ಮಡಿಕೇರಿ ಕೊಡಗು ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು. ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ. ಎಲ್ಲಾ ಸರ್ಕಾರಿ ಕಛೇರಿಗಳು ಮುಖ್ಯವಾಗಿ ಮಡಿಕೇರಿಯಲ್ಲಿದೆ. ಅಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು. ಮಡಿಕೇರಿಯನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯುತ್ತಾರೆ. ಆಗ ಮುದ್ದು ರಾಜನ ಕೇರಿ ಎಂದು ಕರೆಯಪಡುತಿದ್ದ ಈ ಸ್ಥಳ ಕಾಲಾಂತರದಲ್ಲಿ ಮಡಿಕೇರಿ ಎಂಬ ಹೆಸರು ಬಂತು. ಅಲ್ಲದೆ ಇದು ಬೆಟ್ಟದ ಮೇಲೆ ನಿರ್ಮಾಣವಾದ ಪಟ್ಟಣವು ಮೊದಲಿಗೆ ಇದು ಮೊರದಿಗೆ ಎಂದು ಕರೆಯಲ್ಪಟ್ಟಿತು . ಆಮೇಲೆ ಮಡಿಕೇರಿ ಎಂದಾಯಿತು. ಇದು ಒಂದು ಸೈನಿಕರ ಜಿಲ್ಲೆ ಯಾಗಿದ್ದು ಮಂಜಿನ ನಗರಿ ಆಗಿದೆ. ಅಲ್ಲದೆ ಇದು ಒಂದು ಪ್ರವಾಸಿ ಕೇಂದ್ರವು ಹೌದು. ಎಲ್ಲ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ, ಎಲ್ಲ ಸರ್ಕಾರಿ ಕಚೇರಿಗಳು ಮಡಿಕೇರಿ ಜಿಲ್ಲೆಯಲ್ಲಿದೆ. == ಇತಿವೃತ್ತ == ಮಡಿಕೇರಿಯನ್ನು ಮೊದಲು ಲಿಂಗರಾಜ ಮಹಾರಾಜನು ತನ್ನ ಕಾಲಾಡಳಿತದಲ್ಲಿ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಮಡಿಕೇರಿಯಲ್ಲಿರುವ ಓಂಕಾರೇಶ್ವರ ದೇವಸ್ಥಾನವನ್ನು ಎರಡನೇ ಲಿಂಗರಾಜನು ಕಟ್ಟಿಸಿದನು. ಇಂದು ಇದು ಇಲ್ಲಿಯ ಒಂದು ಪ್ರಮುಖ ದೇವಸ್ಥಾನವೂ, ಪ್ರವಾಸಿ ತಾಣವೂ ಅಗಿದೆ, ಅದೇ ರೀತಿ ರಾಜಾಸೀಟ್, ಅರಮನೆ, ಗದ್ದಿಗೆಯು ಸಹ ಇಂದಿನ ಪ್ರವಾಸಿ ತಾಣಗಳಲ್ಲಿ ಹೆಸರಾಗಿದೆ. ಅಬ್ಬಿ ಜಲಪಾತವು ಮೈ ತುಂಬಿದಾಗ ಸಂಭ್ರಮದ ನೋಟ. ಈ ಜಲಪಾತವನ್ನು ನೋಡಲು ರಾಜ್ಯದ ಎಲ್ಲಾ ಭಾಗಗಳಿಂದಲೂ ಜನರ ಬರುತ್ತಾರೆ. ಹಾಗೆ ಬಂದ ಪ್ರವಾಸಿಗರ ಮನ ತಣಿಸಿ ಅಬ್ಬಿ ಅವರನ್ನು ಬೀಳ್ಗೊಡುತ್ತದೆ. ಮಡಿಕೇರಿಯ ಮಂಜನ್ನು