ಹೃದಯ ಸ್ನಾಯುವಿನ ಊತಕ ಸಾವು ( ) ಅಥವಾ ತೀವ್ರತರದ ಹೃದಯ ಸ್ನಾಯುವಿನ ಊತಕ ಸಾವು () ಎಂದರೆ ಹೃದಯದ ಒಂದು ಭಾಗಕ್ಕೆ ರಕ್ತ ಪೂರೈಕೆಯಲ್ಲಿ ಅಡ್ಡಿಯುಂಟಾಗಿ ಅಲ್ಲಿನ ಜೀವಕೋಶಗಳು ಸಾಯುವುದು ಎಂದರ್ಥ, ಇದನ್ನು ಸಾಮಾನ್ಯವಾಗಿ ಹೃದಯಾಘಾತ ಎಂದು ಕರೆಯುತ್ತಾರೆ. ಇದಕ್ಕೆ ಮುಖ್ಯ ಕಾರಣ ಸುಲಭವಾಗಿ ಘಾಸಿಗೊಳಗಾಗುವ ಅಪಧಮನಿಯ-ಕಾಠಿಣ್ಯದ ಶೇಖರಣೆ (ತಂತುಯುಕ್ತವಾದ ಊತಕದ ಶೇಖರಣೆ)ಯ ಛಿದ್ರವಾಗುವುದರಿಂದ ಉಂಟಾಗುವ ಪರಿಧಮನಿಯ ಮುಚ್ಚಿಕೊಳ್ಳುವಿಕೆ (ತಡೆಗಟ್ಟುವಿಕೆ). ಈ ಶೇಖರಣೆಯು ಅಪಧಮನಿಯ ಗೋಡೆಯಲ್ಲಿ ಲಿಪಿಡ್‌ಗಳು (ಕೊಬ್ಬಿನಾಮ್ಲಗಳು) ಮತ್ತು ಬಿಳಿರಕ್ತಕಣಗಳ (ವಿಶೇಷವಾಗಿ ಬೃಹತ್ಕಣಗಳು) ಅಸ್ಥಿರ ಸಂಗ್ರಹವಾಗಿದೆ. ಇದರಿಂದ ಉಂಟಾಗುವ ರಕ್ತದ ಕೊರತೆ ಮತ್ತು ಆಮ್ಲಜನಕದ ಕ್ಷೀಣತೆಯನ್ನು ದೀರ್ಘಕಾಲದವರೆಗೆ ಚಿಕಿತ್ಸೆ ನೀಡದೆ ಹಾಗೆ ಬಿಟ್ಟರೆ, ಹೃದಯದ ಸ್ನಾಯು ಅಂಗಾಶವು (ಹೃದಯ ಸ್ನಾಯು) ಹಾನಿಗೊಳಗಾಗಬಹುದು ಅಥವಾ ಸಾಯಬಹುದು (ಊತಕ ಸಾವು). ತೀವ್ರ ಹೃದಯ ಸ್ನಾಯುವಿನ ಊತಕ ಸಾವಿನ ಮಾದರಿ ರೋಗಲಕ್ಷಣಗಳೆಂದರೆ ಹಠಾತ್ ಎದೆ ನೋವು (ವಿಶಿಷ್ಟವಾಗಿ ಎಡ ಬಾಹುವಿನಲ್ಲಿ ಅಥವಾ ಕತ್ತಿನ ಎಡಭಾಗದಲ್ಲಿ), ಉಸಿರಾಟದ ತೊಂದರೆ, ವಾಕರಿಕೆ, ವಾಂತಿ ಮಾಡುವುದು, ನಾಡಿ ಮಿಡಿತ, ಬೆವರುವುದು ಮತ್ತು ಆತಂಕ (ಇದನ್ನು ಹೆಚ್ಚಾಗಿ ಸಾವು ಸನ್ನಿಹಿತವಾಗಿದೆ ಎಂಬ ಭಾವನೆ ಉಂಟಾಗುವುದೆಂದು ಹೇಳಲಾಗುತ್ತದೆ). ಮಹಿಳೆಯರು ಪುರುಷರಿಗಿಂತ ಕಡಿಮೆ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ, ಇವರಲ್ಲಿ ಹೆಚ್ಚಾಗಿ ಉಸಿರಾಟದ ತೊಂದರೆ, ನಿಶ್ಶಕ್ತಿ, ಅಜೀರ್ಣತೆ ಮತ್ತು ಬಳಲಿಕೆ ಮೊದಲಾದವು ಕಂಡುಬರುತ್ತವೆ. ಹೃದಯ ಸ್ನಾಯುವಿನ ಊತಕ ಸಾವುಗಳಲ್ಲಿ ಸರಿಸುಮಾರು ಕಾಲುಭಾಗವು ಎದೆ ನೋವು ಅಥವಾ ಯಾವುದೇ ಇತರ ರೋಗಲಕ್ಷಣಗಳಿಲ್ಲದೆ 'ಸದ್ದಿಲ್ಲದೆ' ಆಗುತ್ತದೆ. ಹೃದಯ ಸ್ನಾಯುವಿನ ಹಾನಿಯನ್ನು ಕಂಡುಹಿಡಿಯಲು ಲಭ್ಯವಾಗಿರುವ ರೋಗನಿರ್ಣಯಿಸುವ ಪರೀಕ್ಷೆಗಳೆಂದರೆ ಎಲೆಕ್ಟ್ರೊಕಾರ್ಡಿಯೊಗ್ರ್ಯಾಮ್ (ವಿದ್ಯುತ್ ಹೃಲ್ಲೇಖ) (), ಎಕೊಕಾರ್ಡಿಯೊಗ್ರಫಿ ಮತ್ತು ವಿವಿಧ ರಕ್ತ ಪರೀಕ್ಷೆಗಳು. ಹೆಚ್ಚಾಗಿ ಬಳಸಲಾಗುವ ಗುರುತುಗಳೆಂದರೆ ಕ್ರಿಯೇಟಿನ್-ಕಿನೇಸ್- (-) ಅಂಶ ಮತ್ತು ಟ್ರೋಪೋನಿನ್ ಮಟ್ಟ. ತೀವ್ರ ಹೃದಯ ಸ್ನಾಯುವಿನ ಊತಕ ಸಾವು ಸಂಭವಿಸಬಹುದೆಂಬ ಸಂಶಯ ಬಂದಾಗ ತಕ್ಷಣವೇ ಆಮ್ಲಜನಕ, ಆಸ್ಪರಿನ್ ಮತ್ತು ನೈಟ್ರೊಗ್ಲಿಸರಿನ್ಅನ್ನು ಪೂರೈಸಬೇಕು. ( ಎಲಿವೇಶನ್ ) ನ ಹೆಚ್ಚಿನ ರೋಗಿಗಳಿಗೆ ತ್ರೋಂಬೋಲಿಸಿಸ್ ಅಥವಾ ಚರ್ಮೀಯ ಪರಿಧಮನಿಯ ಮಧ್ಯಸ್ಥಿಕೆ () ಯಿಂದ ಚಿಕಿತ್ಸೆ ನೀಡಲಾಗುತ್ತದೆ. (ನಾನ್- ಎಲಿವೇಶನ್ ) ಗೆ ಔಷಧಿಯಿಂದ ಚಿಕಿತ್ಸೆ ನೀಡಬೇಕು, ಆದರೂ ಆಸ್ಪತ್ರೆಗೆ ಸೇರಿಸಿದಾಗ ಯನ್ನೂ ಬಳಸಲಾಗುತ್ತದೆ. ಅನೇಕ ತಡೆಗಳನ್ನು ಹೊಂದಿದ್ದು, ಅವು ಹೆಚ್ಚುಕಡಿಮೆ ಸ್ಥಿರವಾಗಿರುವವರಲ್ಲಿ ಅಥವಾ ಕೆಲವು ತುರ್ತು ರೋಗಿಗಳಲ್ಲಿ ಉಪಮಾರ್ಗ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಹೃದಯಾಘಾತವು ಪ್ರಪಂಚದಾದ್ಯಂತ ಪುರುಷರು ಮತ್ತು ಮಹಿಳೆಯರಿಗಿಬ್ಬರಿಗೂ ಸಾವನ್ನು ತರುವ ಪ್ರಮುಖ ಕಾರಣವಾಗಿದೆ. ಪ್ರಮುಖ ಅಪಾಯಕಾರಿ ಕಾರಣಗಳೆಂದರೆ ಹಿಂದಿನ ಹೃದಯ ರಕ್ತನಾಳದ ಕಾಯಿಲೆ, ವಯಸ್ಸಿನ ಏರಿಕೆ, ಧೂಮಪಾನ, ರಕ್ತದಲ್ಲಿ ಕೆಲವು ಲಿಪಿಡ್‌ಗಳ (ಟ್ರೈಗ್ಲಿಸರೈಡ್‌ಗಳು, ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್) ಪ್ರಮಾಣ ಹೆಚ್ಚಾಗುವುದು ಮತ್ತು ಹೆಚ್ಚಿನ-ಸಾಂದ್ರತೆಯ ಲಿಪೊಪ್ರೋಟೀನ್‌ನ () ಪ್ರಮಾಣ ಕಡಿಮೆಯಾಗುವುದು, ಮಧುಮೇಹ, ಹೆಚ್ಚಿನ ರಕ್ತದೊತ್ತಡ, ಸ್ಥೂಲಕಾಯತೆ, ದೀರ್ಘಕಾಲದ ಮೂತ್ರಜನಕಾಂಗದ ರೋಗ, ಹೃದಯ ಕಾರ್ಯ-ವಿಫಲತೆ, ವಿಪರೀತ ಮದ್ಯಪಾನ ಸೇವನೆ, ಕೆಲವು ಮಾದಕ ವಸ್ತುಗಳ ಬಳಕೆ (ಉದಾಹರಣೆಗಾಗಿ ಕೊಕೇನ್ ಮತ್ತು ಮೆತಾಂಪೆಟಮಿನ್) ಹಾಗೂ ದೀರ್ಘಕಾಲದ ಹೆಚ್ಚಿನ ಒತ್ತಡ. == ವರ್ಗೀಕರಣ == ತೀವ್ರ ಹೃದಯ ಸ್ನಾಯುವಿನ ಊತಕ ಸಾವಿನಲ್ಲಿ ಎರಡು ಪ್ರಕಾರಗಳಿವೆ: ಟ್ರಾನ್ಸ್‌ಮುರಲ್‌: ಇದು ಪ್ರಮುಖ ಪರಿಧಮನಿಯನ್ನು ಒಳಗೊಂಡ ಅಪಧಮನಿ-ಕಾಠಿನ್ಯದೊಂದಿಗೆ ಸಂಬಂಧಿಸಿದೆ. ಇದನ್ನು ಮುಂಭಾಗದ, ಹಿಂಭಾಗದ ಅಥವಾ ಕೆಳಗಿನ ಎಂದು ಉಪಭಾಗಗಳಾಗಿ ವಿಂಗಡಿಸಬಹುದು. ಟ್ರಾನ್ಸ್‌ಮುರಲ್‌ ಸತ್ತ ಊತಕಗಳು ಹೃದಯ ಸ್ನಾಯುವಿನ ಸಂಪೂರ್ಣ ಪದರದಾದ್ಯಂತ ಹರಡುತ್ತವೆ ಮತ್ತು ಅವು ಸಾಮಾನ್ಯವಾಗಿ ಆ ಭಾಗದ ರಕ್ತ ಪೂರೈಕೆಯ ಸಂಪೂರ್ಣ ತಡೆಯಿಂದಾಗಿ ಉಂಟಾಗುತ್ತವೆ. ಸಬೆಂಡೊಕಾರ್ಡಿಯಲ್: ಇದು ಎಡ ಕುಹರ, ಕುಹರದ ನಡುತಡಿಕೆ ಅಥವಾ ತೊಟ್ಟಿನ ಸ್ನಾಯುಗಳ ಸಬೆಂಡೊಕಾರ್ಡಿಯಲ್ ಪೊರೆಯ ಒಂದು ಸಣ್ಣ ಭಾಗವನ್ನು ಒಳಗೊಳ್ಳುತ್ತದೆ. ಪರಿಧಮನಿಗಳು ಕಿರಿದಾಗುವುದರಿಂದ ರಕ್ತ ಪೂರೈಕೆಯ ಕ್ಷೀಣತೆಯಿಂದಾಗಿ ಸಬೆಂಡೊಕಾರ್ಡಿಯಲ್ ಸತ್ತ ಊತಕಗಳು ಉಂಟಾಗುತ್ತವೆ. ಸಬೆಂಡೊಕಾರ್ಡಿಯಲ್ ಭಾಗವು ಹೃದಯದ ರಕ್ತ ಪೂರೈಕೆಯಿಂದ ತುಂಬ ದೂರವಿರುತ್ತದೆ ಮತ್ತು ಈ ಪ್ರಕಾರದ ರೋಗಲಕ್ಷಣಕ್ಕೆ ಬೇಗನೆ ತುತ್ತಾಗುತ್ತದೆ. ಪ್ರಾಯೋಗಿಕವಾಗಿ, ಹೃದಯ ಸ್ನಾಯುವಿನ ಊತಕ ಸಾವನ್ನು ಇಸಿಜಿ ಬದಲಾವಣೆಗಳ ಆಧಾರದಲ್ಲಿ ಎಲಿವೇಶನ್ () ವರ್ಸಸ್ ನಾನ್- ಎಲಿವೇಶನ್ (ನಾನ್-) ಎಂಬುದಾಗಿ ವರ್ಗೀಕರಿಸಬಹುದು. "ಹೃದಯಾಘಾತ" ಪದವನ್ನು ಕೆಲವೊಮ್ಮೆ ಹಠಾತ್ ಹೃದಯ ಸ್ನಾಯುಗಳ ಸಾವನ್ನು ವಿವರಿಸಲು ತಪ್ಪಾಗಿ ಬಳಸಲಾಗುತ್ತದೆ, ಇದು ತೀವ್ರ ಹೃದಯ ಸ್ನಾಯುವಿನ ಊತಕ ಸಾವಿನಿಂದ ಉಂಟಾಗಬಹುದು ಅಥವಾ ಅದರಿಂದಲ್ಲದೆಯೂ ಉಂಟಾಗಬಹುದು. ಹೃದಯಾಘಾತವು ಭಿನ್ನವಾಗಿದೆ. ಆದರೆ ಇದು ಹೃದಯ ಸ್ತಂಭನದಿಂದ, ಅಂದರೆ ಹೃದಯಬಡಿತ ನಿಲ್ಲುವುದು, ಮತ್ತು ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನದಿಂದ, ಅಂದರೆ ಹೃದಯಬಡಿತವು ಅಪಸಾಮಾನ್ಯವಾಗಿರುವುದರಿಂದ ಉಂಟಾಗಬಹುದು. ಇದು ಹೃದಯ ಕಾರ್ಯ-ವಿಫಲತೆಗಿಂತಲೂ ವಿಭಿನ್ನವಾಗಿದೆ, ಇದರಲ್ಲಿ ಹೃದಯದ ಪಂಪುಮಾಡುವ ಕ್ರಿಯೆಯು ದುರ್ಬಲಗೊಳ್ಳುತ್ತದೆ; ತೀವ್ರ ಹೃದಯ ಸ್ನಾಯುವಿನ ಊತಕ ಸಾವು ಹೃದಯದ ಕಾರ್ಯ ವಿಫಲತೆಗೆ ಕಾರಣವಾಗಬಹುದು, ಆದರೆ ಅಗತ್ಯವಾಗಿ ಅಲ್ಲ. ೨೦೦೭ರ ಒಮ್ಮತ ದಾಖಲೆಯು ಹೃದಯ ಸ್ನಾಯುವಿನ ಊತಕ ಸಾವನ್ನು ಐದು