ಬಾಗಲಕೋಟೆ:ಎಸ್‌ಬಿಐ ಬ್ಯಾಂಕ್‌ನ ನವನಗರ ಶಾಖೆಯ ಕ್ಯಾಷಿಯರ್ ಆರ್‌ಬಿಐಗೆ ಸಂಬಂಧಿಸಿದ ಹಣ ದುರ್ಬಳಕೆ ಮಾಡಿಕೊಂಡು ಬಂಧನಕ್ಕೊಳಗಾದ ಘಟನೆ ಬೆಳಕಿಗೆ ಬಂದಿದೆ.
ಕ್ಯಾಷಿಯರ್ ಸಂತೋಷ ಕಬಾಡೆ ಬಂಧಿತ. ಈತ ಟೆಲ್ಲರ್ ಐಡಿ ನಂಬರ್ ಬಳಸಿ ತನ್ನ ಪತ್ನಿ ಪೂಜಾ ಹಾಗೂ ತಾಯಿ ಜನಾಬಾಯಿ ಖಾತೆಗೆ 1.60 ಕೋಟಿ ರೂ. ವರ್ಗಾವಣೆ ಮಾಡಿದ್ದಾನೆ. ಬಳಿಕ ಎಚ್‌ಡಿಎಫ್‌ಸಿಯ ತನ್ನ ಖಾತೆಗೆ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿರುವುದು ದಾಖಲೆಗಳ ಮೂಲಕ ತಿಳಿದು ಬಂದಿದೆ. ಕ್ಯಾಷಿಯರ್​ನಿಂದಲೇ ವಂಚನೆ ಆಗಿರುವ ಬ್ಯಾಂಕ್ ವ್ಯವಸ್ಥಾಪಕ ಅಲ್ಲಪ್ಪ ಲಕ್ಷೆಟ್ಟಿ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದೇಗೆ?:ಎಸ್‌ಬಿಐ ಬ್ಯಾಂಕ್ ಆಂತರಿಕ ನಿಯಮಗಳ ಪ್ರಕಾರ ಗ್ರಾಹಕರು ಮತ್ತು ಬ್ಯಾಂಕ್ ಸಿಬ್ಬಂದಿ ಖಾತೆಗಳಿಗೆ ಹಣ ಸಂದಾಯವಾಗಿದ್ದರೆ ಮೇಲಧಿಕಾರಿಗಳಿಗೆ ಅಲರ್ಟ್ ಮೆಸೇಜ್ ಹೋಗುತ್ತದೆ. ಜೂನ್ 4ರಂದು ಗ್ರಾಹಕರು ಮತ್ತು ಬ್ಯಾಂಕ್ ಸಿಬ್ಬಂದಿ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ ಪೂಜಾ ಸಂತೋಷ ಕಬಾಡಿ ಅವರ ಖಾತೆಗೆ ಹೆಚ್ಚಿನ ಹಣ ಸಂದಾಯ ಆಗಿರುವುದು ಕಂಡು ಬಂದಿದೆ. ತಕ್ಷಣವೇ ಬ್ಯಾಂಕ್ ಅಧಿಕಾರಿಯು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಸೇರಿ ಪರಿಶೀಲನೆ ನಡೆಸಿದಾಗ ಬ್ಯಾಂಕ್ ಕ್ಯಾಷಿಯರ್, ಸಹಾಯಕ ವ್ಯವಸ್ಥಾಪಕ ಸಂತೋಷ ಕಬಾಡಿ ಬ್ಯಾಂಕ್‌ಗೆ ದ್ರೋಹ ಮಾಡಿರುವುದನ್ನು ಬೆಳಕಿಗೆ ಬಂದಿದೆ.
ಕ್ಯಾಷಿಯರ್ ಆಗಿರುವ ಸಂತೋಷ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಹುದ್ದೆ ಹೊಂದಿದ್ದು, ಕರೆನ್ಸಿ ಚಸ್ಟ್ ನಿರ್ವಹಣೆ ಮಾಡುತ್ತಿದ್ದ. ತನಗೆ ನೀಡಿದ್ದ ಟೆಲ್ಲರ್ ಐಡಿ ನಂಬರ್ ಬಳಸಿ ಬ್ಯಾಂಕ್‌ಗೆ ಮೋಸ ಮಾಡಿರುವುದು ಅಧಿಕಾರಿಗಳ ಪರಿಶೀಲನೆಯಿಂದ ತಿಳಿದು ಬಂದಿದೆ. ಬ್ಯಾಂಕ್‌ಗೆ ವಂಚಿಸಿ ದೋಚಿದ 1.60 ಕೋಟಿ ರೂಪಾಯಿಯನ್ನು ಸಂತೋಷ, ಸ್ಟಾಕ್ ಮಾರ್ಕೆಟ್‌ಗೆ ಸುರಿದಿದ್ದು, ಅಲ್ಲಿ ಲಾಸ್ ಆಗಿದ್ದಾನೆ ಎಂದು ತಿಳಿದು ಬಂದಿದೆ.
ಎಚ್​.ಡಿ.ರೇವಣ್ಣ ಮತ ಅಸಿಂಧು? ಮತದಾನದ ವೇಳೆ ಎಡವಿದ್ರಾ ಜೆಡಿಎಸ್​ ನಾಯಕ?

ರಾಜ್ಯಸಭೆ ಚುನಾವಣೆ: ನಿರ್ಮಲಾಗೆ ಗೆಲುವು, ಕಾಂಗ್ರೆಸ್ ಮನವೊಲಿಕೆ ವಿಫಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 9 =
Remember me
