಎಮಿಲ್ ಕಾರ್ಟಾಸ್ ಮತ್ತು ಡಾ. ಬ್ರೂನೊ ಬರ್ನ್‌ಹಾರ್ಡ್ ಅವರುಗಳು 1,891 ನರಭಕ್ಷಕತೆ ಸಂಕೇತಗಳನ್ನು ಹಾನ್ನೆ (1000 - 700 ಬಿ.ಸಿ) ಗುಹೆಗಳಲ್ಲಿ ಗಮನಿಸಿದ್ದಾರೆ. === ಮಧ್ಯಕಾಲೀನ ಯುಗ === 7ನೇ ಶತಕದಲ್ಲಿ ನಡೆದ ಮುಸ್ಲಿಮ್-ಖೂರೇಸ್ ಯುಧ್ಧಗಳಲ್ಲಿ ನರಭಕ್ಷಕತೆಯ ಪ್ರಸಂಗಗಳು ವರದಿಯಾಗಿವೆ. 625ರಲ್ಲಿ ಉಹುದ್ ಯುಧ್ಧದ ನಂತರ, ಹಂಜಾ ಇಬ್ನ್ ಅಬ್ದು ಐ-ಮುತ್ತಾಲಿಬ್‌ನನ್ನು ಕೊಂದಾದ ಮೇಲೆ, ಅವನ ಪಿತ್ತಜನಕಾಂಗವನ್ನು ಹಿಂದ್ ಬಿಂಟ್ ಉತ್ಬಾ, ಅವನ ಹೆಂಡತಿಯಾದ ಅಬು ಸುಫ್ಯಾನ್ ಇಬ್ನ್ ಹರ್ಬ್ (ಖುರೇಸ್ ಸೈನ್ಯದ ಮುಖಂಡರೊಲ್ಲಬ್ಬರಾದ) ಅವರು ತಿಂದರೆಂದು ಹೇಳಲಾಗುತ್ತದೆ. ಅವಳು ನಂತರ ಇಸ್ಲಾಮ್‌ಗೆ ಮತಾಂತರಗೊಂಡರೂ, ಮತ್ತು ಮುಅವಿಯಾನ ತಾಯಿಯಾನ ತಾಯಿಯಾಗಿದ್ದರು, ಇವರು ಇಸ್ಲಾಮಿಕ್ ಉಮಯ್ಯಾದ್ ಕಾಲಿಫಟೆಯ ನಿರ್ಮಾಪಕರಾಗಿದ್ದರು, ಮುಅವಿಯಾರವರು ಆಮೇಲಿನ ದಿನಗಳಲ್ಲಿ ಅಪನಿಂದೆಗೆ ಒಳಗಾಗಿ ಸ್ವೀಕರಿಸಲಾರದ ನಾಯಕರಾದರು ಮತ್ತು ನರಭಕ್ಷಕರ ಮಗನಾದರು. ಮೊದಲನೇ ಧರ್ಮಯುಧ್ಧದ ಸಮಯದಲ್ಲಿ ನರಭಕ್ಷಕತೆಯ ವರದಿಗಳು ದಾಖಲಾಗಿವೆ, ಮರ್ರಾತ್ ಅಲ್-ನುಮಾನ್‌ನ ಆಕ್ರಮಣದ ನಂತರ ಚಳುವಳಿಗಾರರು ಎದುರಾಳಿಗಳ ಮೃತ ದೇಹಗಳನ್ನು ಆಹಾರವಾಗಿಸಿಕೊಂಡರು. ಚಳುವಳಿಗಾರರು ಅಂಥಹ ಪರಸಂಗಗಳನ್ನು ಮಾನಸಿಕ ಕದನದ ಅಂಶವಾಗಿ ಪ್ರದರ್ಶಿಸಿರಬಹುದು ಎಂಬ ಸಾಧ್ಯತೆ ಕಂಡುಬರುತ್ತದೆ. ಜೆರೂಸಲೆಮ್‌ಗೆ ಮಾಡಿದ ಮೆರವಣಿಗೆಯಲ್ಲಿ ನಡೆದ ನರಭಕ್ಷಕತೆಯ ಬಗ್ಗೆ ಅಮಿನ್ ಮಾಲೋಫ್ ಅವರು ಚರ್ಚಿಸುತ್ತಾರೆ, ಮತ್ತು ಪಶ್ಚಿಮದ ಇತಿಹಾಸದಿಂದ ಈ ಉಲ್ಲೇಖಗಳನ್ನು ಅಳಿಸಿ ಹಾಕಿ ಬಿಡುವ ಯತ್ನಗಳು. ಹಂಗರಿ (ಪವಿತ್ರ ನಾಡನ್ನು ತಲುಪಲು ಇದರ ಮೂಲಕ ಚಳುವಳಿಗಾರ ಪ್ರಯಾಣ ಮಾಡಿದರು) ನಿವಾಸಿಗಳೂ ನರಭಕ್ಷಕರು ಎಂದು ವರದಿಯಾಗಿದೆ, ಆದಾಗ್ಯೂ ಇದು ಬಹುಶಃ ಸುಳ್ಳು, 10ನೇ ಶತಕದಲ್ಲಿ ಹಂಗರಿಯನ್ನರು ಆಗತಾನೆ ವಿಗ್ರಹಾರಾಧನೆಯಿಂದ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡಿದ್ದರು. ವಾಸ್ತವವಾಗಿ, ಹಂಗೇರಿಯನ್‌ನ ಫ್ರೆಂಚ್ ಪದ, ಹೊಂಗ್ರೆ, ಇಂಗ್ಲಿಷ್ ಪದ ಓಗರ್‌ನ ಮೂಲವಿರಬಹುದು .' [[ಯೂರೋಪ್‌ನ 1315–1317 ರಲ್ಲಿ ಅಸಾಧಾರಣ ಬರಗಾಲದ ಸಮಯದಲ್ಲಿ ಹಸಿವಿನಿಂದ ಸಾಯುತ್ತಿರುವ ಜನಗಳ ನಡುವೆ ನರಭಕ್ಷಕತೆಯ ಅನೇಕ ವರದಿಗಳಿದ್ದವು.]] ಉತ್ತರ ಅಮೇರಿಕದಲ್ಲಿ, ಯೂರೋಪ‌ನಲ್ಲಿ ಆದಂತೆ, ಬರಗಾಲದ ಸಮಯದಲ್ಲಿ ಕೊನೆಯ ಆಶ್ರಯದಂತೆ ನರಭಕ್ಷಕತೆಗೆ ಮೊರೆಹೋದ ಉಲ್ಲೇಖಗಳಿವೆ. ಆಫ್ರಿಕಾದ ರಾಜನು ಹತ್ತಿರದಲ್ಲಿರುವ ಎಲ್ಲಾ ಜನರು ನರಭಕ್ಷಕರೆಂದು ಮುಸ್ಲಿಮ್ ಅನ್ವೇಷಕ ಇಬ್ನ್ ಬಟುಟ್ಟ ಅವರಿಗೆ ಸಲಹೆ ನೀಡಿದರೆಂದು ವರದಿ ಮಾಡಿದರು (ರಾಜನು ತನ್ನ ಅತಿಥಿಯಾದ ಇಬ್ನ್ ಬಟುಟ್ಟ ಅವರನ್ನು ಗೊಂದಲಗೊಳಿಸಲು ಮಾಡಿರುವ ಕುಚೇಷ್ಠೆಯಿರಬಹುದು). ಬಹಳ ಸ್ವಲ್ಪ ಕಾಲದವರೆಗೆ ಯೂರೋಪ್‌ನಲ್ಲಿ, ಅಸಾಮಾನ್ಯವಾದ ನರಭಕ್ಷಕತೆಯ ರೀತಿಯು ಕಂಡುಬಂದಿತು, ಅದೇನೆಂದರೆ, ಡಾಂಬರುಗಳಲ್ಲಿದ್ದ ಸಾವಿರಾರು ಈಜಿಪ್ಟ್‌ನ ರಕ್ಷಿತ ಶವಗಳನ್ನು ಅಗೆದು ತೆಗೆದಿಡಲಾಯಿತು ಮತ್ತು ಔಷಧವೆಂದು ಮಾರಲಾಯಿತು. ಈ ಆಚರಣೆಯ 16ನೇ ಶತಕದಲ್ಲಿ ವ್ಯಾಪಾರವು ವ್ಯಾಪಕವಾದ ಮಟ್ಟದಲ್ಲಿ ವೃಧ್ಧಿಗೊಂಡಿತು. ಇಂಥಹ "ಗೀಳು" ಮುಗಿಯಿತು ಏಕೆಂದರೆ ರಕ್ಷಿತ ಶವಗಳು ಇತ್ತೀಚೆಗೆ ಕೊಂದ ಜೀತದಾಳುಗಳದ್ದೆಂದು ತಿಳಿದು ಬಂದಿತು. ಎರಡು ಶತಕಗಳ ಹಿಂದೆ, ರಕ್ಷಿತ ಶವಗಳು ರಕ್ತಸ್ರಾವ ವಿರುಧ್ಧ ಔಷದೀಯ ಗುಣಗಳನ್ನು ಹೊಂದಿವೆಯೆಂಬ ನಂಬಿಕೆಯಿತ್ತು, ಮತ್ತು ಅವುಗಳನ್ನು ಔಷದೀಯಗಳೆಂದು ಪುಡಿಯ ರೂಪದಲ್ಲಿ ಮಾರಾಟಮಾಡುತ್ತಿದ್ದರು (ರಕ್ಷಿತ ಮಾನವ ಶವದ ಮಿಶ್ರಣ ನೋಡಿ). ಚೈನಾವನ್ನು ಯಾವಾಗ ನಿಯಂತ್ರಿಸಿದರೋ, ಆಗ ಶತ್ರುವನ್ನು ನರಭಕ್ಷಣೆ ಮಾಡುತ್ತಿರುವ ಉಲ್ಲೇಖವೂ ಸಾಂಗ್ ಡೈನಾಸ್ಟಿಯ ಕಾವ್ಯದಲ್ಲಿದೆ, ಆದರೂ ನರಭಕ್ಷಿಸುತ್ತಿರುವುದು ಪ್ರಾಯಷಃ ಕಾವ್ಯದ ಒಂದು ಸಂಕೇತ, ಶತ್ರುವಿನ ವಿರುಧ್ಧ ಇರುವ ಹಗೆ ವ್ಯಕ್ತಪಡಿಸುವುದು (ಮನ್ ಜಿಯಾಂಗ್ ಹಾಂಗ್ ಅನ್ನು ನೋಡಿ). ಕೆಲವು ಮೆಸೋಮೆರಿಕನ್ ಜನಗಳು ಮಾನವ ಬಲಿದಾನ ಮಾಡುತ್ತಿದ್ದರೆಂಬುದು ವಿಶ್ವವ್ಯಾಪಿ ಸಮ್ಮತವಾಗಿದೆ, ಕೊಲಂಬಿಯ-ಪೂರ್ವದ ಅಮೇರಿಕದಲ್ಲಿ ನರಭಕ್ಷಕತೆ ವ್ಯಾಪಕವಾಗಿತ್ತೋ ಇಲ್ಲವೋ ಎಂಬುದಕ್ಕೆ ಪಂಡಿತರ ಒಮ್ಮತದ ಕೊರತೆಯಿದೆ. ಒಂದು ವೈಪರೀತ್ಯದಂತೆ, ಮಾನವಶಾಸ್ತ್ರಜ್ಞ ಮಾರ್ವಿನ್ ಹ್ಯಾರಿಸ್, ಅವರು ಬರೆದ ಕ್ಯಾನ್ನಿಬಾಲ್ಸ್ ಅಂಡ್ ಕಿಂಗ್ಸ್ ಪುಸ್ತಕದಲ್ಲಿ, ಬಲಿಯ ಮಾಂಸವು ಸಿರಿವಂತನ ಪಥ್ಯದ ಅಂಶ ಪುರಸ್ಕಾರದಂತೆ ಎಂದು ಸಲಹೆ ಮಾಡಿದ್ದಾರೆ, ಆಝ್‌ಟೆಕ್ ಪಥ್ಯದಲ್ಲಿ ಸಸಾರಜನಕ ಆಹಾರ ಪದಾರ್ಥಗಳ ಕೊರತೆಯಿದ್ದುದರಿಂದ. ಅನೇಕ ಕೊಲಂಬಿಯನ್-ಪೂರ್ವದ ಐತಿಹಾಸಿಕ ತಜ್ಞರು ನರಭಕ್ಷಕತೆಯ ಕ್ರಿಯಾವಿಧಿಯು ಮಾನವ ಬಲಿದಾನಕ್ಕೆ ಸಂಬಂಧಿಸಿತ್ತೆಂದು ನಂಬಿದ್ದರು, ಆದರೆ ಅವರುಗಳು ಮನುಷ್ಯನ ಮಾಂಸವು ಆಝ್‌ಟೆಕ್ ಪಥ್ಯದಲ್ಲಿ ಮಹತ್ವವುಳ್ಳದ್ದಾಗಿತ್ತೆನ್ನುವ ಹ್ಯಾರಿಸ್‌ನ ಮಹಾಪ್ರಬಂಧಕ್ಕೆ ಬೆಂಬಲ ಕೊಡಲಿಲ್ಲ. ಇತರರು ನರಭಕ್ಷಕತೆಯು ಕದನದಲ್ಲಿ ರಕ್ತದ ಸೇಡು ತೀರಿಸಿಕೊಳ್ಳುವುದರ ಭಾಗ ಎಂದು ಊಹೆ ಮಾಡಿಕೊಂಡಿದ್ದಾರೆ. === ಮುಂಚಿನ ಆಧುನಿಕ ಯುಗ === ಯುರೋಪಿಯನ್ ಅನ್ವೇಶಕರು ಮತ್ತು ವಸಾಹತುಗಾರರು ತಾವು ಭೇಟಿಯಾದ ಅನೇಕ ಸ್ಥಳೀಯ ಜನರ ನರಭಕ್ಷಕತೆ ಆಚರಣೆಗಳ ಕಥೆಗಳನ್ನು ಮನೆಗೆ ತಂದರು. ಭಿಕ್ಷು ಡೀಗೊ ಡಿ ಲಾಂಡ ಯೂಕಟಾನ್ ನಿದರ್ಶನಗಳ ಬಗ್ಗೆ ವರದಿ ಮಾಡಿದನು, ಯೂಕಟಾನ್ ಬಿಫೋರ್ ಅಂಡ್ ಆಫ್ಟರ್ ದಿ ಕಾಂಕ್ವೆಸ್ಟ್ , ರಿಲೇಶನ್ ಡಿ ಲಾಸ್ ಕೊಸಾಸ್ ಡಿ ಯೂಕಟಾನ್ ನಿಂದ ಭಾಷಾಂತರಗೊಳಿಸಿದ್ದು, 1566 (ನ್ಯೂ ಯಾರ್ಕ್: ಡೊವರ್ ಪ್ರಕಾಶನ, 1978: 4), ಕೊಲಂಬಿಯಾದ ಪಪಾಯಾನ್‌ದಲ್ಲಿರುವ ಪರ್ಕಾಸ್ ಅವರೂ ಕೂಡ ಇದೇ ರೀತಿಯ ವರದಿ ಮಾಡಿದ್ದಾರೆ, ಮತ್ತು ಪಾಲಿನೇಶಿಯದ ಮಾರ್ಕಿಸಸ್ ದ್ವೀಪಗಳಿಂದ, ಅಲ್ಲಿ ಮಾನವ ಮಾಂಸವನ್ನು ಉದ್ದದ ಹಂದಿ ಎಂದು ಕರೆಯುತ್ತಿದ್ದರು (ಅಲನ್ನ ಕಿಂಗ್, ಇಡಿ., ರಾಬರ್ಟ್ ಲೂಯಿ ಸ್ಟೀವನ್ಸನ್ ಇನ್ ದಿ ಸೌತ್ ಸೀಸ್ , ಲಂಡನ್: ಲ್ಯೂಝಾಕ್ ಪಾರಗಾನ್ ಹೌಸ್, 1987: 45–50). ಬ್ರೆಝಿಲ್‌ನಲ್ಲಿನ ಸ್ಥಳೀಯರ ಸರ್ಜೈಪ್ ನಾಯಕತ್ವದ ಬಗ್ಗೆ ದಾಖಲಿಸಿದ್ದಾರೆ, "ಅವರು ಸಿಕ್ಕಾಗ ಮನುಷ್ಯರ ಮಾಂಸವನ್ನು ತಿನ್ನುತ್ತಾರೆ, ಮತ್ತು ಒಬ್ಬ ಮಹಿಳೆಯ ಗರ್ಭಪಾತವಾದಾಗ ಅದನ್ನು ತಕ್ಷಣವೇ ತಿನ್ನುತ್ತಾಳೆ. ಸಮಯ ಮೀರಿಹೋದಲ್ಲಿ, ಅವಳು ತನ್ನ ನಾಭಿಯ ದಾರವನ್ನು ಚಿಪ್ಪಿನಿಂದ ಕತ್ತರಿಸಿ, ಅದನ್ನು ಅಂಡಧಾರಕದ ಜೊತೆ ಬೇಯಿಸಿ, ಎರಡನ್ನೂ ತಿನ್ನುತ್ತಾಳೆ.'" ಟೆಕ್ಸಾಸ್‌ ಬುಡಕಟ್ಟು ಜನಾಂಗದವರ ನಡುವೆಯ ನರಭಕ್ಷಕತೆಯನ್ನು ಹಲವುಬಾರಿ ಕರಂಕವ ಮತ್ತು ಟೊಂಕವ ಅವರಿಗೆ ಅನ್ವಯಿಸುತ್ತದೆ ಎಂದು ವರದಿಗಳು ಹೇಳುತ್ತವೆ. ನರಭಕ್ಷಕರಾಗಿದ್ದರೂ, ಉಗ್ರರಾದ ಟೊಂಕವಗಳು ಬಿಳಿ ಟೆಕ್ಸಾಸ್ ವಸತಿದಾರರ ಜೊತೆ ವಿಶೇಷವಾಗಿ ಸ್ನೇಹಿತರಾಗಿದ್ದರು, ಅವರಿಗೆ ಅವರ ಶತ್ರುಗಳ ವಿರುಧ್ಧ ಸಹಾಯ ಮಾಡುತ್ತಿದ್ದರು. ಉತ್ತರ ಅಮೇರಿಕದ ಬುಡಕಟ್ಟು ಜನಾಂಗದ ನಡುವೆ ಕೆಲ ರೀತಿಯಲ್ಲಿ ಆಚರಿಸಿದ ನರಭಕ್ಷಕತೆಯನ್ನು ಮಾಂಟಾಗ್ನಾಯಿಸ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಮತ್ತು ಕೆಲವು ಬುಡಕಟ್ಟಿನವರಾದ ಮೈನ್, ಅಲ್ಗಾಂಕಿನ್, ಆರ್ಮೊಖಿಕಿಸ್, ಐರೋಖಿಸ್, ಮತ್ತು ಮಿಕ್‌ಮಾಕ್; ಪಶ್ಚಿಮದಿಂದ ದೂರದ ಆಸ್ಸಿನಿಬೊಯಿನ್, ಕ್ರೀ, ಫಾಕ್ಸಸ್, ಚಿಪ್ಪೆವ, ಮಯಾಮಿ, ಒಟ್ಟಾವ, ಕಿಕಪೂ, ಇಲ್ಲಿನೊಯ್, ಸಿಯೊಕ್ಸ್, ಮತ್ತು ವಿನ್ನೆಬಾಗೊ; ಜನರು ದಿಣ್ಣೆಯನ್ನು ಕಟ್ಟಿದರು ದಕ್ಷಿಣದಲ್ಲಿ ಫ್ಲೋರಿಡ, ಮತ್ತು ಟೊಂಕವ, ಅಟ್ಟಕಾಪ, ಕರಂಕವ, ಕಾಡ್ಡೊ, ಮತ್ತು ಕೊಮಾಂಖ್ (?); ವಾಯುವ್ಯ ಮತ್ತು ಪಶ್ಚಿಮದಲ್ಲಿ, ಖಂಡದ ಭಾಗಗಳಾದ, ತ್ಲಿಂಗ್ಚಾಡಿನೆ ಮತ್ತು ಬೇರೆ ಅಥಾಪಸ್ಕಾನ್ ಬುಡಕಟ್ಟಿನವರು, ಟ್ಲಿನ್ಗಿಟ್, ಹೀಲ್ಟ್ಸುಕ್, ಕ್ವಾಕಿಟಿಲ್, ಸಿಮ್ಶಿಯನ್, ನೂಟ್ಕ, ಸಿಕ್ಸಿಕ, ಕೆಲವು ಕ್ಯಾಲಿಫೋರ್ನಿಯ ಬುಡಕಟ್ಟಿನವರು, ಮತ್ತು ಉಟೆ. ಸಂಪ್ರದಾಯದ ಅಭ್ಯಾಸವು ಹೋಪಿಗಳ ನಡುವೆ ಮತ್ತು ನ್ಯೂ ಮೆಕ್ಸಿಕೊ ಮತ್ತು ಅರಿಝೋನ ಬುಡಕಟ್ಟಿನವರ ನಡುವೆ ಈ ಪಧ್ಧತಿಗಳ ಉಲ್ಲೇಖವಿದೆ. ಮೋಹಾಕ್, ಮತ್ತು ಅಟ್ಟಕಾಪ, ಟೊಂಕವ, ಮತ್ತು ಟೆಕ್ಸಾಸ್‌ನ ಇತರೆ ಬುಡಕಟ್ಟಿನವರು ತಮ್ಮ ನೆರೆಹೊರೆಯವರಿಗೆ "ನರ-ಭಕ್ಷಕ" ಎಂದು ಪರಿಚಿತರಾಗಿದ್ದರು. ಸ್ಥಳೀಯ ನರಭಕ್ಷಕತೆಯ ಅತ್ಯಂತ ಭಯಂಕರ ಕಥೆಗಳಂತೆ, ಈ ಕಥೆಗಳನ್ನು ವಿಶೇಷವಾಗಿ ಬಹಳ ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ, ನರಭಕ್ಷಕತೆಯ ಆಪಾದನೆಯನ್ನು ಹಲವು ವೇಳೆ "ಅನಾಗರೀಕ"ರನ್ನು ಸ್ವಾಧೀನಪಡಿಸಿಕೊಳ್ಳಲು ಅಥವಾ ಸರ್ವನಾಶಮಾಡುವುದನ್ನು ಸಮರ್ಥಿಸಿಕೊಳ್ಳಲು ಬಳಸುತ್ತಿದ್ದರು. ಆದರೂ, ಅನೇಕ ಸಮರ್ಪಕವಾಗಿ ದಾಖಲಾಗಿರುವ ಸಂಸ್ಕೃತಿಗಳು ವಾಡಿಕೆಯಿಂದ ಮೃತರನ್ನು ತಿನ್ನುವುದರಲ್ಲಿ ತೊಡಗಿಕೊಂಡಿದ್ದರು, ಅವರಲ್ಲಿ ನ್ಯೂಝಿಲ್ಯಾಂಡ್‌ನ ಮಾಒರಿಗಳೂ ಒಬ್ಬರು. 1809ರ ಒಂದು ಕುಖ್ಯಾತ ಘಟನೆಯೆಂದರೆ, ನಾರ್ತ್‌ಲ್ಯಾಂಡ್‌ನಲ್ಲಿರುವ ವಾಂಗರೋವ ಪರ್ಯಾಯದ್ವೀಪದಲ್ಲಿ ಬಾಯ್ಡ್ ನೌಕೆಯ 66 ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಮಡಿದರು ಮತ್ತು ಮಾಒರಿ ಅವರಿಂದ ತಿನ್ನಲ್ಪಟ್ಟರು. (ಇದನ್ನೂ ನೋಡಿ: ಬಾಯ್ಡ್ ಸಾಮೂಹಿಕ ಹತ್ಯೆ ) ಆಗಲೇ ಮಾಒರಿ ಕದನಗಳಲ್ಲಿ ನರಭಕ್ಷಕತೆಯು ನಿಯತವಾಗಿ ಆಚರಣೆಯಲ್ಲಿತ್ತು. ಇನ್ನೊಂದು ಪ್ರಸಂಗದಲ್ಲಿ, ಜುಲೈ 11, 1821 ರಲ್ಲಿ, ನ್ಗಪುಹಿ ಬುಡಕಟ್ಟಿನ ಬಂದ ಹೋರಾಟಗಾರರು 2,000 ಶತ್ರುಗಳನ್ನು ಕೊಂದರು ಮತ್ತು ಯುಧ್ಧರಂಗದಲ್ಲೇ ಉಳಿದರು "ಎಲ್ಲಿಯವರೆಗೆ ಶತ್ರುಗಳು ಕೊಳೆತ ಶವಗಳ ದುರ್ಗಂಧದಿಂದ ಓಡಿಹೋಗುತ್ತಿರಲಿಲ್ಲವೋ ಅಲ್ಲಿಯವರೆಗೆ ಪರಾಭವಗೊಂಡವರನ್ನು ತಿಂದು ಹಾಕುತ್ತಿದ್ದರು". 1868–69ರಲ್ಲಿ ನ್ಯೂ ಜ಼ೀಲಾಂಡ್‌ನ ಉತ್ತರ ದ್ವೀಪದಲ್ಲಿ ಮಾಒರಿ ಸೈನಿಕರು ನ್ಯೂ ಜ಼ೀಲಾಂಡ್‌ನ್ ಸರ್ಕಾರದ ಜೊತೆ ಟಿಟೊಕೊವರು ಯುಧ್ಧದಲ್ಲಿ ಹೋರಾಡುತ್ತಿದ್ದರು, ಇವರು ಪೈ ಮರೈರ್ ಧರ್ಮದ ಮೂಲಸ್ವರೂಪದ ಹೌಹೌ ಚಳುವಳಿ ಭಾಗವಾಗಿ ನರಭಕ್ಷಕತೆಯ ಪುರಾತನ ವಿಧಿಗಳನ್ನು ಪುನಶ್ಚೇತನಗೊಳಿಸಿದರು. ಪೆಸಿಫಿಕ್‌ನಲ್ಲಿದ್ದ ಕೆಲವು ದ್ವೀಪಗಳಲ್ಲಿ ವಾಸವಾಗಿದ್ದ ಸಂಸ್ಕೃತಿಗಳು ನರಭಕ್ಷಕತೆಯನ್ನು ಸ್ವಲ್ಪ ಮಟ್ಟದಲ್ಲಿ ಮಾಡಲು ಅನುಮತಿಸಿದ್ದರು. ಪಾಲಿನೇಶಿಯದ ಮಾರ್ಕೀಸಸ್ ದ್ವೀಪಗಳಲ್ಲಿನ ದಟ್ಟವಾದ ಜನಸಂಖ್ಯೆಯು ಇಕ್ಕಟ್ಟಾದ ಕಣಿವೆಗಳಲ್ಲಿ ಒಂದೆಡೆಯಿದ್ದರು, ಇವರಲ್ಲಿ ಕೆಲವು ವಿರೋಧಿ ಬುಡಕಟ್ಟಿನವರೂ ಇದ್ದರು, ಅವರು ಕೆಲವೊಮ್ಮೆ ನರಭಕ್ಷಕತೆಯನ್ನು ತಮ್ಮ ಶತ್ರುಗಳ ಮೇಲೆ ಆಚರಿಸುತ್ತಿದ್ದರು. ಮೆಲನೇಶಿಯದ ಭಾಗಗಳಲ್ಲಿ, ನರಭಕ್ಷಕತೆಯನ್ನು ಆದಾಗ್ಯೂ ೨೦ನೇ ಶತಕದ ಆರಂಭದಲ್ಲಿ ಕೂಡ ಆಚರಿಸುತ್ತಿದ್ದರು, ವಿವಿಧ ಕಾರಣಗಳಿಂದಾಗಿ - ಪ್ರತೀಕಾರಕ್ಕಾಗಿ, ಶತ್ರುಗಳನ್ನು ಅವಮಾನಗೊಳಿಸುವುದಕ್ಕಾಗಿ, ಅಥವಾ ಮೃತ ಮನುಷ್ಯರ ಗುಣಗಳನ್ನು ಹೀರಿಕೊಳ್ಳುವುದಕ್ಕಾಗಿ. ಫಿಜಿಯಲ್ಲಿ ಬುಡಕಟ್ಟು ಜನರ ನಾಯಕನೊಬ್ಬ 872 ಮನುಷ್ಯರನ್ನು ತಿಂದಿದ್ದಾನೆ ಮತ್ತು ಸಾಧನೆಯನ್ನು ದಾಖಲಿಸಲು ಕಲ್ಲುಗಳನ್ನು ಜೋಡಿಸಿದ್ದಾನೆ. ಉಗ್ರ ಸ್ವಭಾವದ ನರಭಕ್ಷಕರ ಜೀವನ ವಿಧಾನ ಯುರೋಪಿಯನ್ ನಾವಿಕರನ್ನು ಫಿಜಿ ನೀರಿನ ಹತ್ತಿರ ಹೋಗುವಲ್ಲಿ ತಡೆಯಿತು, ಇದರಿಂದ ಫಿಜಿಗೆ ನರಭಕ್ಷಕ ದ್ವೀಪ ಎಂಬ ಹೆಸರಾಯಿತು. ಈ ಕಾಲಾವಧಿಯ ಸಮಯವು ಅನ್ವೇಶಕರು ಮತ್ತು ನೌಕಾ ಯಾತ್ರಕರಿಂದ ನರಭಕ್ಷಕತೆಯನ್ನು ಉಳಿವಿಗಾಗಿ ಆಶ್ರಯಿಸಿರುವ ಪ್ರಸಂಗಗಳು ಸರ್ವೇಸಾಮಾನ್ಯವಾಗಿತ್ತು. ಫ್ರೆಂಚ್ ನೌಕೆಯಾದ ಮೆಡುಸ 1816ರಲ್ಲಿ ಮುಳುಗಿ, ಅದರಲ್ಲಿ ಬದುಕುಳಿದವರು ನಾಲ್ಕು ದಿನಗಳ ಕಾಲ ತೆಪ್ಪದಲ್ಲಿ ದಿಕ್ಕು ತಪ್ಪಿ ಅಲೆದು ನರಭಕ್ಷಕತೆಯನ್ನು ಆಶ್ರಯಿಸಿದರು, ರಾಫ್ಟ್ ಆಫ್ ದಿ ಮೆಡುಸ ಎಂಬ ಚಿತ್ರ ಬಿಡಿಸಿ ಥಿಯೊಡೋರ್ ಗೆರಿಕಾಲ್ಟ್‌ರವರು ಇವರ ಈ ದುರ್ದೆಸೆಯನ್ನು ಪ್ರಖ್ಯಾತವನ್ನಾಗಿಸಿದರು. ಯುನೈಟೆಡ್ ಸ್ಟೇಟ್ಸ್‌ನ ಡಾನ್ನರ್ ಪಾರ್ಟಿಯ ದೌರ್ಭಾಗ್ಯವೂ ಪ್ರಖ್ಯಾತವಾದುದು. ನಾನ್‍ಟಕೆಟ್‌ನ ಎಸ್ಸೆಕ್ಸ್ ನೌಕೆಯು ಒಂದು ತಿಮಿಂಗಿಲದಿಂದ ನವೆಂಬರ್ 20, 1820 (ಹರ್ಮನ್ ಮೆಲ್ವಿಲ್ ಅವರ ಮೊಬಿ-ಡಿಕ್ ‌ಗೆ ಮುಖ್ಯ ಸಂಧರ್ಭಕ್ಕೆ ಆಧಾರ)ರಲ್ಲಿ ಮುಳುಗಿದಾಗ, ಬದುಕುಳಿದವರು, ಮೂರು ಸಣ್ಣ ದೋಣಿಗಳಲ್ಲಿ, ಪರಸ್ಪರ ಸಮ್ಮತಿಯಿಂದ ಬದುಕುವ ಸಲುವಾಗಿ ನರಭಕ್ಷಕತೆಗೆ ಮೊರೆಹೋದರು. ಸರ್ ಜಾನ್ ಫ್ರಾಂಕ್ಲಿನ್ ಅವರ ಸೋಲನುಭವಿಸಿದ ಧ್ರುವಪ್ರದೇಶದ ದಂಡಯಾತ್ರೆಯು ಒಂದು ಹತಾಶೆಯಿಂದ ನರಭಕ್ಷಕತೆಗೆ ಇಳಿದ ಒಳ್ಳೆಯ ಉದಾಹರಣೆ. ಮೆಕ್ಸಿಕನ್-ಅಮೇರಿಕನ್ ಯುಧ್ಧದ ಸಮಯದಲ್ಲಿ, ಡಾನ್ನರ್ ಪಾರ್ಟಿಯು ಕ್ಯಾಲಿಫೋರ್ನಿಯದ ಎತ್ತರದ ಪರ್ವತ ಕಣಿವೆಗಳಲ್ಲಿ ಹಿಮದಿಂದ ಸಿಕ್ಕಿಕೊಂಡಾಗ ಸಾಕಷ್ಟು ಸಾಮಾನು ಸರಂಜಾಮುಗಳಿಲ್ಲದೆ, ಅನೇಕ ನರಭಕ್ಷಕತೆಯ ಪ್ರಸಂಗಗಳಿಗೆ ಎಡೆ ಮಾಡಿಕೊಟ್ಟಿತು. ಆರ್ ವಿ. ಡಡ್ಲೀ ಮತ್ತು ಸ್ಟೀಫನ್ಸ್ (1884) 14 ಕ್ಯೂಬಿಡಿ 273 (ಕ್ಯೂಬಿ) ಎಂಬ ಇಂಗ್ಲೀಷ್ ಪರಸಂಗವು, ಇಂಗ್ಲೀಷ್ ವಿಹಾರ ನೌಕೆ ಮೈಗ್ನೊನೆಟ್‌ ನ ನಾಲ್ಕು ಸಿಬ್ಬಂದಿ ಸದಸ್ಯರು ಬಿರುಗಾಳಿಯಲ್ಲಿ ಕೇಪ್ ಆಫ್ ಗೂಡ್ ಹೋಪ್ನ 1,600 (2,600 ) ದೂರದಲ್ಲಿ ಕಳೆದು ಹೋದರು. ಎಷ್ಟೊ ದಿನಗಳ ನಂತರ ಒಬ್ಬ ಸಿಬ್ಬಂದಿಯು, ಹದಿನೇಳು ವರ್ಷದ ಚಿಕ್ಕಕೋಣೆಯ ಹುಡುಗನು, ಬರಗಾಲ ಮತ್ತು ಸಮುದ್ರದ ನೀರನ್ನು ಕುಡಿದುದರ ಸಂಯೋಗದಿಂದ ಪ್ರಜ್ಞೆತಪ್ಪಿ ಬಿದ್ದನು. ಉಳಿದವರು (ಪ್ರಾಯಷಃ ಒಬ್ಬ ವಿರೋಧಿಸಿರಬಹುದು) ಅವನನ್ನು ಕೊಂದು, ತಿನ್ನಲು ನಿರ್ಧರಿಸಿದರು. ಅವರನ್ನು ನಾಲ್ಕು ದಿನಗಳಾದ ಮೇಲೆ ರಕ್ಷಿಸಲಾಯಿತು. ಉಳಿದ ಮೂರರಲ್ಲಿ ಇಬ್ಬರು ಹತ್ಯೆಯ ತಪ್ಪಿತಸ್ಥರೆಂದು ಪತ್ತೆಯಾಯಿತು. ಇದರ ಬಹು ಮಹತ್ವವಾದ ಫಲಿತಾಂಶವೆಂದರೆ, ಅವಶ್ಯಕತೆಯಿದ್ದಾಗ ಮಡಿದ ಕೊಲೆಯು ಅಪರಾಧವಲ್ಲನೆಂದು ನಿರ್ಧರಿಸಾಯಿತು. ಆಗಸ್ಟ್ 3, 1903ರಲ್ಲಿ ರೊಜರ್ ಕೇಸ್‌ಮೆಂಟ್‌ರವರು ಕಾಂಗೋ ಫ್ರೀ ಸ್ಟೇಟ್‌ನಲ್ಲಿರುವ ಲೇಕ್ ಮಾಂಟುಬಯಿಂದ ಲಿಸ್ಬನ್‌ನಲ್ಲಿರುವ ರಾಯಭಾರಿ ಕಛೇರಿಯ ಸಹೋದ್ಯೋಗಿಗೆ ಹೀಗೆ ಬರೆದರು: "ಇಲ್ಲಿ ಸುತ್ತಲಿರುವ ಜನಗಳು ನರಭಕ್ಷಕರು. ನೀನು ಜೀವನದಲ್ಲೇ ಇಂಥ ವಿಚಿತ್ರವಾಗಿ ಕಾಣುವ ಜನರನ್ನು ನೋಡಿರುವುದಿಲ್ಲ. ಕಾಡಿನಲ್ಲಿ ಅವರು ಕುಳ್ಳು ಕೂಡ (ಬಾಟ್ವಾಸ್ ಎಂದು), ಅವರು ಉದ್ದದ ಮಾನವ ಪರಸರಕ್ಕಿಂತ ಅತ್ಯಂತ ದುಷ್ಟ ನರಭಕ್ಷಕರು. ಅವರು ಮಾಂಸವನ್ನು ಹಸಿಯಾಗಿಯೇ ತಿನ್ನುತ್ತಾರೆ! ಇದು ಸತ್ಯಸಂಗತಿ." ಕೇಸ್‌ಮೆಂಟ್ ಇವನ್ನೂ ಸೇರಿಸಿದರು, ಆ ಆಕ್ರಮಣಕಾರರು ಹೇಗೆ "ಕುಳ್ಳನನ್ನು ಮನೆಗೆ ಬರುವಾಗ ತಂದು, ವೈವಾಹಿಕ ಅಡುಗೆ ಮಡಕೆಗೆ...ನಾನು ಇದನ್ನು ಹೇಳುತ್ತಿರುವಾಗಲೇ, ಕುಳ್ಳರು, ಯುಧ್ಧರಂಗದಲ್ಲಿ ಕಡಿದ ಮಾನವ ಶಿಕಾರಿಯ ರಕ್ತ ಇನ್ನೂ ಬೆಚ್ಚಗಿದೆ ಮತ್ತು ಹರಿಯುತ್ತಿರುವಾಗಲೇ ಅಡುಗೆಯ ಮಡಕೆಯನ್ನು ಹಂಚಿಕೊಂಡು ತಿಂದು, ಕುಡಿಯುತ್ತಿದ್ದಾರೆ. ನನ್ನ ಪ್ರಿಯ ಮಿತ್ರ ಕೌಪರ್, ಇವೆಲ್ಲ ಯಕ್ಷರ ಕಥೆಗಳಲ್ಲ, ಆದರೆ ಈ ಬಡ ಜನರ ಹೃದಯ ವಾಸ್ತವವಾಗಿ ಭೀಕರ ನಿಜಸ್ಥಿತಿ, ನಿರಾಶೆಯುಂಟು ಮಾಡುವ ಘೋರ ಭೂಮಿ." (ಐರ್‌ಲಾಂಡ್ ರಾಷ್ಟ್ರೀಯ ಗ್ರಂಥಾಲಯ, ಎಮ್‌ಎಸ್ 36,201/3) === ಆಧುನಿಕ ಯುಗ === ==== ವಿಶ್ವ ಸಮರ ==== ಅವಶ್ಯಕತೆಯಿಂದಾದ ಅನೇಕ ನರಭಕ್ಷಕತೆಯ ಘಟನೆಗಳು ವಿಶ್ವ ಸಮರ ಸಮಯದಲ್ಲಿ ದಾಖಲಾಗಿವೆ. ಉದಾಹರಣೆಗೆ, 872-ದಿನಗಳ ಲೆನಿನ್‌ಗ್ರಾಡ್‌ನ ಮುತ್ತಿಗೆಯ ಸಮಯದಲ್ಲಿ, ೧೯೪೧-೧೯೪೨ರ ಚಳಿಗಾಲದಲ್ಲಿ ನರಭಕ್ಷಕತೆ ಕಾಣಿಸಿಕೊಳ್ಳಲು ಆರಂಭವಾಯಿತೆಂಬ ವರದಿಗಳಿವೆ, ಎಲ್ಲಾ ಪಕ್ಷಿಗಳು, ಇಲಿಗಳು ಮತ್ತು ಸಾಕುಪ್ರಾಣಿಗಳನ್ನು ಬದುಕುಳಿದವರು ತಿಂದುಹಾಕಿದರು. ಲೆನಿನ್‌ಗ್ರಾಡ್‌ನ ಪೊಲೀಸರು ನರಭಕ್ಷಕತೆಯ ವಿರುಧ್ಧ ಹೋರಾಡಲು ವಿಶೇಷ ಇಲಾಖೆಯನ್ನೂ ರಚಿಸಿದರು. ಸ್ಟಾಲಿಂಗ್ರಾಡ್‌ನಲ್ಲಿ ಸೋವಿಯತ್‌ರ ಗೆಲುವಿನ ನಂತರ, ಮುತ್ತಿಗೆ ಹಾಕಿದ ನಗರದಲ್ಲಿ ಕೆಲವು ಜರ್ಮನಿಯ ಯೋಧರಿಗೆ ಸಾಮಾನು ಸರಂಜಾಮಿನ ಪೂರೈಕೆಯನ್ನು ಕಡಿತಗೊಳಿಸಿದರು, ಆಗ ಅವರು ನರಭಕ್ಷಕತೆಗೆ ಮೊರೆಹೋದರು. ನಂತರ, ಫೆಬ್ರವರಿ 1943ರಲ್ಲಿ, ಸುಮಾರು 100,000 ಜರ್ಮನ್ ಯೋಧರನ್ನು ಯುಧ್ಧದ ಸೆರೆಯಾಳುಗಳೆಂದು (ಪಿಒಡಬಲ್ಯೂ) ತೆಗೆದುಕೊಳ್ಲಲಾಯಿತು. ಅವರಲ್ಲಿ ಬಹಳಷ್ಟು ಮಂದಿಯನ್ನು ಸೈಬೀರಿಯಾ ಅಥವಾ ಮಧ್ಯ ಏಶಿಯಗಳಲ್ಲಿನ ಪಿಒಡಬಲ್ಯೂ ಡೇರೆಗಳಿಗೆ ಕಳುಹಿಸಲಾಯಿತು, ಸೋವಿಯಟ್ ಬಂಧನ ಅಧಿಕಾರಿಗಳು ತೀವ್ರವಾಗಿ ಅರೆಹೊಟ್ಟೆಯಲ್ಲಿ ಬಿಟ್ಟಿದ್ದರಿಂದ, ಅನೇಕರು ನರಭಕ್ಷಕತೆಯನ್ನು ಅವಲಂಬಿಸಿದರು. ಸ್ಟಾಲಿಂಗ್ರಾಡ್‌ನಲ್ಲಿ 5,000 ಕ್ಕಿಂತ ಕಡಿಮೆ ಸೆರೆಯಾಳುಗಳು ಕಾರಾಗೃಹದಲ್ಲಿ ಬದುಕುಳಿದರು. ಹೆಚ್ಚುಪಾಲು, ಆದರೂ, ಅನಾವರಣದಿಂದ ಅಥವಾ ಶರಣಾಗತವಾಗುವ ಮೊದಲೇ ಅಲ್ಲಿ ಸುತ್ತುವರೆದಿದ್ದ ಸೈನಿಕರಿಂದ ಬಂದ ಖಾಯಿಲೆಯಿಂದ ಕಾರಾಗೃಹಬಂಧನದ ಆರಂಭದಲ್ಲೇ ಮೃತರಾದರು. ಟೊಕ್ಯೋದ ನ್ಯಾಯಮಂಡಳಿಯ ಆಸ್ಟ್ರೇಲಿಯನ್ ವಾರ್ ಕ್ರೈಮ್ಸ್ ಸೆಕ್ಷನ್, ವಿಲ್ಲಿಯಮ್ ವೆಬ್ (ಮುಂದಿನ ನ್ಯಾಯಾಧೀಶ-ಮುಖ್ಯರು) ಅವರ ನಾಯಕತ್ವದಲ್ಲಿ, ಅನೇಕ ಲಿಖಿತ ವರದಿಗಳನ್ನು ಮತ್ತು ಪುರಾವೆಗಳ ಕಾಗದ ಪತ್ರಗಳನ್ನು ಸಂಗ್ರಹಿಸಿದ್ದಾರೆ, ಅವುಗಳು, ಜಪಾನೀ ಯೋಧರ ತಮ್ಮ ಸೈನ್ಯದ ನಡುವೆಯೇ ನಡೆಸಿದ ನರಭಕ್ಷಕತೆಯ ಕ್ರಿಯೆಯನ್ನು, ಶತ್ರುಗಳು ಮೇಲೆ, ಮತ್ತು ಗ್ರೇಟರ್ ಈಸ್ಟ್ ಏಶಿಯ ಕೊ-ಪ್ರೊಸ್ಪರಿಟಿ ಸ್ಪಿಯರ್‌ನ ಬಹು ಭಾಗಗಳಲ್ಲಿ ಸಂಬಂಧಿಸಿದ ಯುಧ್ಧದ ಸೆರೆಯಾಳುಗಳ ಮೇಲೆ ನಡೆಸಲಾಯಿತು.: 80 ಐತಿಹಾಸಿಕ ತಜ್ಞ ಯುಕಿ ಟನಕ ಅವರ ಪ್ರಕಾರ, "ಸಣ್ಣ ಗುಂಪಿನಲ್ಲಿ ನರಭಕ್ಷಕತೆ ಒಂದು ಹಲವು ವೇಳೆ ಕ್ರಮಬಧ್ಧ ಚಟುವಟಿಕೆಯಂತೆ ಮತ್ತು ಅಧಿಕಾರಿಗಳ ಆಜ್ಞೆಯ ಮೇರೆಗೆ". ಕೆಲವು ಘಟನೆಗಳಲ್ಲಿ, ಜೀವವಿರುವ ಮನುಷ್ಯನ ಮಾಂಸವನ್ನೇ ಕತ್ತರಿಸುತ್ತಿದ್ದರು. ಇಂಡಿಯಾದ ಪಿಒಡಬಲ್ಯೂ, ಲಾನ್ಸ್ ಹಟಮ್ ಅಲಿ (ಆನಂತರ ಪಾಕಿಸ್ತಾನದ ನಾಗರೀಕ), ನ್ಯೂ ಗಿನಿಯಲ್ಲಿ ಹೀಗೆ ಸಾಕ್ಷ್ಯ ಹೇಳಿದನು: "ಜಪಾನೀಗಳು ಸೆರೆಯಾಳುಗಳನ್ನು ಆರಿಸಲು ಆರಂಭಿಸಿದರು ಮತ್ತು ಪ್ರತಿ ದಿನ ಒಬ್ಬ ಸೆರೆಯಾಳನ್ನು ಹೊರಗೆಳೆದು, ಕೊಂದು ಸೈನಿಕರು ತಿನ್ನುತ್ತಿದ್ದರು. ನಾನು ಖುದ್ದಾಗಿ ಈಗ ಆಗುತ್ತಿರುವುದನ್ನು ನೋಡಿದೆ ಮತ್ತು ಸುಮಾರು 100 ಸೆರೆಯಾಳುಗಳು ಜಪಾನೀಗಳಿಂದ ಇಲ್ಲಿ ತಿನ್ನಲ್ಪಟ್ಟರು. ಉಳಿದಿರುವ ನಮ್ಮನ್ನು ಇಲ್ಲಿಂದ 50 ಮೈಲಿ (80 ಕಿಲೋ ಮೀಟರ್) ದೂರದಲ್ಲಿರುವ ಜಾಗಕ್ಕೆ ಕರೆದೊಯ್ಯಲಾಯಿತು, ಅಲ್ಲಿ 10 ಸೆರೆಯಾಳುಗಳು ಖಾಯಿಲೆಯಿಂದ ಮರಣ ಹೊಂದಿದರು. ಈಗ ಇಲ್ಲಿ, ಜಪಾನೀಯರು ಮತ್ತೆ ಸೆರೆಯಾಳುಗಳನ್ನು ತಿನ್ನಲು ಆರಿಸಿಕೊಳ್ಳಲಾರಂಭಿಸಿದರು. ಆರಿಸಿಕೊಂಡವರನ್ನು ಒಂದು ಗುಡಿಸಲಿಗೆ ಒಯ್ದು , ಅಲ್ಲಿ ಜೀವವಿರುವಾಗಲೇ ಅವರ ಮಾಂಸವನ್ನು ದೇಹದಿಂದ ಕತ್ತರಿಸಿದರು ಮತ್ತು ಅವರನ್ನು ಕಂದರಗಳಲ್ಲಿ ಎಸೆದುರು ಹಾಗೂ ಅಲ್ಲಿ ಆನಂತರ ಮರಣ ಹೊಂದಿದರು. ಇನ್ನೊಂದು ಸಮರ್ಪಕವಾಗಿ ದಾಖಲಾಗಿರುವ ಪ್ರಸಂಗವೊಂದು ಚಿಚಿಜಿಮದಲ್ಲಿ 1945ರ ಫೆಬ್ರವರಿಯಲ್ಲಿ ನಡೆಯಿತು, ಜಪಾನೀ ಸೈನಿಕರು ಐದು ಅಮೇರಿಕದ ವಿಮಾನಯೋಧರನ್ನು ಕೊಂದು ತಿಂದರು. ಇದನ್ನು 1947ರಲ್ಲಿ ಯುದ್ಧಾಪರಾಧದ ವಿಚಾರಣೆಯ ಸಮಯದಲ್ಲಿ ತನಿಖೆ ಮಾಡಲಾಯಿತು, ಮತ್ತು ಕಾನೂನು ಕ್ರಮ ಕೈಗೊಂಡ ೩೦ ಜಪಾನೀ ಸೈನಿಕರಲ್ಲಿ, ಐದು (ಮೇಜರ್. ಮಟೊಬ, ಜನರಲ್. ಟಚಿಬನ, ಅಡ್ಮಿರಲ್. ಮೊರಿ, ಕಾಪ್ಟನ್. ಯೊಶಿ, ಮತ್ತಿ ಡಾಕ್ಟರ್. ಟೆರಕಿ) ಮಂದಿಯನ್ನು ತಪ್ಪಿತಸ್ಥರೆಂದು ಪರಗಣಿಸಿ, ಗಲ್ಲಿಗೇರಿಸಲಾಯಿತು. ಅವನ ಪುಸ್ತಕದಲ್ಲಿ: , ಜೇಮ್ಸ್ ಬ್ರಾಡ್ಲಿ ಅವರು ಜಪಾನೀ ಬಂಧಿಸಿದ ಅಧಿಕಾರಿಗಳಿಂದ ವಿಶ್ವ ಯುಧ್ಧ ರ ಸಂಬಂಧಿತ ಸೆರೆಯಾಳುಗಳ ಮೇಲೆ ನರಭಕ್ಷಕತೆಯ ಅನೇಕ ಪ್ರಸಂಗಗಳನ್ನು ವಿವರಿಸಿದ್ದಾರೆ. ನೂತನವಾಗಿ-ಕೊಂದು ಯಕೃತ್ತುಗಳನ್ನು ತಿನ್ನುವ ನರಭಕ್ಷಕತೆಯ ಪ್ರಕ್ರಿಯೆಯಷ್ಟೇ ಅಲ್ಲ, ಆದರೆ ಮುಂದಿನ ಅನೇಕ ದಿನಗಳಲ್ಲಿ ಬದುಕಿರುವ ಸೆರೆಯಾಳುಗಳಿಗಾಗಿ ನರಭಕ್ಷಕತೆ-ಜೀವನಾಧಾರವೂ, ಮಾಂಸವನ್ನು ತಾಜಾವಾಗಿಡಲು ಬೇಕಾದಾಗ ಮಾತ್ರ ಕಾಲುಗಳ ಅಂಗಚ್ಛೇದನ ಮಾಡುತ್ತಿದ್ದರು ಎಂದು ಲೇಖಕರು ತಿಳಿಸಿದ್ದಾರೆ. ==== ಇತರೆ ಉದಾಹರಣೆಗಳು ==== ಲೆಫರ್ಡ್ ಸಮುದಾಯವು ವೆಸ್ಟ್ ಆಪ್ರಿಕನ್ ಸಮುದಾಯವು 1900ರ-ಮಧ್ಯದಲ್ಲಿ ನರಭಕ್ಷಕತೆಯ ಅನುಸರಣೆಯಲ್ಲಿದ್ದವು. ಅವು ಸೈರ ಲೆಯೊನ್, ನಿಜೆರಿಯ, ಲಿಬೆರಿಯ ಮತ್ತು ಕೊಟ್ ಡಿ ವ್ಹಾರ್‌ ಗಳಲ್ಲಿನ ಕೇಂದ್ರಬಿಂದು ಆಗಿದ್ದವು. ಲಿಯೊಪಾರ್ಡ್ ಪುರುಷರು ಚಿರತೆಯ ಚರ್ಮವನ್ನು ಧರಿಸುತ್ತಿದ್ದರು, ದಾರಿಯಲ್ಲಿ ಹೊಂಚುಹಾಕುವ ಪ್ರಯಾಣಿಕರು ಚಿರತೆಗಳ ಉಗುರುಗಳು ಮತ್ತು ಹಲ್ಲುಗಳ ಆಕಾರದ ಪರಚಲು ಅನುಕೂಲವಾದ ಹರಿತ ಆಯುಧಗಳನ್ನು ಹೊಂದಿರುತ್ತಿದ್ದರು. ಬಲಿಯಾದವರ ಮಾಂಸವನ್ನು ಅವರ ಶರೀರದಿಂದ ಬೇರ್ಪಡಿಸಿ ಸಮುದಾಯದ ಸದಸ್ಯರಿಗೆ ಹಂಚಲಾಗುತ್ತಿತ್ತು. ಭಾರತದ ಉತ್ತರದಿಕ್ಕಿನ ಅಗೊರಿಗಳು ಅವರ ಗುಂಪಿನಲ್ಲಿ ಮರಣಹೊಂದಿದವರ ಮಾಂಸವನ್ನು ಅವರ ಅಮರತ್ವದ ಮತ್ತು ಅಲೌಕಿಕ ಸಾಮರ್ಥ್ಯದ ಪ್ರಯತ್ನವಾಗಿ ಸೇವಿಸುತ್ತಿದ್ದರು. ಅಗೊರಿ ಸದಸ್ಯರು ಮನುಷ್ಯರ ತಲೆಬುರುಡೆಯಿಂದ ಕುಡಿದು ನರಭಕ್ಷಕತೆಯ ಅನುಸರಣೆಯನ್ನು ಮಾಡುತ್ತಾರೆ, ಇದರಿಂದ ಅವರು ಮನುಷ್ಯರ ಮಾಂಸ ತಿನ್ನುವುದರಿಂದ ವೃದ್ಧಾಪ್ಯವನ್ನು ತಡೆಯುವಂತಹ, ಮಾನಸಿಕ ಮತ್ತು ಶಾರೀರಿಕ ಲಾಭಗಳನ್ನು ದೊರಕಿಸುಕೊಳ್ಳಬಹುದೆಂದು ನಂಬಿದ್ದರು. 