೧೯೬೦ರ ದಶಕದಿಂದ ಆಚಾರ್ಯ ರಜನೀಶ' ಎಂದು, ೧೯೭೦ರ ದಶಕ ಹಾಗು ೧೯೮೦ರ ದಶಕಗಳಲ್ಲಿ ಭಗವಾನ್ ಶ್ರೀ ರಜನೀಶ್ ಎಂದು, ಮತ್ತು ೧೯೮೯ರಿಂದ ಎಂದೂ ಪರಿಚಿತವಾಗಿದ್ದ ಚಂದ್ರ ಮೋಹನ್ ಜೈನ್ (೧೧ ಡಿಸೆಂಬರ್ ೧೯೩೧ – ೧೯ ಜನವರಿ ೧೯೯೦) ಅಂತರರಾಷ್ಟ್ರೀಯ ಅನುಯಾಯಿಗಳನ್ನು ಹೊಂದಿರುವ ಒಬ್ಬ ಭಾರತೀಯ ಅನುಭಾವಿ, ಗುರು ಹಾಗು ಆಧ್ಯಾತ್ಮಿಕ ಶಿಕ್ಷಕರಾಗಿದ್ದರು. ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರು ೧೯೬೦ರ ದಶಕದಲ್ಲಿ ಒಬ್ಬ ಸಾರ್ವಜನಿಕ ಭಾಷಣಕಾರರಾಗಿ ಭಾರತದಾದ್ಯಂತ ಪ್ರಯಾಣ ಮಾಡಿದರು. ಸಮಾಜವಾದ, ಮಹಾತ್ಮಾ ಗಾಂಧಿ ಮತ್ತು ಸಾಂಸ್ಥಿಕ ಧರ್ಮದ ಬಗ್ಗೆ ಅವರ ಮುಚ್ಚುಮರೆಯಿಲ್ಲದ ಟೀಕೆ ಅವರನ್ನು ವಿವಾದಾತ್ಮವಾಗಿಸಿದವು. == ಹೆಚ್ಚಿನ ಓದಿಗೆ == ಈ ಕೃತಿಯಲ್ಲಿ ಓಶೋರ ಕೆಲವು ಪ್ರಖರ ಒಳನೋಟಗಳಿವೆ. ಅವುಗಳಲ್ಲಿ ಕೆಲವು ಚರ್ಚಾರ್ಹವೂ, ಮತ್ತೆ ಕೆಲವು ವಿವಾದಾಸ್ಪದವೂ ಆಗಿವೆ. ಗಾಂಧೀಜಿಯವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರ ಸೀಮಿತವಾಗಿಟ್ಟು, ಸ್ವಾತಂತ್ರ್ತೋತ್ತರ ಸಾಮಾಜಿಕ ವ್ಯಾಧಿಗಳಿಗೆಲ್ಲ ಡಾ.ಅಂಬೇಡ್ಕರರಲ್ಲಿ ಪರಿಹಾರ ಹುಡುಕುವ ಈ ಕಾಲಘಟ್ಟದಲ್ಲಿ ಓಶೋ ಮಂಡಿಸುವ ಕೆಲ ಪ್ರಮೇಯಗಳಾದರೂ ಗಾಂಧಿ ಕುರಿತ ವಾಗ್ವಾದಗಳನ್ನು ಮರಳಿ ಮುನ್ನೆಲೆಗೆ ತರುವ ಉತ್ಸಾಹವುಳ್ಳವು.ಮಹಾತ್ಮ : ಗಾಂಧೀವಾದದ ಗೊತ್ತುಗುರಿಗಳು;ಲೇಖಕ : ಅನುವಾದ: ಡಾ.ಟಿ.ಎನ್. ವಾಸುದೇವಮೂರ್ತಿ;ವಿ.ಎನ್. ಹೆಗಡೆ;10 , 2017 2017-06-10 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==