ಮದ್ದೂರು ಮಂಡ್ಯ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಇದು ಟಿಪ್ಪು ಸುಲ್ತಾನ್ ಹೊತ್ತಿನಲ್ಲಿ ಮದ್ದು ಗುಂಡು ಇಡುತಿದ್ದ ಜಾಗ ಆದ್ದರಿಂದ ಇದು ಮದ್ದೂರು. ಇದು ವಡೆಗೆ ಹೆಸರುವಾಸಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಮದ್ದೂರಿನ ಸೋಮನಹಳ್ಳಿಯವರು. ಮದ್ದೂರಿನ ಹತ್ತಿರದಲ್ಲಿರುವ ಶಿವಪುರದಲ್ಲಿ ೧೯೩೮ರಲ್ಲಿ ಧ್ವಜ ಸತ್ಯಾಗ್ರಹ ನಡೆಯಿತು ಮತ್ತು ಮ್ಯೆಸೂರು ಕಾಂಗ್ರೆಸ್ಸಿನ ಮೊದಲ ಅಧಿವೇಶನ ನಡೆಯಿತು. ಮದ್ದೂರು ಬೆಂಗಳೂರು ಮತ್ತು ಮೈಸೂರು ನಡುವಲ್ಲಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ೨೭೫ ಹಾದು ಹೋಗಿದ್ದು, ಎರಡೂ ಕಡೆ ಸರ್ಕಾರಿ ಬಸ್ ನಿಲ್ದಾಣಗಳು ಇವೆ.ಕೊಕ್ಕರೆ ಬೆಳ್ಳೂರು ಹಕ್ಕಿ ನೆಲೆಯಿದೆ.ಗೋವಿನ ಹಾಡು ಕವಿಯ ಊರು ನಗರಕೆರೆ ೫ ಕಿಲೋಮೀಟರ್ ಹತ್ತಿರದಲ್ಲಿದೆ. 'ಗ್ರಾಮ ಸರಕಾರ', ದೇಶದ ಮೊದಲ ಗೋಡೆ ಪತ್ರಿಕೆ ನ.ಲಿ.ಕೃಷ್ಣ ರವರ ಸಂಪಾದಕತ್ವದಲ್ಲಿ ಹೊರ ಬರುತಿತ್ತು. == ಸಾರಿಗೆ == ಮದ್ದೂರು ರಸ್ತೆ ಮತ್ತು ರೈಲ್ವೆ ಎರಡರಿಂದಲೂ ಸಂಪರ್ಕಿಸಲ್ಪಸುತ್ತದೆ. ಮದ್ದೂರಿನಿಂದ ನೇರವಾಗಿ ಕುಣಿಗಲ್ , ತುಮಕೂರು, ಮಳವಳ್ಳಿ, ಕೊಳ್ಳೇಗಾಲ, ಚಾಮರಾಜನಗರ, ಬೆಂಗಳೂರು, ಮೈಸೂರು ಕಡೆಗೆ ಬಸ್ ಮಾರ್ಗಗಳಿವೆ. == ಭೌಗೋಳಿಕ ವಿವರ == ಮದ್ದೂರು 12°35′03″ 77°02′42″﻿ / ﻿12.584169° 77.0449° ಯಲ್ಲಿ ವಿಸ್ತರಿಸಿದೆ. ಸಮುದ್ರ ಮಟ್ಟದಿಂದ ೨೧೭೫ ಅಡಿ ಎತ್ತರದಲ್ಲಿದೆ. == ಜನಸಂಖ್ಯೆ == ೨೦೧೧ರ ಜನಗಣತಿಯ ಪ್ರಕಾರ ೧ ಲಕ್ಷಕ್ಕು ಹೆಚ್ಚು ಜನರಿದ್ದಾರೆ. ಇವರಲ್ಲಿ ಶೇ ೫೧ ರಷ್ಟು ಪುರುಷರು ‍‍ಮತ್ತು ೪೯ ಅಷ್ಟು ಮಹಿಳೆಯರು ಇದ್ದಾರೆ. ಒಕ್ಕಲಿಗ ಜನಸಂಖ್ಯೆ ದೊಡ್ಡದಿದೆ. == ವಿಶೇಷ ತಿನಿಸುಗಳು == ಮದ್ದೂರು ವಡೆ ಜನಪ್ರಿಯ ತಿನಿಸು. ಸಾಮಾನ್ಯವಾಗಿ ಬೆಂಗಳೂರು-ಮೈಸೂರು ದಾರಿಯ ಬಸ್ ಹಾಗು ರೈಲು ನಿಲ್ದಾಣಗಳಲ್ಲಿ ಸಿಗುತ್ತದೆ. == ನೋಡಬಹುದಾದ ಜಾಗಗಳು == ಮದ್ದೂರಮ್ಮ ಗುಡಿ ಉಗ್ರ ನರಸಿಂಹ ಸ್ವಾಮಿ ದೇವಸ್ಥಾನ - ಮದ್ದೂರು ಹೊಳೆ ಆಂಜನೇಯನ ಗುಡಿ- ಮದ್ದೂರು *ಮುನೇಶ್ವರ ಮತ್ತು ಶನೇಶ್ವರ ಸ್ವಾಮಿ ದೇವಸ್ಥಾನ - ಮದ್ದೂರು ಶಿವಪುರ - ಇತಿಹಾಸ ಪ್ರಸಿದ್ಧ ಧ್ವಜಸತ್ಯಾಗ್ರಹ ಸೌಧ ಓದಪ್ಪನ ಗುಡಿಯು ಶಿಂಷಾ ಹೊಳೆಯ ದಡದಲ್ಲಿರುವ ನಗರಕೆರೆ-ವೈದ್ಯನಾಥಪುರ ಊರಿನಲ್ಲಿದೆ. ತೊಪ್ಪನಹಳ್ಳಿ - ಆಂಜನೇಯ ಸ್ವಾಮಿ ಬೆಟ್ಟ ಹಾಗೂ ಭೀಮನಕೆರೆಯಲ್ಲಿ ಬೆಟ್ಟದ ಅರಸಮ್ಮನ ಬೆಟ್ಟವಿದೆ. ಚಿಕ್ಕಅರಸಿನಕೆರೆ - ಕಾಲಭೈರವನ ಗುಡಿ. ಮದ್ದೂರಿನಿಂದ ಎಂಟು ಕಿಲೋಮೀಟರ್ ದೂರದಲ್ಲಿದೆ. ಹನುಮಂತನಗರ - ಆತ್ಮಲಿಂಗೇಶ್ವರ ದೇವಾಲಯ, ಪ್ರಕೃತಿ ಚಿಕಿತ್ಸಾ ಕೇಂದ್ರ ಗೆಜ್ಜಲಗೆರೆ ಹಾಲು ಉತ್ಪನ್ನ ಡೇರಿ.ಮದ್ದೂರಿನಿಂದ ಐದು ಕಿಲೋಮೀಟರ್ ದೂರದಲ್ಲಿದೆ. ವೀರಭದ್ರೇಶ್ವರ ಗುಡಿ - ಕಾಡುಕೊತ್ತನಹಳ್ಳಿ ಬೀರೇದೇವರ ಗುಡಿ-ಆಲೂರು-ನೀಲಕಂಠನಹಳ್ಳಿ ಬೀರೇಶ್ವರ ದೇವಸ್ಥಾನ, ಅರುವನಹಳ್ಳಿ. ಇದು ಬೀರಪ್ಪನ ತೋಪು ಎಂದೇ ಪ್ರಸಿದ್ದಿ ಹೊಂದಿದೆ. ಯರಗನಹಳ್ಳಿ- ಕಾಳಿಂಗ ಮರ್ದನ ಶ್ರೀಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ == ಪ್ರಮುಖ ವ್ಯಕ್ತಿಗಳು == ಹೆಚ್. ಕೆ. ವೀರಣ್ಣಗೌಡ - ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಿಕ್ಷಣ ಸಚಿವ ಎಸ್. ಎಂ. ಕೃಷ್ಣ - ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಜಿ. ಮಾದೇಗೌಡ - ಶಿಕ್ಷಣ ತಜ್ಞ, ಸಾಮಾಜಿಕ ಹೋರಾಟಗಾರ, ಮಾಜಿ ಸಂಸದ == ಹೋಬಳಿಗಳು == ಕಸಬಾ-೧ ಮದ್ದೂರು, ಶಿವಪುರ, ವೈದ್ಯನಾಥಪುರ, ಆಲೂರು, ನೀಲಕಂಠನಹಳ್ಳಿ, ಹಾಗಲಹಳ್ಳಿ, ಕಬ್ಬಾರೆ, ಹಳ್ಳಿಕೆರೆ, ಕೆ.