ನಾಜಿಸಮ್ ( , ನ್ಯಾಶನಲ್ ಸೋಶಿಯಲಿಸಮ್ ಅಥವಾ ರಾಷ್ಟ್ರೀಯ ಸಮಾಜವಾದ), ನಾಜೀ ಪಕ್ಷ ಮತ್ತು ನಾಜೀ ಜರ್ಮನಿಯ ಸಿದ್ಧಾಂತ ಮತ್ತು ಆಚರಣೆಯಾಗಿದೆ. ಇದು ಫ್ಯಾಸಿಸಂ‌ನ ರಾಜಕೀಯವಾಗಿ ಸಮನ್ವಯಗೊಂಡ ವಿಧವಾಗಿದ್ದು ಎಡ ಮತ್ತು ಬಲ ಸಿದ್ಧಾಂತಗಳ ನೀತಿ, ತತ್ವಜ್ಞಾನ, ಮತ್ತು ತಂತ್ರಗಳನ್ನೊಳಗೊಂಡಿದೆ. ನಾಜಿಸಮ್ ರಾಜಕೀಯದ ತೀವ್ರ ಬಲಪಂಥೀಯ ರೀತಿಯಾಗಿದೆ. ಪ್ರಥಮ ವಿಶ್ವಯುದ್ಧದ ನಂತರದ ವೀಮರ್ ಜರ್ಮನಿಯ ನಾಜೀಗಳು ಬಲಪಂಥೀಯ ರಾಜಕೀಯ ಪಕ್ಷಗಳಲ್ಲೊಬ್ಬರಾಗಿದ್ದು ತಮ್ಮದು ರಾಷ್ಟ್ರೀಯ ಸಮಾಜವಾದದ ಸಿದ್ಧಾಂತವೆಂದು ಗುರುತಿಸಿಕೊಂಡಿದ್ದರು. 1920ರಲ್ಲಿ ನಾಜೀ ಪಕ್ಷವು ತಮ್ಮ 25-ಅಂಶಗಳ ಅನ್ನು ಪ್ರಕಟಿಸಿದರು ಮತ್ತು ಇದರ ಪ್ರಮುಖ ತತ್ವಗಳು ಹೀಗಿದ್ದವು: ಸಂಸತ್-ವಿರೋಧ, ಪ್ಯಾನ್-ಜರ್ಮನಿಸಮ್, ಜನಾಂಗೀಯತೆ, ಸಾಮುದಾಯಿಕತೆ, ಸಾಮಾಜಿಕ ಡಾರ್ವಿನಿಸಮ್, ಸುಸಂತಾನಶಾಸ್ತ್ರ, ಯಹೂದ್ಯ-ವಿರೋಧ, ಕಮ್ಯುನಿಸಮ್-ವಿರೋಧ, ಸರ್ವಾಧಿಕಾರಿತ್ವ, ಮತ್ತು ಆರ್ಥಿಕ ಹಾಗೂ ರಾಜಕೀಯ ಉದಾರವಾದಕ್ಕೆ ವಿರೋಧ. ಆದರೂ, 1930ರ ದಶಕದ ಹೊತ್ತಿಗೆ, ಇಷ್ಟೆಲ್ಲ ಬೌದ್ಧಿಕ ತಳಹದಿಗಳನ್ನು ಹೊಂದಿದ್ದರೂ ಕೂಡ ನಾಜಿಸಮ್ ಒಂದು ಪಕ್ಕಾ ಸಿದ್ಧಾಂತವಾಗಿರದೆ ಕಾಲ್ಪನಿಕವಾದ Großdeutschland (ಗ್ರೇಟರ್ ಜರ್ಮನಿ)ಯನ್ನು ಸಾಕಾರಗೊಳಿಸಲು ಅವಶ್ಯಕವಾದ ಯೋಜನೆಗಳು, ಪರಿಕಲ್ಪನೆಗಳು, ಮತ್ತು ತತ್ವಜ್ಞಾನಗಳನ್ನೊಳಗೊಂಡ ಸಂಯೋಜನೆ ಮಾತ್ರವಾಗಿದ್ದಿತು. ಜರ್ಮನಿಯನ್ನು ವಿಶ್ವದಾದ್ಯಂತ ಹರಡಿದ ಮಹಾ ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ಸಾಮಾಜಿಕ-ಆರ್ಥಿಕ ಅತಂತ್ರದಿಂದ ಪಾರುಮಾಡುವ ಸಲುವಾಗಿ ನಾಜಿಸಮ್ ಒಂದು ರಾಜಕೀಯ-ಆರ್ಥಿಕ “ಮೂರನೇ ಹಾದಿ”ಯನ್ನು ಪ್ರವರ್ತಿಸಿತು; ಇದು ಬಂಡವಾಳಶಾಹಿಯೂ ಅಥವಾ ಕಮ್ಯುನಿಸ್ಟ್ ಕೂಡಾ ಅಲ್ಲದ ನಿರ್ವಹಣಾ ಆರ್ಥಿಕ ವ್ಯವಸ್ಥೆಯಾಗಿದ್ದಿತು. ನಾಜಿಸಮ್‌ನ ತೀವ್ರ ಬಲಪಂಥೀಯ ಒಲವು ಬಂಡವಾಳಶಾಹೀ-ವಿರೋಧಿಯಾದ ಬ್ಲ್ಯಾಕ್ ಫ್ರಂಟ್ ಮತ್ತು ಸ್ಟ್ರ್ಯಾಸರಿಸಮ್ಗಳ ನಿರ್ಮೂಲನದಿಂದ ಸುಸ್ಪಷ್ಟವಾಯಿತು, ಇವು ವರ್ಸೇಲ್ಸ್ ಒಪ್ಪಂದದ ನಂತರ ಜರ್ಮನಿಯ ಪರಿಸ್ಥಿತಿ ಮತ್ತು ಸೇನೆಯ ಸೋಲಿಗೆ ಕಾರಣವಾಯಿತೆನ್ನಲಾದ ಆಂತರಿಕ ಜೂಡಿಯೋ-ಬೊಲ್ಷೆವಿಸ್ಟ್ ಪಿತೂರಿಗಳ ವಿರುದ್ಧದ ರಾಷ್ಟ್ರೀಯತಾವಾದದ ಕಹಿಭಾವನೆಯಿಂದ ಪ್ರೇರಣೆಗೊಂಡ ಎಡಪಂಥೀಯ ನಾಜೀ ಉಪಪಂಗಡಗಳಾಗಿದ್ದವು. ಸೋಲಿನಿಂದ ಹೊರಬಂದ ವೀಮರ್ ಗಣತಂತ್ರದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಅಸ್ವಸ್ಥತೆಗಳು ನಾಜಿಸಮ್‌ನ ಸೈದ್ಧಾಂತಿಕ ಕ್ರೋಢೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವು, ಮತ್ತು ಮುಂದಕ್ಕೆ ಡ್ಯೂಶಸ್ ರೀಚ್ ನ ವೀಮರ್ ಸಂವಿಧಾನಕ್ಕೆ ಚುನಾವಣಾ ಸವಾಲನ್ನೊಡ್ಡಿ ನಾಜೀಪಕ್ಷವು 1933ರಲ್ಲಿ ಕಾನೂನುಬದ್ಧವಾಗಿ ಜರ್ಮನ್ ಸರ್ಕಾರದ ಅಧಿಕಾರವನ್ನು ಪಡೆದುಕೊಳ್ಳಲು ಕಾರಣವಾದವು. ಈಗಿನ ಜರ್ಮನಿಯಲ್ಲಿ ( ) ನಾಜಿಸಮ್‌ನ ಸಿದ್ಧಾಂತ, ಸಂಕೇತಶಾಸ್ತ್ರ, ಮತ್ತು ಸಾಹಿತ್ಯವನ್ನು ನಿಷೇಧಿಸಲಾಗಿದೆ; ಆದರೂ ಕೂಡ ನಿಯೋ ನಾಜಿಸಮ್ ಅಸ್ತಿತ್ವದಲ್ಲಿದೆ ಮತ್ತು ಪ್ರಪಂಚದಾದ್ಯಂತ ಅನುಯಾಯಿಗಳನ್ನು ಹೊಂದಿದೆ. ನಾಜಿಸಮ್‌ನ ಜನಾಂಗ-ಯುದ್ಧಗಳ ರಾಜಕೀಯದ ಪರಿಣಾಮವಾಗಿ - ವಿಶೇಷವಾಗಿ ಹಾಲೋಕಾಸ್ಟ್-ಮಾರಣಹೋಮದಿಂದಾಗಿ — ನಾಜೀ ಎಂಬ ಪದ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಕಲ್ಪನೆಗಳು ಮತ್ತು ಸಂಕೇತಗಳು (ಉದಾ. ಸ್ವಸ್ತಿಕ, ರೂನ್‌ಗಳು, ಸಮವಸ್ತ್ರಗಳು) ಯುರೋಪ್ ಮತ್ತು ಉತ್ತರ ಅಮೆರಿಕಾಗಳ ಬಿಳಿಯ ಶ್ರೇಷ್ಟತೆಯನ್ನು ಪ್ರತಿಪಾದಿಸುವ ಜನಾಂಗೀಯತೆಯನ್ನು ಪ್ರತಿನಿಧಿಸುತ್ತವೆ. == ಶಬ್ದವ್ಯುತ್ಪತ್ತಿ == ನಾಜೀ ಎಂಬ ಪದವು (ನ್ಯಾಶನಲ್ ಸೋಶಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ) ಎಂಬುದರ ಮೊದಲೆರಡು ಅಕ್ಷರಗಳಿಂದ ಬಂದುದಾಗಿದೆ. ನಾಜೀ ಪಕ್ಷದ ಸದಸ್ಯರು ತಮ್ಮನ್ನು (ನ್ಯಾಶನಲ್ ಸೋಶಿಯಲಿಸ್ಟ್)ಗಳೆಂದು ಕರೆದುಕೊಳ್ಳುತ್ತಿದ್ದರು, ಮತ್ತು ನಾಜೀಗಳು ಎಂಬುದರ ಬಳಕೆಯು ಅಪರೂಪವಾಗಿತ್ತು. ಜರ್ಮನ್ ಪದವಾದ ನಾಜೀ ಎಂಬುದು ಇನ್ನೊಂದು ರಾಜಕೀಯ ಪದವಾದ ಸೋಜೀ ಎಂಬ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಜರ್ಮನಿ) ಎಂಬುದರ ಸಂಕ್ಷಿಪ್ತರೂಪವನ್ನು ಬಹಳವಾಗಿ ಹೋಲುತ್ತದೆ. 1933ರಲ್ಲಿ ಅಡಾಲ್ಫ್ ಹಿಟ್ಲರ್ ಜರ್ಮನ್ ಸರ್ಕಾರದ ಅಧಿಕಾರವನ್ನು ಪಡೆದುಕೊಂಡಾಗ ನಾಜೀ ಪದದ ಬಳಕೆಯು ಜರ್ಮನಿಯಲ್ಲಿ ಕಡಿಮೆಯಾಯಿತು, ಆದರೂ ಆಸ್ಟ್ರಿಯನ್ ನಾಜೀ-ವಿರೋಧಿಗಳು ಈ ಪದವನ್ನು ನಿಂದನೆಯ ರೂಪದಲ್ಲಿ ಬಳಸುತ್ತಿದ್ದರು. == ಸಿದ್ಧಾಂತ == ನಾಜಿಸಮ್ ಎಂದರೆ ಪ್ಯಾನ್-ಜರ್ಮನಿಸಮ್‌ನಲ್ಲಿನಲ್ಲಿ ಕಂಡುಬರುವ ಹೆರ್ರೆನ್‌ವೋಕ್ ಎಂಬ ಆರ್ಯನ್ ಜನಾಂಗದ ಶ್ರೇಷ್ಠತೆ ಬಗೆಗಿನ ಜನಾಂಗೀಯ ನಂಬಿಕೆ ಮತ್ತು ಈ ಜನಾಂಗವು ನಾರ್ದಿಕ್ ಮತ್ತು ದೇಸೀಯ ಜರ್ಮನರ ವಿಶೇಷ ಗುಣಗಳನ್ನುಳ್ಳ ಬಿಳಿಯ ಸುಪ್ರಿಮ್ಯಾಸಿಸ್ಟ್ ಒಡೆಯ ಜನಾಂಗ ವಾಗಿತ್ತು. ಅಡಾಲ್ಫ್ ಹಿಟ್ಲರ್ನ ನಾಯಕತ್ವದಲ್ಲಿ ನಾಜಿಗಳು ಕಮ್ಯುನಿಸಮ್ ಮತ್ತು ಯಹೂದಿ ವಿದ್ರೋಹದ ವಿರುದ್ಧ ಜರ್ಮನಿ ಮತ್ತು ದೇಶೀಯ ಜರ್ಮನರನ್ನು ಕಾಪಾಡಲು ಹೋರಾಡುವ ಸಲುವಾಗಿ ಫ್ಯೂರೆರ್ನಡಿಯಲ್ಲಿ ಒಂದು ಬಲಶಾಲಿಯಾದ,ಕೇಂದ್ರೀಕೃತ ಸರ್ಕಾರವನ್ನು ಹೊಂದುವುದರ ಪರವಾಗಿ ವಾದಿಸಿದರು. ಗ್ರಾಬ್‌ಡ್ಯೂಶ್‌ಲ್ಯಾಂಡ್ (ಗ್ರೇಟರ್ ಜರ್ಮನಿ) ಅನ್ನು ಸ್ಥಾಪಿಸುವ ಸಲುವಾಗಿ ಜರ್ಮನರು ರಶ್ಯಾದಿಂದ, ಜೋಸೆಫ್ ಸ್ಟಾಲಿನ್ನ 1930ರ ದಶಕದ ಸೋವಿಯೆತ್ ಒಕ್ಕೂಟದಿಂದ ಲೆಬೆನ್‌ಸ್ರಾಮ್ (ಬದುಕಲು ಅವಶ್ಯಕ ಭೂಮಿ) ಅನ್ನು ಪಡೆಕೊಳ್ಳಬೇಕೆಂದಾಗಿತ್ತು. ರಾಷ್ಟ್ರೀಯ ಸಮಾಜವಾದದ ಜನಾಂಗೀಯ ವಿಷಯವು ಡಾಸ್ ವೋಕ್ ಆಗಿದ್ದಿತು, ಯಾವಾಗಲೂ ನಡೆಯುತ್ತಲೇ ಇದ್ದ ಜೂಡಿಯೋ-ಬೊಲ್ಷೆವಿಸಮ್ನ ಸಾಂಸ್ಕೃತಿಕ ದಾಳಿಯ ವಿರುದ್ಧ ಜರ್ಮನ್ ಜನತೆಯು ನಾಜೀ ಪಕ್ಷದ ನಾಯಕತ್ವದಡಿಯಲ್ಲಿ ಒಂದಾಗಬೇಕು, ಮತ್ತು ನಾಜಿಸಮ್‌ನ ಸ್ಪಾರ್ಟನ್ ರಾಷ್ಟ್ರೀಯತಾವಾದಿ ತತ್ವಗಳ ಪ್ರಕಾರ ವಿಜಯ ದೊರಕುವವರೆಗೂ ಸಂಯಮದಿಂದಿರಬೇಕು, ಸ್ವನಿಯಮಪಾಲನೆ ಮಾಡುತ್ತಿರಬೇಕು ಮತ್ತು ತ್ಯಾಗಮನೋಭಾವನೆಯನ್ನು ಹೊಂದಿರಬೇಕು. ಅಡಾಲ್ಫ್ ಹಿಟ್ಲರನ ರಾಜಕೀಯ ಜೀವನಚರಿತ್ರೆಯಾದ ಮೇನ್ ಕ್ಯಾಂಫ್ (ನನ್ನ ಹೋರಾಟ )ವು ನಾಜಿಸಮ್‌ನWeltanshauung (ಪ್ರಾಪಂಚಿಕ ದೃಷ್ಟಿಕೋನ) ವನ್ನು ಸೈದ್ಧಾಂತಿಕವಾಗಿ ಮೂರು ಭಾಗಗಳಾಗಿ ವಿಂಗಡಿಸುತ್ತದೆ: ವಿಶ್ವದ ನಾಯಕತ್ವಕ್ಕಾಗಿ ಹಲವಾರು ಮಾನವ ಜನಾಂಗಗಳ ನಡುವಣ ಐತಿಹಾಸಿಕ ಹೋರಾಟ, ಮತ್ತು ಇದರಲ್ಲಿ ಹೆರೆನ್ವೋಕ್ ಎಂಬ ಮುಖಂಡ ಜನಾಂಗದ ವಿಜಯ; ನಿರ್ಣಾಯಕವೂ, ನಿರಂಕುಶವೂ ಆದ Führerprinzip (ನಾಯಕತ್ವ ನೀತಿ); ಮತ್ತು ಸಾಮಾಜಿಕ-ಸಾಂಸ್ಕೃತಿಕ ಹಾಗೂ ಆರ್ಥಿಕ ಅಪಶ್ರುತಿಯ ಸಾರ್ವತ್ರಿಕ ಮೂಲವಾಗಿ ಯಹೂದ್ಯ-ವಿರೋಧ. ಯಹೂದಿ-ಬೊಲ್ಷೆವಿಯನ್ ಒಳಸಂಚಿನ ಸಿದ್ಧಾಂತವು ಯಹೂದ್ಯ-ವಿರೋಧ ಮತ್ತು ಕಮ್ಯುನಿಸ್ಟ್-ವಿರೋಧಗಳಿಂದ ಬಂದುದಾಗಿದೆ; ಅಡಾಲ್ಫ್ ಹಿಟ್ಲರ್ ಮೊದಲಿಗೆ 1907ರಿಂದ 1913ರವರೆಗೆ ವಿಯೆನ್ನೀಸ್ ಜೀವನವನ್ನು ಗಮನಿಸುವುದರ ಮೂಲಕ ತನ್ನ ಪ್ರಾಪಂಚಿಕ ದೃಷ್ಟಿಕೋನವನ್ನು ಬೆಳೆಸಿಕೊಂಡನು, ಇದರ ಪ್ರಕಾರ ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯವು (1867–1918) ಜನಾಂಗೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಶ್ರೇಣಿವ್ಯವಸ್ಥೆಯನ್ನು ಹೊಂದಿರುವುದಾಗಿಯೂ, ಇವುಗಳಲ್ಲು ಅತ್ಯಂತ ಎತ್ತರದ ಸ್ಥಾನದಲ್ಲಿ “ಆರ್ಯನ್ನ”ರೆಂಬ ಮೂಲಭೂತ, ಬಿಳಿಯ ಮುಖಂಡ ಜನಾಂಗವಿದ್ದಿತೆಂದೂ, ಯಹೂದಿಗಳು ಮತ್ತು ಜಿಪ್ಸಿಗಳು ಅತ್ಯಂತ ಕೆಳಗಿನ ಸ್ಥಾನಗಳಲ್ಲಿರುವರೆಂದೂ ದಾಖಲಿಸಿದನು. ಬೌದ್ಧಿಕವಾಗಿ ಹಿಟ್ಲರ್ ತಾನು ಪ್ರಜೆಯಾಗಿದ್ದ ಸಾಮ್ರಾಜ್ಯವನ್ನು ಪರಿಗಣಿಸುವುದಾಗಲೀ, ಪ್ರಶ್ನಿಸುವುದನ್ನಾಗಲೀ ಮಾಡಲಿಲ್ಲ; ಇದಕ್ಕೂ ಮಿಗಿಲಾಗಿ ಅದರ ಸಾಸ್ಕೃತಿಕ ವೈವಿಧ್ಯತೆಯ ಸಮಾಜವನ್ನು ಇಷ್ಟಪಡದ ಆತನು, ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯವು ಜನಾಂಗೀಯ ಮತ್ತು ಭಾಷಾ ವೈವಿಧ್ಯತೆಗಳಿಂದಾಗಿ ದುರ್ಬಲಗೊಂಡಿರುವುದೆಂದೂ ಇದು ಆಗಿನ ಅರಾಜಕತೆಗೆ ಕಾರಣವಾಗಿತ್ತೆಂದೂ ತೀರ್ಮಾನಿಸಿದನು. ಆತನು ಪ್ರಜಾತಂತ್ರವನ್ನು ಇಷ್ಟಪಡುತ್ತಿರಲಿಲ್ಲ, ಏಕೆಂದರೆ ಅದು ಅಲ್ಪಸಂಖ್ಯಾತ ಜನಾಂಗದವರು ಮತ್ತು ಲಿಬರಲ್ ರಾಜಕೀಯ ಪಕ್ಷಗಳಿಗೆ ರಾಜಕೀಯ ಅಧಿಕಾರವನ್ನು ನೀಡುತ್ತಿತ್ತು ಮತ್ತು ಇವರು ಆಂತರಿಕ ವಿಭಜನೆಯ ಮೂಲಕ ಸಾಮ್ರಾಜ್ಯವನ್ನು "ದುರ್ಬಲ ಮತ್ತು ಅತಂತ್ರಗೊಳಿಸುವರಾಗಿದ್ದರು". ಹಿಟ್ಲರನ ಸಾಂಸ್ಕೃತಿಕ, ಐತಿಹಾಸಿಕ ಮತ್ತು ರಾಜಕೀಯ ನಂಬಿಕೆಗಳು ಪ್ರಥಮ ವಿಶ್ವಯುದ್ಧದ ಹೋರಾಟದ ಸಮಯದಲ್ಲಿ ಹದಗೊಂಡವು; ಇದಕ್ಕೆ ಜರ್ಮನಿ ಯುದ್ಧದಲ್ಲಿ ಸೋತಿದ್ದು, ಮತ್ತು ರಶ್ಯಾದಲ್ಲಿ ಮಾರ್ಕ್ಸಿಸ್ಟ್ ಕಮ್ಯುನಿಸಮ್ ನೆಲೆಯೂರಲು ಕಾರಣವಾದ ಬೊಲ್ಷೆವಿಕರ 1917ರ ಯಶಸ್ವೀ ಅಕ್ಟೋಬರ್ ಕ್ರಾಂತಿಗಳು ಕಾರಣವಾದವು. 