ವೀರಬಾಹು ಒಬ್ಬ ಹಿಂದೂ ದೇವತೆ. ವೀರಬಾಹುವನ್ನು ಮುರುಗನ್ (ಸುಬ್ರಹ್ಮಣ್ಯ) ಸೈನ್ಯದ ಪ್ರಧಾನ ದಂಡನಾಯಕ ಎಂದು ಪರಿಗಣಿಸಲಾಗಿದೆ. ತಮಿಳು ಸಂಪ್ರದಾಯದ ಪ್ರಕಾರ ಸುಬ್ರಹ್ಮಣ್ಯನಿಗೆ ಸೇವೆ ಸಲ್ಲಿಸಲು ಜನಿಸಿದ ಒಂಬತ್ತು ದಂಡನಾಯಕರಲ್ಲಿ (ನವವೀರರ್ಗಲ್) ವೀರಬಾಹು ಕೂಡ ಒಬ್ಬನೆಂದು ಪರಿಗಣಿಸಲಾಗಿದೆ. ಒಂಬತ್ತು ದಳಪತಿಗಳಲ್ಲಿ ವೀರಬಾಹು ಅತ್ಯುನ್ನತ ಸ್ಥಾನವನ್ನು ಪಡೆದಿದ್ದಾನೆ. ತಮಿಳುನಾಡಿನಲ್ಲಿ ಅವನನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. == ದಂತಕಥೆ == ಸ್ಕಂದ ಪುರಾಣದ ಪ್ರಕಾರ, ಮುರುಗನ್ ಹುಟ್ಟಿದ ನಂತರ, ಶಕ್ತಿಯು ತನ್ನ ಸಿಲಂಬುವನ್ನು (ಗೆಜ್ಜೆ) ತೆಗೆದುಕೊಂಡು ಒಂಬತ್ತು ಶಕ್ತಿಗಳನ್ನು ಉತ್ಪಾದಿಸಿದಳು, ಮತ್ತು ನಂತರ ಅವರು ಮುರುಗನ್‍ನ ಸಹೋದರರಾಗಿ ರೂಪಾಂತರಗೊಂಡರು. ಇವರನ್ನು ತಮಿಳಿನಲ್ಲಿ ನವವೀರರ್‌ಗಲ್ ( ಒಂಬತ್ತು ಯೋಧರು) ಎಂದು ಕರೆಯಲಾಗುತ್ತದೆ. ಸುರಪದ್ಮನನ್ನು ನಾಶಮಾಡಲು ಮುರುಗನನ್ನು ಕಳುಹಿಸಿದಾಗ ವೀರಬಾಹು ಮತ್ತು ಇತರ ನವವೀರರು ದೊಡ್ಡ ಸೈನ್ಯದ ಮುಖ್ಯಸ್ಥರಾಗಿ ದಕ್ಷಿಣಕ್ಕೆ ಅವನನ್ನು ಹಿಂಬಾಲಿಸಿದರು. ವಿಂಧ್ಯದಲ್ಲಿ, ಸೇನೆಯು ಸುರಪದ್ಮನ ಇಬ್ಬರು ಸಹೋದರರಾದ ಕ್ರೌಂಚ (ಪರ್ವತದ ರೂಪದಲ್ಲಿ), ಮತ್ತು ತಾರಕಾಸುರನನ್ನು ಕಂಡಿತು. ವೀರಬಾಹು ಮತ್ತು ಅವನ ಸೈನ್ಯವು ತಾರಕಾಸುರನ ಮೇಲೆ ಆಕ್ರಮಣ ಮಾಡಿದರು, ಆದರೆ ಅವನು ಕ್ರೌಂಚಕ್ಕೆ ಹೋಗುವಂತೆ ಅವರ ಮೇಲೆ ಮಂತ್ರವನ್ನು ಮಾಡಿದನು. ಮುರುಗನಿಗೆ ಸೋಲಿನ ಸುದ್ದಿ ತಿಳಿದ ನಂತರ, ಅವನು ತಾರಕಾಸುರನೊಂದಿಗೆ ಹೋರಾಡಿ ಅವನ ಹೃದಯವನ್ನು ಚುಚ್ಚಿದನು. ನಂತರ ಅವನು ತನ್ನ ವೆಲ್ (ಶಸ್ತ್ರ) ಅನ್ನು ಕ್ರೌಂಚದ ಮೇಲೆ ಎಸೆದನು, ಅದು ಧೂಳಿನಲ್ಲಿ ಕರಗಿತು. ನಂತರ, ವೀರಬಾಹು ಮತ್ತು ಅವನ ಸೈನ್ಯವು ಪುನಶ್ಚೇತನಗೊಂಡಿತು. ಯುದ್ಧ ಸಂಭವಿಸದಿರಲು ಹಾಗೂ ಸುರಪದ್ಮನಿಂದ ಸೆರೆಹಿಡಿಯಲ್ಪಟ್ಟ ದೇವತೆಗಳನ್ನು ಬಿಡುಗಡೆ ಮಾಡುವಂತೆ ಕೇಳಲು ವೀರಬಾಹುವು ಸುರಪದ್ಮನ ರಾಜಧಾನಿಯಾದ ಮಹೇಂದ್ರಪುರಿಗೆ ಆಗಮಿಸಿದನು. ಅವನು ಅರಮನೆಯನ್ನು ಪ್ರವೇಶಿಸಿದನು ಮತ್ತು ಜೈಲಿನಲ್ಲಿದ್ದ ದೇವತೆಗಳೊಂದಿಗೆ ಮಾತನಾಡಿದನು. ಅವರು ತಮ್ಮ ಪಾಪಗಳಿಗಾಗಿ ಬಂಧಿಸಲ್ಪಟ್ಟಿದ್ದಾರೆ ಮತ್ತು ಅವರು ಮುರುಗನ್‌ನಿಂದ ಶೀಘ್ರದಲ್ಲೇ ರಕ್ಷಿಸಲ್ಪಡುತ್ತಾರೆ ಎಂದು ಹೇಳಿದನು. ವೀರಬಾಹುವು ನಂತರ ಸುರಪದ್ಮನ ಸಿಂಹಾಸನದ ಕೋಣೆಗೆ ಆಗಮಿಸಿದನು, ಆದರೆ ದೂತರ ಕಾನೂನುಗಳ ಬೇಡಿಕೆಯಂತೆ ಅವನಿಗೆ ಆಸನವನ್ನು ನೀಡದೆ ಅವಮಾನಿಸಿದರು. ಆದಾಗ್ಯೂ, ವೀರಬಾಹುವು ಭವ್ಯವಾದ ಸಿಂಹಾಸನವನ್ನು ಕಲ್ಪಿಸಿಕೊಂಡನು ಮತ್ತು ತಿರುಮಲನ ಅನುಯಾಯಿಗಳನ್ನು ಬಿಡುಗಡೆ ಮಾಡುವಂತೆ ಸುರಪದ್ಮನಿಗೆ ತನ್ನ ಸಂದೇಶವನ್ನು ನೀಡಿದನು. ಸುರಪದ್ಮನು ನಿರಾಕರಿಸಿದನು ಮತ್ತು ವೀರಬಾಹುವನ್ನು ಸೆರೆಯಲ್ಲಿಡಲು ಪ್ರಯತ್ನಿಸಿದನು. ಅವನು ತಪ್ಪಿಸಿಕೊಳ್ಳುವ ಸಮಯದಲ್ಲಿ, ಅವನು ಸುರಪದ್ಮನ ಕೆಲವು ಸಂಬಂಧಿಕರನ್ನು ಒಳಗೊಂಡಂತೆ ಅನೇಕ ಅಸುರರನ್ನು ಕೊಂದನು ಮತ್ತು ಅದನ್ನು ಮುರುಗನ್‌ಗೆ ತಿಳಿಸಿದನು. ನಂತರ ವೀರಬಾಹುವು ಯುದ್ಧದಲ್ಲಿ ಹೋರಾಡಿದನು. ಬಾನುಕೋಪನ ಒಂದು ಆಯುಧವು ಅವನನ್ನು ಹೆಚ್ಚಿನ ಸೈನ್ಯದೊಂದಿಗೆ ಮೂರ್ಛೆ ಬೀಳುವಂತೆ ಮಾಡಿತು, ಆದರೆ ಆ ಅಸ್ತ್ರವು ನಾಶವಾದ ನಂತರ ಅವನು ಚೇತರಿಸಿಕೊಂಡನು. ಅವರು ಮುರುಗನ್ ಹಿಂದಿರುಗುವಾಗ ಮತ್ತು ಅವರ ಮದುವೆಯ ಸಮಯದಲ್ಲಿ ಜೊತೆಗೂಡಿದರು. == ಜನಪ್ರಿಯ ಸಂಸ್ಕೃತಿಯಲ್ಲಿ == ತಮಿಳುನಾಡಿನಲ್ಲಿ ನೇಕಾರರು ಮತ್ತು ಯೋಧರ ಸಮುದಾಯವಾದ ಸೆಂಗುಂತರ್ ಕೈಕೋಲರ್ ಸಮುದಾಯವು ವೀರಬಾಹು ಮತ್ತು ಇತರ ಎಂಟು ನವವೀರರಿಂದ ಬಂದವರು ಎಂದು ಹೇಳಿಕೊಳ್ಳುತ್ತಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಕಂಠ ಪುರಾಣದಲ್ಲಿ ವೀರಬಾಹು 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. ಕಂಠ ಪುರಾಣದಲ್ಲಿ ವೀರಬಾಹು ದೂತನಾಗಿ ವೀರಬಾಹು ದೂತನಾಗಿ ವೀರಬಾಹು ಮುರುಗನ ಸೇನೆಯಲ್ಲಿ ವೀರಬಾಹು