ಸಾಂದರ್ಭಿಕ ಚಿತ್ರಬಳ್ಳಾರಿ: ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ‌.ಆರೋಪಿಗಳಾದ ಕೌಲ್ ಬಝಾರ್ ನಿವಾಸಿಗಳಾದ ನವೀನ್, ತನ್ನು, ಶಕೀಬ್ ಹಾಗೂ ಮತ್ತೊಬ್ಬನ ವಿರುದ್ಧ ಬಳ್ಳಾರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ʼಅಕ್ಟೋಬರ್ 11ರಂದು‌ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯನ್ನು ಕಾಲೇಜು ಸಿಬ್ಬಂದಿ, 'ನಿಮ್ಮ‌‌ ಅಣ್ಣ ಕರೆಯುತ್ತಿದ್ದಾನೆ' ಎಂದು ಕರೆದಿದ್ದಾರೆ. ಹೊರಬಂದ ಆಕೆಯನ್ನು ಆಕೆಯ ಪರಿಚಯದವನೇ ಆದ ನವೀನ್‌ ಸೇರಿ ನಾಲ್ವರು ಆಟೋದಲ್ಲಿ ಅಪಹರಿಸಿ ದಾರಿ ಮಧ್ಯೆದಲ್ಲಿ ಬಲವಂತವಾಗಿ ಬಿಯರ್ ಕುಡಿಸಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪುರದ ಹೊಟೇಲ್‌ವೊಂದರಲ್ಲಿ ಅಕ್ರಮವಾಗಿ ಕೂಡಿಹಾಕಿ ಅ. 12ರವರೆಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆʼ ಎಂದು ಯುವತಿಯ ತಂದೆ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪ್ರಮುಖ ಆರೋಪಿ ನವೀನ್ ಎಂಬಾತನ್ನು ಬಂಧಿಸಿರುವ ಪೊಲೀಸರು, ಇನ್ನುಳಿದವರ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಳಿದು ಬಂದಿದೆ.