1920–23ರ ಅವಧಿಯಲ್ಲಿ ಹಿಟ್ಲರ್ ತನ್ನ ಸಿದ್ಧಾಂತವನ್ನು ರೂಪಿಸಿಕೊಂಡು ನಂತರ ಅದನ್ನು 1925–26ರಲ್ಲಿ ಎರಡು ಸಂಪುಟಗಳ ಜೀವನಚರಿತ್ರೆ ಮತ್ತು ರಾಜಕೀಯ ನಿರೀಕ್ಷೆಗಳ ಪತ್ರದ ರೂಪದಲ್ಲಿ ಮೇನ್ ಕ್ಯಾಂಫ್ ಎಂಬ ಶೀರ್ಷಿಕೆಯಡಿ ಪ್ರಕಟಿಸಿದನು. ಮೂಲ ನ್ಯಾಶನಲ್ ಸೋಶಿಯಲಿಸ್ಟರಾದ 1919ರ ಜರ್ಮನ್ ವರ್ಕರ್ಸ್ ಪಾರ್ಟಿಯು () ತಮ್ಮನ್ನು ಕಟ್ಟಿಹಾಕುವ ಯಾವ ಕಾರ್ಯಕ್ರಮವೂ ಇಲ್ಲವೆನ್ನುವುದರ ಮೂಲಕ ಯಾವುದೇ ಅನ್ನು ತಿರಸ್ಕರಿಸಿದರು. ಆದರೆ ಅದರ ಉತ್ತರಾಧಿಕಾರಿಯಾದ ನಾಜೀ ಪಕ್ಷದ ಚುಕ್ಕಾಣಿಯನ್ನು ಹಿಡಿದ ಅಡಾಲ್ಫ್ ಹಿಟ್ಲರನ ರಾಜಕೀಯ ನಂಬಿಕೆಗಳು ನಾಜಿಸಮ್‌ನ ರಾಜಕೀಯ-ಸೈದ್ಧಾಂತಿಕ ವಿಚಾರಗಳೊಡನೆ ಮೇಳೈಸಿದವು - ವ್ಯಕ್ತಿ ಮತ್ತು ವಿಚಾರಗಳು ರಾಜಕೀಯ ಅಸ್ತಿತ್ವದ ಮೂಲಕ ಒಂದಾಗಿ ಫ್ಯೂರೆರ್ ರೂಪುಗೊಂಡನು. === ಫ್ಯಾಸಿಸಮ್ === ನಾಜಿಸಮ್ ಎಂಬುದು ಫ್ಯಾಸಿಸಮ್ನ ರಾಜಕೀಯ ವೈರುಧ್ಯಗಳ ಸಮ್ಮಿಶ್ರ ವೈವಿಧ್ಯವಾಗಿದ್ದು, ಇದು ಎಡ ಮತ್ತು ಬಲಪಂಥೀಯ ರಾಜಕಾರಣಗಳೆರಡರಿಂದಲೂ ನೀತಿಗಳು, ತಂತ್ರಗಳು ಮತ್ತು ತಾತ್ವಿಕ ನಂಬಿಕೆಗಳನ್ನು ಒಳಗೊಂಡಿತ್ತು. ಇಟಾಲಿಯನ್ ಫ್ಯಾಸಿಸಮ್ ಮತ್ತು ಜರ್ಮನ್ ನಾಜಿಸಮ್‌ಗಳೆರಡೂ ಉದಾರವಾದಿತ್ವ, ಪ್ರಜಾತಂತ್ರ, ಮತ್ತು ಮಾರ್ಕ್ಸ್‌ವಾದಗಳನ್ನು ಸರ್ಕಾರದ ರೂಪದಲ್ಲಿ ಕಾರ್ಯಸಾಧ್ಯವಲ್ಲವೆಂದು ತಿರಸ್ಕರಿಸುತ್ತವೆ. ಸಾಧಾರಣವಾಗಿ ತೀವ್ರ ಬಲಪಂಥೀಯರ (ಮಿಲಿಟರಿ, ಉದ್ಯಮ, ಚರ್ಚ್) ಬೆಂಬಲವಿರುವ ಫ್ಯಾಸಿಸಮ್ ಐತಿಹಾಸಿಕವಾಗಿಯೂ ಕಮ್ಯುನಿಸ್ಟ್-ವಿರೋಧಿ, ಕನ್ಸರ್ವೇಟಿವ್-ವಿರೋಧಿ, ಮತ್ತು ಸಂಸತ್-ವಿರೋಧಿಯಾಗಿದ್ದಿತು. ಇಟಾಲಿಯನ್ ಫ್ಯಾಸಿಸ್ಟರು ಒಂದು ಕಾರ್ಪೊರೇಟಿಸ್ಟ್ "ಸಾವಯವ ರಾಜ್ಯ"ವೊಂದರ ಪ್ರಸ್ತಾವನೆಯನ್ನು ಮಾಡಲಾಗಿ ಇದಕ್ಕಾಗಿ ಸಮಾಜದ ಎಲ್ಲಾ ವರ್ಗಗಳನ್ನು ನ ತೆರದಲ್ಲಿ (ಉರುವಲು ಕಟ್ಟಿಗೆಗಳನ್ನು ಜೋಡಿಸುವ ರೀತಿ) ಒಂದುಗೂಡಿಸಬೇಕಾಗಿದ್ದಿತು. ಇದಲ್ಲದೆ, ಫ್ಯಾಸಿಸಮ್ ರಾಜ್ಯ ಮತ್ತು ರಾಷ್ಟ್ರಗಳನ್ನು ಉದಾತ್ತೀಕರಿಸಿದ್ದರಿಂದ, ಇಟಾಲಿಯನ್ ಫ್ಯಾಸಿಸ್ಟ್ ಸಿದ್ಧಾಂತದಲ್ಲಿ ಜನಾಂಗೀಯ ಥಿಯರಿಗಳು ಮತ್ತು ಅಧಿಕೃತ ಜನಾಂಗವಾದದ ಕೊರತೆಯಿದ್ದಿತು. ಆದರೆ, ಜರ್ಮನ್ ನಾಜಿಸಮ್ ಆರ್ಯನ್ ಜನಾಂಗವಾದ ಹೆರ್ರೆನ್‌ವೋಕ್ ಗೆ ಎಷ್ಟು ಅತಿಯಾಗಿ ಪ್ರಾಮುಖ್ಯತೆ ನೀಡಿತೆಂದರೆ ಜರ್ಮನ್ ರಾಜ್ಯವು ಬರೇ ಸಿದ್ಧಾಂತವೊಂದನ್ನು ಸಾಧಿಸುವ ಮಾರ್ಗವಾಗಿ ಮಾತ್ರ ಉಳಿದುಕೊಳ್ಳುವಂತಾಯಿತು. ಇದಲ್ಲದೆ, ಹೊಂಗೂದಲು-ನೀಲಿಕಂಗಳ-ಆರ್ಯನಿಸಮ್ ಇಟಾಲಿಯನ್ನರಲ್ಲಿ ಜನಪ್ರಿಯವಾಗಿರಲಿಲ್ಲ ಮತ್ತು ಅವರು ವೋಕ್ ಕೂಡಾ ಆಗಿರಲಿಲ್ಲ; ಇದಲ್ಲದೆ, ಇಟಾಲಿಯನ್ ಫ್ಯಾಸಿಸ್ಟ್ ಸರ್ಕಾರವು ನಾಜೀ ಜರ್ಮನಿಗೂ ಮುಂಚೆಯೇ ತನ್ನ ಕಾನ್ಸಂಟ್ರೇಶನ್ ಕ್ಯಾಂಪ್ಗಳಲ್ಲಿ ರಾಷ್ಟ್ರೀಯತಾವಾದಿ ಜನಾಂಗವಾದ ಮತ್ತು ಜನಾಂಗಹತ್ಯೆಯನ್ನು ನಡೆಸಿಯಾಗಿತ್ತು. ಇಸ್ರೇಲೀ ರಾಜಕೀಯ ವಿಜ್ಞಾನಿ ಮತ್ತು ಇತಿಹಾಸಜ್ಞ ಜೀವ್ ಸ್ಟರ್ನೆಲ್ ಪ್ರಸ್ತಾವಿಸುವ ಪ್ರಕಾರ ಇಟಾಲಿಯನ್ ಫ್ಯಾಸಿಸಮ್ ಮತ್ತು ಜರ್ಮನ್ ನಾಜಿಸಮ್‌ಗಳ ನಡುವಣ ವ್ಯವಸ್ಥಿತ ಸಾದೃಶ್ಯಗಳ ಹೊರತಾಗಿಯೂ - ಈ ಸಾದೃಶ್ಯಗಳು ಶೀತಲ ಸಮರದ ಈಸ್ಟರ್ನ್ ಬ್ಲಾಕ್ನ ಕಮ್ಯುನಿಸ್ಟ್ ರಾಜ್ಯಗಳ ನಡುವೆ ಮತ್ತು ಯುರೋಪಿಯನ್ ಲಿಬರಲ್ ಗಣತಂತ್ರಗಳ ನಡುವೆ ಇದ್ದದ್ದಕ್ಕಿಂತ ಹೆಚ್ಚಾಗಿದ್ದರೂ ಫ್ಯಾಸಿಸಮ್‌ನ ವೈವಿಧ್ಯಗಳು ಅಪರೂಪದ್ದಾಗಿವೆ. ಇದಲ್ಲದೆ, ಫ್ಯಾಸಿಸ್ಟ್ ಮತ್ತು ನಾಜೀ ಅಪರಾಧಗಳು ಒಂದಕ್ಕೊಂದು ಹೋಲಿಕೆಯಾಗುವಂತೆ ಬೆಳೆದುಬಂದವು, ಉದಾಹರಣೆಗೆ ಬೆನಿಟೊ ಮುಸೊಲಿನಿಯ ಯಶಸ್ವೀ ರಾಜಕೀಯ ವಿಪ್ಲವ ವಾದ ರೋಮ್ ದಂಡಯಾತ್ರೆ ಮತ್ತು ಅಡಾಲ್ಫ್ ಹಿಟ್ಲರನ ವಿಫಲವಾದ ಮ್ಯೂನಿಕ್ ಬೀರ್ ಹಾಲ್ ವಿಪ್ಲವ. === ಉಗ್ರ-ರಾಷ್ಟ್ರೀಯತಾವಾದ === ನಾಜೀ ಜರ್ಮನಿಯು ಸೈದ್ಧಾಂತಿಕವಾಗಿ ಜನಾಂಗೀಯವಾಗಿ-ಸೂತ್ರಿಸಲ್ಪಟ್ಟ (ಜರ್ಮನ್ ಜನತೆ)ಯನ್ನು ಆಧರಿಸಿದ್ದು ಇದು ರಾಷ್ಟ್ರೀಯತಾವಾದದ ಮಿತಿಗಳನ್ನು ನಿರಾಕರಿಸುತ್ತಿತ್ತು. ನಾಜೀ ಪಕ್ಷ ಮತ್ತು ಜರ್ಮನ್ ಜನತೆಯನ್ನು ಕ್ರೋಢೀಕರಿಸಲು ವೋಕ್ಸ್‌ಗೀಮೆನ್‌ಶ್ಯಾಫ್ಟ್ (ಜನರ ಸಮುದಾಯ) ಎಂಬ ಹತ್ತೊಂಬತ್ತನೇ ಶತಮಾನದ ನವರಚನಾ ಪ್ರಯೋಗವನ್ನು ಬಳಸಲಾಯಿತು ಮತ್ತು ಇದರ ಪ್ರಕಾರ ಪ್ರಜೆಗಳ ಸಾಮುದಾಯಿಕ ಕರ್ತವ್ಯವು ಪೌರ ಸಮಾಜಕ್ಕಲ್ಲದೆ ರೀಚ್ ಗಾಗಿ ಇರಬೇಕೆನ್ನುವುದಾಗಿತ್ತು, ಇದು ನಾಜಿಸಮ್‌ನ ಪ್ರಜೆ-ರಾಷ್ಟ್ರದ ಆಧಾರವಾಗಿತ್ತು; ಸಮಾಜವಾದ ವನ್ನು ಸಾಧಿಸಲು ವೋಕ್ ಗೆ ಸಾಮಾನ್ಯ ಕರ್ತವ್ಯವನ್ನು ಸಲ್ಲಿಸುವುದು ಮತ್ತು ಜನರ ಅಭಿಮತಕ್ಕೆ ನೀಡಿದ ಗೌರವವಾದ ಗ್ರಾಬ್‌ಡ್ಯೂಶ್‌ಲ್ಯಾಂಡ್ ಅನ್ನು ಸ್ಥಾಪಿಸುವಲ್ಲಿ ತೃತೀಯ ರೀಚ್ಗೆ ಸೇವೆ ಸಲ್ಲಿಸುವುದರ ಮುಖಾಂತರ ಸಾಧ್ಯವಾಗಿಸಬಹುದು. ಆದ್ದರಿಂದ, ನಾಜಿಸಮ್ ಪ್ರಪಂಚದ ನಿಯಂತ್ರಣವನ್ನು ಹೊಂದಿರುವ, ಆರ್ಯನ್ ವೋಕ್ಸ್‌ಗೀಮೆನ್‌ಶ್ಯಾಫ್ಟ್ ಒಂದನ್ನು ಸ್ಥಾಪಿಸುವ ಸಲುವಾಗಿ ಉಗ್ರ-ರಾಷ್ಟ್ರೀಯತಾವಾದವನ್ನು ಪ್ರೋತ್ಸಾಹಿಸಿತು. ಮೇನ್ ಕ್ಯಾಂಫ್ ನ ಕೇಂದ್ರತತ್ವದ ಸಾರಾಂಶವು ಅದರ ಧ್ಯೇಯಸೂತ್ರವಾದ , , Führer (ಒಂದು ಜನತೆ, ಒಂದು ಸಾಮ್ರಾಜ್ಯ, ಒಬ್ಬ ನಾಯಕ) ಎಂಬ ವಾಕ್ಯದಲ್ಲಿ ಕಂಡುಬರುತ್ತದೆ. === ಮಿಲಿಟರಿಸಮ್ === ನಾಜೀ ಮಿಲಿಟರಿವಾದವು ಮಹಾನ್ ರಾಷ್ಟ್ರಗಳು ಮಿಲಿಟರಿ ಬಲದಿಂದ ಬೆಳೆಯುತ್ತವೆ ಮತ್ತು ಪ್ರಪಂಚದಲ್ಲಿ ವ್ಯವಸ್ಥೆಯನ್ನು ಕಾಪಾಡುತ್ತವೆ ಎಂಬ ನಂಬಿಕೆಯನ್ನು ಆಧರಿಸಿತ್ತು. ನಾಜೀ ಪಕ್ಷವು ಇರ್ರಿಡೆಂಟಿಸ್ಟ್ ಮತ್ತು ರಿವ್ಯಾಂಚಿಸ್ಟ್ ಭಾವನೆಗಳನ್ನು ಹಾಗೂ ಆಧುನಿಕತಾವಾದ ಬಗ್ಗೆಗಿನ ವಿಚಾರಗಳಿಗೆ ಇದ್ದ ಸಾಂಸ್ಕೃತಿಕ ಜುಗುಪ್ಸೆಗಳನ್ನು ಬಳಸಿಕೊಂಡು (ಯಂತ್ರಬಲದ ಬಗ್ಗೆ ಮೆಚ್ಚುಗೆಯಿದ್ದ ರೀಚ್ ಈ ಮೂಲಕ ಆಧುನಿಕತೆಯನ್ನು ಅಪ್ಪಿಕೊಂಡಿದ್ದರೂ ಕೂಡ),ರಾಷ್ಟ್ರೀಯತಾವಾದ ಮತ್ತು ಮಿಲಿಟರಿವಾದಗಳನ್ನು ಒಂದುಗೂಡಿಸಿ ಗ್ರಾಬ್‌ಡ್ಯೂಶ್‌ಲ್ಯಾಂಡ್ ಅನ್ನು ಸ್ಥಾಪಿಸಲು ಅವಶ್ಯಕವಾದ ಉಗ್ರ-ರಾಷ್ಟ್ರೀಯತಾವಾದವನ್ನು ರೂಪಿಸಿತು. === ಬಂಡವಾಳಶಾಹಿ-ವಿರೋಧಿ ಮಾತುಗಾರಿಕೆ === ತನ್ನ ರಾಜಕೀಯ ಸಮನ್ವಯತೆಯ ಗುಣದಿಂದಾಗಿ ನಾಜಿಸಮ್ ಎಲ್ಲ ವರ್ಗದ ಮತದಾರರಿಗೂ ಆಕರ್ಷಕವಾಗಿ ಕಂಡಿತು, ಅದರ ವೈಯುಕ್ತಿಕ ರಾಜಕೀಯವು ಸಾಮಾಜಿಕ ಸ್ಥಿರತೆ, ಉದ್ಯೋಗ, ಮತ್ತು ಫ್ಯೂರೆರ್ ಮತ್ತು ಥೆರ್ಡ್ ರೀಚ್ ಗೆ ಪ್ಯಾನ್-ಜರ್ಮನ್ ಗ್ರಾಬ್‌ಡ್ಯೂಶ್‌ಲ್ಯಾಂಡ್ ಅನ್ನು ಸ್ಥಾಪಿಸಲು ಸಹಾಯ ಮಾಡುವುದರಲ್ಲಿರುವ ರಾಷ್ಟ್ರೀಯ ಹೆಮ್ಮೆಯ ಬಗ್ಗೆ ಪ್ರಚಾರ ಮಾಡಿತು. ಇದಲ್ಲದೇ, ವಿತ್ತ ಬಂಡವಾಳಶಾಹಿಯನ್ನು ವಿರೋಧಿಸುವಲ್ಲಿ ನಾಜಿಗಳು ವಿಶೇಷವಾಗಿ ಅಂತರ್ರಾಷ್ಟ್ರೀಯ ವಿತ್ತವ್ಯವಸ್ಥೆಯನ್ನು, ಆ ಮೂಲಕ ವಿಶ್ವದ ಎಲ್ಲಾ ರಾಷ್ಟ್ರಗಳನ್ನು ನಿಜವಾಗಿ ನಿಯಂತ್ರಿಸುವ ಬ್ಯಾಂಕರ್‌ಗಳ "ಯಹೂದಿ ಪಿತೂರಿ"ಗೆ ಪ್ರಾಮುಖ್ಯತೆ ನೀಡಿದರು. ಮೊದಮೊದಲ ನಾಜೀ ಭಾಷಣಗಳು ಬಂಡವಾಳಶಾಹೀ ವಿರೋಧವನ್ನು, ಅದರಲ್ಲೂ ವಿಶೇಷವಾಗಿ -ವಿತ್ತ ಬಂಡವಾಳಶಾಹೀ-ವಿರೋಧವನ್ನು ಒಳಗೊಂಡಿತ್ತು; ವೀಮರ್ ಪ್ರಜಾತಂತ್ರದ ಹುಳುಕುಗಳ ಮೇಲೆ ಆರೋಪ ಹೊರಿಸುವಾಗ, ಅಡಾಲ್ಫ್ ಹಿಟ್ಲರ್ “ಪ್ಲೂಟೋ-ಡೆಮಾಕ್ರಸಿ” ಎಂಬ ಯಹೂದಿ ಒಳಸಂಚು ಬಂಡವಾಳಶಾಹಿಯ ಬಲವನ್ನು ಕಾಪಾಡುವ ಸಲುವಾಗಿ ಲಿಬರಲ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಪರವಾಗಿರುವುದನ್ನು ಗುರುತಿಸಿದನು. ಇದಲ್ಲದೇ ಸೈದ್ಧಾಂತಿಕವಾಗಿ ಸಾಂಪ್ರದಾಯಿಕವಾಗಿದ್ದ ಎಡಪಂಥೀಯ ನಾಜಿಗಳು ದುಡಿಯುವ ವರ್ಗದ ಶೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿತ್ತ ಬಂಡವಾಳಶಾಹಿಯ ಆಯುಧವೆಂದು ಕಾರ್ಪೊರೇಶನ್ನ ಮೇಲೆ ವಾಗ್ದಾಳಿ ನಡೆಸಿದರು (ನಂತರ ಇವರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು); ತನ್ನ ರಾಜಕೀಯ ಪ್ರಚಾರದುದ್ದಕ್ಕೂ ಹಿಟ್ಲರ್ ವೀಮರ್ ಪ್ರಜಾತಂತ್ರದ ವೈಫಲ್ಯದಲ್ಲಿ ಯಹೂದಿ ಬಂಡವಾಳಗಾರರ ಹಿನ್ನೆಲೆ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿದನು. 1920ರಲ್ಲಿ ನಾಜೀ ಪಕ್ಷವು ಇಪ್ಪತ್ತೈದು ಅಂಶಗಳ ಅನ್ನು ಪ್ರಕಟಿಸಿ ಈ ರೀತಿಯಾಗಿ ಬೇಡಿಕೆಗಳನ್ನಿಟ್ಟಿತು: . . . . . . ... ... - ... - ... . ಈ ರೀತಿಯ ಬೇಡಿಕೆಗಳ ಹೊರತಾಗಿಯೂ, 1920ರ ದಶಕದಲ್ಲಿ, ನಾಜೀ ಪಕ್ಷದ ಅಧಿಕಾರಿಗಳು ಹಲವಾರು ಬಾರಿ ನಲ್ಲಿ ಬದಲಾವಣೆ ಮಾಡಲು ಇಲ್ಲವೇ ಬದಲು ಮಾಡಲು ಪ್ರಯತ್ನಿಸಿದರು. 1924ರಲ್ಲಿ ಪಕ್ಷದ ಆರ್ಥಿಕ ಥಿಯರೆಟೀಶಿಯನ್ ಗಾಟ್‌ಫ್ರೈಡ್ ಫೇಡೆರ್ ಕೆಲವು ಹಳೆಯ ಮತ್ತು ಕೆಲವು ಹೊಸ ಐಡಿಯಾಗಳನ್ನು ಹೊಂದಿದ್ದ ಒಂದು ನೂತನವಾದ 39 ಅಂಶಗಳ ಕಾರ್ಯಕ್ರಮವನ್ನು ಪ್ರಸ್ತಾವಿಸಿದನು. ಹಿಟ್ಲರ್ ಮೇನ್ ಕ್ಯಾಂಫ್ ನಲ್ಲಿ ಈ ಕಾರ್ಯಕ್ರಮದ ಬಗ್ಗೆ ನೇರವಾಗಿ ಹೇಳಲಿಲ್ಲ; ಆತನು "ಆಂದೋಲನದ ಕಾರ್ಯಕ್ರಮ" ಎಂದಷ್ತೇ ಹೇಳಿರುವನು. 1927ರಲ್ಲಿ, ನಾಜೀಪಕ್ಷದ ಸಮಾಜವಾದವನ್ನು ಪ್ರತಿಪಾದಿಸುತ್ತಾ ಹಿಟ್ಲರ್ ಹೇಳಿದನು: "ನಾವು ಸಮಾಜವಾದಿಗಳು, ನಾವು ಆರ್ಥಿಕವಾಗಿ ದುರ್ಬಲರಾಗಿರುವವರನ್ನು ಪಕ್ಷಪಾತದ ಸಂಬಳಗಳ ಮೂಲಕ ಶೋಷಣೆ ಮಾಡುವ, ವ್ಯಕ್ತಿಯೊಬ್ಬನನ್ನು ಆತನ ಸಿರಿವಂತಿಕೆ, ಸ್ವತ್ತುಗಳ ಮೂಲಕ ಅನುಚಿತವಾಗಿ ಮೌಲ್ಯಮಾಪನ ಮಾಡುವ ಇಂದಿನ ಬಂಡವಾಳಶಾಹಿ ವ್ಯವಸ್ಥೆಯ ವೈರಿಗಳು”. ಆದರೆ, ಎರಡು ವರ್ಷಗಳ ನಂತರ, 1929ರಲ್ಲಿ, ತನ್ನದೇ ಮಾತುಗಳನ್ನು ತಿದ್ದಿದ ಹಿಟ್ಲರ್ ಸಮಾಜವಾದ ಎಂಬುದು ಬಳಸಬಾರದಾಗಿದ್ದ “ಒಂದು ಒಟ್ಟಾರೆ ದುರದೃಷ್ಟಕರವಾದ ಪದ”ವಾಗಿತ್ತೆಂದು ಹೇಳಿದನು; ಅದನ್ನು ಅಡಗಿಸುತ್ತ ಸೋಗು ಹಾಕಿದ ಆತನು: “ಜನರಿಗೆ ತಿನ್ನಲು ಏನಾದರೂ ದೊರಕಿದರೆ, ಅವರ ವಿಲಾಸಗಳು ಸಂಪನ್ನವಾದರೆ, ಆಗ ಅವರಿಗೆ ಸಮಾಜವಾದವು ಸಲ್ಲುತ್ತದೆ”. ಇತಿಹಾಸಜ್ಞ ಹೆನ್ರಿ ಎ. ಟರ್ನರ್ ನಾಜೀ ಪಾರ್ಟಿಯ ಹೆಸರಿನ ಜತೆಗೆ ಸಮಾಜವಾದ ಎಂಬ ಪದವನ್ನು ಬಳಸಿದುದಕ್ಕಾಗಿ ಹಿಟ್ಲರನ ಖೇದವನ್ನು ವರದಿಮಾಡಿದ್ದಾರೆ. 1930ರಲ್ಲಿ, ಹಿಟ್ಲರ್ ಈ ಸಮಾಜವಾದಿ ಅಪಪ್ರಯೋಗದ ಬಗ್ಗೆ ಸ್ಪಷ್ಟನೆ ನೀಡುತ್ತ ಹೇಳಿದನು: “ನಾವು ಅಳವಡಿಸಿಕೊಂಡಿರುವ ಪದವಾದ ‘ಸಮಾಜವಾದಿ’ ಎಂಬುದಕ್ಕೂ ಮಾರ್ಕ್ಸಿಯನ್ ಸಮಾಜವಾದಕ್ಕೂ ಯಾವುದೇ ಸಂಬಂಧವಿಲ್ಲ. ಮಾರ್ಕ್ಸಿಸಮ್ ಸ್ವತ್ತು-ವಿರೋಧಿಯಾಗಿದೆ; ನಿಜವಾದ ಸಮಾಜವಾದವು ಅಂತಿಲ್ಲ”. 1931ರಲ್ಲಿ, ಪ್ರಭಾವಶಾಲೀ ಸಂಪಾದಕ ರಿಚರ್ಡ್ ಬ್ರೀಟಿಂಗ್‌ಗೆ ಎಂಬ ಉದ್ಯಮ-ಪರ ಪತ್ರಿಕೆಗೆ ನೀಡಿದ ಖಾಸಗೀ ಸಂದರ್ಶನವೊಂದರಲ್ಲಿ ಹಿಟ್ಲರ್ ಈರೀತಿಯಾಗಿ ಹೇಳಿದನು: ಯಾರು ಏನನ್ನು ಸಂಪಾದಿಸುವನೋ, ಅದನ್ನು ಆತ ಇಟ್ಟುಕೊಳ್ಳಬೇಕೆನ್ನುವುದೇ ನನ್ನ ಬಯಕೆ, ಆದರೆ ಇದರ ಹಿಂದಿನ ನೀತಿಯು ಸಮುದಾಯದ ಹಿತಾಸಕ್ತಿಯು ವೈಯುಕ್ತಿಕ ಹಿತಾಸಕ್ತಿಗಿಂತ ಮೊದಲ ಪ್ರಾಮುಖ್ಯವನ್ನು ಪಡೆದಿರುವುದೆಂದಾಗಿರಬೇಕು. ಆದರೆ ರಾಜ್ಯವು ನಿಯಂತ್ರಣವನ್ನು ಸಾಧಿಸಬೇಕು; ಪ್ರತಿಯೊಬ್ಬ ಒಡೆಯನೂ ತನ್ನನ್ನು ರಾಜ್ಯದ ಕಾರ್ಯಕರ್ತನೆಂದು ಭಾವಿಸಬೇಕು ... ತೃತೀಯ ರೀಚ್ ಯಾವಾಗಲೂ ಸ್ವತ್ತುಗಳ ಮಾಲೀಕರನ್ನು ನಿಯಂತ್ರಿಸುವ ಹಕ್ಕನ್ನು ಹೊಂದಿರುವುದು. 1932ರಲ್ಲಿ, ನಾಜೀ ಪಕ್ಷದ ವಕ್ತಾರನಾದ ಜೋಸೆಫ್ ಗೀಬೆಲ್ಸ್ ನಾಜೀ ಪಕ್ಷವು ಒಂದು “ದುಡಿಮೆಗಾರರ ಪಕ್ಷ”ವೆಂದೂ, ಅದು “ದುಡಿಮೆಯ ಪರ, ಮತ್ತು ಬಂಡವಾಳದ ವಿರುದ್ಧ”ವಾಗಿದೆಯೆಂದು ಹೇಳಿದನು. ಫ್ರೆಡರಿಕ್ ಹಯೆಕ್ “ಆತನ ಕಾರಣಗಳೇನೇ ಇದ್ದಿರಲಿ, ಹಿಟ್ಲರ್ 1941 ಫೆಬ್ರುವರಿಯ ತನ್ನ ಭಾಷಣವೊಂದರಲ್ಲಿ ಸಮಯೋಚಿತವೆಂದು ಭಾವಿಸಿ "ಮೂಲವಾಗಿ, ರಾಷ್ಟ್ರೀಯ ಸಮಾಜವಾದ ಮತ್ತು ಮಾರ್ಕ್ಸಿಸಮ್‌ಗಳೆರಡೂ ಒಂದೇ" ಎಂದು ಘೋಷಿಸಿದನು” ಎಂದು ಬರೆದನು ನಾಜೀ ಪಕ್ಷವು ಮೊದಮೊದಲು ತನ್ನನ್ನು "ಸಮಾಜವಾದಿ"ಯೆಂದು ಕರೆದುಕೊಂಡಿದ್ದರಿಂದ ಅದರ ಕನ್ಸರ್ವೇಟಿವ್ ವಿರೋಧಿಗಳಾದ ಮುಂತಾದವು ಅದನ್ನು “ನಿರಂಕುಶ, ಆತಂಕವಾದಿ, ಪಿತೂರಿಕಾರ, ಮತ್ತು ಸಮಾಜವಾದಿ” ಎಂದು ಬಣ್ಣಿಸಿದವು. === ದುಡಿಯುವ ವರ್ಗ ಮತ್ತು ಮಧ್ಯಮ ವರ್ಗದ ಆಕರ್ಷಣೆ === 1922ರಲ್ಲಿ ನಾಜೀ ಪಾರ್ಟಿಯು ರಾಜಕೀಯವಾಗಿ ಅದ್ವಿತೀಯವೆಂದು ಜರ್ಮನ್ ಸಾರ್ವಜನಿಕ ಭಾವನೆಯನ್ನು ಖಚಿತಪಡಿಸುವ ಸಲುವಾಗಿ ಅಡಾಲ್ಫ್ ಹಿಟ್ಲರ್ ಇನ್ನಿತರ ರಾಷ್ಟ್ರೀಯತಾವಾದಿ ಮತ್ತು ಜನಾಂಗೀಯವಾದಿ ರಾಜಕೀಯ ಪಕ್ಷಗಳು ಸಾರ್ವಜನಿಕರಿಂದ, ಅದರಲ್ಲೂ ಕೆಳವರ್ಗ ಮತ್ತು ದುಡಿಯುವ ವರ್ಗಗಳ ಯುವಜನತೆಯಿಂದ ದೂರವಾಗಿರುವರೆಂದು ಆರೋಪಿಸಿದನು: , . , 1880s 1890s. , , naïve , , , , — , , . ’ . ದುಡಿಯುವ ವರ್ಗದಲ್ಲಿ ಹಲವಾರು ಅನುಯಾಯಿಗಳು ಮತ್ತು ಬೆಂಬಲಿಗರಿದ್ದರೂ ಕೂಡ ದುಡಿಯುವ ವರ್ಗಕ್ಕೆ ನಾಜೀ ಪಕ್ಷದ ಆಕರ್ಷಣೆಯು ನಿಜವಾದ್ದಾಗಲೀ, ಪರಿಣಾಮಕಾರಿಯಾದ್ದಾಗಲೀ ಆಗಿರಲಿಲ್ಲ, ಏಕೆಂದರೆ ಅದರ ರಾಜಕೀಯವು ಹೆಚ್ಚಾಗಿ ಮಧ್ಯಮವರ್ಗಕ್ಕೆ ಒಗ್ಗುವಂತಹ, ಸ್ಥಿರಗೊಳಿಸುವ, ಉದ್ಯಮಗಳನ್ನು ಬೆಂಬಲಿಸುವ ರಾಜಕಾರಣವಾಗಿತ್ತಲ್ಲದೆ ಕ್ರಾಂತಿಕಾರಿ ದುಡಿಮೆಗಾರರ ಪಕ್ಷದಂತಿರಲಿಲ್ಲ. ಇದಲ್ಲದೆ, 1920ರ ದಶಕದ ವ್ಹೈಟ್ ಕಾಲರ್ ಮಧ್ಯಮವರ್ಗದ ಆರ್ಥಿಕ ಕುಸಿತದ ಪರಿಣಾಮವು ಅವರ ನಾಜಿಸಮ್‌ನ ಬೆಂಬಲದ ಮೂಲಕ ಕಂಡುಬಂದಿತು, ಮತ್ತು ಹೀಗಾಗಿ ನಾಜಿಗಳಿಗೆ ಮಧ್ಯಮವರ್ಗದ ಹೆಚ್ಚು ಶೇಕಡಾವಾರು ಬೆಂಬಲವು ದೊರಕಿತು. 1930ರ ದಶಕದ ಆರಂಭದಲ್ಲಿ ಬಡರಾಷ್ಟ್ರವಾಗಿದ್ದು, ನಾಜೀ ಪಕ್ಷವು ನಿರುದ್ಯೋಗಿ ಮತ್ತು ವಸತಿಹೀನರಿಗೆ ಆಹಾರ ಮತ್ತು ವಸತಿಯನ್ನು ನೀಡುವ ತಮ್ಮ ಸಮಾಜವಾದೀ ನೀತಿಗಳನ್ನು ಜಾರಿಗೆ ತಂದರಲ್ಲದೆ, ನಂತರ ಅವರನ್ನೆಲ್ಲ ಬ್ರೌನ್‌ಶರ್ಟ್ ( — ಸ್ಟಾರ್ಮ್ ಡಿಟ್ಯಾಚ್‌ಮೆಂಟ್)ಗೆ ನೇಮಕ ಮಾಡಿಕೊಂಡರು. === ವರ್ಣಭೇದ ನೀತಿ === ನಾಜಿಸಮ್‌ಗೆ ಮೂಲಭೂತವಾದುದೆಂದರೆ ಹಲವಾರು ರಾಷ್ಟ್ರೀಯ ರಾಜ್ಯಗಳಲ್ಲಿ “ಅನ್ಯಾಯವಾಗಿ” ಹಂಚಿಹೋಗಿದ್ದ ಪ್ರತಿಯೊಂದು ಜರ್ಮನ್ ಬುಡಕಟ್ಟುಗಳನ್ನೂ ಏಕೀಕೃತಗೊಳಿಸುವುದು. ನಾಜಿಸಮ್‌ನ ಜನಾಂಗೀಯವಾದಿ ತತ್ವಶಾಸ್ತ್ರವು ಯಹೂದಿಗಳನ್ನು ಹೊರತುಪಡಿಸಿದ ಬಿಳಿಯ ಶ್ರೇಷ್ಠತಾವಾದಿ ಕೃತಿಗಳಾದ: ಫ್ರೆಂಚ್ ಆರ್ಥರ್ ಡಿ ಗೊಬಿನೋ ( ; ಬ್ರಿಟಿಶ್ ಹೌಸ್ಟನ್ ಸ್ಟೀವರ್ಟ್ ಚೇಂಬರ್ಲೇನ್ ( ); ಮತ್ತು ಅಮೆರಿಕನ್ ಮ್ಯಾಡಿಸನ್ ಗ್ರ್ಯಾಂಟ್ ( : , )ಗಳಿಂದ ಮೂಡಿಬಂದಿತು. ಅವರ ಜನಾಂಗೀಯ ಕಲ್ಪನೆಗಳನ್ನು ರೀಚ್‌ಸ್ಟ್ಯಾಗ್‌ನ ಸೆಕ್ರೆಟರಿ ಅಲ್ಫ್ರೆಡ್ ರಾಸೆನ್‌ಬರ್ಗ್, , ಎಂಬ ಒಂದು ಮಿಥ್ಯಾವೈಜ್ಞಾನಿಕ ಶಾಸ್ತ್ರಗ್ರಂಥದಲ್ಲಿ ಸಂಶ್ಲೇಷಿಸಿ ಈ ರೀತಿಯಾಗಿ ಪ್ರಸ್ತಾಪನೆಯನ್ನು ಮಾಡಿದನು: “ಸೃಷ್ಟಿಯ ಉತ್ತರಭಾಗದ ಕೇಂದ್ರದಿಂದ, ಅಟ್ಲಾಂಟಿಸ್ ಎಂದು ನಾವು ಕರೆಯಬಹುದಾದ, ನಿಜವಾಗಿ ಮುಳುಗಿಹೋಗಿರುವ ಒಂದು ಅಟ್ಲಾಂಟಿಕ್ ಭೂಖಂಡವನ್ನು ಆಧಾರಸೂತ್ರವಾಗಿ ಪರಿಗಣಿಸದಿರಬಹುದಾದ ಜಾಗದಿಂದ, ಒಮ್ಮೆ ಯೋಧರ ಹಿಂಡುಗಳನ್ನು, ಪ್ರತಿನಿತ್ಯನೂತನವೂ, ಮತ್ತೆ ಅವತರಿಸುವಂತಹದ್ದೂ ಆಗಿರುವ, ಮಣಿಸಬೇಕಾಗಿರುವ ವಿಸ್ತಾರಗಳು ಮತ್ತು ರೂಪಿಸಬೇಕಾಗಿರುವ ಪ್ರದೇಶಗಳ ಬಗೆಗಿನ ನಾರ್ದಿಕ್ ಹಂಬಲಕ್ಕೆ ತಲೆಬಾಗಿ, ಹೊರಕಳಿಸಲಾಯಿತು”. ಟೆರೆನ್ಸ್ ಬಾಲ್ ಮತ್ತು ರಿಚರ್ಡ್ ಬೆಲ್ಲಾಮಿಯವರ ಪ್ರಕಾರ, ಯು ಮೇನ್ ಕ್ಯಾಂಫ್ ನ ನಂತರ ನಾಜಿಸಮ್‌ನ ಎರಡನೇ ಅತಿಪ್ರಮುಖ ಕೃತಿಯಾಗಿದೆ. ನಾಜೀ ಜರ್ಮನ್ ಜನಾಂಗೀಯ ಶ್ರೇಷ್ಟತೆಯನ್ನು ಸಾಬೀತುಪಡಿಸುವಲ್ಲಿ, ಅಡಾಲ್ಫ್ ಹಿಟ್ಲರನು "ರಾಷ್ಟ್ರ"ವನ್ನು ಜನಾಂಗವೊಂದರ ಅತ್ಯುಚ್ಚ ಸೃಷ್ಟಿಯೆಂದೂ, ಮಹಾನ್ ರಾಷ್ಟ್ರಗಳು ಮಹಾನ್ ಜನಾಂಗಗಳು ಒಟ್ಟಿಗೆ ಕೆಲಸ ಮಾಡಿ ಸಂಭವಿಸಿದ ಸಜಾತೀಯ ಜನಸಂಖ್ಯೆಯ ಸೃಷ್ಟಿಗಳಾಗಿರುವವೆಂದೂ ವ್ಯಾಖ್ಯಾನಿಸಿದನು. ಈ ರಾಷ್ಟ್ರಗಳು "ನೈಸರ್ಗಿಕವಾಗಿ ಒಳ್ಳೆಯ ಆರೋಗ್ಯ ಮತ್ತು ಪರಾಕ್ರಮ, ಬುದ್ಧಿವಂತ ಮತ್ತು ಧೈರ್ಯಶಾಲೀ ಗುಣಗಳನ್ನುಳ್ಳ" ಜನಾಂಗಗಳಿಂದ ಸಂಸ್ಕೃತಿಗಳನ್ನು ಅಭಿವೃದ್ಧಿಪಡಿಸಿದವು. ಇದೇ ಹೊತ್ತಿಗೆ ದುರ್ಬಲ ರಾಷ್ಟ್ರಗಳು "ಅಶುದ್ಧ"ವಾದ ಅಥವಾ "ಮಿಶ್ರತಳಿಯ ಜನಾಂಗ"ಗಳನ್ನು ಹೊಂದಿದ್ದು, ಇವು ಅಸಂಘಟಿತವಾಗಿರುವವು, ಆದರೆ ಇದಕ್ಕಿಂತ ಕೀಳಾದ ಜನಾಂಗಗಳೆಂದರೆ ಪರಾವಲಂಬಿಗಳೂ (ಕೆಳವರ್ಗದ ಮಾನವರೂ) ಆಗಿರುವವರೂ, (“ಅಯೋಗ್ಯವಾದ ಬದುಕನ್ನು ಬದುಕುತ್ತಿರುವವರು”) ಅದರಲ್ಲಿಯೂ ವಿಶೇಷವಾಗಿ ಯಹೂದಿಗಳು. ಇವರು ತಮ್ಮ ಜನಾಂಗೀಯ ಕೀಳುತನ, ಅಲೆಮಾರಿತನ, ಜರ್ಮನಿಯಂತಹ ಮಹಾನ್ ದೇಶಗಳ ಮೇಲೆ ರಾಷ್ಟ್ರಗಳಿಲ್ಲದಲೇ ಆಕ್ರಮಣಗಳು - ಮುಂತಾದವುಗಳಿಂದಾಗಿ ಬದುಕಿಕೊಂಡಿದ್ದಾರೆ - ಹೀಗಾಗಿ, ರಾಷ್ಟ್ರೀಯ ವೈವಿಧ್ಯತೆಯನ್ನು ಪ್ರೋತ್ಸಾಹಿಸುವುದು ಅಥವಾ ಅದಕ್ಕೆ ಒಪ್ಪಿಗೆ ನೀಡುವುದು ತಿಳಿದೂ ಮಾಡುವ ತಪ್ಪಾಗುವುದು. ಆದರೆ, ದ್ವಿತೀಯ ವಿಶ್ವಯುದ್ಧದ ಸಮಯದಲ್ಲಿ, ಅತಿ ಕಡಿಮೆ ಸಂಖ್ಯೆಯ ಜರ್ಮನ್ ಸೈನಿಕರೊಂದಿಗೆ ಅತಿ ಹೆಚ್ಚು ವಿಸ್ತೀರ್ಣದ ಜಾಗವನ್ನು ಆಕ್ರಮಿಸಿಕೊಳ್ಳಬೇಕಾಗಿ ಬಂದಾಗ ಮುಖಂಡ ಜನಾಂಗದ ಸೂತ್ರೀಕರಣವನ್ನು ವಿಸ್ತರಿಸಿ ಅದರಲ್ಲಿ ಡಚ್ ಮತ್ತು ಸ್ಕ್ಯಾಂಡಿನೇವಿಯಾದ ಜನರನ್ನು ಶ್ರೇಷ್ಠ, ಜರ್ಮನ್ ಮೂಲದ ಹೆರೆನ್‌ವಾಕ್ ಆಗಿ ಶುಜ್‌ಟಾಫೆಲ್ ()ಗೆ ನೇಮಿಸಿಕೊಳ್ಳುವ ಸಲುವಾಗಿ ಘೋಷಿಸಲಾಯಿತು; ಕೆಲವರು ಸೇರಿಕೊಂಡರು ಕೂಡಾ. ತಮ್ಮ ಪ್ರಾಂತ್ಯಗಳನ್ನು ರಕ್ಷಿಸಲಾಗದ ದೇಶಗಳಿಗೆ ಒಂದು ರಾಷ್ಟ್ರವನ್ನು ಹೊಂದುವ ಅರ್ಹತೆಯಿರಲಿಲ್ಲ; ಹಿಟ್ಲರ್‌ನ ಪ್ರಕಾರ ಸ್ಲಾವಿಕ್ ಜನತೆಯಂತಹ ’ಗುಲಾಮ ಜನಾಂಗ’ಗಳು ವಿಶೇಷವಾಗಿ ಲೆಬೆನ್‌ಸ್ರಾಮ್ ಗೆ ಸಂಬಧಿಸಿದಂತೆ - ಮುಖಂಡ ಜನಾಂಗಗಳಿಗಿಂತ ಕಡಿಮೆಯಾದ ಬದುಕುವ ಅರ್ಹತೆಯನ್ನು ಹೊಂದಿದ್ದವು. ಆತನ ಪ್ರಕಾರ ಹೆರೆನ್‍ವೋಕ್ ಗೆ ಕೀಳಾದ ಸ್ಥಳೀಯ ಜನಾಂಗಗಳನ್ನು ತಮ್ಮ ದೇಶಗಳಿಂದ ಉಚ್ಚಾಟಿಸುವ ಹಕ್ಕಿದ್ದಿತು. “ಸ್ವದೇಶಗಳನ್ನು ಹೊಂದಿಲ್ಲದ ಜನಾಂಗ”ಗಳು "ಪರಾವಲಂಬಿ ಜನಾಂಗ"ಗಳಾಗಿದ್ದು ಈ ಜನಾಂಗಗಳು ಹೆಚ್ಚು ಶ್ರೀಮಂತವಾದಷ್ಟೂ ಅವರ ಪರವಾಲಂಬಿತನವು ಹೆಚ್ಚು ಮಾರಕವಾಗುವದು. ಆದ್ದರಿಂದ ಒಡೆಯ ಜನಾಂಗವೊಂದು ಹೀಮ್ಯಾಟ್ ನಲ್ಲಿ ಪರಾವಲಂಬಿ ಜನಾಂಗಗಳನ್ನು ಕೊಲ್ಲುವುದರ ಮೂಲಕ ಸುಲಭವಾಗಿ ತಮ್ಮನ್ನು ಸಶಕ್ತಗೊಳಿಸಬಹುದು. ನಾಜಿಸಮ್‌ನ ಹೆರೆನ್‌ವೋಕ್ ದಾರ್ಶನಿಕ ತತ್ವವು Endlösung ( ಕೊನೆಯ ಪರಿಹಾರ)ವಾಗಿ, ಯಹೂದಿಗಳು, ಜಿಪ್ಸಿಗಳು, ಜೆಕ್ ಜನರು, ಪೋಲ್‌ಗಳು, ಮಾನಸಿಕ ನ್ಯೂನತೆಯುಳ್ಳವರು, ಕುಂಟರು, ಅಂಗವಿಹೀನರು, ಸಲಿಂಗಕಾಮಿಗಳು ಮತ್ತು ತಕ್ಕವರಲ್ಲರೆಂದು ಪರಿಗಣಿಸಲಾದ ಇತರರನ್ನು ನಿರ್ನಾಮ ಮಾಡುವಿಕೆಯನ್ನು ತರ್ಕಬದ್ಧವನ್ನಾಗಿಸಿತು. ಹಾಲೋಕಾಸ್ಟ್ನ ಸಮಯದಲ್ಲಿ, ವ್ಯಾಫೆನ್-, ವೆಹ್ರಮ್ಯಾಶ್ತ್ ಸೈನಿಕರು ಮತ್ತು ಬಲಪಂಥೀಯ ಪ್ಯಾರಾಮಿಲಿಟರಿ ಸಿವಿಲಿಯನ್ ಮಿಲಿಶಿಯಾಗಳು ನಾಜೀ ಆಕ್ರಮಿತ ಭೂಪ್ರದೇಶಗಳಲ್ಲಿ ಸುಮಾರು ಹನ್ನೊಂದು ಮಿಲಿಯನ್ ಜನರನ್ನು ಕಾನ್ಸಂಟ್ರೇಶನ್ ಕ್ಯಾಂಪ್‌ಗಳು, ಯುದ್ಧಖೈದಿಗಳ ಕ್ಯಾಂಪ್‌ಗಳು, ಲೇಬರ್ ಕ್ಯಾಂಪ್ಗಳು ಮತ್ತು ಆಶ್ವಿಟ್ಸ್ ಕಾನ್ಸಂಟ್ರೇಶನ್ ಕ್ಯಾಂಪ್ ಮತ್ತು ಟ್ರೆಬ್ಲಿಂಕಾ ಎಕ್ಸ್‌ಟರ್ಮಿನೇಶನ್ ಕ್ಯಾಂಪ್ಗಳಂತಹ ಡೆತ್ ಕ್ಯಾಂಪ್‌ಗಳ ಮುಖಾಂತರ ಕೊಲೆಗೈದರು. ಜರ್ಮನಿಯಲ್ಲಿ, ಒಡೆಯ-ಜನಾಂಗದ ಜನಸಂಖ್ಯೆಯ ಕಲ್ಪನೆಯನ್ನು ನಿಜಗೊಳಿಸಲು ಡ್ಯೂಶ್ ವೋಕ್ ಅನ್ನು ಸುಸಂತಾನಶಾಸ್ತ್ರದ ಮೂಲಕ ಶುದ್ಧೀಕರಿಸಲಾಯಿತು; ಇದರ ಪರಿಣಾಮವಾಗಿ ಅಂಗವಿಹೀನ ವ್ಯಕ್ತಿಗಳಿಗೆ ಅನೈಚ್ಛಿಕ ದಯಾಮರಣ ಮತ್ತು ಮಾನಸಿಕ ನ್ಯೂನತೆಯುಳ್ಳವರಿಗೆ ಕಡ್ಡಾಯ ಸಂತಾನಹರಣ ಚಿಕಿತ್ಸೆಯನ್ನು ನೀಡಲಾಯಿತು. ಇದರ ಸೈದ್ಧಾಂತಿಕ ಸಮರ್ಥನೆಯು ಅಡಾಲ್ಫ್ ಹಿಟ್ಲರ್ ಸ್ಪಾರ್ಟಾವನ್ನು (11th .