ಶಿಗ್ಗಾಂವಿ ನಗರವು ಹಾವೇರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. == ಚರಿತ್ರೆ == ಶಿಗ್ಗಾಂವ ತಾಲೂಕಿನಲ್ಲಿರುವ ವಿಶೇಷವೆಂದರೆ ಮೊದಲ ಮಹಮ್ಮದಿಯ ಕವಿ ಶಿಶುವಿನಹಾಳ ಶರೀಫಶಿವಯೊಗಿಗಳು ಜನಿಸಿದ ಸ್ಥಳ ಹಾಗೂ ಕನಕದಾಸರು ಜನಿಸಿದ ಬಾಡ ಗ್ರಾಮವು ಈ ತಾಲೂಕಿನಲ್ಲಿದೆ. ಜೊತೆಗೆ ಕ್ರೀಯಾಶೀಲ ಕನ್ನಡ ಸಾಹಿತ್ಯ ಪರಿ‍‍‍‌‍‍‍‍‍ಷತ್ತು ವಿವಿದ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.ಮನೆಯಂಗಳದಲ್ಲಿ ಸಾಹಿತ್ಯ ಸೌರಭ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ಕನ್ನಡ ಶಿಕ್ಷಕರಿಗಾಗಿ ಕನ್ನಡ ಕಮ್ಮಟ, ಪದವಿ ವಿದ್ಯಾರ್ಥಿಗಳಿಗಾಗಿ ಹಳಗನ್ನಡ ಓದು, ಪದವಿಪೂರ್ವ ಹಾಗೂ ಪ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ಕನ್ನಡ ಜಾಗೃತಿ ಅಭಿಯಾನ ಇವು ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಕಾರ್ಯಕ್ರಮಗಳಾಗಿವೆ ಸದ್ಯ ಅದರ ಅಧ್ಯಕ್ಷರಾಗಿ ನಾಗರಾಜ ಜಿ ದ್ಯಾಮನಕೊಪ್ಪ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತು ೨೦೧೭ ರಲ್ಲಿ ರಾಜ್ಯ ಮಾದರಿಯಲ್ಲಿ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಿತ್ತು ತಾಲೂಕಿನಲ್ಲಿ ವಿವಿದ ಸಂಘಟನೆಗಳು ಕ್ರೀಯಾಶೀಲವ಻ಗಿವೆ. ಮತ್ತು ಗೋಟಗೋಡಿಯ ಕಲಾವೈಭವ ಶಿಲ್ಪಗ್ರಾಮ ರಾಕಗಾರ್ಡನ ವಿಶಿಷ್ಠವಾಗಿದೆ. == ಕರ್ನಾಟಕ ಜಾನಪದ ವಿಶ್ವವಿದ್ಯಾಲಯ == ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಗೋಟಗೋಡಿಯಲ್ಲಿದೆ.