ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನಾಗಿ ಸಚಿವರನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ.  ಚುನಾವಣೆಗೆ ಸಂಬಂಧಿಸಿದಂತೆ ಲೋಕಸಭಾ ಕ್ಷೇತ್ರಗಳಲ್ಲಿ ಪುವಾಸ ಮಾಡಿ ಪಕ್ಷದ ಎಲ್ಲಾ ಹಂತಗಳ ಮುಖಂಡರುಗಳನ್ನು ಸಂಪರ್ಕಿಸಿ ಸಭೆಗಳನ್ನು ಆಯೋಜಿಸಿ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ವರದಿ ನೀಡಲು ವೀಕ್ಷಕರುಗಳಿಗೆ ಜವಾಬ್ದಾರಿ ವಹಿಸಲಾಗಿದೆ.  ಯಾವ ಕ್ಷೇತ್ರಕ್ಕೆ ಯಾರು ವೀಕ್ಷಕರು?1. ಬಾಗಲಕೋಟೆ - ಪ್ರಿಯಾಂಕ ಖರ್ಗೆ  2. ಬೆಂಗಳೂರು ಕೇಂದ್ರ - ಎನ್ಎಸ್ ಬೋಸರಾಜು  3. ಬೆಂಗಳೂರು ಉತ್ತರ - ಡಾ ಜಿ ಪರಮೇಶ್ವರ್  4. ಬೆಂಗಳೂರು ಗ್ರಾಮಾಂತರ - ಕೆ ವೆಂಕಟೇಶ್  5. ಬೆಂಗಳೂರು ದಕ್ಷಿಣ - ಡಾ ಶರಣಪ್ರಕಾಶ ಪಾಟೀಲ್  6. ಬೆಳಗಾವಿ - ಶಿವರಾಜ್ ತಂಗಡಗಿ  7. ಗುಲ್ಬರ್ಗಾ - ಬಿ ನಾಗೇಂದ್ರ  8. ಬೀದರ್ - ಸಂತೋಷ್ ಎಸ್ ಲಾಡ್  9. ವಿಜಯಪುರ - ಸತೀಶ್ ಜಾರಕಿಹೊಳಿ  10. ಚಾಮರಾಜನಗರ - ದಿನೇಶ್ ಗುಂಡೂರಾವ್  11. ಚಿಕ್ಕಬಳ್ಳಾಪುರ - ಜಮೀರ್ ಅಹ್ಮದ್ಖಾನ್  12. ಚಿಕ್ಕೋಡಿ - ಡಿ ಸುಧಾಕರ್  13. ಚಿತ್ರದುರ್ಗ - ಎಚ್ಸಿ ಮಹದೇವಪ್ಪ  14. ದಕ್ಷಿಣ ಕನ್ನಡ - ಮಧು ಬಂಗಾರಪ್ಪ  15. ದಾವಣಗೆರೆ - ಈಶ್ವರ್ ಖಂಡ್ರೆ  16. ಧಾರವಾಡ - ಲಕ್ಷ್ಮೀ ಹೆಬ್ಬಾಳ್ಕರ್  17. ಬಳ್ಳಾರಿ - ಶಿವಾನಂದ ಪಾಟೀಲ್  18. ಹಾಸನ - ಎನ್ ಚಲುವರಾಯಸ್ವಾಮಿ  19. ಹಾವೇರಿ - ಎಸ್ಎಸ್ ಮಲ್ಲಿಕಾರ್ಜುನ  20. ಕೋಲಾರ - ರಾಮಲಿಂಗಾರೆಡ್ಡಿ  21. ಕೊಪ್ಪಳ - ಆರ್ಬಿ ತಿಮ್ಮಾಪುರ  22. ಮಂಡ್ಯ - ಡಾ ಎಂಸಿ ಸುಧಾಕರ್  23. ಮೈಸೂರು - ಬೈರತಿ ಸುರೇಶ್  24. ರಾಯಚೂರು - ಕೆಎಚ್. ಮುನಿಯಪ್ಪ  25. ಶಿವಮೊಗ್ಗ - ಕೆಎನ್. ರಾಜಣ್ಣ  26. ತುಮಕೂರು - ಕೃಷ್ಣ ಬೈರೇಗೌಡ  27. ಉಡುಪಿ - ಚಿಕ್ಕಮಗಳೂರು - ಮಂಕಾಳ ವೈದ್ಯ  28. ಉತ್ತರ ಕನ್ನಡ - ಎಚ್.ಕೆ ಪಾಟೀಲ್  