ಕಲಬುರಗಿ:ಅವರೆಲ್ಲರೂ ಮಹಾರಾಷ್ಟ್ರದ ಕೃಷಿ ಮಹಾವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಾಕ್​ಡೌನ್​ ಏಪ್ರಿಲ್​ 14ಕ್ಕೆ ಮುಗಿಯುವ ಬದಲು ಮೇ 3ಕ್ಕೆ ವಿಸ್ತರಣೆಗೊಂಡಿದ್ದರಿಂದ ಬೇಸರಗೊಂಡಿದ್ದರು. ಹಾಗಾಗಿ ಕರ್ನಾಟಕದ ತಮ್ಮ ಊರುಗಳಿಗೆ ಕಾಲ್ನಡಿಗೆ ಮೂಲಕ ಮರಳಲು ನಿರ್ಧರಿಸಿದರು.
ಅದರಂತೆ 15 ವಿದ್ಯಾರ್ಥಿನಿಯರು ಸೇರಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ 39 ವಿದ್ಯಾರ್ಥಿಗಳು ಲಾಥೂರ್​ನಿಂದ ಹೊರಟು ಆಲಂದ ತಾಲೂಕಿನ ಕಾಜುರಿ ಸಮೀಪದ ಅಂತರರಾಜ್ಯ ಚೆಕ್​ಪೋಸ್ಟ್​ ತಲುಪಿದರು. ಅಲ್ಲಿ ಅವರನ್ನು ತಡೆದ ಅಧಿಕಾರಿಗಳು, ವಿಚಾರಣೆ ನಡೆಸಿದರು. ಬಳಿಕ ಆಳಂದದ ಹೊರವಲಯದಲ್ಲಿರುವ ಕೋರಳ್ಳಿ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್​ನಲ್ಲಿ ಇರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಕ್ವಾರಂಟೈನ್​ನಲ್ಲಿ ಇರಿಸಲಾಗಿರುವ 39 ವಿದ್ಯಾರ್ಥಿಗಳು ಲಾಥೂರ್​ನ ಕೃಷಿ ಮಹಾವಿದ್ಯಾಲಯದಲ್ಲಿ ಆರು ತಿಂಗಳಿನಿಂದ ನಡೆಯುತ್ತಿದ್ದ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲೌಕ್​ಡೌನ್​ ಮೇ 3ಕ್ಕೆ ವಿಸ್ತರಣೆಗೊಂಡ ಹಿನ್ನೆಲೆಯಲ್ಲಿ ಆತಂಕಗೊಂಡು, ಕಾಲ್ನಡಿಗೆಯಲ್ಲೇ ತಮ್ಮ ಊರುಗಳನ್ನು ತಲುಪಲು ನಿರ್ಧರಿಸಿ ಬುಧವಾರ ಲಾಥೂರ್​ನಿಂದ ಹೊರಟಿದ್ದರು. ಗುರುವಾರ ಇವರೆಲ್ಲರೂ ಕಾಜುರಿ ತಲುಪಿದರು. ತಕ್ಷಣವೇ ಅವರನ್ನು ವಶಕ್ಕೆ ಪಡೆದು, ಕ್ವಾರಂಟೈನ್​ನಲ್ಲಿ ಇರಿಸಲಾಯಿತು ಎಂದು ಹೇಳಿದ್ದಾರೆ.
ಪಾಕಿಸ್ತಾನದಿಂದ ಕರೊನಾ ಭಯೋತ್ಪಾದನೆ, ಕಾಶ್ಮೀರಕ್ಕೆ ಕೋವಿಡ್​ 19 ಸೋಂಕಿತ ಉಗ್ರರ ರವಾನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 1 =
Remember me
