ಬೆಂಗಳೂರು:ರಾಜ್ಯ ಗುಪ್ತಚರ ಇಲಾಖೆಯ ಬೆಂಗಳೂರು ಎಸ್​ಪಿ ಆರ್​.ಚೇತನ್​ ಸೇರಿ 6 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಡೈರೆಕ್ಟರ್ ಆಫ್ ಸಿವಿಲ್ ರೈಟ್ಸ್ ಎನ್ಫೋರ್ಸ್​ಮೆಂಟ್​ನ ಡಿಐಜಿ ಆಗಿ ವೈ.ಎಸ್. ರವಿಕುಮಾರ್, ಮೈಸೂರು ವಿಭಾಗದ ಕರ್ನಾಟಕ ಪೊಲೀಸ್ ಅಕಾಡೆಮಿಯ ಡೈರೆಕ್ಟರ್ ಆಗಿ ದಿವ್ಯಾ ವಿ. ಗೋಪಿನಾಥ್, ಹಾವೇರಿ ಇಂಟೆಲಿಜೆನ್ಸ್​ ಎಸ್​ಪಿ ಆಗಿ ಹನುಮಂತರಾಯ, ಕೋಲಾರ ಎಸ್​ಪಿ ಆಗಿ ನಾರಾಯಣ ಎಂ., ಹಾವೇರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಡಾ. ಶಿವಕುಮಾರ್, ಕಲಬುರಗಿ ನಗರ ಪೊಲೀಸ್​ ಆಯುಕ್ತರನ್ನಾಗಿ ಚೇತನ್ ಆರ್. ಅವರನ್ನು ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ಈ ಹಿಂದೆ ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆಗಿದ್ದ ಆರ್​.ಚೇತನ್​ ಅವರನ್ನ ರಾಜ್ಯ ಗುಪ್ತಚರ ಇಲಾಖೆಗೆ ಕಳೆದ ಡಿಸೆಂಬರ್​ 21ರಂದು ವರ್ಗಾವಣೆ ಮಾಡಲಾಗಿತ್ತು. ತಿಂಗಳು ತುಂಬುವ ಮೊದಲೇ ಇಲ್ಲಿಂದ ಕಲಬುರಗಿಗೆ ವರ್ಗಾವಣೆ ಮಾಡಲಾಗಿದೆ. ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿದ್ದ ಡಾ. ವೈ.ಎಸ್. ರವಿಕುಮಾರ್​ ಅವರನ್ನ ಡೈರೆಕ್ಟರ್ ಆಫ್ ಸಿವಿಲ್ ರೈಟ್ಸ್ ಎನ್ಫೋರ್ಸ್​ಮೆಂಟ್​ನ ಡಿಐಜಿ ಆಗಿ ವರ್ಗಾವಣೆ ಮಾಡಲಾಗಿದೆ.
ಖಾಲಿ ಬಾಟಲಿ ಕೊಟ್ಟರೆ ಹಣ ವಾಪಸ್​! ಡಿಪಾಸಿಟ್​ ಇಟ್ಟು ನೀರಿನ ಬಾಟಲಿ ಪಡೆಯಬೇಕು, ಶಿವಗಂಗೆ ಬೆಟ್ಟದಲ್ಲಿ ನೂತನ ಪ್ರಯೋಗ

ಖಾಲಿ ಬಾಟಲಿ ಕೊಟ್ಟರೆ ಹಣ ವಾಪಸ್​! ಡಿಪಾಸಿಟ್​ ಇಟ್ಟು ನೀರಿನ ಬಾಟಲಿ ಪಡೆಯಬೇಕು, ಶಿವಗಂಗೆ ಬೆಟ್ಟದಲ್ಲಿ ನೂತನ ಪ್ರಯೋಗ

ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಅಸ್ತು! ಪಕ್ಷ ಸ್ಥಾಪನೆ ಬೆನ್ನಲ್ಲೇ ರೆಡ್ಡಿಗೆ ಬಿಗ್​ ಶಾಕ್​

ಮೈಸೂರು ಎಸ್​ಪಿ ಸೇರಿ ಐವರು ಐಪಿಎಸ್​ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
