ಸೌತಡ್ಕ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಿನ೦ದ ಸುಮಾರು 3 ಕಿಮೀ ದೂರದಲ್ಲಿದೆ, ಮತ್ತು ಇದು ಯಾತ್ರಾ ಕೇಂದ್ರವಾಗಿದೆ.ಇಲ್ಲಿ ಮಹಾಗಣಪತಿ ದೇವರು ಗರ್ಭಗುಡಿಯ ರಚನೆ ಇಲ್ಲದೆ ಮುಕ್ತವಾದ ವಾತವರಣದಲ್ಲಿದೆ. ಇದರಿಂದಾಗಿ ಈ ಸ್ಥಾನ ಅಪೂರ್ವತೆಯನ್ನು ಪಡೆದಿದೆ. ಈ ದೇವಾಲಯ ಧರ್ಮಸ್ಥಳದಿ೦ದ 16 ಕಿಲೋಮೀಟರ್ ದೂರದಲ್ಲಿದೆ. ದೇವಸ್ಥಾನದ ಬಹಳಷ್ಟು ಗಂಟೆಗಳಿಂದ ಅಲಂಕರಿಸಲ್ಪಟ್ಟಿದೆ. ಮುಖ್ಯವಾಗಿ,ಇವು ಆರಾಧಕರು ನೀಡುವ ವಿಶೇಷ ಹರಕೆಗಳಾಗಿವೆ. ದೇವಾಲಯದ ಒಳಗೆ ಬಹಳಷ್ಟು ಕೋತಿಗಳನ್ನು ಕಾಣಬಹುದು.ಜನವರಿ ತಿಂಗಳಲ್ಲಿ ಪ್ರತಿ ವರ್ಷ ಮಹಾಪೂಜೆ ನಡೆಸಲಾಗುತ್ತದೆ. ದೇವಾಲಯಕ್ಕೆ ಬ೦ದ ಭಕ್ತರಿಗೆ ಎಲ್ಲಾ ದಿನಗಳಲ್ಲಿಯೂ ಅನ್ನದಾನ ಇರುತ್ತದೆ.ಇಲ್ಲಿ೦ದ ೬ಕೀ.ಮೀ. ದೂರದಲ್ಲಿ ಕಪಿಲ ನದಿ ಹರಿಯುತ್ತಿದೆ.ಇದು ಸೊಂಪಾದ ಹಸಿರಿನಿ೦ದ ವಿಸ್ತಾರವಾಗಿದೆ. ಇಂತಹ ನೆಮ್ಮದಿಯ ವಾತಾವರಣದ ನಡುವೆ ಪ್ರಕೃತಿಯ ಮಡಿಲಲ್ಲಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. == ಅಲ್ಲಿ ತಲುಪುವುದು ಹೇಗೆ? == ಧರ್ಮಸ್ಥಳದಿ೦ದ ೧೬ ಕಿಮೀ , ಸುಬ್ರಹ್ಮಣ್ಯದಿ೦ದ ೪೫ ಕಿ.ಮೀ ,ಮಂಗಳೂರಿನಿಂದ ೮೨ ಕಿಮೀ ಮತ್ತು ಕೊಕ್ಕಡದಿ೦ದ 2 ಕಿ.ಮೀ. ಮತ್ತು ಪಟ್ರಮೆಯಿ೦ದ 6 ಕಿಲೊಮೀಟರ್ ಇದೆ . == ಉಲ್ಲೇಖಗಳು ==