ಹೊಸಕೋಟೆ -ಭಾರತದ ರಾಜ್ಯ ಕರ್ನಾಟಕದಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಟ್ಟಣಗಳಲ್ಲೊಂದು. ಹೊಸಕೋಟೆ ತಾಲೂಕು 548 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಹೊಸಕೋಟೆ ಎಂದಾಕ್ಷಣ ಎಲ್ಲರಿಗೂ ಕಾಡುವ ಪ್ರೆಶ್ನೆ ಒಂದೇ ಹೊಸಕೋಟೆ ಎಂಬ ಹೆಸರು ಹೇಗೆ ಬಂತು ಹೊಸಕೋಟೆಯ ಇತಿಹಾಸ ಏನು ಎಂಬುದು, ತಿಳಿದುಕೊಳ್ಳೋ ಕುತೂಹಲ ಎಲ್ಲರಿಗೂ ಇರುತ್ತದೆ. ಹೊಸಕೋಟೆಯನ್ನು ಆಳ್ವಿಕೆ ಮಾಡಿದ ಮುಖ್ಯವಾದ ವಂಶಸ್ಥರು ಅಂದರೆ ಅವರು ಸುಗಟುರು ಪಾಳೆಗಾರರು ಈ ಪಾಳೇಗಾರರ ವಂಶದ ಮೂಲ ಪುರುಷ ದೇವಪ್ಪ ಗೌಡ ( ಕ್ರಿ ಶ 1377 - 1422) ಸುಗಟುರು ಪಾಳೆಗಾರರು ವಿಜಯನಗರ ಸಾಮ್ರಾಜ್ಯದ ಸಮಂತರಾಗಿದ್ದು ದೇವಪ್ಪ ಗೌಡರ ನಂತರ ಆತನ ಮಗ ಹಾಗೂ ಹೊಸಕೋಟೆಯ ಮೂಲಪುರುಷನು ಅದ ತಮ್ಮೆಗೌಡ (ಕ್ರಿ ಶ 1422-1464) ತನ್ನ ಆಡಳಿತಾವಧಿಯಲ್ಲಿ ಹೊಸಕೋಟೆಯಲ್ಲಿ ಮಣ್ಣಿನ ಕೋಟೆಯನ್ನು ಕಟ್ಟಿಸುತ್ತಾನೆ. ಹೊಸಕೋಟೆಯು ಸುಗಟುರಿನಿಂದ ದಕ್ಷಿಣಕ್ಕೆ ಸುಮಾರು 16 ಕಿ ಮೀ ದೂರದಲ್ಲಿದ್ದು ರಕ್ಷಣೆಯ ದೃಷ್ಟಿಯಿಂದ ಆಯಕಟ್ಟಿನ (ನಗರದ ಸುತ್ತಲು) ಪ್ರದೇಶದಲ್ಲಿ ಶತ್ರುಗಳ ಸಂಭವನೀಯ ದಾಳಿಯಿಂದ ರಕ್ಷಿಸಿಕೊಳ್ಳಲು ಭದ್ರವಾದ ರಕ್ಷಣಾ ಗೋಡೆಯನ್ನು ನಿರ್ಮಿಸಿ ಕೋಟೆಯ ಸುತ್ತಲೂ ಕಂದಕ ನಿರ್ಮಿಸಿ ಮುಳ್ಳು ಹಾಗು ಕಳ್ಳಿ ಮರಗಳನ್ನು ಬೆಳೆಸಿ ಶತ್ರುಗಳಿಂದ ರಕ್ಷಣೆ ಪಡೆಯಲಾಗುತ್ತಿತು ರಕ್ಷಣಾ ಗೋಡೆಯನ್ನು ಕೋಟೆ ಎಂದು ಕರೆದು ಅದನ್ನು ಹೊಸಕೋಟೆ ಎಂದು ಕರೆಯಲಾಗುತ್ತದೆ. ಹೊಸಕೋಟೆಯ ಕೋಟೆ ನಿರ್ಮಾಣ 1422-1464 ರ ಮಧ್ಯ ಕಟ್ಟಿಸಲಾಗಿದ್ದು , ಬೆಂಗಳೂರಿನಲ್ಲಿ ಯಲಹಂಕ ನಾಡ ಪ್ರಭುಗಳ ವಂಶಕ್ಕೆ ಸೇರಿದ ಒಂದನೆಯ ಕೆಂಪೇಗೌಡರು ಬೆಂಗಳೂರು ಕೋಟೆಯನ್ನು 1535 ರಲ್ಲಿ ಕಟ್ಟಿಸಿದ್ದು ಅದಕ್ಕೂ ಮುಂಚೆ ಅಂದರೆ 75 ವರ್ಷಗಳ ಮುಂಚೆಯೇ ಹೊಸಕೋಟೆಯ ಕೋಟೆಯನ್ನು ತಮ್ಮೆಗೌಡ ಕಟ್ಟಿಸಿರುತ್ತಾರೆ. "ನಮ್ಮ ಹೊಸಕೋಟೆ" ಯ ಸಮಗ್ರ ಇತಿಹಾಸದ ಬಗ್ಗೆ ಯಾವುದೇ ಹಿರಿಯರಿಗೆ ಕೇಳಿದರು ಅವರು ಹೇಳುವ ಹೆಸರು ಹೊಸಕೋಟೆಯ ಮೂಲ ಪುರುಷ ಹಾಗೂ ಹೊಸಕೋಟೆಯ ನಿರ್ಮಾಣ ಮಾಡಿದ ತಮ್ಮೆಗೌಡರ ಹೆಸರು ಮಾತ್ರ ಕೇಳಿಬರುತ್ತೆ 3 ಶತಮಾನಗಳ ಆಳ್ವಿಕೆ ನಡೆಸಿರುವ ಸುಗಟುರು ಪಾಳೇಗಾರರು ಯಾರು ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ ಹೊಸಕೋಟೆಯನ್ನು ಹಲವು ಪಾಳೆಗಾರರು ಆಳ್ವಿಕೆ ನಡೆಸಿದ್ದು ಎಲ್ಲಾ ಪಾಳೆಗಾರರು ಹೊಸಕೋಟೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು ಅವರ ಪಟ್ಟಿ ಕೆಳಗಿನಂತಿದೆ. ತಮ್ಮೆಗೌಡ (1422-1464) ಚಿಕ್ಕರಾಯ ತಮ್ಮೆಗೌಡ (1೪೬೯-1542) ಇಮ್ಮಡಿ ತಮ್ಮೆಗೌಡ (1542-1608) ಮುಮ್ಮಡಿ ತಮ್ಮೆಗೌಡ (1608-1642) ಮುಮ್ಮಡಿ ಚಿಕ್ಕರಾಯ ತಮ್ಮೆಗೌಡ (1642-1670) ಮು ಚಿ ತಮ್ಮೆಗೌಡರ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹೊಸಕೋಟೆಯು ಬಿಜಾಪುರದ ಆದಿಲ್ ಷಾಹಿಗಳ ವಶವಾಗುತ್ತದೆ ಅವರ ಪರವಾಗಿ ಶಿವಾಜಿ ಮಹಾರಾಜರ ತಂದೆ ಶಹಾಜಿ ರಾಜೆ ಭೋಸ್ಲೆ ರವರ ಆಳ್ವಿಕೆಯಲ್ಲಿ ಇರುತ್ತದೆ 1664 ಶಹಾಜಿ ಮರಣದ ನಂತರ ಅವರ ಮಗ ವೆಂಕೋಜಿ ರವರ ಆಳ್ವಿಕೆಗೆ ಒಳಪಡುತ್ತದೆ. 