ಬೆಂಗಳೂರು: ಅಯೋಧ್ಯಯಲ್ಲಿ ಇಂದು(ಜ.22) ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದ್ದು, ನಟ ಕಿಶೋರ್‌ ಭಕ್ತಿ ಭಂಡಾರಿ ಬಸವಣ್ಣನವರ ʼಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾʼ ವಚನವನ್ನು ಹಂಚಿಕೊಂಡಿದ್ದಾರೆ.ತಮ್ಮ ಫೇಸ್‌ ಬುಕ್‌ ಪೇಜ್ ನಲ್ಲಿ ಪೋಸ್ಟವೊಂದನ್ನು ಹಂಚಿಕೊಂಡಿರುವ ಅವರು, "ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯಾ ಕೂಡಲಸಂಗಮದೇವಾ ಕೇಳಯ್ಯಾ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಬರೆದುಕೊಂಡಿದ್ದಾರೆ.