ಸಾವನದುರ್ಗವು ಭಾರತ ದೇಶದ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೫೫ ಕಿಮೀ ಪಶ್ಚಿಮದಲ್ಲಿರುವ ಮಾಗಡಿ ರಸ್ತೆಯ 12.919654° 77.292881°﻿ / 12.919654; 77.292881 ಎದುರಿಗಿರುವ ಒಂದು ಬೆಟ್ಟವಾಗಿದೆ. ಆ ಬೆಟ್ಟವು ಅದರ ಮೇಲಿರುವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ ಮತ್ತು ಏಷ್ಯಾದಲ್ಲೇ ಅತ್ಯಂದ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ೧೨೨೬ ಮೀಟರ್‌ಗಳಷ್ಟು ಎತ್ತರದಲ್ಲಿದೆ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಒಂದು ಭಾಗವಾಗಿ ರೂಪುಕೊಡುತ್ತದೆ. ಇದು ಪರ್ಯಾಯ ದ್ವೀಪದ ನೈಸ್‌ಗಳು, ಮೂಲ ಸ್ತರಪ್ರವಿಷ್ಟಾಗ್ನಿಶಿಲೆಗಳು ಮತ್ತು ಲ್ಯಾಟರೈಟ್‌ಗಳನ್ನು ಒಳಗೊಂಡಿದೆ. ಹತ್ತಿರದಲ್ಲಿ ಅರ್ಕಾವತಿ ನದಿಯು ತಿಪ್ಪಗೊಂಡನಹಳ್ಳಿ ಜಲಾಶಯದ ಮೂಲಕ ಮತ್ತು ಮಂಚನಬೆಲೆ ಅಣೆಕಟ್ಟಿನತ್ತ ಹರಿಯುತ್ತದೆ. == ಹೆಸರಿನ ಉಗಮ == ಸಾವನದುರ್ಗವು ಸ್ಥಳೀಯವಾಗಿ ಕರಿಗುಡ್ಡ (ಕಪ್ಪು ಬೆಟ್ಟ) ಮತ್ತು ಬಿಳಿಗುಡ್ಡ (ಬಿಳಿ ಬೆಟ್ಟ) ಎಂಬ ಹೆಸರು ಹೊಂದಿರುವ ಎರಡು ಬೆಟ್ಟಗಳಿಂದ ರೂಪುಗೊಂಡಿದೆ. ಈ ಬೆಟ್ಟದ ಹೆಸರಿನ ಆರಂಭಿದ ದಾಖಲೆಯು ಕ್ರಿ.ಶ. ೧೩೪೦ ರಲ್ಲಿ ಮಾಡಬಲುವಿನ ಹೊಯ್ಸಳ ಬಲ್ಲಾಳ ರ ಅವಧಿಯಲ್ಲಿ ಕಂಡುಬಂದಿದೆ, ಇಲ್ಲಿ ಇದನ್ನು ಸಾವಂಡಿ ಎಂದು ಕರೆಯಲಾಗುತ್ತದೆ. ಈ ಹೆಸರು ಅಚ್ಯುತರಾಯನ ಅಧೀನದ ಮಾಗಡಿಯ ಗವರ್ನರ್ ಸಾಮಂತರಾಯ ನಿಗೆ ಸೇರಿದ್ದೆಂದು ಹೇಳಲಾದ ಸಾಮಂತದುರ್ಗ ದಿಂದ ಹುಟ್ಟಿಕೊಂಡಿದೆಯೆಂದು ಮತ್ತೊಂದು ಅವಲೋಕನವು ಸೂಚಿಸುತ್ತದೆ, ಆದರೂ ಇದನ್ನು ದೃಢಪಡಿಸುವ ಯಾವುದೇ ಲಿಖಿತ ದಾಖಲೆಗಳಿಲ್ಲ. ಇದು ಕೆಂಪೆಗೌಡದಂತೆ ಮಾಗಡಿ ರಾಜರ ಎರಡನೇ ರಾಜಧಾನಿಯಾಗಿತ್ತು. ೧೬೩೮ ರಿಂದ ೧೭೨೮ ರವರೆಗೆ, ಮೈಸೂರು ಈ ಸ್ಥಳವನ್ನು ವಶಪಡಿಸಿಕೊಂಡಿತು ಮತ್ತು ದಳವಾಯಿ ದೇವರಾಜರು ನೆಲಪಟ್ಟಣದಲ್ಲಿ ಅರಮನೆಯನ್ನು ನಿರ್ಮಿಸಿಕೊಂಡು ಈ ಸ್ಥಳದಲ್ಲಿ ವಾಸಿಸಿದರು. ೧೭೯೧ ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಮೂರನೇ ಆಗ್ಲೊ-ಮೈಸೂರು ಯುದ್ಧದ ಸಂದರ್ಭದಲ್ಲಿ ಟಿಪ್ಪು ಸುಲ್ತಾನನ ಸೈನ್ಯದಿಂದ ಇದನ್ನು ವಶಪಡಿಸಿಕೊಂಡರು. ರಾಬರ್ಟ್ ಹೋಮ್ ಆತನ ಸೆಲೆಕ್ಟ್ ವ್ಯೂವ್ಸ್ ಇನ್ ಮೈಸೂರ್ ‌ನಲ್ಲಿ (೧೭೯೪) ಬೆಂಗಳೂರಿನಿಂದ ಬೆಟ್ಟದ ದೂರದ ದೃಶ್ಯಗಳನ್ನು ತೋರಿಸುತ್ತಾರೆ. ಆತ ಇದನ್ನು ಸಾವಿನದುರ್ಗ ಅಥವಾ ಫೋರ್ಟ್ ಆಫ್ ಡೆತ್ ಎಂದು ಕರೆದಿದ್ದಾರೆ. ಈ ಬೆಟ್ಟದ ತುದಿಯನ್ನು ತಲುಪಲು ಮೆಟ್ಟಿಲುಗಳಿರಲಿಲ್ಲ ಮತ್ತು ಇದರ ಸುತ್ತ ಬಿದಿರು ಮತ್ತು ಇತರ ಮರಗಳು ಆವರಿಸಿಕೊಂಡು ಒಂದು ತಡೆಗಟ್ಟನ್ನು ರೂಪಿಸಿದ್ದವು. ಈ ಪ್ರದೇಶದಲ್ಲಿ ಬೃಹತ್ ಶಿಲೆಯ ಹೂಳುವ ಸಮಾಧಿಗಳು ಕಂಡುಬಂದಿವೆ.. ಸಂಸ್ಕೃತದಲ್ಲಿ ಸಾವಣವೆಂದರೆ ಮೂರು ಬಾರಿ ಮಾಡುವ ವಿಧಿವಿಹಿತ ಕ್ರಮವೆಂದು ಅರ್ಥ. == ಪ್ರವಾಸೋದ್ಯಮ == ಸಾವನದುರ್ಗ ಬೆಟ್ಟಗಳಿಗೆ ಯಾತ್ರಾರ್ಥಿಗಳು ಆಗಿಂದಾಗ್ಗೆ ಹೋಗುತ್ತಿರುತ್ತಾರೆ. ಇವರು ಬೆಟ್ಟದ ಬುಡದಲ್ಲಿರುವ ಸಾವಂದಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಬರುತ್ತಾರೆ. ವಿಹಾರ ಪ್ರವಾಸಿಗಳು ಬೆಟ್ಟದ ನಿರ್ಮಲವೂ ಪ್ರಶಾಂತವೂ ಆದ ಪರಿಸರದಲ್ಲಿ ಸಮಯ ಕಳೆಯಲು ಬರುತ್ತಾರೆ. ಶಿಲಾ ಆರೋಹಿ, ಗುಹೆ ಅನ್ವೇಷಕರು ಮತ್ತು ಸಾಹಿಸಗಳು ಈ ಸ್ಥಳಕ್ಕೆ ಆಗಾಗ್ಗೆ ಬರುವ ಇತರರಾಗಿದ್ದಾರೆ. ಬಸ್ ಮಾರ್ಗ: ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಾಗಡಿ ರಸ್ತೆಗೆ ಹೋಗುವ ಬಸ್ ಹಿಡಿಯಬೇಕು. ಈ ಬಸ್ ಸಾಮಾನ್ಯವಾಗಿ ನಿಮ್ಮನ್ನು ನಗರದ ಮಿತಿಯೊಳಗೆ ಮಾಗಡಿ ರಸ್ತೆಯ ಒಂದು ಖಚಿತವಾದ ಸ್ಥಳದಲ್ಲಿ ಬಿಡುತ್ತದೆ. ಅಲ್ಲಿಂದ ನೀವು ಮಾಗಡಿ ರಸ್ತೆ ಜಂಕ್ಷನ್‌ಗೆ ಮತ್ತೊಂದು ಬಸ್ ಹಿಡಿಯಬೇಕು. ಅಲ್ಲಿಂದ ನೀವು ಸಾವನದುರ್ಗಕ್ಕೆ ಹೋಗಲು ಎಡಕ್ಕೆ ತಿರುಗಬೇಕು (ಆ ಸ್ಥಳದಿಂದ ೧೨ ಕಿಮೀ ದೂರವಿದೆ), ಇಲ್ಲಿಂದ ಹೊಸಪೇಟೆ ಗೇಟ್‌ಗೆ (ಸಾವನದುರ್ಗವು ಇಲ್ಲಿದೆಯೆಂದು ಹೇಳಬಹುದು) ಹೋಗಲು ಖಾಸಗಿ ಮತ್ತು ಬಸ್‌ಗಳು ಲಭ್ಯಯಿವೆ.ಬೆಂಗಳೂರಿನಿಂದ ಇಲ್ಲಿಗೆ ಹೋಗಲು ಒಟ್ಟು ಪ್ರಯಾಣ ಅವಧಿ ೨ ಗಂಟೆ ೧೫ ನಿಮಿಷಗಳು. (ನಿಮಗೆ ಬಸ್ ಸಿಗದಿದ್ದರೆ, ಈ ೧೨ ಕಿಮೀ ದೂರವನ್ನು ತಲುಪಲು ಆಟೊವನ್ನು ಬಳಸಬಹುದು). ರಾಮನಗರ ಒಂದಿಗೆ ಇದೂ ಸಹ ಡೇವಿಡ್ ಲೀನ್‌ನ ಚಲನಚಿತ್ರ ಎ ಪಾಸೇಜ್ ಟು ಇಂಡಿಯಾ ವನ್ನು ಚಿತ್ರೀಕರಿಸಲು ಬಳಸಿದ ಒಂದು ಸ್ಥಳವಾಗಿದೆ. == ಪ್ರಾಣಿ ಸಂಕುಲ == ಈ ಬೆಟ್ಟಗಳು ಅಳಿವಿನಂಚಿನಲ್ಲಿರುವ ಹಳದಿ-ಕತ್ತಿನ ಬುಲ್ಬುಲ್ಗಳಿಗೆ ನೆಲೆಯಾಗಿದೆ ಹಾಗೂ ಇವು ಹಿಂದೆ ಉದ್ದ-ಕೊಕ್ಕಿನ ರಣಹದ್ದುಗಳು ಮತ್ತು ಹಿಂಭಾಗ ಬಿಳಿಯಾಗಿರುವ ರಣಹದ್ದುಗಳಿಗೆ ಮನೆಯಾಗಿದ್ದವು. ಇಲ್ಲಿರುವ ಇತರ ವನ್ಯಜೀವಿಗಳೆಂದರೆ ಸ್ಲಾತ್ ಕರಡಿ ಮತ್ತು ಚಿರತೆ. == ಸಸ್ಯಸಂಪತ್ತು == ಈ ಪ್ರದೇಶದ ಸುತ್ತಲೂ ಕುರುಚಲು ಪೊದೆಗಳಿಂದ ಕೂಡಿದ ಕಾಡಿದೆ ಮತ್ತು ಒಣಗಿದ, ವರ್ಣಕ್ಕೊಮ್ಮೆ ಎಲೆ ಉದುರಿಸುವ ಅರಣ್ಯವು ಸುಮಾರು ೨೭ km² ಪ್ರದೇಶವನ್ನು ಆವರಿಸಿದೆ. ಆನೋಜೈಸಸ್-ಕ್ಲೋರೋಕ್ಸಿಲಾನ್ ಅಕೇಶಿಯ ಸರಣಿಯ ಪೊದೆ ಮತ್ತು ಮರಗಳ ಹುಲ್ಲುಗಾವಲೆಂದು ಪರಿಗಣಿಸಲಾಗುವ ಇದು ಹೆಚ್ಚಿನ ವೈವಿಧ್ಯತೆಯನ್ನು ಹೊಂದಿದೆ. ಅವನತಿ ಹೊಂದಿರುವ ಈ ಅರಣ್ಯವು ಸುಮಾರು ೫೯ ಮರಗಳು ಮತ್ತು ೧೧೯ ಪೊದೆ ಜಾತಿಗಳನ್ನು ಹೊಂದಿದೆ. ಇಲ್ಲಿ ಕಂಡುಬಂದ ಕೆಲವು ಸಸ್ಯ ಜಾತಿಗಳೆಂದರೆ: == ಉಲ್ಲೇಖಗಳು == == ಬಾಹ್ಯ ಕೊಂಡಿಗಳು‌ == ಬರ್ಡ್ಸ್ ಐ ವ್ಯೂ ಆಫ್ ಸಾವನದುರ್ಗ ://..//p2i/marabar_2. ಎಕನಾಮಿಕಲಿ ಇಂಪಾರ್ಟೆಂಟ್ ಫ್ಲೋರ ಆಫ್ ದಿ ರೀಜನ್