1930ರ ಸಮಯದಲ್ಲಿ, ಹೊಲೊಡೊಮರ್ ಸಮಯದ ದಕ್ಷಿಣ ಸೈಬೆರಿಯನ್ ಮತ್ತು ಕುಬನ್ ಪ್ರಾಂತಗಳ, ಯುಕ್‌ರೈನ್ ಮತ್ತು ರಷ್ಯನ್ ಓಲ್ಗಾಗಳಿಂದ ನಡೆದ ನರಭಕ್ಷಕತೆಯ ಅನೇಕ ಕೃತ್ಯಗಳು ವರದಿಯಾಗಿದ್ದವು. ನರಭಕ್ಷಕತೆಯು ಚೈನಾದಲ್ಲಿ ಉದ್ಭವಿಸಿದ್ದು ಗ್ರೇಟ್ ಲೀಪ್ ಪಾರ್ವಾರ್ಡ್ ಸಮಯದಲ್ಲಿ, ಗ್ರಾಮೀಣ ಚೈನ ಭಯಂಕರವಾದ ಅನಾವೃಷ್ಟಿ ಮತು ಕ್ಷಾಮಕ್ಕೆ ಒಳಗಾದಾಗ ಎಂದು ದೃಢಪಡಿಸಲಾಗಿದೆ. ನರಭಕ್ಷಕತೆಯ ಚೈನಾದಲ್ಲಿನ ಸಾಂಸ್ಕೃತಿಕ ಆಂದೋಲನದ ಸಮಯದಲ್ಲೂ ಗೋಚರಿಸಿದೆ ಎಂಬ ಪುಕಾರುಗಳು ಸಹ ಕೇಳಿಬಂದವು. ಈ ಪುಕಾರುಗಳು ನರಭಕ್ಷಕತೆಯನ್ನು ವಿಚಾರಶಾಸ್ತ್ರಕ್ಕೆ ಸಂಬಂಧಪಟ್ಟ ಉದ್ದೇಶಗಳಿಗಾಗಿ ಆಚರಣೆಯಲ್ಲಿಡಲಾಯಿತು ಎಂದು ವಾದಿಸುತ್ತವೆ. 1931ರ ಮೊದಲು, ನ್ಯೂ ಯಾರ್ಕ್ ಟೈಮ್ಸ್ ವರದಿಗಾರ ವಿಲ್ಲಿಯಮ್ ಬುಹ್‌ಲೆರ್ ಸೆಯಬ್ರೂಕ್, ಆಪಾದಿತವಾಗಿ ಸಂಶೋದನೆಯ ಆಸಕ್ತಿಯಲ್ಲಿ, ಸರ್ಬೊನೆನಲ್ಲಿನ ಆಸ್ಪತ್ರೆಯ ಅದೀನದ ಅಪಘಾತದಲ್ಲಿ ಮರಣಹೊಂದಿದ ಆರೋಗ್ಯವಂತ ದೇಹದಲ್ಲಿನ ಮಾಂಸದ ಒಂದು ಭಾಗವನ್ನು ಪಡೆದುಕೊಂಡು, ಬೇಯಿಸಿ ಸೇವಿಸಿದರು. ಅವರ ವರದಿಯ ಪ್ರಕಾರ, "ಇದು ಒಳ್ಳೆಯ, ಪೂರ್ಣವಾಗಿ ತಯಾರಾದ ಆಕಳ ಕರುವಿನಂತೆ, ಎಳೆಯದ್ದಲ್ಲದ, ಆದರೆ ಇನ್ನೂ ಗೋಮಾಂಸದ ಹಂತಕ್ಕೆ ಬೆಳೆಯದಂತೆ ಇತ್ತು. ಇದು ಖಚಿವಾಗಿ ಅದೇ ತರ ಇತ್ತು, ಮತ್ತು ಅದನ್ನು ಬಿಟ್ಟು ನಾನು ಇದುವರೆಗು ರುಚಿನೋಡಿದ ಬೇರೆ ಯಾವ ಮಾಂಸದಂತೆಯು ಇಲ್ಲ. ಇದು ಒಳ್ಳೆಯ, ಪೂರ್ಣವಾಗಿ ತಯಾರಾದ ಆಕಳ ಕರುವಿನ ಮಾಂಸಕ್ಕೆ ಅತ್ಯಂತ ಹತ್ತಿರದಲ್ಲಿತ್ತು, ನನ್ನ ಅನಿಸಿಕೆಯ ಪ್ರಕಾರ ಸಾಮಾನ್ಯ ಸ್ವಾದದ ಸೂಕ್ಷ್ಮತೆಯನ್ನು ಹೊಂದಿದ್ದ ಯಾವುದೇ ಒಬ್ಬ ವ್ಯಕ್ತಿಯಿಂದ ಇದನ್ನು ಆಕಳಕರುವಿನ ಮಾಂಸದಿಂದ ಬೇರೆ ಎಂದು ಗುರುತಿಸಲು ಸಾಧ್ಯವಿಲ್ಲ ಎಂದರು. ಉದಾಹರಣೆಗೆ, ಮೇಕೆ, ಹೈ ಗೇಮ್, ಮತ್ತು ಹಂದಿಯ ಮಾಂಸಗಳು ಹೊಂದಿದ ರೀತಿಯಲ್ಲಿ ಯಾವುದೇ ವಿಶಿಷ್ಟವಾದ ರುಚಿಯನ್ನು, ಅಥವಾ ಯಾವುದೆ ತೀಕ್ಷ್ಣವಾಗಿ ವಿವರಿಸುವಂತಹ ರುಜಿಯನ್ನು ಹೊಂದದ ಒಂದು ಮೃದುವಾದ, ಒಳ್ಳೆಯ ಮಾಂಸವಾಗಿದೆ. ಮಾಂಸದತುಂಡು ಉತ್ತಮ ಕರುವಿನ ಮಾಂಸಕ್ಕಿಂತಲು ಸ್ವಲ್ಪ ಕಠಿಣವಾಗಿ, ಹಾಗು ಸ್ವಲ್ಪ ನಾರಿನಿಂದ ಕೂಡಿರುತ್ತದೆ, ಆದರೆ ಇದು ಅತೀ ಕಠಿಣವಾಗಿ ಅಥವಾ ಅತೀ ನಾರಿನೊಂದ ಕೂಡಿದರೆ ಸೇವಿಸಲು ಯೋಗ್ಯವಾಗಿದೆ. ಹುರಿದಿದ್ದರ, ಮಧ್ಯಭಾಗವನ್ನು ನಾನು ತುಂಡುಮಾಡಿ ಸೇವಿಸಿದೆ, ಇದು ಮೃದುವಾಗಿತ್ತು ಮತ್ತು ಇದರ ಬಣ್ಣ, ರಚನೆ, ಪರಿಮಳ ಹಾಗು ರುಚಿಗಳು, ನಾವು ಇದರ ಬಳಕೆಯಿಂದ, ಆಕಳ ಕರುವಿನ ಮಾಂಸಕ್ಕೆ ಇದನ್ನು ಸರಿಯಾಗಿ ಹೋಲಿಕೆಯಾಗುತ್ತದೆ ಎಂಬುದನ್ನು ತಿಳಿಯ ಬಹುದೆಂಬ ಅನಿಸೆಕೆಯನ್ನು ಬಲಪಡಿಸಿವೆ." ಸೊವಿಯತ್ ಲೇಖಕ ಅಲೆಕ್ಸಾಂಡರ್ ಸೊಲ್‌ಜುನೀತ್‌ಸನ್, ಅವರು ಬರೆದ ಪುಸ್ತಕ ದಿ ಗುಲಾಗ್ ಆರ್ಚಿಪೆಲಾಗೊ ನಲ್ಲಿ, ಪೊವೊಲ್ಜಿನಲ್ಲಿಯ ಪಮೈನ್‌ನ ಇಪ್ಪತ್ತನೆಯ ಶತಮಾನದ USSRನಲ್ಲಿನ ನರಭಕ್ಷಕತೆಯ ಸಂಗತಿಗಳನ್ನು ವರ್ಣಿಸುತ್ತಾ ಅವರು ಬರೆದದ್ದು: "ಅತ್ಯಂತ ಭಯಾನಕ ದುರ್ಭಿಕ್ಷ ಎಂದರೆ ಅದು ನರಭಕ್ಷಕತೆ, ಅದರಲ್ಲೂ ಮಕ್ಕಳನ್ನು ತಮ್ಮ ಸ್ವಂತ ಪೋಷಕರಿಂದಲೆ ಸೇವಿಸಲ್ಪಡುವುದು - ಈ ತರಹದ ದುರ್ಭಿಕ್ಷವನ್ನು ರಷ್ಯ ಎಂತಾ ಕಷ್ಟದ ಸಮಯದಲ್ಲೂ [1601–1603ರಲ್ಲೂ] ಕಂಡಿರಲಿಲ್ಲ..." . ಲೆನಿನ್‌ಗ್ರಡ್‌ನ ಆಕ್ರಮಣದ(1941–1944) ಬಗ್ಗೆ ಅವರು ಹೇಳಿದರು: "ಯಾರು ಮನುಷ್ಯರ ಮಾಂಸವನ್ನು ಸೇವಿಸುವರೋ, ಅಥವಾ ಛೇದಿಸಿ ಪರೀಕ್ಷಿಸುವ ಕೊಠಡಿಯಿಂದ ಮನುಷ್ಯನ ಪಿತ್ತಜನಕಾಂಗದ ವ್ಯಾಪಾರವನ್ನು ಮಾಡುವರೋ...ಅಂತಹವರನ್ನು ರಾಜಕೀಯ ಅಪರಾಧಿಗಳೆಂದು ಪರಿಗಣಿಸಲಾಗುವುದು...". ಮತ್ತು ಉತ್ತರದಿಕ್ಕಿನ ರೈಲುಮಾರ್ಗದ ಖೈದಿಗಳ ಶಿಬಿರದ ("ಸೆವ್ಜೆಲ್ಡೊರ್ಲಗ್" ) ಬಗ್ಗೆ ಸೊಲ್‌ಜುನೀತ್‌ಸನ್‌ ಬರೆದರು: " ಒಬ್ಬ ಸಾಮಾನ್ಯ ಖೈದಿಯು ಆ ದಂಡನೀಯ ಶಿಬಿರದಲ್ಲಿ ಬದುಕಿ ಉಳಿಯಲು ಸಾದ್ಯವಿಲ್ಲ. ಸೆವ್ಜೆಲ್ಡೊರ್ಲಗ್ ಶಿಬಿರದಲ್ಲಿ (ನಾಯಕ: ಕರ್ನಲ್ ಕ್ಲ್ಯುಚ್‌ಕಿನ್)1946–47ರಲ್ಲಿ ನರಭಕ್ಷಕತೆಯ ಅನೇಕ ಕೇಸುಗಳಿವೆ: ಅವರು ಮನುಷ್ಯರ ಶರೀರವನ್ನು ತುಂಡಾಗಿಸಿ, ಬೇಯಿಸಿ ತಿನ್ನುತ್ತಿದ್ದರು." ಪೂರ್ವ ದೀರ್ಗಾವದಿಯ ರಾಜಕೀಯ ಖೈದಿ ಯಾಗಿದ್ದು, ಸೊವಿಯತ್ ಸೆರೆಮನೆಗಳಲ್ಲಿ, ಗುಲಾಗ್ ಶಿಬಿರಗಳಲ್ಲಿ ಮತ್ತು ವಸಾಹತುಗಳಲ್ಲಿ 1938ರಿಂದ 1955ರ ವರೆಗು ಕಾಲ ಕಳೆದ, ಸೊವಿಯತ್ ಪತ್ರಿಕೋದ್ಯಮಿ ಯೆವ್‌ಜೆನಿಯ ಜಿಂಜ್‌ಬರ್ಗ್, ಅವರ ದಿನಚರಿ ಪುಸ್ತಕ "ಹಾರ್ಶ್ ರೋತೆ" (ಅಥವಾ "ಸ್ಟೀಪ್ ರೋತೆ")ನಲ್ಲಿ, ಅವರನ್ನು ಖೈದಿಗಳ ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ, 1940ರ ಕೊನೆಯಲ್ಲಿ ಅವರು ನೇರವಾಗಿ ತೊಡಗಿದ್ದ ಕೇಸನ್ನು ವಿವರಿಸಿದರು. "... ಪ್ರಧಾನ ಅಧಿಕಾರಿ ಕೆಲವು ಆಹಾರದಿಂದ ತುಂಬಿದ, ಕಪ್ಪು ಹೊಗೆಯಾಡುತ್ತಿದ್ದ ಮಡಿಕೆಯನ್ನು ನನಗೆ ತೋರಿಸಿದರು: ’ಈ ಮಾಂಸದ ಬಗ್ಗೆ ನಿಮ್ಮ ವೈದ್ಯಕೀಯ ತಜ್ಞತೆಯ ಅಗತ್ಯ ನನಗಿದೆ.’ ನಾನು ಮಡಿಕೆಯ ಒಳಗೆ ನೋಡಿದೆ, ಮತ್ತು ವಾಂತಿ ಆಗುವುದನ್ನು ಅತೀ ಕಷ್ಟದಿಂದ ತಡೆದುಕೊಂಡೆ. ಆ ಮಾಂಸದ ನಾರುಗಳು ಅತೀ ಚಿಕ್ಕದಾಗಿದ್ದವು, ಮತ್ತು ನಾನು ಇದಕ್ಕು ಮುಂಚೆ ನೋಡಿದ ಯಾವುದೇ ಮಾಂಸದ ಹಾಗೆ ಗೋಚರಿಸಲಿಲ್ಲ. ಕೆಲವು ತುಂಡುಗಳ ಮೇಲಿನ ಚರ್ಮವು ಕಪ್ಪು ಕೂದಲಿನೊಂದಿಗೆ ರೋಮಾಂಚನವಾಗಿತ್ತು (...) ಪೊಲ್ಟವದ ಒಬ್ಬ ಪೂರ್ವ ಲೋಹಕಾರ, ಕುಲೆಶ್ ಸೆಂಟುರಶ್‌ವಿಲಿ ಜೊತೆಯಲ್ಲಿ ಕೆಲಸ ಮಾಡಿದ್ದರು. ಆ ಸಮಯವು, ಸೆಂಟುರಶ್‌ವಿಲಿ ಶಿಬಿರದಿಂದ ಬಿಡುಗಡೆಯಾಗುವ ಕೇವಲ ಒಂದು ತಿಂಗಳು ಮುಂಚಿನದ್ದಾಗಿತ್ತು (...) ಮತ್ತು ಅವರು ಅಚಾನಕಾಗಿ ಆಶ್ಚರ್ಯಕರ ರೀತಿಯಲ್ಲಿ ಮಾಯವಾದರು. ಕಾವಲುಗಾರರು ಬೆಟ್ಟಗಳ ಸುತ್ತಮುತ್ತಲು ನೋಡಿದರು, ಕುಲೆಶ್ ನಿದರ್ಶನದ ಹೇಳಿಕೆಯ ಪ್ರಕಾರ, ಕುಲೆಶ್ ತನ್ನ ಸಹಕೆಲಸಗಾರನನ್ನು ಕೊನೆಯ ಬಾರಿಗೆ ಬೆಂಕಿಯ ಸ್ಥಳದಲ್ಲಿ ನೋಡಿದ್ದರು, ಆಲ್ಲಿಂದ ಕುಲೆಶ್ ತಮ್ಮ ಕೆಲಸಕ್ಕಾಗಿ ಹೊರಗೆ ನಡೆದರು ಮತ್ತು ಸೆಂಟುರಶ್‌ವಿಲಿ ಇನ್ನು ಸ್ವಲ್ಪ ಹೆಚ್ಚಿನ ಬೆಂಕಿಯ ಶಾಕಕ್ಕಾಗಿ ಅಲ್ಲಿಯೆ ಉಳಿದಿದ್ದರು; ಆದರೆ ಕುಲೆಶ್ ಬೆಂಕಿಯ ಸ್ಥಲಕ್ಕೆ ವಾಪಾಸು ಬಂದಾಗ, ಸೆಂಟುರಶ್‌ವಿಲಿ ಕಾಣೆಯಾಗಿದ್ದರು; ಯಾರಿಗೆ ಗೊತ್ತು, ಅವರು ಹಿಮದಲ್ಲಿ ಎಲ್ಲೋ ಗಡ್ಡೆ ಕಟ್ಟಿರಬಹುದು, ಅವರು ಮೊದಲೆ ಬಲಹೀನ ವಾಗಿದ್ದರು (...) ಕಾವಲು ಗಾರರು ಇನ್ನೂ ಎರಡು ದಿನಗಳು ಹುಡುಕಿದರು, ಮತ್ತು ಅವರ ಸೆರೆಮನೆವಾಸದ ಸಮಯವು ಸುಮಾರಾಗಿ ಮುಗಿದಿದೆ, ಆದರೂ ಏಕೆ ತಪ್ಪಿಸುಕೊಂಡರು ಎಂದು ಆಶ್ಚರ್ಯಪಟ್ಟರೂ, ಇದನ್ನು ತಪ್ಪಿಸಿಕೊಂಡು ಹೋದ ಪ್ರಕರಣವಾಗಿಯೆ ಭಾವಿಸಿದರು (...) ಅಪರಾದವು ನಡೆದಿತ್ತು. ಬೆಂಕಿಯ ಸ್ಥಳವನ್ನು ಸಮೀಪಿಸುತ್ತಿದ್ದಂತೆ, ಕುಲೆಶ್ ಮಚ್ಚುದಿಂದ ಸೆಂಟುರಶ್‌ವಿಲಿಯನ್ನು ಕೊಲೆ ಮಾಡಿ, ಅವರ ಬಟ್ಟೆಗಳನ್ನು ಸುಟ್ಟುಹಾಕಿದರು, ನಂತರ ಅವರ ದೇಹದ ಭಾಗಗಳನ್ನು ಬೇರ್ಪಡಿಸಿದರು ಮತ್ತು ಸಮಾದಿ ಮಾಡಿದ ಪ್ರತಿಯೊಂದು ಸ್ಥಳವನ್ನು ಪ್ರತ್ಯಾಕವಾಗಿ ಗುರುತಿಸುವುದರೊಂದುಗೆ, ತುಂಡುಗಳನ್ನು ಹಿಮದ ವಿವಿಧ ಸ್ಥಳಗಳಲ್ಲಿ ಮುಚ್ಚಿಟ್ಟರು. (...) ನಿನ್ನೆ ಅಸ್ಟೆ, ವಿರುದ್ದವಾಗಿ ಇರಿಸಿದ ಎರಡು ಕಾಲುಗಳ ಅಡಿಯಲ್ಲಿ ಒಂದು ಭಾಗ ಪತ್ತೆಯಾಯಿತು." ಅಕ್ಟೋಬರ್ 13, 1972ರಂದು, ಉರುಗುಯನ್ ವಾಯು ಪಡೆಯ ವಿಮಾನ 571ವು ಆಕಸ್ಮಿಕವಾಗಿ ನಾಶವಾಗಿ ಆಂಡಸ್‌ನೊಳಗೆ ಬಿದ್ದಾಗ, ಬದುಕಿ ಉಳಿದವರು ಪರ್ವತದಲ್ಲಿನ ತಮ್ಮ 72 ದಿನಗಳ ಸಮಯದಲ್ಲಿ ಮೃತರ ದೇಹಗಳನ್ನು ಸೇವಿಸುವುದನ್ನು ಅವಲಂಬಿಸಿದ್ದರು. ಅವರ ಕಥೆಯನ್ನು ಪುಸ್ತಕಗಳಲ್ಲಿ : ಮತ್ತು ಮಿರಾಕಲ್ ಇನ್ ದಿ ಆಂಡಸ್‌ ನಲ್ಲಿ ಹಾಗು ಪ್ರಾಂಕ್ ಮಾರ್ಶಲ್‌ರವರಿಂದ ನಿರ್ಮಾಣಗೊಂಡ ಸಿನಿಮ ಅಲೈವ್‌ ನಲ್ಲಿ, ಮತ್ತು ಸತ್ಯಸಂಗತಿಗಳನ್ನು ಪ್ರಸ್ತುತ ಪಡಿಸುವ ದಾಖಲೆಗಳು : 20 (1993) ಮತ್ತು : ' (2008)ರಲ್ಲಿ ವಿವರಿಸಲಾಗಿದೆ. 1960ರ ಮತ್ತು 1970ರ ಆಗ್ನೇಯ ಏಷಿಯದ ಯುದ್ಧಗಳ ಸಮಯದಲ್ಲಿ ಪತ್ರಿಕೋದ್ಯಮಿ ನೈಲ್ ಡವಿಸ್‌‌ರವರಿಂದ ನರಭಕ್ಷಕತೆಯನ್ನು ವರದಿಮಾಡಲಾಯಿತು. ಡವಿಸ್ ವರದಿ ಮಾಡಿದ ಪ್ರಕಾರ ಕಂಬೋಡಿಯಾದ ಸೈನಿಕರು ಸಂಹರಿಸಿದ ವಿರೋಧಿಗಳ ದೇಹದ ಭಾಗಗಳನ್ನು, ಮುಖ್ಯವಾಗಿ ಪಿತ್ತಜನಕಾಂಗವನ್ನು, ಶಾಸ್ತ್ರೋಕ್ತ ಪದ್ಧತಿಯಲ್ಲಿ ತಿಂದರು. ಏನೇಯಾಗಲಿ ಅವರು, ಮತ್ತು ಅನೇಕ ಆಶ್ರಿತರು, ಯಾವುದೇ ಆಹಾರ ಸಿಗದೇ ಇದ್ದಾಗ ನರಭಕ್ಷಕತೆಯನ್ನು ಅಧರ್ಮದ ಪದ್ಧತಿಯಲ್ಲಿ ಅನುಸರಿಸಲಾಯಿತು ಎಂದು ಸಹ ವರದಿ ಮಾಡಿದರು. ಸಾಮಾನ್ಯವಾಗಿ ಇದು ಉದ್ಭವಿಸಿದ್ದು, ನಗರಗಳು ಮತ್ತು ಗ್ರಾಮೀಣ ಪ್ರದೇಶಗಳು ಖ್ಮೆರ್ ರೋಗ್‌ರ ಹತೋಟಿಯಲ್ಲಿದ್ದಾಗ, ಮತ್ತು ಆಹಾರವು ಕಟ್ಟುನಿಟ್ಟಾಗಿ ಪಡಿತರವಾಗಿ, ಆಹಾರದ ಕೊರತೆಯಿಂದ ಸಾಯುವುದು ವ್ಯಾಪಕವಾಗಿ ಹರಡಿದಾಗ. ಯಾವುದೇ ನಾಗರಿಕ ನರಭಕ್ಷಕತೆಯಲ್ಲಿ ಭಾಗವಹಿಸಿ ಸಿಕ್ಕಿಹಾಕಿಕೊಂಡರೆ ಅಂತಹವರನ್ನು ಕೂಡಲೆ ಗಲ್ಲಿಗೇರಿಸಲಾಗುತ್ತದೆ. ನರಭಕ್ಷಕತೆಯು ಎರಡನೆಯ ಕಾಂಗೊ ಯುದ್ಧ, ಮತ್ತು ಲಿಬೆರಿಯದಲ್ಲಿನ ಸಿವಿಲ್ (ನಾಗರಿಕ) ಯುದ್ಧಗಳು ಮತ್ತು ಸಿಯರ ಲಿಯೊನ್‌ನ್ನು ಒಳಗೊಂಡು, ಇತ್ತೀಚಿನ ಅನೇಕ ಆಪ್ರಿಕನ್ ಘರ್ಷಣೆಗಳಲ್ಲಿ ವರದಿಯಾಗಿತ್ತು. ಕಾಂಗೊಲಿಯ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯಗಳು ಅತ್ಯಾಚಾರಕ್ಕಿಂತಲೂ ಹೆಚ್ಚಾಗಿ ಮುಂದುವರೆದಿರುತ್ತವೆ, ಮತ್ತು ಇವು ಲೈಂಗಿಕ ಗುಲಾಮಗಿರಿ, ಒತ್ತಾಯದ ಲೈಂಗಿಕ ಸಂಪರ್ಕ, ಮತ್ತು ನರಭಕ್ಷಕತೆಗಳನ್ನು ಒಳಗೊಂಡಿವೆ ಎಂದು ಜುಲೈ 2007ರಲ್ಲಿ ಒಬ್ಬU.. ಮಾನವ ಹಕ್ಕುಗಳ ತಜ್ಞರು ವರದಿಮಾಡಿದ್ದರು. ಶಾಂತಿ ಸಮಯದಲ್ಲಿ ನರಭಕ್ಷಕತೆಯು ಅತಿ ವಿರಳವಾಗಿರುವುದರಿಂದ, ಇದು ಹತಾಶ ಭಾವನೆಯಲ್ಲಿ ಹೆಚ್ಚಾಗಿ ಮಾಡಲಾಗುವುದಾಗಿದೆ; ಇತರ ಸಮಯಗಳಲ್ಲಿ, ಇದನ್ನು ಕಾಂಗೊ ಪಿಗ್ಮಿಗಳಂತಹ, ಸಾಂಕ್ಷೇಪವಾಗಿ ದಿಕ್ಕಿಲ್ಲದವರೆಂದು ನಂಬಿದ್ಧ ನಿರ್ದಿಸ್ಟ ಪಂಗಡಗಳಲ್ಲಿ ಪ್ರಜ್ಞಾಪೂರ್ವಕವಾಗಿ ನಡೆಸಲಾಗುತ್ತದೆ, ಅವರ ಕೆಳಗಿನ ಮಹಿಳೆಯರಮೇಲೂ ಸಹ ಇತರ ಕಾಂಗೊಲಿಗಳಿಂದ ಈ ತರಹದ ಕೃತ್ಯಗಳನ್ನು ಎಸಗಲಾಗುತ್ತದೆ. ಕೆಲವುಸಲ ಮಂತ್ರಗಾರ್ತಿ ವೈದ್ಯರು ಮಕ್ಕಳ ದೇಹದ ಭಾಗಗಳನ್ನು ತಮ್ಮ ಔಷಧಿಯಲ್ಲಿ ಉಪಯೋಗಿಸುತ್ತಾರೆ ಎಂದು ಸಹ ಕೆಲವರಿಂದ ವರದಿಯಾಗಿತ್ತು. 