ಬೆಂಗಳೂರು:ಭಾರತಿ ಶೆಟ್ಟಿಗೆ ಒನಕೆ ಓಬವ್ವನ ಪಾತ್ರ ನೀಡಿ ಹೊಸದಾಗಿ ಸಿನಿಮಾ ಮಾಡಬೇಕು ಎಂಬ ವಿಷಯ ಪ್ರಸ್ತಾಪವಾಗಿ ಮೇಲ್ಮನೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.
ಬಜೆಟ್​ ಕುರಿತು ಚರ್ಚೆ ಮಾಡುತ್ತಿದ್ದ ಭಾರತಿ ಶೆಟ್ಟಿ ಅವರು ವೀರ ರಾಣಿಯರಾದ ಅಬ್ಬಕ್ಕ, ಕೆಳದಿ ಚನ್ನಮ್ಮ, ಒನಕೆ ಓಬವ್ವ ಪ್ರತಿಮೆಗಳನ್ನು ಸ್ಥಾಪಿಸಿ, ಮುಂದಿನ ಪೀಳಿಗೆಗೆ ಅವರ ಶೌರ್ಯ, ದಿಟ್ಟ ಹೋರಾಟಗಳ ಬಗ್ಗೆ ತಿಳಿಸಿಕೊಡಬೇಕಾಗಿದೆ ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಧ್ವನಿಗೂಡಿಸಿದರೆ, ಎನ್​.ರವಿಕುಮಾರ್​ ಅವರು ಚಿತ್ರದುರ್ಗದಲ್ಲಿ ಒನಕೆ ಓಬವ್ವಳ 50 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಬೇಕಾಗಿದೆ ಎಂದಾಗ ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿ ಸಹಮತ ವ್ಯಕ್ತಪಡಿಸಿದರು.
ಈ ನಡುವೆ ಬಿಜೆಪಿ ಶಶಿಲ್​ ನಮೋಶಿ ಅವರು ಭಾರತಿಶೆಟ್ಟಿಗೆ ಒನಕೆ ಓಬವ್ವನ ಪಾತ್ರ ನೀಡಿ ಹೊಸದಾಗಿ ಸಿನಿಮಾ ಮಾಡಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿನಿಗೌಡ, ಅಭಿನಯಶಾರದೆ ಜಯಂತಿ ಆ ಪಾತ್ರಕ್ಕೆ ಜೀವ ತುಂಬಿದ್ದು. ಬೇರೆ ಯಾರಿಂದಲೂ ಸಾಧ್ಯವಾಗದು ಎಂದರು.
ತಟ್ಟನೆ ಎದ್ದುನಿಂತ ಮಾಧುಸ್ವಾಮಿ, ಅವರು ಇನ್ನೂ ಸಿನಿಮಾ ಮಾಡಬೇಕೆಂದಿದ್ದಾರಷ್ಟೇ ಅಷ್ಟರಲ್ಲಾಗಲೆ ಆಕ್ಷೇಪ ಬಂತು ನೋಡಿ ಎನ್ನುತ್ತಾ ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿಗೌಡರತ್ತ ನಗೆ ಚಟಾಕಿ ಹಾರಿಸಿದರು.
ಜೆಡಿಎಸ್​ನ ಮರಿತಿಬ್ಬೇಗೌಡರು, ಎರಡು ಜಡೆ ಒಂದಾಗುವುದು ಕಷ್ಟ ಅನ್ನೋ ಮಾತಿದೆ ಎಂದು ನಗುತ್ತಲೇ ಹೇಳಿದರು. ಪುರುಷರು ಹೊರಗೆ ಹುಲಿ, ಮನೆಯೊಳಗೆ ಇಲಿ ಎಂದು ಬಿಜೆಪಿಯ ಎಂ.ಕೆ.ಪ್ರಾಣೇಶ್​ ಧ್ವನಿ ಸೇರಿಸಿದರು.
ಹೀಗೆ ಉಬ್ಬಿಸಿದರೆ ನಾವೇನೂ ಉಬ್ಬುವುದಿಲ್ಲ, ನಮಗೆ (ಮಹಿಳೆಯರು) ಶೇ.50 ರಾಜಕೀಯ ಮೀಸಲು ಸಿಗುವ ತನಕ ಪ್ರಯತ್ನ ನಿಲ್ಲಿಸುವುದಿಲ್ಲ ಎಂದು ತೇಜಸ್ವಿನಿಗೌಡ ನಗುತ್ತಲೇ ಹೇಳಿ ಚರ್ಚೆಗೆ ತೆರೆ ಎಳೆದರು. ಅಂದಹಾಗೆ ಈ ಸ್ವಾರಸ್ಯಕರ ಚರ್ಚೆ ನಡೆದದ್ದು ಗುರುವಾರ.
ಪೇದೆ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್: ಇಬ್ಬರು ಪತ್ರಕರ್ತರು, ASI ವಿರುದ್ಧ ಎಫ್​ಐಆರ್​! ಡೆತ್​ನೋಟಲ್ಲಿದೆ ಸ್ಫೋಟಕ ರಹಸ್ಯ

ಇದು JAMES ರಹಸ್ಯ: ನಿಮ್ಮ ಕಣ್ಣಲ್ಲಿ ನೀರು ತರಿಸುತ್ತೆ ಶೈನ್​ ಶೆಟ್ಟಿ ಬಿಚ್ಚಿಟ್ಟ ರೀಲ್​ ಮತ್ತು ರಿಯಾಲಿಟಿ

ಅಪ್ಪು ನೆನಪಲ್ಲಿ ಮತ್ತೆ ಒಳ್ಳೆಯ ಕೆಲಸ ಮಾಡಿದ ಕಾಲಿವುಡ್ ಸೂಪರ್ ಸ್ಟಾರ್ ವಿಶಾಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