–195 ) ಮೂಲ ವೋಕಿಶ್ ರಾಜ್ಯವಾಗಿ ಪರಿಗಣಿಸಿದುದನ್ನು ಆಧರಿಸಿತ್ತು; ಆತನು ಜನ್ಮಜಾತವಾಗಿ ಅಂಗವಿಹೀನವಾದ ಶಿಶುಗಳನ್ನು ಜನಾಂಗೀಯ ಪರಿಶುದ್ಧತೆಯನ್ನು ಕಾಪಾಡುವ ಸಲುವಾಗಿ ನಿರ್ಭಾವುಕವಾಗಿ ಕೊಲ್ಲುತ್ತಿದ್ದುದನ್ನು ಹೊಗಳುತ್ತಿದ್ದನು: “ಸ್ಪಾರ್ಟಾವನ್ನು ಮೊದಲ ವೋಕಿಶ್ ರಾಜ್ಯವಾಗಿ ಪರಿಗಣಿಸಬೇಕಾಗಿದೆ. ಕಾಯಿಲೆಯಿರುವ, ದುರ್ಬಲ ಮತ್ತು ಅಂಗವಿಕಲ ಮಕ್ಕಳನ್ನು ಬೇರ್ಪಡಿಸುವುದು, ಮತ್ತು ಕ್ಲುಪ್ತವಾಗಿ ಹೇಳುವುದಾದರೆ, ಅವರ ನಾಶವು ನಿಜವಾಗಿ ಹೆಚ್ಚು ಶಿಷ್ಟವಾಗಿದೆ, ಮತ್ತು ನಿಜ ಹೇಳಬೇಕೆಂದರೆ ನಮ್ಮ ಕಾಲದಲ್ಲಿನ ಅತಿ ಹೆಚ್ಚು ರೋಗಗ್ರಸ್ತ ವ್ಯಕ್ತಿಯನ್ನೂ ಜೀವಂತವಾಗಿಡುವ ಅನಿಷ್ಟ ಹುಚ್ಚುತನಕ್ಕಿಂತ ಸಾವಿರಪಾಲು ಹೆಚ್ಚು ಮಾನವೀಯವಾಗಿದೆ.” ಯಹೂದ್ಯ-ವಿರೋಧಿಯಾದ ದ ಪ್ರೋಟೋಕಾಲ್ಸ್ ಆಫ್ ದ ಎಲ್ಡರ್ಸ್ ಆಫ್ ಜಯಾನ್ ಅನ್ನು ಆಧರಿಸಿದ ಯಹೂದಿಗಳ ಬಗೆಗಿನ ನಾಜಿಗಳ ಭಾವನೆಯು ಯಹೂದ್ಯರು ಜರ್ಮನರ ನಡುವೆ ಮತ್ತು ರಾಷ್ಟ್ರ-ರಾಜ್ಯಗಳ ನಡುವಿನ ವಿಭಜನೆಯಿಂದ ಪ್ರವರ್ಧಮಾನಕ್ಕೆ ಬರುತ್ತಿರುವರೆಂಬ ವಿಷಯಕ್ಕೆ ಹೆಚ್ಚು ಮಹತ್ವವನ್ನು ನೀಡಿತ್ತು. ಆದರೆ ನಾಜೀ ಯಹೂದ್ಯ-ವಿರೋಧವು ದೈಹಿಕವೂ ಮತ್ತು ಜನಾಂಗೀಯವೂ ಆಗಿತ್ತು. ನಾಜೀ ಪ್ರಚಾರಕಾರ್ಯಕರ್ತನಾದ ಜೋಸೆಫ್ ಗೀಬೆಲ್ಸ್ ಹೇಳಿದನು: “ಯಹೂದಿಯು ಪರಿಶುದ್ಧ ರಕ್ತದ ವಿರೋಧಿಯೂ, ಅದನ್ನು ನಾಶಮಾಡುವವನೂ ಆಗಿದ್ದಾನೆ, ಆತನು ನಮ್ಮ ಜನಾಂಗವನ್ನು ಬೇಕೆಂದೇ ನಿರ್ನಾಮ ಮಾಡುವಾತನಾಗಿದ್ದಾನೆ... ಸಮಾಜವಾದಿಗಳಾದ ನಾವುಗಳು ಯಹೂದಿಗಳ ವಿರೋಧಿಗಳಾಗಿದ್ದೇವೆ, ಏಕೆಂದರೆ ಇವರಲ್ಲಿ ನಾವು ರಾಷ್ಟ್ರದ ಸಂಪನ್ಮೂಲಗಳನ್ನು ತಪ್ಪುರೀತಿಯಲ್ಲಿ ಬಳಸುವ ಬಂಡವಾಳಶಾಹಿಯ ಅವತಾರವನ್ನು ಕಾಣುತ್ತೇವೆ.” === ಸಲಿಂಗಕಾಮ ವಿರೋಧ === ಫೆಬ್ರುವರಿ 1933ರ ಕೊನೆಯ ಭಾಗದಲ್ಲಿ, ಅರ್ನ್ಸ್ಟ್ ರಾಹ್ಮ್ನ ಮಧ್ಯಮಾರ್ಗಗಾಮಿ ಪ್ರಭಾವವು ಕಡಿಮೆಯಾಗುತ್ತಿದ್ದಂತೆಯೇ ನಾಜೀ ಪಕ್ಷವು ಬರ್ಲಿನ್ನಿನ ಗೇ, ಲೆಸ್ಬಿಯನ್ ಮತ್ತು ಬೈಸೆಕ್ಷುವಲ್ ಜನರು ಸೇರುತ್ತಿದ್ದ ಹೋಮೋಫೈಲ್ ಕ್ಲಬ್‌ಗಳನ್ನು ನಿಷೇಧಿಸಿದರು, ಶೈಕ್ಷಣಿಕ ಮತ್ತು ಪೋರ್ನೋಗ್ರಾಫಿಕ್ ಆದ ಲೈಂಗಿಕ ಪ್ರಕಟಣೆಗಳನ್ನು ಮತ್ತು ಸಲಿಂಗಕಾಮಿ ಸಂಘಗಳನ್ನು ಕಾನೂನುಬಾಹಿರವನ್ನಾಗಿ ಮಾಡಿ ಲೇಖಕ ಎರಿಕಾ ಮಾನ್ ಮತ್ತು ಕಾದಂಬರಿಕಾರ ರಿಚರ್ಡ್ ಪ್ಲಾಟ್ನಂತಹವರೂ ದೇಶವನ್ನು ತೊರೆಯುವಂತೆ ಒತ್ತಡ ಹೇರಿದರು. ಮಾರ್ಚ್ 1933ರಲ್ಲಿ, ಮ್ಯಾಗ್ನಸ್ ಹರ್ಶ್‌ಫೀಲ್ಡ್‌ನ für (ಇನ್‌ಸ್ಟಿಟ್ಯೂಟ್ ಆಫ್ ಸೆಕ್ಷುವಲ್ ರಿಸರ್ಚ್)ನ ನಿರ್ವಾಹಕ ಕರ್ಟ್ ಹಿಲ್ಲರ್ನನ್ನು ಬಂಧಿಸಿ ಒಂದು ಕಾನ್ಸಂಟ್ರೇಶನ್ ಕ್ಯಾಂಪ್ಗೆ ಸಾಗಿಸಲಾಯಿತು; ನಾಜೀ ಪ್ರಭುತ್ವವು 1930ರ ದಶಕದಲ್ಲಿ ಸುಮಾರು 100,000 ಸಲಿಂಗಕಾಮಿಗಳನ್ನು ಬಂಧಿಸಿತು. 6 ಮೇ 1933ರಂದು Studentenschaftನ ಹಿಟ್ಲರ್ ಯೂಥ್ ದಳವು ಇನ್‍ಸ್ಟಿಟ್ಯೂಟ್ ಆಫ್ ಸೆಕ್ಸ್ ರಿಸರ್ಚ್ನ ಮೇಲೆ ದಾಳಿಮಾಡಿ ಓಪರ್ನ್‌ಪ್ಲಾಟ್ಜ್‌ನ ಬೀದಿಗಳಲ್ಲಿ ಅದರ ಗ್ರಂಥಾಲಯ ಮತ್ತು ಪತ್ರಾಗಾರಗಳನ್ನು ಬಹಿರಂಗವಾಗಿ ಸುಟ್ಟುಹಾಕಿದರು ಮತ್ತು ಈ ಘಟನೆಯಲ್ಲಿ ಸುಮಾರು 20,000 ಪುಸ್ತಕಗಳು ಮತ್ತು ನಿಯತಕಾಲಿಕೆಗಳು ಹಾಗೂ ಸುಮಾರು 5,000 ಚಿತ್ರಗಳು ನಾಶವಾಗಿಹೋದವು. ಜತೆಗೇ ಹಿಟ್ಲರ್ ಯೂಥ್ ಈ ಸಂಸ್ಥೆಯ ಗೇ, ಲೆಸ್ಬಿಯನ್, ಬೈಸೆಕ್ಷುವಲ್ ಮತ್ತು ಟ್ರ್ಯಾನ್ಸ್‌ಜೆಂಡರ್ ರೋಗಿಗಳ ವಿವರಪುಸ್ತಕವನ್ನು ವಶಪಡಿಸಿಕೊಂಡರು. ಈ ಪುಸ್ತಕಗಳನ್ನು ಸುಡುವ ವೇಳೆಯಲ್ಲಿ ಜೋಸೆಫ್ ಗೀಬೆಲ್ಸ್ ಔಪಚಾರಿಕವಾಗಿ ಸುಮಾರು 40,000 ಜನರ ಸಭೆಯಿಂದರಲ್ಲಿ ಭಾಷಣ ಮಾಡಿದನು. ಮೊದಮೊದಲು ಹಿಟ್ಲರ್ ರಾಹ್ಮ್‌ನನ್ನು ಆತನ ಸಲಿಂಗಕಾಮವನ್ನು ಪಾರ್ಟಿಯ ಸಲಿಂಗಕಾಮಿ-ವಿರೋಧಿ ನೀತಿಯ ಉಲ್ಲಂಘನೆಯೆಂದು ಪರಿಗಣಿಸುವವರಿಂದ ಕಾಪಾಡಿಕೊಂಡಿದ್ದನು; ಆದರೆ ರಾಹ್ಮ್ ನಾಜೀ ಪಕ್ಷದ ತನ್ನ ನಾಯಕತ್ವಕ್ಕೆ ರಾಜಕೀಯವಾಗಿ ಸವಾಲೊಡ್ಡುವವನೆಂದು ತಿಳಿದುಬಂದಾಗ ಹಿಟ್ಲರ್ ಆತನಿಗೆ ದ್ರೋಹವೆಸಗಿದನು. ಆದರಿಂದ 1934ರಲ್ಲಿ ನೈಟ್ ಆಫ್ ದ ಲಾಂಗ್ ನೈವ್ಸ್ (30 ಜೂನ್–2 ಜುಲೈ)ನ ಮೂಲಕ ಹಿಟ್ಲರ್ ತನಗೆ ಎದುರಾಗಿರುವ ಅಥವಾ ಎದುರಾಗಬಹುದಾದ ಪ್ರತಿಯೊಬ್ಬ ನಾಜೀ ರಾಜಕೀಯ ಎದುರಾಳಿಯ ಹತ್ಯೆ ಮಾಡಿಸಿದನು; ಅರ್ನ್ಸ್ಟ್ ರಾಹ್ಮ್‌ನ ಕೊಲೆಯನ್ನು ಆತ ಸಲಿಂಗಕಾಮಿಯಾಗಿದ್ದನೆಂಬ ಕಾರಣದಿಂದ ಮತ್ತು ಬ್ರೌನ್‌ಶರ್ಟ್ () ಪಾಳೆಯದ ನೈತಿಕ ಅಸಮಾಧಾನವನ್ನು ಅಡಗಿಸುವ ಸಲುವಾಗಿ ಮಾಡಿಸಲಾಯಿತೆಂದು ಸಮರ್ಥನೆ ನೀಡಲಾಯಿತು . ಶುಸ್ಟಾಫೆಲ್ ()ನ ಮುಖ್ಯಸ್ಥನೂ, ಮೊದಮೊದಲು ರಾಹ್ಮ್‌ನ ಬೆಂಬಲಿಗನೂ ಆಗಿದ್ದ ಹೆನ್ರಿಕ್ ಹಿಮ್ಲರ್ ರಾಹ್ಮ್‌ನ ವಿರುದ್ಧದ ಸಲಿಂಗಕಾಮದ ಆರೋಪಗಳು ಸುಳ್ಳೆಂದೂ, ಅವು ಯಹೂದಿಗಳ ಚಾರಿತ್ರ್ಯವಧೆಯ ಒಳಸಂಚೆಂದೂ ವಾದಿಸಿದನು. ನೈಟ್ ಆಫ್ ದ ಲಾಂಗ್ ನೈವ್ಸ್ ನಿರ್ಮೂಲನದ ನಂತರ ಹಿಟ್ಲರ್ ಹಿಮ್ಲರ್‌ಗೆ ಬಡ್ತಿ ನೀಡಿದನು, ಆಗ ಆತನು ಸಲಿಂಗಕಾಮವನ್ನು ಉತ್ಸಾಹದಿಂದ ನಿರ್ಮೂಲನ ಮಾಡತೊಡಗಿದನು, ಮತ್ತು ಆತನ ವಿವರಣೆಯ ಪ್ರಕಾರ: “ನಾವು ಈ ಜನರನ್ನು ರೆಂಬೆಕೊಂಬೆಗಳು ಮತ್ತು ಬೇರುಸಮೇತವಾಗಿ ನಿರ್ಮೂಲನ ಮಾಡಬೇಕಿದೆ . . . ಸಲಿಂಗಕಾಮಿಗಳನ್ನು ನಿರ್ನಾಮ ಮಾಡಬೇಕಿದೆ.” 1936ರಲ್ಲಿ ಹಿಮ್ಲರ್ ಸಲಿಂಗಕಾಮ ಮತ್ತು ಗರ್ಭಪಾತವನ್ನು ತೊಡೆದುಹಾಕುವ ಸಲುವಾಗಿ ಅನ್ನು ಸ್ಥಾಪಿಸಿದನು; ಸಲಿಂಗಕಾಮವನ್ನು ಅಧಿಕೃತವಾಗಿ “ಆರೋಗ್ಯಕರ ಜನಪ್ರಿಯ ಭಾವನೆ”ಗಳಿಗೆ ವ್ಯತಿರಿಕ್ತವಾದುದೆಂದು ಘೋಷಿಸಲಾಯಿತು, ಗೇ ಮನುಷ್ಯರನ್ನು “ಜರ್ಮನ್ ರಕ್ತವನ್ನು ಕಲುಷಿತಗೊಳಿಸಿದವರು” ಎಂದು ಕಾಣಲಾಯಿತು; ಕಾನ್ಸಂಟ್ರೇಶನ್ ಕ್ಯಾಂಪ್‌ಗಳ ಖೈದಿಗಳಾಗಿ ಅವರು ತಮ್ಮನ್ನು ಗುರುತಿಸಲು ಗುಲಾಬಿ ತ್ರಿಕೋನಗಳನ್ನು ಧರಿಸಬೇಕಾಗಿತ್ತು. ನಾಜೀ ಸಲಿಂಗಕಾಮ-ವಿರೋಧೀ ಕಾನೂನುಗಳು ಲೆಸ್ಬಿಯನ್ಗಳನ್ನು ಶಿಕ್ಷಿಸಲು ಹೆಚ್ಚೇನೂ ಪ್ರಯತ್ನ ಮಾಡಲಿಲ್ಲ, ಏಕೆಂದರೆ ಅವರನ್ನು ಪಿತೃಪ್ರಭುತ್ವದ ಬೈಸೆಕ್ಷುವಲ್ ನಿಯಮಗಳ ಪ್ರಕಾರ ನಡೆಯುವಂತೆ ಮನವೊಲಿಸುವುದು ಅಥವಾ ಒತ್ತಡ ಹೇರುವುದು ಸುಲಭವೆಂದು ಭಾವಿಸಲಾಗುತ್ತಿತ್ತು; ಆದರೆ ನಾಜೀ ಜರ್ಮನಿಯ ಕೌಟುಂಬಿಕ ನೈತಿಕತೆಗೆ ಸಾಂಸ್ಕೃತಿಕ ಬೆದರಿಕೆಯಾಗಿ ಉಳಿದುಕೊಂಡಿದ್ದು, ಆಗಾಗ ಇವರನ್ನು ಕಾನೂನುಪ್ರಕಾರವಾಗಿ ಸಮಾಜವಿರೋಧೀ ಶಕ್ತಿಗಳೆಂದು ಗುರುತಿಸಲಾಗುತ್ತಿತ್ತು. (ನೋಡಿ: (), ) === ಚರ್ಚ್ ಮತ್ತು ರಾಜ್ಯ === ಹಿಟ್ಲರ್ ತನ್ನ ವಿಚಾರವಾದಗಳನ್ನು ವಿಸ್ತರಿಸಿ ಆತನ ಸಾಂಪ್ರದಾಯಿಕ ರೋಮನ್ ಕ್ಯಾಥೊಲಿಸಿಸಮ್ನ ವಿಮರ್ಶೆಯನ್ನು ಬೆಂಬಲಿಸುವ ಧಾರ್ಮಿಕ ಉಪದೇಶವೊಂದನ್ನು ರೂಪಿಸಿದನು. ವಿಶೇಷವಾಗಿ ಧನಾತ್ಮಕ ಕ್ರೈಸ್ತಮತಕ್ಕೆ ಸಮೀಪವಾಗಿ ಸಂಬಂಧಿಸಿದಂತೆ ಆತನು ಕ್ಯಾಥೊಲಿಕ್ ಧರ್ಮಕ್ಕೆ ತನ್ನ ಆಕ್ಷೇಪಣೆಯನ್ನು ವ್ಯಕ್ತಪಡಿಸಿದನು, ಏಕೆಂದರೆ ಅದು ಒಂದು ಪ್ರತ್ಯೇಕವಾದ ಜನಾಂಗ ಮತ್ತು ಅದರ ಸಂಸ್ಕೃತಿಯ ಧರ್ಮವಾಗಿರಲಿಲ್ಲ. ಜತೆಗೇ ನಾಜಿಗಳು ಲುಥೆರನಿಸಮ್ನ ಸಾಮುದಾಯಿಕ ಅಂಶಗಳನ್ನು ಅದರ ಜೈವಿಕ ವಿಧರ್ಮೀ ಹಿನ್ನೆಲೆಯೊಂದಿಗೆ ನಾಜಿಸಮ್‌ನೊಳಗೆ ಸೇರಿಸಿಕೊಂಡರು. ಹಿಟ್ಲೇರಿಯನ್ ಧರ್ಮಶಾಸ್ತ್ರವು ತನ್ನೊಳಗೆ ಮಿಲಿಟರಿಸಮ್ ಅನ್ನೂ ಒಳಗೊಂಡಿತ್ತು ಮತ್ತು ಇದಕ್ಕೆ ನೀಡಲಾದ ಸಮರ್ಥನೆಯೆಂದರೆ, ಆತನದು ನಿಜವಾದ ಒಡೆಯ-ಧರ್ಮವಾಗಿರುವುದು ಏಕೆಂದರೆ ಅದು ಆರಾಮ ನೀಡುವ ಸುಳ್ಳುಗಳನ್ನು ತಪ್ಪಿಸಿ ಒಡೆತನವನ್ನು ರೂಪಿಸುವುದು ಎಂದಾಗಿತ್ತು. "ಸತ್ಯಾಂಶಗಳಿಗೆ ವ್ಯತಿರಿಕ್ತವಾಗಿ" ಪ್ರೇಮ, ಸಹಿಷ್ಣುತೆ ಮತ್ತು ಸಮಾನತೆಯನ್ನು ಬೋಧಿಸುವ ಧರ್ಮಗಳ ಬಗ್ಗೆ ಹಿಟ್ಲರ್ ಮಾತನಾಡುತ್ತ ಅವು ಸುಳ್ಳು ಮತ್ತು ಗುಲಾಮ ಧರ್ಮಗಳೆಂದೂ, "ಸತ್ಯ"ಗಳನ್ನು ಗುರುತಿಸಿದ ಮನುಷ್ಯನೇ "ನೈಸರ್ಗಿಕ ನಾಯಕ"ನಾಗುವನೆಂದೂ, ಇದನ್ನು ಅಲ್ಲಗಳೆಯುವವರು "ನೈಸರ್ಗಿಕ ಗುಲಾಮರು" ಎಂದೂ; ಹೀಗಿದ್ದರಿಂದ ಈ ಗುಲಾಮರು, ಅದರಲ್ಲಿಯೂ ವಿಶೇಷವಾಗಿ ಬುದ್ಧಿವಂತರಾದವರು ತಮ್ಮ ಒಡೆಯರನ್ನು ಸುಳ್ಳು ಧರ್ಮಗಳ ಮೂಲಕ ತೊಂದರೆಗೊಳಪಡಿಸುವರು. "ನಾಜೀ ಸಮಾಜವಾದಿ ನಾಯಕರು ಮತ್ತು ಅವರ ಮತೀಯ ಸಿದ್ಧಾಂತಗಳು ಮೂಲವಾಗಿ, ದೃಢನಿಲುವಿನ ಧರ್ಮವಿರೋಧಿಗಳಾಗಿದ್ದರೂ" ಕೂಡ, ನಾಜೀ ಜರ್ಮನಿಯು ಸಾಧಾರಣವಾಗಿ ಚರ್ಚುಗಳ ಮೇಲೆ ನೇರವಾದ ದಾಳಿಯನ್ನು ನಡೆಸಲಿಲ್ಲ, ಆದರೆ ನಾಜೀ ಆಳ್ವಿಕೆಯೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪದ ಕೆಲವು ಪಾದ್ರಿಗಳು ಇದಕ್ಕೆ ಅಪವಾದವಾಗಿದ್ದರು. ಪ್ರಮುಖ ನಾಜೀ ಅಧಿಕಾರಿಯಾದ ಮಾರ್ಟಿನ್ ಬೋರ್ಮನ್ ಪ್ರಕಾರ: "ಪಾದ್ರಿಗಳು ನಮ್ಮಿಂದ ಹಣ ಪಡೆಯುವರು ಮತ್ತು, ಇದರ ಪರಿಣಾಮವಾಗಿ, ಅವರು ನಮಗೆ ಬೇಕಾದ್ದನ್ನು ಬೋಧಿಸುವರು. ಇದಕ್ಕೆ ಹೊರತಾಗಿ ಪಾದ್ರಿಯೊಬ್ಬನು ನಡೆದುಕೊಳ್ಳುತ್ತಿರುವುದು ಕಂಡುಬಂದಲ್ಲಿ, ಅವನನ್ನು ಕೂಡಲೇ ಶಿಕ್ಷಿಸಲಾಗುವುದು. ಪಾದ್ರಿಯ ಕೆಲಸವೆಂದರೆ ಪೋಲ್‌ಗಳನ್ನು ಸುಮ್ಮನಿರಿಸುವುದು, ಮತ್ತು ಅವರು ಅವಿವೇಕಿಗಳೂ ದಡ್ಡರೂ ಆಗಿರುವಂತೆ ನೋಡಿಕೊಳ್ಳುವುದು." ಪೋಲಂಡ್ ಅನ್ನು ಎದೆಗುಂದಿಸಲು, ನಾಜೀಗಳು ಹೆಚ್ಚೂಕಡಿಮೆ ಶೇಕಡಾ 16ರಷ್ಟು ಪಾದ್ರಿಗಳನ್ನ್ನು ಕೊಂದರು; 38 ಬಿಶಪ್‌ಗಳಲ್ಲಿ 13 ಮಂದಿಯನ್ನು ಕಾನ್ಸಂಟ್ರೇಶನ್ ಕ್ಯಾಂಪ್‌ಗಳಿಗೆ ಕಳುಹಿಸಲಾಯಿತು. ಈ ಕ್ರಮಗಳು, ಮತ್ತು ಚರ್ಚುಗಳು, ಸೆಮಿನರಿಗಳು ಹಾಗೂ ಇನ್ನಿತರ ಧಾರ್ಮಿಕ ಸಂಸ್ಥೆಗಳನ್ನು ಮುಚ್ಚಿದ್ದು ಪಾಲಿಶ್ ಕ್ರೈಸ್ತಪುರೋಹಿತವರ್ಗವನ್ನು ಹೆಚ್ಚೂಕಡಿಮೆ ನಿರ್ಮೂಲನ ಮಾಡುವುದರಲ್ಲಿ ಯಶಸ್ವಿಯಾಯಿತು. ನಾಜೀ-ಪರವಾದ ರಾಷ್ಟ್ರಗಳಲ್ಲಿ, ಫ್ಯಾಸಿಸ್ಟ್ ಪಾದ್ರಿ-ವಿರೋಧವು ಅನಧಿಕೃತವಾಗಿ ಜಾರಿಯಲ್ಲಿತ್ತು ಮತ್ತು ಆಯ್ದ ಕ್ರೈಸ್ತಪುರೋಹಿತರನ್ನು ಅನೈತಿಕ ಚಟಿವಟಿಕೆಗಳ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸುವುದರ ಮೂಲಕ ಜಾರಿಗೆ ತರಲಾಗುತ್ತಿತ್ತು, ಮತ್ತು ಅವರಿಗೆ ಗೆಸ್ಟಾಪೋ ಮತ್ತು SDಯ ಅಪರಾಧ ಮಾಡುವಂತೆ ಪ್ರೇರೇಪಿಸುವ ಗೂಢಚಾರ ರು ರಹಸ್ಯವಾಗಿ ಕಿರುಕುಳ ನೀಡುತ್ತಿದ್ದರು. ಇಲ್ಲಿ ನಾವು ಗಮನಿಸಬಹುದಾದ ಕೇಸ್ ಎಂದರೆ ಲುಥೆರನ್ ಪಾಸ್ಟರ್ ಮತ್ತು ಧರ್ಮಶಾಸ್ತ್ರಜ್ಞನಾಗಿದ್ದ ಡೀಟ್ರಿಚ್ ಬೋನ್‌ಹಾಫರ್ನದು, ಈತನು ಜರ್ಮನ್ ಪ್ರತಿರೋಧದ ಸಮಯದಲ್ಲಿ ನಾಜಿಸಮ್ ವಿರುದ್ಧ ಹೋರಾಡಿದನು. ಆದಾಗ್ಯೂ, ನಾಜಿಗಳು ಆಗಾಗ ತಮ್ಮ ರಾಜಕೀಯವನ್ನು ಸಮರ್ಥಿಸಿಕೊಳ್ಳಲು ಚರ್ಚ್ ಅನ್ನು ಬಳಸಿಕೊಳ್ಳುತ್ತಿದ್ದರು, ರೀಚ್ ನ ಸಂಕೇತಗಳಂತಹ ಕ್ರಿಶ್ಚಿಯನ್ ಸಂಕೇತಗಳನ್ನು ಬಳಸಿಕೊಳ್ಳುತ್ತಿದ್ದರು, ಮತ್ತು ಕೆಲವೆಡೆ ಕ್ರಿಶ್ಚಿಯನ್ ಸಂಕೇತಗಳ ಬದಲಾಗಿ ರೀಚ್ ಸಂಕೇತಗಳನ್ನು ಬಳಸುತ್ತಿದ್ದರು. ಈ ರೀತಿಯಾಗಿ ನಾಜಿಸಮ್ ಚರ್ಚ್ ಮತ್ತು ರಾಜ್ಯವನ್ನು ಒಟ್ಟುಗೂಡಿಸಿ ಒಂದು ಉಗ್ರ-ರಾಷ್ಟ್ರೀಯವಾದಿ ರಾಜಕೀಯ ಘಟಕವಾಗಿ ರೂಪಿಸಿದರು — ಈ ನಾಜೀ ಜರ್ಮನಿಯ ಧ್ಯೇಯಸೂತ್ರವು , , Führer (“ಒಂದು ಜನತೆ, ಒಂದು ಸಾಮ್ರಾಜ್ಯ, ಒಬ್ಬ ನಾಯಕ”) ಎಂದಾಗಿತ್ತು. ಆರ್ಯನ್ ಜನಾಂಗದ ಮೂಢನಂಬಿಕೆಗಳನ್ನು ವಿಧಿಗಳು ಮತ್ತು ಧರ್ಮಶಾಸ್ತ್ರದೊಂದಿಗೆ ರೊಮ್ಯಾಂಟಿಸೈಸ್ ಮಾಡುವ - (ಥುಲ್ ಸೊಸೈಟಿ)ಗೆ ನಾಜೀ ಪಕ್ಷದ ಹಲವಾರು ಸಂಸ್ಥಾಪಕರು ಮತ್ತು ನಾಯಕರು ಸದಸ್ಯರಾಗಿದ್ದರು. ಮೂಲವಾಗಿ ನಿಂದ ಉದ್ಭವಿಸಿದ್ದ ಥುಲ್ ಸೊಸೈಟಿಯು ಈ ರೀತಿಯ ಪ್ಯಾನ್-ಜರ್ಮನ್ ಸಂಘಗಳಲ್ಲಿ ಸಾಮಾನ್ಯವಾಗಿದ್ದ ಏರಿಯೋಸೊಫಿಯ ಜನಾಂಗೀಯ ಮೂಢನಂಬಿಕೆಗಳನ್ನು ಹಂಚಿಕೊಳ್ಳುತ್ತಿತ್ತು; ರುಡಾಲ್ಫ್ ವಾನ್ ಸೆಬೊಟ್ಟೆನ್‌ಡಾರ್ಫ್ ಮತ್ತು ವೈಲ್ಡ್ ಎಂಬ ಹೆಸರಿನ ಇನ್ನೊಬ್ಬ ವ್ಯಕ್ತಿಗಳಿಬ್ಬರೂ ಅತೀಂದ್ರಿಯವಾದದ ಬಗ್ಗೆ ಥುಲ್ ಸೊಸೈಟಿಗೆ ಉಪನ್ಯಾಸಗಳನ್ನು ನೀಡುತ್ತಿದ್ದರು. ಸಾಮಾನ್ಯವಾಗಿ, ಸೊಸೈಟಿಯ ಉಪನ್ಯಾಸಗಳು ಮತ್ತು ವಿಹಾರಗಳು ಯಹೂದ್ಯ-ವಿರೋಧ ಮತ್ತು ಜರ್ಮೇನಿಕ್ ಪ್ರಾಚೀನತೆಯ ಬಗ್ಗೆಯಾಗಿದ್ದರೂ ಕೂಡ, ಐತಿಹಾಸಿಕವಾಗಿ ಇದು ಒಂದು ಪ್ಯಾರಾಮಿಲಿಟರಿ ಸೇನೆಯ ರೂಪದಲ್ಲಿ ಬವೇರಿಯನ್ ಸೋವಿಯೆತ್ ರಿಪಬ್ಲಿಕ್ನ ವಿರುದ್ಧ ಹೋರಾಡಿದ್ದಕ್ಕಾಗಿ ಗಮನಿಸಲ್ಪಟ್ಟಿದೆ. ಥುಲ್ ಸೊಸೈಟಿಯ ಸಂಯೋಜಕರಲ್ಲೊಬ್ಬನಾಗಿದ್ದ ಡೀಟ್ರಿಚ್ ಎಕ್‍ಹಾರ್ಟ್, ಅಡಾಲ್ಫ್ ಹಿಟ್ಲರ್‌ನಿಗೆ ಸಾರ್ವಜನಿಕವಾಗಿ ಮಾತನಾಡುವುದರಲ್ಲಿ ಶಿಕ್ಷಣ ನೀಡಿದನು ಮತ್ತು ನಂತರದಲ್ಲಿ ಹಿಟ್ಲರ್ ತನ್ನ ಮೇನ್ ಕ್ಯಾಂಫ್ ಅನ್ನು ಎಕ್‌ಹಾರ್ಟನಿಗೆ ಅರ್ಪಣೆ ಮಾಡಿದನು. ಮೊದಮೊದಲಿಗೆ DAPಯನ್ನು ಥುಲ್ ಸೊಸೈಟಿಯು ಬೆಂಬಲಿಸಿತು - ಆದರೆ ಹಿಟ್ಲರ್ ಬಲು ಬೇಗನೆ ಅವರ ರಾಜಕೀಯದ ಬಗ್ಗೆ ಮೂಢನಂಬಿಕೆಗಳಿಂದ ಕೂಡಿದ ದೃಷ್ಟಿಕೋನವನ್ನು ತುಚ್ಛೀಕರಿಸುವುದರ ಮೂಲಕ ಅವರನ್ನು ಹೊರತುಮಾಡಿ ಅದಕ್ಕೆ ಬದಲಾಗಿ ಸಾಮೂಹಿಕ ಆಂದೋಲನದ ರಾಜಕೀಯ ಪಕ್ಷದ ಪರವಾದನು. ಇದಕ್ಕೆ ವ್ಯತಿರಿಕ್ತವಾಗಿ, ಮುಖ್ಯಸ್ಥನಾಗಿದ್ದ ಹೆನ್ರೀಕ್ ಹಿಮ್ಲರ್ ಅತೀಂದ್ರಿಯಶಾಸ್ತ್ರದ ಬಗ್ಗೆ ಬಹಳ ಆಸಕ್ತಿ ಹೊಂದಿದ್ದನು.. ಯಹೂದಿಗಳ ಮೇಲಿನ ಕಿರುಕುಳದ ಬಗ್ಗೆ ಈಗಿನ ಐತಿಹಾಸಿಕ ದೃಷ್ಟಿಕೋನವು ಏನೆಂದರೆ, ಪ್ರಾಟೆಸ್ಟೆಂಟ್ ಸುಧಾರಣೆ ಮತ್ತು ಹಾಲೋಕಾಸ್ಟ್ಗಳ ನಡುವಿನ ಅವಧಿಯಲ್ಲಿ [[ಮಾರ್ಟಿನ್ ಲೂಥರನ ಗ್ರಂಥವಾದ (1543), ಎಂಬುದು ಯಹೂದಿ ಪ್ರಜೆಗಳ ವಿರುದ್ಧದ ಜರ್ಮನ್ ಯಹೂದ್ಯ-ವಿರೋಧೀ ಆಚರಣೆಗಳ ಮೇಲೆ ಪ್ರಮುಖವಾದ ಮತ್ತು ನಿರಂತರವಾದ ಬೌದ್ಧಿಕ ಪ್ರಭಾವವನ್ನು ಬೀರಿತು. ನಾಜೀಗಳು ಸಾರ್ವಜನಿಕವಾಗಿ Liesನ ಮೂಲಗ್ರಂಥವನ್ನು ತಮ್ಮ ವಾರ್ಷಿಕ ನ್ಯೂರೆಂಬರ್ಗ್ ಪ್ರದರ್ಶನಗಳ ಸಮಯದಲ್ಲಿ ಪ್ರದರ್ಶಿಸುತ್ತಿದ್ದರು, ಮತ್ತು ನಗರವು ಇದರ ಪ್ರಥಮ ಆವೃತ್ತಿಯ ಪುಸ್ತಕವನ್ನು ಜೂಲಿಯಸ್ ಸ್ಟ್ರೀಶರ್ನಿಗೆ ಕಾಣಿಕೆಯಾಗಿ ನೀಡಿತು, ಮತ್ತು Stürmerನ ಸಂಪಾದಕನಾಗಿದ್ದ ಈತನು ಲೂಥರನ ಗ್ರಂಥವನ್ನು ಜರ್ಮನಿಯ ಭಾವನೆಯ ಮೇಲೆ ಪ್ರಭಾವ ಬೀರಿದ, ಇಲ್ಲಿಯವರೆಗೆ ಪ್ರಕಟವಾದ ಯಹೂದ್ಯ-ವಿರೋಧಿ ಪುಸ್ತಕಗಳಲ್ಲಿಯೇ ಅತ್ಯಂತ ತೀವ್ರಗಾಮಿಯಾದುದೆಂದು ಬಣ್ಣಿಸಿದ್ದಾನೆ. Kristallnachtನ ಕೆಲವೇ ಕಾಲದ ನಂತರ ಪ್ರಾಟೆಸ್ಟೆಂತ್ ಬಿಶಪ್ ಮಾರ್ಟಿನ್ ಸಾಸ್ ಮಾರ್ಟಿನ್ ಲೂಥರನ ಬರಹಗಳ ಸಂಹಿತೆಯೊಂದನ್ನು ಪ್ರಕಟಿಸಿದನು; ಇದರ ಪರಿಚಯದಲ್ಲಿ ಆತನು ಸಿನಗಾಗ್‌ಗಳಿಗೆ ಬೆಂಕಿಹಚ್ಚಿದುದನ್ನು ಅನುಮೋದಿಸಿದನಲ್ಲದೆ ಇದಕ್ಕೆ ತಾಳೆಯಾಗುವ ಇನ್ನೊಂದು ವಿಚಾರವನ್ನೂ ತಿಳಿಸಿದನು: “ನವೆಂಬರ್ 10, 1938ರ ಲೂಥರನ ಹುಟ್ಟುಹಬ್ಬದಂದು ಜರ್ಮನಿಯಲ್ಲಿ ಸಿನಗಾಗ್‌ಗಳು ಹೊತ್ತಿ ಉರಿಯುತ್ತಿವೆ.” ಆತ ಜರ್ಮನರನ್ನು "ತನ್ನ ಕಾಲದ ಯಹೂದ್ಯ-ವಿರೋಧಿಗಳಲ್ಲೇ ಶ್ರೇಷ್ಠನಾದ, ಯಹೂದಿಗಳ ಬಗ್ಗೆ ತನ್ನ ಜನರಿಗೆ ಎಚ್ಚರಿಕೆ ನೀಡಿದ ಮನುಷ್ಯನ" ಮಾತುಗಳನ್ನು ನಂಬುವಂತೆ ಒತ್ತಾಯಿಸಿದನು. ಆದರೆ, ಧರ್ಮಶಾಸ್ತ್ರಜ್ಞ ಜೊಹಾನ್ನೆಸ್ ವಾಲ್‌ಮಾನ್ ಪ್ರಕಾರ ಲೂಥರನ ಯಹೂದ್ಯ-ವಿರೋಧಿ ಉಪದೇಶಗಳು ಜರಮನಿಯ ಮೇಲೆ ನಿರಂತರವಾದ ಪ್ರಭಾವವನ್ನೇನೂ ಬೀರಲಿಲ್ಲವೆಂದೂ, ಹದಿನೆಂಟನೆ ಮತ್ತು ಹತ್ತೊಂಬತ್ತನೆಯ ಶತಮಾನಗಳಲ್ಲಿ ಅದನ್ನು ನಿರ್ಲಕ್ಷಿಸಲಾಗಿತ್ತೆಂದೂ ಹೇಳುತ್ತಾರೆ. ಹೀಗಿದ್ದಾಗ್ಯೂ, ಪ್ರೊ. ಡಯರ್ಮೇಡ್ ಮೆಕ್‌ಕಲ್ಲೋ ಪ್ರಕಾರ ಗ್ರಂಥವು ಕ್ರಿಸ್ಟಲ್‌ನ್ಯಾಶ್ತ್ಗೆ ನೀಲನಕ್ಷೆಯ ಕೆಲಸ ಮಾಡಿತು. == ಆರ್ಥಿಕತೆ == ಅಂತರ್ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ಬಗ್ಗೆ ನಾಜಿಸಮ್ ಮಹಾ ಆರ್ಥಿಕ ಕುಸಿತಕ್ಕೆ ಕಾರಣರಾದ ಬಂಡವಾಳಗಾರರ ನೇತೃತ್ವದಲ್ಲಿನ ಪಿತೂರಿಯ ಬಗ್ಗೆ ಅಂತರ್ರಾಷ್ಟ್ರೀಯ ಬ್ಯಾಂಕಿಂಗ್ನ ಯಹೂದಿ ಒಳಸಂಚನ್ನು ಆಧಾರವಾಗಿಟ್ಟುಕೊಂಡಿತ್ತು. ನಾಜೀಗಳು ಆರೋಪಿಸಿದಂತೆ ಕಬಾಲ್‌ನ ನಿಯಂತ್ರಕರು ಆಗಲೇ ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್‌ಗಳನ್ನು ಆರ್ಥಿಕವಾಗಿ ನಿಯಂತ್ರಿಸುತ್ತಿದ್ದು, ಅವರು ಪ್ರಭಾವಶಾಲಿಗಳಾದ ಯಹೂದ್ಯ ಗಣ್ಯವ್ಯಕ್ತಿಗಳಾಗಿದ್ದರು. ನಾಜೀಗಳ ನಂಬಿಕೆಯ ಪ್ರಕಾರ ಈ ಕಬಾಲ್ ಒಂದು ಬೃಹತ್, ದೀರ್ಘಕಾಲೀನ ಯಹೂದ್ಯ ಒಳಸಂಚಿನ ಭಾಗವಾಗಿದ್ದು, ಇದನ್ನು ಬಳಸಿಕೊಂಡು ಯಹೂದಿಗಳು ನ್ಯೂ ವರ್ಲ್ಡ್ ಆರ್ಡರ್ನ ಮೂಲಕ ಜಾಗತಿಕ ನಿಯಂತ್ರಣವನ್ನು ಸ್ಥಾಪಿಸುವರು ಎಂದೆನ್ನಲಾಗುತ್ತಿತ್ತು. ಆರೋಪದ ಪ್ರಕಾರ ಕಬಾಲ್ ನಿಯಂತ್ರಿಸುತ್ತಿದ್ದ ಬ್ಯಾಂಕ್‌ಗಳು ರಾಷ್ಟ್ರಗಳಿಗೆ ಸಾಲವನ್ನು ನೀಡುವುದು ಅಥವಾ ತಡೆಹಿಡಿಯುವುದರ ಮುಖಾಂತರ ರಾಜಕೀಯ ಪ್ರಭಾವವನ್ನು ನಿಯಂತ್ರಿಸುವುದು ಅಥವಾ ಹೇರುವುದನ್ನು ಮಾಡುತ್ತಿದ್ದವು. ನಾಜೀ ಆರ್ಥಿಕ ಆಚರಣೆಯು ಮೊದಲು ಜರ್ಮನಿಯ ಸ್ಥಳೀಯ ಆರ್ಥಿಕ ವ್ಯವಸ್ಥೆಯ ಮೇಲೆ ಗಮನ ಹರಿಸಿ, ನಂತರ ಅಂತರ್ರಾಷ್ಟ್ರೀಯ ವ್ಯಾಪಾರದೆಡೆ ತಿರುಗಿತು. ಜರ್ಮನಿಯ ಬಡತನವನ್ನು ನಿರ್ಮೂಲನೆ ಮಾಡುವ ಸಲುವಾಗಿ ಸ್ವದೇಶೀ ನೀತಿಯನ್ನು ಕಿರಿದುಗೊಳಿಸಿ ನಾಲ್ಕು ಪ್ರಮುಖ ಗುರಿಗಳನ್ನಾಗಿ ವಿಂಗಡಣೆ ಮಾಡಲಾಯಿತು: () ನಿರುದ್ಯೋಗ ನಿರ್ಮೂಲನೆ, () ತ್ವರಿತವಾದ ಮತ್ತು ಗಣನೀಯ ಪ್ರಮಾಣದ ಮರುಶಸ್ತ್ರೀಕರಣ, () ಮರಳಿ ತಲೆಯೆತ್ತಿದ ವಿಸ್ತೃತ-ಹಣದುಬ್ಬರದ ವಿರುದ್ಧ ಹಣಕಾಸಿನ ರಕ್ಷಣೆ, ಮತ್ತು () ಮಧ್ಯಮವರ್ಗ ಮತ್ತು ಕೆಳವರ್ಗದವರ ಜೀವನಶೈಲಿಯನ್ನು ಮೇಲಕ್ಕೇರಿಸಲು ಗ್ರಾಹಕ-ಬಳಕೆಯ ವಸ್ತುಗಳ ಉತ್ಪಾದನೆಯ ವಿಸ್ತರಣೆ. ಇದರ ಉದ್ದೇಶವು ವೀಮರ್ ರಿಪಬ್ಲಿಕ್‌ನಲ್ಲಿ ನಾಜೀಗಳು ಕಂಡಿದ್ದ ಕೊರತೆಗಳನ್ನು ಸರಿಪಡಿಸುವುದು ಮತ್ತು ನಾಜೀ ಪಾರ್ಟಿಗೆ ಸ್ಥಳೀಯ ಬೆಂಬಲವನ್ನು ಬಲಪಡಿಸುವುದಾಗಿತ್ತು; 1933 ಮತ್ತು 1936ರ ನಡುವೆ, ಜರ್ಮನಿಯ ವಾರ್ಷಿಕ ನಿವ್ವಳ ರಾಷ್ಟ್ರೀಯ ಉತ್ಪನ್ನವು ಶೇಕಡಾ 9.5ರಷ್ಟು ಮತ್ತು ಔದ್ಯಮಿಕ ಲೆಕ್ಕದ ಪ್ರಕಾರ ಶೇಕಡಾ 17.2ರಷ್ಟು ಮೇಲಕ್ಕೇರಿತು. ವಿಸ್ತರಣೆಯಿಂದಾಗಿ ನಾಲ್ಕು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಜರ್ಮನ್ ಆರ್ಥಿಕ ವ್ಯವಸ್ಥೆಯು ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಿಂದ ಮೇಲೆದ್ದು ಸಂಪೂರ್ಣ ಉದ್ಯೋಗವನ್ನು ತೋರುವಂತೆ ಬದಲಾಯಿತು. ಸಾರ್ವಜನಿಕ ಬಳಕೆಯು ವಾರ್ಷಿಕವಾಗಿ ಶೇಕಡಾ 18.7ರಷ್ಟು ಮತ್ತು ಖಾಸಗೀ ಬಳಕೆಯು ಶೇಕಡಾ 3.6ರಷ್ಟು ಹೆಚ್ಚಿತು. ಇತಿಹಾಸಜ್ಞ ರಿಚರ್ಡ್ ಇವಾನ್ಸ್‌ನ ವರದಿಯ ಪ್ರಕಾರ 1939ರಲ್ಲಿ ದ್ವಿತೀಯ ವಿಶ್ವಯುದ್ಧವು ಆರಂಭವಾಗುವದಕ್ಕೂ ಮುನ್ನ ಜರ್ಮನ್ ಆರ್ಥಿಕ ವ್ಯವಸ್ಥೆಯು "ತನ್ನ ವಾರಿಗೆಯ ಇತರೆಲ್ಲಾ ರಾಷ್ಟ್ರಗಳಿಗಿಂತ ವೇಗವಾಗಿ ಆರ್ಥಿಕ ಬಿಕ್ಕಟ್ಟಿನಿಂದ ಸುಧಾರಿಸಿಕೊಂಡಿತ್ತು. ಜರ್ಮನಿಯ ವಿದೇಶೀ ಸಾಲವನ್ನು ನೆಲೆಗೊಳಿಸಲಾಗಿತ್ತು, ಬಡ್ಡಿದರಗಳು 1932ರಲ್ಲಿದ್ದುದಕ್ಕಿಂತ ಅರ್ಧಮಟ್ಟಕ್ಕಿಳಿದಿದ್ದವು, ಸ್ಟಾಕ್ ವಿನಿಮಯವು ಆರ್ಥಿಕ ಮುಗ್ಗಟ್ಟಿನಿಂದ ಸುಧಾರಿಸಿಕೊಂಡಿತ್ತು, ನಿವ್ವಳ ರಾಷ್ಟ್ರೀಯ ಉತ್ಪಾದನೆಯು ಅದೇ ವೇಳೆಗೆ ಶೇಕಡಾ 81ರಷ್ಟು ಜಾಸ್ತಿಯಾಗಿತ್ತು . . . ಹಣದುಬ್ಬರ ಮತ್ತು ನಿರುದ್ಯೋಗಗಳನ್ನು ಬಗ್ಗುಬಡಿಯಲಾಗಿತ್ತು." === ಖಾಸಗಿ ಸ್ವತ್ತು === ಖಾಸಗೀ ಸ್ವತ್ತುಗಳ ಹಕ್ಕುಗಳು ಅವುಗಳ ಆರ್ಥಿಕ ಬಳಕೆಗೆ ಅನುಗುಣವಾಗಿದ್ದವು; ಅವು ನಾಜೀ ಆರ್ಥಿಕ ಗುರಿಗಳನ್ನು ಮುನ್ನುಗ್ಗಿಸದಿದ್ದಲ್ಲಿ ರಾಜ್ಯವು ಅವುಗಳನ್ನು ರಾಷ್ಟ್ರೀಕೃತಗೊಳಿಸಬಹುದಾಗಿತ್ತು. ನಾಜೀ ಸರ್ಕಾರವು ಕಾರ್ಪೊರೇಟ್ ಟೇಕ್‌ಓವರ್‌ಗಳನ್ನು ಮಾಡತೊಡಗಿತು ಮತ್ತು ಹಾಗೆ ಮಾಡುವ ಬೆದರಿಕೆಗಳನ್ನೊಡ್ಡತೊಡಗಿತು, ಸಂಸ್ಥೆಗೆ ಲಾಭವಿಲ್ಲದಿದ್ದರೂ ಕೂಡ ಸರ್ಕಾರದ ಉತ್ಪಾದನಾ ಯೋಜನೆಗೆ ಅನುಗುಣವಾಗಿ ನಡೆಯುವಂತೆ ಪ್ರೋತ್ಸಾಹಿಸಿತು. ಉದಾಹರಣೆಗೆ, ಏರೋಪ್ಲೇನ್ ಫ್ಯಾಕ್ಟರಿಯ ಒಡೆಯ ಸರ್ಕಾರದ ನಿರ್ದೇಶದಂತೆ ನಡೆಯಲು ನಿರಾಕರಿಸಿದನು, ಆಗ ನಾಜಿಗಳು ಫ್ಯಾಕ್ಟರಿಯನ್ನು ವಶಪಡಿಸಿಕೊಂಡು ಹ್ಯೂಗೋ ಜಂಕರ್ಸ್ನನ್ನು ಬಂಧಿಸಿದರಾದರೂ, ಆತನ ರಾಷ್ಟ್ರೀಕೃತ ಉದ್ಯಮಕ್ಕೆ ಹಣ ಪಾವತಿ ಮಾಡಿದರು. ನಾಜೀಗಳು ಸಾರ್ವಜನಿಕ ಸ್ವತ್ತುಗಳು ಮತ್ತು ಸಾರ್ವಜನಿಕ ಸೇವೆಗಳನ್ನು ಖಾಸಗೀಕರಣಗೊಳಿಸಿದರೂ ಕೂಡ, ಅವರು ರಾಜ್ಯದ ಆರ್ಥಿಕ ನಿಯಂತ್ರಣವನ್ನು ಬಿಗಿಗೊಳಿಸಿದರು. ನಾಜೀ ಆರ್ಥಿಕ ವ್ಯವಸ್ಥೆಯಡಿಯಲ್ಲಿ ಉಚಿತ ಪೈಪೋಟಿ ಮತ್ತು ಸ್ವನಿಯಂತ್ರಿತ ಮಾರುಕಟ್ಟೆಗಳು ಇಲ್ಲವಾದವು; ಆದರೆ ಅಡಾಲ್ಫ್ ಹಿಟ್ಲರನ ಸಾಮಾಜಿಕ ಡಾರ್ವಿನಿಸ್ಟ್ ನಂಬಿಕೆಗಳಿಂದಾಗಿ ಔದ್ಯಮಿಕ ಪೈಪೋಟಿ ಮತ್ತು ಖಾಸಗೀ ಸ್ವತ್ತುಗಳನ್ನು ಖಾಸಗೀ ಯಂತ್ರಗಳಲ್ಲವೆಂದು ಸಂಪೂರ್ಣವಾಗಿ ನಂಬದಿರುವಂತೆ ಮಾಡಿದವು. 