|ಅವಿನ್ ಶೆಟ್ಟಿಉಡುಪಿ
ಐಟಿಐ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (ಎನ್​ಸಿವಿಟಿ) ಎಡವಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಸಂಬಂಧವೇ ಇಲ್ಲದ ಪ್ರಶ್ನೆಪತ್ರಿಕೆ ನೀಡಿದ್ದರಿಂದ ಆಘಾತಕ್ಕೊಳಗಾಗಿದ್ದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡುವ ಬದಲು ಶೇ.95ಕ್ಕೂ ಅಧಿಕ ಮಂದಿಯನ್ನು ಅನುತ್ತೀರ್ಣಗೊಳಿಸಲಾಗಿದೆ.
ಎನ್​ಸಿವಿಟಿ ಪಠ್ಯಕ್ರಮದಂತೆ ಸರ್ಕಾರಿ ಮತ್ತು ಖಾಸಗಿ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ಶಿಕ್ಷಣ ನೀಡಲಾಗುತ್ತದೆ. 2 ವರ್ಷದ ಶಿಕ್ಷಣದ ಬಳಿಕ ಅಂತಿಮ ಪರೀಕ್ಷೆಯನ್ನು ಎನ್​ಸಿವಿಟಿ ನಡೆಸಿ ಪ್ರಮಾಣಪತ್ರ ನೀಡುತ್ತದೆ. 2018-19ನೇ ಸಾಲಿನಲ್ಲಿ ಐಟಿಐ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ 2021ರ ಜನವರಿಯಲ್ಲಿ ನಡೆದಿದ್ದು, ಮೇ 31ರಂದು ಫಲಿತಾಂಶ ಪ್ರಕಟಗೊಂಡಿದೆ.
ಆಗಿರೋದೇನು?:ರಾಜ್ಯದಲ್ಲಿ ಐಟಿಐ ಇಲೆಕ್ಟ್ರಾನಿಕ್ಸ್ ವಿಭಾಗದ 7 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇಲೆಕ್ಟ್ರಾನಿಕ್ಸ್ ಡ್ರಾಯಿಂಗ್ ಪ್ರಶ್ನೆಪತ್ರಿಕೆ ನೀಡಬೇಕಾಗಿತ್ತು. ಅದರ ಬದಲು ಇಲೆಕ್ಟ್ರಿಷಿಯನ್ ಇಂಜಿನಿಯರ್ ವಿಭಾಗದ ಇಲೆಕ್ಟ್ರಿಷಿಯನ್ ಇಂಜಿನಿಯರಿಂಗ್ ಡ್ರಾಯಿಂಗ್ ಪ್ರಶ್ನೆಪತ್ರಿಕೆ ನೀಡಿದ್ದೇ ಸಮಸ್ಯೆಗೆ ಮೂಲ ಕಾರಣ. ವಿದ್ಯಾರ್ಥಿಗಳು ಆಗಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಮೈಸೂರಿನಲ್ಲಿರುವ ಉದ್ಯೋಗ ತರಬೇತಿ ಇಲಾಖೆ ವಿಭಾಗೀಯ ನಿಯಂತ್ರಣ ಕಚೇರಿಗೂ ಈ ಬಗ್ಗೆ ತಿಳಿಸಲಾಗಿತ್ತು. ಆಗ, ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಶ್ನೆಪತ್ರಿಕೆ ಬದಲಾಗಿರಬಹುದು, ಗ್ರೇಸ್ ಮಾರ್ಕ್ ನೀಡಬಹುದು, ನೀವು ಪರೀಕ್ಷೆ ಬರೆಯಿರಿ ಎಂದು ತಿಳಿಸಲಾಗಿತ್ತು. ಅದರಂತೆ, ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಕೆಲವು ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ. ಆದರೆ ಶೇ.95ಕ್ಕೂ ಅಧಿಕ ಮಂದಿ ಫೇಲ್ ಆಗಿದ್ದಾರೆ.
ದಿಕ್ಕೇ ತೋಚದಂತಾಗಿರುವ ವಿದ್ಯಾರ್ಥಿಗಳು ಕಾಲೇಜುಗಳಿಗೆ ಫೋನ್ ಮಾಡುತ್ತಿದ್ದು, ಆಡಳಿತ ಮಂಡಳಿಗಳು ಉದ್ಯೋಗ ತರಬೇತಿ ಇಲಾಖೆ ವಿಭಾಗೀಯ ನಿಯಂತ್ರಣ ಕಚೇರಿಯನ್ನು ಸಂರ್ಪಸುತ್ತಿದ್ದಾರೆ. ಅಲ್ಲಿಂದ ವಿದ್ಯಾರ್ಥಿಗಳ ಸಮಗ್ರ ಮಾಹಿತಿ ಕೇಳಿದ್ದಾರೆ. ಮುಂದೇನು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಇನ್ನೊಂದು ವರ್ಷ ಕಾಯಬೇಕು:ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಒಂದು ವರ್ಷ ಕಾಯಬೇಕು. ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಕಾಯಂ ಉದ್ಯೋಗ, ಇಂಟರ್ನ್​ಷಿಪ್​ಗೆ ಎನ್​ಸಿವಿಟಿ ಪ್ರಮಾಣಪತ್ರ ಕಡ್ಡಾಯ. ಇತ್ತ ಉನ್ನತ ಕೌಶಲ, ತಾಂತ್ರಿಕ ಡಿಪ್ಲೊಮಾ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ ವಿದ್ಯಾರ್ಥಿಗಳು.
ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದೊಂದು ಗಂಭೀರ ವಿಚಾರವಾಗಿದೆ. ಉದ್ಯೋಗ ತರಬೇತಿ ಇಲಾಖೆ, ಎನ್​ಸಿವಿಟಿಯಲ್ಲಿ ಈ ಬಗ್ಗೆ ಮಾತುಕತೆ ನಡೆಸಲಾಗುವುದು.
|ಸುನೀಲ್ ಕುಮಾರ್ಶಾಸಕ, ಕಾರ್ಕಳ
ಫೇಲ್ ಆಗಿರುವ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನು ಸಂಗ್ರಹಿಸಿ ಉದ್ಯೋಗ ತರಬೇತಿ ಇಲಾಖೆ ವಿಭಾಗೀಯ ನಿಯಂತ್ರಣ ಕಚೇರಿಗೆ ಕಳುಹಿಸಿದ್ದೇವೆ. ಮೇಲಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
|ನಾಗರಾಜ್ಪ್ರಾಂಶುಪಾಲ, ಪೆರ್ಡರು ಐಟಿಐ ಕಾಲೇಜು, ಬಿಲ್ಲಾಡಿ
ಹಿಂದೊಮ್ಮೆ ಇಂತಹ ಪ್ರಮಾದವಾದಾಗ ಗ್ರೇಸ್ ಮಾರ್ಕ್ ನೀಡಲಾಗಿತ್ತು. ಈಗಲೂ ಹಾಗೇ ಮಾಡಿ ಎಲ್ಲರನ್ನೂ ಪಾಸ್ ಮಾಡಲಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಶೀಘ್ರ ಈ ಸಮಸ್ಯೆ ಬಗೆಹರಿಯುವ ಆಶಾವಾದ ಹೊಂದಿದ್ದೇವೆ.
|ರೂಪೇಶ್​ಕುಮಾರ್ಪ್ರಾಂಶುಪಾಲ,ಆತ್ಮಾನಂದ ಸರಸ್ವತಿ ಐಟಿಐ,ಬಿಲ್ಲಾಡಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
