ಬೆಂಗಳೂರು:ಪಲ್ಸ್​ ಮೀಟರ್​ ಪೂರೈಕೆ ಮಾಡುವುದಾಗಿ ನಂಬಿಸಿ ಸ್ಟೇಷನರಿ ಅಂಗಡಿ ಮಾಲೀಕನಿಂದ 7.50 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನ್ಯೂ ತಿಪ್ಪಸಂದ್ರದ ದಯಾ ಮಾರ್ಟ್​ ಸ್ಟೇಷನರಿ ಅಂಗಡಿ ಮಾಲೀಕ ಹುಕ್ಕಂ ಸಿಂಗ್​ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಆಂಕುರ್​ ಸಿಂಗ್​ ಮತ್ತು ಮಂಡಲ್​ ವಿರುದ್ಧ ಎಫ್​ಐಆರ್​ ದಾಖಲಿಸಿ ಜೀವನ್​ಬೀಮಾನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
10 ವರ್ಷಗಳಿಂದ ಸ್ಟೇಷನರಿ ಅಂಗಡಿ ನಡೆಯುತ್ತಿರುವ ಹುಕ್ಕಂ ಸಿಂಗ್​, ಕೋವಿಡ್​ 19ರ ವೇಳೆ ಪಲ್ಸ್​ ಮೀಟರ್​ಗೆ ಹೆಚ್ಚಿನ ಗ್ರಾಹಕರು ಇದ್ದುದ್ದನ್ನು ಗಮನಿಸಿದ್ದರು. ಅದಕ್ಕಾಗಿ ಏಪ್ರಿಲ್​ 28ರಂದು ತನ್ನ ಮೊಬೈಲ್​ಗೆ ಮಾಹಿತಿ ಬಂದಿದ್ದ ಪಲ್ಸ್​ ಮೀಟರ್​ ಪೂರೈಕೆದಾರರಿಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ, ವಿಡಿಯೋ ಕಾಲ್​ ಮಾಡಿ ಪೂರೈಕೆ ಮಾಡುವುದಾಗಿ ವಿಳಾಸ ಪಡೆದು 20 ಸಾವಿರ ರೂ. ಮುಂಗಡ ಹಣವನ್ನು ಪೇಟಿಮ್​ಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಹುಕ್ಕಂ ಸಿಂಗ್​ ಸಹ 1 ಸಾವಿರ ಪಲ್ಸ್​ ಮೀಟರ್​ ಬೇಕೆಂದು ಹೇಳಿದ್ದರು. ಅದಕ್ಕೆ ಒಪ್ಪಿದ ಆರೋಪಿಗಳು ಸ್ವಲ್ಪ ದಿನ ಬಿಟ್ಟು ಮತ್ತೆ 30 ಸಾವಿರ ರೂ. ಪಡೆದಿದ್ದರು. ಆನಂತರ ಕರೊನಾ ಕರ್ಫ್ಯೂ ಜಾರಿಯಾದ ಕಾರಣ ವ್ಯವಹಾರ ನಡೆಸದೆ ಸುಮ್ಮನಾಗಿದ್ದರು. ಇತ್ತೀಚೆಗೆ ಮತ್ತೆ ಆರೋಪಿ, ಹುಕ್ಕಂ ಸಿಂಗ್​ಗೆ ಕರೆ ಮಾಡಿ ಇಂದೂರ್​ನಲ್ಲಿ ನಮ್ಮ ಸಂಬಂಧಿ ಇದ್ದಾನೆ. ಆತ ನಿನಗೆ 10 ರೂ. ನೋಟಿನ ಫೋಟೋ ಕಳುಹಿಸುತ್ತಾರೆ. ಆತನಿಗೆ 7 ಲಕ್ಷ ರೂ. ಆನ್​ಲೈನ್​ನಲ್ಲಿ ವರ್ಗಾವಣೆ ಮಾಡುವಂತೆ ಹೇಳಿದ್ದರು. ಸ್ವಲ್ಪ ಹೊತ್ತಿಗೆ ಹುಕ್ಕಂ ಸಿಂಗ್​ಗೆ ಕರೆ ಮಾಡಿದ ವ್ಯಕ್ತಿ, 10 ರೂ. ನೋಟಿನ ಫೋಟೋವನ್ನು ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಿ 7 ಲಕ್ಷ ರೂ. ಪಾವತಿ ಮಾಡಿದರೆ ಪಲ್ಸ್​ ಮೀಟರ್​ ಕಳುಹಿಸುವುದಾಗಿ ಹೇಳಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ. ಆದರೆ, ದಿನಗಳೇ ಕಳೆದರು ಪಾರ್ಸಲ್​ ಮಾತ್ರ ಕೈ ಸೇರಲಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿಗೇ ಲವ್​ ಲೆಟರ್ ಬರೆದ ಶಿಕ್ಷಕ! ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಕೊಟ್ಟ ಗ್ರಾಮಸ್ಥರು

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + three =
Remember me