1942ರಲ್ಲಿ ಹಿಟ್ಲರ್ ಖಾಸಗೀ ಮಾತುಕತೆಯೊಂದರಲ್ಲಿ: “ನಾನು ಖಾಸಗೀ ಸ್ವತ್ತುಗಳನ್ನು ರಕ್ಷಿಸುವುದನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ... ನಾವು ಖಾಸಗೀ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ” ಎಂದು ಹೇಳಿದನು. “ : ” ಎಂಬ ಶೀರ್ಷಿಕೆಯುಳ್ಳ ನ ಲೇಖನವೊಂದರಲ್ಲಿ ಉದ್ಯಮಗಳು ಹೆಸರಿಗೆ ಮಾತ್ರ ಖಾಸಗಿಯಾಗಿದ್ದು ಮೂಲವಾಗಿ ಅಂತಿಲ್ಲವೆಂಬ ಪ್ರಸ್ತಾಪನೆಗೆ ಪ್ರತಿಯಾಗಿ ಕ್ರಿಸ್ಟೋಫ್ ಬಕ್‌ಹೀಮ್ ಮತ್ತು ಜೋನಾಸ್ ಶೆರ್ನರ್ ಉತ್ತರಿಸುತ್ತ ರಾಜ್ಯದ ನಿಯಂತ್ರಣದಲ್ಲಿದ್ದರೂ ಕೂಡ ಉದ್ಯಮಗಳಿಗೆ ಹೆಚ್ಚಿನ ಉತ್ಪಾದನಾ ಮತ್ತು ಬಂಡವಾಳ ಯೋಜನೆಯ ಸ್ವಾತಂತ್ರ್ಯವಿರುವುದೆಂದು ಹೇಳಿದರೂ ಕೂಡ ನಾಜೀ ಜರ್ಮನ್ ಆರ್ಥಿಕ ವ್ಯವಸ್ಥೆಯು ರಾಜ್ಯದ ನಿರ್ದೇಶನದಂತೆ ನಡೆಯುತ್ತಿತ್ತೆಂದು ಒಪ್ಪಿಕೊಳ್ಳುತ್ತಾರೆ. === ಕೇಂದ್ರೀಕರಣ === ನಾಜೀ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಮತ್ತು ಔದ್ಯಮಿಕ ಕೇಂದ್ರೀಯ ಯೋಜನೆಯು ಪ್ರಮುಖ ಲಕ್ಷಣವಾಗಿದ್ದಿತು. ರೈತರನ್ನು ಅವರ ಭೂಮಿಗಳಿಗೆ ಕಟ್ಟಿಹಾಕುವ ಸಲುವಾಗಿ ಕೃಷಿಭೂಮಿಯನ್ನು ಮಾರುವುದನ್ನು ನಿಷೇಧಿಸಲಾಯಿತು; ಹೊಲಗದ್ದೆಗಳ ಒಡೆತನವು ಹೆಸರಿಗೆ ಖಾಸಗಿಯಾಗಿತ್ತು, ಆದರೆ ಕಾರ್ಯನಿರ್ವಹಣೆಗಳು ಮಿಕ್ಕಿದ ಆದಾಯದ ಬಗ್ಗೆ ಸ್ವಂತ ವಿವೇಚನೆಯ ಉಪಯೋಗವನ್ನು ನಿಷೇಧಿಸಲಾಗಿತ್ತು. ಇದನ್ನು ಸಾಧಿಸುವ ಸಲುವಾಗಿ ಉತ್ಪಾದನೆ ಮತ್ತು ಬೆಲೆಗಳನ್ನು ಒಂದು ಕೋಟಾ ವ್ಯವಸ್ಥೆಯ ಮೂಲಕ ನಿಯಂತ್ರಿಸಲು ಮಾರುಕಟ್ಟೆ ಬೋರ್ಡುಗಳಿಗೆ ಔದ್ಯಮಿಕ ಏಕಸ್ವಾಮ್ಯದ ಹಕ್ಕುಗಳನ್ನು ನೀಡಲಾಯಿತು. ಔದ್ಯಮಿಕ ಉತ್ಪನ್ನಗಳಾದ ಪಿಗ್ ಐರನ್, ಸ್ಟೀಲ್, ಅಲ್ಯುಮಿನಿಯಮ್, ಮೆಗ್ನೀಶಿಯಮ್, ಗನ್‌ಪೌಡರ್, ಸ್ಫೋಟಕಗಳು, ಸಿಂಥೆಟಿಕ್ ರಬ್ಬರ್, ಇಂಧನಗಳು ಮತ್ತು ವಿದ್ಯುಚ್ಚಕ್ತಿಗಳ ಮೇಲೂ ಕೋಟಾಗಳನ್ನು ಜಾರಿಗೊಳಿಸಲಾಯಿತು. 1936ರಲ್ಲಿ ಜಾರಿಗೊಳಿಸಲಾದ ಕಡ್ಡಾಯವಾದ ಕಾರ್ಟೆಲ್ ಕಾನೂನೊಂದರ ಪ್ರಕಾರ ಆರ್ಥಿಕ ಮಂತ್ರಿಯು ಈಗಾಗಲೇ ಅಸ್ತಿತ್ವದಲ್ಲಿರುವ ಕಾರ್ಟೆಲ್‌ಗಳನ್ನು ಕಡ್ಡಾಯ ಮತ್ತು ಖಾಯಂ ಮಾಡುವ, ಇಲ್ಲದ ಕಡೆಗಳಲ್ಲಿ ಉದ್ಯಮಗಳು ಕಾರ್ಟೆಲ್‌ಗಳನ್ನು ರೂಪಿಸುವಂತೆ ಒತ್ತಡ ಹೇರುವ ಅಧಿಕಾರಗಳನ್ನು ಹೊಂದಿದ್ದನು. 1943ರ ತೀರ್ಪೊಂದರ ಮೂಲಕ ಇದನ್ನು ಅಸಿಂಧುಗೊಳಿಸಲಾಯಿತಾದರೂ ಅವುಗಳ ಬದಲು ಹೆಚ್ಚು ನಿಯಂತ್ರಣಾತ್ಮಕ ಆರ್ಥಿಕ ಏಜೆನ್ಸಿಗಳನ್ನು ಸ್ಥಾಪಿಸಲಾಯಿತು. === ಹಣಕಾಸು === ಆರ್ಥಿಕ ವ್ಯವಸ್ಥೆಯನ್ನು ನಿರ್ಣಯಿಸುವ ಸಾಮಾನ್ಯ ಲಾಭ-ಉತ್ತೇಜನಗಳಿಗೆ ಬದಲಾಗಿ ರಾಜ್ಯದ ವಿತ್ತ ಅವಶ್ಯಕತೆಗಳಿಗೆ ತಕ್ಕಂತೆ ಬಂಡವಾಳವನ್ನು ನಿಯಮಿತಗೊಳಿಸಲಾಯಿತು. ಉದ್ಯಮಿಗಳ ಲಾಭ ಉತ್ತೇಜನಗಳು ಉಳಿದುಕೊಂಡವು, ಆದರೆ ಅದರಲ್ಲಿ ಹೆಚ್ಚಿನ ಮಾರ್ಪಾಡುಗಳನ್ನು ಮಾಡಲಾಯಿತು: “ನಾಜೀ ಪಕ್ಷದ ಅಧಿಕೃತ ನೀತಿಯು ಲಾಭಗಳ ಸ್ಥಿರೀಕರಣವಾಗಿತ್ತೇ ವಿನಾ ಅದರ ನಿಗ್ರಹವಲ್ಲ”; ಆದರೆ ನಾಜೀ ದಲ್ಲಾಳಿಸಂಸ್ಥೆಗಳು ಯಾಂತ್ರಿಕವಾಗಿ ಬಂಡವಾಳವನ್ನು ವಿಂಗಡಿಸುವ ಲಾಭದ ಗುರಿಯನ್ನು ಮತ್ತು ಅದರ ಜತೆಗೇ ಆರ್ಥಿಕ ವ್ಯವಸ್ಥೆಯ ಪಥವನ್ನೂ ಕೂಡ ಸ್ಥಳಾಂತರಿಸಿದರು. ನಾಜೀ ಸರ್ಕಾರದ ಆರ್ಥಿಕತೆಯು ಕೊನೆಕೊನೆಗೆ ಖಾಸಗೀ ಆರ್ಥಿಕ ಬಂಡವಾಳವನ್ನೂ ನಿಯಂತ್ರಿಸತೊಡಗಿತು, ಮತ್ತು ಇದರಿಂದಾಗಿ 1935–38ರಲ್ಲಿ ಬಿಡುಗಡೆಯಾದ ಖಾಸಗೀ ಸೆಕ್ಯುರಿಟಿಗಳ ಒಟ್ಟು ಪ್ರಮಾಣವು 1933–34ರಲ್ಲಿದ್ದುದಕ್ಕಿಂತ ಸುಮಾರು ಶೇಕಡಾ ಹತ್ತರಷ್ಟು ಕಡಿಮೆಯಿದ್ದಿತು. ಭಾರೀ ಉದ್ಯಮ-ಲಾಭ ತೆರಿಗೆಗಳು ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆಗೆ ಕಡಿವಾಣ ಹಾಕಿದವು. ಬೃಹತ್ ಸಂಸ್ಥೆಗಳ ಲಾಭಗಳ ಮೇಲೆ ಸುಮಾರು ತೆರಿಗೆ ವಿನಾಯಿತಿಗಳು ಇದ್ದರೂ ಸಹ ಇವುಗಳನ್ನೂ ಸರ್ಕಾರವು ವ್ಯಾಪಕವಾಗಿ ನಿಯಂತ್ರಿಸುತ್ತಿದ್ದುದರಿಂದ ಉಳಿಯುತ್ತಿದ್ದುದು "ಖಾಸಗೀ ಒಡೆತನದ ಹೊರಕವಚ ಮಾತ್ರ". ತೆರಿಗೆಗಳು ಮತ್ತು ಆರ್ಥಿಕ ಸಬ್ಸಿಡಿಗಳೂ ಕುಡ ಆರ್ಥಿಕ ವ್ಯವಸ್ಥೆಯನ್ನು ನಿರ್ದೇಶಿಸುತ್ತಿದ್ದವು; ಇದರ ಹಿನ್ನೆಲೆಯಲ್ಲಿ ಅಡಗಿದ್ದ ನಿಜವಾದ ಆರ್ಥಿಕ ನೀತಿಯಾದ ಭೀತಿಯು ಒಪ್ಪಿಗೆ ಮತ್ತು ಅನುಸರಿಸುವಿಕೆಗೆ ಕಾರಣವಾಗಿದ್ದಿತು. ನಾಜೀ ಭಾಷೆಯ ಸೂಚನೆಯಂತೆ ಯಾವುದೇ ಉದ್ಯಮಿಯು ರಾಜ್ಯದ ಹಿತಾಸಕ್ತಿಗಳ ಬದಲಾಗಿ ತನ್ನ ಸ್ವಂತದ ಲಾಭಗಳ ಕಡೆಗೆ ಗಮನ ಹರಿಸಿದರೂ ಆತನಿಗೆ ಮರಣದಂಡನೆ ಅಥವಾ ಕಾನ್ಸಂಟ್ರೇಶನ್ ಕ್ಯಾಂಪ್ ವಾಸದ ಶಿಕ್ಷೆಯನ್ನು ನೀಡುವುದು ಖಚಿತವಾಗಿತ್ತು. == ಸೈದ್ಧಾಂತಿಕ ಪೈಪೋಟಿ == ಪ್ರಥಮ ವಿಶ್ವಯುದ್ಧದ ನಂತರ, ಜರ್ಮನ್ ನಾಜಿಸಮ್ ಮತ್ತು ಬೊಲ್ಷೆವಿಕ್ ಕಮ್ಯುನಿಸಮ್ಗಳು ಜರ್ಮನ್ ಸರ್ಕಾರವನ್ನು ನಿರ್ವಹಿಸಲು ಹುಟ್ಟಿಕೊಂಡ ಎರಡು ಪ್ರಮುಖ ರಾಜಕೀಯ ಪೈಪೋಟಿಗಾರರಾಗಿದ್ದವು, ಏಕೆಂದರೆ ವೀಮರ್ ರಿಪಬ್ಲಿಕ್‍ನ ಸರ್ಕಾರವು ಅಸ್ಥಿರವಾಗಿದ್ದಿತು. ನಾಜೀ ಆಂದೋಲನವು ಯುದ್ಧಾನಂತರದ ರಾಜಕೀಯ ಅಸ್ಥಿರತೆಯ ವೇಳೆಯಲ್ಲಿ ನಡೆಸಲಾಗುತ್ತಿದ್ದ ಬೊಲ್ಷೆವಿಕ್ ಪ್ರಭಾವಿತ ದಂಗೆಗಳ ವಿರುದ್ಧದ ತೀವ್ರ ಎಡಪಂಥೀಯ ಔದ್ಯಮಿಕ ಮತು ರಾಜಕೀಯ ಪ್ರತಿರೋಧದ ಪರಿಣಾಮವಾಗಿ ಹುಟ್ಟಿಕೊಂಡಿತು. 1917ರ ರಷ್ಯನ್ ಕ್ರಾಂತಿಯು ಲೆನಿನಿಸಮ್ ಅನ್ನು ನ್ಯಾಯಸಮ್ಮತಗೊಳಿಸಿದುದರಿಂದ, ವ್ಲಾದಿಮಿರ್ ಲೆನಿನ್ನ ಮಾರ್ಕ್ಸಿಸಮ್ನ ವ್ಯಾಖ್ಯಾನವು ಹಲವಾರು ಜರ್ಮನ್ ಸಮಾಜವಾದಿಗಳಿಗೆ ಪ್ರೇರಕವಾಯಿತು. 1919ರ ಬರ್ಲಿನಿನ ಸ್ಪಾರ್ಟಾಸಿಸ್ಟ್ ಬಂಡಾಯ ಸಾಮಾನ್ಯ ಮುಷ್ಕರವನ್ನು ಮತ್ತು ಮ್ಯೂನಿಕ್‌ನ ಬವೇರಿಯನ್ ಸೋವಿಯೆತ್ ರಿಪಬ್ಲಿಕ್ ಅನ್ನು ನಿಗ್ರಹಿಸಲು ವೀಮರ್ ರಿಪಬ್ಲಿಕ್ ಸರ್ಕಾರವು (ಫ್ರೀ ಕಾರ್ಪ್ಸ್) ಎಂಬ ಮಾಜೀ ಸೈನಿಕರನ್ನೊಳಗೊಂಡ ಬಲಪಂಥೀಯ ಪ್ಯಾರಾಮಿಲಿಟರಿ ತುಕಡಿಗಳನ್ನು ಬಳಸಿಕೊಂಡಿತು. ಹಲವಾರು ಫ್ರೀಕಾರ್ಪ್ಸ್ ನಾಯಕರು, ಅರ್ನ್ಸ್ಟ್ ರಾಹ್ಮ್ನನ್ನೂ ಒಳಗೊಂಡಂತೆ ಮುಂದೆ ನಾಜೀ ಪಕ್ಷದ ನಾಯಕರಾದರು. ನಾಜಿಸಮ್ ಕಮ್ಯುನಿಸಮ್ನ ವಿರುದ್ಧದ ಮತದಾರರಿಗಾಗಿ ಯಶಸ್ವಿಯಾಗಿ ಪೈಪೋಟಿ ನಡೆಸಿತು, ಏಕೆಂದರೆ ಬೋಲ್ಷೆವಿಕ್ ವಿರೋಧೀ ಜರ್ಮನ್ ವ್ಯವಸ್ಥೆಗೆ ಸಾಮಾಜಿಕ-ಆರ್ಥಿಕ ಸ್ಥಿರತೆಯ ಭರವಸೆ ಮತ್ತು ದುಡಿಯುವ ವರ್ಗಕ್ಕೆ ಉದ್ಯೋಗದ ಭರವಸೆಯನ್ನು ನೀಡುವುದರ ಮೂಲಕ ನಾಜಿಸಮ್ ಆದ್ಯತೆ ದೊರಕಿಸಿಕೊಂಡಿತು. ಎಡಪಂಥೀಯರು ರಾಜಕೀಯವಾಗಿ ಯಃಕಶ್ಚಿತ್ ಎಂದು ನಿರ್ಲಕ್ಷಿಸಿದ್ದ lumpenproletariatಗಳಿಗೆ ನಾಜಿಗಳು ಹಿಡಿಸಿದರು. ನಾಜೀಗಳ ದುಡಿಯುವ ವರ್ಗದ ಪರವಾದ ವಾಗ್ಝರಿಯು ಬಂಡವಾಳಶಾಹಿಯಿಂದ ಬೇಸತ್ತುಹೋಗಿದ್ದ ಕಾರ್ಮಿಕರಿಗೆ ಇಷ್ಟವಾಯಿತು. ಸೀಮಿತ ಲಾಭಗಳು, ಬಾಡಿಗೆ ಮಾಫಿ ಮತ್ತು ಹೆಚ್ಚಿದ ಸಾಮಾಜಿಕ ಪ್ರಯೋಜನಗಳು (ಯಹೂದ್ಯರಲ್ಲದ ಜರ್ಮನರಿಗೆ ಮಾತ್ರ), ಜತೆಗೇ ಬಂಡವಾಳಶಾಹಿಗೆ ತೊಂದರೆಯನ್ನೊಡ್ಡಬಹುದಾದ ಮಾರ್ಕ್ಸಿಸ್ಟ್ ಸಮಾಜವಾದದ ಸೈದ್ಧಾಂತಿಕ ನೆಲೆಗಳಾದ ದುಡಿವ ವರ್ಗದ ಹೋರಾಟ, ಕಾರ್ಮಿಕ ವರ್ಗದ ಸರ್ವಾಧಿಕಾರ, ಮತ್ತು ಕಾರ್ಮಿಕರ ನಿಯಂತ್ರಣದಲ್ಲಿ ಉತ್ಪಾದನೆಯ ಮೂಲಗಳನ್ನು ತೆಗೆದುಹಾಕಲಾದ ರಾಜಕೀಯ-ಆರ್ಥಿಕ ಮಾದರಿಯನ್ನು ಪ್ರಸ್ತಾವಿಸಲಾಯಿತು. ಸಮಾಜವಾದಿ ಮೈಕೆಲ್ ಮಾನ್ ಫ್ಯಾಸಿಸಮ್ ಅನ್ನು "ಅತ್ಯುತ್ತಮವಾದ್ದು ಮತ್ತು ರಾಷ್ಟ್ರದ ಸ್ಟ್ಯಾಟಿಸಮ್ ಅನ್ನು ಪ್ಯಾರಾಮಿಲಿಟರಿಸಮ್‌ನ ಮೂಲಕ ಸ್ವಚ್ಚಗೊಳಿಸುವುದು" ಎಂದು ವ್ಯಾಖ್ಯಾನಿಸಿದನು ಮತ್ತು ಇದರಲ್ಲಿ ಅತ್ಯುತ್ತಮ ಎಂಬುದು ನೂತನ, ಸಾವಯವ ಮತ್ತು ಪರಿಶುದ್ಧವಾದ ಜನರ ಹುಟ್ಟಿಗಾಗಿ ಸಾಮಾಜಿಕ ವರ್ಗಗಳ ನಿರ್ಮೂಲನ: ಎಲ್ಲಾ ವರ್ಗಗಳನ್ನು ಪರಿವರ್ತನೆಯ ಮೂಲಕ ನಿರ್ಮೂಲನ ಮಾಡುವುದು, ಎಲ್ಲಾ ’ಇತರ’ರನ್ನೂ ಕೂಡಾ (ಹೆಚ್ಚೂಕಡಿಮೆ ಎರಡನೇ ಮೂರು ಭಾಗದಷ್ಟು ಜರ್ಮನ್ ಜನಸಂಖ್ಯೆ). ನಾಜೀ ಮತದಾರರಿಗಾಗಿ ಸರಳ ಭಾಷಣಗಳು, ಸರಳ ಪ್ರಚಾರಕಾರ್ಯಗಳು ಮತ್ತು ಪ್ಯಾನ್ ಜರ್ಮನಿಸಮ್ ಅನ್ನು ಒಳಗೊಂಡ ಪ್ರತಿಗಾಮಿ ಸಿದ್ಧಾಂತಗಳು ನಾಜೀ ಪಕ್ಷದ ಕನ್ಸರ್ವೇಟಿವ್ ಜರ್ಮನ್ ಎಸ್ಟಾಬ್ಲಿಶ್‌ಮೆಂಟ್ ಮೈತ್ರಿಪಕ್ಷಗಳವರನ್ನು ನಾಜೀಗಳ ರಾಜಕೀಯ ಬಲಾಬಲ ಮತ್ತು ಆಳುವ ಅರ್ಹತೆಯ ಬಗ್ಗೆ ಹಾದಿ ತಪ್ಪಿಸಿದವು ಮತ್ತು ಅವರು ಒಂದು ರಾಜಕೀಯ ಪಕ್ಷವಾಗಿ ಮುಂದುವರೆದರು. ನಾಜಿಸಮ್‌ನ ಪಾಪ್ಯುಲಿಸಮ್, ಕಮ್ಯುನಿಸ್ಟ್೦ವಿರಿಧ ಮತ್ತು ಬಂಡವಾಳಶಾಹೀ-ವಿರೋಧಗಳು ಅದಕ್ಕೆ (ಜರ್ಮನ್ ನ್ಯಾಶನಲ್ ಪೀಪಲ್ಸ್ ಪಾರ್ಟಿ)ಯಂತಹ ಸಾಂಪ್ರದಾಯಿಕ ಕನ್ಸರ್ವೇಟಿವ್ ಪಕ್ಷಗಳಿಗಿಂತ ಹೆಚ್ಚಿನ ಜನಪ್ರಿಯತೆ ಮತ್ತು ಬಲಗಳನ್ನು ಒದಗಿಸಿದವು. == ಕಮ್ಯುನಿಸ್ಟ್ ವಿರೋಧಿ ಬೆಂಬಲ == ಇಟಾಲಿಯನ್ ಪ್ರಧಾನಮಂತ್ರಿ ಬೆನಿಟೊ ಮುಸೊಲಿನಿಯ ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿ ( )ಯು 1922ರಲ್ಲಿ ಇಟಾಲಿಯನ್ ಸರ್ಕಾರವಾಗಿ ಅಧಿಕಾರ ವಹಿಸಿಕೊಂಡ ನಂತರ ಇಟಾಲಿಯನ್ ಫ್ಯಾಸಿಸಮ್ ಒಂದು ಗೌರವಯುತವಾದ, ಮಾರ್ಕ್ಸಿಸ್ಟ್ ಕಮ್ಯುನಿಸಮ್‌ಗೆ ರಾಜಕೀಯವಾಗಿ ವಾಸ್ತವವಾದಿಯಾದ ವಿರೋಧಪಕ್ಷವಾಯಿತು - ಅದರಲ್ಲೂ ಮಹಾಯುದ್ಧದ ನಂತರ ಇಟಲಿಯನ್ನು ಮುಷ್ಕರಗಳು ಮತ್ತು ಫ್ಯಾಕ್ಟರಿ ನಿಯಂತ್ರಣಗಳ ಮೂಲಕ ಅಸ್ಥಿರಗೊಳಿಸಿದ್ದ ಕಮ್ಯುನಿಸ್ಟ್ ಮತ್ತು ಅನಾರ್ಕಿಸ್ಟ್ ಪಕ್ಷಗಳು ಮತ್ತು ಚಳುವಳಿಗಳನ್ನು ಫ್ಯಾಸಿಸ್ಟ್ ಬ್ಲ್ಯಾಕ್‌ಶರ್ಟ್ಗಳು ನಿಗ್ರಹಿಸಿದ ನಂತರ. ಮುಸೊಲಿನಿಯ ಯಶಸ್ಸಿನಿಂದಾಗಿ ಫ್ಯಾಸಿಸ್ಟ್ ರಾಜಕೀಯ ಪಕ್ಷಗಳು ಪ್ರಪಂಚದಾದ್ಯಂತ ಹುಟ್ಟಿಕೊಳ್ಳುವಂತಾಯಿತು: ಅರ್ಜೆಂಟೀನಾದಲ್ಲಿ ಜನರಲ್ ಯುವಾನ್ ಡೊಮಿಂಗೋ ಪೆರಾನ್ನ ನೇತೃತ್ವದಲ್ಲಿ ಪೆರೋನಿಸಮ್, ಜನರಲಿಸ್ಸಿಮೋ ಫ್ರ್ಯಾನ್ಸಿಸ್ಕೋ ಫ್ರ್ಯಾಂಕೋನಡಿಯಲ್ಲಿ ಸ್ಪೇನಿನ ಫ್ಯಾಲಾಂಜಿಸಮ್, ರೊಮೇನಿಯಾದ ಐರನ್ ಗಾರ್ಡ್, ಬ್ರೆಜಿಲ್‌ನ ಇಂಟೆಗ್ರಲಿಸಮ್, ಫ್ರ್ಯಾನ್ಸ್‌ನ ಆಕ್ಷನ್ ಫ್ರ್ಯಾನ್ಸೇಸ್ ಮತ್ತು ಕ್ರಾ-ಡಿ-ಫ್ಯೂ, ಹಂಗರಿಯ ಆರೋ ಕ್ರಾಸ್ ಪಾರ್ಟಿ, ಆಸ್ಟ್ರಿಯಾದ ಎಂಗೆಲ್‌ಬರ್ಟ್ ಡೊಲ್‌ಫಸ್‌ನ ಆಸ್ಟ್ರೋಫ್ಯಾಸಿಸಮ್, ಶೋವಾ ಜಪಾನ್‌ನ ಸ್ಟ್ಯಾಟಿಸಮ್, ಬೆಲ್‌ಜಿಯಮ್‌ನ ರೆಕ್ಸಿಸಮ್, ಕ್ರೊವೇಶಿಯಾದ ಉಸ್ತಾಸೆ, ಎಟ್ ಆಲ್ . ಇತಿಹಾಸಜ್ಞರಾದ ಇಯಾನ್ ಕೆರ್ಶಾ ಮತ್ತು ಜೋಕಿಮ್ ಫೆಸ್ಟ್ರ ಪ್ರಕಾರ ಯುದ್ದಾನಂತರದ ಜರ್ಮನಿಯಲ್ಲಿ ಹಿಟ್ಲರನ ನಾಜಿಗಳು ಜರ್ಮನಿಯ ಕಮ್ಯುನಿಸ್ಟ್ ವಿರೋಧಿ ಆಂದೋಲನ ಮತ್ತು ಜರ್ಮನ್ ರಾಜ್ಯದ ನಾಯಕತ್ವಕ್ಕಾಗಿ ಹವಣಿಸುತ್ತಿದ್ದ ಹಲವಾರು ರಾಷ್ಟ್ರೀಯವಾದಿ ಮತ್ತು ಫ್ಯಾಸಿಸ್ಟಿಕ್ ರಾಜಕೀಯ ಪಕ್ಷಗಳಲ್ಲೊಂದಾಗಿದ್ದವು. 