1756 ರಲ್ಲಿ ಹೊಸಕೋಟೆ ಮೈಸೂರು ಸಂಸ್ಥಾನಕ್ಕೆ ಸೇರುತ್ತದೆ 1831-1881 ರ ವರಗೆ ಮೈಸೂರು ಸಂಸ್ಥಾನ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿರುತ್ತದೆ. 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಗೊಂಡ ನಂತರ ಶ್ರೀ ಜಯಚಾಮರಾಜ ಒಡೆಯರ್ ಮೈಸೂರು ರಾಜ್ಯದ ಆಡಳಿತ ರೆಡ್ಡಿ ರವರಿಗೆ ಅಧಿಕಾರ ಹಸ್ತಾಂತರಿಸಿದರು ಅದರೊಂದಿಗೆ ಹೊಸಕೋಟೆಯು ಮೈಸೂರು ಸಂಸ್ಥಾನದೊಂದಿಗೆ ಕರ್ನಾಟಕಕ್ಕೆ ಸೇರಿತು. ಈ ಮಾಹಿತಿಯನ್ನು ಡಾ ರವಿಕುಮಾರ್ ರವರ ಶಾಸನಗಳ ಆಧಾರದಲ್ಲಿ ಹೊಸಕೋಟೆ ಎನ್ನುವ ಲೇಖನದ ಮೂಲಕ ನೀಡಲಾಗಿದೆ ನಿಮ್ಮ ಪುರುಷೋತ್ತಮ್ 9886842756 ನಮ್ಮಹೊಸಕೋಟೆ ಹೊಸಕೋಟೆಸಮಗ್ರಇತಿಹಾಸ == ಭೌಗೋಳಿಕ == ಹೊಸಕೋಟೆಯು ೧೩.೦೭ ಉತ್ತರ ಅಕ್ಷಾಂಶ ಮತ್ತು ೭೭.೮ ಪೂರ್ವ ರೇಖಾಂಶ ( 13.07° 77.8° )ದಲ್ಲಿದೆ. ಅದರ ಸರಾಸರಿ ಎತ್ತರವು ಸಮುದ್ರಮಟ್ಟದಿಂದ ೮೭೫ ಮೀಟರ್ಗಳು ಅಥವಾ ೨೮೭೦ ಅಡಿಗಳು. == ಸಂಪರ್ಕ == ಹೊಸಕೋಟೆಯು ಎನ್‌ಹೆಚ್ ೪ ರಲ್ಲಿ ಇದ್ದು ಬೆಂಗಳೂರು ನಗರದಿಂದ ಸುಮಾರು ೨೨.೩ ಕಿ.ಮೀ. ದೂರದಲ್ಲಿದ್ದು , ಅಲ್ಲಿಗೆ ಬೆಂಗಳೂರಿನಿಂದ ಬಿ.ಎಂ.ಟಿ.ಸಿ ಮತ್ತು ಕ.ರಾ.ರ.ಸಾ.ಸಂ ಗಳ ಬಹಳಷ್ಟು ಬಸ್ಸುಗಳ ಸೌಲಭ್ಯ ಇದೆ. ಬೆಂಗಳೂರಿನಿಂದ ತಮಿಳುನಾಡಿನ ರಾಜಧಾನಿ ಚೆನ್ನೈಗೆ ರಾಷ್ಟ್ರೀಯ ಹೆದ್ದಾರಿ ೪ (ಹಳೆ ಮದ್ರಾಸ್ ರಸ್ತೆ) ಸಂಪರ್ಕವನ್ನು ಕಲ್ಪಿಸುತ್ತದೆ ಹಾಗೆ ಬೆಂಗಳೂರಿನಿಂದ ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಗೆ ಮುಖ್ಯ ಸಂಪರ್ಕವನ್ನು ಕಲ್ಪಿಸುತ್ತದೆ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳು ಹತ್ತಿರದ ರೇಲ್ವೆ ನಿಲ್ದಾಣಗಳು. == ಜನಸಂಖ್ಯಾ ಮಾಹಿತಿ == ೨೦೦೧ರ ಭಾರತೀಯ ಜನಗಣತಿGRIndiaಯ ಪ್ರಕಾರ , ಹೊಸಕೋಟೆಯ ಜನಸಂಖ್ಯೆ ೩೬,೩೩೩ ಇತ್ತು . ಗಂಡಸರು ಜನಸಂಖ್ಯೆಯ ೫೨% ರಷ್ಟೂ ಹೆಂಗಸರು ೪೮% ರಷ್ಟೂ ಇದ್ದರು. ಹೊಸಕೋಟೆಯ ಸರಾಸರಿ ಸಾಕ್ಷರತೆ ೭೦% ಇದ್ದು ಇದು ದೇಶದ ಸರಾಸರಿಯಾದ ೫೯.೫% ಕ್ಕಿಂದ ಹೆಚ್ಚಾಗಿದೆ. ಗಂಡಸರ ಸಾಕ್ಷರತೆ ೭೪% ಮತ್ತು ಹೆಂಗಸರದು ೬೫%. ಹೊಸಕೋಟೆಯ ಜನಸಂಖ್ಯೆಯ ೧೨% ಭಾಗವು ೬ ವರ್ಷಕ್ಕಿಂತ ಕಡಿಮೆಯವರದು. == ಶಿಕ್ಷಣ ಸಂಸ್ಥೆಗಳು == ಅನೇಕ ಖಾಸಗಿ ಮತ್ತು ಸರಕಾರೀ ಶಿಕ್ಷಣ ಸಂಸ್ಥೆಗಳು ಹೊಸಕೋಟೆಯಲ್ಲಿ ಇವೆ. ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ () ಮತ್ತು ಭಾರತೀಯ ಖಭೌತಶಾಸ್ತ್ರ ಸಂಸ್ಥೆಗಳೂ ಇವೆ. ಪದವಿಪೂರ್ವ ಶಿಕ್ಷಣ (11 12) ಸರಕಾರಿ ಕಾಲೇಜು, ಹೊಸಕೋಟೆ . () ... trustಹೈಸ್ಕೂಲುಗಳು (8-10) ವಿವೇಕಾನಂದ ಪ್ರೌಢಶಾಲೆ ಸೂಲಿಬೆಲೆ ಬ್ರೈಟ್ ಸ್ಕೂಲ್ ಶ್ರೀ ವಿವೇಕಾನಂದ ವಿದ್ಯಾ ಕೇಂದ್ರ ವೈದ್ಯಕೀಯ ಕಾಲೇಜು ಎಂ ವಿ ಜೆ ಚ್, (-7) , == ಪ್ರಮುಖ ವ್ಯಕ್ತಿಗಳು == === ಸಾಹಿತ್ಯಹೊಸಕೋಟೆ ಕೃಷ್ಣಶಾಸ್ತ್ರಿ === ಸಮೇತನಹಳ್ಳಿ ರಾಮಾರಾವ್ ದೊಡ್ಡ ರಂಗೇಗೌಡ ನೇ ಬಾ ಚಂದ್ರಮೋಹನ್ ವೈ ಎನ್ ಎಸ್ ಮೂರ್ತಿ ನಾಣಿ === ಬ್ಯಾಂಕುಗಳುಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ === ಕೆನರಾ ಬ್ಯಾಂಕ್ ವಿಜಯಾ ಬ್ಯಾಂಕ್ ಎಚ್ ಡಿ ಎಫ್ ಸಿ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಕಾರ್ಪೋರೇಷನ್ ಬ್ಯಾಂಕ್ ಟೌನ್ ಕೋಆಪೆರೇಟಿವ್ ಬ್ಯಾಂಕ್ ಕರ್ನಾಟಕ ಬ್ಯಾಂಕ್ == ಉಲ್ಲೇಖಗಳು ==