ಬೆಂಗಳೂರು:ದೇಶದಲ್ಲಿ 2014 ರಿಂದ 2018ರ ನಡುವೆ ಶೇ.62 ಚಿರತೆಗಳ ಸಂಖ್ಯೆ ಹೆಚ್ಚಾಗಿದ್ದು, ಕರ್ನಾಟಕ ದ್ವಿತೀಯ ಸ್ಥಾನ ಪಡೆದಿದೆ. ದೆಹಲಿಯಲ್ಲಿ ಸೋಮವಾರ 2018ರ ಅಂತ್ಯಕ್ಕೆ ಪೂರ್ಣಗೊಂಡ ಚಿರತೆ ಗಣತಿ ವರದಿಯನ್ನು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಬಿಡುಗಡೆ ಮಾಡಿದರು.
ಹುಲಿ ಮತ್ತು ಸಿಂಹಗಳಂತೆ ಚಿರತೆ ಕೂಡ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ, ಕ್ಯಾಮೆರಾ ಟ್ರಾ್ಯಪಿಂಗ್ ಮೂಲಕ ಮಾಡಿದ ಚಿರತೆ ಗಣತಿ ನಡೆಸಲಾಗಿತ್ತು. 2014ರಲ್ಲಿ ಸುಮಾರು 8 ಸಾವಿರ ಇದ್ದ ಚಿರತೆಗಳ ಸಂಖ್ಯೆ 2018ರ ವೇಳೆಗೆ 12,852ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು. ದೇಶದಲ್ಲಿ ಅತಿ ಹೆಚ್ಚು ಚಿರತೆ ಹೊಂದಿದ ರಾಜ್ಯಗಳಲ್ಲಿ ಮಧ್ಯಪ್ರದೇಶ (3,421), ಕರ್ನಾಟಕ (1,783) ಮತ್ತು ಮಹಾರಾಷ್ಟ್ರ (1,690) ಮುಂಚೂಣಿಯಲ್ಲಿವೆ. ಇತ್ತೀಚೆಗೆ, ಬೇಟೆಯಾಡುವುದು, ಆವಾಸಸ್ಥಾನ ನಷ್ಟ, ನೈಸರ್ಗಿಕ ಬೇಟೆ, ಸವಕಳಿ ಮತ್ತು ಸಂಘರ್ಷಗಳು ಚಿರತೆಗಳ ಜೀವಕ್ಕೆ ಉರುಳಾಗಿ ಪರಿಣಮಿಸಿವೆ.
ಪ್ರಾದೇಶಿಕ ವಿಭಾಗವಾರು ಚಿರತೆಗಳ ಸಂಖ್ಯೆ: ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಛತ್ತೀಸ್​ಘಡ, ಜಾರ್ಖಂಡ್, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಅತಿ ಹೆಚ್ಚು 8,071 ಚಿರತೆಗಳು ಕಂಡುಬಂದಿವೆ. ಪಶ್ಚಿಮ ಘಟ್ಟ ಪ್ರದೇಶಗಳಾದ ಕರ್ನಾಟಕ, ತಮಿಳುನಾಡು, ಗೋವಾ, ಕೇರಳದಲ್ಲಿ 3,387 ಚಿರತೆಗಳಿವೆ. ಶಿವಾಲಿಕ್, ಗಂಗಾ ಬಯಲು ಪ್ರದೇಶಗಳಾದ ಉ.ಪ್ರದೇಶ, ಉತ್ತರಾಖಂಡ ಮತ್ತು ಬಿಹಾರಗಳಲ್ಲಿ 1,253, ಈಶಾನ್ಯ ಬೆಟ್ಟಗಳಲ್ಲಿ 141 ಚಿರತೆಗಳಿವೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