1930ರ ದಶಕದ ಅಂತ್ಯಭಾಗ ಮತ್ತು 1940ರ ದಶಕಗಳಲ್ಲಿ ನಾಜಿಸಮ್ ಅನ್ನು ಸೈದ್ಧಾಂತಿಕವಾಗಿ ಸಹಾನುಭೂತಿ ಹೊಂದಿದ್ದ ರಾಷ್ಟ್ರಗಳು ಬೆಂಬಲಿಸಿದವು; ಸ್ಪೇನ್ನ ಫ್ಯಾಲಾಂಜ್, ವಿಚೀ ಫ್ರಾನ್ಸ್, ಮತ್ತು ಲೀಜನ್ ಆಫ್ ಫ್ರೆಂಚ್ ವಾಲಂಟಿಯರ್ಸ್ ಅಗೇನೆಸ್ಟ್ ಬೊಲ್ಷೆವಿಸಮ್ (ವೆಹ್ರಮ್ಯಾಶ್ತ್ ಇನ್‌ಫ್ಯಾಂಟ್ರಿ ರೆಜಿಮೆಂಟ್ 638), ಮತ್ತು,ಬ್ರಿಟನ್‌ನಲ್ಲಿ, ಕ್ಲೈವ್‍ಡೆನ್ ಸೆಟ್, ಲಾರ್ಡ್ ಹ್ಯಾಲಿಫ್ಯಾಕ್ಸ್, ಮತ್ತು ನೆವಿಲ್ ಚೇಂಬರ್ಲೇನ್ನ ಸಹವರ್ತಿಗಳು ನಾಜಿಸಮ್ ಬಗ್ಗೆ ಸಹಾನುಭೂತಿ ಹೊಂದಿದ್ದವು ಮತ್ತು ನಾಜೀ ಜರ್ಮನಿಯು ಬೋಲ್ಷೆವಿಸಮ್ನ ವಿರುದ್ಧ ಭದ್ರತೆಯೆಂಬಂತೆ ಕಾಣತೊಡಗಿದರು. == ಸೈದ್ಧಾಂತಿಕ ಮೂಲಗಳು ಮತ್ತು ವೈವಿಧ್ಯಗಳು == ನಾಜಿಸಮ್‌ನ ಸೈದ್ಧಾಂತಿಕ ಮೂಲವನ್ನು ಹತ್ತೊಂಬತ್ತನೇ ಶತಮಾನದ ಆದರ್ಶವಾದವಾಗಿದ್ದ ರೊಮ್ಯಾಂಟಿಸಿಸಮ್ ಮತ್ತು ಫ್ರೆಡೆರಿಕ್ ನೀಶೆಯ ವಿಚಾರಗಳ ಜೈವಿಕ ವ್ಯಾಖ್ಯಾನವಾದ Übermensch (“ಮಹಾಮಾನವ”)ನೆಡೆಗೆ "ಮೇಲುಮೇಲಕ್ಕೆ ತಳಿವರ್ಧನೆ ಮಾಡುತ್ತಾ ಹೋಗುವುದು" - ಮುಂತಾದವುಗಳಿಂದ ಪಡೆದುಕೊಳ್ಳಲಾಗಿದೆ. ಈ ರೀತಿಯ ವಿಚಾರಗಳು ಏರಿಯೋಸೋಫ್ (ಜರ್ಮನ್ ವ್ಯವಸ್ಥೆ) ಮತ್ತು ಥುಲ್ ಸೊಸೈಟಿಯಿಂದ ಸಮರ್ಥಿಸಲ್ಪಟ್ಟು ಅಡಾಲ್ಫ್ ಹಿಟ್ಲರ್ನ ಪ್ರಾಪಂಚಿಕ ನಿಲುವಿನ ಮೇಲೆ ಪ್ರಭಾವ ಬೀರಿದವು; ಈ ಕಾಲ್ಪನಿಕ-ಬೌದ್ಧಿಕ ತಳಹದಿಗೆ ಆತನು ಶ್ರೀಸಾಮಾನ್ಯ ಪಕ್ಷದ ನೀತಿಗಳನ್ನು ಅಳವಡಿಸಿದನು ಉದಾ. ಲಾಭಗಳನ್ನು ಸೀಮಿತಗೊಳಿಸುವುದು, ಬಾಡಿಗೆಯನ್ನು ರದ್ದುಪಡಿಸುವುದು ಮತ್ತು ಉದಾರ ಸಾಮಾಜಿಕ ಪ್ರಯೋಜನಗಳು - ಆದರೆ ಇವು ಕೇವಲ ಜರ್ಮನ್ ಯಹೂದ್ಯರಲ್ಲದವರಿಗಾಗಿ ಮಾತ್ರವಾಗಿತ್ತು. ಟ್ರೀ ಆಫ್ ಹೇಟ್ (1985)ನಲ್ಲಿ ಫಿಲಿಪ್ ವೇಯ್ನ್ ಪೊವೆಲ್ ವರದಿ ಮಾಡಿರುವ ಪ್ರಕಾರ "ಹದಿನೈದನೆ ಮತ್ತು ಹದಿನಾರನೆ ಶತಮಾನದ ಆದಿಭಾಗದಲ್ಲಿ ಎದ್ದ ಜರ್ಮನ್ ದೇಶಭಕ್ತಿಯ ಬಲಶಾಲಿಯಾದ ಅಲೆಯು ಜರ್ಮನರ ಸಾಂಸ್ಕೃತಿಕ ಕೆಳದರ್ಜೆ ಮತ್ತು ಅನಾಗರೀಕತೆಗಳ ಬಗ್ಗೆ ಇಟಾಲಿಯನ್ ನಿರ್ಲಕ್ಷ್ಯದಿಂದ ಉತ್ತೇಜಿತಗೊಂಡುದಾಗಿತ್ತು ಮತ್ತು ಇದಕ್ಕೆ ಪ್ರತಿಯಾಗಿ ಜರ್ಮನ್ ಮಾನವವಾದಿಗಳು ಜರ್ಮನ್ ಉತ್ಕೃಷ್ಟತೆಯನ್ನು ಹಾಡಿಹೊಗಳಲು ತೊಡಗಿದರು.” 1936ರಲ್ಲಿ ಮ್ಯಾಗಜೀನಿನ ಲೇಖನವಾದ “ದ ಸ್ಪ್ರೆಡ್ ಆಫ್ ಹಿಟ್ಲರಿಸಮ್”ನಲ್ಲಿ, ಎಮ್.ಡಬ್ಲ್ಯೂ. ಫೊಡೊರ್ "ಯಾವ ಜನಾಂಗವೂ ಜರ್ಮನರಷ್ಟು ಕೀಳರಿಮೆಯಿಂದ ನೊಂದಿಲ್ಲ"ಎಂಬ ನಾಜೀ ಹೇಳಿಕೆಯನ್ನು ವರದಿ ಮಾಡಿದನು. "ರಾಷ್ಟ್ರೀಯ ಸಮಾಜವಾದವು ಕೀಳರಿಮೆಯನ್ನು ಕೆಲಕಾಲದ ಮಟ್ಟಿಗಾದರೂ ಮೇಲರಿಮೆಯ ಭಾವನೆಯನ್ನಾಗಿ ಬದಲಾಯಿಸುವ Coué ವಿಧಾನವಾಗಿದೆ". 1920ರ ಮತ್ತು 1930ರ ದಶಕಗಳಲ್ಲಿ ನಾಜಿಸಮ್ ಸೈದ್ಧಾಂತಿಕವಾಗಿ ವೈವಿಧ್ಯಮಯವಾಗಿದ್ದು ಎರಡು ಉಪ-ಸಿದ್ಧಾಂತಗಳಿಂದ ಕೂಡಿದ್ದಿತು, ಒಂದು ಒಟ್ಟೊ ಸ್ಟ್ರ್ಯಾಸರ್ನದು ಮತ್ತು ಇನ್ನೊಂದು ಅಡಾಲ್ಫ್ ಹಿಟ್ಲರ್ನದು. ಎಡಪಂಥೀಯರಾಗಿದ್ದ ಸ್ಟ್ರ್ಯಾಸರೈಟ್ಗಳು ಹಿಟ್ಲರನ ಕೆಂಗಣ್ಣಿಗೆ ಗುರಿಯಾದರು, ಮತ್ತು ಆತನು 1930ರಲ್ಲಿ ಬಂಡವಾಳಶಾಹೀ ವಿರೋಧಿಯಾದ ಬ್ಲ್ಯಾಕ್ ಫ್ರಂಟ್ ಎಂಬ ವಿರೋಧಪಕ್ಷವನ್ನು ಸ್ಥಾಪಿಸಲು ವಿಫಲನಾದಾಗ ಒಟ್ಟೋ ಸ್ಟ್ರ್ಯಾಸರ್‌ನನ್ನು ನಾಜೀ ಪಕ್ಷದಿಂದ ಉಚ್ಚಾಟಿಸಿದನು. ಪಕ್ಷದಲ್ಲಿ ಉಳಿದುಕೊಂಡಿದ್ದ ಸ್ಟ್ರ್ಯಾಸರೈಟ್‌ಗಳನ್ನು, ಹೆಚ್ಚಿನವರು ()ನವರು, ಒಟ್ಟೋನ ತಮ್ಮ ಗ್ರೆಗರ್ ಸ್ಟ್ರ್ಯಾಸರ್ನನ್ನೂ ಒಳಗೊಂಡಂತೆ ನೈಟ್ ಆಫ್ ದ ಲಾಂಗ್ ನೈವ್ಸ್ನಿರ್ಮೂಲನದ ಸಮಯದಲ್ಲ್ಲಿ ಹತ್ಯೆಗೈಯಲಾಯಿತು. == ಇತಿಹಾಸ == ವೀಮರ್ ಜರ್ಮನಿಯ ಯುದ್ಧಾನಂತರದ ಬಿಕ್ಕಟ್ಟುಗಳು (1919–33) ನಾಜಿಸಮ್ ಅನ್ನು ಒಂದು ಸಿದ್ಧಾಂತವಾಗಿ ಕ್ರೋಢೀಕರಿಸಿದವು: ಅವುಗಳೆಂದರೆ - ಪ್ರಥಮ ವಿಶ್ವಯುದ್ಧದ ಸೋಲು (1914–18), ವರ್ಸೇಲ್ಸ್ ಒಪ್ಪಂದದೊಡನೆ ಶರಣಾಗತಿ, ಆರ್ಥಿಕ ಬಿಕ್ಕಟ್ಟು, ಮತ್ತು ಇವುಗಳಿಂದುಂಟಾದ ಸಾಮಾಜಿಕ ಅಸ್ಥಿರತೆ. ಸೇನೆಯ ಸೋಲನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವಲ್ಲಿ ಮತ್ತು ಸಮರ್ಥಿಸಿಕೊಳ್ಳುವಲ್ಲಿ ನಾಜಿಸಮ್ ರಾಜಕೀಯ ತಂತ್ರವಾಗಿ (“ಕಠಾರಿಯ ಬಗೆಗಿನ ಕಟ್ಟುಕತೆ-ಬೆನ್ನಿಗೆ ಇರಿತ”)ವನ್ನು ಬಳಸಿಕೊಂಡು ಜರ್ಮನ್ ಸಾಮ್ರಾಜ್ಯದ ಯುದ್ಧಪ್ರಯತ್ನಗಳನ್ನು ಯಹೂದಿಗಳು, ಸಮಾಜವಾದಿಗಳು, ಮತ್ತು ಬೊಲ್ಷೆವಿಕರು ಆಂತರಿಕವಾಗಿ ಬುಡಮೇಲು ಮಾಡಿದರೆಂದು ಪ್ರಚಾರ ಮಾಡಿದರು. ರೀಶ್ವೆಹ್ರ್ ನ ಸೋಲು ಜರ್ಮನಿಯಲ್ಲಿ ನಡೆಯಲಿಲ್ಲವಾದ ಕಾರಣ, ಈ ಬುಡಮೇಲು ಕೃತ್ಯವು ತಮ್ಮ ರಾಜಕೀಯ ಎದುರಾಳಿಗಳ ದೇಶಭಕ್ತಿಯ ಕೊರತೆಯಿಂದ ನಡೆಯಿತೆಂದೂ, ಅದರಲ್ಲೂ ವಿಶೇಷವಾಗಿ ಸೋಶಿಯಲ್ ಡೆಮೋಕ್ರಾಟ್‌ಗಳುಮತ್ತು ಈಬರ್ಟ್ ಸರ್ಕಾರಗಳು ದೇಶದ್ರೋಹ ಮಾಡಿದರೆಂದೂ ನಾಜಿಗಳು ಆರೋಪ ಹೊರಿಸಿದರು. “ಬೆನ್ನಿಗೆ ಇರಿತ”ದ ಕಥೆಯನ್ನು ಬಳಸಿಕೊಳ್ಳುತ್ತ ನಾಜಿಗಳು ಜರ್ಮನ್ ಯಹೂದಿಗಳು ಮತ್ತು ಅದರ ಪ್ರಕಾರ ಜರ್ಮನರಲ್ಲವೆಂದು ಪರಿಗಣಿಸಲಾಗುವ ಇತರ ಸಮುದಾಯಗಳ ಮೇಲೆ ಅನ್ಯ-ರಾಷ್ಟ್ರೀಯ ನಿಷ್ಟೆಗಳನ್ನು ಹೊಂದಿರುವುದಾಗಿ ಆರೋಪಿಸಿದರು, ಇದರಿಂದಾಗಿ ಜರ್ಮನ್ (ಯಹೂದಿ ಪ್ರಶ್ನೆ)ಯ ಬಗೆಗಿನ ಯಹೂದಿ-ವಿರೋಧವು ಉಲ್ಬಣಗೊಳ್ಳುವಂತಾಯಿತು ಮತ್ತು ಇದು ಸ್ವದೇಶೀ ವೋಕಿಶ್ ಆಂದೋಲನ ಮತ್ತು ಗ್ರೋಬ್ ಡ್ಯೂಶ್‌ಲ್ಯಾಂಡ್ ಅನ್ನು ಸ್ಥಾಪಿಸಲು ಅವರ ರಾಜಕೀಯ ನೀತಿಯಾದ ರೊಮ್ಯಾಂಟಿಕ್ ನ್ಯಾಶನಲಿಸಮ್ ಬಲಶಾಲಿಯಾಗಿದ್ದಾಗ ಹುಟ್ಟಿಸಲಾದ ದೀರ್ಘಕಾಲಿಕ ತೀವ್ರ ಬಲಪಂಥೀಯ ರಾಜಕೀಯ ಪುಕಾರಾಗಿದ್ದಿತು. ನಾಜಿಸಮ್‌ನ ಮೂಲದ ಬಗೆಗಿನ ವಿಚಾರಗಳು ಜರ್ಮನ್ ಸಾಸ್ಕೃತಿಕ ಹಿನ್ನೆಲೆಯಾದ Völkisch (ಜಾನಪದ) ಆಂದೋಲನ ಮತ್ತು ಏರಿಯೋಸೊಫಿ ಎಂಬ ಗೌಪ್ಯಶಾಸ್ತ್ರದ ಮೂಢನಂಬಿಕೆಗಳನ್ನು ಆಧರಿಸಿದ್ದಾಗಿದ್ದಿತು. ಈ ಗೌಪ್ಯಶಾಸ್ತ್ರವು ಜರ್ಮೇನಿಕ್ ಜನರನ್ನು ಆರ್ಯನ್ ಜನಾಂಗದ ಪರಿಶುದ್ಧವಾದ ಉದಾಹರಣೆಗಳೆಂದೂ, ಇವರ ಸಂಸ್ಕೃತಿಗಳಲ್ಲಿ ರೂನಿಕ್ ಸಂಕೇತಗಳು ಮತ್ತು ಸ್ವಸ್ತಿಕ/1}ಗಳ ಬಳಕೆಯಿದೆಯೆಂದೂ ಸೂಚಿಸುತ್ತದೆ. ಏರಿಯೋಸೋಫ್‌ಗಳ ನಡುವೆ ಮ್ಯೂನಿಕ್‌ನ - (ಥೂಲ್ ಸೊಸೈಟಿ)ಯು ಮಾತ್ರ ನಾಜಿಸಮ್‌ನ ಮೂಲವನ್ನು ಸೂಚಿಸುತ್ತದೆ; ಅವರು DAPಯ ಪ್ರಾಯೋಜಕರು ಕೂಡಾ ಆಗಿದ್ದರು. === ಮೂಲ === 5 ಜನವರಿ 1919ರಂದು, ಬೀಗಗಳನ್ನು ತಯಾರಿಸುವ ಕಮ್ಮಾರನಾದ ಆಂಟನ್ ಡ್ರೆಕ್ಸ್‌ಲರ್ ಮತ್ತು ಐದು ವ್ಯಕ್ತಿಗಳು ಸೇರಿಕೊಂಡು ( — ಜರ್ಮನ್ ವರ್ಕರ್ಸ್ ಪಾರ್ಟಿ)ಯನ್ನು ಸ್ಥಾಪಿಸಿದರು, ಇದು ( — ನ್ಯಾಶನಲ್ ಸೋಶಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ)ಯ ಪೂರ್ವವರ್ತಿಯಾಗಿದ್ದಿತು. ಜುಲೈ 1919ರಲ್ಲಿ ರೀಶ್ವೆಹ್ರ್ ಗುಪ್ತಚರ್ಯೆ ವಿಭಾಗವು ಕಾರ್ಪೊರಲ್ ಅಡಾಲ್ಫ್ ಹಿಟ್ಲರ್ನನ್ನು (ಪೊಲೀಸ್ ಗುಪ್ತಚರ)ನಾಗಿ DAPಯ ಒಳನುಸುಳಿ ಅದರ ಪತನವನ್ನುಂಟುಮಾಡಲು ಕಳುಹಿಸಿತು. ಆತನ ವಾಕ್ಚಾತುರ್ಯಕ್ಕೆ ಮಾರುಹೋದ ಸದಸ್ಯರು ಆತನನ್ನು ಪಾರ್ಟಿಗೆ ಸೇರಲು ಆಹ್ವಾನಿಸಿದರು ಮತ್ತು ಸೆಪ್ಟೆಂಬರ್ 1919ರಲ್ಲಿ ಪೊಲೀಸ್ ಗುಪ್ತಚರನಾದ ಅಡಾಲ್ಫ್ ಹಿಟ್ಲರ್ ಪಕ್ಷದ ಪ್ರಚಾರ ಕಾರ್ಯಕರ್ತನಾದನು. 24 ಫೆಬ್ರುವರಿ 1920ರಂದು DAPಯನ್ನು ಹಿಟ್ಲರ್ ಬಯಸಿದ್ದ ಹೆಸರಾದ "ಸೋಶಿಯಲ್ ರೆವೊಲ್ಯೂಶನರಿ ಪಾರ್ಟಿ"ಯನ್ನು ಕೈಬಿಟ್ಟು ನ್ಯಾಶನಲ್ ಸೋಶಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ ಎಂದು ಮರುನಾಮಕರಣ ಮಾಡಲಾಯಿತು. ನಂತರದಲ್ಲಿ, ಮೇಲೆ ತನ್ನ ನಿಯಂತ್ರಣವನ್ನು ಕ್ರೋಢೀಕರಿಸುವಾಗ, ಹಿಟ್ಲರ್ ಡ್ರೆಕ್ಸ್‌ಲರ್‌ನನ್ನು ಪಕ್ಷದಿಂದ ಉಚ್ಚಾಟಿಸಿ 29 ಜುಲೈ 1921ರಂದು ನಾಯಕತ್ವ ವಹಿಸಿಕೊಂಡನು. === ಆರೋಹಣ === 1932ರ ಚುನಾವಣೆಯಲ್ಲಿ ನಾಜೀಗಳಿಗೆ ದೊರೆತ ಮತಗಳಿಂದ ನಾಜೀ ಪಕ್ಷವು ವೀಮರ್ ರಿಪಬ್ಲಿಕ್ ಸರ್ಕಾರದ ಸಂಸತ್ತಿನ ಅತಿ ದೊಡ್ಡ ಭಾಗವಾಗಿ ಪ್ರತಿಷ್ಠಾಪಿಸಲ್ಪಟ್ಟಿತು. ಜರ್ಮನಿಯ ಚ್ಯಾನ್ಸೆಲರ್ ಆಗಿ 30 ಜನವರಿ 1933ರಂದು ಅಡಾಲ್ಫ್ ಹಿಟ್ಲರನ ನೇಮಕ, ಮತ್ತು ನಂತರ ಆತನ ಮಂತ್ರಾಲಯಗಳ ಕ್ರೋಢೀಕರಣ ಮತ್ತು ಅವುಗಳ ಸರ್ವಾಧಿಕಾರೀ ಅಧಿಕಾರಗಳಿಂದಾಗಿ ತೃತೀಯ ರೀಚ್ ( )ನ ಸ್ಥಾಪನೆಯಾಗುವಂತಾಯಿತು, ಮತ್ತು ಇದರಿಂದ ನಾಜೀ ಜರ್ಮನಿಯು ಐತಿಹಾಸಿಕವಾಗಿ ಪವಿತ್ರ ರೋಮನ್ ಸಾಮ್ರಾಜ್ಯದ ಪ್ರಥಮ ರೀಚ್ (962–1806), ಮತ್ತು ಜರ್ಮನ್ ಸಾಮ್ರಾಜ್ಯದ ದ್ವಿತೀಯ ರೀಚ್ (1871–1918)ಗಳ ಉತ್ತರಾಧಿಕಾರಿಯಾಗುವಂತಾಯಿತು. ನಾಜಿಸಮ್‌ನ ಆಳ್ವಿಕೆಯಲ್ಲಿ ಜರ್ಮನಿ ಡ್ಯೂಶೆಸ್ ರೀಚ್ (ಜರ್ಮನ್ ರೀಚ್) ಮತ್ತು ಗ್ರಾಬ್‌ಡ್ಯೂಶೆಸ್ ರೀಚ್ (ಗ್ರೇಟರ್ ಜರ್ಮನ್ ರೀಚ್) ಎಂಬ ಎರಡು ಅಧಿಕೃತ ಹೆಸರುಗಳನ್ನು ಹೊಂದಿತ್ತು. ತನ್ನ ಅಧಿಕಾರದ ಪ್ರಥಮ ವರ್ಷವಾದ 1934ರಲ್ಲಿ ನಾಜೀ ಪಕ್ಷವು ವು Tausendjähriges (ಸಾವಿರ ವರ್ಷಗಳ ಸಾಮ್ರಾಜ್ಯ)ವಾಗುವುದೆಂದು ಘೋಷಿಸಿತಾದರೂ ಅದು ಕೇವಲ ಹನ್ನೆರಡು ವರ್ಷಗಳ ಕಾಲ ಮಾತ್ರ ಉಳಿದುಕೊಂಡಿತ್ತು. === ಏಕೀಕರಣ === 27 ಫೆಬ್ರುವರಿ 1933ರ ರೀಚ್‌ಸ್ಟ್ಯಾಗ್ ಅಗ್ನಿಕಾಂಡವು ತನ್ನ ರಾಜಕೀಯ ಎದುರಾಳಿಗಳನ್ನು ನಿಗ್ರಹಿಸಲು ಅಡಾಲ್ಫ್ ಹಿಟ್ಲರ್‌ನಿಗೆ ರಾಜಕೀಯ ಕಾರಣ ವನ್ನು ನೀಡಿತು. ಮಾರನೇ ದಿನ, 28 ಫೆಬ್ರುವರಿಯಂದು ಆತ ವೀಮರ್ ರಿಪಬ್ಲಿಕ್‌ನ ಅಧ್ಯಕ್ಷ ಪಾಲ್ ವಾನ್ ಹಿಂಡೆನ್‌ಬರ್ಗ್ನನ್ನು ತನಗೆ ಜರ್ಮನ್ ಚ್ಯಾನ್ಸೆಲರ್ ಆಗಿ ಪೌರ ಹಕ್ಕುಗಳು ಮತ್ತು ಜರ್ಮನ್ ಫೆಡರಲ್ ರಾಜ್ಯಗಳ ಸರ್ಕಾರಗಳನ್ನು ವಜಾ ಮಾಡುವ ಅಧಿಕಾರವನ್ನು ನೀಡುವ ತುರ್ತುಪರಿಸ್ಥಿತಿಯ ಅಧಿಕಾರಗಳ ತೀರ್ಪೊಂದನ್ನು ನೀಡುವಂತೆ ಮನವೊಲಿಸಿದನು. 23 ಮಾರ್ಚ್‌ನಂದು ರೀಚ್‌ಸ್ಟ್ಯಾಗ್ವು ಎನೇಬ್ಲಿಂಗ್ ಆಕ್ಟ್ (ನಾಲ್ಕು ವರ್ಷಗಳ ರೀಚ್‌ಸ್ಟ್ಯಾಗ್ ನಿಂದ ತಪ್ಪಿಸಿಕೊಳ್ಳುವ ಅಧ್ಯಕ್ಷೀಯ ತೀರ್ಪು-ಕಾನೂನು ಗಳ ಅಧಿಕಾರ) ಒಂದರ ಮುಖಾಂತರ ಚ್ಯಾನ್ಸೆಲರ್ ಆಡಾಲ್ಫ್ ಹಿಟ್ಲರನಿಗೆ ಸರ್ವಾಧಿಕಾರೀ ಶಕ್ತಿಗಳನ್ನು ನೀಡಿತು ಮತ್ತು ಇದರಿಂದಾಗಿ ನಂತರದಲ್ಲಿ ಆತನು ಜರ್ಮನ್ ರಾಜ್ಯದ ರಾಜಕೀಯ ತುರ್ತುಪರಿಸ್ಥಿತಿಗಳನ್ನು ವೈಯುಕ್ತಿಕವಾಗಿ ತೀರ್ಪುಗಳ ಮೂಲಕ ನಿರ್ವಹಿಸಲಾರಂಭಿಸಿದನು. ಇದಲ್ಲದೆ, ಆ ಹೊತ್ತಿಗೆ ಹೆಚ್ಚೂಕಡಿಮೆ ಸಂಪೂರ್ಣವಾದ ಅಧಿಕಾರ ಹೊಂದಿದ್ದ ನಾಜೀಗಳು ಸರ್ವಾಧಿಕಾರೀ ನಿಯಂತ್ರಣವನ್ನು ಸ್ಥಾಪಿಸಿದರು; ಅವರು ಕಾರ್ಮಿಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳನ್ನು ನಿಷೇಧಿಸಿದರು ಮತ್ತು ತಮ್ಮ ರಾಜಕೀಯ ಎದುರಾಳಿಗಳನ್ನು ಮೊದಮೊದಲು ತುರ್ತಾಗಿ ಸಿದ್ಧಪಡಿಸಿದ ವೈಲ್ಡ್ ಲಾಜರ್ ಕ್ಯಾಂಪ್‌ಗಳಲ್ಲಿ ಮತ್ತು ನಂತರ ಕಾನ್ಸಂಟ್ರೇಶನ್ ಕ್ಯಾಂಪ್ಗಳಲ್ಲಿ ಬಂಧಿಸಿ ಇರಿಸತೊಡಗಿದರು. ನಾಜಿಸಮ್ ಸ್ಥಾಪಿಸಲ್ಪಟ್ಟಿದ್ದರೂ ಕೂಡ ರೀಶ್ವೆಹ್ರ್ ಸಮದರ್ಶಿಯಾಗಿದ್ದಿತು ಮತ್ತು ಜರ್ಮನಿಯ ಮೇಲೆ ನಾಜೀ ಅಧಿಕಾರವು ಆಹೊತ್ತಿಗಿನದಾಗಿತ್ತು, ಸಂಪೂರ್ಣವಾಗಿರಲಿಲ್ಲ. ತನ್ನ ಸರ್ಕಾರದ ಮತ್ತು ರಾಜಕೀಯ ಎದುರಾಳಿಗಳನ್ನು ನಿವಾರಿಸಿಕೊಂಡಾದ ಮೇಲೆ ಹಿಟ್ಲರ್ ನಾಜೀ ಪಾರ್ಟಿಯೊಳಗಿನ ತನ್ನ ವಿರೋಧಿಗಳನ್ನು, ಅದರಲ್ಲೂ ವಿಶೇಷವಾಗಿ ()ನ ನಾಯಕ ಅರ್ನ್ಸ್ಟ್ ರಾಹ್ಮ್ ಮತ್ತು ನಾಜೀ ಎಡಪಂಧೀಯ ನಾಯಕಗ್ರೆಗರ್ ಸ್ಟ್ರ್ಯಾಸರ್ನ ಮಿತ್ರವರ್ಗದವರನ್ನು ಬಹಿಷ್ಕರಿಸಿದನು. 1934ರಲ್ಲಿ ನಾಜೀ ಸರ್ಕಾರದ ರಾಜಕೀಯ ವಿಪ್ಲವ ವೊಂದಕ್ಕೆ ರೀಶ್ವೆಹ್ರ್ ನ ಬೆಂಬಲವನ್ನು ಖಚಿತಪಡಿಸಲು ಅವರನ್ನು ನೈಟ್ ಆಫ್ ದ ಲಾಂಗ್ ನೈವ್ಸ್ (30 ಜೂನ್–2 ಜುಲೈ)ನ ನಿರ್ಮೂಲನಗಳ ವೇಳೆಯಲ್ಲಿ ಹತ್ಯೆಗೈಯಲಾಯಿತು; ನಂತರದಲ್ಲಿ 2 ಆಗಸ್ಟ್ 1934ರಂದು ಅಧ್ಯಕ್ಷ ವಾನ್ ಹಿಂಡೆನ್‌ಬರ್ಗ್ರ ನಿಧನದ ನಂತರ, ಅಧ್ಯಕ್ಷ ಮತ್ತು ಜರ್ಮನಿಯ ಚ್ಯಾನ್ಸೆಲರ್ ಆಗಿ ಅಡಾಲ್ಫ್ ಹಿಟ್ಲರ್ ನಿರಂಕುಶ ಅಧಿಕಾರವನ್ನು ಹೊಂದಿದ್ದನಾದರೂ ರೀಶ್ವೆಹ್ರ್ ಇನ್ನೂ ಸಂಪೂರ್ಣವಾಗಿ ಆತನ ಆಜ್ಞಾನುವರ್ತಿಯಾಗಿರಲಿಲ್ಲ. ನಾಜಿಸಮ್ ಅನ್ನು ಸಾಂಸ್ಕೃತಿಕವಾಗಿ ಜರ್ಮನ್ ಜೀವನಶೈಲಿಯ ಭಾಗವನ್ನಾಗಿ ಮಾಡುವ ಸಲುವಾಗಿ ಹಿಟ್ಲರ್ ಸರ್ಕಾರವು ಅಧಿಕಾರಕ್ಕೆ ಬಂದ ಮೂರು ತಿಂಗಳುಗಳ ನಂತರ ರಾಷ್ಟ್ರೀಯ ಯಹೂದಿ ಉದ್ಯಮಗಳ ನಾಜೀ ಬಹಿಷ್ಕಾರ (1 ಏಪ್ರಿಲ್ 1933)ವನ್ನು ಜಾರಿಗೆ ತಂದಿತು; ಈ ಮೊದಲು, ಹಿಂಡೆನ್‌ಬರ್ಗ್ ಸರ್ಕಾರವು ಅಧಿಕೃತವಾಗಿ ಯಹೂದ್ಯ-ವಿರೋಧವನ್ನು ಅಡ್ಡಾದಿಡ್ಡಿಯಾಗಿ ಪಾಲಿಸುತ್ತಿತ್ತಾದರೂ 1935 ನಾಜೀ ನ್ಯೂರೆಂಬರ್ಗ್ ಕಾನೂನುಗಳು ಯಹೂದಿಗಳ ಕಾನೂನುಬದ್ಧ, ವ್ಯವಸ್ಥಿತವಾದ ಕಿರುಕುಳವನ್ನು ಊರ್ಜಿತಗೊಳಿಸಿದರು. ಅಂತರ್ರಾಷ್ಟ್ರೀಯ ಸಾರ್ವಜನಿಕ ಉಪಯೋಗಕ್ಕಾಗಿ, ಗೋಚರವಾಗುವ ಯಹೂದಿ-ವಿರೋಧವನ್ನು 1936ರ ಬೇಸಿಗೆ ಒಲಂಪಿಕ್ಸ್ನ ಸಮಯದಲ್ಲಿ ಕಡಿಮೆಗೊಳಿಸಲಾಯಿತಾದರೂ ನಂತರ ಹಿಂದಿನ ಪರಿಸ್ಥಿತಿಯೇ ಮರಳಿತು. === ವಿದೇಶೀ ಪ್ರತಿಕ್ರಿಯೆಗಳು === 1930ರ ದಶಕದ ಮಧ್ಯಭಾಗದಿಂದಲೂ, ಬ್ರಿಟಿಶ್ ಮತ್ತು ಫ್ರೆಂಚ್ ಸರ್ಕಾರಗಳು ಸಾಮಾನ್ಯವಾಗಿ ನಾಜೀ ಆಳ್ವಿಕೆ ಮತ್ತು ಅದುವರ್ಸೇಲ್ಸ್ ಒಪ್ಪಂದ ಅನ್ನು ಉಲ್ಲಂಘಿಸಿ ಸಶಸ್ತ್ರೀಕರಣ ಮಾಡಿಕೊಂಡಿದ್ದರು ಕೂಡ ಅದನ್ನು ಸಂತುಷ್ಟಗೊಳಿಸುತ್ತ ಇದ್ದವು. ನಾಜೀ ಒಪ್ಪಂದಗಳ ಉಲ್ಲಂಘನೆಯ ಬಗ್ಗೆ ಆಂಗ್ಲೋ-ಫ್ರೆಂಚ್ ಟೀಕೆಯ ಹೊರತಾಗಿಯೂ ಕೂಡ ಜರ್ಮನಿ ಸರ್ವಾಧಿಕಾರೀ ಮತ್ತು ಯಹೂದ್ಯ ವಿರೋಧಿ ಸಾರ್ವಜನಿಕ ನೀತಿಗಳನ್ನು ಜಾರಿಗೆ ತಂದಿತು. ತನ್ನ ಮೆಯ್ನ್ ಕ್ಯಾಂಫ್ (1925)ನಲ್ಲಿ ಈ ರೀತಿಯ ಪ್ರತೀಕಾರದ ಯುದ್ಧದ ಕಡೆಗೆ ಸ್ಪಷ್ಟವಾಗಿ ಒಲುಮೆಯನ್ನು ವ್ಯಕ್ತಪಡಿಸಿದ್ದರೂ ಕೂಡಾ ಬ್ರಿಟನ್‌ನಲ್ಲಿ ನಾಜಿಸಮ್ ಬಗೆಗಿನ ಸಹಿಷ್ಣುತೆಯು ಅಡಾಲ್ಫ್ ಹಿಟ್ಲರನು ಎಂದಿಗೂ ಎರಡನೇ ವಿಶ್ವಯುದ್ಧಕ್ಕೆ ಕಾರಣನಾಗಲಾರನೆಂಬ ತಪ್ಪಾದ ಎಣಿಕೆಯಿಂದ ಮೂಡಿದುದಾಗಿತ್ತು. ಮುಂದೆ ನಾಜೀ ಮಿಲಿಟರಿವಾದವನ್ನು ಉಪೇಕ್ಷಿಸುವುದು ಅಸಾಧ್ಯವಾದಾಗ ಯುದ್ಧಕ್ಕೆ ತಯಾರಿರದ ಬ್ರಿಟಿಶ್ ಮತ್ತು ಫ್ರೆಂಚರು ನಾಜಿಗಳನ್ನು ಸಂತುಷ್ಟಗೊಳಿಸುವುದನ್ನು ಮುಂದುವರೆಸಿದರು, ಮತ್ತು ಇದು ವಿನ್‌ಸ್ಟನ್ ಚರ್ಚಿಲ್ ಗಮನಿಸಿದಂತೆ ನಾಜೀ ಜರ್ಮನ್ ಬೆದರಿಕೆಯನ್ನು ಇನ್ನಷ್ಟು ಹೆಚ್ಚುಗೊಳಿಸಿತು: . , . ; , , . . , . 1936ರಲ್ಲಿ ನಾಜೀ ಜರ್ಮನಿ ಮತ್ತು ಜಪಾನ್ ಸಾಮ್ರಾಜ್ಯಗಳು ಸೋವಿಯೆತ್ ಒಕ್ಕೂಟದ ವಿದೇಶೀ ನೀತಿಗಳಿಗೆ ವಿರುದ್ಧವಾಗಿ ಆಂಟಿ-ಕೋಮಿಂಟರ್ನ್ ಪ್ಯಾಕ್ಟ್ (25 ನವೆಂಬರ್ 1936) ಅನ್ನು ಮಾಡಿಕೊಂಡಿದ್ದು, ಇದು ನಾಲ್ಕು ವರ್ಷಗಳ ನಂತರ ಇಟಲಿಯೊಂದಿಗಿನ ಟ್ರೈಪಾರ್ಟೈಟ್ ಒಪ್ಪಂದ (ಸೆಪ್ಟೆಂಬರ್ 1940)ಗೆ ಕಾರಣವಾಗಿ ಆಕ್ಸಿಸ್ ಬಲಗಳ ತಳಹದಿಯಾಯಿತು. === ಎರಡನೇ ವಿಶ್ವಯುದ್ಧ === |300px||ನಾಜಿಸಂನ ವಿನಾಶ: ರೀಚ್‌ಸ್ಟ್ಯಾಗ್ ಮೇಲೆ ಯುಎಸ್‌ಎಸ್‌ಆರ್ ಧ್ವಜ. (ಯೆವ್ಗೆನಿ ಖಾಲ್ಡೀ) ಪ್ರತೀಕಾರವಾದಿಗಳಾಗಿದ್ದ ನಾಜಿಗಳು Großdeutschland (ಗ್ರೇಟರ್ ಜರ್ಮನಿ)ಯನ್ನು ಸ್ಥಾಪಿಸುವುದಕ್ಕಾಗಿ ವರ್ಸೇಲ್ಸ್ ಒಪ್ಪಂದದ ಸಮಯದಲ್ಲಿ ಜರ್ಮನಿಯು ನೀಡಿದ್ದ ಪ್ರಾಂತ್ಯಗಳೆಲ್ಲವನ್ನೂ ವಾಪಾಸು ಪಡೆಯಲು ಸನ್ನದ್ಧರಾಗಿದ್ದರು, ಇದರಲ್ಲಿ ಒಪ್ಪಂದದ ಪ್ರಕಾರ ಪೋಲಂಡ್‍ಗೆ ಸೀಮಿತ ಹಕ್ಕುಗಳಿದ್ದ ಫ್ರೀ ಸಿಟಿ ಆಫ್ ಡ್ಯಾನ್‌ಜಿಗ್ ಕೂಡ ಇದ್ದಿತು. ರಾಜನೀತಿಯ ತಂತ್ರಗಳಿಂದ ಡ್ಯಾನ್‌ಜಿಗ್ ಅನ್ನು ಪಡೆದುಕೊಳ್ಳುವುದು ವಿಫಲವಾದಾಗ ನಾಜೀಗಳು ಮತ್ತು ಯುಎಸ್‍ಎಸ್‍ಆರ್ ಪೋಲಂಡ್ ಮೇಲಿನ ಯುದ್ಧದಲ್ಲಿ ನಾಜೀ ಜರ್ಮನಿಗೆ ಸಹಾಯ ಮಾಡುವ ಸಲುವಾಗಿ ಮೊಲೊಟೋವ್-ರಿಬೆನ್‌ಟ್ರ್ಯಾಪ್ ಒಪ್ಪಂದ (23 ಆಗಸ್ಟ್ 1939)ಕ್ಕೆ ಸಹಿ ಹಾಕಿದರು. 1939ರಲ್ಲಿ, ಜರ್ಮನಿಯ () ಪೋಲಂಡ್ ಮೇಲಿನ ದಾಳಿಗೆ ಉತ್ತರವಾಗಿ ಫ್ರ್ಯಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಅದರ ಮೇಲೆ ಯುದ್ಧ ಸಾರಿದವು; ಇದೇ ಹೊತ್ತಿಗೆ, ಯುಎಸ್‍ಎಸ್‍ಆರ್ ಪೋಲಂಡ್‌ನ ಮೇಲೆ ಪೂರ್ವದಿಂದ ಆಕ್ರಮಣ ಮಾಡಿತು; ಪೋಲಂಡ್ ಅಸ್ಥಿರಗೊಳಿಸಲಾಯಿತು, ಮತ್ತು ಜರ್ಮನಿ ಫ್ರ್ಯಾನ್ಸ್ ಮತ್ತು ಯು.ಕೆಗಳ ನಡುವಿನ ಯುದ್ಧವು ಮುಂದುವರೆಯಿತು. 1940ರಲ್ಲಿ ಜರ್ಮನಿಯು ಫ್ರಾನ್ಸ್‌ನಲ್ಲಿದ್ದ ಫ್ರೆಂಚ್ ಮತ್ತು ಬ್ರಿಟಿಶ್ ಕಾಂಟಿನೆಂಟಲ್ ಸೇನೆಗಳನ್ನು ಸೋಲಿಸಿ ದೇಶವನ್ನು ಆಕ್ರಮಿಸಿಕೊಂಡಿತು. ಇದರ ನಂತರ ಬ್ಯಾಟ್‌ಲ್ ಆಫ್ ಬ್ರಿಟನ್ (ಜುಲೈ–ಅಕ್ಟೋಬರ್ 1940) ಆರಂಭವಾಯಿತು ಮತ್ತು ನಿಂತುಹೋಯಿತು, ಆದ್ದರಿಂದ ಜರ್ಮನಿಯು ಯುಎಸ್‌ಎಸ್‌ಆರ್ ಅನ್ನು ಸೋಲಿಸಿದರೆ ಯುಕೆ ಶಾಂತಿಯನ್ನು ಬೇಡುವುದೆಂದು ಭಾವಿಸಿ ಪೂರ್ವದೆಡೆ ಆಕ್ರಮಣ ಮಾಡಿತು. 1941ರಲ್ಲಿ ಜರ್ಮನಿ ಮತ್ತು ಅದರ ಆಕ್ಸಿಸ್ ಮೈತ್ರಿಕೂಟದವರು ಆಪರೇಶನ್ ಬಾರ್ಬರೋಸಾ (22 ಜೂನ್–5 ಡಿಸೆಂಬರ್ 1941)ದ ಮೂಲಕ ಯುಎಸ್‌ಎಸ್‌ಆರ್ ಮೇಲೆ ದಾಳಿ ಮಾಡಿದರು. ಆರಂಭದಲ್ಲಿ ಯಶಸ್ಸು ದೊರಕಿದರೂ, ನಂತರದಲ್ಲಿ ರೆಡ್ ಆರ್ಮಿಯು ಅವರನ್ನು ಹಿಮ್ಮೆಟ್ಟಿಸತೊಡಗಿತು. ಬ್ಯಾಟ್‌ಲ್ ಆಫ್ ಸ್ಟ್ಯಾಲಿನ್‌ಗ್ರ್ಯಾಡ್ (17 ಜುಲೈ 1942–2 ಫೆಬ್ರುವರಿ 1943)ನ ನಂತರ ಯುಎಸ್‌ಎಸ್‌ಆರ್ ಪ್ರತಿದಾಳಿಯನ್ನು ಮಾಡಿ ರಶ್ಯಾದಿಂದ ಆಕ್ಸಿಸ್ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿತಲ್ಲದೆ ಪಶ್ಚಿಮದೆಡೆ ನಾಜೀ ಜರ್ಮನಿಯ ಕಡೆಗೆ ಮುನ್ನುಗ್ಗತೊಡಗಿತು. 6 ಜೂನ್ 1944ರಂದು ಆಂಗ್ಲೋ ಅಮೆರಿಕನ್ ನಾರ್ಮ್ಯಾಂಡಿ ಇನ್‌ವೇಶನ್ ಮೂಲಕ ಫ್ರ್ಯಾನ್ಸ್‌ಗೆ ಬಂದಿಳಿದ ಮಿತ್ರಪಕ್ಷಗಳು ಪೂರ್ವದೆಡೆ ಥರ್ಡ್ ರೀಚ್ ಅನ್ನು ಬ್ಯಾಟ್‌ಲ್ ಆಫ್ ಬರ್ಲಿನ್ (16 ಏಪ್ರಿಲ್–2 ಮೇ 1945)ನಲ್ಲಿ ಪರಾಭವಗೊಳಿಸುವುದರಲ್ಲಿ ನಿರತರಾಗಿದ್ದ ರೆಡ್ ಆರ್ಮಿಯನ್ನು ನಡುದಾರಿಯಲ್ಲಿ ಕೂಡಿಕೊಳ್ಳುವ ಸಲುವಾಗಿ ಮುಂದೆ ಸಾಗಿದವು. == ಜನಪ್ರಿಯ ಸಂಸ್ಕೃತಿಯಲ್ಲಿ ನಾಜಿಸಮ್ == ಜನಪ್ರಿಯ ಅಮೆರಿಕನ್ ಸಂಸ್ಕೃತಿಯಲ್ಲಿ ನಾಜೀ , ಫ್ಯೂರೆರ್ , ಫ್ಯಾಸಿಸ್ಟ್ , ಗೆಸ್ಟಾಪೋ , ಮತ್ತು ಹಿಟ್ಲರ‍್ ನಂತಹ ಪದಗಳನ್ನು ನಿರಂಕುಶಪ್ರವೃತ್ತಿಯ ಜನರನ್ನು ತೆಗಳಲು ಬಳಸುವ ಪದಗಳಾಗಿವೆ; ಹೀಗಾಗಿ ಅಮೆರಿಕನ್ನರು ಗ್ರ್ಯಾಮರ್ ನಾಜೀ ಮತ್ತು ಫೆಮಿನಾಜೀ ಮೊದಲಾದ ಪದಗಳನ್ನು ಬಳಸುತ್ತಾರೆ, (ನೋಡಿ ’ ). ಇದಲ್ಲದೇ ಬ್ಲ್ಯಾಕ್‌ಲೆಟರ್ ಟೈಪ್‌ಫೇಸ್‌ಗಳಾದ ಮತ್ತು Schwabacherಗಳನ್ನು ನಾಜೀಗಳು 1941ರಲ್ಲಿ ಬಳಸಲು ಆರಂಭಿಸಿದ್ದರೂ ಕೂಡ ಇಂದಿಗೂ ನಾಜೀ ಪ್ರಚಾರಕಾರ್ಯದ ಜತೆಯಲ್ಲಿಯೇ ಪರಿಗಣಿಸಲಾಗುತ್ತದೆ. ಸಿನೆಮಾದಲ್ಲಿ, ಇಂಡಿಯಾನಾ ಜೋನ್ಸ್ ಸರಣಿಯಲ್ಲಿ ನಾಜೀ ಖಳನಾಯಕರನ್ನು ತೋರಿಸಲಾಗಿದೆ; ವೀಡಿಯೋಗೇಮ್ ವೆಬ್‌ಸೈಟ್ ನಾಜಿಗಳು ವಿಡಿಯೋ ಗೇಮ್ ಖಳನಾಯಕರಲ್ಲಿಯೇ ಅತ್ಯಂತ ಹೆಚ್ಚು ನೆನಪಿರುವವರು ಎಂದು ಘೋಷಿಸಿತು. == ಇವನ್ನೂ ಗಮನಿಸಿ == == ಆಕರಗಳು == === ಗ್ರಂಥಸೂಚಿ === .. (1965). : 1922–1945. . 0-14-023968-5. (1990). : . : . 0-19-505780-5. ನಿಕೋಲಸ್ ಗುಡ್ರಿಕ್-ಕ್ಲಾರ್ಕ್ (1985). ನಾಝಿಸ್ಮ್‌ನ ಅತೀಂದ್ರಿಯ ಮೂಲಗಳು: : : , 1890–1935 . ವೆಲಿಂಗ್‌ಬೊರೋ, ಇಂಗ್ಲೆಂಡ್: ದ ಅಕ್ವೇರಿಯನ್ ಪ್ರೆಸ್. 0-03-063748-1 ( . , 2004, .. & . 1-86064-973-4.) (2002) : , . ನ್ಯೂಯಾರ್ಕ್ ಯುನಿವರ್ಸಿಟಿ ಪ್ರೆಸ್. 0-03-063748-1 (, 2003. 0-03-063748-1 ವಿಕ್ಟರ್ ಕ್ಲೆಂಪ್‌ರರ್ (1947). - . (1985 [1944]). : . . 0-91-088415-3. {{ }}: : |= () . (2005). . : . 0-14-101432-6. ಡೇವಿಡ್ ರೆಡ್‌ಲ್ಸ್ (2005). ’ : . ನ್ಯೂಯಾರ್ಕ್: ಯುನಿವರ್ಸಿಟಿ ಪ್ರೆಸ್. 0-03-063748-1 ವುಲ್ಫ್ಗ್ಯಾಂಗ್ ಸಾಯರ್ “ : ?” 404–424 , 73, #2, 1967 - (1978). . : . 0-906336-00-7. ರಿಚರ್ಡ್ ಸ್ಟೀಗ್‌ಮಾನ್-ಗಾಲ್ (2003). : , 1919–1945 . ಕೇಂಬ್ರಿಡ್ಜ್‌ : ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಮುದ್ರಣಾಲಯ. === ಟಿಪ್ಪಣಿಗಳು === == ಹೊರಗಿನ ಕೊಂಡಿಗಳು == ’ -, ಮೂಲ ನಾಜೀ ದಾಖಲೆಗಳ ಸ್ಕ್ಯಾನ್ ಮಾಡಲಾದ ದೊಡ್ಡ ಸಂಗ್ರಹ. : - ಮ್ಯಾಗಜೀನ್ ನ ಸ್ಲೈಡ್‌ಶೋ