ಪ್ರಮುಖ ಪ್ರಕಾರಗಳಾಗಿ ವರ್ಗೀಕರಿಸುತ್ತದೆ: ಪ್ರಕಾರ ೧ – ಶೇಖರಣೆಯ ಸವೆತ ಮತ್ತು/ಅಥವಾ ಛಿದ್ರ, ಬಿರುಕು ಅಥವಾ ತುಂಡರಿಕೆ ಮೊದಲಾದ ಪ್ರಾಥಮಿಕ ಪರಿಧಮನಿಯ ಘಾಸಿಗಳಿಂದಾಗಿ, ರಕ್ತ-ಕೊರತೆಯೊಂದಿಗೆ ಸಂಬಂಧಿಸಿದ ತಡೆಯಿಲ್ಲದ ಹೃದಯ ಸ್ನಾಯುವಿನ ಊತಕ ಸಾವು. ಪ್ರಕಾರ ೨ – ಪರಿಧಮನಿ ಸೆಡೆತ, ಪರಿಧಮನಿಯ ಧಮನಿರೋಧ, ರಕ್ತಹೀನತೆ, ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನ, ಅಧಿಕ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡ ಮೊದಲಾದವುಗಳ ಕಾರಣದಿಂದ ಹೆಚ್ಚಿದ ಆಮ್ಲಜನಕ ಬೇಡಿಕೆ ಅಥವಾ ಕ್ಷೀಣಿಸಿದ ಪೂರೈಕೆಯಿಂದಾಗಿ, ರಕ್ತ-ಕೊರತೆಗೆ ನೇರವಾಗಿ ಸಂಬಂಧಿಸಿರದ ಹೃದಯ ಸ್ನಾಯುವಿನ ಊತಕ ಸಾವು. ಪ್ರಕಾರ ೩ – ಹೃದಯ-ಸ್ತಂಭನವನ್ನೂ ಒಳಗೊಂಡು ಹಠಾತ್ ಅನಿರೀಕ್ಷಿತ ಹೃದಯ ಸ್ನಾಯುಗಳ ಸಾವು. ಇದು ಹೆಚ್ಚಾಗಿ ಹೃದಯ ಸ್ನಾಯುವಿನ ರಕ್ತ-ಕೊರತೆಯನ್ನು ಸೂಚಿಸುವ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಇದನ್ನು ಹೊಸ ಉನ್ನತಿ ಅಥವಾ ಹೊಸ ನಿಂದ ಕಂಡುಹಿಡಿಯಬಹುದು ಅಥವಾ ಏಂಜಿಯೊಗ್ರಫಿ ಮತ್ತು/ಅಥವಾ ಶವಪರೀಕ್ಷೆಯಿಂದ ಪರಿಧಮನಿಯಲ್ಲಿ ಗರಣೆಯು ಕಂಡುಬಂದರೆ ಈ ರೋಗಲಕ್ಷಣವಿದೆ ಎಂಬ ನಿರ್ಣಯಕ್ಕೆ ಬರಬಹುದು. ಆದರೆ ರಕ್ತ ಮಾದರಿಗಳನ್ನು ಪಡೆಯುವುದಕ್ಕಿಂತ ಮೊದಲೇ ಅಥವಾ ರಕ್ತದಲ್ಲಿ ಹೃದಯ ಸ್ನಾಯುಗಳ ಜೈವಿಕ-ಗುರುತುಗಳು ಕಂಡುಬರುವುದಕ್ಕಿಂತ ಮೊದಲೇ ಇವುಗಳ ಸಾವು ಸಂಭವಿಸಬಹುದು. ಪ್ರಕಾರ ೪ – ಪರಿಧಮನಿಯ ಆಂಜಿಯೊಪ್ಲಾಸ್ಟಿ ಅಥವಾ ಸ್ಟೆಂಟ್ ಒಂದಿಗೆ ಸಂಬಂಧಿಸಿರುತ್ತದೆ: ಪ್ರಕಾರ ೪a – ನೊಂದಿಗೆ ಸಂಬಂಧಿಸಿದ ಹೃದಯ ಸ್ನಾಯುವಿನ ಊತಕ ಸಾವು. ಪ್ರಕಾರ ೪b – ಸ್ಟೆಂಟ್ ಘನೀಭವನದೊಂದಿಗೆ ಸಂಬಂಧಿಸಿದ ಹೃದಯ ಸ್ನಾಯುವಿನ ಊತಕ ಸಾವು, ಇದನ್ನು ಏಂಜಿಯೊಗ್ರಫಿ ಅಥವಾ ಶವಪರೀಕ್ಷೆಯಿಂದ ಕಂಡುಹಿಡಿಯಬಹುದು. ಪ್ರಕಾರ ೫ – ನೊಂದಿಗೆ ಸಂಬಂಧಿಸಿದ ಹೃದಯ ಸ್ನಾಯುವಿನ ಊತಕ ಸಾವು. == ಚಿಹ್ನೆಗಳು ಮತ್ತು ರೋಗಲಕ್ಷಣಗಳು == ಹೃದಯ ಸ್ನಾಯುವಿನ ಊತಕ ಸಾವಿನ () ರೋಗಲಕ್ಷಣಗಳು ಸಾಮಾನ್ಯವಾಗಿ ಕ್ರಮಕ್ರಮವಾಗಿ, ಕೆಲವು ನಿಮಿಷಗಳವರೆಗೆ ಮತ್ತು ವಿರಳವಾಗಿ ಕ್ಷಣಮಾತ್ರದಲ್ಲಿ ಕಂಡುಬರುತ್ತವೆ. ಎದೆ ನೋವು ತೀವ್ರ ಹೃದಯ ಸ್ನಾಯುವಿನ ಊತಕ ಸಾವಿನ ಹೆಚ್ಚು ಸಾಮಾನ್ಯ ಲಕ್ಷಣವಾಗಿದೆ ಮತ್ತು ಈ ನೋವಿನ ಸಂದರ್ಭದಲ್ಲಿ ಬಿಗಿಯಾಗಿರುವಂತೆ, ಒತ್ತಿದಂತೆ ಅಥವಾ ಹಿಸುಕಿದಂತೆ ಅನುಭವವಾಗುತ್ತದೆ. ಹೃದಯದ ಸ್ನಾಯುವಿನ ರಕ್ತಕೊರೆಯಿಂದ (ರಕ್ತ ಮತ್ತು ಆಮ್ಲಜನಕ ಪೂರೈಕೆಯ ಕೊರತೆ) ಉಂಟಾಗುವ ಎದೆನೋವನ್ನು ಎದೆಸೆಳೆತ ಎಂದು ಕರೆಯಲಾಗುತ್ತದೆ. ನೋವು ಹೆಚ್ಚಾಗಿ ಎಡ ಬಾಹುವಿಗೆ ಹರಡುತ್ತದೆ, ಕೆಲವೊಮ್ಮೆ ಕೆಳ ದವಡೆ, ಕತ್ತು, ಬಲ ಬಾಹು, ಬೆನ್ನು ಮತ್ತು ಮೇಲುಹೊಟ್ಟೆಗೂ ಪಸರಿಸಬಹುದು, ಮೇಲುಹೊಟ್ಟೆಯಲ್ಲಿ ಇದು ಉರಿಯನ್ನು ಉಂಟುಮಾಡಬಹುದು. ಲೆವಿನ್‌ನ ಚಿಹ್ನೆ ಕಂಡುಬಂದರೆ ರೋಗಿಗಳು ಎದೆಮೂಳೆಗೆ ತಮ್ಮ ಮುಷ್ಟಿಯನ್ನು ಬಿಗಿಹಿಡಿದುಕೊಂಡು ಎದೆನೋವನ್ನು ನಿಯಂತ್ರಿಸಿಕೊಳ್ಳುತ್ತಾರೆ, ಈ ಚಿಹ್ನೆಯನ್ನು ಹೃದಯ ಸ್ನಾಯುವಿನ ಎದೆ-ನೋವಿನ ಮುನ್ಸೂಚನೆಯೆಂದು ತಿಳಿಯಲಾಗುತ್ತದೆ. ಆದರೆ ಭವಿಷ್ಯದ ವೀಕ್ಷಣೆಯ ಅಧ್ಯಯನವೊಂದು, ಇದು ಕಡಿಮೆ ಧನಾತ್ಮಕ ಮುನ್ಸೂಚನೆಯನ್ನು ಹೊಂದಿದೆಯೆಂದು ತೋರಿಸಿಕೊಟ್ಟಿದೆ. ಹೃದಯಕ್ಕೆ ಆದ ಹಾನಿಯು ಎಡ ಕುಹರದ ಪ್ರಭಾವವನ್ನು ಮಿತಿಗೊಳಿಸಿದಾಗ ಉಸಿರಾಟದ ತೊಂದರೆ (ಡಿಸ್‌ಪ್ನೀಯ) ಕಂಡುಬರುತ್ತದೆ, ಇದು ಎಡ ಕುಹರದ ವಿಫಲತೆ ಮತ್ತು ಶ್ವಾಸಕೋಶದ ಇಡೀಮ (ದ್ರವಶೋಥ) ವನ್ನು ಉಂಟುಮಾಡುತ್ತದೆ. ಇತರ ರೋಗಲಕ್ಷಣಗಳೆಂದರೆ ಡಯಾಫೊರೆಸಿಸ್ (ವಿಪರೀತ ಬೆವರುವುದು), ನಿಶ್ಶಕ್ತಿ, ತಲೆಸುತ್ತುವುದು, ವಾಕರಿಕೆ, ವಾಂತಿ ಮಾಡುವುದು ಮತ್ತು ನಾಡಿ ಮಿಡಿತ. ಈ ರೋಗಲಕ್ಷಣಗಳು ಅನುವೇದನ ನರವ್ಯೂಹದಿಂದ ಕ್ಯಾಟೆಕೊಲಮೈನ್‌ಗಳ ಭಾರಿ ಹೆಚ್ಚಳದಿಂದ ಉಂಟಾಗುತ್ತವೆ, ಇದು ಹೃದಯ ಸ್ನಾಯುವಿನ ಅಪಸಾಮಾನ್ಯ ಕ್ರಿಯೆಯಿಂದ ಉಂಟಾಗುವ ರಕ್ತ-ಚಲನೆಯ ವೈಪರಿತ್ಯವಾಗಿದೆ ಮತ್ತು ನೋವಿಗೆ ಪ್ರತಿಯಾಗಿ ಕಂಡುಬರುತ್ತದೆ. ಹೃದಯ ಸ್ನಾಯುವಿನ ಊತಕ ಸಾವಿನಲ್ಲಿ ಪ್ರಜ್ಞೆ ಕಳೆದುಕೊಳ್ಳುವುದು (ಇದು ಅಸಮರ್ಪಕ ಮಿದುಳಿನ ವ್ಯಾಪನ ಮತ್ತು ಹೃದಯ-ಸ್ತಂಭನದಿಂದ ಉಂಟಾಗುತ್ತದೆ) ಹಠಾತ್ ಸಾವು (ಇದು ಹೆಚ್ಚಾಗಿ ಕುಹರದ ಕಂಪನದಿಂದ ಉಂಟಾಗುತ್ತದೆ) ಸಂಭವಿಸಬಹುದು. ಪುರುಷರು ಮತ್ತು ಸಣ್ಣ ವಯಸ್ಸಿನ ರೋಗಿಗಳಿಗಿಂತ ಮಹಿಳೆಯರು ಮತ್ತು ವಯಸ್ಸಾದ ರೋಗಿಗಳಲ್ಲಿ ಹೆಚ್ಚಾಗಿ ವಿಲಕ್ಷಣ ರೋಗಲಕ್ಷಣಗಳು ಕಂಡುಬರುತ್ತವೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಸಂಖ್ಯೆಯ ರೋಗಲಕ್ಷಣಗಳನ್ನು ಪ್ರಕಟಿಸುತ್ತಾರೆ (ಮಹಿಳೆಯರಲ್ಲಿ ಸರಾಸರಿ ೨.೬ ರೋಗಲಕ್ಷಣಗಳು ಕಂಡುಬಂದರೆ ಪುರುಷರಲ್ಲಿ ೧.೮ ನಷ್ಟು ಕಂಡುಬರುತ್ತವೆ). ಮಹಿಳೆಯರಲ್ಲಿ ನ ಸಾಮಾನ್ಯ ರೋಗಲಕ್ಷಣಗಳೆಂದರೆ ಡಿಸ್‌ಪ್ನೀಯ (ಉಸಿರಾಟದ ತೊಂದರೆ), ನಿಶ್ಶಕ್ತಿ ಮತ್ತು ಬಳಲಿಕೆ. ಬಳಲಿಕೆ, ನಿದ್ರಾ ಭಂಗಗಳು ಮತ್ತು ಡಿಸ್‌ಪ್ನೀಯ ಮೊದಲಾದವನ್ನು ಸಾಧಾರಣವಾಗಿ ಕಂಡುಬರುವ ರೋಗಲಕ್ಷಣಗಳೆಂದು ವರದಿ ಮಾಡಲಾಗುತ್ತದೆ, ಇವು ಪ್ರಾಯೋಗಿಕವಾಗಿ ಖಾತ್ರಿಪಡಿಸಲಾದ ನಿಜವಾದ ರಕ್ತದ ಕೊರತೆ ಲಕ್ಷಣವು ಕಂಡುಬರುವುದಕ್ಕಿಂತ ಮೊದಲು ಸುಮಾರು ಒಂದು ತಿಂಗಳವರೆಗೆ ವ್ಯಕ್ತವಾಗಬಹುದು. ಪುರುಷರಿಗಿಂತ ಮಹಿಳೆಯರಲ್ಲಿ ಎದೆ ನೋವು ಪರಿಧಮನಿಯ ರಕ್ತಕೊರತೆಯ ಮುನ್ಸೂಚನೆಯಾಗಿರುವ ಸಂಭವವು ಕಡಿಮೆಯಾಗಿರುತ್ತದೆ. ಸರಿಸುಮಾರು ನಾಲ್ಕನೇ ಒಂದರಷ್ಟು ಹೃದಯ ಸ್ನಾಯುವಿನ ಊತಕ ಸಾವುಗಳು ಎದೆ ನೋವು ಅಥವಾ ಯಾವುದೇ ಇತರ ರೋಗಲಕ್ಷಣಗಳಿಲ್ಲದೆ ಸದ್ದಿಲ್ಲದೆ ಸಂಭವಿಸುತ್ತವೆ. ಇವನ್ನು ನಂತರ, ಇದಕ್ಕೆ ಸಂಬಂಧಿಸಿದ ರೋಗಲಕ್ಷಣಗಳ ಹಿಂದಿನ ಮಾಹಿತಿಯಿಲ್ಲದೆಯೇ ರಕ್ತದ ಕಿಣ್ವದ ಪರೀಕ್ಷೆ ಅಥವಾ ಶವಪರೀಕ್ಷೆಯನ್ನು ಬಳಸಿಕೊಂಡು ಇಲೆಕ್ಟ್ರೊಕಾರ್ಡಿಯೊಗ್ರ್ಯಾಮ್‌ನಲ್ಲಿ ಪತ್ತೆ ಹಚ್ಚಲಾಗುತ್ತದೆ. ಈ ರೀತಿಯ ಸದ್ದಿಲ್ಲದೆ ಸಂಭವಿಸುವ ಹೃದಯ ಸ್ನಾಯುವಿನ ಊತಕ ಸಾವುಗಳು ಸಾಮಾನ್ಯವಾಗಿ ವಯಸ್ಸಾದವರಲ್ಲಿ, ಮಧುಮೇಹವನ್ನು ಹೊಂದಿರುವ ರೋಗಿಗಳಲ್ಲಿ ಮತ್ತು ಹೃದಯ ಕಸಿ ಮಾಡಿದ ನಂತರ ಕಂಡುಬರಬಹುದು, ಏಕೆಂದರೆ ದಾನಿಯ ಹೃದಯವು ಅದನ್ನು ಸ್ವೀಕರಿಸುವವರ ನರವ್ಯೂಹದಿಂದ ಸಂಪೂರ್ಣವಾಗಿ ನರಶಕ್ತಿಯನ್ನು ಪಡೆಯುವುದಿಲ್ಲ. ಮಧುಮೇಹದಲ್ಲಿ ನೋವಿನ ಪ್ರತಿಕ್ರಿಯಾರಂಭ ಮಿತಿಯಲ್ಲಿನ ವ್ಯತ್ಯಾಸಗಳು, ಸ್ವನಿಯಂತ್ರಿತ ನರವ್ಯಾಧಿ ಮತ್ತು ಮನೋವೈಜ್ಞಾನಿಕ ಅಂಶಗಳು ರೋಗಲಕ್ಷಣಗಳನ್ನು ತೋರಿಸದೆ ಇರುವುದಕ್ಕೆ ಸಂಭಾವ್ಯ ಕಾರಣಗಳಾಗಿರಬಹುದೆಂದು ಹೇಳಲಾಗಿದೆ. ಹೃದಯದ ರಕ್ತದ ಹರಿವಿನ ಹಠಾತ್ ಅಡ್ಡಿಗೆ ಹೊಂದಿಕೊಂಡಿರುವ ಯಾವುದೇ ರೋಗಲಕ್ಷಣಗಳನ್ನು ತೀವ್ರ ಪರಿಧಮನಿಯ ರೋಗಲಕ್ಷಣವೆಂದು ಕರೆಯಲಾಗುತ್ತದೆ. ವ್ಯತ್ಯಾಸದ ರೋಗನಿದಾನವು ಎದೆ ನೋವಿನ ಇತರ ಹಾನಿಕಾರಕ ಕಾರಣಗಳನ್ನು ಒಳಗೊಳ್ಳುತ್ತದೆ, ಉದಾ. ಶ್ವಾಸಕೋಶದ ಧಮನಿರೋಧ (ಎಂಬೋಲಿಸಮ್), ಮಹಾಪಧಮನಿಯ ಛೇದನ, ಹೃದಯ ಸಂಕೋಚನವನ್ನು ಉಂಟುಮಾಡುವ ಹೃದಯಾವರಣದ ನಿಸ್ರಾವ, ಒತ್ತಡದ ನ್ಯೂಮೋತೊರಾಕ್ಸ್ ಮತ್ತು ಅನ್ನನಾಳದ ಒಡೆತ. ಇತರ ಅಷ್ಟೊಂದು ಹಾನಿಕಾರಕವಲ್ಲದ ವ್ಯತ್ಯಾಸಗಳೆಂದರೆ ಜಠರ ಮತ್ತು ಅನ್ನನಾಳದ ಹಿಮ್ಮುಖ ಹರಿವು ಮತ್ತು ಟೈಟ್ಜೆಯ ರೋಗಲಕ್ಷಣ. == ಕಾರಣಗಳು == ಹೃದಯಾಘಾತ ಪ್ರಮಾಣವು ತೀವ್ರ ಪರಿಶ್ರಮದೊಂದಿಗೆ ಸಂಬಂಧಿಸಿರುತ್ತದೆ, ಅದು ಮಾನಸಿಕ ಒತ್ತಡ ಅಥವಾ ದೈಹಿಕ ಪರಿಶ್ರಮ ಯಾವುದೇ ಆಗಿರಲಿ, ವಿಶೇಷವಾಗಿ ಪರಿಶ್ರಮವು ವ್ಯಕ್ತಿಯು ಸಾಮಾನ್ಯವಾಗಿ ನಿರ್ವಹಿಸುವುದಕ್ಕಿಂತ ಹೆಚ್ಚು ತೀವ್ರವಾಗಿದ್ದರೆ. ಪರಿಮಾಣಾತ್ಮಕವಾಗಿ, ದೈಹಿಕವಾಗಿ ಗಟ್ಟಿಮುಟ್ಟಾಗಿರುವ ವ್ಯಕ್ತಿಗಳಲ್ಲಿ ತೀವ್ರವಾದ ವ್ಯಾಯಾಮ ಮತ್ತು ಅನಂತರದ ಚೇತರಿಕೆಯ ಅವಧಿಯು ೬-ಪಟ್ಟು ಹೆಚ್ಚು ಹೃದಯ ಸ್ನಾಯುವಿನ ಊತಕ ಸಾವು ಕಂಡುಬರಲು ಕಾರಣವಾಗಿರುತ್ತದೆ (ಇತರ ಹೆಚ್ಚು ವಿಶ್ರಾಂತಿಯ ಅವಧಿಗೆ ಹೋಲಿಸಿದರೆ). ಉತ್ತಮ ದೈಹಿಕ ಸ್ಥಿತಿಯನ್ನು ಹೊಂದಿರದವರಲ್ಲಿ ಈ ತೀವ್ರ ವ್ಯಾಯಾಮ ಮಾಡಿದ ನಂತರದ ಚೇತರಿಕೆಯು ಅವಧಿಯು ಸುಮಾರು ೩೫-ಪಟ್ಟು ಹೆಚ್ಚಿನ ಸಂಭವವನ್ನು ಹೊಂದಿರುತ್ತದೆ. ಇದಕ್ಕೆ ಗಮನಿಸಲಾದ ಒಂದು ಕಾರಣವೆಂದರೆ ಪ್ರತಿ ಹೃದಯ ಬಡಿತಕ್ಕೆ ಅಪಧಮನಿಗಳ ಸಂಕೋಚನ ಮತ್ತು ವಿಕಸನವನ್ನು ಉಂಟುಮಾಡುವ ಅಪಧಮನಿಯ ಮಿಡಿತದ ಒತ್ತಡವು ಅತಿ ಹೆಚ್ಚಾಗುವುದು. ಇದು ನಾಳದೊಳಗಿನ ಶ್ರವಣಾತೀತ ಧ್ವನಿಯಲ್ಲಿ ವೀಕ್ಷಿಸಲಾದಂತೆ, ಅತೆರೋಮಾದಲ್ಲಿ 'ಒಡೆಯುವ ಒತ್ತಡ'ವನ್ನು ಮತ್ತು ಶೇಖರಣೆ (ಅಪಧಮನಿಯ ಭಿತ್ತಿಯ ಮೇಲಿನ ತಂತುಯುಕ್ತ ಕೊಬ್ಬಿನ ಶೇಖರಣೆ) ಬಿರಿತವನ್ನು ಹೆಚ್ಚಿಸುತ್ತದೆ. ನ್ಯುಮೋನಿಯದಂತಹ ತೀವ್ರ ಸೋಂಕು ಹೃದಯ ಸ್ನಾಯುವಿನ ಊತಕ ಸಾವನ್ನು ಉಂಟುಮಾಡಬಹುದು. ಕ್ಲಮೈಡೋಫಿಲ ನ್ಯೂಮೋನಿಯೆ ಸೋಂಕು ಮತ್ತು ಅಪಧಮನಿ-ಕಾಠಿನ್ಯದ ನಡುವೆ ಹೆಚ್ಚು ವಿವಾದಾತ್ಮಕ ಸಂಬಂಧವಿದೆ. ಈ ಕೋಶಗಳೊಗಿರುವ ಜೀವಿಯನ್ನು ಅಪಧಮನಿಯ-ಕಾಠಿನ್ಯದ ಶೇಖರಣೆಗಳಲ್ಲಿ ಕಂಡುಹಿಡಿಯಲಾಗಿದೆ, ಆದರೆ ಇದನ್ನು ಒಂದು ಕಾರಣವಾಗಿರುವ ಅಂಶವೆಂದು ಪರಿಗಣಿಸಬಹುದೇ ಎಂಬ ಬಗ್ಗೆ ಆಧಾರವು ಅನಿರ್ಣಾಯಕವಾಗಿದೆ. ಅಪಧಮನಿ-ಕಾಠಿನ್ಯವಿರುವ ರೋಗಿಗಳಿಗೆ ಪ್ರತಿಜೀವಕಗಳಿಂದ ಚಿಕಿತ್ಸೆ ನೀಡುವುದರಿಂದ, ಹೃದಯಾಘಾತ ಅಥವಾ ಇತರ ಪರಿಧಮನಿಯ ನಾಳದ ಕಾಯಿಲೆಗಳು ಬರುವ ಸಂಭವವು ಕಡಿಮೆಯಾಗಬಹುದೆಂದು ಪ್ರಮಾಣೀಕರಿಸಲಾಗಿಲ್ಲ. ಹೃದಯಾಘಾತವು ಬೆಳಿಗ್ಗೆ ಹೊತ್ತಿನಲ್ಲಿ ಅದೂ ಸುಮಾರು ೯ ಗಂಟೆಯ ಹೊತ್ತಿಗೆ ಹೆಚ್ಚಾಗಿ ಸಂಭವಿಸುತ್ತದೆ ಎಂಬುದಕ್ಕೆ ಒಮ್ಮತವಿದೆ. ಕಿರುಬಿಲ್ಲೆಗಳ ಒಟ್ಟುಗೂಡುವ ಸಾಮರ್ಥ್ಯವು ದೈನಂದಿನ ಚಟುವಟಿಕೆಯ ಆಧಾರದಲ್ಲಿ ವ್ಯತ್ಯಾಸಗೊಳ್ಳುತ್ತದೆ, ಆದರೂ ಅವನ್ನು ಕಾರಣವೆಂದು ಹೇಳಲಾಗಿಲ್ಲವೆಂದು ಕೆಲವು ಪರೀಕ್ಷಕರು ಸೂಚಿಸಿದ್ದಾರೆ. === ಅಪಾಯಕಾರಿ ಅಂಶಗಳು === ಅಪಧಮನಿ-ಕಾಠಿನ್ಯದ ಅಪಾಯಕಾರಿ ಅಂಶಗಳನ್ನು ಸಾಮಾನ್ಯವಾಗಿ ಹೃದಯ ಸ್ನಾಯುವಿನ ಊತಕ ಸಾವನ್ನು ಉಂಟುಮಾಡುವ ಅಂಶಗಳೆಂದು ಹೇಳಲಾಗುತ್ತದೆ: ಮಧುಮೇಹ (ಇನ್ಸುಲಿನ್ ಪ್ರತಿರೋಧವಿರುವ ಅಥವಾ ಇಲ್ಲದಿರುವ) – ಇದು ರಕ್ತಕೊರತೆಯ ಹೃದಯ ಕಾಯಿಲೆಯ () ಪ್ರಮುಖ ಅಪಾಯಕಾರಿ ಅಂಶವಾಗಿದೆ. ಧೂಮಪಾನ ಹೈಪರ್‌ಕೊಲೆಸ್ಟೆರೋಲೆಮಿಯಾ (ಹೆಚ್ಚು ನಿಖರವಾಗಿ ಹೈಪರ್‌ಲಿಪೊಪ್ರೋಟೀನೆಮಿಯಾ, ವಿಶೇಷವಾಗಿ ಹೆಚ್ಚಿನ ಪ್ರಮಾಣದ ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್ ಮತ್ತು ಕಡಿಮೆ ಪ್ರಮಾಣದ ಹೆಚ್ಚು-ಸಾಂದ್ರತೆಯ ಲಿಪೊಪ್ರೋಟೀನ್). ಕಡಿಮೆ ಪ್ರಮಾಣದ ಹೆಚ್ಚಿನ ಪ್ರಮಾಣದ ಟ್ರೈಗ್ಲಿಸರೈಡ್‌ಗಳು ಅಧಿಕ ರಕ್ತದೊತ್ತಡ ರಕ್ತಕೊರತೆಯ ಹೃದಯ ಕಾಯಿಲೆಯ () ವಂಶಪಾರಂಪರ್ಯತೆ ಸ್ಥೂಲಕಾಯತೆ (ಇದನ್ನು ೩೦ /m² ಗಿಂತಲೂ ಹೆಚ್ಚಿನ ದೇಹದ-ದ್ರವ್ಯರಾಶಿಯ ಸೂಚಿಯಿಂದ ಅಥವಾ ಪರ್ಯಾಯವಾಗಿ ಸೊಂಟದ ಸುತ್ತಳತೆ ಅಥವಾ ಸೊಂಟ-ನಡುವಿನ ಅನುಪಾತದಿಂದ ನಿರೂಪಿಸಲಾಗುತ್ತದೆ). ವಯಸ್ಸು: ಪುರುಷರು ೪೫ನೇ ವಯಸ್ಸಿನಲ್ಲಿ ಸ್ವತಂತ್ರ ಅಪಾಯಕಾರಿ ಅಂಶವನ್ನು ಹೊಂದುತ್ತಾರೆ, ಅದೇ ಮಹಿಳೆಯರು ೫೫ನೇ ವಯಸ್ಸಿನಲ್ಲಿ ಪಡೆಯುತ್ತಾರೆ; ಇದಕ್ಕೆ ಹೆಚ್ಚುವರಿಯಾಗಿ ವ್ಯಕ್ತಿಗಳು ೫೫ನೇ ವಯಸ್ಸಿನಲ್ಲಿ ಅಥವಾ ಅದಕ್ಕಿಂತ ಮೊದಲು ಪರಿಧಮನಿಯ ನಾಳದ ತೊಂದರೆಯನ್ನು ಅನುಭವಿಸಿದ ಮೊದಲ-ಹಂತದ ಪುರುಷ ಸಂಬಂಧಿಕರನ್ನು (ಸಹೋದರ, ತಂದೆ) ಹೊಂದಿದ್ದರೆ, ಮತ್ತೊಂದು ಸ್ವತಂತ್ರ ಅಪಾಯಕಾರಿ ಅಂಶವನ್ನು ಹೊಂದುತ್ತಾರೆ. ೬೫ನೇ ವಯಸ್ಸಿನಲ್ಲಿ ಅಥವಾ ಅದಕ್ಕಿಂತ ಮೊದಲು ಪರಿಧಮನಿಯ ನಾಳದ ತೊಂದರೆಯನ್ನು ಅನುಭವಿಸಿದ ಮೊದಲ-ಹಂತದ ಸ್ತ್ರೀ ಸಂಬಂಧಿಕರನ್ನು (ಸಹೋದರಿ, ತಾಯಿ) ಹೊಂದಿದ್ದರೆ, ಆ ವ್ಯಕ್ತಿಯು ಇನ್ನೊಂದು ಸ್ವತಂತ್ರ ಅಪಾಯಕಾರಿ ಅಂಶವನ್ನು ಪಡೆಯುತ್ತಾನೆ. ಹೈಪರ್‌ಹೋಮೊಸಿಸ್ಟೈನೀಮಿಯ (ವಿಷಕಾರಿ ರಕ್ತದ-ಅಮೈನೊ ಆಮ್ಲ ಹೋಮೊಸಿಸ್ಟೈನ್‌ನ ಹೆಚ್ಚಿನ ಪ್ರಮಾಣ, ಜೀವಸತ್ವಗಳಾದ B2, B6, B12 ಮತ್ತು ಫೋಲಿಕ್ ಆಮ್ಲದ ಸೇವನೆಯು ಸಾಕಷ್ಟಿರದಾಗ ಇದರ ಪ್ರಮಾಣವು ಏರುತ್ತದೆ). ಒತ್ತಡ (ಹೆಚ್ಚು ಒತ್ತಡದ ಕೆಲಸಗಳು ಅಪಧಮನಿ-ಕಾಠಿನ್ಯವನ್ನು ಉಂಟುಮಾಡುವ ಸಂಭವವಿರುತ್ತದೆ). ಮದ್ಯಪಾನ - ದೀರ್ಘಕಾಲ ಹೆಚ್ಚಿನ ಪ್ರಮಾಣದ ಮದ್ಯವನ್ನು ಸೇವಿಸುವುದರಿಂದ ಹೃದಯಾಘಾತ ಸಂಭವಿಸುವ ಅಪಾಯ ಹೆಚ್ಚುತ್ತದೆಂದು ಅಧ್ಯಯನಗಳು ತೋರಿಸಿವೆ. ಮಹಿಳೆಯರಿಗಿಂತ ಪುರುಷರು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಈ ಅಪಾಯಕಾರಿ ಅಂಶಗಳಲ್ಲಿ ಹೆಚ್ಚಿನವುಗಳನ್ನು ಮಾರ್ಪಡಿಸಬಹುದು, ಆರೋಗ್ಯವಂತ ಜೀವನ ಶೈಲಿಯನ್ನು ಅನುಸರಿಸುವ ಮೂಲಕ ಹೆಚ್ಚಿನ ಹೃದಯಾಘಾತಗಳನ್ನು ತಡೆಗಟ್ಟಬಹುದು. ಉದಾಹರಣೆಗಾಗಿ, ದೈಹಿಕ ಚಟುವಟಿಕೆಯು ಇದರ ಅಪಾಯವನ್ನು ಕಡಿಮೆ ಮಾಡುತ್ತದೆ. ಮಾರ್ಪಡಿಸಲಾಗದ ಅಪಾಯಕಾರಿ ಅಂಶಗಳೆಂದರೆ ವಯಸ್ಸು, ಲಿಂಗ ಮತ್ತು ಬೇಗನೆ ಹೃದಯಾಘಾತವಾಗುವ (೬೦ ವರ್ಷ ವಯಸ್ಸಿಗಿಂತ ಮೊದಲು) ವಂಶಪಾರಂಪರ್ಯತೆ, ಇದು ಆನುವಂಶಿಕ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆಂದು ಹೇಳಲಾಗುತ್ತದೆ. ಸಾಮಾಜಿಕ-ಆರ್ಥಿಕ ಅಂಶಗಳಾದ ಕಡಿಮೆ ಶಿಕ್ಷಣ ಮತ್ತು ಕಡಿಮೆ ಆದಾಯ (ವಿಶೇಷವಾಗಿ ಮಹಿಳೆಯರಲ್ಲಿ) ಹಾಗೂ ಅವಿವಾಹಿತ ಕೂಡುಬಾಳುವೆಯೂ ಸಹ ಅನ್ನು ಉಂಟುಮಾಡುವ ಅಪಾಯಕಾರಿ ಅಂಶಗಳಾಗಿವೆ. ಸೋಂಕುಶಾಸ್ತ್ರ ಅಧ್ಯಯನದ ಫಲಿತಾಂಶಗಳನ್ನು ತಿಳಿಯಲು, ಗೆ ಸಂಬಂಧಿಸಿದ ಹೆಚ್ಚಿನ ಅಂಶಗಳು ಇತರ ಅಂಶಗಳ ಮೂಲಕ ಅಪಾಯವನ್ನುಂಟುಮಾಡುತ್ತವೆ ಎಂಬುದನ್ನು ಗಮನಿಸುವುದು ಮುಖ್ಯವಾಗಿರುತ್ತದೆ. ಉದಾಹರಣೆಗಾಗಿ, ಶಿಕ್ಷಣದ ಪ್ರಭಾವವು ಭಾಗಶಃ ಆದಾಯ ಮತ್ತು ವೈವಾಹಿಕ ಸ್ಥಿತಿಯ ಮೇಲಿನ ಅದರ ಪರಿಣಾಮವನ್ನು ಆಧರಿಸಿರುತ್ತದೆ. ಬಾಯಿಯ ಮೂಲಕ ಸೇವಿಸುವ ಗರ್ಭನಿರೋಧಕ ಗುಳಿಗೆಗಳನ್ನು ಬಳಸುವ ಮಹಿಳೆಯರು ಹೃದಯ ಸ್ನಾಯುವಿನ ಊತಕ ಸಾವು ಸಂಭವಿಸುವ ಸಾಧಾರಣ ಮಟ್ಟದ ಅಪಾಯವನ್ನು ಹೊಂದಿರುತ್ತಾರೆ, ವಿಶೇಷವಾಗಿ ಧೂಮಪಾನದಂತಹ ಇತರ ಅಪಾಯಕಾರಿ ಅಂಶಗಳಿರುವಾಗ. ಉರಿಯೂತವನ್ನು ಅಪಧಮನಿಯ-ಕಾಠಿನ್ಯದ ಶೇಖರಣೆಯ ಪ್ರಕ್ರಿಯೆಯಲ್ಲಿ ಒಂದು ಪ್ರಮುಖ ಹಂತವೆಂದು ಹೇಳಲಾಗುತ್ತದೆ. -ಕ್ರಿಯಾಶೀಲ ಪ್ರೋಟೀನ್ () ಉರಿಯೂತಕ್ಕೆ ಒಂದು ಸಂವೇದನಾಶೀಲ ಆದರೆ ನಿರ್ದಿಷ್ಟವಲ್ಲದ ಗುರುತುಗವಾಗಿದೆ. ವಿಶೇಷವಾಗಿ ಹೆಚ್ಚು ಸಂವೇದನಾಶೀಲ ಪರೀಕ್ಷಣೀಯ ವಸ್ತುಗಳನ್ನು ಹೊಂದಿರುವ ಹೆಚ್ಚಿನ ರಕ್ತ ಪ್ರಮಾಣವು ಮಾತ್ರವಲ್ಲದೆ ಪಾರ್ಶ್ವವಾಯುವಿನ ಹೊಡೆತ ಮತ್ತು ಮಧುಮೇಹದ ಬೆಳವಣಿಗೆಯ ಅಪಾಯಕ್ಕೆ ಮುನ್ಸೂಚನೆ ನೀಡಬಹುದು. ಗೆ ನೀಡುವ ಕೆಲವು ಔಷಧಗಳು ಮಟ್ಟವನ್ನು ಕಡಿಮೆ ಮಾಡಬಲ್ಲವು. ಸಾಮಾನ್ಯ ಜನರನ್ನು ಪರೀಕ್ಷಿಸುವ ಸಾಧನವಾಗಿ ಹೆಚ್ಚು ಸಂವೇದನಾಶೀಲ ಪರೀಕ್ಷಕ ವಸ್ತುಗಳ ಬಳಕೆಯನ್ನು ನಿರ್ಬಂಧಿತವೆಂದು ಸೂಚಿಸಲಾಗುತ್ತದೆ, ಆದರೆ ಇದನ್ನು ಇತರ ಅಪಾಯಕಾರಿ ಅಂಶಗಳನ್ನು ಅಥವಾ ಪರಿಧಮನಿ ಕಾಯಿಲೆಯನ್ನು ಹೊಂದಿರುವ ರೋಗಿಗಳಲ್ಲಿ ವೈದ್ಯರ ನಿರ್ಧಾರದಂತೆ ಐಚ್ಛಿಕವಾಗಿ ಬಳಸಬಹುದು. ಅಪಧಮನಿ-ಕಾಠಿನ್ಯದಲ್ಲಿ ನೇರವಾದ ಪಾತ್ರ ವಹಿಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ. ಪರಿದಂತದ ಕಾಯಿಲೆಯಲ್ಲಿನ ಉರಿಯೂತವು ಪರಿಧಮನಿಯ ಹೃದಯ ಕಾಯಿಲೆಗೆ ಸಂಬಂಧಿಸಿರಬಹುದು ಮತ್ತು ಹಲ್ಲಿನ-ರೋಗವು ಸಾಮಾನ್ಯವಾಗಿರುವುದರಿಂದ, ಇದು ಸಾರ್ವಜನಿಕ ಆರೋಗ್ಯದಲ್ಲಿ ಹೆಚ್ಚಿನ ಪರಿಣಾಮವನ್ನು ಹೊಂದಿದೆ. ಬ್ಯಾಕ್ಟೀರಿಯಾಗಳು ಉಂಟುಮಾಡುವ ಪರಿದಂತದ-ಕಾಯಿಲೆಯ (ಪೆರಿಯೊಡಾಂಟಿಟಿಸ್) ವಿರುದ್ಧ ಪ್ರತಿಕಾಯಗಳ ಮಟ್ಟವನ್ನು ಅಂದಾಜಿಸಿದ ಸೀರಮ್-ಶಾಸ್ತ್ರದ ಅಧ್ಯಯನಗಳು ಅಂತಹ ಪ್ರತಿಕಾಯಗಳು ಪರಿಧಮನಿಯ ಹೃದಯ ಕಾಯಿಲೆಯನ್ನು ಹೊಂದಿರುವ ರೋಗಿಗಳಲ್ಲಿ ಹೆಚ್ಚಿರುತ್ತವೆಂದು ಕಂಡುಹಿಡಿದಿವೆ. ಪರಿದಂತದ ಕಾಯಿಲೆಯು , ಫೈಬ್ರಿನೊಜೆನ್ ಮತ್ತು ಸೈಟೋಕಿನ್‌ಗಳ ರಕ್ತದ ಮಟ್ಟವನ್ನು ಹೆಚ್ಚಿಸುತ್ತದೆ; ಆದ್ದರಿಂದ, ಪರಿದಂತದ ಕಾಯಿಲೆಯು ನ ಮೇಲೆ ಅದರ ಪ್ರಭಾವವನ್ನು ಇತರ ಅಂಶಗಳ ಮೂಲಕ ಉಂಟುಮಾಡಬಹುದು. ಪರಿದಂತ-ಕಾಯಿಲೆಗೆ ಕಾರಣವಾಗುವ ಬ್ಯಾಕ್ಟೀರಿಯಾ ಕಿರುಬಿಲ್ಲೆಗಳ ಸಂಚಯನವನ್ನು ಉಂಟುಮಾಡಬಹುದು ಮತ್ತು ಫೋಮ್ ಸೆಲ್‌ಗಳ ರಚನೆಗೆ ಕಾರಣವಾಗಬಹುದು ಎಂದು ವೈದ್ಯಕೀಯ-ಪೂರ್ವದ ಸಂಶೋಧನೆಯು ಸೂಚಿಸಿದೆ. ನಿರ್ದಿಷ್ಟ ಪರಿದಂತದ ಬ್ಯಾಕ್ಟೀರಿಯಾದ ಪಾತ್ರವನ್ನು ಸೂಚಿಸಲಾಗಿದೆ, ಆದರೆ ಉಳಿದುದನ್ನು ಕಂಡುಹಿಡಿಯಬೇಕಿದೆ. ಇನ್‌ಫ್ಲುಯೆಂಜ ತೀವ್ರ ಹೃದಯ ಸ್ನಾಯುವಿನ ಊತಕ ಸಾವನ್ನು ಪ್ರಚೋದಿಸಬಹುದು ಎಂಬುದಕ್ಕೆ ಕೆಲವು ಆಧಾರಗಳಿವೆ. ತಲೆಕೂದಲು ಉದುರುವುದು, ಕೂದಲು ಹಣ್ಣಾಗುವುದು, ಕಿವಿಯ ಹಾಲೆಯ ಮಡಿಕೆ (ಫ್ರ್ಯಾಂಕ್‌ನ ಚಿಹ್ನೆ) ಮತ್ತು ಇತರ ಚರ್ಮದ ಕಾಯಿಲೆಗಳನ್ನು ಅನ್ನು ಉಂಟುಮಾಡುವ ಸ್ವತಂತ್ರ ಅಪಾಯಕಾರಿ ಅಂಶಗಳೆಂದು ಸೂಚಿಸಲಾಗುತ್ತದೆ. ಅವುಗಳ ಪಾತ್ರವು ವಿವಾದಾತ್ಮಕವಾಗಿದೆ; ಈ ಚಿಹ್ನೆಗಳ ಮತ್ತು ನ ಅಪಾಯದ ಒಂದು ಸಾಮಾನ್ಯ ಲಕ್ಷಣವನ್ನು ಊಹಿಸಲಾಗಿದೆ, ಬಹುಶಃ ಆನುವಂಶಿಕವಾಗಿದೆ. ಕ್ಯಾಲ್ಸಿಯಂ ಸಂಚಯವು ಅಪಧಮನಿಯ-ಕಾಠಿನ್ಯದ ಶೇಖರಣೆಯ ರಚನೆಯ ಮತ್ತೊಂದು ಭಾಗವಾಗಿದೆ. ಪರಿಧಮನಿಗಳ ಮೇಲಿನ ಕ್ಯಾಲ್ಸಿಯಂ ಸಂಚಯವನ್ನು ಸ್ಕ್ಯಾನ್‌ಗಳಿಂದ ಪತ್ತೆಹಚ್ಚಬಹುದು. ಪರಿಧಮನಿಯ ಕ್ಯಾಲ್ಸಿಯಂ ಮಾದರಿ ಅಪಾಯಕಾರಿ ಅಂಶಗಳನ್ನು ಮೀರಿ ಮುನ್ಸೂಚನಾ ಮಾಹಿತಿಯನ್ನು ನೀಡಬಹುದು ಎಂದು ಕೆಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಹೃದಯವಿಜ್ಞಾನದ ಯುರೋಪಿಯನ್ ಸಂಸ್ಥೆ ಮತ್ತು ಹೃದಯ ರಕ್ತನಾಳದ ತಡೆ ಮತ್ತು ಪುನಃಸ್ಥಾಪನೆಯ ಯುರೋಪಿಯನ್ ಸಂಘಟನೆಯು ಯುರೋಪಿನಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಹೊಡೆತದ ಅಪಾಯದ ಮುನ್ಸೂಚನೆ ಮತ್ತು ನಿರ್ವಹಣೆಗೆ ಒಂದು ಪರಿಣಾಮಕಾರಿ ಕಾರ್ಯವನ್ನು ಅಭಿವೃದ್ಧಿಪಡಿಸಿವೆ. ಹಾರ್ಟ್‌ಸ್ಕೋರ್ ಹೃದಯ ರಕ್ತನಾಳದ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಾಯೋಗಿಕ ಚಿಕಿತ್ಸಕರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಹಾರ್ಟ್‌ಸ್ಕೋರ್ ಯೋಜನೆಯು ೧೨ ಭಾಷೆಗಳಲ್ಲಿ ಲಭ್ಯವಾಗಿದೆ ಮತ್ತು ಜಾಲ-ಆಧಾರಿತ ಅಥವಾ ಆವೃತ್ತಿಯನ್ನು ಒದಗಿಸುತ್ತದೆ. == ರೋಗ-ಶರೀರವಿಜ್ಞಾನ == ನೋಡಿ:ಹೃದಯಕ್ಕೆ ಕರೋನರಿ ಸ್ಟೆಂಟ್ ಚಿಕಿತ್ಸೆ ತೀವ್ರ ಹೃದಯ ಸ್ನಾಯುವಿನ ಊತಕ ಸಾವು ತೀವ್ರ ಪರಿಧಮನಿಯ ರೋಗಲಕ್ಷಣದ ಎರಡು ಉಪಪ್ರಕಾರಗಳನ್ನು ನಿರೂಪಿಸುತ್ತದೆ, ಅವೆಂದರೆ -ಉನ್ನತಿ-ಇಲ್ಲದ ಹೃದಯ ಸ್ನಾಯುವಿನ ಊತಕ ಸಾವು ಮತ್ತು -ಉನ್ನತಿಯಿರುವ ಹೃದಯ ಸ್ನಾಯುವಿನ ಊತಕ ಸಾವು. ಇವು ಹೆಚ್ಚಾಗಿ (ಆದರೆ ಯಾವಾಗಲೂ ಅಲ್ಲ) ಪರಿಧಮನಿಯ ಕಾಯಿಲೆಯ ಚಿಹ್ನೆಗಳಾಗಿವೆ. ಹೆಚ್ಚಾಗಿ ಪ್ರಚೋದಿಸುವ ಅಂಶವೆಂದರೆ ಒಳಪದರದ ಪರಿಧಮನಿಯಲ್ಲಿ ಅಪಧಮನಿಯ-ಕಾಠಿನ್ಯದ ಶೇಖರಣೆಯ ಅಡ್ಡಿ, ಇದು ರಕ್ತವು ಹೆಪ್ಪುಗಟ್ಟಲು ಕಾರಣವಾಗುತ್ತದೆ, ಕೆಲವೊಮ್ಮೆ ಅಪಧಮನಿಯು ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ಮಾಡುತ್ತದೆ. ಅಪಧಮನಿ-ಕಾಠಿನ್ಯವು ಕೆಲವು ದಶಕಗಳಿಂದ ಅಪಧಮನಿಗಳ (ಈ ಸಂದರ್ಭದಲ್ಲಿ, ಪರಿಧಮನಿ) ಪೊರೆಯ ಮೇಲಿನ ಶೇಖರಣೆಯಲ್ಲಿ ಕೊಲೆಸ್ಟರಾಲ್ ಮತ್ತು ನಾರಿನಿಂದ ತುಂಬಿದ ಅಂಗಾಂಶದ ಕ್ರಮೇಣ ಬೆಳವಣಿಗೆಯಾಗಿದೆ. ಏಂಜಿಯೊಗ್ರಾಫಿಯಲ್ಲಿ ಗೋಚರಿಸುವ ರಕ್ತ ಪ್ರವಾಹದ ಅನಿಯತತೆಯು, ಅನೇಕ ದಶಕಗಳಿಂದ ಅಪಧಮನಿ-ಕಾಠಿನ್ಯವು ಬೆಳೆದುದರ ಪರಿಣಾಮವಾಗಿ ಅಪಧಮನಿ ಕುಹರವು ಕ್ಷೀಣಿಸುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಶೇಖರಣೆಗಳು ಅಸ್ಥಿರವಾಗಬಹುದು, ಛಿದ್ರವಾಗಬಹುದು ಮತ್ತು ಹೆಚ್ಚುವರಿಯಾಗಿ ಗರಣೆಯನ್ನು (ರಕ್ತದ ಹೆಪ್ಪುಗಟ್ಟುವಿಕೆ) ಉಂಟುಮಾಡಬಹುದು, ಇದು ಅಪಧಮನಿಯನ್ನು ಮುಚ್ಚುತ್ತದೆ; ಇದು ಕೆಲವು ನಿಮಿಷಗಳೊಳಗೆ ಕಂಡುಬರಬಹುದು. ಪರಿಧಮನಿಯ ನಾಳದಲ್ಲಿ ತೀವ್ರ ಪ್ರಮಾಣದ ಶೇಖರಣೆಯ ಒಡೆತ ಕಂಡುಬಂದರೆ, ಇದು ಹೃದಯ ಸ್ನಾಯುವಿನ ಊತಕ ಸಾವನ್ನು (ಪ್ರವಾಹದ ಹೃದಯ ಸ್ನಾಯುವಿನ ನೆಕ್ರೋಸಿಸ್) ಉಂಟುಮಾಡುತ್ತದೆ. ಹೃದಯಕ್ಕೆ ಕುಗ್ಗಿದ ರಕ್ತದ ಹರಿವು ದೀರ್ಘಕಾಲದವರೆಗೆ ಮುಂದುವರಿದರೆ, ಇದು ರಕ್ತಕೊರತೆಯ ಪ್ರಕ್ರಿಯೆ ಎಂದು ಕರೆಯುವ ಒಂದು ಕ್ರಿಯೆಯನ್ನು ಪ್ರಚೋದಿಸುತ್ತದೆ; ಮುಚ್ಚಿದ ಪರಿಧಮನಿಯ ಭಾಗದಲ್ಲಿನ ಹೃದಯದ ಜೀವಕೋಶಗಳು ಸಾಯುತ್ತವೆ (ಮುಖ್ಯವಾಗಿ ನೆಕ್ರೋಸಿಸ್‌ನ ಮೂಲಕ) ಹಾಗೂ ಮತ್ತೆ ಬೆಳೆಯುವುದಿಲ್ಲ. ಈ ಜಾಗದಲ್ಲಿ ಒಂದು ಕಾಲಜನ್ ಗುರುತು ರಚನೆಯಾಗುತ್ತದೆ. ಅಪೊಪ್ಟೋಸಿಸ್ ಎನ್ನುವ ಮತ್ತೊಂದು ರೀತಿಯ ಜೀವಕೋಶಗಳ ಸಾವು ಕೂಡ ಅಂಗಾಂಶ ಹಾನಿಯ ಪ್ರಕ್ರಿಯೆಯಲ್ಲಿ ಪಾತ್ರವಹಿಸುತ್ತದೆ, ನಂತರ ಹೃದಯ ಸ್ನಾಯುವಿನ ಊತಕ ಸಾವನ್ನು ಉಂಟುಮಾಡುತ್ತದೆಂದು ಇತ್ತೀಚಿನ ಅಧ್ಯಯನಗಳು ಸೂಚಿಸಿವೆ. ಅದರಿಂದಾಗಿ ರೋಗಿಯ ಹೃದಯವು ಶಾಶ್ವತವಾಗಿ ಹಾನಿಗೊಳಗಾಗುತ್ತದೆ. ಈ ಹೃದಯ ಸ್ನಾಯುವಿನ ಗುರುತು ರೋಗಿಯನ್ನು ಜೀವಕ್ಕೆ ಸಂಚಕಾರ ತರುವ ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನದ ಅಪಾಯಕ್ಕೂ ಒಳಗಾಗುವಂತೆ ಮಾಡುತ್ತದೆ ಮತ್ತು ಕುಹರದ ಧಮನಿಯ ಊತಕ್ಕೆ ಕಾರಣವಾಗಬಹುದು, ಇದು ಹಾನಿಕಾರಕ ಪರಿಣಾಮಗಳೊಂದಿಗೆ ಛಿದ್ರವಾಗಬಹುದು. ಘಾಸಿಗೊಂಡ ಹೃದಯ ಅಂಗಾಂಶವು ಹೃದಯ ಅಂಗಾಂಶಕ್ಕಿಂತ ತುಂಬಾ ನಿಧಾನವಾಗಿ ವಿದ್ಯುತ್ ಉದ್ರೇಕದ-ಅಲೆಯನ್ನು ಉಂಟುಮಾಡುತ್ತದೆ. ಘಾಸಿಗೊಂಡ ಮತ್ತು ಘಾಸಿಗೊಳ್ಳದ ಅಂಗಾಂಶದ ನಡುವಿನ ಪ್ರಚೋದನೆಗಳನ್ನು ಕಳುಹಿಸುವ ವೇಗದ ವ್ಯತ್ಯಾಸವು ಮರುಪ್ರವೇಶ ಅಥವಾ ಫೀಡ್‌ಬ್ಯಾಕ್ ಲೂಪ್ಅನ್ನು ಉಂಟುಮಾಡುತ್ತದೆ, ಇದು ಅನೇಕ ಮಾರಕ ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನಗಳಿಗೆ ಕಾರಣವಾಗಿದೆಯೆಂದು ಹೇಳಲಾಗುತ್ತದೆ. ಈ ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನಗಳಲ್ಲಿ ಹೆಚ್ಚು ಗಂಭೀರವಾದುದೆಂದರೆ ಕುಹರದ ಕಂಪನ (ವೆಂಟ್ರಿಕ್ಯುಲಾರ್ ಫೈಬ್ರಿಲೇಶನ್) (- / ), ಇದು ಹೃದಯ ಸ್ನಾಯುವಿನ ಹಠಾತ್ ಸಾವನ್ನು ಉಂಟುಮಾಡುವ ಅತಿ ವೇಗವಾದ ಮತ್ತು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿರುವ ಹೃದಯ ಬಡಿತವಾಗಿದೆ. ಮತ್ತೊಂದು ಜೀವಕ್ಕೆ ಸಂಚಕಾರವಾಗಿರುವ ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನವೆಂದರೆ ಹೃದಯ ಕುಹರದ ಅತಿ ಸ್ಪಂದನ (ವೆಂಟ್ರಿಕ್ಯುಲಾರ್ ಟ್ಯಾಕಿಕಾರ್ಡಿಯಾ) (- / ), ಇದು ಹೃದಯ ಸ್ನಾಯುವಿನ ಹಠಾತ್ ಸಾವನ್ನು ಉಂಟುಮಾಡಬಹುದು ಅಥವಾ ಮಾಡದಿರಬಹುದು. ಹೃದಯ-ಕುಹರದ ಅತಿ ಸ್ಪಂದನವು ಸಾಮಾನ್ಯವಾಗಿ ಹೃದಯವು ಅತ್ಯಂತ ವೇಗವಾಗಿ ಬಡಿಯುವಂತೆ ಮಾಡುತ್ತದೆ, ಇದು ಹೃದಯವು ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡದಂತೆ ತಡೆಯುತ್ತದೆ. ಹೃದಯ ಸ್ನಾಯುಗಳ ಪರಿಣಾಮ ಮತ್ತು ರಕ್ತದೊತ್ತಡವು ಅಪಾಯದ ಮಟ್ಟವನ್ನು ತಲುಪಬಹುದು, ಇದು ಇನ್ನಷ್ಟು ಪರಿಧಮನಿಯ ರಕ್ತಕೊರತೆಗೆ ಮತ್ತು ಸತ್ತ ಊತಕದ ವಿಸ್ತರಣೆಗೆ ಕಾರಣವಾಗಬಹುದು. ಕಾರ್ಡಿಯಾಕ್ ಡಿಫೈಬ್ರಿಲೇಟರ್ ಈ ಪ್ರಬಲ ಹಾನಿಕಾರಕ ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನಗಳನ್ನು ಮಿತಿಗೊಳಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಒಂದು ಸಾಧನವಾಗಿದೆ. ಈ ಸಾಧನವು ಹೃದಯ ಸ್ನಾಯುವಿನ ಅಪಾಯಕಾರಿ ಸಾಂದ್ರತೆಯನ್ನು ವಿಧ್ರುವೀಕರಿಸಲು, ಕಾರ್ಯತಃ ಹೃದಯವನ್ನು "ಪುನಸ್ಸಿದ್ಧಗೊಳಿಸಲು", ರೋಗಿಗಳಿಗೆ ವಿದ್ಯುತ್ ಆಘಾತವನ್ನು ನೀಡುವ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಚಿಕಿತ್ಸೆಯು ಸಮಯವನ್ನು ಆಧರಿಸಿರುತ್ತದೆ ಮತ್ತು ಈ ಯಶಸ್ವಿ ಹೃದಯ-ಸ್ನಾಯುಗಳ ಕಂಪನವನ್ನು ನಿಲ್ಲಿಸುವ ಚಿಕಿತ್ಸೆಯ ಪ್ರತಿಕೂಲ ಪರಿಣಾಮವು ಹೃದಯ-ಶ್ವಾಸಕೋಶದ ಸ್ತಂಭನದ ಆರಂಭದ ನಂತರ ಅತಿ ಶೀಘ್ರದಲ್ಲಿ ಕ್ಷೀಣಿಸುತ್ತದೆ. == ರೋಗನಿದಾನ == ರೋಗಿಗಳ ಸಮಸ್ಯೆಗಳನ್ನು ಮತ್ತು ದೈಹಿಕ ಸ್ಥಿತಿಯನ್ನು ತಿಳಿದುಕೊಂಡ ನಂತರ ಹೃದಯ ಸ್ನಾಯುವಿನ ಊತಕ ಸಾವಿನ ರೋಗನಿದಾನ ಮಾಡಲಾಗುತ್ತದೆ. ಬದಲಾವಣೆಗಳು, ಪರಿಧಮನಿಯ ಏಂಜಿಯೊಗ್ರಾಮ್ ಮತ್ತು ಕಾರ್ಡಿಯಾಕ್ ಮಾರ್ಕರ್‌ಗಳ ಮಟ್ಟ ಮೊದಲಾದವು ರೋಗ-ನಿದಾನವನ್ನು ದೃಢಪಡಿಸಲು ಸಹಾಯ ಮಾಡುತ್ತವೆ. ಹೃದಯ ಸ್ನಾಯುವಿನ ಹಾನಿಗೊಳಗಾದ ಭಾಗವನ್ನು ಗುರುತಿಸಲು ಪ್ರಮುಖ ಸುಳಿವುಗಳನ್ನು ನೀಡುತ್ತದೆ. ಪರಿಧಮನಿಯ ಏಂಜಿಯೊಗ್ರಾಮ್ ಹೃದಯದ ರಕ್ತನಾಳಗಳ ಕಿರಿದಾಗುವಿಕೆ ಅಥವಾ ಅಡಚಣೆಯ ಬಗ್ಗೆ ತಿಳಿಯಲು ಅವಕಾಶ ಮಾಡಿಕೊಡುತ್ತದೆ. ಶವ ಪರೀಕ್ಷೆಯಲ್ಲಿ, ರೋಗಶಾಸ್ತ್ರಜ್ಞರು ಅಂಗರಚನಾಶಾಸ್ತ್ರ-ರೋಗಶಾಸ್ತ್ರದ ಆವಿಷ್ಕಾರಗಳ ಆಧಾರದಲ್ಲಿ ಹೃದಯ ಸ್ನಾಯುವಿನ ಊತಕ ಸಾವನ್ನು ರೋಗನಿರ್ಣಯ ಮಾಡುತ್ತಾರೆ. ಎದೆಯ ರೇಡಿಯೋಗ್ರಾಫ್ ಮತ್ತು ನಿರಂತರ ರಕ್ತ ಪರೀಕ್ಷೆಗಳು ತೊಡಕುಗಳನ್ನು ಅಥವಾ ತ್ವರಿತಗೊಳಿಸುವ ಕಾರಣಗಳನ್ನು ಸೂಚಿಸಬಹುದು ಹಾಗೂ ಅವನ್ನು ಹೆಚ್ಚಾಗಿ ರೋಗಿಗಳು ತುರ್ತು ವಿಭಾಗಕ್ಕೆ ಬಂದ ನಂತರ ನಿರ್ವಹಿಸಲಾಗುತ್ತದೆ. ಎಕೊಕಾರ್ಡಿಯೊಗ್ರ್ಯಾಮ್‌ನಲ್ಲಿ ಗೋಚರಿಸುವ ಹೊಸ ಸ್ಥಳೀಯ ಪೊರೆಯ ಚಲನೆಯ ವೈಪರಿತ್ಯಗಳು ಸಹ ಹೃದಯ ಸ್ನಾಯುವಿನ ಊತಕ ಸಾವನ್ನು ಸೂಚಿಸುತ್ತವೆ. ಎಕೊವನ್ನು ಅನಿಶ್ಚಿತ ರೋಗಿಗಳಲ್ಲಿ ಆನ್-ಕಾಲ್ ಹೃದ್ರೋಗ-ತಜ್ಞರು ನಿರ್ವಹಿಸುತ್ತಾರೆ. ರೋಗನಿದಾನ ಮಾಡುವಾಗ ರೋಗಲಕ್ಷಣಗಳು ಗೋಚರವಾಗದ ಸ್ಥಿರ ರೋಗಿಗಳಲ್ಲಿ, ದೈಹಿಕ ಅಥವಾ ಔಷಧದ ಒತ್ತಡದೊಂದಿಗೆ ಸೇರಿ ರಕ್ತದ ಹರಿವು ಕಡಿಮೆಯಾದ ಭಾಗವನ್ನು ಕಂಡುಹಿಡಿಯಲು ನ್ಯೂಕ್ಲಿಯರ್ ಔಷಧದಲ್ಲಿ ಟೆಚ್ನೆಟಿಯಮ್ (೯೯ ), ಸೆಸ್ಟಾಮಿಬಿ (ಅಂದರೆ " ಸ್ಕ್ಯಾನ್") ಅಥವಾ ಥಾಲಿಯಂ-೨೦೧ ಕ್ಲೋರೈಡ್ಅನ್ನು ಬಳಸಲಾಗುತ್ತದೆ. ಥಾಲಿಯಂನ್ನು ಅಂಗಾಂಶದ ಕಾರ್ಯಸಾಧ್ಯತೆಯನ್ನು ಕಂಡುಹಿಡಿಯಲೂ ಬಳಸಲಾಗುತ್ತದೆ, ಇದು ಕ್ರಿಯಾಶೀಲವಾಗಿರದ ಹೃದಯ ಸ್ನಾಯು ನಿಜವಾಗಿಯೂ ಸತ್ತಿದೆಯೇ ಅಥವಾ ಸುಪ್ತ ಸ್ಥಿತಿಯಲ್ಲಿದೆಯೇ ಅಥವಾ ಜಡವಾಗಿದೆಯೇ ಎಂಬುದನ್ನು ಗುರುತಿಸುತ್ತದೆ. ೧೯೭೯ರಲ್ಲಿ ರೂಪುಗೊಂಡ ನಿರ್ಣಾಯಕ ಅಂಶಗಳನ್ನು ನ ರೋಗನಿದಾನ ಮಾಡಲು ಸಾಂಪ್ರದಾಯಿಕ ರೀತಿಯಲ್ಲಿ ಬಳಸಲಾಗುತ್ತದೆ; ರೋಗಿಯು ಈ ಕೆಳಗಿನ ನಿರ್ಣಾಯಕ ಅಂಶಗಳಲ್ಲಿ ಎರಡು (ಬಹುಶಃ) ಅಥವಾ ಮೂರು (ಖಂಡಿತವಾಗಿ) ಅಂಶಗಳನ್ನು ಹೊಂದಿದ್ದರೆ ಆತ ಹೃದಯ ಸ್ನಾಯುವಿನ ಊತಕ ಸಾವನ್ನು ಹೊಂದಿದ್ದಾನೆಂದು ರೋಗನಿರ್ಣಯ ಮಾಡಲಾಗುತ್ತದೆ: ರಕ್ತಕೊರತೆಯ ಪ್ರಕಾರದ ಎದೆ ನೋವು ೨೦ ನಿಮಿಷಗಳಿಗಿಂತಲೂ ಹೆಚ್ಚು ಕಾಲವಿರುವುದು ಅನುಕ್ರಮ ಚಿತ್ರಣಗಳಲ್ಲಿ ವ್ಯತ್ಯಾಸ ಕಂಡುಬರುವುದು ಕ್ರಿಯೇಟಿನ್ ಕಿನೇಸ್- ಅಂಶ ಮತ್ತು ಟ್ರೋಪೋನಿನ್ ಮೊದಲಾದ ಸೀರಮ್ ಹೃದಯ-ಸ್ನಾಯುಗಳ ಜೈವಿಕ-ಗುರುತುಗ (ಕಾರ್ಡಿಯಾಕ್ ಬಯೊಮಾರ್ಕರ್‌) ಗಳ ಏರಿಳಿತ ನಿರ್ಣಾಯಕ ಅಂಶಗಳನ್ನು ಹೃದಯ-ಸ್ನಾಯುವಿನ ಜೈವಿಕ-ಗುರುತುಗಗಳಿಗೆ ಹೆಚ್ಚು ಪ್ರಾಮುಖ್ಯ ನೀಡಲು ೨೦೦೦ರಲ್ಲಿ ಪರಿಷ್ಕರಿಸಲಾಯಿತು. ಹೊಸ ಮಾರ್ಗದರ್ಶಕಗಳ ಪ್ರಕಾರ, ಹೃದಯದ ಟ್ರೋಪೋನಿನ್ ಏರಿಕೆಯು ವಿಶಿಷ್ಟ ರೋಗಲಕ್ಷಣಗಳು, ರೋಗಶಾಸ್ತ್ರೀಯ ಅಲೆಗಳು, ಉನ್ನತಿ ಅಥವಾ ಕುಸಿತ ಅಥವಾ ಪರಿಧಮನಿಯ ಮಧ್ಯಪ್ರವೇಶಿಸುವಿಕೆ ಮೊದಲಾದವು ನ ರೋಗನಿದಾನ ಮಾಡುತ್ತವೆ ಎಂಬುದನ್ನು ಜೊತೆಗೂಡಿಸಿಕೊಂಡಿರುತ್ತದೆ. == ತಡೆಗಟ್ಟುವಿಕೆ == ಕೊರೊನರಿ ಸ್ಟೆಂಟ್‌ ಅಳವಡಿಕೆ ಹೃದಯ ಸ್ನಾಯುವಿನ ಊತಕ ಸಾವು ಪುನರಾವರ್ತಿಸುವ ಅಪಾಯವನ್ನು, ರಕ್ತದೊತ್ತಡವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದರಿಂದ ಮತ್ತು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದರಿಂದ ಕಡಿಮೆ ಮಾಡಬಹುದು, ಮುಖ್ಯವಾಗಿ ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದು, ನಿಯತವಾಗಿ ವ್ಯಾಯಾಮ ಮಾಡುವುದು, ಹೃದಯದ ಕಾಯಿಲೆ ಇರುವ ರೋಗಿಗಳು ಗಣನೀಯವಾಗಿ ಆಹಾರ ಪಥ್ಯ ಮಾಡುವುದು ಮತ್ತು ಮದ್ಯಸೇವನೆಯನ್ನು ನಿಯಂತ್ರಿಸುವುದು. ನ ನಂತರ ರೋಗಿಗಳಿಗೆ ಸಾಮಾನ್ಯವಾಗಿ ಅನೇಕ ದೀರ್ಘಕಾಲದ ಔಷಧಿಗಳನ್ನು ನೀಡಲು ಆರಂಭಿಸಲಾಗುತ್ತದೆ. ಹೃದಯ ಸ್ನಾಯುವಿನ ಊತಕ ಸಾವು, ರಕ್ತಸಂಚಯದಿಂದಾಗಿ ಹೃದಯ ವಿಫಲತೆ ಅಥವಾ ಮುಮ್ಮಿದುಳು ಮತ್ತು ಅದಕ್ಕೆ ರಕ್ತವನ್ನೊದಗಿಸುವ ನಾಳಗಳ ಅಪಘಾತ () ಮೊದಲಾದ ಹೃದಯ ರಕ್ತನಾಳದ ಸಮಸ್ಯೆಗಳು ಮತ್ತೊಮ್ಮೆ ಬರದಂತೆ ತಡೆಗಟ್ಟುವ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ. ಸೂಚಿಸದ ಹೊರತು, ಅಂತಹ ಔಷಧಿಗಳು ಈ ಕೆಳಗಿನವುಗಳನ್ನು ಒಳಗೊಳ್ಳಬಹುದು: ಪರ್ಯಾಪ್ತ ಕೊಬ್ಬುಗಳ ಬದಲಿಗೆ ಬಹು ಅಪರ್ಯಾಪ್ತ ಕೊಬ್ಬುಗಳ ಬಳಕೆಯು ಪರಿಧಮನಿಯ ಹೃದಯ ಕಾಯಿಲೆಯನ್ನು ಕಡಿಮೆಮಾಡುತ್ತದೆಂದು ಸಾಕ್ಷ್ಯಾಧಾರಗಳು ಸೂಚಿಸುತ್ತವೆ. ಆಸ್ಪರಿನ್ ಮತ್ತು/ಅಥವಾ ಕ್ಲೋಪಿಡೋಗ್ರೆಲ್ ಮೊದಲಾದ ಕಿರುಬಿಲ್ಲೆ-ಪ್ರತಿರೋಧ ಔಷಧಿಗಳ ಬಳಕೆಯನ್ನು ಶೇಖರಣೆಯ ಒಡೆತ ಮತ್ತು ಹೃದಯ ಸ್ನಾಯುವಿನ ಊತಕ ಸಾವಿನ ಪುನರಾವರ್ತನೆಯ ಅಪಾಯವನ್ನು ಕಡಿಮೆ ಮಾಡಲು ಮುಂದುವರಿಸಲಾಗುತ್ತದೆ. ಆಸ್ಪರಿನ್‌ ಅದರ ಕಡಿಮೆ ದರ ಮತ್ತು ಹೆಚ್ಚು ಪರಿಣಾಮಕಾರಿತ್ವದಿಂದಾಗಿ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಆಸ್ಪರಿನ್ಅನ್ನು ಸಹಿಸದ ರೋಗಿಗಳು ಕ್ಲೋಪಿಡೋಗ್ರೆಲ್ಅನ್ನು ಬಳಸುತ್ತಾರೆ. ಕ್ಲೋಪಿಡೋಗ್ರೆಲ್ ಮತ್ತು ಆಸ್ಪರಿನ್‌ನ ಸಂಯುಕ್ತ ಬಳಕೆಯು ಹೃದಯ ರಕ್ತನಾಳದ ರೋಗಗಳ ಅಪಾಯವನ್ನು ಇನ್ನಷ್ಟು ಕಡಿಮೆ ಮಾಡಬಹುದು, ಆದರೆ ಇದರಿಂದ ರಕ್ತ-ಸೋರಿಕೆಯ ಅಪಾಯವು ಹೆಚ್ಚುತ್ತದೆ. ಮೆಟೊಪ್ರೊಲಾಲ್ ಅಥವಾ ಕಾರ್ವೆಡಿಲೋಲ್ ಮೊದಲಾದ ಬೀಟಾ ತಡೆಗಟ್ಟುವ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಇವು ನಿರ್ದಿಷ್ಟವಾಗಿ ಎಡ ಕುಹರದ ಮತ್ತು/ಅಥವಾ ಮುಂದುವರಿಯುವ ರಕ್ತ-ಕೊರತೆಯನ್ನು ಹೊಂದಿರುವ ಹೆಚ್ಚು-ಅಪಾಯಕಾರಿ ರೋಗಿಗಳಲ್ಲಿ ಉಪಯುಕ್ತವಾಗಿರುತ್ತವೆ. β-ರೋಧಕಗಳು ಮರಣ ಸಂಭವವನ್ನು ಮತ್ತು ರೋಗದ ಹರಡಿಕೆಯನ್ನು ಕಡಿಮೆ ಮಾಡುತ್ತವೆ. ಅವು ನಲ್ಲಿ ಹೃದಯ-ಸ್ನಾಯುವಿನ ರಕ್ತಕೊರತೆಯ ರೋಗಲಕ್ಷಣಗಳನ್ನೂ ಹೆಚ್ಚಿಸುತ್ತವೆ. ಪ್ರತಿರೋಧಕ ಚಿಕಿತ್ಸೆಯನ್ನು ರಕ್ತ-ಚಲನೆಯು-ಸ್ಥಿರವಾಗಿರುವ ರೋಗಿಗಳಲ್ಲಿ ಕಂಡುಬಂದ ೨೪–೪೮ ಗಂಟೆಗಳ ನಂತರ ಬಳಸಲಾಗುತ್ತದೆ, ನಿರ್ದಿಷ್ಟವಾಗಿ ನ ಚರಿತ್ರೆ, ಮಧುಮೇಹ, ಅಧಿಕ ರಕ್ತದೊತ್ತಡ, ಸತ್ತ ಊತಕವನ್ನು ಮುಂಭಾಗದಲ್ಲಿ ( ಯಿಂದ ನಿರ್ಣಯಿಸಿದಂತೆ) ಮತ್ತು/ಅಥವಾ ಎಡ ಕುಹರದ ಅಪಸಾಮಾನ್ಯ ಕ್ರಿಯೆಯನ್ನು ಹೊಂದಿರುವ ರೋಗಿಗಳಲ್ಲಿ. ಪ್ರತಿರೋಧಕಗಳು ಸಾವಿನ ಸಂಭವ, ಹೃದಯದ ಕಾರ್ಯ-ವಿಫಲತೆ ಮತ್ತು ನ ನಂತರ ಕುಹರವು ಹೊಸದಾಗಿ ರೂಪುಗೊಳ್ಳುವುದನ್ನು ಕಡಿಮೆ ಮಾಡುತ್ತದೆ. ಸ್ಟ್ಯಾಟಿನ್ ಚಿಕಿತ್ಸೆಯು ನ ನಂತರ ಸಾವಿನ ಸಂಭವ ಮತ್ತು ರೋಗದ ಹರಡಿಕೆಯನ್ನು ಕಡಿಮೆ ಮಾಡುತ್ತದೆಂದು ಹೇಳಲಾಗುತ್ತದೆ. ಸ್ಟ್ಯಾಟಿನ್‌ಗಳ ಪರಿಣಾಮಗಳು ಅವುಗಳ ಕಡಿಮೆಮಾಡುವ ಪ್ರಭಾವಕ್ಕಿಂತ ಹೆಚ್ಚಾಗಿರುತ್ತವೆ. ಸ್ಟ್ಯಾಟಿನ್‌ಗಳು ಶೇಖರಣೆಯನ್ನು ಜಡಗೊಳಿಸುವ ಮತ್ತು ರಕ್ತದ ಲಿಪಿಡ್‌ಗಳ ಮೇಲೆ ಪ್ರಭಾವ ಬೀರುವುದರೊಂದಿಗೆ ಹೃದಯ ಸ್ನಾಯುವಿನ ಊತಕ ಸಾವನ್ನು ತಡೆಗಟ್ಟುವ ಅನೇಕ ಇತರ ('ಪ್ಲಿಯೊಟ್ರೋಪಿಕ್') ಪರಿಣಾಮಗಳನ್ನು ಹೊಂದಿವೆಯೆಂಬ ಬಗ್ಗೆ ಸಾಮಾನ್ಯ ಅಭಿಪ್ರಾಯವಿದೆ. ಆಲ್ಡೊಸ್ಟೆರಾನ್ ಪ್ರತಿರೋಧಕ ಅಂಶ ಎಪ್ಲಿರೆನಾನ್ ಹೃದಯದ ಕಾರ್ಯ-ವಿಫಲತೆ ಮತ್ತು ಎಡ ಕುಹರದ ಅಪಸಾಮಾನ್ಯ ಕ್ರಿಯೆಯನ್ನು ಹೊಂದಿರುವ ರೋಗಿಗಳಲ್ಲಿ ನ ನಂತರ ಹೃದಯ ರಕ್ತನಾಳದ ಸಾವು ಸಂಭವಿಸುವ ಅಪಾಯವನ್ನು ಇನ್ನಷ್ಟು ಕಡಿಮೆ ಮಾಡುತ್ತದೆಂದು ಹೇಳಲಾಗಿದೆ. ಸ್ಪೈರೊನೊಲಕ್ಟೋನ್ ಮತ್ತೊಂದು ಆಯ್ಕೆಯಾಗಿದೆ, ಇದು ಇದರ ಕಡಿಮೆ ದರದಿಂದಾಗಿ ಕೆಲವೊಮ್ಮೆ ಎಪ್ಲಿರೆನಾನ್‌ಗಿಂತ ಯೋಗ್ಯವೆಂದು ಗೋಚರಿಸುತ್ತದೆ. ಸಾಮಾನ್ಯವಾಗಿ ಮೀನಿನಲ್ಲಿ ಕಂಡುಬರುವ ಒಮೇಗಾ-೩ ಕೊಬ್ಬನಾಮ್ಲಗಳು -ನಂತರ ಸಾವಿನ ಸಂಭವವನ್ನು ಕಡಿಮೆಮಾಡುತ್ತದೆ. ಈ ಕೊಬ್ಬಿನಾಮ್ಲಗಳು ಸಾವಿನ ಸಂಭವವನ್ನು ಯಾವ ಕ್ರಿಯೆಯ ಮೂಲಕ ಕಡಿಮೆಮಾಡುತ್ತವೆಂಬ ಬಗ್ಗೆ ತಿಳಿದಿಲ್ಲದಿದ್ದರೂ, ವಿದ್ಯುತ್ ಸ್ಥಿರತೆ ಮತ್ತು ಕುಹರದ ಕಂಪನದ ತಡೆಗಟ್ಟುವಿಕೆಯಿಂದಾಗಿ ಜೀವ ಉಳಿಸುವ ಉಪಯೋಗವನ್ನು ಮಾಡುತ್ತವೆಂದು ಊಹಿಸಲಾಗಿದೆ. ಆದರೆ ಹೆಚ್ಚು-ಅಪಾಯಕಾರಿ ಉಪ-ವರ್ಗದ ಉನ್ನತ ಅಧ್ಯಯನಗಳು ಒಮೇಗಾ-೩ ಕೊಬ್ಬಿನಾಮ್ಲಗಳಿಂದ ಮಾರಣಾಂತಿಕ ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನವು ಕಡಿಮೆಯಾಗುವುದು ಎಂಬುದನ್ನು ಸ್ಪಷ್ಟವಾಗಿ ತೋರಿಸಿಲ್ಲ. ಪುರುಷರಿಗೆ ರಕ್ತದಾನವು ಹೃದಯದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುವುದೆಂಬ ಅಭಿಪ್ರಾಯವಿದ್ದರೂ, ಅವುಗಳ ನಡುವಿನ ಸಂಬಂಧವು ಇನ್ನೂ ದೃಢಪಟ್ಟಿಲ್ಲ. ಅಸ್ಥಿರ ಗಂಟಲೂತದಂತಹ ಹೃದಯ ಸಮಸ್ಯೆಗಳನ್ನು ಮತ್ತು ಹೃದಯಾಘಾತದ ಇತರ ಪ್ರಕಾರಗಳನ್ನು ಹೊಂದಿರುವವರಿಗೆ ಹೆಪರಿನ್ ನೀಡುವುದರಿಂದ ಮತ್ತೊಮ್ಮೆ ಹೃದಯಾಘಾತ ಸಂಭವಿಸುವ ಅಪಾಯವು ಕಡಿಮೆಯಾಗುತ್ತದೆಂದು ಕೊಕ್ರೇನ್ ಅವಲೋಕನವು ಕಂಡುಹಿಡಿದಿದೆ. ಆದರೆ ಹೆಪರಿನ್ ಸ್ವಲ್ಪ ಪ್ರಮಾಣದ ರಕ್ತ ಸೋರಿಕೆಯಿಂದ ಬಳಲುವಂತೆ ಮಾಡುವ ಸಂಭವವನ್ನು ಹೆಚ್ಚಿಸುತ್ತದೆ. == ನಿರ್ವಹಣೆ == ಯು ಒಂದು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದ್ದು, ಇದಕ್ಕೆ ತಕ್ಷಣವೇ ಚಿಕಿತ್ಸೆ ನೀಡಬೇಕು. ಚಿಕಿತ್ಸೆಯು ಸಾಧ್ಯವಾದಷ್ಟು ಹೃದಯ ಸ್ನಾಯುಗಳನ್ನು ಪ್ರತಿಕೂಲ ಪರಿಸ್ಥಿತಿಗಳಿಂದ ರಕ್ಷಿಸಲು ಮತ್ತು ಹೆಚ್ಚಿನ ತೊಡಕುಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತದೆ, ಇದರಿಂದಾಗಿ 'ಟೈಮ್ ಈಸ್ ಮಸಲ್' ಎಂಬ ನುಡಿಗಟ್ಟು ಬಂದಿದೆ. ಆಮ್ಲಜನಕ, ಆಸ್ಪರಿನ್ ಮತ್ತು ನೈಟ್ರೊಗ್ಲಿಸರಿನ್ಅನ್ನು ನೀಡಲಾಗುತ್ತದೆ. ನೈಟ್ರೊಗ್ಲಿಸರಿನ್ ಪರಿಣಾಮಕಾರಿಯಾಗಿಲ್ಲದಿದ್ದರೆ ಮಾರ್ಫಿನ್ಅನ್ನು ಬಳಸಲಾಗುತ್ತದೆ; ಆದರೆ ಇದು ನಲ್ಲಿ ಸಾವಿನ ಸಂಭವವನ್ನು ಹೆಚ್ಚಿಸಬಹುದು. ಹೃದಯ ಸ್ನಾಯುವಿನ ಊತಕ ಸಾವಿನಲ್ಲಿ ಆಮ್ಲಜನಕದ ಹೆಚ್ಚಿನ ಪ್ರಮಾಣದ ಹರಿವು ಸಾವಿನ ಸಂಭವ ಮತ್ತು ಸತ್ತ ಊತಕದ ಗಾತ್ರವನ್ನು ಹೆಚ್ಚಿಸುತ್ತದೆಂದು ೨೦೦೯ ಮತ್ತು ೨೦೧೦ರ ಅವಲೋಕನವೊಂದು ಕಂಡುಹಿಡಿದಿದೆ, ಇದು ಇದರ ದೈನಂದಿನ ಬಳಕೆಯ ಬಗ್ಗೆ ಪ್ರಶ್ನಿಸುತ್ತದೆ. ಚರ್ಮೀಯ ಪರಿಧಮನಿಯ ಮಧ್ಯೆಪ್ರವೇಶಿಸುವಿಕೆ () ಅಥವಾ ಫೈಬ್ರಿನೋಲಿಸಿಸ್ಅನ್ನು ಗೆ ಅವುಗಳೊಂದಿಗೆ ಸೂಚಿಸಲಾಗುತ್ತದೆ. == ತೊಡಕುಗಳು == ತೊಡಕುಗಳು ಹೃದಯಾಘಾತವಾದ ತಕ್ಷಣವೇ ಕಂಡುಬರುತ್ತವೆ (ತೀವ್ರವಾದ ಹಂತದಲ್ಲಿ) ಅಥವಾ ಕಂಡುಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ (ದೀರ್ಘಕಾಲದ ಸಮಸ್ಯೆ). ತೀವ್ರ ತೊಡಕುಗಳೆಂದರೆ - ಹಾನಿಗೊಂಡ ಹೃದಯವು ದೇಹದಾದ್ಯಂತ ಸಮಪರ್ಕವಾಗಿ ರಕ್ತ ಪೂರೈಕೆ ಮಾಡಲು ಸಮರ್ಥವಾಗದಿದ್ದರೆ, ಹೃದಯದ ಕಾರ್ಯ-ವಿಫಲತೆ; ಹೃದಯ ಸ್ನಾಯುವಿನ ಒಡೆತ ಅಥವಾ ಊತ; ಮೈಟ್ರಲ್ ರಿಗರ್ಗಿಟೇಶನ್, ನಿರ್ದಿಷ್ಟವಾಗಿ ಊತಕ-ಸಾವು ತೊಟ್ಟಿನ ಸ್ನಾಯುವಿನ ಅಪಸಾಮಾನ್ಯ ಕ್ರಿಯೆಗೆ ಕಾರಣವಾದರೆ; ಮತ್ತು ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನ, ಉದಾಹರಣೆಗಾಗಿ, ಕುಹರದ ಕಂಪನ, ಕುಹರದ ಅತಿಸ್ಪಂದನ, ಹೃತ್ಕರ್ಣದ ಕಂಪನ ಮತ್ತು ಹೃದಯ ನಿರ್ಬಂಧ. ದೀರ್ಘ-ಕಾಲದ ತೊಡಕುಗಳೆಂದರೆ - ಹೃದಯದ ಕಾರ್ಯವಿಫಲತೆ, ಹೃತ್ಕರ್ಣದ ಕಂಪನ ಮತ್ತು ಹೃದಯ ಸ್ನಾಯುವಿನ ಊತಕ ಸಾವು ಮತ್ತೊಮ್ಮೆ ಕಂಡುಬರುವ ಅಪಾಯ. == ರೋಗದ ಮುನ್ಸೂಚನೆ == ವ್ಯಕ್ತಿಯ ಆರೋಗ್ಯ, ಹೃದಯದ ಹಾನಿಯ ವ್ಯಾಪ್ತಿ ಮತ್ತು ನೀಡಿದ ಚಿಕಿತ್ಸೆಯ ಆಧಾರದಲ್ಲಿ ಹೃದಯ ಸ್ನಾಯುವಿನ ಊತಕ ಸಾವಿನ ಮುನ್ಸೂಚನೆಯು ವ್ಯತ್ಯಾಸಗೊಳ್ಳುತ್ತದೆ. ೨೦೦೫ – ೨೦೦೮ ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ, ೩೦ ದಿನಗಳಲ್ಲಿ ಹೃದಯ-ಸಂಬಂಧಿ ಕಾಯಿಲೆಗಳಿಂದ ಸಂಭವಿಸಿದ ಸಾವಿನ ಪ್ರಮಾಣವು ೧೬.೬% ನಷ್ಟಿತ್ತು, ಈ ಪ್ರಮಾಣವು ಆಸ್ಪತ್ರೆಯನ್ನು ಆಧರಿಸಿ ೧೦.೯%ರಿಂದ ೨೪.೯% ರವರೆಗೆ ವ್ಯತ್ಯಾಸಗೊಳ್ಳುತ್ತದೆ. ತುರ್ತುಚಿಕಿತ್ಸೆ ಕೊಠಡಿಯಲ್ಲಿ ಲಭ್ಯವಿರುವ ಸಾಧನಗಳನ್ನು ಬಳಸಿಕೊಂಡು, ಪ್ರತಿಕೂಲ ಪರಿಣಾಮಗಳ ಹೆಚ್ಚಿನ ಅಪಾಯವನ್ನು ಹೊಂದಿರುವವರನ್ನು ಗುರುತಿಸಬಹುದು. ಕಡಿಮೆ ಅಪಾಯವನ್ನು ಹೊಂದಿರುವ ೦.೪% ನಷ್ಟು ರೋಗಿಗಳು ೯೦ ದಿನಗಳ ನಂತರ ಸಾವನ್ನಪ್ಪಿದ್ದಾರೆ ಮತ್ತು ಹೆಚ್ಚಿನ ಅಪಾಯವನ್ನು ಹೊಂದಿರುವವರಲ್ಲಿ ಇದು ೨೧.೧% ನಷ್ಟಿತ್ತು ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ. ಹೆಚ್ಚು ಪುನರುತ್ಪಾದಕ ಅಪಾಯಕಾರಿ ಅಂಶಗಳೆಂದರೆ: ವಯಸ್ಸು, ರಕ್ತ-ಚಲನೆಯ ಪರಿಮಿತಿಗಳು (ಉದಾಹರಣೆಗಾಗಿ, ಹೃದಯದ ಕಾರ್ಯವಿಫಲತೆ, ಹೃದಯ ಸ್ನಾಯು ಸ್ತಂಭನ, ಹೃದಯ ಸಂಕೋಚನದ ರಕ್ತದೊತ್ತಡ ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕಿಲ್ಲಿಪ್ ವರ್ಗ), -ಅಂಶದ ವಿಚಲನ, ಮಧುಮೇಹ, ಸೀರಮ್ ಕ್ರಿಯೇಟಿನಿನ್, ಹೊರಮೈಯ ನಾಳಗಳ ಕಾಯಿಲೆ ಮತ್ತು ಹೃದಯ-ಸ್ನಾಯು ಗುರುತುಗಗಳ ಉನ್ನತಿ. ಎಡ ಕುಹರದ ನಿಷ್ಕಾಶ ಅಂಶದ ನಿರ್ಧಾರಣೆಯು ಮುನ್ಸೂಚನಾ ಸಂಭವವನ್ನು ಹೆಚ್ಚಿಸುತ್ತದೆ. -ತರಂಗಗಳ ಪೂರ್ವಸೂಚಕ ಪ್ರಾಮುಖ್ಯವು ವಿವಾದದಲ್ಲಿದೆ. ತೊಟ್ಟಿನ ಸ್ನಾಯು ಅಥವಾ ಹೃದಯ ಸ್ನಾಯುವಿನ ಸ್ವತಂತ್ರ ಪೊರೆಯ ಒಡೆತದಂತಹ ಸ್ವಚಾಲಿತ ತೊಡಕುಗಳು ಕಂಡುಬಂದರೆ ಮುನ್ಸೂಚನೆಯು ಗಮನಾರ್ಹವಾಗಿ ಕ್ಷೀಣಿಸುತ್ತದೆ. ಹೃದಯ ಸ್ನಾಯುವಿನ ಊತಕ ಸಾವಿನಿಂದ ಉಂಟಾಗುವ ಸಾವಿನ ಪ್ರಮಾಣ ಮತ್ತು ರೋಗದ ಹರಡಿಕೆಯು ಅನೇಕ ವರ್ಷಗಳಿಂದ ಉತ್ತಮ ಚಿಕಿತ್ಸೆಯಿಂದಾಗಿ ಕಡಿಮೆಯಾಗುತ್ತಾ ಬಂದಿದೆ. == ಸೋಂಕುಶಾಸ್ತ್ರ == ಹೃದಯ ಸ್ನಾಯುವಿನ ಊತಕ ಸಾವು ರಕ್ತಕೊರತೆಯ ಹೃದಯ ಕಾಯಿಲೆಯ ಒಂದು ಸಾಮಾನ್ಯ ನಿರೂಪಣೆಯಾಗಿದೆ. ೧೨.೬ ನಷ್ಟು ಪ್ರಪಂಚದ ಸಾವುಗಳು ರಕ್ತಕೊರತೆಯ ಹೃದಯ ಕಾಯಿಲೆಯಿಂದ ಸಂಭವಿಸುತ್ತವೆ, ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸಾವಿನ ಪ್ರಮುಖ ಕಾರಣವಾಗಿದೆ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಏಡ್ಸ್ ಮತ್ತು ಶ್ವಾಸಕೋಶದ ಸೋಂಕಿನ ನಂತರ ಮೂರನೇ ಸ್ಥಾನದಲ್ಲಿದೆ ಎಂದು ೨೦೦೨ರಲ್ಲಿ ಅಂದಾಜಿಸಿದೆ. ಪ್ರಪಂಚದಾದ್ಯಂತ ಪ್ರತಿ ವರ್ಷಕ್ಕೆ ೩ ದಶಲಕ್ಷಕ್ಕಿಂತಲೂ ಹೆಚ್ಚು ಮಂದಿ ಅನ್ನು ಮತ್ತು ೪ ದಶಲಕ್ಷಕ್ಕಿಂತಲೂ ಹೆಚ್ಚು ಮಂದಿ ಅನ್ನು ಹೊಂದುತ್ತಾರೆ. ಪರಿಧಮನಿಯ ಹೃದಯ ಕಾಯಿಲೆಯು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸಂಭವಿಸುವ ೫ ಸಾವುಗಳಲ್ಲಿ ಒಂದಕ್ಕೆ ಕಾರಣವಾಗಿದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೃದಯ ರಕ್ತನಾಳದ ಕಾಯಿಲೆಯು () ಸಾವನ್ನು ಉಂಟುಮಾಡುವ ಪ್ರಮುಖ ಕಾರಣವಾಗುತ್ತಿರುವುದು ಸಾಮಾನ್ಯವಾಗಿದೆ. ಭಾರತದಲ್ಲಿ ಯಿಂದ ಸಂಭವಿಸಿದ ಸಾವಿನ ಪ್ರಮಾಣವು ೨೦೦೭ರಲ್ಲಿ ೩೨%ನಷ್ಟಿತ್ತು ಹಾಗೂ ಈ ಪ್ರಮಾಣವು ೧೯೯೦ರಲ್ಲಿ ೧.೧೭ ದಶಲಕ್ಷದಷ್ಟು ಮತ್ತು ೨೦೦೦ರಲ್ಲಿ ೧.೫೯ ದಶಲಕ್ಷದಷ್ಟಿದ್ದುದು ೨೦೧೦ರಲ್ಲಿ ೨.೦೩ ದಶಲಕ್ಷಕ್ಕೆ ಏರಬಹುದೆಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಯು ಹೆಚ್ಚುಕಡಿಮೆ ಒಂದು ಹೊಸ ಕಾಯಿಲೆಯಾಗಿದ್ದರೂ, ಅತಿ ಶೀಘ್ರದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಯಿತು ಮತ್ತು ಇದರಿಂದ ಸಂಭವಿಸುವ ಸಾವಿನ ಪ್ರಮಾಣವು ೧೯೮೫–೨೦೧೫ರಲ್ಲಿ ದ್ವಿಗುಣಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ. ಯಿಂದ ಸಂಭವಿಸುವ ಸಾವಿನ ಪ್ರಮಾಣವು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸಗೊಳ್ಳುತ್ತದೆ, ಈ ಪ್ರಮಾಣವು ಮೇಘಾಲಯದಲ್ಲಿ ೧೦%ನಷ್ಟಿದ್ದರೆ, ಪಂಜಾಬಿನಲ್ಲಿ ೪೯%ನಷ್ಟಿರುತ್ತದೆ (ಇತರ ಕಾರಣಗಳಿಂದ ಸಂಭಿಸುವ ಒಟ್ಟು ಸಾವಿನ ಪ್ರಮಾಣಕ್ಕೆ ಹೋಲಿಸಿದರೆ). ಪಂಜಾಬ್ (೪೯%), ಗೋವಾ (೪೨%), ತಮಿಳುನಾಡು (೩೬%) ಮತ್ತು ಆಂಧ್ರಪ್ರದೇಶ (೩೧%) ಮೊದಲಾದ ರಾಜ್ಯಗಳಲ್ಲಿ ಸಂಬಂಧಿತ ಕಾಯಿಲೆಗಳಿಂದ ಉಂಟಾಗುವ ಸಾವಿನ ಪ್ರಮಾಣವು ಅತಿ ಹೆಚ್ಚಾಗಿದೆ. ರಾಜ್ಯದಿಂದ ರಾಜ್ಯಕ್ಕೆ ಉಂಟಾಗುವ ವ್ಯತ್ಯಾಸಗಳು ಆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನಿರ್ದಿಷ್ಟ ಆಹಾರಕ್ರಮದ ಅಪಾಯಕಾರಿ ಅಂಶಗಳೊಂದಿಗೆ ಸಂಬಂಧವನ್ನು ಹೊಂದಿವೆ. ಭಾರತದಲ್ಲಿ ಮಿತವಾದ ದೈಹಿಕ ವ್ಯಾಯಾಮವು ಸಂಬಂಧಿತ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ (ವ್ಯಾಯಾಮ ಮಾಡದವರಿಗಿಂತ ಮಾಡುವವರು ಅರ್ಧಕ್ಕಿಂತಲೂ ಕಡಿಮೆ ಅಪಾಯವನ್ನು ಹೊಂದಿರುತ್ತಾರೆ). == ಕಾನೂನಿನ ತೊಡಕುಗಳು == ಸಾಮಾನ್ಯ ಕಾನೂನಿನ ಪ್ರಕಾರ, ಹೃದಯ ಸ್ನಾಯುವಿನ ಊತಕ ಸಾವು ಸಾಮಾನ್ಯವಾಗಿ ಒಂದು ಕಾಯಿಲೆಯಾಗಿದೆ, ಆದರೆ ಕೆಲವೊಮ್ಮೆ ಹಾನಿಯೂ ಆಗಬಹುದು. ಇದು ಕಾರ್ಮಿಕರ ಪರಿಹಾರದಂತಹ ಖಚಿತವಾದ ವಿಮಾ ಯೋಜನೆಗಳಿಗೆ ತೊಡಕುಗಳನ್ನು ಹೊಂದಿದೆ. ಹೃದಯಾಘಾತಕ್ಕೆ ಸಾಮಾನ್ಯವಾಗಿ ವಿಮಾರಕ್ಷಣೆಯನ್ನು ನೀಡಲಾಗುವುದಿಲ್ಲ; ಆದರೂ ಇದು, ಉದಾಹರಣೆಗಾಗಿ, ಅಸಾಮಾನ್ಯ ಭಾವನಾತ್ಮಕ ಒತ್ತಡ ಅಥವಾ ಅಸಾಮಾನ್ಯ ಪರಿಶ್ರಮದಿಂದಾಗಿ ಉದ್ಯೋಗ-ಸಂಬಂಧಿತ ಹಾನಿಯಾಗಬಹುದು. ಇದಕ್ಕೆ ಹೆಚ್ಚುವರಿಯಾಗಿ, ಕೆಲವು ನ್ಯಾಯಾಧಿಕಾರಗಳಲ್ಲಿ, ಪೋಲೀಸ್ ಅಧಿಕಾರಿಗಳಂತಹ ನಿರ್ದಿಷ್ಟ ಉದ್ಯೋಗಿಗಳು ಅನುಭವಿಸುವ ಹೃದಯಾಘಾತಗಳನ್ನು ಕಾನೂನು ಅಥವಾ ನೀತಿಯಿಂದ ಉದ್ಯೋಗ ಹಾನಿಗಳೆಂದು ವರ್ಗೀಕರಿಸಬಹುದು. ಕೆಲವು ರಾಷ್ಟ್ರಗಳಲ್ಲಿ ಅಥವಾ ರಾಜ್ಯಗಳಲ್ಲಿ, ಹೃದಯ ಸ್ನಾಯುವಿನ ಊತಕ ಸಾವನ್ನು ಅನುಭವಿಸಿದ ವ್ಯಕ್ತಿಯು ಕಾರು ಚಲಾಯಿಸುವುದು ಅಥವಾ ವಿಮಾನ ಹಾರಿಸುವುದು ಮೊದಲಾದ ಇತರರ ಜೀವವನ್ನು ಅಪಾಯಕ್ಕೆ ಒಡ್ಡುವ ಕಾರ್ಯದಲ್ಲಿ ತೊಡಗದಂತೆ ತಡೆಯಲಾಗುತ್ತದೆ. == ಸಂಶೋಧನೆ == ಹೃದಯ ಸ್ನಾಯುವಿನ ಊತಕ ಸಾವಿನ () ನಂತರ ರೋಗಿಗಳ ಸ್ವಂತ ಎಲುಬಿನ ಮಜ್ಜೆಯಿಂದ ಕಾಂಡ-ಕೋಶಗಳ ಪರಿಧಮನಿಯ ಸೇರಿಕೆಯ ಮೂಲಕ ನೀಡುವ ಕಾಂಡ-ಕೋಶ ಚಿಕಿತ್ಸೆಯು, ಆ ರೋಗಿಗಳಲ್ಲಿ ಪ್ಲೇಸೆಬೊದಿಂದ ಕಂಡುಬರದ ಎಡ ಕುಹರದ ನಿಷ್ಕಾಶ ಅಂಶ ಮತ್ತು ಅಂತಿಮ-ವ್ಯಾಕೋಚನದ ಗಾತ್ರದ ಸುಧಾರಣೆಯನ್ನು ಉಂಟುಮಾಡುತ್ತದೆ. ಆರಂಭಿಕ ಸತ್ತ ಊತಕದ ಗಾತ್ರವು ದೊಡ್ಡದಾದಂತೆ, ಸೇರಿಕೆಯ ಪ್ರಭಾವವೂ ಹೆಚ್ಚಾಗುತ್ತದೆ. ಉನ್ನತಿ ಗೆ ಚಿಕಿತ್ಸೆಯಾಗಿ ಮೂಲ ಜೀವಕೋಶದ ಸೇರಿಕೆಯ ಬಗೆಗಿನ ಪ್ರಾಯೋಗಿಕ ಪ್ರಯೋಗಗಳು ಮುಂದುವರಿಯುತ್ತಿವೆ. ನ ಚಿಕಿತ್ಸೆಗೆ ಪ್ರಸ್ತುತ ೩ ಜೈವಿಕ ಅಂಶ ಮತ್ತು ಅಂಗಾಂಶದ ಇಂಜಿನಿಯರಿಂಗ್ ವಿಧಾನಗಳಿವೆ. ಆದರೆ ಇವು ವೈದ್ಯಕೀಯ ಸಂಶೋಧನೆಯ ಆರಂಭಿಕ ಹಂತದಲ್ಲಿ ಇದ್ದವು. ಅವನ್ನು ರೋಗಿಗಳಿಗೆ ಅನ್ವಯಿಸುವುದಕ್ಕಿಂತ ಮೊದಲು ಅನೇಕ ಪ್ರಶ್ನೆಗಳು ಮತ್ತು ಸಮಸ್ಯೆಗಳಿಗೆ ಉತ್ತರಿಸಬೇಕಿದೆ. ಮೊದಲನೇ ವಿಧಾನದಲ್ಲಿ, ಹೃದಯದ ಕಾರ್ಯ-ವಿಫಲತೆಯನ್ನು ತಡೆಗಟ್ಟಲು ಪಾಲಿಮರಿಕ್ ಎಡ ಕುಹರವನ್ನು ನಿರ್ಬಂಧಿಸಲಾಗುತ್ತದೆ. ಎರಡನೇ ವಿಧಾನದಲ್ಲಿ, ಪ್ರನಾಳದಲ್ಲಿ ರೂಪಿಸಿದ ಹೃದಯ ಸ್ನಾಯುವಿನ ಅಂಗಾಂಶವನ್ನು ಬಳಸಲಾಗುತ್ತದೆ, ಇದನ್ನು ನಂತರ ರೋಗಿಯ ದೇಹದೊಳಗೆ ಸೇರಿಸಲಾಗುತ್ತದೆ. ಅಂತಿಮ ವಿಧಾನದಲ್ಲಿ, ಮೂಲ ಸ್ಥಾನದಲ್ಲಿ ರೂಪಿಸಿದ ಹೃದಯ ಸ್ನಾಯುವಿನ ಅಂಗಾಂಶವನ್ನು ಸೃಷ್ಟಿಸಲು ಹೃದಯ ಸ್ನಾಯುವಿಗೆ ಜೀವಕೋಶಗಳನ್ನು ಮತ್ತು/ಅಥವಾ ಆಧಾರಗಳನ್ನು ಸೇರಿಸಲಾಗುತ್ತದೆ. == ಇದನ್ನೂ ನೋಡಿ == ಹೃದಯಾಘಾತಕ್ಕೆ ಪ್ರಥಮ ಚಿಕಿತ್ಸೆ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು‌ == ಅಮೆರಿಕನ್ ಹಾರ್ಟ್ ಅಸೋಸಿಯೇಶನ್ಸ್ ಹಾರ್ಟ್ ಅಟ್ಯಾಕ್ ವೆಬ್ ಸೈಟ್ – ಹೃದಯಾಘಾತವನ್ನು ತಡೆಗಟ್ಟುವ, ಗುರುತಿಸುವ ಮತ್ತು ಚಿಕಿತ್ಸೆ ನೀಡುವ ಬಗೆಗಿನ ಮಾಹಿತಿ ಮತ್ತು ಮೂಲಗಳು. ಹಾರ್ಟ್ ಅಟ್ಯಾಕ್ – ಮೆಡ್‌ಲೈನ್‌ಪ್ಲಸ್‌ನ ಮೂಲಗಳ ಮುನ್ನೋಟ ಟೆಂಪ್ಲೇಟು: