ಬೆಳಗಾವಿ:ಯುವಕ-ಯುವತಿಯ ಪ್ರೇಮ ಪ್ರಕರಣದಲ್ಲಿ ಏನೂ ತಪ್ಪು ಮಾಡದ ರೈತನೋರ್ವ ಶಿಕ್ಷೆ ಅನುಭವಿಸುವಂತಾಗಿದೆ.
ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ರೈತ ನಾಮದೇವ ದುಡುಮ್​ ಅನ್ಯಾಯಕ್ಕೊಳಗಾಗಿದ್ದು, ಜೈಲು ಶಿಕ್ಷೆ ಅನುಭವಿಸಿದ ರೈತ. ಗುಗರನಟ್ಟಿ ಮತ್ತು ಕಡೋಲಿ ಗ್ರಾಮದ ಯುವಕ-ಯುವತಿ ಪ್ರೀತಿಸಿ ವರ್ಷದ ಹಿಂದೆ ಮುಂಬೈಗೆ ಹಾರಿದ್ದರು. ಯುವತಿಯೊಂದಿಗೆ ಓಡಿಹೋದ ಯುವಕನ ಅಣ್ಣ ಮತ್ತು ರೈತ ನಾಮದೇವ ದುಡಮ್​ ಸ್ನೇಹಿತರು. ಆ ಕಾರಣಕ್ಕೆ ಯುವಕ ಮತ್ತು ಯುವತಿಯರ ಮನೆಗೆ ಹೋಗಿ ರಾಜಿ-ಸಂಧಾನದಲ್ಲಿ ಭಾಗಿಯಾಗಿದ್ದರು. 2021ರ ಮಾ.1ರಂದು ಓಡಿ ಹೋಗಿದ್ದ ಜೋಡಿ ಮತ್ತೆ ಗ್ರಾಮಕ್ಕೆ ಮರಳಿತ್ತು. ಕೆಲ ತಿಂಗಳ ಬಳಿಕ ಮದುವೆ ಮಾಡಿದರಾಯಿತು ಎಂದು ಎರಡೂ ಕಡೆಯವರು ನಿರ್ಧರಿಸಿದ್ದರು. ಆದರೆ, ನಂತರದಲ್ಲಿ ಯುವತಿ ಮನೆಯವರು ತಿರುಗಿ ಬಿದ್ದಿದ್ದು, ನಾಮದೇವ ಮೇಲೆ ದೂರು ದಾಖಲಿಸಿದ್ದಾರೆ. ಹೊಲದ ಗುಡಿಸಲಲ್ಲಿಯೇ ನಾಮದೇವ ಇಬ್ಬರನ್ನೂ ಕೂಡಿಟ್ಟಿದ್ದಾರೆ ಎಂದು ಬಿಳಿ ಹಾಳೆಯಲ್ಲಿ ಗುಡಿಸಲಿನ ಡೈಗ್ರಾಮ್​ ಹಾಕಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು.
ಪ್ರಕರಣ ಸಂಬಂಧ 2021ರ ನ.19ರಿಂದ 2022ರ ಜ.28ರ ವರೆಗೆ ನಾಮದೇವ ಜೈಲುವಾಸ ಅನುಭವಿಸಿದ್ದಾರೆ. ಓಡಿ ಹೋಗಿದ್ದ ಯುವಕ ಈಗ ಪ್ರತ್ಯಕ್ಷನಾಗಿ ಪ್ರಕರಣದಲ್ಲಿ ನಾಮದೇವ ಅವರದ್ದು ಏನೂ ತಪ್ಪಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾನೆ. ಇತ್ತ ಏನೂ ತಪ್ಪು ಮಾಡದೆ ಶಿಕ್ಷೆಗೆ ಒಳಗಾದ ರೈತನ ಪರವಾಗಿ ನಾಮದೇವನ ಪತ್ನಿ ಸುನೀತಾ ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿ ಬಳಿ ನ್ಯಾಯಕ್ಕೆ ಆಗ್ರಹಿಸಿದ್ದಾರೆ.
ಹಿಂದೂ ಹುಡ್ಗೀರೇ ದಯವಿಟ್ಟು ನನ್​ ಮಾತು ಕೇಳಿ… ಲವ್​ ಜಿಹಾದ್​ಗೆ ಸಿಲುಕಿ ನರಳುತ್ತಾ ಅಪೂರ್ವ ಬಾಯ್ಬಿಟ್ಟ ಕಟು ಸತ್ಯ ಇಲ್ಲಿದೆ

ಶಾಲೆಯಲ್ಲಿ ಹಿಜಾಬ್​ ಬ್ಯಾನ್​: ​ಸಮವಸ್ತ್ರ ಆದೇಶ ಎತ್ತಿಹಿಡಿದು ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್​

ಕುರಾನ್​ ಹೇಳಿದ್ದೇ ನಮಗೆ ಫೈನಲ್​, ಹೈಕೋರ್ಟ್​ ತೀರ್ಪು ಪಾಲಿಸಲ್ಲ… ಹಿಜಾಬ್​ ಪರ ಮತ್ತೆ ಗುಡುಗಿದ ಉಡುಪಿ ವಿದ್ಯಾರ್ಥಿನಿಯರು

ಮಗನ ಸಾವಿನ ಹಿಂದೆ ಸೊಸೆ ಕೈವಾಡ? ಅಂತ್ಯಸಂಸ್ಕಾರ ಆಗಿದ್ದ ಶವ ಹೊರತೆಗಿಸಿ ಮರಣೋತ್ತರ ಪರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
