ಹಿರಿಯಡ್ಕ (ತುಳುವಿನಲ್ಲಿ ಪೆರಿಯಡ್ಕ) ಭಾರತದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ಉಡುಪಿಗೆ ಸಾಕಷ್ಟು ಹತ್ತಿರದಲ್ಲಿದೆ. ಇದು ಉಡುಪಿಯಿಂದ ೧೫ ಕಿ.ಮೀ ಮತ್ತು ಕಾರ್ಕಳದಿಂದ ೨೪ ಕಿ.ಮೀ ದೂರದಲ್ಲಿದೆ. ಇದು ಉಡುಪಿ- ಹೆಬ್ರಿ ರಸ್ತೆಯಲ್ಲಿದೆ ಮತ್ತು ಪ್ರತಿ ವರ್ಷ ಏಪ್ರಿಲ್- ಮೇ ತಿಂಗಳಲ್ಲಿ ನಡೆಯುವ ಸಿರಿ ಉತ್ಸವ/ಸಿರಿ ಜಾತ್ರೆ ಎಂಬ ಉತ್ಸವದ ಜಾತ್ರೆಗೆ ಹೆಸರುವಾಸಿಯಾಗಿದೆ. ಈ ಜಾತ್ರೆಗೆ ಉಡುಪಿ, ಮಂಗಳೂರು, ಆಗುಂಬೆ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಾರೆ. ಸ್ವರ್ಣಾ ನದಿಯು ಹಿರಿಯಡ್ಕದಿಂದ ಸುಮಾರು ೧ ಕಿ.ಮೀ ದೂರದಲ್ಲಿ ಹರಿಯುತ್ತದೆ. ಶ್ರೀ ವೀರಭದ್ರ ದೇವಸ್ಥಾನದ ಜೀರ್ಣೋದ್ಧಾರದ ನಂತರ, ಹಿರಿಯಡ್ಕ ತನ್ನ ನೂತನ ಹಾಗೂ ಆಕರ್ಷಕ ಕರಕುಶಲ ಕೆಲಸಗಳಿಂದಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. == ಉಲ್ಲೇಖಗಳು ==