ಕವಿ ಶ್ರೀ ಜಿ ಪಿ ರಾಜರತ್ನಮ್ ಅವರು `ಮಡಿಕೇರೀಲಿ ಮಂಜು' ಎಂಬ ಕವಿತೆಯಲ್ಲಿ ವರ್ಣಿಸಿದ್ದಾರೆ. ಮ್ಯೆಸೂರಿನಲ್ಲಿ ಅತಿ ವಿಜೃಂಭಣೆಯಿಂದ ನಡೆಯುವ ದಸರಾ, ಮಡಿಕೇರಿಯಲ್ಲಿಯೂ ನಡೆಯುತ್ತದೆ. ಮಡಿಕೇರಿಯ ತಲ ಕಾವೇರಿಯಲ್ಲಿ, ಕಾವೇರಿ ನದಿಯು ಹುಟ್ಟಿ ಅಲ್ಲಿಂದ ಸುಮಾರು ೧,೨ ಕಿ ಮಿ ವರೆಗೆ ಅಂತರ್ಗಾಮಿಯಾಗಿ ಹರಿದು ಮುಂದೆ ಭಾಗಮಂಡಲದಲ್ಲಿ ಪುನಃ ತನ್ನ ದರ್ಶನವನ್ನು ನೀಡುತ್ತದೆ. ಇದು ಜಿಲ್ಲೆಯ ಮತ್ತು ರಾಜ್ಯದ ಪ್ರಮುಖ ನದಿಯು ಸಹ ಅಗಿದೆ. ತಲ ಕಾವೇರಿಯಲ್ಲಿ ಪ್ರತಿ ವರ್ಷವು ತೀರ್ಥೊದ್ಭವವು ಸಂಭವಿಸುತ್ತದೆ. ಇದರ ದರ್ಶನಕ್ಕೆ ಸಾವಿರರು ಭಕ್ತರು ಅಲ್ಲಿ ಬಂದು ಸೇರುತ್ತಾರೆ,( ಸಂಘ ಸಂಸ್ಥೆಗಳು ತೀರ್ಥವನ್ನು ಜಿಲ್ಲೆಯ ಎಲ್ಲಾ ಭಾಗದ ಜನರಿಗೆ ತಲುಪಿಸಲು ಸಹಕರಿಸುತ್ತಾರೆ.) ಈ ನದಿಯು ಮುಂದೆ ತಮೀಳುನಾಡು ರಾಜ್ಯದ ಮೂಲಕ ಬಂಗಾಳಕೊಲ್ಲಿ ಯನ್ನು ಸೇರುತ್ತದೆ. ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ತಾಣ ;ಮಂದಲ್ ಪಟ್ಟಿ'. ಮಡಿಕೇರಿಯಿಂದ ೧೨ ಕಿ.ಮಿ ದೂರದಲ್ಲಿದೆ. ಗಾಳಿಬೀಡು ಸಮೀಪದ ಕಾಲೂರು ಎಂಬ ಗ್ರಾಮದಲ್ಲಿದೆ. ಬೆಟ್ಟ ಗುಡ್ಡಗಳಿಂದ ಕೂಡಿದ ಮಂದಲ್ ಪಟ್ಟಿ ಪ್ರವಾಸಿಗರ ನೆಚ್ಚಿನ ತಾಣ. ಇದಕ್ಕೆ ಇನ್ನೊಂದು ಹೆಸರು ಮುಗಿಲು ಪೇಟೆ. == ಭೌಗೋಳಿಕತೆ ಮತ್ತು ಹವಾಮಾನ == ಮಡಿಕೇರಿ ೧,೧೫೦ ಮೀತರ್ ಎತ್ತರದಲ್ಲಿದೆ. == ಅಬ್ಬಿಫಾಲ್ಸ್ == ಕೊಡಗು ಜಿಲ್ಲೆಯಲ್ಲಿ ಪ್ರಮುಖವಾಗಿ ೩ ಜಲಪಾತವನ್ನು ನೋಡಬಹುದು ಸೋಮವರಪೇಟ್ ನಲ್ಲಿ ಮಳಲಿ ಜಲಪಾತ ಮಡಿಕೇರಿಯಆಬ್ಬಿಫಾಲ್ಸ್ ವಿರಾಜಪೇಟೆ ಯಲ್ಲಿ ಚೇಲವರ ಫಾಲ್ಸ್ ಈ3 ಫಾಲ್ಸ್ ತನ್ನದೇ ಆದ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಅಭಿ ಫಾಲ್ಸ್ ಹಾಗೂ ಮಾಡಿಕೇರಿಯನ್ನು ನೋಡಬೇಕಾದರೆ ಮಳೆಗಾಲ ಹಾಗೂ ಚಳಿಗಾಲದಲ್ಲಿ ನೋಡಬೇಕು ತಂಪದ ಗಾಳಿ ಮಂಜಿನ ಹನಿ ವೈವಿಧ್ಯಮಯ ಪ್ರಕೃತಿಯಿಂದ ಕುಡಿರುತಡೆ ಅಭಿ ಫಾಲ್ಸ್ ನೋಡಲು ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದುಹೋಗುತ್ತಾರೆ ಸುಮಾರು ಮುನ್ನೂರ ಮೂವತ್ತು ವರ್ಷಗಳ ಹಿಂದೆ ಬೆಟ್ಟವೊಂದನ್ನು ಸಮತಟ್ಟು ಮಾಡಿ ಕೋಟೆಯನ್ನೂ ಹಾಗೂ ಅರಮನೆಯನ್ನು ನಿರ್ಮಿಸಿದ್ದು ಹಾಲೇರಿ ವಂಶದ ರಾಜ ಮುದ್ದುರಾಜ. ಹಾಗಾಗಿ ಇದು ಮುದ್ದುರಾಜಕೇರಿಯಾಗಿ ಆಮೇಲೆ ಮಡಿಕೇರಿಯಾಯಿತು. ೧೬೮೧ರಲ್ಲಿ ನಿರ್ಮಾಣವಾದಾಗ ಬರೀ ಮಣ್ಣಿನಿಂದ ನಿರ್ಮಿಸಿದ ಕೋಟೆಯಾಗಿತ್ತು. ಮುದ್ದುರಾಜ ನಿರ್ಮಿಸಿದ ಕೋಟೆಯನ್ನು ನಂತರ ವಶಪಡಿಸಿಕೊಂಡ ಟಿಪ್ಪು ಸುಲ್ತಾನ್ ಮಣ್ಣಿನಕೋಟೆಯನ್ನು ಕಲ್ಲಿನ ಕೋಟೆಯಾಗಿ ಮಾರ್ಪಡಿಸಿದನಲ್ಲದೆ, "ಜಾಫರಾಬಾದ್" ಎಂಬ ಹೆಸರಿಟ್ಟನು. ಆ ಬಳಿಕ ೧೭೩೪ರಲ್ಲಿ ಇದು ಬ್ರ್ರಿಟಿಷರ ವಶವಾಯಿತು. ಮಡಿಕೇರಿ ಪಟ್ಟಣದ ನಿರ್ಮಾತೃ ಹಾಲೇರಿ ವಂಶದ ಮೂರನೇ ದೊರೆ ಮುದ್ದುರಾಜ. ಈತ ಕ್ರಿ.ಶ ೧೬೮೧ರಲ್ಲಿ ಹಾವೇರಿಯಿಂದ ತನ್ನ ರಾಜಧಾನಿಯನ್ನು ಇಲ್ಲಿಗೆ ಸ್ಥಳಾಂತರಿಸಿಕೊಂಡು ಕೊಡಗನ್ನು ಆಳತೊಡಗಿದ. ಆಗ 'ಮುದ್ದುರಾಜನ ಕೇರಿ' ಎಂದು ಕರೆಯಲ್ಪಡುತ್ತಿದ್ದ ಈ ಸಥಳ ಕಾಲಾಂತರದಲ್ಲಿ 'ಮಡಿಕೇರಿ' ಎಂಬ ಹೆಸರನ್ನು ಪಡೆಯಿತು. ಅಲ್ಲದೆ ಇದು ಮೊರಡಿಯ(ಬೆಟ್ಟ) ಮೇಲೆ ನಿರ್ಮಾಣವಾದ ಪಟ್ಟಣವಾದುದರಿಂದ ಮೊದಲಿಗೆ ಇದು 'ಮೊರಡಿಯ ಕೇರಿ' ಎಂದು ಕರೆಯಲ್ಪಟ್ಟು ಆಮೇಲೆ 'ಮಡಿಕೇರಿ' ಎಂದಾಯಿತು. == ಮಡಿಕೇರಿಯ ಪ್ರವಾಸಿ ತಾಣಗಳು == ಕೋಟೆ ಮತ್ತು ಅರಮನೆ ವಸ್ತು ಸಂಗ್ರಹಾಲಯ ರಾಜಾಸೀಟ್ ಗಾಂಧಿ ಮಂಟಪ ಓಂಕಾರೇಶ್ವರ ದೇವಾಲಯ ರಾಜರ ಗದ್ದುಗೆ ಅಬ್ಬಿ ಜಲಪಾತ ತಲಕಾವೇರಿ ಭಾಗಮಂಡಲ ನಾಲ್ಕುನಾಡು ಅರಮನೆ ಇರ್ಪು ಫಾಲ್ಸ್ ದುಬಾರೆ ಅರಣ್ಯ ನಾಗರ ಹೊಳೆ ಕಾವೇರಿ ನಿಸರ್ಗಧಾಮ ಬ್ರಹ್ಮಗಿರಿ ಬೆಟ್ಟ == ಉಲ್ಲೇಖಗಳು ==