ಪಾಂಗಾಳ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಒಂದು ಗ್ರಾಮ. ಮಂಗಳೂರಿ (ಕುಡ್ಲ) ನಿಂದ ಮುಂಬೈಗೆ (ಬಾಂಬೆ) ಸಂಪರ್ಕಿಸುವ ಭಾರತದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೬೬ (ಎನ್ ಹೆಚ್ ೬೬) ಈ ಗ್ರಾಮದ ಮೂಲಕ ಹಾದುಹೋಗುತ್ತದೆ. ಈ ಗ್ರಾಮವು ಪಾಂಗಾಳ ನದಿಯ ಉತ್ತರ ದಡದಲ್ಲಿದೆ. ಮಲ್ಲಿಗೆ ಹೂಗಳಿಗೆ ಹೆಸರುವಾಸಿಯಾದ ಶಂಕರಾಪುರ ಗ್ರಾಮವು ಈ ಗ್ರಾಮದ ಸಮೀಪದಲ್ಲಿದೆ. ಪಾಂಗಾಳ ಗ್ರಾಮದಲ್ಲಿ ಜನಾರ್ದನ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ. ವಿಜಯಾ ಬ್ಯಾಂಕಿನ ಶಾಖೆಯೊಂದು ಈ ಗ್ರಾಮದಲ್ಲಿದೆ. ೨೦೦೧ರ ಭಾರತೀಯ ಜನಗಣತಿಯ ಪ್ರಕಾರ, ಪಾಂಗಾಳವು ೪೩೮ ಮನೆಗಳಲ್ಲಿ ೧೯೪೮ (೯೦೩ ಪುರುಷರು, ೧೦೪೫ ಮಹಿಳೆಯರು ಸೇರಿದಂತೆ) ಜನಸಂಖ್ಯೆಯನ್ನು ಹೊಂದಿದೆ. ಪಾಂಗಾಳದಲ್ಲಿ ಉತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಪಾಂಗಾಳ ಪೋಸ್ಟ್‌ನ ಪೋಸ್ಟಲ್ ಕೋಡ್ ೫೭೬೧೨೨. ಪಾಂಗಾಳವು ಕಾಪು ವಿಧಾನಸಭಾ ಕ್ಷೇತ್ರ ಮತ್ತು ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. == ಭಾಷೆ == ತುಳು ಇಲ್ಲಿ ಸ್ಥಳೀಯ ಭಾಷೆ. ತುಳು ಹೊರತುಪಡಿಸಿ, ಜನರು ಕನ್ನಡ ಮತ್ತು ಬ್ಯಾರಿ ಭಾಷೆಯನ್ನು ಮಾತನಾಡುತ್ತಾರೆ. == ಧಾರ್ಮಿಕ ಸಂಸ್ಥೆಗಳು == ಹಜರತ್ ಅರಬಿ ವಲಿಯುಲ್ಲಾ ಕೈಪುಂಜಾಲ್ ಬ್ರಹ್ಮಲಿಂಗೇಶ್ವರ ದೇವಸ್ಥಾನ ಅಲ್ಲಡೆ ದಂಡತೀರ್ಥ ಕೊತ್ವಾಲ ಗುತ್ತು ನಾಗ ಬನ ಪಾಂಗಾಳ ಆಲಡೆ ದೇವಸ್ಥಾನ == ಸಾರಿಗೆ == ಪಡುಬಿದ್ರಿ ರೈಲು ನಿಲ್ದಾಣ ಮತ್ತು ಉಡುಪಿ ರೈಲು ನಿಲ್ದಾಣಗಳು ಪಾಂಗಾಳಕ್ಕೆ ಹತ್ತಿರದ ರೈಲು ನಿಲ್ದಾಣಗಳಾಗಿವೆ. ಉಡುಪಿ ಮತ್ತು ಪಾಂಗಾಳಕ್ಕೆ ರಸ್ತೆ ಸಂಪರ್ಕವಿದೆ. == ಉಲ್ಲೇಖಗಳು ==