ಮಲ್ಲಿಯಾಬಾದ್ ರಾಯಚೂರಿನಿಂದ ೫ ಕಿಮೀ ಇದ್ದು, ಇದು ಐತಿಹಾಸಿಕ ಕೋಟೆ ಮತ್ತು ಸ್ಮಾರಕಗಳನ್ನು ಹೊಂದಿದೆ. ಇಲ್ಲಿ ಪುರಾತತ್ವ ಇಲಾಖೆಯ ಉತ್ಖನನ, ಸಂಶೋಧನೆ, ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯಗಳು ಪ್ರಗತಿಯಲ್ಲಿವೆ. == ಮಲ್ಲಿಯಾಬಾದ್ ಕೋಟೆ == ಮಲ್ಲಿಯಾಬಾದ್ ಕೋಟೆಯು ರಾಯಚೂರು ಮತ್ತು ಉತ್ತರ ಕರ್ನಾಟಕ ಜಿಲ್ಲೆಯ ಇತಿಹಾಸದಲ್ಲಿ ಪ್ರಮುಖವಾಗಿದೆ. ಪಾಳುಬಿದ್ದ ವಿಷ್ಣು ದೇವಾಲಯ ಮತ್ತು ಬಿಳಿ ಗ್ರಾನೈಟ್‌ನಲ್ಲಿ ಕೆತ್ತಿದ ದೊಡ್ಡ ಗಾತ್ರದ ಜೋಡಿ ಆನೆಗಳು ಕೋಟೆಯಲ್ಲಿವೆ. ರಾಜ್ಯ ಪುರಾತತ್ವ ಇಲಾಖೆಯು ಸಂರಕ್ಷಿತ ಐತಿಹಾಸಿಕ ಸ್ಮಾರಕವೆಂದು ಘೋಷಿಸಿದೆ. ಈ ಕೋಟೆಯು ೧೩ ನೇ ಶತಮಾನದಲ್ಲಿ (ಕ್ರಿ.ಶ. ೧೨೯೪) ವಾರಂಗಲ್‌ನ ಕಾಕತೀಯರಿಂದ ನಿರ್ಮಿಸಲ್ಪಟ್ಟಿತು ಮತ್ತು ವಿಜಯನಗರ ಸಾಮ್ರಾಜ್ಯದೊಂದಿಗೆ ಸಹ ಸಂಬಂಧ ಹೊಂದಿತ್ತು. ಕ್ರಿ.ಶ ೧೫೨೦ ರಲ್ಲಿ ಆದಿಲ್ ಶಾಹಿ ವಿರುದ್ಧ ರಾಯಚೂರು ಕದನದ ಸಮಯದಲ್ಲಿ ಕೃಷ್ಣದೇವರಾಯನು ತನ್ನ ಸೈನ್ಯದೊಂದಿಗೆ ಇಲ್ಲಿಯೇ ತಂಗಿದ್ದನು. == ದೊಡ್ಡ ಗಾತ್ರದ ಆನೆಗಳು == ಬಿಳಿ ಗ್ರಾನೈಟ್ ನಲ್ಲಿ ಕೆತ್ತಿದ ಎರಡು ದೊಡ್ಡ ಆನೆಗಳು ಮಲ್ಲಿಯಾಬಾದ್ ಕೋಟೆಯಲ್ಲಿ ಕಂಡುಬಂದಿವೆ ಮತ್ತು ಇವುಗಳು ಸರ್ಕಾರಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿವೆ. ಆನೆಗಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿದ್ದವು. ಮೊದಲಿಗೆ ಆನೆಗಳನ್ನು ವಿಷ್ಣು ದೇವಾಲಯದ ಮುಂಭಾಗದಲ್ಲಿ ಇರಿಸಲಾಗಿತ್ತು ಮತ್ತು ಒಮ್ಮೆ ಮಲ್ಲಿಯಾಬಾದ್ ಕೋಟೆಯ ಹೆಬ್ಬಾಗಿಲಿನಲ್ಲಿ ಇರಿಸಲಾಗಿತ್ತು. == ಸಹ ನೋಡಿ == ಕರ್ನಾಟಕದಲ್ಲಿರುವ ಕೋಟೆಗಳು ಉತ್ತರ ಕರ್ನಾಟಕ ಕಾಕತೀಯರು ರಾಯಚೂರು == ಉಲ್ಲೇಖಗಳು ==