ಕೋಡಿಹಳ್ಳಿ,ವಳಗರೆಹಳ್ಳಿ,ಸೊಳ್ಳೇಪುರ,ಗೆಜ್ಜಲಗೆರೆ,ಚಾಮನಹಳ್ಳಿ,ಹುಲುಗನಹಳ್ಳಿ,ಕದಲೀಪುರ,ಕುದುರುಗುಂಡಿ,ಬಿ.ಹೊಸಹಳ್ಳಿ,ಬಿ.ಲಕ್ಕಸಂದ್ರ,ಅಗರಲಿಂಗನದೊಡ್ಡಿ ಕಸಬಾ-೨ ಅಜ್ಜಹಳ್ಳಿ,ಭೀಮನಕೆರೆ,ಬೋರಪುರ,ಬೂದಗುಪ್ಪೆ,ಬ್ಯಾಡರಹಳ್ಳಿ,ಚಂದಹಳ್ಳಿ,ಚನ್ನಸಂದ್ರ,ಚುಂಚಗಹಳ್ಳಿ,ದಡಿಗ,ದೇಶಹಳ್ಳಿ,ಕೆ.ಬೆಳ್ಳೂರು,ಕೆ.ಹೊನ್ನಲಗೆರೆ,ಮಾಲಗಾರನಹಳ್ಳಿ,ಮೊಬ್ಬಲಗೆರೆ,ನಗರಕೆರೆ,ಸಾದೊಳಲು,ನಾಯಿದೊಡ್ಡಿ. ಕೊಪ್ಪ ಆತಗೂರು-ಮಲ್ಲನಕುಪ್ಪೆ,ನಿಡಗಟ್ಟ,ತೈಲೂರು, ಹುಣಸೇಮರದದೊಡ್ಡಿ, ಯರಗನಹಳ್ಳಿ ಚಿಕ್ಕ ಅರಸಿನಕೆರೆ == ಮದ್ದೂರು ತಾಲೂಕಿನ ಗ್ರಾಮಗಳು == ನಗರಕೆರೆ, ಹುಣಸೆಮರದದೊಡ್ಡಿ,ಅಂಬರಹಳ್ಳಿ , ದೇವೇಗೌಡನದೊಡ್ಡಿ, ಬೊಮ್ಮನಹಳ್ಳಿ,ಮಾಲಗಾರನಹಳ್ಳಿ,ಅರೆಕಲ್‍ದೊಡ್ಡಿ,ಗೌಡಯ್ಯನದೊಡ್ಡಿ, ಸೋಂಪುರ,ವೈದ್ಯನಾಥಪುರ,ಆಲೂರು, ನೀಲಕಂಠನಹಳ್ಳಿ,ಸೋಮನಹಳ್ಳಿ,ಗೆಜ್ಜಲಗೆರೆ,ಕೋಡಿಹಳ್ಳಿ, ತೊರೆಶೆಟ್ಟಹಳ್ಳಿ,ಕಬ್ಬಾರೆ,ಕೆ.ಹೊನ್ನಲಗೆರೆ,ಕೆ.ಹಾಗಲಹಳ್ಳಿ, ಡಿ.ಹೊಸೂರು,ಬ್ಯಾಡರಹಳ್ಳಿ,ಹಳ್ಳಿಕೆರೆ,ಚುಂಚಗಹಳ್ಳಿ, ಹುಲಿಕೆರೆ,ಕೊಕ್ಕರೆಬೆಳ್ಳೂರು,ಹೆಮ್ಮನಹಳ್ಳಿ,ಹನುಮಂತಪುರ, ಕದಲೂರು, ಚಿನ್ನನದೊಡ್ಡಿ, ವಳಗೆರೆದೊಡ್ಡಿ, ವಳಗೆರೆಹಳ್ಳಿ, ಸೊಳ್ಳೆಪುರ,ದೇಶಹಳ್ಳಿ, ನಿಡಗಟ್ಟ, ತೈಲೂರು, ತೊಪ್ಪನಹಳ್ಳಿ, ರಾಜೇಗೌಡನದೊಡ್ಡಿ, ಅರೆತಿಪ್ಪೂರು, ಚಂದಹಳ್ಳಿ, ಭೀಮನಕೆರೆ, ಗೊರವನಹಳ್ಳಿ, ಉಪ್ಪಿನಕೆರೆ, ಮಾಲಗಾರನಹಳ್ಳಿ, ಚನ್ನಸಂದ್ರ, ಅಜ್ಜಹಳ್ಳಿ, ತೊರೆಚಾಕನಹಳ್ಳಿ, ಚಿಕ್ಕಅರಸಿನಕೆರೆ, ದೊಡ್ಡಅರಸಿನಕೆರೆ, ಕೆ.ಎಮ್ ದೊಡ್ಡಿ(ಭಾರತಿನಗರ), ಚಾಕನಹಳ್ಳಿ, ಕ್ಯಾತಗಟ್ಟ, ಕಾರ್ಕಳ್ಳಿ, ಬೊಮ್ಮನದೊಡ್ಡಿ, ಅಂಕೆಗೌಡನದೊಡ್ಡಿ,ಆಲೂರು, ಆಲೂರು ದೊಡ್ಡಿ, ರುದ್ರಾಕ್ಷಿಪುರ, ಕೊಪ್ಪ, ಬೆಸಗರಹಳ್ಳಿ, ಚಾಮನಹಳ್ಳಿ, ಸಾದೊಳಲು, ಅಗರಲಿಂಗನದೊಡ್ಡಿ, ಕುರಿದೊಡ್ಡಿ, ಆಲಂಶೆಟ್ಟಳ್ಳಿ, ಆತಗೂರು, ಮಲ್ಲನಕುಪ್ಪೆ, ಸುಣ್ಣದದೊಡ್ಡಿ ಕುದರಗುಂಡಿ ಕಾಲೋನಿ,ಮರಕಾಡದೊಡ್ಡಿ,ಹೆಚ್‍ಕೆವಿನಗರ,ಗುಡಿಗೆರೆ,ಕನ್ನಲಿ,ಮಲ್ಲಯ್ಯನಗರ ಬಡಾವಣೆ,ಕೆಸ್ತೂರು, ಹುಲಿಗೆರೆಪುರ,ಹುಣ್ಣನದೊಡ್ಡಿ,ಬಿದರಹೊಸಹಳ್ಳಿ ನನ್ನ ಊರು ಕುರುಬರದೊಡ್ಡಿ ಇದು ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು, ಆತಗೂರು ಹೋಬಳಿಯಲ್ಲಿ ಬರುವ ಒಂದು ಪುಟ್ಟ ಗ್ರಾಮ. ನಮ್ಮ ಊರು ಮಂಡ್ಯ ಜಿಲ್ಲೆಯಿಂದ 40 ಕಿಲೋಮೀಟರ್ ದೂರದಲ್ಲಿರುವ ಒಂದು ಗ್ರಾಮ.ನಮ್ಮ ಊರಿನಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳೆಂದರೆ ಕಬ್ಬು ಮತ್ತು ರೇಷ್ಮೆ. ವಾಣಿಜ್ಯ ಬೆಳೆಯಾದ ರೇಷ್ಮೆ ಬಗ್ಗೆ ಮಾಹಿತಿ ವಿವರ ರೇಷ್ಮೆ ಬೆಳೆಯನ್ನು ಬೆಳೆಯಲು ಬೇಕಾಗುವ ಭೌಗೋಳಿಕಾಂಶಗಳು : 1] ಮಳೆ- 75cm ಇಂದ 100cm 2] ಉಷ್ಣಾಂಶ - 25° ಇಂದ 27° 3] ಮಣ್ಣು- ಕಪ್ಪುಮಣ್ಣು ಮತ್ತು ಕೆಂಪುಮಣ್ಣು ರೇಷ್ಮೆ ವಿಧಗಳು 1] ಹಿಪ್ಪು ನೇರಳೆ 2] ಮುಗ್ 3] ಟಾಸಾರ್ 4] ಈರಿ ರೇಷ್ಮೆಹುಳು ಬೆಳೆಯುವ ವಿಧಾನ ರೇಷ್ಮೆ ಹುಳುಗಳು 29 ದಿನಗಳಲ್ಲಿ ತಮ್ಮ ಗೂಡನ್ನು ಕಟ್ಟುತ್ತವೆ. ರೇಷ್ಮೆ ಹುಳುಗಳಿಗೆ ಎಲೆಯನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಹಾಕಲಾಗುತ್ತದೆ. ಹಂಚಿಕೆ * ಭಾರತದಲ್ಲಿ ಅತಿ ಹೆಚ್ಚಾಗಿ ರೇಷ್ಮೆಯನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ, ಎರಡನೇ ಸ್ಥಾನದಲ್ಲಿ ಆಂಧ್ರಪ್ರದೇಶ, ಮೂರನೇ ಸ್ಥಾನದಲ್ಲಿ ಅಸ್ಸಾ ಇದೆ. ಕರ್ನಾಟಕದಲ್ಲಿ ರಾಮನಗರದಲ್ಲಿ ಅತಿ ಹೆಚ್ಚು ರೇಷ್ಮೆಯನ್ನು ಬೆಳೆಯುತ್ತಾರೆ, ಅದರಿಂದ ರಾಮನಗರವನ್ನು ರೇಷ್ಮೆಯ ನಾಡು ಎಂದು ಕರೆಯಲಾಗುತ್ತದೆ..