1970ರಲ್ಲಿ ಉಗಂಡದ ಸರ್ವಾಧಿಕಾರಿ ಇಡಿ ಅಮಿನ್‌ ಅವರು ನರಭಕ್ಷಕತೆಯನ್ನು ಅನುಸರಿಸಿದ್ದಕ್ಕಾಗಿ ಪ್ರಖ್ಯಾತರಾದರು. ಸ್ವತಃ ಪ್ರಕಟಿಸಿಕೊಂಡ ಸೆಂಟ್ರಲ್ ಆಪ್ರಿಕನ್ ರಿಪಬ್ಲಿಕ್ ಮಹಾರಾಜ, ಜೀನ್-ಬೆಡೆಲ್ ಬೊಕಾಸ (ಚಕ್ರವರ್ತಿ ಬೊಕಾಸ ), 24 ಅಕ್ಟೋಬರ್ 1986ರಂದು ನರಭಕ್ಷಕತೆಯ ಅನೇಕ ಕೇಸುಗಳ ಪರೀಕ್ಷೆಗೆ ಒಳಗಾದರಾದರು ಅವರು ತಪ್ಪಿತಸ್ಥರೆಂದು ಎಂದೂ ಸಾಬೀತಾಗಲಿಲ್ಲ. 1979ರ ಏಪ್ರಿಲ್ 17 ಮತ್ತು ಏಪ್ರಿಲ್ 19ರ ಮಧ್ಯ, ಸರಕಾರ-ಆಜ್ಞಾಪಿಸಿದ ದುಬಾರಿ ಶಾಲಾ-ಸಮವಸ್ತ್ರಗಳನ್ನು ಧರಿಸುವುಕೆಯ ವಿದುದ್ಧ ಪ್ರತಿಭಟಿಸಿದ ನಂತರ, ಬಹುಸಂಖ್ಯೆಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಧಿಗಳನ್ನು ಬಂಧಿಸಲಾಗಿತ್ತು. ಸುಮಾರು ಒಂದು-ನೂರು ಮಕ್ಕಳನ್ನು ಕೊಲ್ಲಲಾಯಿತು. ಅವರ ದಂಡದಿಂದ ಕೆಲವು ಮಕ್ಕಳನ್ನು ಸಾಯುವ ವರೆಗು ದಂಡಿಸುವುದರೊಂದಿಗೆ ಮತ್ತು ಅವರು ಬಲಿತೆಗೆದುಕೊಂಡವರಲ್ಲಿ ಕೆಲವರನ್ನು ಅಪಾದಿತವಾಗಿ ತಿಂದು ಹಾಕಿದರು ಎಂಬುದರೊಂದಿಗೆ, ಬೊಕಾಸ ಈ ಕಗ್ಗೊಲೆಯಲ್ಲಿ ಬಾಗಿಯಾಗಿದ್ದರೆಂದು ಹೇಳಲಾಗುತ್ತದೆ. 1996ರಲ್ಲಿ ವಲಸಿಗರ ವರದಿಯಂತೆ, ನರಭಕ್ಷಕತನವು ಕೆಲವು ಭಾರಿ ನಾರ್ತ್ ಕೊರಿಯಾದಲ್ಲ್ಲಿ ರೂಢಿಯಲ್ಲಿತ್ತು. ಗಿನಿಯಾ ರಾಜ್ಯದ ಸುತ್ತಮುತ್ತ ಫ್ಯಾಕ್ಟ್-ಫೈಂಡಿಗ್ ಮಿಷನ್‌‌ನಲ್ಲಿ ಭಾಗವಹಿಸಿದ್ದ ಆಮ್ನೆಸ್ಟಿ ಇಂಟರ್ನ್ಯಾಷನಲ್‌ನ ಪ್ರತಿನಿಧಿಗಳು 1980ರಲ್ಲಿ ಲೈಬೀರಿಯಾದ ಇಂಟರ್ನೆಸಿನೆಯಲ್ಲಿ ಭಾಗವಹಿಸಿದ್ದವರು ನಡಿಸಿದ ನರಭಕ್ಷಕ ಹಬ್ಬದ ಚಿತ್ರಗಳು ಮತ್ತು ಕೆಲವು ದಾಖಲೆ ಸಾಕ್ಷಿಗಳನ್ನು ಅಂತರರಾಷ್ಟ್ರೀಯ ಮೆಡಿಕಲ್ ಚಾರಿಟಿ ಮೆಡಿಸಿನ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್ ಒದಗಿಸಿತು. ಆದಾಗ್ಯೂ, ಆಮ್ನೆಸ್ಟಿ ಇಂಟರ್ನ್ಯಾಷನಲ್ ಈ ಸಾಕ್ಷ್ಯಗಳನ್ನು ಬಹಿರಂಗಗೊಳಿಸಲು ಒಪ್ಪಲಿಲ್ಲ; ಸಂಸ್ಥೆಯ ಸೆಕ್ರೆಟರಿ-ಜನರಲ್, ಪಿಯೆರ್ರೆ ಸ್ಯಾನೆಯವರು ಹೇಳಿರುವಂತೆ "ಮಾನವ ಹಕ್ಕುಗಳ ಉಲ್ಲಂಘನೆಯಾದ ಮೇಲೆ ಅವರು ದೇಹಗಳನ್ನು ತೆಗೆದುಕೊಂಡು ಏನು ಮಾಡುತ್ತಾರೆ, ಇದು ನಮಗೆ ಆದೇಶವಾಗಿರಲಿಲ್ಲ ಅಥವಾ ಸಂಬಂಧಪಟ್ಟಿಲ್ಲ". ಲೈಬೀರಿಯಾದಲ್ಲಿದ್ದ ದೊಡ್ಡ ಪ್ರಮಾಣದ ನರಭಕ್ಷಕತೆಯನ್ನು ಲಂಡನ್‌ನ ಜರ್ನೀಮ್ಯಾನ್ ಪಿಕ್ಚರ್ಸ್‌ನ ವೀಡಿಯೋ ಡಾಕ್ಯುಮೆಂಟರಿಗಳನ್ನು ಪರಿಶೀಲಿಸಲಾಯಿತು. ವೆನೆಜುವೆಲಾದ "ಎಲ್ ಕಮೆಗೆಂಟೆ" ಎಂದು ಕರೆಯಲಾಗುವ ದೊರಂಗಲ್ ವರ್ಗಸ್ ಒಬ್ಬ ಸ್ಪ್ಯಾನಿಶ್ "ನರಭಕ್ಷಕ", ಈತನು ಸರಣಿ ಕೊಲೆಗಾರ ಹಾಗೂ ನರಭಕ್ಷಕನಾಗಿದ್ದನು. ವರ್ಗಾಸ್ 1999ರಲ್ಲಿ ಅವನನ್ನು ಸೆರೆಹಿಡಿಯುವವರೆಗೆ ಎರಡು ವರ್ಷಗಳ ಅವಧಿಯಲ್ಲಿ ಕನಿಷ್ಠ 10 ಜನರನ್ನು ಕೊಂದು ತಿಂದಿದ್ದಾನೆ. ಮತ್ತೋರ್ವ ಸರಣಿ ಹಂತಕ, ಯುನೈಟೆಡ್ ಸ್ಟೇಟ್ಸ್‌ನ ಜೆಫ್ರೀ ದಹ್ಮರ್, 1991ರಲ್ಲಿ ಬಂಧಿಸುವವರೆಗೆ ನರಭಕ್ಷತೆಯ ಪ್ರಯೋಗಗಳನ್ನು ನಡೆಸಿದ್ದ. ಅವನಿಗೆ ಬಲಿಯಾದವರಿಂದ ಕದ್ದ ವಸ್ತುಗಳು, ಮಾನವ ಮಾಂಸದ ಚೂರುಗಳು ಮತ್ತು ಮೂಳೆಗಳು ಆತನ ಮನೆಯ ಮಡಿಕೆಗಳಲ್ಲಿ ಬಾಣಲೆಗಳಲ್ಲಿ ಸಿಕ್ಕಿದವು. 1999ರಲ್ಲಿ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಪೀಪಾಯಿಯಲ್ಲಿ ಕೊಲೆಮಾಡಿ ದೇಹಗಳನ್ನು ಇಟ್ಟ ತಪ್ಪಿತಸ್ಥರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ ಅವರು ಕೊಲೆಮಾಡಿದ ಕೊನೆಯ ವ್ಯಕ್ತಿಯ ದೇಹದ ಭಾಗಗಳನ್ನು ಕರಿದು ತಿಂದರೆಂದು ಒಪ್ಪಿಕೊಂಡಿದ್ದರು. ಮಾರ್ಚ್ 2001ರಲ್ಲಿ ಜರ್ಮನಿಯಲ್ಲಿ, ಆರ್ಮಿನ್ ಮೀವ್ಸ್ ಎಂಬುವವನು ಇಂಟರ್ನೆಟ್ ಜಾಹೀರಾತು ನೀಡಿದ್ದ ವಿಷಯವೆಂದರೆ "ಕೊಲೆಮಾಡಿ ತಿನ್ನಲು ಉತ್ತಮ ದೇಹಾರೋಗ್ಯ ಹೊಂದಿರುವ 18 ರಿಂದ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಬೇಕಾಗಿದ್ದಾರೆ". ಈ ಜಾಹೀರಾತಿಗೆ ಉತ್ತರಿಸಿದವನು ಬರ್ನ್ಡ್ ಜರ್ಗನ್ ಬ್ರ್ಯಾಂಡ್ಸ್. ಬ್ರ್ಯಾಂಡ್ಸ್‌ನನ್ನು ಕೊಂದು ಆತನ ದೇಹದ ಭಾಗಗಳಾನ್ನು ತಿಂದ ನಂತರ, ಮೀವ್ಸ್‌ನನ್ನು ಒಬ್ಬ ಕೊಲೆಗಾರ, ತಪ್ಪಿತಸ್ಥನೆಂದು ಪರಿಗಣಿಸಲಾಯಿತು. ರಾಮ್‌ಸ್ಟೀನ್ ಅವರು ರಚಿಸಿರುವ "ಮೀನ್ ಟೀಲ್" ಹಾಡು ಮತ್ತು ಈ ಪ್ರಕರಣದ ಮೂಲದಿಂದ ಬ್ಲಡ್‌ಬೇತ್ ಇದನ್ನು ರಚಿಸಲಾಯಿತು. ಫೆಬ್ರವರಿ 2004ರಲ್ಲಿ, ಆತನ ಸ್ನೇಹಿತನನ್ನು ಕೊಂದು ತಿಂದ ಪೂರ್ವ ಲಂಡನ್ನಿನ 39 ವರ್ಷ ವಯಸ್ಸಿನ ಬ್ರಿಟಿಷ್ ವ್ಯಕ್ತಿ ಪೀಟರ್ ಬ್ರ್ಯಾನ್ನನ್ನು ಬಂಧಿಸಿದರು. ಆತನನ್ನು ಕೊಲೆ ಆಪಾದನೆಯಲ್ಲಿ ಬಂಧಿಸಲಾಗಿತ್ತು, ಆದರೆ ಈ ಪ್ರಕರಣ ನಡೆಯುವ ಸ್ವಲ್ಪ ಮುಂಚೆ ಬಿಡುಗಡೆ ಮಾಡಲಾಗಿತ್ತು. ಸೆಪ್ಟೆಂಬರ್ 2006ರಲ್ಲಿ, ಆಸ್ಟ್ರೇಲಿಯನ್ ದೂರದರ್ಶನ ತಂಡಗಳು 60 ಮಿನಿಟ್ಸ್ ಮತ್ತು ಟುಡೇ ಟುನೈಟ್‌ ನಲ್ಲಿ ಆರು ವರ್ಷದ ಬಾಲಕನೊಬ್ಬ ಅವನ ಬುಡಕಟ್ಟು ಜನರಾದ ವೆಸ್ಟ್ ಪಪುವಾ, ಇಂಡೊನೇಶಿಯಾದ ಕೊರೊವಾಯಿಗಳು ಅವನನ್ನು ತಿಂದರೆನ್ನಲಾಗಿತ್ತು. ಆಗಸ್ಟ್ 14, 2007ರಲ್ಲಿ, ಫಾರ್-ಲೆಫ್ಟ್ ಮಾವೋಯಿಸ್ಟ್ ನಕ್ಸಲೈಟ್ ತಂಡದ ಒಬ್ಬ ಸದಸ್ಯ ನರಭಕ್ಷಣೆಯಲ್ಲಿ ತೊಡಗಿದ್ದನು. ಭಾರತೀಯ ರಾಜ್ಯ ಒರಿಸ್ಸಾದಲ್ಲಿ, ಒಬ್ಬ ಎಡಪಂಥೀಯನು ಹಳ್ಳಿಯ ಜನರು ನಕ್ಸಲೈಟ್ ಅಪರಾಧಿ ಚಟುವಟಿಕೆಗಳನ್ನು ಹೇಳದೆ ಇರುವಂತೆ ಭಯಪಡಿಸುವುದಕ್ಕಾಗಿ ಒಬ್ಬ ಪೋಲೀಸ್ ಮಾಹಿತಿದಾರನನ್ನು ಕೊಂದು ತಿಂದನು. ಸೆಪ್ಟೆಂಬರ್ 14, 2007ರಲ್ಲಿ, ಒಬ್ಬ ಒಝ್ಗರ್ ಡೆಂಗಿಝ್ ಎಂಬುವವನು ಒಬ್ಬ ವ್ಯಕ್ತಿಯನ್ನು ಕೊಲೆಮಾಡಿ ತಿಂದುದಕ್ಕಾಗಿ ಟರ್ಕಿಶ್ ರಾಜಧಾನಿ ಅಂಕರದಲ್ಲಿ ಸೆರೆಹಿಡಿಯಲಾಗಿದೆ. ಡೆಂಗಿಝ್‌ನು ಆತನೇ ಹೇಳಿಕೊಂಡಿರುವಂತೆ ಬಲಿಯಾದ ಮನುಷ್ಯನ ದೇಹವನ್ನು ಮಾಂಸದ ಚೂರುಗಳನ್ನಾಗಿ ಕತ್ತರಿಸಿ, ಉಳಿದದ್ದನ್ನು ಬೀದಿಯಲ್ಲಿರುವ ನಾಯಿಗಳಿಗೆ ಹಂಚಿದನು. ಅವನು ಮನೆಗೆ ಹೋಗುವ ಹಾದಿಯಲ್ಲಿ ಎರ್‌ನ ಮಾಂಸದ ಕೆಲಭಾಗವನ್ನು ತಿಂದನು. ಡೆಂಗಿಝ್, ತನ್ನ ತಂದೆತಾಯಿಗಳ ಜೊತೆಯಲ್ಲಿ ವಾಸಿಸುತ್ತಿದ್ದು ಎರ್ರ್‌ನ ದೇಹದ ಉಳಿದ ಭಾಗಗಳನ್ನು ತಂದೆತಾಯಿಗಳಿಗೆ ಹೇಳದೆ ಫ್ರಿಡ್ಜ್‌ನಲ್ಲಿಟ್ಟಿದ್ದನು. ಜನವರಿ 2008ರಲ್ಲ್ಲಿ, ಮಿಲ್ಟನ್ ಬ್ಲೇಹ್ಯಿ, 37, "ಮುಗ್ಧ ಮಕ್ಕಳನ್ನು ಕೊಲೆಮಾಡಿ ಅವರ ಹೃದಯವನ್ನು ಕಿತ್ತು ಚೂರು ಮಾಡಿ ನಮಗೆ ತಿನ್ನಲು ನೀಡಲಾಗುತ್ತಿತ್ತು" ಇದು ಮಾನವ ಬಲಿಯ ಒಂದು ಭಾಗವಾಗಿತ್ತು ಎಂದು ತಪ್ಪು ಒಪ್ಪಿಕೊಂಡನು ಅವನು ಲೈಬೇರಿಯನ್ ಅಧ್ಯಕ್ಷ ಚಾರ್ಲ್ಸ್ ಟೇಲರ್‌ನ ಸೇನೆಯ ವಿರುದ್ಧ ಹೋರಾಡಿದನು. ಮಾರ್ಚ್ 13ರಂದು ಚಾರ್ಲ್ಸ್ ಟೇಲರ್‌ನ ಯುದ್ಧ ಅಪರಾಧಗಳ ವಿಚಾರಣೆ ಸಮಯದಲ್ಲಿ, ಟೇಲರ್‌ನ ಯುದ್ಧ ಕಾರ್ಯಾಚರಣೆಯ ಮುಖ್ಯಸ್ಥ ಜೋಸೆಫ್ ಮರ್ಝಾಹ್‌ನು ಟೇಲರ್ ತನ್ನ ಸೈನಿಕರಿಗೆ ಶತ್ರುಗಳನ್ನು, ಶಾಂತಿ ಪಾಲಕರನ್ನು ಮತ್ತು ಯುನೈಟೆಡ್ ನೇಷನ್ಸ್‌ನ ಸಿಬ್ಬಂದಿ ವರ್ಗದವರನ್ನು ನರಭಕ್ಷಣೆ ಮಾಡಲು ಹೇಳುತ್ತಿದ್ದನೆಂದು ಆಪಾದಿಸಿದ್ದಾನೆ. ತಾಂಜಾನಿಯಾದಲ್ಲಿ 2008ರಲ್ಲಿ, ಅಧ್ಯಕ್ಷ ಕಿಕ್‌ವೆಟ್ ಅವರು ಮಾಟಗಾತಿ ವೈದ್ಯರನ್ನು ತೊನ್ನು ರೋಗಕ್ಕೆ ತುತ್ತಾಗಿರುವ ಜನರನ್ನು ಅವರ ಅದೃಷ್ಟಕ್ಕಾಗಿ ಕೊಲ್ಲುವುದನ್ನು ಸಾರ್ವಜನಿಕವಾಗಿ ಖಂಡಿಸಿದ್ದಾರೆ. 2007ರ ಮಾರ್ಚ್‌ನಲ್ಲಿ ಸುಮಾರು ಇಪ್ಪತ್ತೈದು ಜನ ತೊನ್ನು ಹೊಂದಿದ ತಾಂಜೇನಿಯನ್ನರನ್ನು ಕೊಲೆಮಾಡಲಾಗಿದೆ. ಕೊಲಂಬಿಯನ್ ಪತ್ರಕರ್ತ ಹಾಲ್ಮನ್ ಮೊರ್ರಿಸ್ ಅವರ ಒಂದು ಡಾಕ್ಯುಮೆಂಟರಿಯಲ್ಲಿ, ಒಬ್ಬ ನಿವೃತ್ತಿ ಹೊಂದಿದ ಅರೆಪಡೆಯ ಸೈನಿಕನು ಕೊಲಂಬಿಯಾ ಹಳ್ಳಿಗಾದು ಪ್ರದೇಶದಲ್ಲಿ ಸಮೂಹ ಕೊಲೆಗಳಾದಾಗ ಅದರಲ್ಲಿ ಹಲವಾರು ಜನರು ನರಭಕ್ಷಣೆ ಮಾಡಿದರೆಂದು ಹೇಳಿದ್ದಾನೆ. ಬಲಿಯಾದವರ ರಕ್ತ ಕುಡಿದರೆ ಇನ್ನಷ್ಟು ಜನರನ್ನು ಕೊಲ್ಲಲು ಸಾಧ್ಯವಾಗುತ್ತದೆ ಎಂದು ಹೇಳುತ್ತಿದ್ದರೆಂದು ಕೂಡಾ ಆತ ಒಪ್ಪಿಕೊಂಡನು. ನವೆಂಬರ್ 2008ರಲ್ಲಿ, ಡೊಮಿನಿಕನ್ ರಿಪಬ್ಲಿಕ್‌ನಿಂದ ಬಂದ 33 ಜನ ಅಕ್ರಮ ವಲಸಿಗರು ಪುಯೆರ್ಟೊ ರಿಕೊ ದಾರಿಯಲ್ಲಿರುವಾಗ ಸುಮಾರು 15 ದಿನಗಳು ಸಮುದ್ರದ ಮಧ್ಯೆ ಕಳೆಯಬೇಕಾದಾಗ ಹಡಗಿನ ಗಸ್ತುದಳದ ಯು.ಎಸ್. ಕೋಸ್ಟ್ ಗಾರ್ಡ್ ಪಾರುಮಾಡುವ ಮೊದಲೆ ನರಭಕ್ಷಕತನಕ್ಕೆ ಬಲವಂತ ಪಡಿಸಲಾಯಿತು. ಜನವರಿ 2009ರಲ್ಲಿ ರಷಿಯಾದಲ್ಲಿ 16ವರ್ಷದ ಕರೀನಾ ಬರ್ದುಚಿಯನ್ ಅವರನ್ನು ಕೊಲೆಮಾಡಿ ತಿಂದುದಕ್ಕಾಗಿ ಮ್ಯಾಕ್ಸಿಮ್ ಗೊಲೊವತ್‌ಸ್ಕಿಖ್ ಮತ್ತು ಯೂರಿ ಮೊಜ್ನೊವ್ ಅವರನ್ನು ಆರೋಪಿಗಳೆಂದು ನಿರ್ಧರಿಸಲಾಯಿತು. ಫೆಬ್ರವರಿ 9, 2009ರಲ್ಲಿ, ಬ್ರೆಝಿಲ್‌ನ ಕುಲಿನಾ ಬುಡಕಟ್ಟಿನ ಐದು ಜನರು ಒಬ್ಬ ರೈತನನ್ನು ಕೊಲೆಮಾಡಿ ತಿಂದುದಕ್ಕಾಗಿ ನರಭಕ್ಷಣೆಯ ಆರೋಪದ ಮೇರೆಗೆ ಬ್ರೆಝಿಲಿಯನ್ ಅಧಿಕಾರಿಗಳಿಗೆ ಬೇಕಾಗಿದ್ದಾರೆ. ಒಬ್ಬ ರ್ಯಾಪ್ ಕಲಾವಿದ ಬಿಗ್ ಲರ್ಚ್ ಅವನಿಗೆ ಅಲ್ಪ ಪರಿಚಯವಿದ್ದ ಒಬ್ಬ ವ್ಯಕ್ತಿಯನ್ನು ಕೊಲೆಮಾಡಿ ಆತನ ಸ್ವಲ್ಪ ಭಾಗವನ್ನು ತಿಂದುದಕ್ಕಾಗಿ ಅಪರಾಧಿಯೆಂದು ಪರಿಗಣಿಸಲಾಗಿತ್ತು, ಅವರಿಬ್ಬರೂ ಪಿಸಿಪಿ ಮಾದಕ ದ್ರವ್ಯದ ಪ್ರಭಾವಕ್ಕೊಳಗಾಗಿದ್ದರೆನ್ನಲಾಗಿದೆ. ನವೆಂಬರ್ 14, 2009, ರಷಿಯಾದ ಪರ್ಮ್‌ನಲ್ಲಿ ಇಪ್ಪತ್ತೈದು ವರ್ಷದ ವ್ಯಕ್ತಿಯೊಬ್ಬನನ್ನು ಕೊಂದು ದೇಹದ ಭಾಗಗಳನ್ನು ತಿಂದುದಕ್ಕಾಗಿ ಮೂರು ಜನ ನಿರ್ಗತಿಕ ಪುರುಷರನ್ನು ಬಂಧಿಸಲಾಯಿತು. ಆತನ ದೇಹದ ಉಳಿದ ಭಾಗಗಳನ್ನು ಸ್ಥಳೀಯ ಪೈ/ಕಬಾಬ್ ಹೌಸ್‌ಗೆ ಮಾರಲಾಗಿತ್ತು. == ಇದನ್ನೂ ನೋಡಿ == ಆಲ್ಬರ್ಟ್ ಫಿಷ್ ಅಲ್ಫೆರ್ಡ್ ಪ್ಯಾಕರ್ ಆಂಡ್ರೊಫಾಜಿ ಅರ್ಮಿನ್ ಮೆವ್ಸ್ ಅಸ್ಮಾಟ್ ಜನರು ಜನಪ್ರಿಯ ಸಂಸ್ಕೃತಿಯಲ್ಲಿ ನರಭಕ್ಷಕತೆ ಚಿಜೊನ್ ಕುಟುಂಬ ಎಸ್ಸೆಕ್ಸ್, ಮುಳುಗುತ್ತಿರುವ ಹಡಗಿನ ನಾವಿಕರು ಬದುಕುಳಿಯುವುದಕ್ಕಾಗಿ ನರಭಕ್ಷಣೆ ಮಾಡಿದ್ದರು ಹನ್ನಿಬಾಲ್ ಲೆಕ್ಟರ್ ಹೋಮೊ ಅಂಟೆಸೆಸ್ಸರ್ ಇಸ್ಸೀ ಸಾಗವ ಕುರು, ಇದು ಒಂದು ಕಾಯಿಲೆ ಮ್ಯಾನಿಫೆಸ್ಟೊ ಅಂಟ್ರೊಪೊಫಾಗೊ ಮ್ಯಾನ್‌ಹಂಟರ್ (ಚಲನಚಿತ್ರ ಸರಣಿಗಳು) ಪ್ಲಾಸೆಂಟೊಫಾಜಿ ಆರ್ ವಿ ಡ್ಯೂಡ್ಲೆ ಅಂಡ್ ಸ್ಟೀಫನ್ಸ್ ರಾವೆನಸ್ ದಿ ರೋಡ್ ಸ್ವಯಂ-ನರಭಕ್ಷಕತೆ ಲೈಂಗಿಕ-ನರಭಕ್ಷಕತೆ ದಿ ಟೆಕ್ಸಾಸ್ ಚೈನ್ ಸಾ ಮಸ್ಸಾಕ್ರೆ ಟ್ರಾನ್ಸ್‌ಮಿಸ್ಸಿಬಲ್ ಸ್ಪಾಂಜಿಫೋರ್ಮ್ ಎನ್ಸೆಫಾಲೊಪತಿ ವೊರಾರೆಫಿಲ್ಲಾ == ಟಿಪ್ಪಣಿಗಳು == == ಆಕರಗಳು == == ಬಾಹ್ಯ ಕೊಂಡಿಗಳು == .comನಲ್ಲಿ ನರಭಕ್ಷಕತನದ ಬಗ್ಗೆ ಎಲ್ಲ ವಿವರಗಳು: ಆಧುನಿಕ ಸಮಯದಲ್ಲಿ ಒಂದು ಪುರಾತನ ನಿಷೇಧ (ನರಭಕ್ಷಕತನದ ಮನಃಶಾಸ್ತ್ರ) 2005-07-14 ವೇಬ್ಯಾಕ್ ಮೆಷಿನ್ ನಲ್ಲಿ. ಪುರಾಣಕಥೆಗಳಲ್ಲಿ ನಿಯತವಾದ ನರಭಕ್ಷಕತನದ ಬಗ್ಗೆ ಚರ್ಚಿಸುವಂತಹ ದಿ ಸ್ಟ್ರೈಟ್ ಡೋಪ್ 2009-01-06 ವೇಬ್ಯಾಕ್ ಮೆಷಿನ್ ನಲ್ಲಿ. ಟಿಪ್ಪಣಿಗಳು ಜನಸಮೂಹದಲ್ಲಿದ್ದ ಒಬ್ಬ ಕೋಪಿಷ್ಟ ಡಚ್ ವ್ಯಕ್ತಿಯು ಅವರ ಪ್ರಧಾನ ಮಂತ್ರಿಯನ್ನು ಕೊಂದು ತಿಂದು ಹಾಕಿದನೇ? 2008-11-20 ವೇಬ್ಯಾಕ್ ಮೆಷಿನ್ ನಲ್ಲಿ. (ದಿ ಸ್ಟ್ರೈಟ್ ಡೋಪ್‌ನಿಂದ) ಹ್ಯಾರಿ ಜೆ. ಬ್ರೌನ್, 'ಹ್ಯಾನ್ಸ್ ಸ್ಟೇಡನ್ ಅಮಾಂಗ್ ದಿ ತುಪಿನಂಬಾಸ್.'