ಮುರುಘಾ ಶ್ರೀಬೆಂಗಳೂರು : ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶ್ರೀ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಏಕಸದಸ್ಯ ಪೀಠ ಅನುಮತಿ ನೀಡಿದೆ.ಆರೋಪ ನಿಗದಿ ಪ್ರಶ್ನಿಸಿ ಮುರುಘಾ ಶ್ರೀ ಹೈಕೋರ್ಟ್ ಗೆ  ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಂ ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿ, ಆರೋಪ ಮರು ನಿಗದಿಗೆ ಆದೇಶಿಸಿದೆ.  ಜಾತಿ ನಿಂದನೆ, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ, ಸಾಕ್ಷ್ಯ ನಾಶ ಕುರಿತ ಆರೋಪ ರದ್ದು ಮಾಡಿದೆ. ಮುರುಘಾ ಶ್ರೀ ವಿರುದ್ಧದ ಅತ್ಯಾಚಾರ, ಪೊಕ್ಸೋ ಪ್ರಕರಣಗಳ‌ ವಿಚಾರಣೆಗೆ ಹೈಕೋರ್ಟ್  ಅನುಮತಿ ನೀಡಿದೆ. ಆ ಮೂಲಕ ಮುರುಘಾ ಶ್ರೀ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ ನ್ಯಾ.ಎಂ ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಿದೆ.